Saturday, April 20, 2024
Google search engine
Homeಸಾಹಿತ್ಯ ಸಂವಾದಕವನಸಾಗರ ದಿನದ ನೆನಪಿನಲ್ಲಿ

ಸಾಗರ ದಿನದ ನೆನಪಿನಲ್ಲಿ

ಡಾ. ರಜನಿ ಎಂ

ಸಮುದ್ರ / ಸಾಗರ ದಿನ ಸಾಗರ ದಿನವನ್ನು ಜೂನ್ 8 ಆಚರಿಸುತ್ತಾರೆ. ಜಲ ಸಂಪತ್ತು , ಜಲ ಮಾಲಿನ್ಯ ತಡೆಯುವಿಕೆ ಇತ್ಯಾದಿ ಇದರ ಉದ್ದೇಶ. ಆದಾಗ್ಯೂ, ಕವಿ ಮನಸ್ಸಿನವರಿಗೆ ಸಾಗರ ಬೇರೆಯದೇ ಭಾವ .

ಸಾಗರ


ನೀನು ಸಾಗರದಂತೆ..
ನನ್ನೆಡೆಗೆ
ಒಮ್ಮೆ ಚಿಪ್ಪು
ಇನ್ನೊಮ್ಮೆ ಮುತ್ತು.
ಶಂಖು … ಕಸ .. ಏನನ್ನು
ಎಸೆಯುವೆ ಎಂದು
ಎಸೆದಾಗಲೇ
ಗೊತ್ತಾಗುವುದು.

ನೀನು ಕೈ ಬೀಸಿ
ಕರೆದದ್ದಕ್ಕೆ…
ತಾನೇ
ನಾನು
ಬಂದದ್ದು.

ನಿನ್ನೊಂದಿಗೆ
ನನ್ನ ಕನಸುಗಳು…
ಸಮುದ್ರ ದಂಡೆಯ
ಮರಳ ಮೇಲೆ ಕಟ್ಟಿದ
ಮನೆಯಂತೆ.

ಸಮುದ್ರ


ನಿನ್ನಂತೆ …..
ಮತ್ತೆ ಮತ್ತೆ
ಕರೆಯುತ್ತದೆ
ನನ್ನನ್ನು .

ಬಗೆದಷ್ಟು
ಆಳ …
ನಿಲುಕದ್ದು…
ನಿನ್ನಂತೆ.

ಥೇಟ್ ನಿನ್ನಂತೆ
ಕಟ್ಟಾಕಲು
ಸಾಧ್ಯವಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?