Monday, April 15, 2024
Google search engine
Homeತುಮಕೂರ್ ಲೈವ್ಆಂಜನೇಯ ಈಗಲೂ ಜೀವಂತ: ಶೃಂಗೇರಿ ಶ್ರೀಗಳು

ಆಂಜನೇಯ ಈಗಲೂ ಜೀವಂತ: ಶೃಂಗೇರಿ ಶ್ರೀಗಳು

Publicstory


Sankapura (pavagada): ಆಂಜನೇಯ ಎಂದರೆ ಬ್ರಹ್ಮಚಾರಿ ಎಂದು ನಾವೆಲ್ಲ ನಂಬಿದ್ದೇವೆ. ಪುರಾಣಗಳು ಇದನ್ನು ಓದಿದ್ದೇವೆ. ಆದರೆ ಪರಾಷರಾ ಚರಿತ ಸಂಹಿತೆಯಲ್ಲಿ ಆಂಜನೇಯನದ ಮದುವೆಯ ಉಲ್ಲೇಖ ಇದೆ. ಸೂರ್ಯನ ಮಗಳಾದ ಸುರ್ವಚಲಾ ದೇವಿಯನ್ನು ಮದುವೆಯಾಗಿದ್ದ ಎಂದು ಕೂಡಲಗಿ ಶೃಂಗೇರಿ ಮಠದ ಶ್ರೀ ಹೇಳಿದರು.

ಇಲ್ಲಿನ ಸುರ್ವಚಲಾ ಆಂಜನೇಯ ದೇವಸ್ಥಾನದ ಲ್ಲಿ ನಡೆದ ಸುರ್ವಚಲಾ ದೇವಿಯ ಪ್ರತಿಷ್ಠಾಪನೆ, ಆಂಜನೇಯ- ಸುರ್ವಚಲಾ ದೇವಿಯ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು.

ಒಂದೇ ನೆಗೆತಕ್ಕೆ ಆರು ದಿಕ್ಕು ನೆಗೆದಿದ್ದ. ಸೂರ್ಯನಾರಾಯಣನನ್ನೇ ಆಂಜನೇಯ ಗುರುವಾಗಿಸಿಕೊಂಡ. ಸರ್ವ ವಿದ್ಯೆ ಕಲಿಸಿದ. 90 ವಿದ್ಯೆಗಳನ್ನು ಹೇಳಿಕೊಟ್ಟ. ಇನ್ನು ನಾಲ್ಕು ವಿದ್ಯೆ ಹೇಳಿಕೊಡಬೇಕಾದರೆ ಮದುವೆಯಾದರೆ ಮಾತ್ರ ಕಲಿಸಿಕೊಡುವುದಾಗಿ ಹೇಳಿದ ಎಂದು ವಿವರಿಸಿದರು.

ಬ್ರಹ್ಮಚಾರಿಯಾಗಿರುವುದಾಗಿ ಶಪಥ ಮಾಡಿದ್ದೇನೆ ದನು. ಮದುವೆಯಾಗುವುದಿಲ್ಲ ಎಂದು ಹಠ ಸಾಧಿಸಿದ. ಆದರೆ ದೇವಾನುದೇವತೆಗಳು ಆಂಜನೇಯನ ಮನವೊಲಿಸಿದರು. ರಾಕ್ಷಸರ ಸಂಸಾರ ಮಾಡಿ ಲೋಕ ಕಲ್ಯಾಣ ಮಾಡಬೇಕಾದರೆ ಆ ನಾಲ್ಕು ವಿದ್ಯೆಗಳನ್ನು ಕಲಿಯಬೇಕೆಂದರು. ಆಗ ಆಂಜನೇಯ ಸೂರ್ಯನನ್ನು ಕೇಳಿಕೊಂಡ. ಸೂರ್ಯ ತನ್ನ ಕಿರಣಗಳನ್ನು ಒಂದು ಗೂಡಿಸಿ ಸುರ್ವಚಲಾ ಶಕ್ತಿಯನ್ನು ರೂಪಿಸಿದ. ಆ ಶಕ್ತಿಯೇ ಹೆಣ್ಣು ಮಗಳಾದಳು. ಅವಳನ್ನು ವಿವಾಹ ಮಾಡಿಕೊಂಡ ಎಂದರು.

ಸೂರ್ಯ ದೇವನ ಮಗಳನ್ನು ಮದುವೆ ಮಾಡಿಕೊಂಡ. ಮದುವೆಯಾದರೂ ಬ್ರಹ್ಮಚಾರಿ ಪಾಲಿಸುವೆ ಎಂದು ಸೂರ್ಯನ ಬಳಿ ವರ ಪಡೆದ. ಮದುವೆಯಾದರೂ ಬ್ರಹ್ಮಚಾರಿ ಯಾಗಿಯೇ ಉಳಿದ. ಸುರ್ವಚಲಾ ದೇವಿ ತಪಸ್ಸಿಗೆ ಹೋದಳು. ಇದು ವೃತ್ತಾಂತ ಎಂದರು.

ಶನಿ ದೋಷ ವಿದ್ದವರು ಆಂಜನೇಯ ಸ್ವಾಮಿ ಪಠಣದಿಂದ ಕಡಿಮೆಯಾಗಲಿದೆ ಎಂದರು.

ರಾಮಾಯಣದಲ್ಲಿ ಕೊನೆಗೆ ಶ್ರೀರಾಮನ ಪಟ್ಟಾಭಿಷೇಕದ ವೇಳಿ ಸೀತಾಮಾತೆ ಸುರ್ವಚಲಾ ದೇವಿಯನ್ನು ಪತಿವ್ರತೆ ಎಂದು ನೆನಪಿಸಿಕೊಂಡಳು.

ಸಂಕಾಪುರದಲ್ಲಿ ಆಂಜನೇಯನ ಮದುವೆ ಮಾಡಿದ. ಕರ್ನಾಟಕದಲ್ಲಿ ಇದು ಪ್ರಚಾರ ಇಲ್ಲ‌ . ಊರಿಗೊಬ್ಬ ಹನುಮಂತ ಇದ್ದಾರೆ. ಆಂಜನೇಯನ ಪತ್ನಿಯನ್ನು ಯಾರೂ ಪ್ರತಿಷ್ಠಾಪನೆ ಮಾಡಿಲ್ಲ ಎಂದರು.

ಹೈದರಬಾದ್ ನ ಹತ್ತಿರ ಸುರ್ವಚಲಾ ಆಂಜನೇಯ ದೇವಸ್ಥಾನವಿದೆ. ಇದು ಕರ್ನಾಟಕದ ಪ್ರಪ್ರಥಮವಾಗಿ ಇಲ್ಲಿ ಸ್ಥಾಪಿಸಲಾಗಿದೆ. ಇದರ ಕಲ್ಯಾಣೋತ್ಸವ ಮಾಡಿದರೆ ಮದುವೆಯಾಗಲಿದೆ. ಇಲ್ಲಿ ಗಂಡ ಹೆಂಡತಿ ಜಗಳ, ಹೊಂದಾಣಿಕೆ ಇಲ್ಲದಿದ್ದವರು ಇಲ್ಲಿ ಪೂಜೆ ಸಲ್ಲಿಸಿದರೆ ಸರಿಹೋಗಲಿದೆ ಎಂದು ಹೇಳಿದರು

ಅವನು ಚಿರಂಜೀವಿ. ‌ಈಗಲೂ ಹನುಮಂತ ಜೀವಂತ ಇದ್ದಾರೆ. ಅಭ್ಯಜನ ಸ್ನಾನದ ವೇಳೆ ಏಳು ಜನ ಚಿರಂಜೀವಿಗಳ ಹೆಸರನ್ನು ಹೇಳುತ್ತಿದ್ದರು. ಇವರಲ್ಲಿ ಆಂಜನೇಯ ಕೂಡ ಒಬ್ಬನು ಎಂದನು.

ಮನುಷ್ಯ ರೂಪದಲ್ಲಿ ಜನಿನಿಸಿದ ದೇವರೆಲ್ಲರ ಅಂತ್ಯವಿತ್ತು. ಆದರೆ ಆಂಜನೇಯ ಇದ್ದಾನೆ ಎಂಬುದೇ ನಂಬಿಕೆ ಎಂದರು. ಈಗಲೂ ಹನುಮಂತನು ರಾಮನ ಪಠಣ ಮಾಡುತ್ತಿದ್ದಾನೆ ಎಂದರು.

ಪರಾಕ್ರಮಿ, ಬುದ್ಧಿಶಾಲಿ‌. ಎಲ್ಲ ವಿದ್ಯೆಗಳನ್ನು ಪಡೆದವನು. ಬಲಶಾಲಿ. ಸ್ವತಃ ರುದ್ರಾಂಶ ಸಂಭೂತಿ ಎಂದರು.

ಆಂಜನೇಯ ಇಂದ್ರಿಯಗಳ ಜಿತನು. ಆದರೆ ಮನುಷ್ಯರು ಇಂದ್ರಿಯಗಳ ಜಿತರಲ್ಲ ಎಂದರು.

ದೇವಾನುದೇವತೆಗಳಿಗೂ ಕಷ್ಟ ಬಂದಿದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟ ತಪ್ಪಿದ್ದಲ್ಲ. ಕಷ್ಟವನ್ನು ಎದುರಿಸಬೇಕು. ರಾಮನಾಮ ಸ್ಮರಣೆ ಮಾಡಿದರೆ ಮಾರುತಿ, ರಾಮ ಇಬ್ಬರೂ ಸಿಗಲಿದೆ. ಆಂಜನೇಯ ಸ್ಮರಣೆ ಮಾತ್ರದಿಂದ ಸಮಸ್ಯೆ ಎದುರಿಸುವ ಶಕ್ತಿ ಬರಲಿದೆ ಎಂದರು.

ಕಾರ್ಯಕ್ರಮದಲ್ಲಿ ಸುರ್ವಚಲಾ ಆಂಜನೇಯ ದೇವಸ್ಥಾನದ ಧರ್ಮದರ್ಶಿ, ಪ್ರಧಾನ ಅರ್ಚಕರಾದ ಅನಿಲ್, ಅರ್ಚಕರಾದ ರಂಗಣ್ಣ ಹಲವು ಋತ್ವಿಕರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?