Friday, March 29, 2024
Google search engine
Homeಜನಮನಸೌಲಭ್ಯಗಳು ನಕಲಿ ಕಾರ್ಮಿಕರ ಪಾಲು : ಆರೋಪ

ಸೌಲಭ್ಯಗಳು ನಕಲಿ ಕಾರ್ಮಿಕರ ಪಾಲು : ಆರೋಪ

Publicstory/Prajayoga

ವರದಿ, ಕೆ.ಸಿ.ಪ್ರತಾಪ್‌ ಗೌಡ

ಕುಣಿಗಲ್ : ನಕಲಿ ಕಾರ್ಮಿಕರ ಹಾವಳಿ : ನಕಲಿ ಕಾರ್ಮಿಕರು ನಕಲಿ ಕಾರ್ಡ್ಗಳನ್ನು ಪಡೆದು ಸರ್ಕಾರದ ಸೌಲಭ್ಯ ಲಪಟಾಯಿಸುತ್ತಿದ್ದಾರೆ, ಇದರಿಂದ ಅರ್ಹ ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ಕಾರ್ಮಿಕ ಸಂಘ ರಾಜ್ಯಾಧ್ಯಕ್ಷ ಕೆ.ಎಸ್.ವೆಂಕಟಸುಬ್ಬಯ್ಯ ಆರೋಪಿಸಿದರು.

ಭಾನುವಾರ ಪಟ್ಟಣದ ಕನ್ನಡ ಭವನದಲ್ಲಿ ಕರ್ನಾಟಕ ಕಾರ್ಮಿಕ ಸಂಘದಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ  ಅರಿವು ಮತ್ತು ನೆರವು ಹಾಗೂ ನಾಯಕತ್ವ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಟ್ಟಡ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗೆ ಸರ್ಕಾರ ವಿವಿಧ ಸೌಲಭ್ಯಗಳು ನೀಡುತ್ತಿದೆ, ಈ ಸೌಲಭ್ಯ ಅರ್ಹ ಕಾರ್ಮಿಕರಿಗೆ ಸಿಗದೇ, ನಕಲಿ ಕಾರ್ಮಿಕರ ಪಾಲಾಗುತ್ತಿದೆ. ಇದನ್ನು ಹತ್ತಿಕುವಂತ ಕೆಲಸ ಕಾರ್ಮಿಕ ಇಲಾಖೆ ಮಾಡಬೇಕೆಂದು  ಆಗ್ರಪಡಿಸಿದರು.

ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯಗಳು:

ಸರ್ಕಾರ ಅಸಂಘಟಿತ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು 2006 ರಲ್ಲಿ ಕಾರ್ಮಿಕ ಕಲ್ಯಾಣ ಮಂಡಲಿಯನ್ನು ಸ್ಥಾಪನೆ ಮಾಡಿ ಆ ಮೂಲಕ ಕಟ್ಟಡ ನಿರ್ಮಾಣ ಹಾಗೂ ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಟ್ರೈನಿಂಗ್ ಕಮ್ ಟೂಲ್ ಕಿಟ್ ಸೌಲಭ್ಯ, ಶ್ರಮ ಸಂಸಾರ ಸಾಮರ್ಥ್ಯ ತರಬೇತಿ ಸೌಲಭ್ಯ, ಮನೆ ಖರೀದಿ, ಮನೆ ಕಟ್ಟಲು ಸಹಾಯ ಧನ, ಎರಡು ಲಕ್ಷದವರೆಗೆ ಮುಂಗಡ ಸಾಲಸೌಲಭ್ಯ, ಹೆರಿಗೆ ಸೌಲಭ್ಯ, ಮಹಿಳಾ ಫಲಾನುಭವಿಯ ಮೊದಲು ಎರಡು ಮಕ್ಕಳಿಗೆ ಹೆಣ್ಣು ಮಗುವಿನ ಜನನಕ್ಕೆ 30 ಸಾವಿರ ಹಾಗೂ ಗಂಡು ಮಗುವಿನ ಜನನಕ್ಕೆ 20 ಸಾವಿರ, ಶಿಶುಪಾಲನ ಸೌಲಭ್ಯ, ಅಂತ್ಯಕ್ರಿಯೆಗೆ ನಾಲ್ಕು ಸಾವಿರ ಹಾಗೂ ಎಕ್ಸ್ಗ್ರೀಷಿಯಾ ರೂ 50 ಸಾವಿರ ಸಹಾಯಧನ, ವೈದ್ಯಕೀಯ ಸಹಾಯಧನ, ನೊಂದಾಯಿತ ಫಲಾನುಭವಿ ಹಾಗೂ ಅವರ ಅವಲಭಿತರಿಗೆ 300 ರಿಂದ 10 ಸಾವಿರ ಅವಘಡ ಪರಿಹಾರ, ಮರಣ ಹೊಂದಿದಲ್ಲಿ ಐದು ಲಕ್ಷ, ಶಾಶ್ವತ ದುರ್ಬಲತೆಯಾದಲ್ಲಿ ಎರಡು ಲಕ್ಷ ಮತ್ತು ಭಾಗಶಃ ದುರ್ಬಲತೆಯಾದಲ್ಲಿ ಒಂದು ಲಕ್ಷ, ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ, ಶಸ್ತ್ರಚಿಕಿತ್ಸೆಗಳಿಗೆ ಎರಡು ಲಕ್ಷ, ಮಧುವೆ ಸಹಾಯಧನ, ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮಧುವೆಗೆ ತಲಾ 50 ಸಾವಿರ,  ಎಲ್ಪಿಜಿ ಸಂಪರ್ಕ, ತಾಯಿ, ಮಗು ಸಹಾಯಹಸ್ತ, ಕನ್ನಡಕ, ಶ್ರವಣಯಂತ್ರ, ಕೃತಕ ಕೈ ಕಾಲು ಮತ್ತು ಗಾಲಿ ಖುರ್ಚಿ, ಕೆಎಸ್ಆರ್ಟಿಸಿ ಬಸ್ ಪಾಸ್ ಸೌಲಭ್ಯಗಳಿರುತ್ತವೆ ಎಂದರು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ನೊಂದಣಿಯಾಗಲು ಮತ್ತು ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ, ಈ ಸೌಲಭ್ಯವನ್ನು ಪಡೆದುಕೊಳ್ಳಲು ಸೇವಾ ಸಿಂಧು ಪೋರ್ಟಲ್ ಮುಖಾಂತರ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.

ಕಾರ್ಮಿಕ ಸಂಘದ ರಾಜ್ಯ ಕಾರ್ಯಧ್ಯಕ್ಷೆ ಜಿ.ಶೃತಿ ಮಾತನಾಡಿ, ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಲಿಗೆ ಸಂಪನ್ಮೂಲ ಕ್ರೂಡೀಕರಿಸುವ ನಿಟ್ಟಿನಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣಗಾರರು ಹಾಗೂ ನಿಯೋಜಕರಿಂದ ನಿರ್ಮಾಣದ ವೆಚ್ಚದ ಮೇಲೆ ಶೇ 1ರಷ್ಟು ಶುಲ್ಕವನ್ನು ಸಂಗ್ರಹಣ ಮಾಡಲು ಕೇಂದ್ರ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ ಜಾರಿಗೆ ತಂದಿದ್ದು ಕಟ್ಟಡ ನಿರ್ಮಾಣಕ್ಕೆ ತಗಲುವ ವೆಚ್ಚದ ಹತ್ತು ಲಕ್ಷದ ಮೇಲ್ಪಟ್ಟ ಕಾಮಗಾರಿಯ ವೆಚ್ಚಕ್ಕೆ ಶೇ 1 ರಷ್ಟು ದರವನ್ನು ಸುಂಕವೆಂದು ಕೇಂದ್ರ ಸರ್ಕಾರ ನಿಗಧಿ ಪಡಿಸಿದೆ. ಒಬ್ಬ ಅರ್ಹ ಫಲಾನುಭವಿಯು ನೊಂದಣಿ ಮಾಡಿಕೊಳ್ಳಬೇಕಾದರೆ ವರ್ಷದಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ಮಾಡಿರಬೇಕು, 18 ರಿಂದ 60 ವರ್ಷದೊಳಗಿನ ವಯೋಮಿತಿಯಾಗಿರಬೇಕು ಎಂದು ಮಾಹಿತಿ ನೀಡಿದರು.

ಕಾರ್ಯಗಾರದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ನರಸಿಂಹರಾಜು, ತಾಲೂಕು ಕಾರ್ಮಿಕ ಸಂಘದ ಅಧ್ಯಕ್ಷ ಕೆ.ಸುರೇಶ್, ಮಂಡ್ಯ, ಚಿತ್ರದುರ್ಗ, ತುರುವೇಕೆರೆ, ಶಿರಾ ತುಮಕೂರು ಅಧ್ಯಕ್ಷರಾದ ಪರಮೇಶ್, ಮಾರುತಿ, ಕೆ.ಸಿ.ಪುಟ್ಟರಾಜು, ರಾಮಕ್ಕ, ವಿಜಯಕುಮಾರ್, ಮಂಜುಳ, ಎಸ್.ರವಿಕುಮಾರ್ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?