ಗುಬ್ಬಿ : ತಾಲೂಕಿನ ಸಿ. ಎಸ್. ಪುರ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಮಾರಮ್ಮದೇವಿಯ ಜಾತ್ರಾ ಮಹೋತ್ಸವ ಮಾರ್ಚ್ 14,15 ರಂದು ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಅಮ್ಮನವರ ರಥೋತ್ಸವ ನಡೆಯುವುದು.
ಶ್ರೀ ಮಾರಮ್ಮದೇವಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಸೂಲಿಬೆಲೆ ಗಿರೀಶ್ ನಿರ್ದೇಶನದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ಮಾ. 15 ರಂದು ಬುಧವಾರ ರಾತ್ರಿ 7:30ಕ್ಕೆ ಏರ್ಪಡಿಸಲಾಗಿದೆ. ಈ ಸಮಾರಂಭಕ್ಕೆ ಶಾಸಕ ಮಸಾಲ ಜಯರಾಮ್, ಮುಖಂಡರಾದ ಎಂ.ಟಿ ಕೃಷ್ಣಪ್ಪ, ಬೆಮೆಲ್ ಕಾಂತರಾಜು ಹಾಗೂ ಇತರರು ಆಗಮಿಸುವರು.