Thursday, April 25, 2024
Google search engine
Homeತುಮಕೂರು ಲೈವ್ಶಾಸಕ ಮಸಾಲಜಯರಾಂ ತಂದ 922 ಕೋಟಿ ಅನುದಾನ ಎಲ್ಲಿ ?, ದೊಡ್ಡಾಘಟ್ಟ ಚಂದ್ರೇಶ್

ಶಾಸಕ ಮಸಾಲಜಯರಾಂ ತಂದ 922 ಕೋಟಿ ಅನುದಾನ ಎಲ್ಲಿ ?, ದೊಡ್ಡಾಘಟ್ಟ ಚಂದ್ರೇಶ್

Public story


ತುರುವೇಕೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿ ಹಾಗು ತಾಲ್ಲೂಕು ಆಡಳಿತ ವೈಫಲ್ಯ ಖಂಡಿಸಿ ತಾಲ್ಲೂಕು ಜೆಡಿಎಸ್ ವತಿಯಿಂದ 19-07-21 ರ ಸೋಮವಾರದಂದು ಸಾವಿರಾರು ರೈತರು ಮತ್ತು ಜೆಡಿಎಸ್ ಕಾರ್ಯಕರ್ತರೊಂದಿಗೆ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ಮಾಡುವುದಾಗಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.

ಮೋದಿಯವರು ಚುನಾವಣೆಗೆ ಮುನ್ನ ಜನರಿಗೆ ನೀಡಿದ್ದ ಅಚ್ಚೇ ದಿನಗಳ ಭರವಸೆ ಸುಳ್ಳಾಗಿದ್ದು ಈಗ ಜನರಿಗೆ ಮೋದಿಯವರ ಕಡೆಯಿಂದ ಸಂಕಷ್ಠದ ದಿನಗಳು ಮಾತ್ರ ಇವೆ ಎಂದು ವ್ಯಂಗ್ಯವಾಡಿದರು.
ಮೋದಿಯವರ ಬಗ್ಗೆ ಜನರು ಅಪಾರವಾದ ವಿಶ್ವಾಸವನ್ನು ಇಟ್ಟು ಗೆಲ್ಲಿಸಿದ್ದರು. ಆದರೆ ಮೋದಿಯವರು ನೀಡಿದ್ದ ಭರವಸೆಗಳು ಕೆಲವೇ ದಿನಗಳಲ್ಲಿ ಹುಸಿಯಾಗಿವೆ.

ಕೋವಿಡ್ ಬಡವರ ಬದುಕು ಕಸಿದಿರುವ ಹೊತ್ತಿನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ನೂರು ರೂಗಳ ಗಡಿ ದಾಟುತ್ತಿರುವುದು ವಿಷಾದನೀಯ. ಅಡಿಗೆ ಎಣ್ಣೆ ಸಹ 80 ರೂಗಳಿಂದ ಇನ್ನೂರು ರೂಗಳ ಗಡಿ ದಾಟಿರುವುದು ಮೋದಿಯವರು ನೀಡಿದ ಅಚ್ಚೇದಿನಗಳಾ ಇದು ಎಂದು ಕೇಳುವಂತಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಕಡುಬಡವರಿಗೆ ಉಚಿತ ಗ್ಯಾಸ್ ಸಿಲೆಂಡರ್ ಕೊಟ್ಟು ಈಗ ಬೆಲೆ 900 ರೂಗಳತ್ತ ಸಾಗಿದೆ. ಹೀಗಾದರೆ ಅಚ್ಚೇದಿನ ಹೇಗೆ ಸಾಧ್ಯ ಎಂದು ಕೃಷ್ಣಪ್ಪ ಪ್ರಶ್ನಿಸಿದರು. ಇನ್ನು ಗೊಬ್ಬರದ ಬೆಲೆ ಗಗನಕ್ಕೇರಿದ್ದು ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ಮಾತ್ರ ಗೊಬ್ಬರಕ್ಕೆ ಸಬ್ಸಿಡಿ ನೀಡಿ ರೈತರ ಪಾಲಿಗೆ ವರವಾಗಿದ್ದರು.
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಘೋಷಿಸಿರುವ ಪ್ಯಾಕೇಜ್ ಕೇವಲ ರಾಜಕೀಯ ಗಿಮಿಕ್. ಅದೊಂದು ಅವೈಜ್ಞಾನಿಕವಾದ ತೀರ್ಮಾನ ಎಂದು ಆರೋಪಿಸಿದರು.

ಪ್ರತಿಯೊಬ್ಬರ ಕೂಲಿಯೇ ತಿಂಗಳಿಗೆ ಕನಿಷ್ಠ 18 ಸಾವಿರ ಇದೆ. ಆದರೆ ಕೆಲವೇ ಒಂದೆರೆಡು ಸಾವಿರ ಘೋಷಣೆ ಮಾಡಿರುವುದು ಸರಿಯಲ್ಲ.
ಕೋವಿಡ್ ನಿಂದ ಮೃತಪಟ್ಟಿರುವ ಕುಟುಂಬಕ್ಕೆ ಮುಖ್ಯಮಂತ್ರಿಗಳು ಘೋಷಿಸಿರುವ ಒಂದು ಲಕ್ಷ ರೂಗಳ ಪರಿಹಾರವನ್ನು ಐದು ಲಕ್ಷಕ್ಕೆ ಏರಿಸಬೇಕೆಂದು ಆಗ್ರಹಿಸಿದರು.

ದೇಶದಲ್ಲಿ ಕೊರೋನಾದಿಂದ ಲಕ್ಷಾಂತರ ಜನರು ಸಾವನ್ನಪ್ಪಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ನೇರ ಕಾರಣ. ಸಕಾಲದಲ್ಲಿ ಜನರಿಗೆ ಲಸಿಕೆಯನ್ನು ನೀಡದೇ ಬೇಜವಾಬ್ದಾರಿತನ ತೋರಿದ್ದರ ಫಲ ಅಮಾಯಕ ಜನರು ಸಾವನ್ನಪ್ಪಿದರು. ಹಲವಾರು ಕುಟುಂಬಗಳು ಅನಾಥವಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಜವಾಬ್ದಾರಿ ಹೊರಬೇಕು ಎಂದರು.

ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೊರಿಸಿರುವ ಭಾರಿ ತೆರಿಗೆಯನ್ನು ಕಡಿತ ಮಾಡಿದರೆ ಕೇವಲ 40 ರೂಗಳಿಗೆ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ನೀಡಬಹುದು.
ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಮಾತನಾಡಿ, ತಾಲೂಕಿಗೆ ರಾಜ್ಯ ಸರ್ಕಾರದಿಂದ ಈ ಸಾಲಿನಲ್ಲಿ ಸುಮಾರು 922 ಕೋಟಿ ರೂಗಳ ಅನುದಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಡುಗಡೆ ಮಾಡಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ತಾಲೂಕಿಗೆ ಅನುದಾನ ಬಂದಿದ್ದರೆ ಸಂತೋಷ. ಆದರೆ 922 ಕೋಟಿ ರೂಗಳಷ್ಠು ಕಾಮಗಾರಿಗಳನ್ನು ಎಲ್ಲೆಲ್ಲಿ ಮಾಡಲಾಗಿದೆ ಹಾಗೂ ಕಾಮಗಾರಿಗಳಿಗೆ ಬಳಸಿರುವ ಹಣ ಎಷ್ಟು ಎಂಬುದರ ಬಗ್ಗೆ ಶಾಸಕ ಮಸಾಲಾ ಜಯರಾಮ್ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಸ್ವಾಮಿ, ಯುವ ಜೆಡಿಎಸ್ ಅಧ್ಯಕ್ಷ ಬಾಣಸಂದ್ರ ರಮೇಶ್, ಎಪಿಎಂಸಿ ಸದಸ್ಯ ವಿಜಯಕುಮಾರ್, ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯ ಕೆ.ಬಿ.ಹನುಮಂತಯ್ಯ, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೋಳಾಲ ಗಂಗಾಧರ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಮಂಗೀಕುಪ್ಪೆ ಬಸವರಾಜು, ಮಧುಸೂಧನ್, ಭೈತರಹೊಸಳ್ಳಿ ರಾಮಚಂದ್ರು, ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?