Thursday, March 28, 2024
Google search engine
HomeಜನಮನC.N.ಹಳ್ಳಿ ಪದವಿ ಕಾಲೇಜಿಗೆ ಸಲಾಂ‌ ಎಂದ ಜನರು! ಏಕೆ ಗೊತ್ತಾ?

C.N.ಹಳ್ಳಿ ಪದವಿ ಕಾಲೇಜಿಗೆ ಸಲಾಂ‌ ಎಂದ ಜನರು! ಏಕೆ ಗೊತ್ತಾ?

ಭರತ್ ಚಿಕ್ಕನಾಯಕನಹಳ್ಳಿ


chikkanayakanahalli: ಸರ್ಕಾರಿ ಕಾಲೇಜುಗಳೆಂದರೆ ಮೂಗು ಮುರಿಯುವುದೇ ಹೆಚ್ಚು. ಆದರೆ ಚಿಕ್ಕನಾಯಕನಹಳ್ಳಿ ಸರ್ಕಾರಿ ಪದವಿ ಕಾಲೇಜಿನ ಕೆಲಸಕ್ಕೆ ಇಡೀ ನಾಡಿನ ಜನರು ಸಲಾಂ ಎಂದಿದ್ದಾರೆ.

ಯಾರೂ ಮಾಡದ ಕೆಲಸ ಮಾಡಿರುವ ಕಾಲೇಜು, ಇದೇ ಮೊದಲ ಅಲ ವೆಬ್ನಾರ್ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹಾಗೂ ಇಂಗ್ಲೀಷ್ ಸಾಹಿತ್ಯದ ರಸದೌತಣ ಬಡಿಸಿದೆ.‌ಇದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಕಾರ್ಯಕ್ರಮದ ಪ್ರಾಯೋಜಕರಾದ ಸಹಾಯಕ ಪ್ರಾಧ್ಯಾಪಕಿ ಜಿ.ಪದ್ಮಶ್ರೀ ಅವರ ಕೆಲಸ ಜಿಲ್ಲೆಗೂ ಹೆಸರು ತಂದುಕೊಟ್ಟಿದೆ.ಆಂಗ್ಲಭಾಷಾ ವಿಭಾಗದಿಂದ ವಿಶ್ವ ಶಿಕ್ಷಕರ ದಿನಾಚರಣೆಯ ಪ್ರಯುಕ್ತ, 2 ಅಕ್ಟೋಬರ್ ರಿಂದ 29 ಅಕ್ಟೋಬರ್ 2020 ವರೆಗೆ ಒಂದು ತಿಂಗಳ ರಾಷ್ಟ್ರೀಯ ವೆಬ್ ನಾರ್ ” Revisiting the Contours of Romanticism and Literary Criticism ” ವಿಷಯದ ಕುರಿತು ಆಯೋಜಿಸಲಾಗಿತ್ತು.

ಕಾಲೇಜಿನ ಪ್ರಾಂಶುಪಾಲರಾದ ಹೆಚ್. ಬಿ ಕುಮಾರಸ್ವಾಮಿ ಮಾತನಾಡಿ ಈ ವೆಬಿನರ್ ನ ಮುಖ್ಯ ಉದ್ದೇಶ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷೆ ಹಾಗೂ ಸಾಹಿತ್ಯದ ಬಗೆಗಿನ ಒಲವನ್ನು ಮೂಡಿಸುವುದೇ ಆಗಿತ್ತು. ಈ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಎಲ್ಲ ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಪಾಲ್ಗೊಂಡ ವಿದ್ಯಾರ್ಥಿಗಳಿಗೂ ವಂದನೆಯನ್ನು ಅರ್ಪಿಸಿದ್ದರು.

ಕಾರ್ಯಕ್ರಮದ ಆಯೋಜಕರಾದ ಪದ್ಮಶ್ರೀ ಜಿ ಅವರು ಮಾತನಾಡಿ ಗ್ರಾಮೀಣ ವಿದ್ಯಾರ್ಥಿಗಳಿಗಾಗಿಯೇ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ರಾಷ್ಟ್ರದ ವಿವಿಧ ರಾಜ್ಯ ಮತ್ತು ಕರ್ನಾಟಕದ ಹಲವು ಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಸದುಪಯೋಗ ಪಡೆದುಕೊಂಡಿದ್ದಾರೆ.

ಇಂತಹ ಒಂದು ತಿಂಗಳ ನಿರಂತರ ರಾಷ್ಟ್ರೀಯ ವೇಬಿನರ್ ಅನ್ನು ಇಡೀ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ನಡೆಸಿರುವುದು ನಮ್ಮ ಕಾಲೇಜು ಎನ್ನುವುದು ಚಿಕ್ಕನಾಯಕನಹಳ್ಳಿಗೆ ಹೆಮ್ಮೆಯ ವಿಚಾರ ಎಂದರು.

ಈ ಒಂದು ತಿಂಗಳ ವೆಬಿನರ್ ನಲ್ಲಿ ನುರಿತ 15 ಸಂಪನ್ಮೂಲ ವ್ಯಕ್ತಿಗಳು ರೋಮ್ಯಾಂಟಿಕ್ ಏಜ್, ಮಾಡ್ರನ್ ಏಜ್ ನಾ ಹಲವು ಕವಿತೆಗಳು, ಕಾದಂಬರಿಗಳು, ಜೊತೆಯಲ್ಲಿ ಸಾಹಿತ್ಯ ವಿಮರ್ಶೆಯ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ವಿಚಾರಗಳನ್ನು ಮಂಡಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಒಲವನ್ನು ಹೆಚ್ಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಯಾರು ಏನ್ ಹೇಳಿದ್ರು

ಈ ವೇಬಿನರ್ ನ ಮುಖ್ಯ ಉದ್ದೇಶ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷೆ ಮತ್ತು ಸಾಹಿತ್ಯದ ಬಗೆಗಿನ ಒಲವನ್ನು ಮೂಡಿಸುವುದಾಗಿತ್ತು ಹಾಗೂ ಈ ಕಾರ್ಯಕ್ರಮಕ್ಕೆ ಯಶಸ್ವಿಯಾಗಿ ಕಾರಣರಾದ ಎಲ್ಲ ಸಂಪನ್ಮೂಲ ವ್ಯಕ್ತಿಗಳಿಗೆ ಧನ್ಯವಾದಗಳು.- Padmashree G


ನಮ್ಮ ಹೆಮ್ಮೆ…

ವೆಬಿನಾರ್ನ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷೆ ಮತ್ತು ಸಾಹಿತ್ಯದ ಬಗೆಗಿನ ಒಲವನ್ನು ಮೂಡಿಸುವುದು ಹಾಗೂ ಈ ಕಾರ್ಯಕ್ರಮಕ್ಕೆ ಕಾರಣರಾದ ನಮ್ಮ ಕಾಲೇಜಿನ ಪ್ರಾಧ್ಯಾಪಕಿ ಪದ್ಮ ಶ್ರೀ ಅವರಿಗೆ ಧನ್ಯವಾದಗಳು ಮತ್ತು ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ವಂದಿಸುತ್ತೇನೆ.
Kumaraswamy


ಅನುಕೂಲ ಆಯಿತು

ನಮ್ಮಂತಹ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಸಹಾಯವಾಗಿದೆ ಮತ್ತು ಆನ್ಲೈನ್ ಉಪನ್ಯಾಸದಲ್ಲಿ ಕಲಿಯುವುದಕ್ಕಿಂತ ಹೆಚ್ಚಿನ ರೀತಿಯಲ್ಲಿ ಅಭ್ಯಾಸ ಮಾಡಿದ್ದೇನೆ.
Amaresh
GFGC. Koppala


ಕಾಲೇಜಿಗೆ ವಂದಿಸುವೆ

ಇದರ ಮುಖ್ಯ ಉದ್ದೇಶ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ವಿಷಯ ಸುಲಭವಾದ ವಿಷಯ ಮತ್ತು ಆನ್ಲೈನ್ ಕ್ಲಾಸ್ ಬದಲು ವೆಬ್ನರ್ ಕ್ಲಾಸ್ ನಲ್ಲಿ ವಿದ್ಯಾರ್ಥಿಗಳು ಹೆಚ್ಚು ಕಲಿಯುತ್ತಾರೆ. ಈ ಎಲ್ಲಾ ತರಗತಿಗಳನ್ನು ಬೋಧನೆಮಾಡಲು ಅವಕಾಶ ಕೊಟ್ಟ ಚಿಕ್ಕನಾಯಕನಹಳ್ಳಿ ಪ್ರಥಮ ದರ್ಜೆ ಕಾಲೇಜಿಗೆ ವಂದಿಸುತೇನೆ .
Ragavendra k b
GFGC, Pavagada

RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?