Thursday, March 28, 2024
Google search engine
HomeUncategorizedಸಂಕ್ರಾಂತಿ ಸರಣಿ: ಕವಿತೆ ಓದಿ-ಎಳ್ಳು ಬೆಲ್ಲ

ಸಂಕ್ರಾಂತಿ ಸರಣಿ: ಕವಿತೆ ಓದಿ-ಎಳ್ಳು ಬೆಲ್ಲ

ಎಳ್ಳು ಬೆಲ್ಲದಲಿ ಬೇರು ಯಾವುದು?
ಹಣ್ಣು ಯಾವುದು? ಯಾವುದನ್ನು ಹೇಗೆ

ಮೆಲ್ಲಬೇಕು.
ಒಂದನ್ನು ಕಡೆಗಣಿಸಿ., ಒಂದನ್ನು ಬಿಡಲಾಗದು.
ಎಲ್ಲವನ್ನು ಉಂಡು ಜೀರ್ಣಿಸಬೇಕು. ಅದುವೇ ಜೀವನದ ಸಾರ. ಅದನ್ನು ಎಳ್ಳುಬೆಲ್ಲಕ್ಕೆ ಸಮೀಕರಿಸಿದ್ದಾರೆ ಡಾII ರಜನಿ.



ಎಳ್ಳು ಬೆಲ್ಲ
————-

ಎತ್ತಣ ಮಾಮರ
ಎತ್ತಣ
ಕೋಗಿಲೆ…

ಗಿಡದ ಎಳ್ಳು
ಮರದ
ಕೊಬ್ಬರಿ …

ಭೂಮಿಯೊಳಗಣ
ನೆಲಗಡಲೆ
ಹುರಿದು…

ಪೊದೆಯ ಕಾಳು
ಹುರಿದು ಬಿರಿದ
ಪುಟಾಣಿ…

ದೊಡ್ಡ ಹುಲ್ಲೆಂಬ
ಕಬ್ಬು ಅರೆದು
ಬೆಂದು ಬೆಲ್ಲ…

ಒಂದು ಹುಲ್ಲು
ಒಂದು
ಬೇರು…

ಒಂದು ಹಣ್ಣು
ಒಂದು
ಬೀಜ …

ಒಂದು ಜಗಿದು
ಒಂದು
ಸಿಗಿದು …

ಒಂದು
ಕಟುಂ
ಕಟುಂ …

ಒಂದು
ಮೆಲ್ಲಗೆ
ಸವಿದು …

ಹಿರಿಯರ
ಅನುಭವ
ಸಮ್ಮಿಶ್ರಣದಿಂದ..

ಆದುದೇ
ಎಳ್ಳು
ಬೆಲ್ಲ…

ಅದುವೆ
ಜೀವನ…

ಕಹಿ ಉಂಡು
ಸಿಹಿ ಹಂಚಿ…


ಡಾII ರಜನಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?