Thursday, March 28, 2024
Google search engine
HomeUncategorizedರಾಜಕೀಯ, ಧರ್ಮದ ಹುಚ್ಚಾಟಕ್ಕೆ ಹಿಜಾಬು, ಶಾಲೂ ಬಳಕೆ: ಒಂದು ದುರಂತ

ರಾಜಕೀಯ, ಧರ್ಮದ ಹುಚ್ಚಾಟಕ್ಕೆ ಹಿಜಾಬು, ಶಾಲೂ ಬಳಕೆ: ಒಂದು ದುರಂತ

ಶಿಲ್ಪ ಎಂ


ಎಷ್ಟು ಚೆನ್ನಾಗಿ ಬದುಕಬೇಕು? ಎಷ್ಟು ಚೆನ್ನಾಗಿ ಕೊಡಬಹುದು ನಮ್ಮ ಕ್ಯಾಂಟ್ರಬ್ಯೂಷನ್? ಮಾನವೀಯತೆ ಹೇಗಿರಬೇಕು? ನಾವು ಸಮಾಜಕ್ಕೆ ಏನು ಒಳ್ಳೆಯದನ್ನು ನೀಡಬಹುದು ? ಇವುಗಳು ಯಾರಿಗೂ ಬೇಕಿದ್ದಂಗೆ ಕಾಣುತ್ತಿಲ್ಲ.

ಧರ್ಮ, ಜಾತಿ, ನಾನು, ನೀನು ಅಂತ ಘೋಷಣೆಗಳನ್ನು ಕೂಗುತ್ತ ಧರ್ಮ ಪ್ರೇಮದ ಹೆಸರಲ್ಲಿ ಧರ್ಮಾಂಧತೆಯ ಕಿಚ್ಚನ್ನು ಗಲ್ಲಿ ಗಲ್ಲಿಗೆ ಊರುಗಳಿಗೆ ಪ್ರತಿ ಮನೆಗಳಿಗೆ ಹಬ್ಬಿಸಿ ತಮಾಷೆ ನೋಡುತ್ತಿರುವ ಷಡ್ಯಂತ್ರಗಳು ಮುಂದಿನ ದಿನಗಳಲ್ಲಿ ದೇಶಕ್ಕೆ ಮಾರಕ ಎಂಬುವುದನ್ನು ಮರೆತಂತೆ ಕಾಣುತ್ತಿದೆ.

ಒಂದು ಸಣ್ಣ ಬಟ್ಟೆಗೆ ಶುರುವಾದ ವಿವಾದ ಕಟಕಟೆಗೆ ಹೋಗಿ ನಿಂತಿದೆ. ಧರ್ಮಗಳ ಘೋಷಣೆಗಳು ಆಗುತ್ತಿವೆ. ಸರಿಯಾದ ವ್ಯವಸ್ಥೆಗಳನ್ನು ಹಾಳುಮಾಡುವ ರಾಜಕೀಯದ ಷಡ್ಯಂತ್ರವೂ ಪ್ರೇಮದ ಅಂಧತೆಯೂ ಸಮುದಾಯಗಳ ದಡ್ಡತನ ವೂ ಇದು ಯಾವುದರ ಕಾರಣಕ್ಕಾಗಿ ಶುರುವಾಗಿದ್ದು ಗೊತ್ತಾಗದೆ ಅವರ ಮೇಲೆ ಇವರೂ ಇವರ ಮೇಲೆ ಅವರು ಕಲ್ಲು ತೂರಾಡುತ್ತಾ ಭವಿಷ್ಯದ ಅಂಗಳವನ್ನು ಬೇಳೆ ಬೇಯಿಸಲು ಬಳಸಿಕೊಂಡು ದಾರಿ ತಪ್ಪಿಸುವ ಈ ಹುಚ್ಚಟಾಕ್ಕೆ ಹೆಣ್ಣುಮಕ್ಕಳ ಹಿಜಾಬು ಮತ್ತು ಶಾಲೂಗಳು ಬಳಕೆಯಾಗುತ್ತಿರುವುದು ದುರಂತವೆ ನಿಜ.

ಹಿಜಾಬ್ ಮತ್ತು ಕೇಸರಿ ಶಾಲುಗಳು ಧರ್ಮ ಪ್ರೇಮ ಹೇಳುವುದಾದರೆ.
ಇಷ್ಟು ದಿನ ಜೊತೆಯಲ್ಲಿ ಓಡಾಡಿ ಒಂದೇ ಬಾಕ್ಸ್ ನಲ್ಲಿ ಊಟವನ್ನು ಹಂಚಿ ತಿಂದು ಬುರುಕ ಗೆಳತಿಯ ಜೊತೆ ಹಣೆಗೆ ಕುಂಕುಮ ಇಟ್ಟ ಗೆಳತಿ ಒಟ್ಟಿಗೆ ನಡೆದು ಶಾಲೆ ಸೇರಿದ ದಿನಗಳನ್ನು ನೋಟ್ ಬುಕ್ ಎಕ್ಸ್ಚೇಂಜ್ ಆದ ದಿನವನ್ನು ಅವಳಿಗಾಗಿ ಬಸ್ಸಿನಲ್ಲಿ ಸೀಟು ಹಿಡಿದು ಅವಳಿಗಾಗಿ ಕಾಯುತ್ತಿದ್ದ ಆ ಸಮಯವನ್ನು ಅವಳ ಮನೆಯ ಬಿರಿಯಾನಿಯನ್ನು ಒಬ್ಬಟ್ಟಿನ ರುಚಿಯನ್ನು ಸವಿದು ಜೊತೆಯಲ್ಲಿ ಸಂಭ್ರಮಿಸಿದ ಆ ಹಬ್ಬಕ್ಕೆ ಪ್ರೇಮ ಎಂದು ಹೆಸರಿಸದೆ ಕೋಮುಗಲಭೆ ಎಂದು ಹೆಸರಿಸಲು ಸಾದ್ಯವೇ ?

ಈ ವಯಸ್ಸು ಇಗೆ ನೀನು ಏನನ್ನಾದರೂ ತುಂಬ ಬಹುದು ಪ್ರೀತಿಯನ್ನು ತುಂಬಿದರೆ ಪ್ರೀತಿ ದ್ವೇಷ ಕಿಚ್ಚನ್ನು ತುಂಬಿದರೆ ಕಿಚ್ಚು ಈ ವಯಸ್ಸಿಗೇ ಕಿಚ್ಚನ್ನು ತುಂಬಿ ಉರಿಸಲಾಗುತ್ತಿದೆ.

ಘಟನೆಯ ಚಿಕ್ಕದರಲ್ಲೆ ಇದನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಗೋಜಿಗೆ ಯಾರೂ ಯಾವ ಸಮುದಾಯವು ಹೋಗಿದ್ದಂತೆ ಕಾಣುತ್ತಿಲ್ಲ.

ಮುಸಲ್ಮಾನ ಹೆಣ್ಣು ಮಕ್ಕಳು ಹಿಜಾಬ್ ಬುರ್ಕಾ ಗಳು ಇಲ್ಲದೆ ಹೊರಗೆ ಬರುವುದಿಲ್ಲ ನಿಜ. ಇದು ಇವಾಗಿನ್ ಕಥೆಯಲ್ಲ ಮೊದಲಿಂದ ನಡೆದು ಬಂದಿರುವ ಪದ್ಧತಿಯೂ ಅವರ ಧರ್ಮ ಹೇರಲ್ಪಟ್ಟ ವಿಷಯವೂ ಅವರ ಮೂಲ ಭೂತ ಹಕ್ಕೂ ಅಥವಾ ಹಿಂಗಾದರು ಪುರುಷ ಪ್ರಧಾನ ವ್ಯವಸ್ಥೆ ನಮ್ಮನು ಆಚೆ ಕಳುಹಿಸುತ್ತಾರೆ ಮತ್ತು ಶಿಕ್ಷಣ ಸಿಗುತ್ತದೆ ಅನ್ನುವುದು ಅವರ ಆಸೆ ಇರಬಹುದು. ಹೇಗೂ ಶಿಕ್ಷಣಕ್ಕಾಗಿ ಬರುತ್ತಿದ್ದಾರೆ ತಲೆಗೆ ಒಂದು ಬಟ್ಟೆ ಅಲ್ವ ಬಿಡಿ ಎಂದು ಸುಮ್ಮನಾಗುವ ಮನಸ್ಸು ಮಾಡಬಹುದಿತ್ತಾ?

ಹಿಜಾಬ್ ತೆಗೆದು ಶಾಲೆ ಒಳಗೆ ಬನ್ನಿ ಎಂದು ಹೇಳಿದಾಗ ಹಿಜಾಬ್ ತೆಗೆಯಲ್ಲ. ಇದು ನನ್ನ ಧರ್ಮದ ಸಂಕೇತ ಎಂದು ರಾಜ್ಯ ಮಟ್ಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುವ ಮತ್ತು ಪ್ರತಿಭಟಿಸುವ ಮುಸಲ್ಮಾನ ಹೆಣ್ಣು ಮಕ್ಕಳು ಈಗಲಾದರೂ ಮುದ್ದಾದ ತನ್ನ ಮುಖಗಳನ್ನು, ಸುಂದರವಾದ ತನ್ನ ಕೂದಲನ್ನೂ ತೋರಿಸಲು, ಮುಖ್ಯವಾಹಿನಿಗೆ ಬರಲು ಆ ಸೆಕೆಯಿಂದ ತಪ್ಪಿಸಿಕೊಳ್ಳಲು, ತನ್ನನ್ನು ತಾನು ಸಂಭ್ರಮಿಸಲು ಮುಕ್ತವಾಗಿ ಶಿಕ್ಷಣ ಪಡೆಯಲು ತಮ್ಮ ತಮ್ಮ ಮನೆಗಳಲ್ಲಿ ಹಿಜಾಬ್ ತೆಗೆಯಲು ಮತ್ತು ಪುರುಷ ಮತ್ತು ಮಹಿಳೆಯರ ಸಮಾನತೆಗೆ ಪ್ರತಿಭಟಿಸಿದ್ದರೆ, ಮುಕ್ತವಾಗಿ ಶಿಕ್ಷಣ ಪಡೆಯಲು ಹಂಬಲಿಸುತ್ತಿರುವ ಮುಸಲ್ಮಾನ ಸಮುದಾಯದ ಹಿಜಾಬ್ ಇಷ್ಟ ಪಡುವ ಪಡದೆ ಇರುವ ಎಲ್ಲ ಹೆಣ್ಣು ಮಕ್ಕಳಿಗೂ ಇದು ಸಹಾಯವಾಗಬಹುದು ಎಂದು ಯೋಚಿಸುವ ಮನಸ್ಸು ಮಾಡಬಹುದಿತ್ತ?

ಈ ಎರಡು ಸಮುದಾಯಗಳು ಈ ಸಾಧ್ಯತೆಗಳನ್ನು ಯೋಚಿಸಲೇ ಇಲ್ಲ.

ಆದಾಗ್ಯೂ ಶ್ರೀ ರಾಮನ ಜಪ ಮಾಡುವ ಹಿಂದೂ ಹೆಣ್ಣು ಮಕ್ಕಳಿಗೂ ಬುರುಕಾ ಹಿಜಾಬ್ ಬಳಸುವ ಮುಸಲ್ಮಾನ ಹೆಣ್ಣು ಮಕ್ಕಳಿಗೂ ಈ ಸಮಾಜದಲ್ಲಿ ಸುರಕ್ಷತೆಯೂ ಇಲ್ಲ. ಹೆಣ್ಣು ಮಕ್ಕಳ ಮೇಲೆ ಆಗುವ ಅತ್ಯಾ ಚಾರಗಳು ನಿಂತಿಲ್ಲ .

ಹಾಗಾದರೆ, ಈ ಧರ್ಮ ಗಳ ಬಟ್ಟೆಗಳು ಮತ್ತು ದೇವರುಗಳು ಹೆಣ್ಣನ್ನು ಶೋಷಿಸುವ ಮತ್ತು ಅತ್ಯಾಚಾರಗಳನ್ನು ತಡೆಯಲು ಆಗುತ್ತಿಲ್ಲ ಅನ್ನುವುದು ಸತ್ಯವಾದರೆ ನಾವು ಮಾಡಿಕೊಂಡಿರುವ ಧರ್ಮ ಜಾತಿಗಳ ವಿಚಾರಕ್ಕಾಗಿ ಮಾನವೀಯ ಧರ್ಮವನ್ನು ಬಲಿಕೊಡುತ್ತಿರುವುದು ಸರಿಯೇ ಎಂದು ಹೆಣ್ಣು ಮಕ್ಕಳೇ ಯೋಚಿಸಬೇಕು.

ಇದೆಲ್ಲ ಬೆಳವಣಿಗೆಗಳನ್ನು ನೋಡಿದರೆ ಇಲ್ಲಿವರೆಗೂ ನಾವು ಕಲಿತ ಶಿಕ್ಷಣ ಏನು? ಇಲ್ಲಿಯವರೆಗೂ ಯಾವ ಶಿಕ್ಷಣ ಸಂಸ್ಥೆಗಳು ಧರ್ಮ ದೇಶ ಪ್ರೇಮದ ಬಗ್ಗೆ ಪಾಠ ಮಾಡಲೇ ಇಲ್ಲವೇ. ಯಾರನ್ನೂ ಗೌರವಿಸುವುದನ್ನು ಕಲಿಸಲಿಲ್ಲವೆ. ಕುವೆಂಪು ಬರೆದ ನಾಡ ಗೀತೆಯನ್ನು ಹೇಳಿಸಲಿಲ್ಲವೇ ? ಅಂಬೇಡ್ಕರ್ ವಿವೇಕಾನಂದ ಇಂತಹ ವ್ಯಕ್ತಿಗಳನ್ನು ಯುವಕರಿಗೆ ಓದಿಸಲಿಲ್ಲವೆ ? ಮತ್ತೆ ಇಷ್ಟು ದಿನ ಶಿಕ್ಷಣ ಸಂಸ್ಥೆಗಳು ಏನನ್ನೂ ಭೋದಿಸುತ್ತಿವೆ ಅರ್ಥವಾಗುತ್ತಿಲ್ಲ.

ಈ ದಿನಗಳು ನಿಜವಾಗಲೂ ಸಮಾಜವನ್ನು ಹಾಳುಮಾಡುವ ದಿನಗಳು. ಕೋಮು ಗಲಭೆ ಸೃಷ್ಟಿಸಿದ ಮನಸ್ಸುಗಳು ರಾಜಕೀಯ ಬೇಳೆ ಬೇಯಿಸಿ ದಾರಿ ತಪ್ಪಿಸುತ್ತಿರುವ ರಾಜಕಾರಣಿ ಗಳಿಗೆ ಈ ಬೆಂಕಿಗೆ ತುಪ್ಪ ಸುರಿಯುತ್ತಿರುವ ಎಂದು ಬದಲಾಗದ ಯೂಸ್ಲೆಸ್ ಡಿಬೇಟ್ ಗಳನ್ನು ಮಾಡುತ್ತಿರುವ ಮಾಧ್ಯಮಗಳಿಗೆ ದೇಶದ ಮುಂದಿನ ಭವಿಷ್ಯ ಬಲಿಯಾಗುತ್ತಿರುವುದು ಈ ದೇಶದ ದುರಂತ ಮತ್ತು ಸೋಲು.


ಶಿಲ್ಪ ಎಂ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?