Friday, March 29, 2024
Google search engine
Homeತುಮಕೂರು ಲೈವ್ತುಮಕೂರು ಬೆಳಗುಂಬದಲ್ಲಿ ಭಾವುಕರಾದ ಶಾಸಕ ಗೌರಿಶಂಕರ್

ತುಮಕೂರು ಬೆಳಗುಂಬದಲ್ಲಿ ಭಾವುಕರಾದ ಶಾಸಕ ಗೌರಿಶಂಕರ್

ಶಾಸಕ ಗೌರಿಶಂಕರ್ ಬಗ್ಗೆ ಮಹಿಳೆಯ ಮನ ಮಿಡಿಯುವ ಮಾತಿಗೆ ವಿಡಿಯೊ ನೋಡಿ. ಚಾನಲ್ ಸಬ್ ಸ್ಕ್ರೈಬ್ ಮಾಡಿ.

ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೆಳಗುಂಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಫುಡ್ ಕಿಟ್ ವಿತರಣಾ & ಕೊರೋನಾ ಜನ ಜಾಗೃತಿ ಕಾರ್ಯಕ್ರಮಕ್ಕೆ ಶಾಸಕ ಗೌರಿಶಂಕರ್ ಚಾಲನೆ ನೀಡಿದರು.

ಬೆಳಗುಂಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರತಿ ಹಳ್ಳಿಯ, ನೂರಾರು ಮನೆಗಳಿಗೆ ಭೇಟಿ ನೀಡಿ, 10 kg ಯ 2000 ಕ್ಕೂ ಹೆಚ್ಚು ಫುಡ್ ಕಿಟ್, ಕಲ್ಲಂಗಡಿ ಹಣ್ಣು, ಪೈನಾಪಲ್ ಹಣ್ಣು & N-95 ಮಾಸ್ಕ್ ವಿತರಣೆ ಮಾಡಿ ಸರ್ಕಾರದ ಸೂಚನೆ ಪಾಲಿಸಿ ಕ್ಷೇಮವಾಗಿರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಒಂದು ಹೆಣ್ಣು ಮಗಳು ಕೊರೋನಾ ಲಾಕ್ ಡೌನ್ ನಿಂದ ಜೀವನ ನಡೆಸುವುದು ಕಷ್ಟವಾಗಿದೆ ಎಂದು ತನ್ನ ಅಸಹಾಯಕತೆ ತೋರಿ ಕಣ್ಣೀರಾಕಿದರು. ಸ್ಥಳದಲ್ಲೆ ಶಾಸಕರು ತಮ್ಮ ಕೈಲಾದ ವೈಯಕ್ತಿಕ 25,000 ರೂಪಾಯಿ ಹಣ ನೀಡಿ ಆಕೆಯನ್ನು ಸಂತೈಸಿದರು. ಅವರ ಕುಟುಂಬದ ಮಕ್ಕಳ ಸಂಪೂರ್ಣ ವಿಧ್ಯಾಭ್ಯಾಸದ ಜವಬ್ದಾರಿ ವಹಿಸಿಕೊಂಡರು.

“ಶಾಸಕರು & ಸಭಿಕರ ಕಣ್ಣಾಲಿಗಳು ತೇವವಾದ ಘಳಿಗೆ”

ಇದೇ ವೇದಿಕೆಯಲ್ಲಿ ಕೊರೋನಾ ಸೋಂಕಿನಿಂದ ಗುಣಮುಖಳಾದ ಹೆಣ್ಣು ಮಗಳು & ಆಕೆಯ ಮಗ ಸೋಂಕಿಗೊಳಗಾದ ದಿನ ಮಧ್ಯರಾತ್ರಿ 2 ಗಂಟೆಗೆ ಶಾಸಕರಿಗೆ ಕರೆ ಮಾಡಿದಾಗ, ಶಾಸಕರು ತಮ್ಮ ಆಪ್ತ ಸಹಾಯಕರನ್ನು ಕಳುಹಿಸಿ ಆಸ್ಪತ್ರೆಯಲ್ಲಿ ಬೆಡ್ ಕೊಡಿಸಿ ನಮ್ಮ ಮನೆಯನ್ನು ಕಾಪಾಡಿದ್ದಾರೆ ಎಂದು ಹೇಳಿ, ನಮ್ಮ ಕುಟುಂಬ ಉಳಿಸಿದ ಶಾಸಕರನ್ನು ದೇವರೆಂದರು. ಶಾಸಕರ ಸೇವೆ ನೆನೆದು ಭಾವುಕಾಳಾಗಿ ಶಾಸಕರನ್ನು ಕೈ ಮುಗಿದು ಅವರ ಕುಟುಂಬ ನೂರ್ಕಾಲ ಬಾಳುವಂತೆ ಹರಸಿದರು. ಈ ಕ್ಷಣದಲ್ಲಿ ಶಾಸಕರು ಸೇರಿದಂತೆ ಅಲ್ಲಿ ನೆರೆದಿದ್ದ ನೂರಾರು ಸಭಿಕರ & ಹೆಣ್ಣು ಮಕ್ಕಳ ಕಣ್ಣಾಲಿಗಳು ತೇವವಾದವು.

ಇದಾದ ನಂತರ ಅರಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಫುಡ್ ಕಿಟ್ ವಿತರಣಾ & ಕೊರೋನಾ ಜನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಾರ್ವಜನಿಕರನ್ನು ಸೇರಿದಂತೆ ಕೊರೋನಾ ಸೋಂಕಿತರ ಕುಟುಂಬಕ್ಕೆ, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಸುಮಾರು 1000 ಕ್ಕೂ ಹೆಚ್ಚು ಫುಡ್ ಕಿಟ್, ಕಲ್ಲಂಗಡಿ ಹಣ್ಣು, ಪೈನಾಪಲ್ ಹಣ್ಣು & N-95 ಮಾಸ್ಕ್ ವಿತರಣೆ ಮಾಡಿ ವಿತರಣೆ ಮಾಡಿದರು.

ಜನರ ಮಾತುಗಳನ್ನು ಕೇಳಿದ ಬಳಿಕ ಶಾಸಕರು “ನನ್ನ ಸೇವೆ ಮತ್ತೊಬ್ಬರ ಜೀವ & ಜೀವನ ಉಳಿಸುವ ಕೆಲಸ ಮಾಡುತ್ತದೆ ಎಂದಾದರೇ, ಇದಕ್ಕಿಂತ ಬೇರೊಂದು ನನಗಿನ್ನೇನು ಬೇಕು”. ಎಂದು ಭಾವುಕರಾದರು..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?