Thursday, March 28, 2024
Google search engine
Homeತುಮಕೂರು ಲೈವ್ತುರುವೇಕೆರೆ ಬಿಜೆಪಿಗೆ ಜೈ ಎಂದ ಜೆಡಿಎಸ್ ನವರು

ತುರುವೇಕೆರೆ ಬಿಜೆಪಿಗೆ ಜೈ ಎಂದ ಜೆಡಿಎಸ್ ನವರು

Publicstory


ತುರುವೇಕೆರೆ : ತಾಲೂಕಿನ ಆಯರಹಳ್ಳಿ ಗ್ರಾಮದ ಮುಖಂಡರುಗಳು ಜೆ.ಡಿ.ಎಸ್. ಹಾಗೂ ಕಾಂಗ್ರೇಸ್ ಪಕ್ಷ ತೊರೆದು ಶಾಸಕ ಮಸಾಲಜಯರಾಮ್ ಸಮ್ಮುಖದಲ್ಲಿ ಬಿ.ಜೆ.ಪಿ. ಸೇರ್ಪಡೆಗೊಂಡರು.

ಕಾAಗ್ರೇಸ್ ಹಾಗೂ ಜೆ.ಡಿ.ಎಸ್. ಪಕ್ಷಗಳಲ್ಲಿ ಗುರತಿಸಿಕೊಂಡಿದ್ದ ಮುಖಂಡರುಗಳನ್ನು ಶಾಸಕ ಮಸಾಲಜಯರಾಮ್ ಪಕ್ಷಕ್ಕೆ ಆತ್ಮೀಯವಾಗಿ ಬರ ಮಾಡಿಕೊಂಡು ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದ ಸಿದ್ಧಾಂತ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಇತರೆ ಪಕ್ಷಗಳ ಮುಖಂಡರುಗಳು ನಮ್ಮ ಪಕ್ಷವನ್ನು. ಸೇರ್ಪಡೆಗೊಳ್ಳುತ್ತಿರುವುದು ಸಂತಸದ ವಿಚಾರ ಎಂದರು.

ಕೆಲ ವರ್ಷಗಳಿಂದ ಕೇವಲ ಮತಬ್ಯಾಂಕ್ ರೀತಿಯಲ್ಲಿ ಅನೇಕ ಗ್ರಾಮದ ಜನತೆಯನ್ನು ಬಳಸಿಕೊಂಡು ಅಭಿವೃದ್ಧಿಯನ್ನು ಮಾಡಿರಲಿಲ್ಲ. ನಾನು ಶಾಸಕನಾದ ನಂತರ ಅಭಿವೃದ್ಧಿ ವಂಚಿತ ಗ್ರಾಮಗಳಲ್ಲಿ ಅಗತ್ಯ ಕಾಮಗಾರಿಗಳಿಗೆ ಚಾಲನೆ ದೊರಕಿಸಿದ್ದೇನೆ. ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ಶ್ರಮಿಸುವಂತೆ ಮನವಿ ಮಾಡಿದ ಅವರು ಕ್ಷೇತ್ರದ ಜನತೆಯ ಮತದಾರರ ಆಶೋತ್ತರಗಳಿಗೆ ಧ್ವನಿಯಾಗುವೆ ಎಂದರು.

ಆಯರಹಳ್ಳಿ ಗ್ರಾಮದ ಜೆ,ಡಿ,ಎಸ್. ಬೆಂಬಲಿತ ಸದಸ್ಯ ಸಿದ್ದೇಗೌಡ, ಕಾಂಗ್ರೇಸ್ ಪಕ್ಷ ಯತೀಶ್, ಗಿರೀಶ್, ಡಿಪೋ ಮ್ಯಾನೇಜರ್ ಪುಟ್ಟಸ್ವಾಮಿಗೌಡ, ಕಿರಣ್, ರೇವಣ್ಣ, ತಿಲಕ್ , ಗೋಪಿ ಮತ್ತಿತರರು ಬಿ.ಜೆ.ಪಿ. ಪಕ್ಷ ಸೇರಿದ ಪ್ರಮುಖರು.

ಈ ಸಂದರ್ಭದಲ್ಲಿ ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಮೃತ್ಯಂಜಯ, ಗ್ರಾ.ಪಂ. ಅಧ್ಯಕ್ಷ ನಾಗರಾಜ್, ವಿ.ಎಸ್.ಎಸ್.ಎಮ್ . ಅಧ್ಯಕ್ಷ ಪಾಂಡು, ಗುರುಶಾಂತು, ಚನ್ನಕೇಶವ, ಗೌತಮ್, ಸೇರಿದಂತೆ ಅನೇಕ ಕಾರ್ಯಕರ್ತರುಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?