Friday, March 29, 2024
Google search engine
Homeಜಸ್ಟ್ ನ್ಯೂಸ್ಹಾವು ಹಿಡಿಯುವ ಡ್ಯಾನಿಗೆ ಹಾವು ಕಚ್ಚಿ‌ ಸಾವು

ಹಾವು ಹಿಡಿಯುವ ಡ್ಯಾನಿಗೆ ಹಾವು ಕಚ್ಚಿ‌ ಸಾವು

ಬಾಗಲಕೋಟ: ನಗರ ಸೇರಿದಂತೆ ವಿವಿಧ ಕಡೆ ಹಾವು ಹಿಡಿದು ಅರಣ್ಯಕ್ಕೆ ಬಿಡುತ್ತಿದ್ದ ಹಾಗೂ ಮನೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸಂಘ ಸಂಸ್ಥೆಗಳ‌ಕಚೇರಿಗಳಲ್ಲಿ ಹಾವು ಇದ್ದರೆ ಪೋನ್ ಕರೆ ಮಾಡಿದರೆ ಸಾಕು ತಕ್ಷಣ ಬಂದು ಹಾವು ಹಿಡಿದುಕೊಂಡು ಹೋಗುತ್ತಿದ್ದ ನಗರದ ಉರಗ ತಜ್ಞ ರೆಂದೆ ಖ್ಯಾತಿಯಾಗಿದ್ದ ಡ್ಯಾನಿಯಲ್ ನ್ಯೂಟನ್ ಇಂದು ಹಾವು ಕಡಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಡ್ಯಾನಿಯಲ್‌ ಕಳೆದ‌ ಹತ್ತಾರು ವರ್ಷಗಳಿಂದ‌ ಯಾವುದೇ ಫಲಾಪೇಕ್ಷವಿಲ್ಲದೇ ಸಮಾಜಸೇವೆ ಎಂದು ಯಾರಾದರೂ ಕರೆ‌ಮಾಡಿದರೆ ತಕ್ಷಣ ಸ್ಥಳಕ್ಕೆ ಹೋಗಿ ಹಾವು ಹಿಡಿಯುವ ಡ್ಯಾನಿಯಲ್ ಕೊನೆಗೆ ಹಾವು ಹಿಡಿಯಲು ಹೋಗಿ ಹಾವು ಕಚ್ಚಿಸಿಕೊಂಡು ಸಾವನ್ನಪ್ಪಿದರು.

ಇತ್ತೀಚಿಗೆ ಹಾವು ಕಚ್ಚಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಂಡಿದ್ದರು .ಇದಲ್ಲದೇ ಕಳೆದ ಎರಡು ತಿಂಗಳ ಹಿಂದೆ ಮದುವೆ ಕೂಡ ಆಗಿದ್ದರು.ಈಗ ಅವರ ಸಾವಿನ ಸುದ್ದಿಕೇಳಿ ನಗರ ಹಾಗೂ ಸುತ್ತಮುತ್ತಲಿನ ಜನ ದುಃಖ ವ್ಯಕ್ತಪಡಿಸಿದ್ದಾರೆ.

ಹಾವು ಕಡಿದ ಸುದ್ದಿ ಮನೆಯವರಿಗೆ ತಲುಪುತ್ತಿದ್ದಂತೆ‌ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಡ್ಯಾನಿಯಲ್ ನ್ಯೂಟನ್ ದೇಹದಾನ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?