Friday, April 19, 2024
Google search engine
Homeಜಸ್ಟ್ ನ್ಯೂಸ್ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಟನೆ

ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಟನೆ

ತಿಪಟೂರು :
ಮೂಲಭೂತ ಸೌಕರ್ಯಕ್ಕಾಗಿ ಒತ್ತಾಯಿಸಿ ನಗರದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸರ್ಕಾರದ ಆದೇಶದ ಪ್ರಕಾರ ಪ್ರತಿ ಒಂದು ಶಾಲಾ ಕೊಠಡಿಗೆ ಸುಮಾರು ತೊಂಬತ್ತು ರಿಂದ ನೂರು ಜನ ವಿದ್ಯಾರ್ಥಿಗಳಿಗೆ ಅನುಮೋದಿಸುವಂತೆ ಆದೇಶ ಬಂದಿದ್ದು ಅದರ ಪ್ರಕಾರ ಈಗಾಗಲೇ ಮೂರು ಜನ ವಿದ್ಯಾರ್ಥಿಗಳು ಪಾಠ ಕೇಳುವಂತಹ ಕೊಠಡಿಗಳಾಗಿ ಮೂಲಭೂತ ವ್ಯವಸ್ಥೆಗಳಾಗಲಿ ಬೋರ್ಡ್ ಗಳಾಗಲಿ ಕಾಲೇಜಿನಲ್ಲಿ ಇಲ್ಲದಿರುವುದು ದುರದೃಷ್ಟಕರ.

ಅಷ್ಟೇ ಅಲ್ಲದೆ ಅಲ್ಲದೇ ಇಲ್ಲಿಯ ಶೌಚಾಲಯಗಳು ಸ್ಥಿತಿ ಹೇಳತೀರದು.
ಕಟ್ಟಡಗಳು ಸಂಪೂರ್ಣ ಹಾಳಾಗಿದ್ದು ಬೀಳುವ ಹಂತದಲ್ಲಿದ್ದು ಎಲ್ಲೆಂದರಲ್ಲಿ ರಂಧ್ರಗಳು ಕಾಣಿಸುತ್ತಿದ್ದು ಮಳೆಗಾಲದಲ್ಲೂ ಇದರ ಸ್ಥಿತಿ ತೀರಾ ಶೋಚನೀಯವಾಗಿರುತ್ತದೆ.

ಇಂತಹ ದುಃಸ್ಥಿತಿಯಲ್ಲಿ ವಿದ್ಯಾರ್ಥಿಗಳು ತೊಂಬತ್ತು ರಿಂದ ನೂರು ವಿದ್ಯಾರ್ಥಿಗಳು ಒಂದೇ ರೂಮಿನಲ್ಲಿ ಪಾಠ ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತೀರಾ ಚಿಕ್ಕದಾದ ಶಾಲಾ ಕೊಠಡಿಗಳಲ್ಲಿ ಕುಳಿತುಕೊಂಡು ಪಾಠ ಕೇಳುವುದು ವಿದ್ಯಾರ್ಥಿಗಳಿಗಂತೂ ಶೋಚನೀಯ ಸ್ಥಿತಿ ಉಂಟಾಗಿದೆ.


ಜೊತೆಗೆ ಪದವಿ ಕಾಲೇಜು ರಾಷ್ಟ್ರೀಯ ಹೆದ್ದಾರಿ ಇನ್ನೂರರ ಅಕ್ಕಪಕ್ಕದಲ್ಲಿದ್ದು ತರಗತಿಗಳನ್ನು ಮುಗಿಸಿ ಪಕ್ಕದ ಆಡಳಿತ ಕಚೇರಿಗೆ ತೆರಳಲು ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಮುಂದೆ ಸಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಹಂತದಲ್ಲಿ ಹಲವಾರು ಅಪಘಾತಗಳು ಈಗಾಗಲೇ ಸಂಭವಿಸಿದ್ದು ಈಗಾಗಲೇ ಕಾಲೇಜು ವಿದ್ಯಾರ್ಥಿಗಳು ಇದರಿಂದ ಸಾಕಷ್ಟು ಕಷ್ಟವನ್ನು ಅನುಭವಿಸಿರುವುದು ಕಂಡು ಬರುತ್ತಿದೆ.

ಈಗಲಾದರೂ ಕಾಲೇಜು ಶಿಕ್ಷಣ ಇಲಾಖೆಯು ಇತ್ತ ಗಮನ ಹರಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಕೊಠಡಿ ಶೌಚಾಲಯ ಹಾಗೂ ರಸ್ತೆಯ ಬದಿಯಲ್ಲಿ ಬರುವ ಸ್ಕೈವಾಕ್ಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಇಲ್ಲಿಯ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?