Saturday, April 13, 2024
Google search engine
Homeತುಮಕೂರ್ ಲೈವ್ಮಕ್ಕಳಲ್ಲಿ ಉತ್ತಮ ಹವ್ಯಾಸ ಬೆಳೆಸಿ

ಮಕ್ಕಳಲ್ಲಿ ಉತ್ತಮ ಹವ್ಯಾಸ ಬೆಳೆಸಿ

ಮಕ್ಕಳು ಬೆಳವಣಿಗೆಗೆ ಅಡ್ಡಿಯಾಗಿರುವ ಒತ್ತಡ ಕಡಿಮೆ ಮಾಡಲು ಪೋಷಕರು ಒಂದು ಉತ್ತಮ ಅಭ್ಯಾಸ ಕಲಿಸಬೇಕು ಎಂದು ಜಿಲ್ಲಾಧಿಕಾರಿ. ಕೆ.ರಾಕೇಶ್ ಕುಮಾರ್ ಪತ್ನಿ ಅಮೂಲ್ಯ ತಿಳಿಸಿದರು.ಗುಬ್ಬಿವೀರಣ್ಣ ಕಲಾಕ್ಷೇತ್ರಲ್ಲಿ ಕೇಂದ್ರೀಯ ವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ ಪೋಷಕರು ಸದಾ ಕಾಲ ಮಕ್ಕಳ ಜೊತೆಗೆ ಇರಲು ಸಾಧ್ಯವಿಲ್ಲ ಆದರೆ ಒಂದು ಉತ್ತಮ ಅಭ್ಯಾಸವನ್ನು ಮಕ್ಕಳಿಗೆ ಕಲಿಸಿದರೆ ಸದಾ ಕಾಲ ಮಕ್ಕಳ ಜೊತೆಗೆ ಇದ್ದು ಅವರಿಗೆ ಸಹಾಯ ಮಾಡುತ್ತದೆ ಹಾಗಾಗಿ ಮಕ್ಕಳ ಆಸಕ್ತಿಗನುಗುಣವಾಗಿ ಒಂದು ಉತ್ತಮ ಅಭ್ಯಾಸವನ್ನು ರೂಢಿಸಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.ಪೋಷಕರು ಮಕ್ಕಳ ವ್ಯಕ್ತಿತ್ವದ ಕಡೆ ಗಮನಹರಿಸುವುದರ ಜೊತೆಗೆ ಮಕ್ಕಳು ಮಾತನಾಡುವ ಶೈಲಿ, ನಡವಳಿಕೆ ಸರಿಯಾದ ರೀತಿಯಲ್ಲಿರುವಂತೆ ಹೇಳಿಕೊಡಬೇಕು. ಮಕ್ಕಳ ನಡವಳಿಕೆಯಲ್ಲಿ ತಪ್ಪು ಕಂಡು ಬಂದರೆ ತಿದ್ದಿ ಬುದ್ದಿ ಹೇಳಬೇಕು ಎಂದರಲ್ಲದೆ ಮಕ್ಕಳಿಗೆ ಶ್ರದ್ಧೆ, ಸಮಯಪಾಲನೆ ಅರಿವು ಮೂಡಿಸಬೇಕು ಎಂದರು.ಸಮಾರಂಭದಲ್ಲಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಆರ್.ಎಂ.ಸೊಕಲ್ಲ, ವಿದ್ಯಾಲಯದ ಸಿಬ್ಬಂದಿ ಸೇರಿದಂತೆ ಮಕ್ಕಳು, ಪೋಷಕರು ಉಪಸ್ಥಿರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?