Thursday, March 28, 2024
Google search engine
Homeಜನಮನಓದಲೇಬೇಕಾದ ಸಂದರ್ಶನ: ಕಂದೀಕೆರೆ ಉಪವಾಸಕ್ಕಿದೆ ರಾಷ್ಟ್ರೀಯ ಆಯಾಮ

ಓದಲೇಬೇಕಾದ ಸಂದರ್ಶನ: ಕಂದೀಕೆರೆ ಉಪವಾಸಕ್ಕಿದೆ ರಾಷ್ಟ್ರೀಯ ಆಯಾಮ

ಪೊಲಿಟಿಕ್ಸ್ ಫಾರ್ ದಿ ಪೂರ್ ಸರಣಿ ಉಪವಾಸ ಕರ್ನಾಕಟದಲ್ಲಿ ಮೊದಲ ಬಾರಿಗೆ ಇಂದಿರಾ ಸರಣಿಗಾಂಧೀ ಮಾರ್ಗ ಅನುಸರಣೆ ಮುಖ್ಯ – ಎನ್.ಇಂದಿರಾ ಅವರೊಂದಿಗಿನ ಕೆ.ಇ.ಸಿದ್ದಯ್ಯ ನಡೆಸಿದ ಸಂದರ್ಶನ

ಕೊರೊನ ಲಾಕ್ ಡೌನ್ ನಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ಬಡವರನ್ನು ಸಂಕಷ್ಟಕ್ಕೆ ಈಡುಮಾಡಿದೆ. ಇಂಥ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದಿರುವ ಪೊಲಿಟಿಕ್ಸ್ ಫಾರ್ ದಿ ಪೂರ್ ಸಂಘಟನೆ ಬಡಜನರಿಗೆ ನೈತಿಕ ಬಲ ತುಂಬಲು ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ವಲಸೆ ಕಾರ್ಮಿಕರು, ರೈತರು, ಗ್ರಾಮೀಣ ಆರ್ಥಿಕತೆ ಮತ್ತು ಪರಿಸರ ಸಂರಕ್ಷಣೆ ಮಾಡುವುದು ಈ ಸಂಘಟನೆಯ ಮುಖ್ಯ ಉದ್ದೇಶ.

ಪೊಲಿಟಿಕ್ಸ್ ಫಾರ್ ದಿ ಪೂರ್ ಸಂಘಟನೆ ಜೂನ್ 5 ರಿಂದ ಬಿಹಾರದ ಚಂಪಾರಣ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಒಬ್ಬೊಬ್ಬರು ಒಂದುದಿನದ ಮಟ್ಟಿಗೆ ಉಪವಾಸ ಕೈಗೊಂಡಿದ್ದಾರೆ.

ಈ ಸರಣಿ ಉಪವಾಸ ಸತ್ಯಾಗ್ರಹ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಕಂದೀಗೆರೆ ಸಿರಿಧಾನ್ಯ ಸಂಸ್ಕರಣ ಘಟಕದಲ್ಲಿ ಜೂನ್ 10ರಂದು ಆರಂಭವಾಗಿದೆ.

ವಿಜ್ಞಾನ ಚಳವಳಿ, ಪರಿಸರ ಹೋರಾಟದಲ್ಲಿ ತೊಡಗಿಸಿಕೊಂಡು ಹೆಸರು ಮಾಡಿರುವ ಹಾಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷೆ ಎನ್. ಇಂದಿರಾ ಸರಣಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದವರಲ್ಲಿ ರಾಜ್ಯದಲ್ಲೇ ಮೊದಲಿಗರು. ಸರಣಿ ಉಪವಾಸ ಜೂನ್ 10ರಂದು ಬೆಳಗ್ಗೆ 6 ಗಂಟೆಗೆ ಆರಂಭವಾಗಿ ಜೂನ್ 11 ಬೆಳಗ್ಗೆ 6 ಗಂಟೆಗೆ ಪೂರ್ಣಗೊಂಡಿದೆ.

ಹಾಗಾಗಿ https://publicstory.in ಎನ್. ಇಂದಿರಾ ಅವರನ್ನು ಮಾತನಾಡಿಸಿತು. ಅವರು ನೀಡಿರುವ ವಿವಗಳು ಹೀಗಿವೆ.

ಪಿಎಸ್- ಮೇಡಂ, ಈ ಸರಣಿ ಉಪವಾಸ ಸತ್ಯಾಗ್ರಹದ ಉದ್ದೇಶವೇನು?

ಎನ್.ಇಂದಿರಾ: ಇದು ಪ್ರಮುಖವಾಗಿ ಕೊರೊನ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಂಘಟನೆ. ಇದರಲ್ಲಿ ವಿಜ್ಞಾನಿಗಳು, ಗಾಂಧೀವಾದಿಗಳು ಇದ್ದಾರೆ. ಕೊರೊನ ಸಂದರ್ಭದಲ್ಲಿ ವಲಸೆ ಕಾರ್ಮಿಕರು, ಕೃಷಿಕರು, ಬಡವರು ಸಾಕಷ್ಟು ಸಂಕಟ ಅನುಭವಿಸಿದರು. ಅನುಭವಿಸುತ್ತಲೂ ಇದ್ದಾರೆ. ವಲಸೆ ಕಾರ್ಮಿಕರು ಇದುವರೆಗೆ ನೆಲೆ ಕಂಡಿಲ್ಲ. ಗ್ರಾಮೀಣ ಆರ್ಥಿಕತೆ, ಕೃಷಿ ಇಲ್ಲದೆ ಸಮಾಜ ಮುಂದೆ ನಡೆಯಲ್ಲ. ಗಾಂಧೀ ಹಾಕಿಕೊಟ್ಟ ಹಾದಿಯಲ್ಲಿ ನಡೆದರೆ ನಾವು ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ.

ಪಿಎಸ್- ಮೇಂಡ ಈ ಉಪವಾಸ ಸತ್ಯಾಗ್ರಹ ಎಂದು ಪೂರ್ಣಗೊಳ್ಳಲಿದೆ?

ಎನ್.ಇಂದಿರಾ: ಜೂನ್ 5ರಂದು ಪರಿಸರ ದಿನದಂದು ಬಿಹಾರದ ಚಂಪಾರಣ್ ನಲ್ಲಿ ಉಪವಾಸ ಸತ್ಯಾಗ್ರಹ ಆರಂಭವಾಗಿದೆ. ದಿನಕ್ಕೆ ಒಬ್ಬೊಬ್ಬರಂತೆ ಸರಣಿ ಉಪವಾಸ ನಡೆಸುತ್ತಿದ್ದಾರೆ. ಇದು ಎಲ್ಲಾ ರಾಜ್ಯಗಳಲ್ಲೂ ನಡೆಯುತ್ತಿದೆ. ಒಬ್ಬ ವ್ಯಕ್ತಿ 24 ಗಂಟೆ ಕಾಲ ಉಪವಾಸ ಸತ್ಯಾಗ್ರಹ ಮಾಡುವುದು. ಇಂದಿಗೆ ಆರು ದಿನವಾಗಿದೆ ಕರ್ನಾಟಕದಲ್ಲಿ ಮೊದಲ ಬಾರಿಗೆ ನಾನು ಉಪವಾಸ ಕುಳಿತಿದ್ದೇನೆ. ಇದು ಅಕ್ಟೋಬರ್ 2ರವರೆಗೆ ಮುಂದು ವರಿಯಲಿದೆ. ಅಂದು ಶಾಂತಿ ದಿನವನ್ನಾಗಿ ಆಚರಿಸಲಾಗುವುದು.

ಪಿಎಸ್- ಉಪವಾಸ ಸತ್ಯಾಗ್ರಹದಿಂದ ಜನರಿಗೆ ಹೇಗೆ ಸಹಾಯ ಮಾಡಬಲ್ಲಿರಿ?

ಎನ್.ಇಂದಿರಾ: ರಾಜಕೀಯ ವ್ಯಕ್ತಿಗಳು ಬಡವರು, ಕೃಷಿಕರು, ಕಾರ್ಮಿಕರ ಪರವಾಗಿಲ್ಲ. ಇದು ನಿಮಗೂ ಗೊತ್ತು. ನಾವು ಉಪವಾಸ ಸತ್ಯಾಗ್ರಹದ ಮೂಲಕ ಈ ಜನವಿಭಾಗಗಳಲ್ಲಿ ನೈತಿಕ ಬಲ ತುಂಬುತ್ತೇವೆ. ಸಾಧ್ಯವಾಧರೆ ಹಣಬಲವನ್ನು ಮಾಡುತ್ತೇವೆ. ಕೊರೊನ ಅವಧಿಯಲ್ಲಿ ಜನರಿಗೆ ಸಹಾಯ ಮಾಡುವುದು ಮಾತ್ರವಲ್ಲ, ಕಾರ್ಮಿಕರು ಗ್ರಾಮದಲ್ಲಿ ನೆಲೆಸುವಂತೆ ಮಾಡುವುದು, ಕೆಲಸ ಮಾಡುವಂತೆ ಪ್ರೋತ್ಸಾಹಿಸುವು. ಕೃಷಿಯಲ್ಲಿ ತೊಡಬೇಕು. ಪರಿಸರ ಉಳಿಸುವಂತಹ ಕೆಲಸ ಮಾಡಬೇಕು ಎಂಬ ಬಗ್ಗೆ ಜಾಗೃಹಿಸಿ ಮೂಡಿಸುತ್ತೇವೆ.

ಪಿಎಸ್- ಮೇಡಂ ಪರಿಸರ ಉಳಿವು ಹೇಗೆ?

ಎನ್.ಇಂದಿರಾ: ನೋಡಿ, ಅಮೇಜಾನ್ ಕಾಡು ನಾಶ ಮಾಡುತ್ತಿದ್ದಾರೆ. ಅರಣ್ಯ ನಾಶವಾದರೆ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತೆ. ಆಕ್ಸಿಜನ್ ಕಡಿಮೆಯಾಗುತ್ತದೆ. ಇದು ಜಾಗತಿಕ ತಾಪಮಾನ ಹೆಚ್ಚಲು ಕಾರಣವಾಗುತ್ತದೆ. ಪರಿಸರ ಸಂಕ್ಷಣೆಗೆ ಎಲ್ಲರೂ ಮುಂದಾಗಬೇಕು. ಈಗ ಕೃಷಿ ಪದ್ದತಿಯೂ ಬದಲಾಗಿದೆ.

ಇದು ಕೂಡ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಭೂಮಿಗೆ ರಾಸಾಯಿನಿಕ ಗೊಬ್ಬರ ಸೇರುತ್ತಿದೆ. ಕಾರ್ಖಾನೆಗಳ ವಿಶಯುಕ್ತ ನೀರು ಪರಿಸರವನ್ನು ಸೇರುತ್ತಿದೆ. ಹಿಂದಿನ ಪರಂಪರೆಯಿಂದ ಬಂದ ಕೃಷಿ ಪದ್ದತಿ ಬಿಟ್ಟು ಯಂತ್ರಗಳ ಬಳಕೆ ಜಾಸ್ತಿಯಾಗಿದೆ. ಇದೆಲ್ಲವೂ ಪರಿಸರಕ್ಕೆ ತೊಂದರೆ ಉಂಟುಮಾಡುತ್ತಿದೆ.

ನಾವು ಪರಿಸರವನ್ನು ಕಾಪಾಡಿಕೊಳ್ಳಬೇಕು. ಗಿಡಮರಗಳನ್ನು ಬೆಳೆಸಬೇಕು.

ಪಿಎಸ್- ಮೇಡಂ ಯುವಜನತೆ ನಗರಗಳಿಗೆ ಹೋಗದಂತೆ ತಡೆಯುವುದು ಹೇಗೆ? ತಿಳಿಸಿ.

ಎನ್.ಇಂದಿರಾ: ಕೊರೊನದಿಂದ ನಗರಗಳಲ್ಲಿ ದುಡಿಯುತ್ತಿದ್ದ ಜನರು ಹಳ್ಳಿಗಳಿಗೆ ಬಂದಿದ್ದಾರೆ. ಜಮೀನುಗಳಲ್ಲಿ ದುಡಿಯುತ್ತಿದ್ದಾರೆ. ಇದರಿಂದ ಬಾಡಿಗೆ ಉಳಿಯಿತು. ಅರ್ಧದಷ್ಟು ಉಳಿತಾಯವಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಒಳ್ಳೆಯ ಗಾಳಿ, ಶುದ್ದ ನೀರು ಒಳ್ಳೆಯ ಪರಿಸರ ಸಿಗುತ್ತದೆ. ಆದರೆ ನಗರಗಳಲ್ಲಿ ಒಳ್ಳೆಯ ಗುಣಮಟ್ಟದ ಜೀವನ ಮಾಡುತ್ತೇವೆ ಎಂಬುದು ಸುಳ್ಳು. ಹಳ್ಳಿಗಳಲ್ಲಿ ಹೈನುಗಾರಿಕೆ ಮಾಡಿದರೆ, ಎಲೆ ಹಚ್ಚಿದರೆ, ಸೊಪ್ಪು ಬೆಳೆದರೆ, ಗುಡಿಕೈಗಾರಿ ಮಾಡಿದರೆ ಹಳ್ಳಿಗಳು ಅಭಿವೃದ್ಧಿ ಆಗುತ್ತವೆ. ಇದು ಗಾಂಧಿಯವರ ಗ್ರಾಮೋದ್ದಾರದ ಕನಸು. ಕುಟುಂಬಗಳು ನೆಮ್ಮದಿಯಾಗಿರುತ್ತವೆ. ದುಡ್ಡು ಉಳಿತಾಯವಾಗುತ್ತದೆ.

ಪಿಎಸ್- ಹಾಗಾದರೆ ಈಗ ಗಾಂಧೀ ಮಾರ್ಗದಲ್ಲಿ ನಡೆಯುವುದು ಅನಿವಾರ್ಯ ಅಂತೀರಾ?

ಎನ್.ಇಂದಿರಾ: ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಹೈನುಗಾರಿಕೆಗೆ ಒಗ್ಗಿ ಹೋಗಿದ್ದಾರೆ. ನಿತ್ಯವೂ ಸಂಜೆ ಹಾಲು ತೆಗೆದುಕೊಂಡು ಹೋಗಿ ಡೇರಿಗೆ ಹಾಕಿ ಬರುತ್ತಾರೆ. ಹಸು ಸಾಕಿ, ತರಕಾರಿ ಬೆಳೆದು ಗ್ರಾಮದಲ್ಲೆ ವಾಸ ಮಾಡಬೇಕು. ಗ್ರಾಮೀಣ ಜನರು ಯಾವುದೇ ಕಾರಣಕ್ಕು ನಗರಗಳಿಗೆ ಹೋಗಬಾರದು. ನಗರ ಪ್ರದೇಶದ ಜನರೇ ಹಳ್ಳಿಗೆ ಬಂದು ಖರೀದಿಸುವಂತಹ ವಾತಾವರಣ ನಿರ್ಮಾಣವಾಗಬೇಕು.

ಗ್ರಾಮಗಳು ಅಭಿವೃದ್ದಿ ಹೊಂದಬೇಕು. ನಾವು ಗಾಂಧೀ ತತ್ವ ಮತ್ತು ಗಾಂಧೀ ಮಾರ್ಗ ಅನುಸರಿಸದಿದ್ದರೆ ಉಳಿಗಾಲವಿಲ್ಲ. ಸರಳ ಜೀವನ, ಸರಳ ಆಹಾರ ಕ್ರಮ ಅನುಸರಿಸಿದರೆ ಸಾಕಷ್ಟು ಸಮಸ್ಯೆಗಳು ಇಲ್ಲವಾಗುತ್ತವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?