Monday, April 15, 2024
Google search engine
HomeYour Childಹಳ್ಳಿ ಮಕ್ಕಳಿಗಿಂತ, ಪ್ಯಾಟಿ ಮಕ್ಕಳೇ ಭಿನ್ನ ಏಕೆ?

ಹಳ್ಳಿ ಮಕ್ಕಳಿಗಿಂತ, ಪ್ಯಾಟಿ ಮಕ್ಕಳೇ ಭಿನ್ನ ಏಕೆ?

ಶಿಲ್ಪ ಟಿ.ಎಂ


ಹಳ್ಳಿಯಲ್ಲಿ ಬೆಳೆದ ಮಕ್ಕಳಿಗೂ ನಗರದಲ್ಲಿ ಬೆಳೆದವರಿಗೂ ಕೆಲವೊಂದು ವ್ಯತ್ಯಾಸ ಗಳನ್ನು ನಾನು ಗಮನಿಸಿದ್ದೇನೆ.

ಹಳ್ಳಿಯ ಮಕ್ಕಳು ಹೆಚ್ಚು ಕಲಿತಿರುತ್ತಾರೆ. ಧ್ದೈಯ೯ ವಾಗಿರುತ್ತಾರೆ ಮತ್ತು ಆತ್ಮೀಯವಾಗಿರುತ್ತಾರೆ. ಸಹಿಸಿಕೊಳ್ಳುವ ವ್ಯಕ್ತಿತ್ವ ಹೊಂದಿರುತ್ತಾರೆ. ಅವರಿಗಿಂತ ಚಿಕ್ಕ ಮಕ್ಕಳನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ .

ನಗರದ ಮಕ್ಕಳು ಹೆಚ್ಚು ಕೂತೂಹಲದಲ್ಲೆ ಇರುತ್ತಾರೆ. ಹಳ್ಳಿಗಳ ಮಕ್ಕಳ ಜೊತೆ ಬೆರೆತು ಕಲಿಯುತ್ತಾರೆ. ಆದರೆ ಅವರಲ್ಲಿ ಸ್ಪಧಾ೯ತ್ಮಕ ಗುಣ ಹೆಚ್ಚು ಇರುತ್ತದೆ.

ಆದರೆ ನನಗೆ ಅನಿಸುವುದು ಅವರಿಗೆ ಹಳ್ಳಿಯ ಮಕ್ಕಳಿಗಿಂತ ಆತ್ಮೀಯತೆ ಕಮ್ಮಿ ಇರುತ್ತದೆ .ಅವರಿಗಿಂತ ಚಿಕ್ಕ ಮಕ್ಕಳನ್ನು ಸ್ಪಧೆ೯ಯ ಭಾಗವಾಗಿಯೆ ನೊಡುತ್ತಾರೆ.

ಇದನ್ನು ತಪ್ಪು ಎನ್ನಲು ಆಗುವುದಿಲ್ಲ. ಸ್ಪಧೆ೯ಯ ಮೇಲೆ ನಿಂತಿರುವ ಈ ವಾತಾವರಣದ ಭಾಗವಾಗಿಯೆ ಅವರು ಬೆಳೆಯುತ್ತಿದ್ದಾರೆ.

ಈ ಕೊವಿಡ್ ವ್ಯೆರಸ್ ನ ಕಾರಣದಿಂದಾಗಿ ಹಳ್ಳಿ ಮಕ್ಕಳು ನಗರದವರು ಒಟ್ಟಾಗಿ ಆಡುವ ಮತ್ತು ಕಲಿಯುವ ಸಂಧಭ೯ ಗಳಲ್ಲಿ ಶೇಕಡ ವಾರು ನಗರದ ಮಕ್ಕಳಲ್ಲಿ ಗಮನಿಸಿದ ಹಾಗೆ ಸ್ಪಧೆ೯ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ .ಈ ಸ್ಪಧಾ೯ತ್ಮಕ ಮನೊಭಾವ ಇವರಲ್ಲಿ ಆತ್ಮೀಯತೆಯನ್ನು ಕಸಿದುಕೊಂಡಿರಬಹುದೆ?! .

ಹಳ್ಳಿ ಮಕ್ಕಳು ಹೆಚ್ಚು ಕಲಿಸುತ್ತಿದ್ದಾರೆ ಮತ್ತು ರಾಜಿ ಯಾಗುತ್ತಿದ್ದಾರೆ. ಆತ್ಮೀಯವಾಗಿ ಅವರೊಟ್ಟಿಗೆ ಕೆಲವೊಂದನ್ನು ಹಳ್ಳಿಯ ಮಕ್ಕಳು ಕಲಿಯುತ್ತಿದ್ದಾರೆ.

ನನ್ನ ಚಿಕ್ಕಪ್ಪನ ಮಗಳು ನಿಹಾರಿಕ ನನ್ನ ಮಗನಿಗಿಂತ ೩ ವರ್ಷ ದೊಡ್ಧವಳಿರಬಹುದು. ಆದರೆ ಅವಳು ಅವನನ್ನು ನಿಭಾಯಿಸುವುದು ಮತ್ತು ಅವನನ್ನು ಪೋಷಿಸುವುದು ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ.!

ನನ್ನ ಅಣ್ಣನ ಮಗಳು ನಿಹಾರಿಕಾಗಿಂತ ದೊಡ್ಧವಳು. ಅವಳು ನಗರದಲ್ಲಿ ಬೆಳೆದಿರುವುದು. ಅವಳು ಹೆಚ್ಚು ಸ್ಪಧಾ೯ತ್ಮಕವಾಗಿರುತ್ತಾಳೆ. ಯಾವುದಕ್ಕೂ ರಾಜಿಯಾಗದೆ…… ನಿಹಾರಿಕ ಚಿಕ್ಕ ವರೊಟ್ಟಿಗೆ ಮತ್ತು ದೊಡ್ಡವರೊಟ್ಟಿಗೆ ಹೇಗಿರಬೇಕೆಂಬುದನ್ನು ಅರಿತಿದ್ದಾಳೆ. ರಾಜಿಯಾಗುವುದು ಮತ್ತು ಬಿಟ್ಟುಕೊಡುವುದು ಸಂಬಂಧಗಳನ್ನು ಹೆಚ್ಚು ಬಲಿಷ್ಠವಾಗಿಸಬಹುದೆಂದು ಅವಳಿಗೆ ಈಗಲೇ ತಿಳದಿರಬಹುದೇನೂ ……… ಮತ್ತು ಅವಳು ಹಳ್ಳಿಯಲ್ಲಿ ಜನರೊಟ್ಟಿಗೆ ಬೆರೆತಿರುವುದು ಇದಕ್ಕೆ ಕಾರಣವಾಗಿರಲೂಬಹುದು .

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?