Thursday, March 28, 2024
Google search engine
Homeಕವನಭಾನುವಾರದ ಕವಿತೆಭಾನುವಾರದ ಕವನ : ಕಣ್ಣೀರು

ಭಾನುವಾರದ ಕವನ : ಕಣ್ಣೀರು

ಡಾ. ರಜನಿ

ಕಣ್ಣೀರು


ಹುಡುಕಿದ
ಕೆಣಕಿದ…
ಆಹ್ವಾನ ನೀಡಿದ
ಕಣ್ಗಳಲ್ಲಿ …
ನೀರು ಹರಿಸಲು ನಿನಗೆ
ಮನಸ್ಸಾದರೂ ಹೇಗೆ ಬಂತು?

ಸುರಿಸಬೇಡ
ಎಂದು ಮೊರೆ
ಇಡುತ್ತಿದೆ ಕಣ್ಣೀರ ಬಿಂದು…
ರೆಪ್ಪೆಗಳ ಒಡ್ಡು ಹಾಕಿರುವೆ..
ಸುರಿಸಿದರೆ ಗೊತ್ತು….
ಜನ ಸುರಿಸುವುದನ್ನೆ ಕಾಯುತ್ತಿದ್ದಾರೆ ಎಂದು.

ನನ್ನ ರಗ್ಗೊಳಗೆ ಸುರಿಸಿದ
ಕಣ್ಣೀರು
ಪ್ರವಾಹವನ್ನೆ
ಸೃಷ್ಟಿಸಬಹುದಿತ್ತು.

ನೀನು ಅರ್ಥ
ಮಾಡಿಕೂಳ್ಳದ
ಭಾವನೆಗಳೇ
ನನ್ನ ಕಣ್ಣೀರು
ಎಂಬುದು ನಿನಗೆ
ಗೊತ್ತಾ?

ತುಳುಕಲಿ ಬಿಡು


ತುಂಬದೆ ತುಳುಕದು
ತುಂಬಿಕೊಂಡದ್ದಾದರೂ
ಏತಕ್ಕೆ?

ಕರೆದ ಕಣ್ಣುಗಳನ್ನೇ
ಕೊಳ ಮಾಡಿದವನ
ನೆನೆದು ?

ಹೃದಯದ ಭಾಷೆ
ಅರಿತವನಿಗೆ
ಕಣ್ಣು ಕೆರೆಯಾದದ್ದು ಕಾಣದೆ ?

ರೆಪ್ಪೆ
ಮುತ್ತಿಕ್ಕಿದವನಿಗೆ
ಕಣ್ಣೀರು ಕುಡಿಯಲಾಗದೆ ?

ಕಣ್ಣು
ಮೋಸ ಹೋಯಿತೆ?
ಹೃದಯ ಕಣ್ಣಿಗೆ
ಸನ್ನೆ ನೀಡಲಿಲ್ಲವೆ?

ತುಳುಕಿದರೆ
ತುಳಿಯುವರೆ?

ಅಲ್ಲೇ ಹಿಂಗಿಸಿ
ಸುಳ್ಳು ನಗು
ನಗುವೆಯಾ?

ಹೀರಿ
ಹಿಂಗಿದರೂ …
ಕೆಂಪಾಗಿ ಕಾಣದೆ ?

ಕೆನ್ನೆ ಕೆಂಪಾಗಿ
ಕಣ್ಣು ಅರಳಿದ್ದಕ್ಕೆ
ಈ ಶಿಕ್ಷೆಯೆ?

ನುಂಗು ನುಂಗು …
ಕಣ್ಣೀರ ಕೊಳಕ್ಕೂ
ಧುಮಕಿ ನಗಿಸುವ

ಚೋರ ಅವನು …

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?