Thursday, March 28, 2024
Google search engine
Homeಪೊಲಿಟಿಕಲ್ಜನ ಮೆಚ್ಚಿದ ಸದನ ಶೂರ : ಬಡವರ ಪ್ರೀತಿಯ ಸರದಾರ

ಜನ ಮೆಚ್ಚಿದ ಸದನ ಶೂರ : ಬಡವರ ಪ್ರೀತಿಯ ಸರದಾರ

Publicstory/prajayoga

ಹರೀಶ್ ಕಮ್ಮನಕೋಟೆ /

ಸಿದ್ದರಾಮನ ಹುಂಡಿಯಿಂದ ಮುಖ್ಯಂತ್ರಿ ಗಾದಿಗೆ ಏರಿದ ಜನ ನಾಯಕನಿಗೆ ಈಗ 75 ವರ್ಷ. ಇಂದು ಅಭಿಮಾನಿಗಳ ಮನ, ಮನೆಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

ಎಮ್ಮೆ ಕಾಯುತ್ತಿದ್ದ ಹುಡುಗ ರಾಜ್ಯದ ಮುಖ್ಯಂಮತ್ರಿಗಯಾಗಿ ಇತಿಹಾಸ ಸೃಷ್ಟಿಸಿದ್ದು ಸೋಜಿಗ.
ಉಪನ್ಯಾಸಕರಾಗಿ, ವಕೀಲರಾಗಿಯೂ ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಿದ್ದು, ಸಮಾಜವಾದಿ ರಾಮಮನೋಹರ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾಗಿದ್ದ ಸಿದ್ದರಾಮಯ್ಯ ಅವರು, ಸಮಾಜವಾದಿ ಚಿಂತನೆಗೆ ತಮ್ಮನ್ನು ತಾವು ಒಡ್ಡಿಕೊಂಡಿದ್ದರು. ಈ ಕಾರಣಕ್ಕಾಗಿಯೇ ಸಾರ್ವಜನಿಕ ರಂಗದ ಮೇಲೆ ಅತೀವ ಆಸಕ್ತಿ. ಬಡವರು, ದುರ್ಬಲರು ಸಹಾಯಕೇಳಿ ಬಂದಾಗ ತಾವೇ ನ್ಯಾಯಾಲಯದಲ್ಲಿ ವಾದ ಮಂಡಿಸಿ, ಬಸ್ ಚಾರ್ಜ್‌ಗೆ ಹಣವನ್ನೂ ನೀಡಿ ಕಳುಹಿಸುತ್ತಿದ್ದರಂತೆ. ಇಂಥ ಮಹೋನ್ನತ ಕಳಕಳಿ ಇರುವ ಮಾನವತಾವಾದಿ. 
ಕಾಲೇಜು ದಿನಗಳಲ್ಲಿ ಅವರು ಅನುಭವಿಸಿದ್ದ ಹಸಿವು, ಹಣಕಾಸಿನ ಸಮಸ್ಯೆಗಳನ್ನು ಅನುಭವಿಸಿದ ಕಾರಣವೇ ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಸೇರಿದಂತೆ ನಾನಾ ಭಾಗ್ಯಗಳನ್ನು ನೀಡಲು ಸಾಧ್ಯವಾಯಿತು ಎಂದು ಹೇಳಿಕೊಳ್ಳುತ್ತಾರೆ.

ತಾಲೂಕು ಮಂಡಲದಿಂದ ಸಿಎಂ ಗಾದಿಗೆ

ಜನಪರ ರಾಜಕಾರಣ ಮಾಡುವ ಉದ್ದೇಶದಿಂದ ಅವರು ರಾಜಕೀಯಕ್ಕೆ 1978ರ ಅವಧಿಯಲ್ಲಿ ಪಾದಸ್ಪರ್ಶ ಮಾಡಿದರು. ಮೊದಲಿಗೆ ತಾಲೂಕು‌ ಮಂಡಳಿಯ ಅಧ್ಯಕ್ಷರಾಗಿ ನಂತರ, ಮೈಸೂರು ಲೋಕ ಸಭಾ ಕ್ಷೇತ್ರದಿಂದ  1980ರ ಅವಧಿಯಲ್ಲಿ ಮೊಟ್ಟ ಮೊದಲಿಗೆ   ಚುನಾವಣೆಗೆ ಸ್ಪರ್ಧಿಸಿ ಪರಾಭವ ಅನುಭವಿಸಿದರು. ನಂತರ ಅದನ್ನೇ ಪ್ರತಿಷ್ಠೆಯಾಗಿ ತೆಗದುಕೊಂಡು 1983ರ ಚುನಾವಣೆಯಲ್ಲಿ ಚಾಮುಂಡೇಶ್ವರಿಯಿಂದ ಲೋಕದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ವಿಧಾನಾಭೆಗೆ ಪ್ರವೇಶ ಪಡೆದರು.
1985ರಲ್ಲಿ ಎರಡನೇ ಬಾರಿಗೂ ಸ್ಪರ್ಧಿಸಿ ಪಶು ಸಂಗೋಪನಾ ಸಚಿವ, ಸಾರಿಗೆ ಸಚಿವರಾಗಿಯೂ ಸೇವೆ ಸಲ್ಲಿಸಿದರು. ನಂತರ 1991ರಲ್ಲಿ ಜನತಾದಳದೊಂದಿಗೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡರು. 1994ರಲ್ಲಿ ಮತ್ತೇ ವಿಧಾನಸಭೆಗೆ ಪ್ರವೇಶಿಸಿದರು. ಎಚ್.ಡಿ. ದೇವೇಗೌಡ ಮುಖ್ಯಮಂತ್ರಿಯಾಗಿದ್ದ ವೇಳೆ ಸಿದ್ದರಾಮಯ್ಯ ಅವರು ಹಣಕಾಸು ಮಂತ್ರಿಯಾಗಿದ್ದರು. ಕುರಿ ಕಾಯುವವನಿಗೆ ಬಜೆಟ್ ಮಂಡಿಸಲು ಸಾಧ್ಯವಿದೆಯೇ? ಎಂಬ ಸವಾಲು ಸ್ವೀಕರಿಸಿ ಹದಿಮೂರು ಬಜೆಟ್ ಮಂಡಿಸಿದರು. ಇದರಿಂದ ರಾಜ್ಯ, ದೇಶದಲ್ಲೆಡೆ ಸಿದ್ದರಾಮಯ್ಯ ಅವರ ಆರ್ಥಿಕ ತಜ್ಞತೆ ಪ್ರಶಂಸೆಗೆ ಒಳಗಾಯಿತು. 1996ರಲ್ಲಿ ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾದಾಗ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಮತ್ತೆ  2004ರಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿ ಆದರು. ರಾಜಕೀಯ ಕುತಂತ್ರದಿಂದ ಸಿದ್ದರಾಮಯ್ಯ ಅವರು 2006ರಲ್ಲಿ ಜೆಡಿಎಸ್ ನಿಂದ ಉಚ್ಚಾಟನೆಗೊಂಡು ಪ್ರಬಲವಾದ ಅಹಿಂದ ಚಳುವಳಿ ಕಟ್ಟಿದರು. ನಂತರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಹ್ವಾನದ ಮೇರೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಸದನದಲ್ಲಿ ಶುರುವಾಗಿದ್ದ ಗಣಿದಣಿಗಳ ಕದನ ಕಾಳಗಕ್ಕೆ ಸಿದ್ದರಾಮಯ್ಯ ಅವರು ರಣ ಕಹಳೆಯೊಂದಿಗೆ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಬೆಳಸಿ, ತಮ್ಮ ಖದರ್ ಪ್ರದರ್ಶಿಸಿದರು.

ನುಡಿದಂತೆ ನಡೆದ ಜನ ನಾಯಕ

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿಯೊಳಗಾಗಿ ನಡೆಯದಿದ್ದರೆ ನಮ್ಮ ಕೂಡಲ ಸಂಗಮನೆಂತೊಲಿವನಯ್ಯ?
ಎಂಬ ವಚನಕ್ಕೆ ಬದ್ಧವಾಗಿರುವ ವ್ಯಕ್ತಿತ್ವ ಅವರದ್ದು. 2013ರ ಚುನಾವಣೆಯಲ್ಲಿ ಅನುಭವ ಮಂಟಪದ ಆಧಾರದ ಮೇಲೆ ತನ್ನ ಮಂತ್ರಿ ಮಂಡಲದಲ್ಲಿ ಎಲ್ಲಾ ಜಾತಿ ಜನಾಂಗದ ನಾಯಕರಿಗೆ ಅವಕಾಶ ಮಾಡಿಕೊಟ್ಟವರು,  ಪ್ರತೀ ಸರ್ಕಾರಿ ಕಚೇರಿ ಇಲಾಖೆಗಳಲ್ಲಿ ಬಸವಣ್ಣನ ಪಟಗಳನ್ನು ಹಾಕಬೇಂಬ ಅದೇಶ ಜಾರಿಗೆ‌ತಂದವರು. ಅನ್ನದಾಸೋಹದ ಮಾದರಿ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಯಿತು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ಗಳಿಗೆಯಲ್ಲಿ ಅನೇಕ ಜನ ಕಲ್ಯಾಣ ಯೋಜನೆಗಳನ್ನು ಘೋಷಿಸಿಬಿಟ್ಟರು.
ಚುನಾವಣೆಗೂ ಮುನ್ನ ಪಕ್ಷದ ಮ್ಯಾನಿಫ್ಯಾಸ್ಟೋದಲ್ಲಿ 165 ಭರವಸೆಗಳಿದ್ದವು. ಇವುಗಳಲ್ಲಿ 156 ಭರವಸೆಗಳನ್ನು ಈಡೇರಿಸಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡ ಮುಖ್ಯವಂಮತ್ರಿಗಳ ಪೈಕಿ ಇವರು ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ.

ಪ್ರಾದೇಶಿಕ ಸೊಗಡಿನ ನಡತೆ

ಸಿದ್ದರಾಮಯ್ಯ ಅವರು ಪ್ರದೇಶಕ್ಕನುಗುಣವಾಗಿ ಒರಟು ಸ್ವಭಾವ. ಅತ್ಯಂತ ಸಾಮಾಜಿಕ ಕಳಕಳಿ ಇರುವ ನಾಯಕ. ಬಡವರು, ದೀನ ದಲಿತರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ವರ್ಗದವರನ್ನು ಸಮಾನ ದೃಷ್ಟಿಯಿಂದ ಕಾಣುವ ಮಾತೃ ಹೃದಯಿ. ಸರ್ವರಿಗೂ ಸಮಬಾಳು, ಸಮಪಾಲು ಸಿದ್ಧಾಂತದೊಂದಿಗಿನ ರಾಜಕೀಯ ನಡೆ ಪ್ರತಿಯೊಬ್ಬ ರಾಜಕಾರಣಿಗಳಿಗೆ ಮಾದರಿಯಾಗಬೇಕು.

ಜುಬ್ಬ ಪಂಚೆಯೊಂದಿಗೆ ಶಾಲು ಧರಿಸಿ ಬಂದರೆ ಪ್ರಾದೇಶಿಕ ಸೊಗಡಿನ ಹಳ್ಳಿಯೂರಿನ ಗೌಡ ಎನ್ನುವಂತೆ ಕಾಣುತ್ತಾರೆ. ಸಹಜ ಸ್ವಭಾವ, ಮಾತು, ನಡವಳಿಕೆ ಅವರ ಪ್ರತಿಷ್ಠೆಯನ್ನು ಮತ್ತಷ್ಟು ಉಮೇದು ಮಾಡುವುದರಲ್ಲಿ ಅನುಮಾನವಿಲ್ಲ.

ಸಿದ್ದರಾಮಯ್ಯ ವ್ಯಕ್ತಿತ್ವ ಶುದ್ಧ

ಸದನದಲ್ಲಿ ಕಲಾಪದ ವೇಳೆ ಸುರಿಮಳೆ ಗೈಯುವ ಪ್ರಶ್ನೆಗಳಿಗೆ ಆಡಳಿತ ಪಕ್ಷಗಳು ಬೆದರಿ ಹೋಗುತ್ತವೆ. ಲಾ ಪಾಯಿಂಟ್ ಹಾಕಿದಾಗ ಸಚಿವರ ಬಾಯಿ ಕಟ್ಟಿ ತಡವರಿಸುತ್ತರೆ. ಆದರೆ, ಇಷ್ಟು ವರ್ಷಗಳ ಸುಧೀರ್ಘ ಆಡಳಿತದ ಅವಧಿಯಲ್ಲಿ ಒಮ್ಮೆಯೂ ಅಸಂಸದೀಯ ಪದಗಳನ್ನಾಗಲೀ.. ಬಳಸಿಲ್ಲ.
ವಾದಾ ವಾಗ್ವಾದಗಳ ವೇಳೆ ವೈಯಕ್ತಿಕ ದ್ವೇಷ, ನಿಂದನೆ ಎಂದಿಗೂ ತೋರಿಲ್ಲದೇ ಇರುವುದು ಅವರ ವ್ಯಕ್ತಿತ್ವದ ಘನತೆಯನ್ನು ಪ್ರಸ್ತುತ ಪಡಿಸುತ್ತದೆ.
ರಾಜಕೀಯ ಕಾರಣಕ್ಕಾಗಿ ನಾನು ವಿನಾಃ ಕಾರಣ ಯಾರ ಬಗ್ಗೆಯೂ ಮಾತನಾಡುವುದಿಲ್ಲ ಎಂಬ ಮಾತನ್ನೂ ಅವರು ಹಲವು ಬಾರಿ ಉಚ್ಛರಿಸಿದ್ದುಂಟು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?