Thursday, March 28, 2024
Google search engine
Homeಸಣ್ಣಕಥೆವೆಬ್ ಕಥೆ : ಅಪ್ಪಗೋಳ್ ತಾತಯ್ಯ ಮನದಲ್ಲೇ ನಕ್ಕ.‌

ವೆಬ್ ಕಥೆ : ಅಪ್ಪಗೋಳ್ ತಾತಯ್ಯ ಮನದಲ್ಲೇ ನಕ್ಕ.‌

ಅನಾಮಿಕ

ಅವನು ಹಾಗೆ ಯೋಚಿಸಿದಾಗಲೆಲ್ಲ ರಾತ್ರಿ ಹೊತ್ತು ಮೀರಿ ಹೋಗಿರುತ್ತದೆ ಅದೇ ಸಮಯಕ್ಕೆ ಹಲ್ಲಿಗಳು ಲೊಚಗುಡುವುದಕ್ಕೂ ಅವನು ಯಾರಿಗೂ ಕೇಳದಂತೆ ಏನೇನೋ ಲೊಚಗುಟ್ಟುವುದು ಆ ಮನೆಯವರಿಗೆ ಸಾಮಾನ್ಯವಾಗಿ ಹೋಗಿದೆ. ಅವನ ತಲೆಯಲ್ಲಿ ಏನಿದೆಯೋ, ಯಾರ ಬಗ್ಗೆಯೋ, ಯಾವ ಸಾಮಾಜ್ರ್ಯದ ಬಗ್ಗೆಯೂ ಯಾರಿಗೆ ಗೊತ್ತಿಲ್ಲ.

ಹಾಗಂತ ಇಷ್ಟು ವರ್ಷಗಳ ಕಾಲವೂ ಅವ ಯಾಕೆ ಸರೊತ್ತಿನಲ್ಲಿ ಹೀಗೆ ಯೋಚ್ನೆ ಮಾಡ್ತಾ ಕೂರ್ತಾನೆ ಅಂತಾನು ಯಾರ್ಗೂ ಗೊತ್ತೂ ಇಲ್ಲ. ಆದರೆ ಆ ಮನೆಯ ಮಕ್ಕಳಿಗೆ ಮಾತ್ರ ಈ ವ್ಯಕ್ತಿ ವಿಚಿತ್ರ ವ್ಯಕ್ತಿಯಾಗಿ, ಯಾರೋ ಋಷಿ ಇರಬೇಕೆಂದೇನೊ ಅವರೊಳಗೆ ಮಾತನಾಡಿಕೊಂಡು ಏನೇನೊ ಸುದ್ದಿಗಳನ್ನು ಅವರೊಳಗೆ ಹರಡಿಕೊಂಡು ಬಿಟ್ಟಿದ್ದಾರೆ.‌ಈ ಮಕ್ಕಳ ಕಲ್ಪನಗಳೆಲ್ಲ ಶಾಲೆಯ ಹೊಸ್ತಿಲು ದಾಟಿ ಮೇಷ್ಟ್ರು ಕಿವಿಗೂ ಬಿದ್ದಿರುವುದರಿಂದ ಈ ಹುಡ್ಗುರೂಗೆ ಒಂಥರಾ ರಕ್ಷಣೆ.

ಅಂದ ಹಾಗೆ ಎಲ್ಲರ ಬಾಯಲ್ಲೂ ಅಯ್ಯಪ್ಪೋಳ್ ತಾತ ಅನ್ನಿಸಿಕೊಂಡಿರುವ ಈತನಿಗೆ ದಿಕ್ಕು ದೆಸೆ ಯಾರೂ ಇಲ್ಲ. ಮಕದ ತುಂಬಾ ಸಿಡಿಬು ಹತ್ತಿಸಿಕೊಂಡು ಮಕವೆಲ್ಲ ತೂತು ಬಿದ್ದಿರುವ ಕಾರಣದಿಂದಲೂ, ಇಲ್ಲ ಎಲ್ರೂ ಉಡಾಫೆ ಮಾಡಿದ ಕಾರಣದಿಂದಲೂ ಅಪ್ಪಗೋಳ್ ತಾತಪ್ಪ ವಿಚಿತ್ರ. ಖಯಾಲಿಗಳನ್ನು ಬೆಳೆಸಿಕೊಂಡು ಹೆಂಗ್ ಬೇಕೋ ಹಂಗೆ ಆಡ್ತಾ ಅಡ್ತಾ ಈಗ ಅಪ್ಪಗೋಳ್ ತಾತಯ್ಯನೇ ಆಗಿ ಬಿಟ್ಟಿದ್ದಾನೆ.

ಗೌಡರ ಹಟ್ಟಿ ಸೇರಿದ್ದು ಯಾವಾಗ, ಯಾಕೆ ಅನ್ನೋದು ಈಗ ಯಾರ್ಗೂ ನೆನಪಿಗೆ ಉಳಿದಂತೆ ಇಲ್ಲ.‌ ಹದಿನಾಲ್ಕು ಅಂಕಣದ ಈ ಮನೆಯಲ್ಲಿ ಇಂಥ ತಾತಗಳ ಸಂಖ್ಯೆ ಐದಾರು‌ ಮುಟ್ಟಬಹುದು. ಆ ಮನೆಯ ಹೆಂಗಸರಂತು ಬೇಯ್ಸಿ ಹಾಕೋದು ಅಷ್ಟೇ. ಅದರಾಚೆಗೆ ಅವರಿಗೆ ಯೋಚನೆಗಳೆ ಬರವುದುದಿಲ್ಲವೇನೋ ಎನ್ನುವಷ್ಟು ಅವರನ್ನು ನೋಡಿದವರಿಗೆಲ್ಲ ಅನ್ನಿಸಿ ಬಿಡುತ್ತದೆ.

ಅಪ್ಪಗೋಳ್ ತಾತಯ್ಯ ಒಮ್ಮೊಮ್ಮೆ ಮೀಸೆ ಮರೆಯಲ್ಲೇ ನಗಾಡಿಕೊಳ್ಳುತ್ತಾನೆ. ತೋಟ ಮಾಡಿದ ಹೊಸದರಲ್ಲಿ ಬಾಳೆ ಗೊನೆ ಸಂತೆಗೆ ಹಾಕಿ ಅಷ್ಟಕ್ಕೂ ಭಟ್ರಮ್ಮನ ಹೋಟೆಲ್ ನಲ್ಲಿ ಬೊಂಡ ತಿಂದು ಬಂದು ಬಿಡೋಣ. ಯಾಕೋ ಲೆಕ್ಕಚಾರ ಏರುಪೇರು ಹಾಗೋದು ನೋಡಿ ಅಪ್ಪಗೋಳ್ ತಾತಯ್ಯ ತೋಟದ ಹತ್ತಿರ ಸುಳಿಯಂದಂತೆ ಮನೆ ಹಿರಿಕರೆಲ್ಲ ಲಕ್ಷ್ಮಣ ರೇಖೆ ಎಳೆದರು.

ತಾತನ ದೊಡ್ಡಪ್ಪ ಅಂತೆ. ಊರು ಬಿಟ್ಟೋದನ್ನು ಮತ್ತೇ ಯಾವ್ದೊ ಕಾಲದಲ್ಲಿ ಊರ ಸೇರಕೊಂಡಾನೆ.‌ಇವ್ನ ಸಾಕೋದು ನಮ್ಮ ಕರ್ಮ ಅಂದ್ಕೊಂಡು ಮನೆಯವರೆಲ್ಲ ತೆಪ್ಪಗೆ ಬಿದ್ದಿದ್ದರು.

ಒಮ್ಮೊಮ್ಮೆ ಸ್ಮಶಾನದ ಮಾವಿನಗೆದ್ದಲು ಹುಲ್ಲಿಗೆ ಎಮ್ಮೆ ಹೊಡ್ಕೊಂಡು ಹೋಗುತ್ತಿದ್ದ ಈ ತಾತ ಹಾಗೆಲ್ಲ ಗೆಲವಾಗಿರುತ್ತಿದ್ದನು. ಶ್ಮಶಾನದಲ್ಲಿ ಹೊದ ಹೆಣಗಳ ಜತೆ ತಾತಯ್ಯ ಮಾತಾಡ್ತಾನೆ ಅನ್ನೋದೆ ಹಾಗೆಲ್ಲ ದೊಡ್ಡ ಸುದ್ದಿಯಾಗೋದು.‌ಇಂತದೇ ದಿನಗಳಲ್ಲಿ ಸರೊತ್ತಿನಲ್ಲಿ ಮನೆಯ ಜಗಳಿ ಮೇಲೆ ಕುಳಿತು ಏನೇನೋ ಪಿಸುಗುಟ್ಟುವುದಕ್ಕೂ, ಮನೆ ತುಂಬಾ ಹಲ್ಲಿಗಳು ಲೊಚಗುಟ್ಟುವುದಕ್ಕೂ ಆರಂಭಿಸುತ್ತಿದ್ದವು.‌ಇದು ಆ ಮನೆಯವರಿಗೆ ಮತ್ತಷ್ಟು ಭಯ ಶುರುವಾಗಿ ಇತ್ತೀಚೆಗೆ ತಾತಯ್ಯನ್ನು ಕಂಡರೆ ಭಯ ಬೀಳೋಕ್ ಶುರು ಮಾಡಿದ್ದರು.

ಒಂದಿನ ಹೀಗೆ ಮ್ಯಾಗಿನ ಮನೆಯ ರಂಗಮ್ಮ ಬರೋವಾಗ ಹಿಂದಿನಿಂದ ಬಂದ ಅಪ್ಪಗೋಳ್ ತಾತಯ್ಯ ಅವಳ ಸೀರೆ ಎತ್ತಿ ಕುಂಡೆ ಮುಟ್ಟಿದ್ದು ಊರೆಲ್ಲ ಸುದ್ದಿಯಾಗಿ ದೊಡ್ಡಮನೆಯ ಮಾನ ಮರ್ವಾದೆಯೂ ಹಾಳಾಯಿತು.

ಅತ್ತಲಾಗಿ ಹತ್ತು ದಿನಕ್ಕೆ ಸರಿಯಾಗಿ ರಂಗಮ್ಮ ಸೀರೆ ಹುಟ್ಟರೆ ಸಾಕು ಹೆಂಗೆಗೋ ಆಡಕ್ಕೆ ಶುರು ಮಾಡ್ತಿದ್ದಳು. ಆಕೆಗೆ ಮಾಟ ಮಂತ್ರ ಮಾಡಿಸಿಬೇಕು ಎಂಬ ಮಾತು ಊರಲೆಲ್ಲ ಹರಿದಾಡಿತು. ಅವೊತ್ತು ಸರಿ ಹೊತ್ತಲ್ಲೇ ಜಗಳಿಯಿಂದ ಎದ್ದ ಅಪ್ಪಗೋಳ್ ತಾತಯ್ಯ ಸೀದಾ ಹಳ್ಳಿ ಕಟ್ಟೆಗೆ ಜಮಾಯಿಸಿದ.‌ಅರಳಿ ಮರದ ತುಂಬೆಲ್ಲ ಹಲ್ಲಿಗಳು ಲೊಚಗುಟ್ಟಲು ಆರಂಭಿಸಿದ್ದವು. ಆ ಹಳ್ಳಿ ಮರದ ಕೆಳಗ್ಗೆ ಗುಡಿಸಲು ಹಾಕಿಕೊಂಡಿದ್ದ ಕೆಂಪೀರಿಗೆ ಒಂದಾ‌ ಮಾಡಕ್ಕೆ ಅರ್ಜೆಂಟ್ ಆಗಿ ಈಚೆ ಬಂದವಳು ಹಳ್ಳಿ ಮರದ ಕೆಳಗ್ಗೆ ಕುಳಿತಿದ್ದ ತಾತಯ್ಯ ಕಂಡು ಭಯಭೀತಳಾದಳು.‌ ಒಂದ ತಡಕ್ಕೊಂಡು ಒಳಕ್ಕೋಡಿ ಗುಡಿಸಲು ಬಾಗಿಲು ಭದ್ರ ಮಾಡಿಕೊಂಡಳು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?