Friday, March 29, 2024
Google search engine
HomeಜನಮನKpsc: ಸಿರಾದ ಭೂತೇಗೌಡಗೆ 6ನೇ ಶ್ರೇಯಾಂಕ: Dysp ಹುದ್ದೆಗೆ ಆಯ್ಕೆ

Kpsc: ಸಿರಾದ ಭೂತೇಗೌಡಗೆ 6ನೇ ಶ್ರೇಯಾಂಕ: Dysp ಹುದ್ದೆಗೆ ಆಯ್ಕೆ

ಲಕ್ಷ್ಮೀಕಾಂತರಾಜು ಎಂಜಿ, 9008777110


ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಗೆಜಿಟೆಡ್ ಪ್ರೊಬೆಷನರಿ ಗ್ರೂಪ್ ಎ‌ ಮತ್ತು ಗ್ರೂಪ್ ಬಿ ಅಧಿಕಾರಿಗಳ ನೇಮಕಾತಿಯ ಫಲಿತಾಂಶ ಪ್ರಕಟಗೊಂಡಿದ್ದು ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ವಡ್ಡನಹಳ್ಳಿ ಗ್ರಾಮದ ಭೂತೇಗೌಡ ಫಲಿತಾಂಶದಲ್ಲಿ ರಾಜ್ಯಕ್ಕೇ ಆರನೇ ಶ್ರೇಯಾಂಕ ಪಡೆದು ಡಿವೈಎಸ್ಪಿ ಹುದ್ದೆಯ ಪಟ್ಟಿಯಲ್ಲಿ ಮೊದಲ ಶ್ರೇಯಾಂಕದೊಂದಿಗೆ ಆಯ್ಕೆಯಾಗಿರುವುದು ತುಮಕೂರು ಜಿಲ್ಲೆಯ ಮಟ್ಟಿಗೆ ಹೆಮ್ಮೆಯೇ ಸರಿ.

2017 ರ ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆಯಲ್ಲಿ ಅರ್ಜಿ ಕರೆದು ಎಲ್ಲ ಪ್ರಕ್ರಿಯೆಗಳೂ ಮುಗಿದು ಡಿ 23 ರಂದು ಫಲಿತಾಂಶ ಪ್ರಕಟಗೊಂಡು ರಾಜ್ಯಕ್ಕೆ ಆರನೇ ಶ್ರೇಯಾಂಕವನ್ನು ಭೂತೇಗೌಡ ಹಾಗೂ ಹರ್ಷವರ್ಧನ ಎಂಬುವರು ಪಡೆದಿರುತ್ತಾರೆ.

ಆರನೇ ಶ್ರೇಯಾಂಕ ಪಡೆದ ಇವರಲ್ಲಿ ವಯೋಮಿತಿಯಲ್ಲಿ ಒಂದು ವರ್ಷ ದೊಡ್ಡವರಾದ ಹರ್ಷವರ್ಧನ ಅವರು ಎಸಿ ರೆವೆನ್ಯೂ ಹುದ್ದೆಗೆ ಆಯ್ಕೆಯಾಗಿ ಭೂತೇಗೌಡ ಅವರು ಡಿವೈಎಸ್ಪಿಯಾಗಿ ಆಯ್ಕೆಯಾಗಿರುವುದು ನೇಮಕಾತಿಗಳ ನಿಯಮದಿಂದ ಭೂತೇಗೌಡರಿಗೆ ಎಸಿ ಹುದ್ದೆ ತಪ್ಪಿರುವುದು ಬೇಸರದ ಸಂಗತಿಯಾಗಿದೆ.

ಸಿರಾ ತಾಲ್ಲೂಕಿನ‌ ವಡ್ಡನಹಳ್ಳಿಯ ಕುಂಚಿಟಿಗ ಸಮುದಾಯದ ಶಂಕರಲಿಂಗೇಗೌಡ ,ಶ್ರೀಮತಿ‌ ದಾಕ್ಷಾಯಿಣಿ ದಂಪತಿಯ ಪುತ್ರರಾದ ಭೂತೇಗೌಡರು ಪ್ರಾಥಮಿಕ ಶಿಕ್ಷಣವನ್ನ ಹುಟ್ಟೂರು ವಡ್ಡನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮುಗಿಸಿ ಹೈಸ್ಕೂಲು ಶಿಕ್ಷಣವನ್ನ ಶಿರಾ ನಗರದ ಸೆಂಟಾನ್ಸ್ ಶಾಲೆಯಲ್ಲಿ ಕಲಿತು ಬಿಇ ಪದವಿಯನ್ನ ಬೆಂಗಳೂರಿನ ಆರ್ ಎನ್ ಎಸ್ ಕಾಲೇಜಿನಲ್ಲಿ ಪಡೆದಿರುತ್ತಾರೆ.

ಯಾವುದೇ ಅಧಿಕಾರಿ ಹಿನ್ನೆಲೆ ಹೊಂದಿಲ್ಲದೆ ಸ್ವ ಪರಿಶ್ರಮದಿಂದ ಒಂದು ಸಣ್ಣ ಹಳ್ಳಿಯಿಂದ ಇಂಥಹ ಒಂದು ದೊಡ್ಡ ಹುದ್ದೆಗೇರಿರುವುದು ಸುಲಭದ ಮಾತಲ್ಲ.

ತಾಂತ್ರಿಕ ಪದವಿಯನ್ನ ಪಡೆದರೂ ಕರ್ನಾಟಕ ಆಡಳಿತ ಸೇವೆ ಮಾಡಲೆಂದು ಆಸಕ್ತಿ ವಹಿಸಿ ಸುದೀರ್ಘ ಅಧ್ಯಯನದ ಫಲವಾಗಿ ಎರಡನೇ ಪ್ರಯತ್ನದಲ್ಲಿ ಭೂತೇಗೌಡರು ಯಶಸ್ವಿಯಾಗಿದ್ದಾರೆ. ಮೊದಲನೇಯ ಪ್ರಯತ್ನದಲ್ಲಿ ಸಂದರ್ಶನದ ಹಂತದವರೆಗೂ ಬಂದು ಆಯ್ಕೆಯಾಗಿರಲಿಲ್ಲ.

ಪ್ರತಿಭೆ ಇದ್ದರೆ ಯಾವುದೇ ಶಿಫಾರಸ್ಸು ಇಲ್ಲದಿದ್ದರೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ಡಿವೈಎಸ್ಪಿ ಹುದ್ದೆಯನ್ನ ಪಡೆಯಬಹುದು ಎಂಬುದಕ್ಕೆ ಇವರು ಸಾಕ್ಷಿಯಾಗಿದ್ದಾರೆ.


ಕೆಪಿಎಸ್ಸಿಯ ಫಲಿತಾಂಶದಲ್ಲಿ ರಾಜ್ಯಕ್ಕೆ ಆರನೇಯ ಶ್ರೇಯಾಂಕ ಸ್ಥಾನದಲ್ಲಿದ್ದರೂ ನೇಮಕಾತಿ ನಿಯಾಮಳಿಗಳ ಪ್ರಕಾರ ಪ್ರತಿಸ್ಪರ್ಧಿಗಿಂತ ನಾನು ಒಂದು ವರ್ಷ ಚಿಕ್ಕವನಾಗಿರುವ ಕಾರಣ ಎಸಿ ರೆವೆನ್ಯೂ ಹುದ್ದೆ ಕೈ ತಪ್ಪಿದೆ. ಇದರಿಂದ ಬೇಸರವೇನಿಲ್ಲ. ಆಯ್ಕೆಯಾಗಿರುವ ಡಿವೈಎಸ್ಪಿ ಹುದ್ದೆಗೆ ತೃಪ್ತಿ ಇದೆ. ಮುಂದಿನ ದಿನಗಳಲ್ಲಿ ಐಎಎಸ್ ಅಧಿಕಾರಿ ಆಗುವ ಬಯಕೆ ಇದ್ದು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆಯಲಿದ್ದೇನೆ.


ಭೂತೇಗೌಡ

RELATED ARTICLES

3 COMMENTS

Leave a Reply to Manjula dh gowda Cancel reply

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?