Friday, March 29, 2024
Google search engine
HomeUncategorizedಸಹಕಾರಿ ಸಂಘಕ್ಕೆ ಗ್ರಾಹಕರೇ ಶಕ್ತಿ: ಬೋರೇಗೌಡ

ಸಹಕಾರಿ ಸಂಘಕ್ಕೆ ಗ್ರಾಹಕರೇ ಶಕ್ತಿ: ಬೋರೇಗೌಡ

Publicstory


ತುಮಕೂರು: ಗ್ರಾಮೀಣ ಭಾಗದಲ್ಲಿ‌ ಸಹಕಾರಿ‌ ಸಂಘಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ.ಹಾಗಾಗಿ ಸಹಕಾರಿ ಸಂಘಕ್ಕೆ ಗ್ರಾಹಕರೆ ಶಕ್ತಿ ಎಂದು ಸಂಪನ್ಮೂಲ ವ್ಯಕ್ತಿ ಬೋರೆಗೌಡ ತಿಳಿಸಿದರು.

ತಾಲೂಕಿನ ಬೆಳ್ಳಾವಿಯ ಸ್ವದೇಶಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಘದ ಮೊದಲನೇಯ ವರ್ಷದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿರುವ ಕೂಲಿ ಕಾರ್ಮಿಕರು,ವ್ಯಾಪಾರಿಗಳು,ಹೈನುಗಾರರು,ಮಹಿಳಾ ಸ್ವ ಸಹಾಯ ಸಂಘದ ಪದಾಧಿಕಾರಿಗಳು ಕಿರುಯೋಜನೆ ಹಾಗೂ ಕೈಗಾರಿಕೆ ಮತ್ತು ವ್ಯಾಪಾರವನ್ನು ನೆಡೆಸಲು ಸಹಕಾರಿ ಸಂಘ ಕಿರುಸಾಲ ನೀಡುತ್ತದೆ.ಇದರಿಂದಾಗಿ ಗ್ರಾಮೀಣ ಭಾಗದವರು ಸಹಕಾರಿ‌ ಸಂಘದಿಂದ ಸಾಲ ಪಡೆದು ಸ್ವಂತ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಹಕಾರಿಯಾಗಿದೆ ಎಂದರು.

ಸ್ವದೇಶಿ ಪತ್ತಿನ ಸಹಕಾರಿ ಸಂಘವು ಏಳುವರ್ಷದಲ್ಲಿ 27 ಲಕ್ಷದ ವ್ಯವಹಾರವನ್ನು ನೆಡೆಸಿದೆ. ಈ ಸಂಘವು ಗ್ರಾಮೀಣ ಭಾಗದ ಜನರಿಗೆ ಸಾಲ ಸೌಲಭ್ಯವನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ.ಸಂಘವು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದೆ. ಸ್ವದೇಶಿ ಪತ್ತಿನ ಸಹಕಾರಿ ಸಂಘದಿಂದ ಗ್ರಾಹಕರಿಗೆ ಹೆಚ್ಚು ಸಾಲಸೌಲಭ್ಯ ನೀಡಬೇಕಾದರೆ ಸಂಘದ ನಿರ್ದೇಶಕರು ಶ್ರಮ ಪಟ್ಟು ಕೆಲಸ ಮಾಡಬೇಕಿದೆ. ಠೇವಣಿ,ಷೇರು, ಎಪ್ ಡಿ ಮಾಡಿಸಬೇಕಿದೆ ಎಂದು ಹೇಳಿದರು.

ಸ್ವದೇಶಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು,ಕಾನೂನು ಸಲಹೆಗಾರರಾದ ಸಿ.ಕೆ ಮಹೇಂದ್ರ ಅವರು ಮಾತನಾಡಿ, ಸಹಕಾರಿ ಕ್ಷೇತ್ರ ಸ್ವತಂತ್ರ ಪೂರ್ವದಲ್ಲಿಯೇ ಉದಯವಾಗಿದೆ.ಸಹಕಾರಿ ಕ್ಷೇತ್ರ ಎಂಬುದು ವ್ಯಾಪಕವಾಗಿ ಹರಡಿಕೊಂಡಿದೆ. ಸಹಕಾರಿ ಕ್ಷೇತ್ರದ ಅಡಿಯಲ್ಲಿ ಹಲವಾರು ಕಾರ್ಯರೂಪಗಳನ್ನು ಜಾರಿಗೆ ತರಬಹುದು ಎಂದರು.

ಸಹಕಾರಿ ಕ್ಷೇತ್ರಕ್ಕೆ ಸ್ಥಳೀಯವಾಗಿ ಹೆಚ್ಚು ಒತ್ತು ಕೊಡಬೇಕಿದೆ.,ಇದ್ದಲ್ಲಿಯೇ ಲಭ್ಯವಿರುವ ಸಂಪನ್ಮೂಲ,ಹಣಕಾಸು,ಸಾರ್ವಜನಿಕ ಸಹಕಾರ ಸೇರಿದಂತೆ ಸಂಪನ್ಮೂಲವನ್ನು ಬಳಸಿಕೊಂಡು ಒಂದು ಸಂಸ್ಥೆಯನ್ನು ಆರಂಭಿಸಿ ಆ ಸಂಸ್ಥೆಯ ಅಡಿಯಲ್ಲಿ ಹಲವಾರು ಸೌಲಭ್ಯಗಳನ್ನು ಒದಗಿಸುವುದಾಗಿದೆ ಎಂದು ಹೇಳಿದರು.

ಸ್ಥಳೀಯರ ಸಹಕಾರವನ್ನು ಕ್ರೂಡಿಕರಿಸಿ ಆರಂಭಿಸಿರುವ ಸ್ವದೇಶಿ ಪತ್ತಿನ ಸಹಕಾರ ಸಂಘವು ಕೇವಲ ತಾಲೂಕಿಗೆ ಮಾತ್ರ‌ ಸಿಮೀತವಾಗದೆ ಜಿಲ್ಲೆ,ರಾಜ್ಯ‌ಮಟ್ಟದ ಸಂಸ್ಥೆಯನ್ನಾಗಿ ಬೆಳೆಸುವ ಜವಾಬ್ದಾರಿ ಸಂಘದ ಆಡಳಿತ ಮಂಡಳಿಯ ಹಾಗೂ ಗ್ರಾಹಕರ ಕೆಲಸವಾಗಿದೆ.ಮುಂದಿನ ದಿನದಲ್ಲಿ ಎಲ್ಲಾರು ಒಟ್ಟಾಗಿ ಸೇರಿ ಚರ್ಚಿಸುವ ಮೂಲಕ ಸ್ವದೇಶಿ ಪತ್ತಿನ ಸಹಕಾರ ಸಂಘವನ್ನು ಬಲಪಡಿಸುವ ಭವಸೆ ನೀಡಿದರು.

ಸಂಘದ ಅಧ್ಯಕ್ಷರಾದ ಡಿ.ಎನ್ ಮಹದೇವಯ್ಯ ವಾರ್ಷಿಕ ವರದಿಯನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಶೇ.90 ರಷ್ಟು ಅಂಕ ಪಡೆದ ಸಂಘದ ನಿರ್ದೇಶಕರ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ವದೇಶಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಚಿಕ್ಕಣ್ಣ ಎಸ್.ಡಿ,ನಿರ್ದೇಶಕರಾದ ನರಸಿಂಹಮೂರ್ತಿ,ರಾಜಶೇಖರ್,ಮಂಜುಳಾ,ಗುಮಾಸ್ತ ಜಯರಾಮ್,ಹಾಗೂ ನಿರ್ದೇಶಕರು ಸೇರಿದಂತೆ ಹಲವರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?