Thursday, March 28, 2024
Google search engine
Homeಸ್ವಾತಂತ್ರ್ಯ ಸಂಗ್ರಾಮಸ್ಮಾರಕವಾಗಬೇಕಿದ್ದ ಗಾಂಧೀಜಿ ಉಳಿದ ಮನೆ ಈಗ ಪಾಳು!

ಸ್ಮಾರಕವಾಗಬೇಕಿದ್ದ ಗಾಂಧೀಜಿ ಉಳಿದ ಮನೆ ಈಗ ಪಾಳು!

Publicstory/prajayoga

ವರದಿ, ಮಿಥುನ್ ತಿಪಟೂರು

ತಿಪಟೂರು : ಗಾಂಧೀಜಿ ಎಂದರೆ ಸ್ವಚ್ಚತೆ, ಸತ್ಯ ಅಹಿಂಸೆಗೆ ಹೆಸರುವಾಸಿ. ಈಗಿನ ಕೇಂದ್ರ ಸರ್ಕಾರದ ಸ್ವಚ್ಛಭಾರತ ಅಭಿಯಾನಕ್ಕೂ ಕೂಡ ಗಾಂಧೀಜಿಯ ಕನ್ನಡಕವೇ ಮುಖ್ಯವಾಗಿದೆ. ಆದರೆ ತಿಪಟೂರಿನಲ್ಲಿ ಗಾಂಧೀಜಿ ಉಳಿದಿದ್ದ ಮನೆಮಾತ್ರ ಈಗ ಶೌಚಾಲಯಕ್ಕಿಂತ ಕೊಳಕಾಗಿದ್ದು, ಪಾಳು ಬಿದ್ದಿದೆ.

ನಗರದ ಹಳೆಯ ಬಿ.ಡಿ.ಓ ಕಚೇರಿ ಈಗಿನ ತಾಲೂಕು ಪಂಚಾಯ್ತಿಯ ಹಿಂಭಾಗದಲ್ಲಿರುವ ಹಾಳದ ಮನೆಯೇಲ್ಲಿಯೇ ಗಾಂಧೀಜಿ ತಂಗಿದ್ದರು. ತಿಪಟೂರಿಗೆ 1927 ಆಗಸ್ಟ್ 21ರಂದು ಗಾಂಧೀಜಿ ಈಗ ಇರುವ ಮನೆಯಲ್ಲೆ ಉಳಿದುಕೊಂಡು ಬೆಳಿಗ್ಗೆ ಇಲ್ಲಿಯೇ ಇದ್ದ ಸೇದುವ ಬಾವಿಯಲ್ಲಿ ನೀರನ್ನು ಸೇದಿ ಸ್ನಾನವನ್ನು ಮಾಡಿದ್ದ ಬಗ್ಗೆ ಇತಿಹಾಸದಲ್ಲಿ ದಾಖಲಾಗಿದೆ.  ಮಹಾತ್ಮ ಗಾಂಧೀಜಿ ಸ್ವತಂತ್ರ್ಯ ಸಂಗ್ರಾಮದಲ್ಲಿ ಭಾಗಹಿಸುವಂತೆ ಸ್ಥಳೀಯರಿಗೆ ಕರೆನೀಡುವುದು, ದೇಶದ ಬಗ್ಗೆ ಅಭಿಮಾನ ಮೂಡಿಸುವ ಸಲುವಾಗಿ ನಗರಕ್ಕೆ ಬಂದಿದ್ದ ಗಾಂಧಿಜಿ ಈಗಿರುವ ಜಯದೇವ ಹಾಸೆಟಲ್‌ನ ಆವರಣದಲ್ಲಿ ಭಾಷಣಮಾಡಿದ್ದು ಇತಿಹಾಸದಲ್ಲಿದೆ.

ಸ್ವಚ್ಛಭಾರತದ ರಾಯಭಾರಿ ಮನೆ ಮುಂದೆಯೇ ಕಸ ಸಂಗ್ರಹ :

ಗಾಂಧೀಜಿ ತಂಗಿದ್ದ ಮನೆ ಮುಂದಿನ ಪೀಳಿಗೆಗೆ ಇದೊಂದು ಇತಿಹಾಸವನ್ನು ತಿಳಿಸುವ ಸ್ಮಾರಕವಾಗುತ್ತದೆ ಎಂದು ತಿಳಿಯದ ಅಧಿಕಾರಿಗಳು ಆ ಮನೆಯ ಮುಂದಯೇ ಕಸ ಸಂಗ್ರಹಣೆಯ ತೊಟ್ಟಿಯನ್ನು ನಿರ್ಮಿಸಿ ಅಲ್ಲಿಯೇ ಕಸವನ್ನು ವಿಂಗಡಿಸುವ ಕಾರ್ಯವನ್ನು ಮಾಡುತ್ತಿರುವುದು ವಿಪರ್ಯಾಸ. ಕೆಲವು ದಿನಗಳ ಹಿಂದೆ ಇದೇ ಸ್ಮಾರಕದ ಮುಂದೆಯೇ ಜನರು ಶೌಚಾಲಯವನ್ನಾಗಿ ಉಪಯೋಗಿಸುವ ಸ್ಥಿತಿಗೆ ಹೋಗಿದ್ದರು. ಆದರೆ ಕೆಲ ದಿನಗಳ ಹಿಂದಿನಿಂದ ಇಲ್ಲಿನ ಆವರಣದ ಗೇಟಿಗೆ ಬೀಗ ಹಾಕಿರುವುದರಿಂದ ಜನರು ಈ ಕಡೆ ಬರುತ್ತಿಲ್ಲ.

ಸ್ವಾತಂತ್ರ್ಯ ಹೋರಾಟಗಾರರ ವೃತ್ತವೀಗ ಬಾರ್ ವೃತ್ತ :

ನಗರದ ಸಿಂಗ್ರಿ ನಂಜಪ್ಪ ವೃತ್ತದಿಂದ ಹೊರಟ ರಸ್ತೆ ರೈಲ್ವೆ ನಿಲ್ದಾಣವನ್ನು ಸೇರುವ ಸ್ಥಳದಲ್ಲಿ ಸ್ವತಂತ್ರ ಹೋರಾಟಗಾರರ ವೃತ್ತವೆಂದು ಫಲಕವಿದೆ. ಆದರೆ ಇದೇ ಸ್ಥಳವೀಗ ಯಾವಾಗಲು ಮದ್ಯಪಾನ ಪ್ರಿಯರ ವೃತ್ತವಾಗಿ ಮಾರ್ಪಟ್ಟಿದ್ದು, ಸ್ಥಳವು ಗಲೀಜಿನಿಂದ ಕೂಡಿದ್ದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅಪಮಾನವಲ್ಲದೇ ಮತ್ತಿನ್ನೇನು ಅಲ್ಲ. ವೃತ್ತದ ಹೆಸರನ್ನಾದರು ಮಾರ್ಪಡಿಸಿ ಇಲ್ಲ ಸ್ವತಂತ್ರ್ಯ ಹೋರಾಟಗಾರರಿಗೆ ಗೌರವ ಸೂಚಿಸಲು ಸ್ಥಳವನ್ನಾದರು ಸ್ವಚ್ಚಗೊಳಿಸಬೇಕಿದೆ.

ಸ್ಮಾರಕ ಮಾಡಿ ಗಾಂಧೀಜಿ ಕಲ್ಪನೆ ತಿಳಿಸಿ :

ಗಾಂಧೀಜಿ ಇದ್ದರು ಎಂದು ಪೋಟೋ ನೋಡಿ ತಿಳಿದುಕೊಳ್ಳುವ ಈ ಸಮಯದಲ್ಲಿ ಗಾಂಧೀಜಿ ಉಳಿದಿದ್ರು. ಅವರ ಇತಿಹಾಸ, ಸಾಧನೆ ಹಾಗೂ ಚಳವಳಿ ಪೋಟೋ, ಅವರಿಗೆ ಸಂಭಂದಿಸಿದ ಗ್ರಂಥಗಳನ್ನು ಇಟ್ಟು ಒಂದು ಸುಂದರ ಗ್ರಂಥಾಲಯ ಅಥವಾ ವಸ್ತು ಸಂಗ್ರಹಾಲಯವನ್ನಾಗಿ ಮಾಡಿ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಸ್ಮಾರಕವನ್ನಾಗಿ ಮಾಡಬೇಕಾದ ಒತ್ತಾಸೆ ನಮ್ಮ ಜನಪ್ರತಿನಿಧಿಗಳ ಮೇಲೆ ಇದೆ. ಅದನ್ನು ನಮ್ಮ ಅಧಿಕಾರಿಗಳು ಎತ್ತ ಸಾಗಿಸುತ್ತಾರೆ ಎನ್ನುವುದನ್ನು ಕಾಯ್ದು ನೋಡಬೇಕಾಗಿದೆ.

ಗಾಂಧಿ ಮನೆಯನ್ನು ಸ್ಮರಣಾರ್ಥ ಮಾಡುವ ಕನಸು

ತಿಪಟೂರಿನಲ್ಲಿ 1927 ಆ. 21ರಂದು ಈ ಮನೆಯಲ್ಲಿ ಉಳಿದುಕೊಂಡಿದ್ದರು.  ಈಗ ಮನೆಯ ಮುಂದೆ ಕಸದ ತೊಟ್ಟಿಯಿರುವದನ್ನು ಕಂಡು ಬೇಸರವಾಯಿತು. ಗಾಂಧೀಜಿ ಸ್ವಚ್ಚತೆಗೆ ಆದ್ಯತೆ ಕೊಟ್ಟವರು. ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದ ಲಾಂಛನ ಕೂಡ ಗಾಂಧೀಜಿಯ ಕನ್ನಡಕವೇ ಆಗಿದೆ. ಆದರೆ ತಿಪಟೂರು ನಗರದಲ್ಲಿ ಗಾಂಧೀಜಿ ಉಳಿದಿದ್ದ ಮನೆ ಮಾತ್ರ ಹಾಳಾಗಿದ್ದು,  ಮನೆಯ ಮುಂದೆ ಕಸದ ತೊಟ್ಟಿಯನ್ನು ನಿರ್ಮಿಸಲಾಗಿದೆ. ಗಾಂಧೀಜಿಯವರು ಉಳಿದಿದ್ದ ಈ ಮನೆಯನ್ನು  ಸ್ಮರಣಾರ್ಥವನ್ನಾಗಿ ನಿರ್ಮಾಣ ಮಾಡುವ  ಆಸೆಯಿದೆ.

ಕೆ.ಷಡಕ್ಷರಿ, ಮಾಜಿ ಶಾಸಕ, ತಿಪಟೂರು

_______________________________________

ಗಾಂಧಿಗೆ ತಿಜೋರಿಯಾಗಿ ಮನೆ ಕಾಣಿಕೆ

ಗಾಂಧೀಜಿಗೆ ತಿಜೋರಿ ಕೊಟ್ಟಿದ್ದರೂ
ತಿಪಟೂರಿಗೆ ಗಾಂಧೀಜಿ ಬಂದಿದ್ದ ಸಂದರ್ಭದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಸಂಘಟನೆಗಾಗಿ ಅವರು ಕೈನಲ್ಲಿ ನಗದನ್ನು ಹಿಡಿದು ಓಡಾಡುವುದು ಕಷ್ಟವೆಂದು ಸ್ಥಳೀಯ ವರ್ತಕರೊಬ್ಬರು ದೇಣಿಗೆಯಾಗಿ ಈ ಮನೆಯನ್ನು ತಿಜೋರಿಯಾಗಿ ನೀಡದ್ದರಂತೆ, ಆ ತಿಜೋರಿಯನ್ನು ಇಲ್ಲಿಯೇ ಹರಾಜು ಹಾಕಲಾಗಿ ಮತ್ತೊಬ್ಬ ವರ್ತಕರು ಅದನ್ನು 90ರೂ ನೀಡಿ ತೆಗೆದುಕೊಂಡರಂತೆ ಎಂದು ಸ್ಥಳೀಯವಾಗಿ ಒಂದು ಕಥೆಯು ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?