Tuesday, March 19, 2024
Google search engine
Homeಜಸ್ಟ್ ನ್ಯೂಸ್ಇವರ ಮಾನವ ಸೇವೆಗೆ ಶರಣೆಂದ ಹಿಂದೂ ಸಮಾಜ

ಇವರ ಮಾನವ ಸೇವೆಗೆ ಶರಣೆಂದ ಹಿಂದೂ ಸಮಾಜ

ಉಜ್ಜಜ್ಜಿ ರಾಜಣ್ಣ

ಬೆನ್ನಿಗೆ ಬೋರ್ಡ, ಬ್ಯಾನರ್ ಕಟ್ಟಿಕೊಳ್ಳದೆ ಕೊರೊನದಿಂದ ಮಡಿದ ಜನರ ಅಂತಿಮ ಸಂಸ್ಕಾರ ನೆಡೆಸಿಕೊಡುತ್ತಿದ್ದಾರೆ ಅಲ್ಪ ಸಂಖ್ಯಾತ ಧರ್ಮದ, ಸಮುದಾಯ ಬಂದುಗಳು. ಇವರದು ಕೇವಲ ಅಳಿಲು ಸೇವೆ ಅಷ್ಟೇ ಅಲ್ಲ; ನಿಜವಾದ ” ಮಾನವ ಸೇವೆ ” ಎಂದು ಭಾರತೀಯ ಸಮಾಜ, ಎಲ್ಲೆಲ್ಲೂ ಕೈ ಎತ್ತಿ ಗೌರವಿಸತೊಡಗಿದೆ.

ಜೆ ಸಿ ಬಿ ಯಿಂದ ಅಮಾನವೀಯವಾಗಿ ತಳ್ಳಲ್ಪಡುತ್ತಿದ್ದ ಕೊರೊನದಿಂದ ಮೃತರಾದ ಭಾರತೀಯರ ಹೆಣಗಳನ್ನು ಕಂಡ ದೇಶ ನಿವಾಸಿ ಅಲ್ಪ ಸಂಖ್ಯಾತ ಧರ್ಮೀಯರಾದ ಈ ಪ್ರಬುದ್ಧ ಭಾರತೀಯರು, ಅಂತಿಮವಾಗಿ ಮೃತ ಭಾರತೀಯರ ಶವಸಂಸ್ಕಾರಕ್ಕೆ ಮುಂದಾಗಿದ್ದನ್ನು ಮಾನವಂತರು ಮಾತ್ರ ಮರೆಯದಂತಹ ವಿಷಯ. ” ಸೌಹಾರ್ದ ಭಾರತದ ನಿರ್ಮಾಣ ” ಕಾರ್ಯದಲ್ಲಿ ಸಹಭಾಗಿತ್ವ ಹೊಂದಿದವರಾಗಿ ಕಾಣತೊಡಗಿದ್ದಾರೆ ಈ ಮಾನವ ಪ್ರೇಮಿಗಳು ನಾಡಿನಾದ್ಯಂತ.

ಮಾನವ ಧರ್ಮವನ್ನು ಎತ್ತಿ ಹಿಡಿಯುವ ‘ಸಂತ’ ಕೆಲಸಕ್ಕೆ ಮುಂತಾದ ಇವರ ಆರೋಗ್ಯ ಯೋಗಕ್ಷೇಮವೂ ಬಹಳ ಮುಖ್ಯ. ಸಾವು ಬಂದು ಹೆಗಲು ಮೇಲೆ ಕುಳಿತಿದ್ದರೂ ದೋಚುವ ಕೆಲಸದಲ್ಲಿ ಮನಮಗ್ನರಾದವರ ಸುದ್ದಿಗಳನ್ನು ಜಾಲತಾಣಗಳು ಮತ್ತು ಸುದ್ದಿ ಮಾಧ್ಯಮಗಳಲ್ಲಿ ಕೇಳುತ್ತಿದ್ದೇವೆ, ಓದುತ್ತಿದ್ದೇವೆ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ನೋಡುತ್ತಿದ್ದೇವೆ.

ಇದು ಇಂದಿನ ಭಾರತೀಯರ ದಯಾನೀಯ ಸ್ಥಿತಿಯನ್ನು ತೋರುಗಾಣಿಸುತ್ತಿದೆ. ಸಾವೇ ಬೆನ್ನಿಗೆ ಬಿದ್ದರೂ ಬೆಚ್ಚದೆ ಸಾವನ್ನೇ ಬೆನ್ನಟ್ಟಿ ಬಹುದೂರ ಬಂದವರಂತೆ ಸ್ವಂತ ವಾಹನಗಳನ್ನು ಬಳಸಿ ಸ್ವ ಇಚ್ಛೆ, ಸ್ವಪರಿಶ್ರಮದಿಂದ ಸ್ವಂತ ವೆಚ್ಚದಲ್ಲೇ ಕೊರೊನದಿಂದ ಮೃತರಾದವರ ದೇಹಗಳನ್ನು ಅವರವರ ಧಾರ್ಮಿಕ ಅನುಸರಣೆಗಳ ಮೂಲಕ ಸಂಸ್ಕಾರ ಕಾರ್ಯಗಳನ್ನು ನಿರ್ವಹಿಸುತ್ತಿರುವ ಮುಸ್ಲಿಂ ಧರ್ಮೀಯರ ಕಾರ್ಯ ಅಭಿನಂದನಾರ್ಹ ಹಾಗು ಮಾನವತೆಯ ಮಹತ್ಕಾರ್ಯವಾಗಿ ನಾಡಿನಾದ್ಯಂತ ಮೆಚ್ಚುಗೆಗೆ ಕಾಣತೊಡಗಿದೆ.

ಇದನ್ನು ಅಳಿಲು ಸೇವೆ ಎಂಬುದಕ್ಕಿಂತ ಇವರು ಕೈಗೊಂಡಿರುವುದು ನಿಜವಾದ ಮಾನವ ಸೇವೆ. ಮಂದ ಬುದ್ದಿ, ಮತೀಯತೆ, ಅಂದ ಭಕ್ತಿಗಿಂತಲೂ ಅದಮ್ಯ ಮಾನವೀಯ ನಿಲುವುಳ್ಳವರಾಗಿ ದಿನವಹಿ ಶ್ರಮಿಸುತ್ತಿರುವ ಈ ಭಾರತೀಯರ ಕೈಂಕರ್ಯ ಮರೆಯಲಾಗದ ಮಹತ್ಕಾರ್ಯ. 

ಪರಸ್ಥಳಗಳಲ್ಲಿ  ಪ್ರಾಣ ಬಿಟ್ಟವರ ಪರಿಸ್ಥಿತಿಯನ್ನು ಅರಿತು, ಅವರ ಕಳೇಬರಗಳನ್ನು ಅವರವರ ಊರು ಉದ್ಮಾನಗಳಿಗೆ ತಲುಪಿಸುತ್ತಿರುವರು. ಗೋಳೋ ಎನ್ನಬೇಕಾದವರೂ ಸಹ ಹತ್ತಿರ ಸುಳಿಯದಂತಹ ಸಂದರ್ಭದಲ್ಲಿ, ಕೊರೊನ ತಂದ ಸಾವಿನಿಂದ ಮುರಿದು ಬಿದ್ದ ಭಾರತೀಯರ ಶಿರ ಹೊನ್ನ ಕಲಶವನ್ನು ಹತ್ತರದಲ್ಲೇ ನಿಂತು ಆತುಕೊಂಡು, ಬಾಚಿ ತಂಬಿ ಹೊತ್ತು ತಂದು,  ಬಂದುಮಿತ್ರರ ಅನುಪಸ್ಥಿತಿಯಲ್ಲಿಯೂ ಮೃತರಿಗೆ ಅಂತಿಮ ಸಂಸ್ಕಾರ ನೆರವೇರಿಸಲು ಮುಂದಾದವರು ಈ ಮಾನವ ಬಂಧುಗಳು. 

ಹಳ್ಳಿಗಳಲ್ಲಿ ನಗರಗಳಂತೆ ಪ್ರತ್ಯೇಕವಾದ ಶವಾಗಾರಗಳಿಲ್ಲ. ಸತ್ತವರ ಹೊಲ ಮನೆಗಳನ್ನು ಹುಡುಕುವುದೂ ಕಷ್ಟ. ಮೃತರ ಸಂಬಂದಿಗಳೂ ದೂರ ದೂರ. ಸತ್ತ ಸುದ್ದಿ  ಬಂದರೆ ಕೂಗಳತೆಗಾಗಲಿ ಕಣ್ಪಾಡಿಗಾಗಲಿ ಕಡೇಪಕ್ಷ ಸಂಪರ್ಕಕ್ಕಾಗಲಿ ಸಿಗದಂತಾಗುತ್ತಿದ್ದಾರೆ ಮೃತರ ಸಂಬಂಧಿಗಳು, ಕಾರಣ ಕೊರೊನ ಭಯ ಭೀತಿ ಅವರ ತಲೆ ತುಂಬಿಕೊಂಡಿದೆ.

ತಲೆಯ ಮೇಲೊಂದು ಕುಂಬ ಬಳಗದ ನೀರನ್ನೂ ಕಾಣದ ಹಾಗೆ, ಕಡೆಯ ಪಕ್ಷ ಹೆಣಿಂಡೆಖೂಳಿಗೂ ಗತಿ ಇಲ್ಲದವರ ಹಾಗೆ ಮೃತರು ಮಣ್ಣಾಗುತ್ತಿರುವರು. ‘ ತಲೆಗೊಳ್ಳಿ’  ತಿವಿಯುವವರಿಲ್ಲ; ‘ಸಿಡಿಗೆಸೂಡಿ ‘ ತೋರುವವರೂ ಹತ್ತಿರ ಬರದಂತಾಗಿರುವುದು. ಹೆಗಲಿಳಿವಿಕೊಂಡು ಮೃತರ ಮನೆಯ ‘ ದೀಗೆ ‘ ಪದರ್ಶನ ಮಾಡಲೂ ಬಳಗ ಸೇರದಂತಾಗಿರುವುದು. ಮೂರು ದಿನದ ಲೇಸಿಗೆ ಬಂದವರ ಸಾವಿನ ಕೇಡು ಮಾತನಾಡಿಸಲೂ ಊರಿನ ಜನರು ಸಮೀಪ ಸಳಿಯದಂತೆ ಮಾಡಿದೆ ಕರೋನ. 

ಕೊರೊನ, ಬಂದು ಬದುಕಿರುವಾಗಲೇ ರೋಗಿಗಳನ್ನು ಹತ್ತಿರದಿಂದ ಹಾರೈಕೆ ಮಾಡಲಾಗುತ್ತಿಲ್ಲ. ಹೊಲ್ದ ಮನೆ, ತೋಟದ ಮನೆ, ಪಂಸೆಟ್ ಮನೆಗಳೆಂದು ಪ್ರತ್ಯೇಕಗೊಳಿಸಲಾಗುತ್ತಿದೆ ಎನ್ನುವ ಕಳವಳ ಕಾರಿ ಸಂಗತಿಗಳು ಕೇಳಿಬರುತ್ತಿವೆ. ಕೊರೊನ ಬಂದರೂ ಬದುಕಿ ಉಳಿಯುವ ಎಲ್ಲಾ ಸಾಧ್ಯತೆಗಳಿವೆ ಎಂದು ವೈದ್ಯಕೀಯ ಲೋಕವೇ ಧೈರ್ಯ ತುಂಬುತ್ತಿದ್ದರೂ ಜನರು ಭೀತಿಯಿಂದ ಎನೆಲ್ಲಾ ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದು ಕಾಣತೊಡಗಿದೆ.

ಸಂಸ್ಕಾರ ಕಾರ್ಯಗಳನ್ನು ನೆರವೇರಿಸಲು ಮುಂದಾದವರು  ಶವಗಳನ್ನು ಹೂಳುವ ಜಾಗಗಳನ್ನು ಹುಡುಕಾಟ ಮಾಡುವುದರಿಂದ ಹಿಡಿದು ಸುಡುವ ಸೌದೆಯನ್ನೂ ಹುಡುಕಿ ತಂದು ಶವಸಂಸ್ಕಾರ ನಡೆಸುತ್ತಿದ್ದಾರೆ, ನಡೆಸುವಂತಾಗಿದೆ.

ಮಣ್ಣಿಗೆ ಬರಬೇಕಾದವರು ಮನೆಯಲ್ಲಿಯೇ ಅತ್ತುಕರೆದು ಸುಮ್ಮನಾಗುತ್ತಿರುವರು. ದೂರದಲ್ಲಿ ನಿಂತು ಸತ್ತವರ ಮುಖ ದರ್ಶನವನ್ನೂ ಮಾಡದೆ ವಾರಸುದಾರರೇ ಹಿಂದೆ ಸರಿದು ನಿಲ್ಲುತ್ತಿರುವಾಗ ಈ ಆಪ್ತಮಿತ್ರರು ಆಪತ್ಬಾಧವರಂತೆ ಬಂದು ಕೊರೊನದಿಂದ ಮಡಿದವರನ್ನು ಮಣ್ಣಿನ ಮಡಿಲಿಗೆ ಸೇರಿಸಲು ಮುಂದಾಗಿದ್ದಾರೆ, ಹರಸಾಹಸ ಪಾಡು ಪಡುತ್ತಿದ್ದಾರೆ. ಮೃತರ ಶರೀರಗಳನ್ನು ಪಂಚ ಭೂತಗಳಲ್ಲಿ ವಿಲೀನಗೊಳಿಸಲು ನಗರ ಮತ್ತು ಗ್ರಾಮೀಣ ಭಾರತದಲ್ಲಿ ಶ್ರಮಿಸುತ್ತಿದ್ದಾರೆ.

ಕೊರೊನಕ್ಕೆ ಬಲಿಯಾದ ಭಾರತೀಯರನ್ನು ಬೇವರ್ಸಿ ಹೆಣಗಳಾಗಲು ಬಿಡದೆ ಧಾರ್ಮಿಕ ವಿಧಿ ವಿಧಾನಗಳನ್ನು ಬಳಸಿಕೊಂಡು ಸತ್ತವರಿಗೆ ಅಂತಿಮ ಸಂಸ್ಕಾರ ನೆರವೇರಿಸಲು ಸಾಕಷ್ಟು ಪ್ರಮಾಣದಲ್ಲಿ ಭಾರತೀಯ ಮುಸ್ಲಿಮರು ಗೌರವ ಮತ್ತು ಮಾನವ ಘನತೆಯನ್ನು ಎತ್ತಿ ಹಿಡಿಯುವ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರವುದು ಗ್ರಾಮ ಭಾರತದಲ್ಲಿ ಎದ್ದುಕಾಣುವ ರೀತಿಯಲ್ಲಿ ಗೋಚರಿಸುತ್ತಿದೆ.

ಇಂತಹ ಅಗ್ರ ಕಾರ್ಯದಲ್ಲಿ ತೊಡಗಿರುವ ಅಗ್ರಜರನ್ನು ಅಗ್ರಸ್ಥಾನದಲ್ಲಿ ಗ್ರಾಮೀಣ ಭಾರತವೂ ಗೌರವಗಳೊಂದಿಗೆ ಎಲ್ಲೆಲ್ಲೂ ಕಾಣುವ ಮೂಲಕ ಅಭಿನಂದನೆಗಳನ್ನು ಸಮರ್ಪಿಸುತ್ತಿದೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?