Friday, March 29, 2024
Google search engine
Homeಜಸ್ಟ್ ನ್ಯೂಸ್ಸಾಲ ಬೇಕೆ, ಸಾಲ; ಮನೆಬಾಗಿಲಲ್ಲೆ ಕೊಡ್ತಾರೆ 'ಮೋದಿ' ತೆಂಗಿನ ಸಾಲ...

ಸಾಲ ಬೇಕೆ, ಸಾಲ; ಮನೆಬಾಗಿಲಲ್ಲೆ ಕೊಡ್ತಾರೆ ‘ಮೋದಿ’ ತೆಂಗಿನ ಸಾಲ…

ತುಮಕೂರು: ಜಿಲ್ಲೆಯ ತೆಂಗು ಬೆಳೆಗಾರರಿಗೆ ಇಲ್ಲಿದೆ ಬಂಪರ್ ಸಾಲ ಯೋಜನೆ.

’ಒಂದು ಜಿಲ್ಲೆ- ಒಂದು ಉತ್ಪನ್ನ’ ಎಂಬ ಯೋಜನೆಯನ್ನು ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಜಾರಿಗೊಳಿಸಿದ್ದಾರೆ. ಶೇ 35 ಸಹಾಯಧನ, ಬಡ್ಡಿಯೂ ಕಡಿಮೆ.

‘ತುಮಕೂರು ಜಿಲ್ಲೆಗೆ ಯೋಜನೆಯಡಿಯಲ್ಲಿ ತೆಂಗುಉತ್ಪನ್ನಗಳನ್ನು ಆಯ್ಕೆ ಮಾಡಿಘೋಶಿಸಿದ್ದಾರೆ. ತೆಂಗು, ನಾರು, ಕಾಯಿ,ಎಳನೀರು, ಕೊಬ್ಬರಿ, ಮರ, ಬೇರು, ಗರಿ,ಗರಿಕಡ್ಡಿ, ಚುಪ್ಪು, ಕರುಂಬಳೆ ಹೀಗೆಹಲವಾರು ತೆಂಗಿನ ಸುಮಾರು 150 ಕ್ಕಿಂತಹೆಚ್ಚಿನ ಮೌಲ್ಯವರ್ಧಿತ ಉತ್ಪನ್ನಗಳನ್ನುತಯಾರಿಸ ಬಹುದು’

ಹಾಲಿ ಕೈಗಾರಿಕೆ ಇರುವವರು ಹಾಗೂ ಹೊಸದಾಗಿ ಮಾಡುವ ವ್ಯಕ್ತಿ ಮತ್ತು ಯಾವುದೇ ವಿಧವಾದ ಸಂಘಸಂಸ್ಥೆಗಳು, ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಿಗೆ ಒಂದು ಅರ್ಜಿಯನ್ನು ಕೊಟ್ಟರೆ ಮನೆ ಬಾಗಿಲಿಗೆ ಸರ್ವಿಸ್ ನೀಡಲು ಜಿಲ್ಲಾಡಳಿತ ಸಜ್ಜಾಗಲಿದೆ.

ಮೋದಿಯವರೇ ಜಿಲ್ಲೆಗೆ ಇಬ್ಬರು ಸಲಹಾಗಾರರು, ಅಂದರೆ ಪಾಜೆಕ್ಟ್ ರಿಪೋರ್ಟ್ ಮಾಡುವವರನ್ನು ನೇಮಿಸಲು ಅವಕಾಶ ಕಲ್ಪಿಸಿದ್ದಾರೆ. ಅವರಿಂದಲೇ ಯೋಜನಾವರದಿ ಮಾಡಿಸಬೇಕು. ಅವರ ಆಯ್ಕೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಮಾಡಬೇಕು. ಜೊತೆಗೆ ಒಬ್ಬ ಪರಿಣಿತರನ್ನು ಸಮಿತಿಗೆ ನಾಮನಿರ್ದೇಶನ ಮಾಡಬಹುದು.

ಈ ಮೂವರು ಜನರ ಬಳಿಗೆ ಹೋಗಲು ಸಿದ್ಧರಿರಬೇಕು, ತೆಂಗಿನ ಉತ್ಪನ್ನಗಳ ಎಲ್ಲಾ ಯೋಜನೆಗಳ ಅರಿವು ಇರಬೇಕು. ಜಿಲ್ಲೆಯಲ್ಲಿ ಹಾಲಿ ಇರುವ ತೆಂಗಿನ ಉತ್ಪನ್ನಗಳ ಕೈಗಾರಿಕೆಗಳ ಸಂಪೂರ್ಣ ಮಾಹಿತಿ ಇರಬೇಕು. ತೆಂಗಿಗೆ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಇಲಾಖೆಗಳ ಸಂಪರ್ಕ ಹೊಂದಬೇಕು.

ಜಿಲ್ಲೆಯ 330 ಗ್ರಾಮಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ಪಿಡಿಓ ಮತ್ತು ಚೀಫ್ ಆಫೀಸರ್, ಆಯುಕ್ತರು ಹೀಗೆ ಎಲ್ಲರ ಜೊತೆ ಚರ್ಚಿಸಿ, ನವ ಉದ್ಧಿಮೆದಾರರನ್ನು, ಸ್ಟಾರ್ಟ್ ಆಫ್ ಕನಸುಗಾರರನ್ನು, ಹಾಲಿ ಇರುವ ಕೈಗಾರಿಕೆಗಳ ಉದ್ಧಿಮೆದಾರರನ್ನು ಗುರುತಿಸಿ ತೆಂಗಿನಲ್ಲಿ ಸರ್ವಜ್ಞರಂತಾಗಲು ಸಿದ್ಧರಿರಬೇಕು. ಜಿಐಎಸ್ ಜ್ಞಾನ ಮತ್ತು ಸೋಶಿಯಲ್ ಮೀಡಿಯಾ ಜ್ಞಾನವಿರಬೇಕು.

ಉದ್ದಿಮೆದಾರರ, ರೈತರ, ಇಲಾಖೆಗಳ, ಮತ್ತು ಬ್ಯಾಂಕುಗಳ ಕೊಂಡಿಯಂತೆ ಕೆಲಸ ಮಾಡಲು ಸಿದ್ದರಿರುವವರನ್ನು ಜಿಲ್ಲಾಧಿಕಾರಿಯವರು ನೇಮಿಸಬೇಕು. ಈ ಮೂವರು ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಅವರ ಕಲ್ಪನೆಯ ಪಿಪಿಟಿ ಪ್ರದರ್ಶನ ಮಾಡಬೇಕು. ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಸದಸ್ಯರು ಕೇಳುವ ಮಾಹಿತಿಗಳನ್ನು ನೀಡಲು ಸಿದ್ಧರಿರಬೇಕು.

‘ಸಾಲ ಪಡೆಯುವವರು ತರಬೇತಿಪಡೆಯಲೇಬೇಕು. ರಫ್ತು ಉದ್ದಿಮೆಆರಂಭಿಸುವವರು ವಿವಿದ ದೇಶಗಳ ಭಾಷೆಕಲಿಸುವ ತರಗತಿಗಳಿಗೆ ಹಾಜರಾಗಬೇಕು,ಉದ್ದಿಮೆಗಳನ್ನು ಕಡ್ಡಾಯವಾಗಿ ಸ್ಥಾಪನೆಮಾಡುವವರಿಗೆ ಸಾಲ ಗ್ಯಾರಂಟಿದೊರೆಯಲಿದೆ. ಎಲ್ಲಾ ವಿಧವಾದಉತ್ಪನ್ನಗಳ ತರಬೇತಿಗಳು ಮತ್ತು ವಿವಿಧದೇಶದ ಭಾಷೆ ಕಲಿಸಲು ಈಗಾಗಲೇಸಂಬಂಧಿಸಿದ ಇಲಾಖೆಯ ಅಧಿಕಾರಿಗಳುಸಿದ್ಧತೆ ಮಾಡುತ್ತಿದ್ದಾರೆ’

ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಈ ಯೋಜನೆಯನ್ನು ದೇಶಕ್ಕೆ ಮಾದರಿ ಮಾಡಲು ಚಿಂತನೆ ನಡೆಸಿದ್ದಾರೆ. ಎಂ.ಪಿ.ಸಿ.ಎಸ್ ಮಾದರಿಯಲ್ಲಿ ತೆಂಗಿನ ಉತ್ಪನ್ನಗಳ ಸಹಾಕಾರಿ ಸಂಸ್ಥೆಗಳನ್ನು ಸ್ಥಾಪಿಸಲು ಆಸಕ್ತಿ ಇರುವವರು ಮುಂದೆ ಬನ್ನಿ. ತೆಂಗಿನ ರೈತರ ಬದುಕು ಹಸನು ಮಾಡಿ.

‘ಸಾಲ ಬೇಕೆ ಸಾಲ – ಮೋದಿ ಸಾಲ – ತೆಂಗಿನ ಸಾಲ’ ಕೃಷಿ ಇಲಾಖೆಗೆ ಒಂದು ಅರ್ಜಿಹಾಕಿ ಸಾಕು, ಮುಂದೆ ನೋಡೋಣ. ಈ ಬಗ್ಗೆ ಡಿಜಿಟಲ್ ಆಂದೋಲನ ಆರಂಭವಾಬೇಕು. ಕೆಲವು ಸಂಸ್ಥೆಗಳು ಈ ಬಗ್ಗೆ ಚಿಂತನೆ ಆರಂಭಿಸಿವೆ, ’ಹಾಲಿನ ಕುರಿಯನ್ ಮಾದರಿಯಲ್ಲಿ ತೆಂಗಿನ ಕುರಿಯನ್ ಒಬ್ಬನ ಉದಯ ಆಗಲೇ ಬೇಕು’ ಆಸಕ್ತಿ ಇರುವ ಸಹಕಾರಿ ಧುರೀಣರಿಗೆ ಇದೊಂದು ಸುರ್ವರ್ಣ ಅವಕಾಶ.

ಕಲ್ಪನಾ ವರದಿಯೊಂದಿಗೆ ’ಕೊಕೊನೆಟ್ ಸ್ಪೆಷಲ್ ಎಕನಾಮಿಕ್ ಝೋನ್’ ಸ್ಥಾಪನೆಗೆ ಬೇಸ್ ಸಿದ್ಧವಾಗುತ್ತಿದೆ. ಹಳೆಯ ಕಡತಕ್ಕೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತೆ ಚಾಲನೆ ನೀಡಿದೆ. ಪರಿಣಿತರೇ ನೀವೂ ಕೈಜೋಡಿಸಿ.

‘ಸಿಪಿಓಗಳು ಮತ್ತು ಎಫ್‌ಫಿಓಗಳು ಸ್ವಲ್ಪಹೊರಗೆ ಬನ್ನಿ, ರಾಜಕೀಯ ಬಿಡಿ, ಮುನ್ನುಗ್ಗಿಟೀಕೆ ಮಾಡುವವರು, ತೊಂದರೆಕೊಡುವವರು, ಇರುವುದು ಸಹಜ,ಅದಕ್ಕೆಲ್ಲಾ ಎದೆಗುಂದದೆ ಮುಂದೆ ಬನ್ನಿ.ಇಲ್ಲವೇ ಸಂಸ್ಥೆಗಳನ್ನು ಮುಚ್ಚಿ ಬಿಡಿ,ಮೌನವಾಗಿ ಇರಬೇಡಿ ದಯವಿಟ್ಟುಕಳಕಳಿಯ ಮನವಿ. ನೀವುಗಳ ಯೋಜನೆಗೆ ಬೇಸ್ ಆಗಲೇ ಬೇಕು.


ಕೃಪೆ: ಇ ಪೇಪರ್ ಶಕ್ತಿಪೀಠ.ಇನ್. ಕುಂದರನಹಳ್ಳಿ ರಮೇಶ್
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?