Friday, April 19, 2024
Google search engine
Homeಕವನಭಾನುವಾರದ ಕವಿತೆಭಾನುವಾರದ ಕವಿತೆ :ಬಿಸಿಲು

ಭಾನುವಾರದ ಕವಿತೆ :ಬಿಸಿಲು

ಮಳೆಯಲ್ಲಿ ನೊಂದವರು ಬೆಂದವರು ಒಂದಡೆ. ಮತ್ತೊಂದೆಡೆ ಬೆಚ್ಚನೆ ಮನೆ ಒಬ್ಬರಿಗೆ, ಒಬ್ಬರಿಗೆ ಖುಷಿ ಒಬ್ಬರಿಗೆ ನೋವು, ನೆನೆಯದೆ ಒದ್ದೆಯಾಗಲಾರವು. ದೈವ ನಿಯಾಮಕ ಎಂಬ ಅರ್ಥದಲ್ಲಿ ಜಡಿ ಮಳೆಯ ನಂತರದ ಬಿಸಿಲು ಈ ಕವನದ ವಸ್ತುವನ್ನಾಗಿಸಿಕೊಂಡಿದ್ದಾರೆ ಕವಯತ್ರಿ ಡಾ. ರಜನಿ.


ಮುನಿಸಿನ ನಂತರದ
ನಿನ್ನ ನಗು ….
ಜಡಿ ಹಿಡಿದ ಮಳೆ
ನಂತರದ ಎಳೆ ಬಿಸಿಲು.

ಸ್ಟೆಟರ್, ಕೊಡೆ
ಆಗಿ ಬರುವುದಿಲ್ಲ…
ಬಯಲು ಸೀಮೆಯ ನಮಗೆ.

ನೀರು ಮುಟ್ಟಲು ಕೊರೆತ
ಕೈಗಳು ತಣ್ಣಗೆ….
ಮಜ್ಜಿಗೆ ಒಗ್ಗದು.

ಬಟ್ಟೆ ಒಣಗಲ್ಲ
ಮುಗ್ಗಲು…
ಕಾಲಿಡೆ ಕೆಸರು.

ಅಜ್ಜಿಗೆ ಕುಡಿಯಲು
ಬಿಸಿ ನೀರು….
ಸಂಜಿಗೆ ಬಿಸಿ
ಉದಕ.

ರೆಕ್ಕೆ ಬಿಚ್ಚಿ ಹಾರಿದ
ಚಿಟ್ಟೆ …
ಬೆನ್ನಿಗೆ
ಎಳೆ ಬಿಸಿ ಕಾವು.

ಬಿಸಿಲ ಸಿರಿ
ಮಳೆ ನಂತರ …
ಬೇಸಿಗೆ ಬೇಗೆಗೆ
ಮಳೆ ನೀರ ಹೊಳೆ.

ಅದಿದ್ದಾಗ
ಇದು …
ಇದಿದ್ದಾಗ
ಅದು.

ನೋಡಿ
ಕಲಿತರೆ ಏನು?
ಮಳೆಯಲ್ಲಿ
ಒದ್ದೆಯಾಗದೆ ?

ಗೇದು ಬಿಸಿಲಲ್ಲಿ
ಬೆವರಿ…
ಚೊಂಬೆತ್ತಿ
ತಣ್ಣೀರ ಕುಡಿಯದೆ .

ಇನಿತು ಬಿಸಿಲ
ರವಷ್ಟು ಚಳಿಯ …
ಕೊಂಚ
ಮಳೆಯ.

ಮೋಡದೊಳಗೆ
ಮಳೆಯನ್ನು..
ಮೋಡದಂಚಿನಲಿ
ಬಿಸಿಲನ್ನು.

ಸುರಿವ ಮಳೆಯಲ್ಲಿ
ಎಳೆ
ಬಿಸಿಲ…
ಕಾಗೆ ಮಳೆಯ.

ಮಾಡುವೆ ಹೇಗೋ
ಮನುಜ…
ಬಚ್ಚಲ ವಂದರಿಯ
ನೀರಿನಲ್ಲಿ?

ನಮಿಸಬಾರದೇ?
ಸುರಿವ ಮಳೆಯಲ್ಲಿ
ಸುಡುವ ಬಿಸಿಲಲ್ಲಿ

ಆ ಐಚೋಜಿಗಕ್ಕೆ…

ನೆಂದವರ
ಬೆಂದವರ
ಬೆವೆತು ಹಣ್ಣಾದವರ
ಕಾಯಿ ನೀನು ಎಂದು…

ಡಾII ರಜನಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?