Friday, March 29, 2024
Google search engine
Homeಜನಮನಕೊರೊನಾ: ಮೊದಲು ಯಾರು ಬರಬೇಕು ಸಚಿವರೇ?

ಕೊರೊನಾ: ಮೊದಲು ಯಾರು ಬರಬೇಕು ಸಚಿವರೇ?

ಸತೀಶ್


ಬೆಂಗಳೂರು: ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೇ ನಡೆದ ಮಾರಣ ಹೋಮದ ಘಟನೆಗೆ ಪ್ರತಿಕ್ರಿಯಿಸುತ್ತಾ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ‌ ಸುರೇಶಕುಮಾರ ಅವರು ಜನರು ಆಸ್ಪತ್ರೆಗೆ ಲೇಟಾಗಿ ಬಂದಿರುವುದೇ ಸಾವಿಗೆ ಕಾರಣ ಎಂದಿದ್ದಾರೆ.

ಇನ್ನೂ ಆರೋಗ್ಯ ಸಚಿವರಾದ ಸನ್ಮಾನ್ಯ ಡಾಕ್ಟರ್ ಸಚಿವ ಡಾ. ಸುಧಾಕರ್ ಅವರು ಇಲ್ಲ, ಇಲ್ಲ, ಆಕ್ಸಿಜನ್ ಕೊರತೆಯಿಂದ ಸತ್ತವರು ಮೂವರು ಎಂದರು. ಅಂದರೆ ಉಳಿದವರು ಆಕ್ಸಿಜನ್ ಇದ್ದರೂ ಏಕೆ ಸತ್ತರು? ಹಾಗಾದರೆ ಆಕ್ಸಿಜನ್ ಇದ್ದರೂ ಆ ದಿನ 21 ಜನ ಸಾಯುತ್ತಿದ್ದರು ಅಂತ ಅರ್ಥವಾ?

ಸಚಿವರೇ, ಕರೋನ ವೈರಸ್ ಸೋಂಕಿತರನ್ನು ನೇಣು ಹಾಕಲ್ಲ ಅವರು ಸಾಯೋದು ಆಕ್ಸಿಜನ್ ಗೋಸ್ಕರ ನರಳಿ ನರಳಿ ಸ್ವಾಮಿ .ಕೊನೆ ಹಂತ ಅದೇ ಅಂತ ನಿಮಗೆ ಇನ್ನೂ ಗೊತ್ತಾಗಿಲ್ವ? .ಹಾಗಿದ್ರೆ ಯಾಕೆ ಆಕ್ಸಿಜನ್ ಬೇಕು ಅಂತ ಹೇಳಿ ನೋಡೋಣ?

ಬೇಗ ಬಂದರೆ ನೀನು ಹೋಮ್ ಐಸೊಲೇಷನ್ ಆಗಿ ಅಂತಾರೆ .ಸೀರಿಯಸ್ ಆಗಿ ಬಂದ್ರೆ ಬೆಡ್ ಇಲ್ಲ ಅಂತಾರೆ. ಪಬ್ಲಿಕ್ ಸ್ಟೋರಿಗೆ ಸಿಕ್ಕ ಮಾಹಿತಿಯಂತೆ ಧನಂಜಯ ಅನ್ನೊ ರೋಗಿ ಹೋಮ್ ಐಸೊಲೇಷನ್ ನಿಂದ ಸೀರಿಯಸ್ ಆಗಿ ನೆಲಮಂಗಲ ಆಸ್ಪತ್ರೆಗೆ ಬಂದು ಅಲ್ಲಿ ಸರಿಯಾದ ಸಮಯದಲ್ಲಿ ಚಿಕಿತ್ಸೆ, ವೆಂಟಿಲೇಟರ್ ಸಿಗದೇ ಸತ್ತರು.

ಡಾಕ್ಟರ್ ಗಳು ಜಿಂಕ್, ವಿಟಮಿನ್ ಸಿ ಕೊಟ್ಟು ಹೋಮ್ ಐಸೊಲೇಷನ್ ಗೆ ಹಾಕ್ತಾರೆ ಅಥವಾ ಕೋವಿಡ್ -ಸೆಂಟರ್ ಗೆ ಹಾಕ್ತಾರೆ. ಆದರೆ ಅಲ್ಲಿ ಸೀರಿಯಸ್ ಆದವರಿಗೆ ಕೂಡಲೇ ಚಿಕಿತ್ಸೆ ಸಿಗುತ್ತದೆಯೇ ?

ಡಾಕ್ಟರ್ ಗಳು ಹೇಳ್ತಾರೆ 4 ಅಥವಾ 5 ನೇ ದಿನಕ್ಕೆ CT ಬೇಕು ಅಂತಾ.ಕೆಲವು ರಕ್ತ ಪರೀಕ್ಷೆ ಡೈಮರ್ ,ಸಿಆರ್ಪಿ ,ಸಿಬಿಸಿ ಪ್ರೋ ಕಾಲ್ಪಿ ಟಿನೇನ್ ಇನ್ನೂ ಕೆಲವು ಟೆಸ್ಟ್ ಮಾಡಿದರೆ ಕೋರೋನಾ ರೋಗಿ ಸಿರಿಯ ಸ್ ಆಗ್ತರೋ ಇಲ್ಲವೇ ಅಂತಾ ಕಂಡು ಹಿಡಿ ಬಹುದು ಅಂತಾ ಹೇಳಬಹುದು ಅಂತಾರೆ.

ಹೋಮ್ ಐಸೋಲೇಷನ್ ಅಥವಾ ಕೋವಿಡ್ ಕೇರ್ ಸೆಂಟರ್ ಅಲ್ಲಿ ಇರುವವರಿಗೆ ಯಾವುದೂ ಮಾಡಿಸದೆ ಉಸಿರಾಟಕ್ಕೆ ತೊಂದರೆ ಆದಾಗ ಆಸ್ಪತ್ರೆಗಳಿಗೆ ಅಲೆದಾಡಿಸುತ್ತಾರೆ. ಆ ಅಲೆ ದಾಟದಲ್ಲೇ ರೋಗಿಗಳು ಸಾಯುತ್ತಿದ್ದಾರೆ.

89% ಆಕ್ಸಿಜನ್ ಇದ್ದಾಗ ಬೆಡ್ ಇಲ್ಲ ಅಂತ ಕಳುಸ್ತಾರೆ. ರೋಗಿ ಬೇಗ ಬಂದ್ರೂ ಬೆಡ್ ಇಲ್ಲ ಅಂತ ಕಳುಹಿಸುತ್ತಾರೆ. ತುಮಕೂರು ಬನಶಂಕರಿಯ ಶ್ರೀನಿವಾಸ್ ಗಟ್ಟಿಮುಟ್ಟಾದ ಹುಡುಗ. ಹೋಂ ಐಸೋಲೇಷನ್ ನಲ್ಲಿ ಇದ್ದ ಆತ ಆಕ್ಸಿಜನ್ 89% ಕ್ಕೆ ಬಂದಾಗ ಜಿಲ್ಲಾಸ್ಪತ್ರೆಗೂ ಬಂದರೂ ಬೆಡ್ ಕೊಡಲಿಲ್ಲ. ಕೊನೆಗೆ ಅವರು ಪ್ರಾಣ ತೆತ್ತರು.
ಬೇಗ ಬಂದ್ರೆ, ಈ ಥರ.. ಕೊನೆಯಲ್ಲಿ ಬಂದರೆ ಆ ಥರಾ, ಹೇಳಿ ಸಚಿವರೇ ಈಗ!

ಇನ್ನು ಹೋಮ್ ಐಸೋಲೇಷನ್ನಲ್ಲಿ ಇರುವವರನ್ನು ಕೋವಿಡ್ ಸೆಂಟರ ಅಲ್ಲಿ ಇರುವವರನ್ನು ತಜ್ಞರ ಶಿಫಾರಸ್ಸಿನಂತೆ ರಕ್ತ ಪರೀಕ್ಷೆ CT ಮಾಡಿಸಿ ಯಾರು ಸೀರಿಯಸ್ ಆಗ್ತಾರೆ ಅಂತ ಕಂಡುಹಿಡಿಯುವ ವ್ಯವಸ್ಥೆ ಮಾಡಿ. ಅದು ಆಗಿದೆಯೇ?

ನಿಮ್ಮ ತಜ್ಞರು ಸಲಹೆ ಏನು ಕೊಡುತ್ತಾರೆ ಕೇಳಿ. ಆಮೇಲೆ ಜನರ ಮೇಲೆ ತಪ್ಪು ಹೊರಿಸಿ ಮಾನ್ಯ ಸಚಿವರೇ.

ಯಾವ ಜನಕ್ಕೂ ಸಾಯಲು ಆಸೆ ಇಲ್ಲ ಎಂದು ಮೊದಲು ಅರ್ಥ ಮಾಡಿಕೊಂಡು ಹೇಳಿಕೆ ನೀಡಿದರೆ ಒಳ್ಳೆಯದೇನೋ?

ದಯಮಾಡಿ ಸತ್ತಿರುವವರಿಗೆ ಅವಮಾನ ಮಾಡಬೇಡಿ. ಅವರು ಯಾರೂ ಸಾಯಲೆಂದು ಬಯಸಿದವರಲ್ಲ ಎಂಬುದು ಮನಸ್ಸಿನಲ್ಲಿ ಹಾದು ಹೋಗಿದ್ದರೆ ಇಂಥ ಮಾತುಗಳು ಬರುತ್ತಿರಲಿಲ್ಲವೇನೋ? ಅಲ್ಲವೇ?

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?