ಪಿ.ಸಾಯಿನಾಥ್ ಅವರೊಂದಿಗೆ ಸಿ.ಕೆ.ಮಹೇಂದ್ರ ಮತ್ತು ನಾನು.
ಡಾ.ಶ್ವೇತಾರಾಣಿ
Tumkuru: ಇಂದು ಬೆಳ್ಳಂಬೆಳಗೆ ಪಿ. ಸಾಯಿನಾಥ್ ಮನೆಗೆ ಬಂದಿದ್ದರು.
ಖ್ಯಾತ ಪತ್ರಕರ್ತರು ಆಗಿರುವ ಪಿ. ಸಾಯಿನಾಥ್ ಅವರ ಎವರಿಬಾಡಿ ಲವ್ಸ್ ಎ ಗುಡ್ ಡ್ರಾಟ್ ಪುಸ್ತಕ ಪತ್ರಿಕೋದ್ಯಮದ ಬೈಬಲ್ ಇದ್ದಂತೆ. ಬಹಳ ವರ್ಷ ಕಾಲ ದಿ ಹಿಂದೂ ಪತ್ರಿಕೆಯ ಗ್ರಾಮೀಣ ವಿಭಾಗದ ಸಂಪಾದಕರಾಗಿದ್ದರು.
ಸಾಯಿನಾಥರ ಎವರಿಬಾಡಿ ಲವ್ಸ್ ಎ ಗುಡ್ ಡ್ರಾಟ್ ಪುಸ್ತಕವನ್ನು ಈ ಟಿ.ವಿಯ ಸಂಪಾದಕರೂ ಆಗಿದ್ದ ಈಗ ಅವಧಿಯ ಪ್ರಧಾನ ಸಂಪಾದಕರಾದ ಬಹುರೂಪಿ ಬುಕ್ ಹಬ್ ನ ಜಿ.ಎನ್. ಮೋಹನ್ ” ಬರ ಅಂದ್ರೆ ಎಲ್ಲರಿಗೂ ಇಷ್ಟ ” ಎಂಬ ಶಿರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ನಮ್ಮ ಮನೆಯಲ್ಲಿಯೇ ಫಿಲ್ಟರ್ ಕಾಫಿ ಜತೆಗೆ ಸಣ್ಣ ಸಮಾರಂಭವೂ ನಡೆದೇ ಹೋಯಿತು. ಮನೆಯಲ್ಲಿಯೇ ಇದ್ದ ನನ್ನ ಪುಸ್ತಕ ‘ಪ್ರೇಮಾ ಭಟ್ ಅವರ ಬದುಕು ಬರಹ’ ಪುಸ್ತಕವನ್ನು ಸಾಯಿನಾಥ್ ಬಿಡುಗಡೆಗೊಳಿಸಿಯೇ ಬಿಟ್ಟರು!.
ಪುಸ್ತಕದ ಮೇಲೆ ಅವರ ಚೆಂದನೆಯ ಹಸ್ತಾಕ್ಷರ ಹಾಕಿದರು. ಇದಕ್ಕೆ ಸಾಕ್ಷಿಯಾಗಿ ಜಿ.ಎನ್.ಮೋಹನ್ ಸರ್, ಹಿರಿಯ ಪತ್ರಕರ್ತ ಸಿ.ಕೆ.ಮಹೇಂದ್ರ, ಅಮ್ಮಾ ಸೌಭಾಗ್ಯಮ್ಮ ಇದ್ದರು.