Thursday, March 28, 2024
Google search engine
Homeತುಮಕೂರು ಲೈವ್ಹೆಬ್ಬೂರು ರೈತ ಉತ್ಪಾದಕರ ಕಂಪನಿ ಸಭೆ

ಹೆಬ್ಬೂರು ರೈತ ಉತ್ಪಾದಕರ ಕಂಪನಿ ಸಭೆ

Publicstory. in


ತುಮಕೂರು : ರೈತರು ತಮ್ಮ ಕೃಷಿ ಆದಾಯವನ್ನು ದ್ವಿಗುಣಗೊಳಿಸಲು ವಿವಿಧ ಬೆಳೆ ಹಾಗೂ ಇತರೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ತಮ ಅಧಿಕ ಇಳುವರಿ ಪಡೆದುಕೊಂಡು ನೇರ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿಕೊಂಡು ಹೆಚ್ಚು ಲಾಭಗಳಿಸಬೇಕು ಎಂದು ಕೊಲ್ಲಾಪುರದಮ್ಮ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಬಸವರಾಜು ತಿಳಿಸಿದರು.

ತಾಲ್ಲೂಕಿನ ಗೂಳೂರು ಹ್ಯಾಂಡ್ ಪೋಸ್ಟ್ ಹತ್ತಿರದ ಶ್ರೀ ಶೂಲದ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಕೊಲ್ಲಾಪುರದಮ್ಮ ಹೆಬ್ಬೂರು ರೈತ ಉತ್ಪಾದಕರ ಕಂಪನಿ ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

ರೈತರು ರಾಸಾಯನಿಕ ವಸ್ತುಗಳನ್ನು ಬಳಸದೆ ಕೃಷಿ ಮಾಡಿ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಯನ್ನು ಪಡೆಯುವಲ್ಲಿ ಸಾವಯವ ಕೃಷಿಕರು ಸಂಘಟಿತರಾಗಬೇಕು. ತಾವು ಬೆಳೆದ ಬೆಳೆಗಳನ್ನು ರೈತ ಉತ್ಪಾದಕ ಕಂಪನಿಯು ಖರೀದಿಸಿ ರೈತರಿಗೆ ಉತ್ತಮ ಬೆಲೆಯನ್ನು ಕೊಡುತ್ತದೆ ಎಂದು ತಿಳಿಸಿದರು.

ಐಡಿಎಫ್ ಸಂಸ್ಥೆಯ ಯೋಜನಾಧಿಕಾರಿ ಮು.ಲ.ಕೆಂಪೇಗೌಡ ಮಾತನಾಡಿ, ರೈತರು ಸುಸ್ಥಿರ ಕೃಷಿ ಮಾಡಿಕೊಂಡು ವ್ಯವಸಾಯದಲ್ಲಿ ಖರ್ಚನ್ನು ಕಡಿಮೆ ಮಾಡಿದಾಗ ಮಾತ್ರ ತಮ್ಮ ಆದಾಯವನ್ನು ವೃದ್ದಿಸಿಕೊಳ್ಳಲು ಪೂರಕ. ರೈತರು ಸ್ಥಳೀಯ ಮಟ್ಟದಲ್ಲಿ ದೊರೆಯುವ ಪದಾರ್ಥಗಳಿಂದ ಕಷಾಯ ಮತ್ತು ಗೊಬ್ಬರಗಳನ್ನು ತಯಾರಿಸಿಕೊಂಡು ಬೆಳೆಗಳಿಗೆ ಬರುವ ರೋಗ ಮತ್ತು ಕೀಟಗಳ ನಿವಾರಣೆಗೆ ಮುಂದಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಸಿ.ಜಿ.ನಾರಾಯಣಸ್ವಾಮಿ ಇವರಿಗೆ ಸುಸ್ಥಿರ ಕುಟುಂಬ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಸಭೆಯಲ್ಲಿ ನಿರ್ದೇಶಕರಾದ ಕೆ.ಎಸ್.ಮಲ್ಲೇಶ್, ಆರ್.ಸಿ.ಬಸವರಾಜು, ನರಸಿಂಹಮೂರ್ತಿ, ನರುಗನಹಳ್ಳಿ ರಮೇಶ್, ದಿನೇಶ್, ತುರಚನಕಟ್ಟೆ ನರಸಿಂಹಮೂರ್ತಿ, ನಾಗವೇಣಿ, ನಾಬ್ ಕಿಸಾನ್‍ ಪದ್ಮಪ್ರೀಯಾ, ಐಡಿಎಫ್ ಸಂಸ್ಥೆಯ ಗೋವಿಂದರಾಜನ್, ಗುರುದತ್.ಕೆ.ಎನ್, ಕರುಣಾಕರ್.ಎಸ್.ಹೆಚ್, ಸುರೇಶ್.ಕೆ.ಎನ್, ಮುದ್ದಗಂಗಯ್ಯ, ಕಂಪನಿಯ ಸಿಇಒ ಲೋಕೇಶ್.ಡಿ, ಬಿ.ಟಿ.ಗಿರೀಶ್‍ಕುಮಾರ್, ಜೀವನೋಪಾಯ ಉತ್ತೇಜನಾಧಿಕಾರಿ ಕಿರಣ್, ಕ್ಷೇತ್ರಾಧಿಕಾರಿಗಳಾದ ರಾಮಯ್ಯ, ಕೆ.ಮಧುಸೂಧನ್, ಮಹೇಶ್, ಚಿದಾನಂದ್ , ಅಂಜಲಿ, ಕಲಾವತಿ, ಸಿಆರ್ಪಿ, ಬಿಸಿಎ ಹಾಗೂ ರೈತ ಸಂಘದವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?