Monday, April 15, 2024
Google search engine
Homeಜನಮನಮಿಡಿದ ಹೃದಯಕ್ಕೆ ಭಾವಪೂರಾ ನಮನ

ಮಿಡಿದ ಹೃದಯಕ್ಕೆ ಭಾವಪೂರಾ ನಮನ

-ಹರೀಶ್ ಕಮ್ಮನಕೋಟೆ


ನಮ್ಮೂರಿನ ಪ್ರತಿಭಾವಂತೆ ವಿದ್ಯಾರ್ಥಿನಿಯೊಬ್ಬಳು ಪಿಯುಸಿ ಡಿಸ್ಟ್ರಿಂಕ್ಷನ್ ಪಡೆದರೂ ಉನ್ನತ ವಿದ್ಯಾಭ್ಯಾಸಕ್ಕೆ ಹಣಕಾಸಿನ ತೊಂದರೆ ಉಂಟಾಗಿತ್ತು.

ತಂದೆ ಆಟೋ ಚಾಲಕ. ಕೋರೋನ ಕಷ್ಟದಿಂದ ಆಟೋಗೆ ಬಾಡಿಗೆ ಇಲ್ಲ. ಹಾಗಾಗಿ ಅದಾಯವೂ ಹೊಟ್ಟೆ ಬಟ್ಟೆಯನ್ನೇ ಸರಿದೂಗಿಸುತ್ತಿರಲಿಲ್ಲ. ಮಗಳನ್ನು ಮುಂದಿನ ಕಲಿಕೆಗೆ ಉತ್ತಮ ಸೌಲಭ್ಯವುಳ್ಳ ಕಾಲೇಜಿಗೇ ಸೇರಿಸಬೇಕೆಂಬ ತಾಯಿಯ ಹಠ.

ದಿನಕ್ಕೆ ಎರಡು ಬಾರಿಯಾದರೂ.. ಮನೆ ಹತ್ತಿರ ಬಂದು ಸಹಾಯ ಕೇಳುತ್ತಿದ್ದರು ನನ್ನಕ್ಕನ ಬಳಿ. ಕಾಲೇಜಿನ ಪಾವತಿ ಶುಲ್ಕ ಕಡಿಮೆ ಮಾಡಿಸಿಕೊಡಿ ಎಂದು ಗೋಗರೆಯುತ್ತಿದ್ದರು.

ಈ ದೃಶ್ಯವನ್ನು ನೋಡಿದ ಮೇಲೂ ನನ್ನ ಮನಸ್ಸು ಸುಮ್ಮನಿರಲಿಲ್ಲ.

ಮದುವೆ ಎಂದು ಬಂದವರಿಗೆ ಒಂದತ್ತು ಸಾವಿರ, ಕಷ್ಟ ಅಂತ ಬಂದವರಿಗೆ ಒಂದೈದು ಸಾವಿರ ನೀಡುವ ಹಂತಕ್ಕೆ ಬೆಳೆದರೆ ಜೀವನ ಸಾರ್ಥಕ ಎನ್ನುವ ಮಾತನ್ನು ಸದಾ ಹೇಳುತ್ತಿದ್ದರು ಪತ್ರಕರ್ತ ಸ್ನೇಹಿತ ಚಂದನ್.

ಈ ಮಾತುಗಳು ಆ ಗಳಿಗೆಯಲ್ಲಿ ನೆನಪಾಗಿ ತಕ್ಷಣವೇ ಫೋನಾಯಿಸಿದೆ. ಪರಿಸ್ಥಿತಿಯನ್ನು ವಿವರಿಸಿ ಹೇಳಿದೆ. ಅವರಿಂದ ಬಂದ ಉತ್ತರ “ಅಣ ನೀವು ಯಾವಾಗಲಾದರೂ ಬನ್ನಿ ಚಕ್ ರೆಡಿ ಇರುತ್ತೆ”. ಎನ್ನುವ ಭರವಸೆ .

೧೨/೮/೨೦೨೦ ರಂದು ಚೆಕ್ ಪಡೆದು ಕೊಂಡು, ಅಂದೇ ವಿದ್ಯಾರ್ಥಿನಿಗೆ ಹಸ್ತಾಂತರಿಸಿದೆ.

ಸಮಯದ ಹಂಗಿಲ್ಲದೆ ಸಮಸ್ಯೆಗಳಿಗೆ ಸ್ಪಂದಿಸುವ ಸಮಾಜ ಕಾಳಜಿ ಪತ್ರಕರ್ತನಿಗೆ ಹೃದಯ ಪೂರಕ ಧನ್ಯವಾದಗಳು.

ಜೊತೆಗೆ ನನ್ನಕ್ಕನ ಸ್ನೇಹಿತರೂ.. ಪ್ರುಡೆನ್ಸ್ ಸ್ಕೂಲಿನ ನಿರ್ದೇಶಕರೂ ಮತ್ತು ಸಿದ್ಧಗಂಗಾ ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ರೇಣುಕಪ್ಪ ಸರ್ ಅವರು ನಮ್ಮ ಮನವಿಗೆ ಮಿಡಿದು ಶುಲ್ಕವನ್ನು ಕಡಿಮೆ ಮಾಡಿಸಿ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರಿಗೂ.. ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ.


-ಹರೀಶ್ ಕಮ್ಮನಕೋಟೆ
9591949304
ಪತ್ರಿಕೋದ್ಯಮ ಎಂ.ಎ
ಕುವೆಂಪು ವಿವಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?