ಜಸ್ಟ್ ನ್ಯೂಸ್

ಆಹಾರ, ಔಷಧಿ ಕಿಟ್ ವಿತರಣೆ

ಪಾವಗಡ: ತಾಲ್ಲೂಕಿನ ಬೈರಾಪುರ, ಅರಳಿಕುಂಟೆಯ 180 ಬಡ ಕುಟುಂಬಗಳಿಗೆ ಹೆಲ್ಪ್ ಸೊಸೈಟಿ ಹಾಗೂ ಸನ್ ರೈಸ್ ಆಸ್ಪತ್ರೆ ವತಿಯಿಂದ ದಿನಸಿ ಹಾಗೂ ಔಷಧಿ ಕಿಟ್ ವಿತರಿಸಲಾಯಿತು.

ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಮಾತನಾಡಿ, 180 ಕುಟುಂಬಗಳಿಗೆ ಆಹಾರ ಹಾಗೂ ಔಷಧಿ ಕಿಟ್ ವಿತರಿಸಲಾಗುತ್ತಿದೆ. ಮುಂದೆ ಹೆಚ್ಚಿನ ಬಡ ಜನತೆಗೆ ಇಂತಹ ತುರ್ತು ಸ್ಥಿತಿಯಲ್ಲಿ ಬೇಕಿರುವ ಸಾಮಾಗ್ರಿಗಳನ್ನು ವಿತರಿಸುವ ಚಿಂತನೆ ಸಂಸ್ಥೆ ಮುಂದೆ ಇದೆ. ಆರಂಭದಲ್ಲಿ ಮಾಸ್ಕ್ ಮಾತ್ರ ವಿತರಿಸಲಾಗುತ್ತಿತ್ತು. ಗ್ರಾಮೀಣ ಭಾಗದ ಜನತೆಗೆ ಅನುಕೂಲ ಮಾಡುವ ದೃಷ್ಟಿಯಿಂದ ಮಾಸ್ಕ್, ಸಾಬೂನು ಜೊತೆಗೆ ಪಡಿತರವನ್ನೂ ಹಂಚಲಾಗುತ್ತಿದೆ ಎಂದು ತಿಳಿಸಿದರು.

ಸನ್ ರೈಸ್ ಆಸ್ಪತ್ರೆಯೆ ವೈದ್ಯ ಡಾ ಶ್ರೀಕಾಂತ್ ಮಾತನಾಡಿ, ಜನತೆ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಸಾಬೂನು, ಸ್ಯಾನಿಟೈಸರ್ ನಿಂದ ಕೈತೊಳೆಯಬೇಕು. ಜ್ವರ, ನೆಗಡಿ ಕೆಮ್ಮಿನ ಲಕ್ಷಣ ಕಂಡು ಬಂದ ಕೂಡಲೇ ಆಸ್ಪತ್ರೆಗೆ ಆಗಮಿಸಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮುಖಂಡ ವೆಂಕಟಸುಬ್ಬಯ್ಯ, ವೆಂಕಟೇಶ್, ಗೌತಮ್, ತಿರುಮಲೇಶ್ ನಾಯ್ಡು, ನಾಗಾರ್ಜುನ, ಕಾರ್ತಿಕ್, ಹರೀಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Comment here