Wednesday, April 17, 2024
Google search engine
Homeತುಮಕೂರು ಲೈವ್ಸಮಾಜ ವಿರೋಧಿ ಶಕ್ತಿಗಳ ಜೊತೆ ಮುಸ್ಲಿಂ ಸಮುದಾಯ ಇಲ್ಲ - ತಿಪಟೂರು ಮುಸ್ಲಿಂ ಸಮುದಾಯ

ಸಮಾಜ ವಿರೋಧಿ ಶಕ್ತಿಗಳ ಜೊತೆ ಮುಸ್ಲಿಂ ಸಮುದಾಯ ಇಲ್ಲ – ತಿಪಟೂರು ಮುಸ್ಲಿಂ ಸಮುದಾಯ

Publicstory. in


Tipturu: ಸಮಾಜದಲ್ಲಿ ಶಾಂತಿ ಕದಡುವ ಸೌಹಾರ್ದತೆಗೆ ದಕ್ಕೆಯಾಗುವ ಶಕ್ತಿಗಳ ಜೊತೆ ತಿಪಟೂರು ಮುಸ್ಲಿಂ ಸಮಯದಾಯ ಇಲ್ಲ. ಕಾನೂನು ಬಾಹಿರವಾಗಿ ಸಮಾಜವನ್ನು ಒಡೆಯಲು ಯತ್ನಿಸುವ ಯಾರೆ ಅಗಲಿ ಅವರ ಮೇಲೆ ಕಾನೂನು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಪಟೂರಿನ ಸೌಹಾರ್ದ ಸಂಘಟನೆಯ ಕಾರ್ಯದರ್ಶಿ ಅಲ್ಲಾಬಕಾಶ್ ಎ ಸಮಸ್ತ ಮುಸ್ಲಿಂ ಸಮುದಾಯ ಪರವಾಗಿ ಅಗ್ರಹಿಸಿದರು.

ಅವರು ನಗರದ ಜಾಮೀಯ ಮಸೀದಿಯಲ್ಲಿ ಮುಸ್ಲಿಂ ಭಾಂದವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಗುರುವಾರ ತಿಪಟೂರು ನಗರದ ಯುವಕ ಇಂದಾದ್ ಖಾನ್ ಎಂಬುವವನು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಒಂದನ್ನು ಮಾಡಿದ್ದು, ಅದು ಧರ್ಮ ವಿರೋಧಿಯಾಗಿದ್ದು ಅದನ್ನು ನಾಗರಿಕ ಸಮಾಜ ಒಪ್ಪಲು ಸಾದ್ಯವಿಲ್ಲ. ಇಂತಹ ಕೃತ್ಯಗಳನ್ನು ಮಾಡುವವರ ಬಗ್ಗೆ ಕರುಣೆ ತೋರುವ ಪ್ರಶ್ನೆಯೇ ಇಲ್ಲ. ಇಂತಹ ಕೃತ್ಯದಲ್ಲಿ ಭಾಗಿಯಾಗಿರುವವರು ಎಷ್ಟೆ ಪ್ರಭಾವಿಗಳಾಗಿದ್ದರೂ ಅದನ್ನು ಲೆಕ್ಕಿಸದೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ತಿಪಟೂರು ತಾಲ್ಲೂಕು ಅಧ್ಯಕ್ಷ ಸೈಫುಲ್ಲಾ ಎಂ ಮಾತನಾಡಿ ತಿಪಟೂರು ಸೌಹಾರ್ದತೆಯ ಬೀಡಾಗಿದ್ದು ಇಲ್ಲಿ ಎಲ್ಲಾ ಧರ್ಮದವರು ಪರಸ್ಪರ ಸಹೋದರರಂತೆ ಬದುಕುತ್ತಿದ್ದು ನಮ್ಮಗಳ ಮಧ್ಯೆ ಇರುವ ಭಾವೈಕ್ಯತೆಯನ್ನು ಕದಡಲು ಪ್ರಯತ್ನಿಸುವ ಯಾವುದೆ ಧರ್ಮದ ವಿಕೃತ ಶಕ್ತಿಗಳು ಬೆಳೆಯಲು ಕಲ್ಪತರು ನಾಡಿನ ಜನತೆ ಅವಕಾಶ ನೀಡುವುದಿಲ್ಲ ಎಂದರು.

ಇಂತಹ ಶಕ್ತಿಗಳನ್ನು ತಡೆಯುವ ಯಾವುದೇ ಹೋರಾಟಗಳಲ್ಲಿ ಮುಸ್ಲಿಂ ಸಮಾಜ ಮುಂಚೂಣಿಯಲ್ಲಿ ನಿಂತು ವಿಚಿದ್ರಕಾರಿ ಶಕ್ತಿಗಳನ್ನು ಬೆಳೆಯಲು ಬಿಡುವುದಿಲ್ಲ ಎಂದರು.

ಬಿಲಾಲ್ ಮಸೀದಿಯ ಮುತವಲ್ಲಿ ಶಫಿಉಲ್ಲಾ ಶರೀಫ್ ಮಾತನಾಡಿ ಅಪ್ರಭುದ್ಧತೆ ಬೇಜವಾಬ್ದಾರಿತನದ ಪರಮಾವದಿ ಸಮಯ ಸಂದರ್ಭ ಪರಿಸ್ಥಿತಿಯ ಅರಿವಿಲ್ಲದೆ ಪ್ರಚಾರದ ಗೀಳಿಗೆ ಬಿದ್ದವರಿಂದ ನಿಜವಾಗಿ ನಡೆಯಬೇಕಿರುವ ಜನಪರ ಚಳುವಳಿಯನ್ನು ಮೂಲೆ ಗುಂಪು ಮಾಡುವ ಇಂತಹ ಮಾತುಗಳು ಖಂಡನೀಯ ಎಂದರು.

ಜಾಮೀಯ ಮಸೀದಿಯ ಸಮೀಉಲ್ಲಾ ಖಾನ್ ರವರು ಮಾತನಾಡಿ ಇಸ್ಲಾಂ ಧರ್ಮ ಶಾಂತಿ ಸಹೋದರತೆ ಸಹಬಾಳ್ವೆಗೆ ಒತ್ತು ನೀಡುತ್ತದೆ. ಇಂತಹ ವಿಶಾಲವಾದ ಅಶಯವಿರುವ ಇಸ್ಲಾಂ ಧರ್ಮದ ಅನುಯಾಯಿಗಳಾದ ನಾವುಗಳು ಶಾಂತಿ ಮತ್ತು ಸೌಹಾರ್ದತೆಯಲ್ಲಿ ನಂಬಿಕೆ ಇಟ್ಟಿರುವವರು ಎಂದರು.

ಯಾವುದೇ ವಿಚಿತ್ರಕಾರಿ ಶಕ್ತಿ ನಮ್ಮನ್ನು ದುರ್ಬಲಗೊಳಿಸಲು ಸಾದ್ಯವಿಲ್ಲ. ಇಂತಹ ದಾರಿತಪ್ಪಿದ ಯುವಕರನ್ನು ಸರಿದಾರಿಗೆ ತರಲು ಕೂಡ ನಾವುಗಳು ಸನ್ನದ್ಧರಾಗುತ್ತೇವೆ. ಮುಂದಿನ ದಿನಗಳಲ್ಲಿ ಯಾವುದೆ ಜನ ವಿರೋಧಿ ಶಕ್ತಿಗಳು ಆಕ್ರಮಣ ಮಾಡಿದರೆ ತಿಪಟೂರಿನ ಎಲ್ಲಾ ಧರ್ಮಿಯರು ಒಟ್ಟಾಗಿ ಸೇರಿ ಅಂತಹ ಶಕ್ತಿಗಳನ್ನು ಹಿಮ್ಮೆಟ್ಟಿಸೋಣ. ಅದಕ್ಕಾಗಿ ತಿಪಟೂರಿನ ಸಮಸ್ತ ಸಮಾಜ ಭಾಂದವರ ಸಹಕಾರವನ್ನು ಕೋರುತ್ತೇವೆ ಎಂದರು.

ಪ್ರಚಾರದಗೀಳು ಅಂಟಿಸಿಕೊಂಡ ಕೆಲವರು ಸಮಾಜದ ಸ್ವಾಸ್ಥವನ್ನು ಕೆಡಿಸುವ ಕೆಲಸಕ್ಕೆ ಇಳಿದಿದ್ದು ಇಂತಹ ಎಲ್ಲಾ ಘಟನೆಗಳನ್ನು ಸಮಾನವಾಗಿ ಗಂಭೀರವಾಗಿ ಪರಿಗಣಿಸಿ ಕಾನೂನು ಕಠಿಣ ಕ್ರಮ ಕೈಗೊಳ್ಳುವ ಮೂಲಕ ಆರೋಗ್ಯಕರ ಸಮೃದ್ದ ಸೌಹಾರ್ದ ಭಾರತವನ್ನು ಉಳಿಸಿ ಭೆಳೆಸುವ ಮುನ್ನೆಡೆಸುವ ಕಡೆಗೆ ಸಮಾಜ ಚಿಂತಿಸಬೇಕಿದೆ ಎಂದು ಮದೀನಾ ಮಸೀದಿಯ ಕಾರ್ಯದರ್ಶಿ ಟಿ ಎಲ್ ಶಫೀಕ್ ಅಹಮದ್ ತಿಳಿಸಿದರು. ಮುಖಂಡರುಗಳಾದ ಸೈಯದ್ ಫೈರೋಜ್ ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಜರೀನ್ ಮಸೀದಿಯ ಸೈಯದ್ ಮೊಹಮೂದ್, ಮುನಿರ್, ಉಸ್ಮಾನೀಯ ಮಸೀದಿಯ ಖಲೀಲ್ ಸಾಬ್, ಸೈದಾನಅಲಿ ಮಸೀದಿಯ ಮಹಮ್ಮದ್ ಹಯಾತ್ , ರಶೀದಿಯಾ ಮಸೀದಿಯ ರಹಮತುಲ್ಲಾ, ಮಕ್ಕ ಮಸೀದಿಯ ಶೌಕತ್ ಸಾಬ್, ಅನ್ಸಾರ್ ಮಸೀದಿಯ ಗೌಸ್ ಪೀರ್ (ಡಿ,ಕೆ.ಬಾಬು) ಸಮಾಜ ಸೇವಕರಾದ ಪೈರೋಜ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?