Friday, March 29, 2024
Google search engine
Homeತುಮಕೂರು ಲೈವ್ಇವರೇ‌ ನೋಡಿ‌ ನಮ್ಮ‌ ರಾಮಸ್ವಾಮಿ ಮೇಷ್ಟ್ರು...

ಇವರೇ‌ ನೋಡಿ‌ ನಮ್ಮ‌ ರಾಮಸ್ವಾಮಿ ಮೇಷ್ಟ್ರು…

Publicstory


ತುರುವೇಕೆರೆ: ಹುಟ್ಟೂರಾದ ಕಣತೂರಿನ ಪ್ರಾಥಮಿಕ ಶಾಲೆಯಲ್ಲಿ ಓದಿ ಅದೇ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ 11 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಅಲ್ಲಿನ ಅಪಾರ ಜನಮನ್ನಣೆ ಗಳಿಸಿ ನಿವೃತ್ತರಾಗುತ್ತಿರುವ ಕೆ.ಬಿ.ರಾಮಸ್ವಾಮಿ ಅವರ ಸೇವೆ ಸ್ಮರಣೀಯ ಎಂದು ಬಿಇಒ.ರಂಗಧಾಮಯ್ಯ ತಿಳಿಸಿದರು.

ತಾಲ್ಲೂಕಿನ ಕಣತೂರು ಕ್ಲ್ಲಸ್ಟ್ರ್ ವತಿಯಿಂದ ಹಮ್ಮಿಕೊಂಡಿದ್ದ ನಿವೃತ್ತ ಶಿಕ್ಷಕರುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಣತೂರಿನ ಪ್ರಾಥಮಿಕ ಶಾಲೆಯಲ್ಲಿ ಹೊಸದಾಗಿ ಆಂಗ್ಲಮಾದ್ಯಮ ಶಾಲೆ ತೆರೆಯಲು ಸೇರಿದಂತೆ ಹಲವು ಶಾಲಾಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಲು ಶ್ರಮಿಸಿದ್ದಾರೆ.

ಶಿಕ್ಷಕರು ಪಠ್ಯದ ಮೂಲಕ ಮಕ್ಕಳಿಗೆ ಜ್ಞಾನ ಸಂಪತ್ತನ್ನು ಉಣಬಡಿಸುವ ಜೊತೆಗೆ ಮಕ್ಕಳು ಸಮಾಜದಲ್ಲಿ ಸಾಮರಸ್ಯದಿಂದ ಬದಕುವ ಕಲೆಯನ್ನು ಕಲಿಸಿ ಕೊಡ ಬೇಕಿದೆ.

ನೀವು ಕಲಿಸುವ ಶಿಕ್ಷಣ ಆತನ ತುತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗದೆ ನೊಂದವರ, ಅಶಕ್ತರ, ಶೋಷಿತರ, ದೀನದಲಿತರ, ಬಡವರ ಸಂಕಷ್ಟಗಳಿಗೆ ಸ್ಪಂದಿಸುವ, ಮರುಕಪಡುವ ಆಶಾಕಿರಣವಾಗಿ ಬೆಳೆಯುವಂತರಾಗ ಬೇಕು.

ಶಿಕ್ಷಕರ ವೃತ್ತ ಪವಿತ್ರವಾದದು ಮತ್ತು ಅಷ್ಟೇ ಜವಬ್ದಾರಿಯುತ ಕೆಲಸವೂ ಕೂಡ ಆಗಿದ್ದು ಇಡೀ ಸಮಾಜ ಶಿಕ್ಷಕರ ಕ್ರಿಯೆ ಮತ್ತು ಪ್ರಕ್ರಿಯೆಗಳನ್ನು ಕೂಲಂಕಷವಾಗಿ ಗಮನಿಸುತ್ತದೆ. ಹಾಗಾಗಿ ನಮ್ಮ ಕೆಲಸ ಯಾವಾಗಲೂ ಮತ್ತೊಬ್ಬರಿಗೆ ಮಾರ್ಗದರ್ಶಕವಾಗಿರ ಬೇಕು. ಹಾಗು ನಮ್ಮ ನಿವೃತ್ತಿಯ ನಂತರವೂ ಗೌರವಕ್ಕೆ ಭಾಜನವಾಗುವಂತಿರಬೇಕು ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಲಜಾಕ್ಷಿ, ಸಿಆರ್ಪಿ ಸೋಮಶೇಖರ್, ತಾತಯ್ಯ, ನಂಜುಂಡಪ್ಪ, ಶಾರದ, ಶಿಕ್ಷಕರು, ಮಕ್ಕಳು ಹಾಗು ಗ್ರಾಮಸ್ಥರು ಪಾಲಗೊಂಡಿದ್ದರು.

RELATED ARTICLES

1 COMMENT

  1. Earning a title of role model in teaching profession is not easy, it requires dedication and lots of sacrifices, Ramuswamy mestru is one among them.
    Proud of you mama 👍🏻

Leave a Reply to Manjunath Cancel reply

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?