Friday, April 12, 2024
Google search engine
Homeತುಮಕೂರು ಲೈವ್ರಾಜ್ಯ ರೈತ ಸಂಘದ ದೇವರಾಜ್ ಇನ್ನಿಲ್ಲ

ರಾಜ್ಯ ರೈತ ಸಂಘದ ದೇವರಾಜ್ ಇನ್ನಿಲ್ಲ

ತುಮಕೂರು: ರಾಜ್ಯ ರೈತ ಸಂಘದ ಹಿರಿಯ ಮುಖಂಡ‌ ಬೆನನಾಯಕನಹಳ್ಳಿ ದೇವರಾಜ್ ಭಾನುವಾರ ರಾತ್ರಿ ಅಕಾಲಿಕ ನಿಧನರಾದರು.

ಎಲ್ಲರಿಂದ ದೇವರಾಜಣ್ಣ ಎಂದು ಕರೆಯಿಸಿಕೊಳ್ಳುತ್ತಿದ್ದ ಅವರು ರೈತ ಸಂಘದ‌ ಹಿರಿಯ ಮುಖಂಡರಲ್ಲಿ ಒಬ್ಬರಾಗಿದ್ದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯದರ್ಶಿಯಾಗಿದ್ದ ಅವರು ತಿಪಟೂರಿನ ಬೆನನಾಯಕನಹಳ್ಳಿಯವರು.

ನುಡಿದಂತೆ ನಡೆಯುತ್ತಿದ್ದ ಸರಳ, ಸಜ್ಜನಿಕೆಯ ನೇತಾರರಾಗಿದ್ದರು.

ರೈತ ಸಂಘದ ಸ್ಥಾಪಕರಾಗಿದ್ದ ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಅವರ ಒಡನಾಡಿಯಾಗಿದ್ದರು. ಅವರೊಂದಿಗೆ ವಿಶೇಷವಾದ ಆಪ್ತತೆ, ಸಂಬಂಧ ಇರಿಸಿ ಕೊಂಡಿದ್ದರು.

ಪ್ರೊ.ನಂಜುಂಡಸ್ವಾಮಿ ಅವರು ಕ್ಯಾನ್ಸರ್ ಪೀಡಿತರಾಗಿ ಕಿದ್ವಾಯಿ ಆಸ್ಪತ್ರೆಯಲ್ಲಿದ್ದಾಗ ಅವರ ಆರೈಕೆ ಮಾಡಿದವರಲ್ಲಿ ಇವರು ಒಬ್ಬರಾಗಿದ್ದರು.

ತಿಪಟೂರಿನಲ್ಲಿ ದಶಕಗಳಿಂದ ರೈತ ಚಳವಳಿಯನ್ನು ಜೀವಂತವಾಗಿಟ್ಟುಕೊಂಡು ಬಂದಿದ್ದರು. ಅದಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದರು.

ನೀರಾ, ಕೊಬ್ಬರಿ‌‌‌ ಚಳವಳಿ ಸೇರಿದಂತೆ ಅನೇಕ‌ ಚಳವಳಿಗಳ‌ ಮುಂಚೂಣಿ ನಾಯಕರಾಗಿದ್ದರು. ಅನೇಕ ಸಲ ಜೈಲಿಗೂ ಬಂದಿದ್ದರು.

ಸೋಮವಾರ ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ನಿಧನಕ್ಕೆ ರಾಜ್ಯ ರೈತ ಸಂಘ,‌‌ಬೆಲೆ ಕಾವಲು ಸಮಿತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು, ಗಣ್ಯರು, ರೈತ ಮುಖಂಡರು ಸಂತಾಪ ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?