Thursday, April 25, 2024
Google search engine
Homegovernanceಗಂಜಿ ಕೇಂದ್ರಕ್ಕೆ ಬರುವಂತೆ ಸಂತ್ರಸ್ತರಿಗೆ ಜಿಲ್ಲಾಧಿಕಾರಿ ಮನವಿ

ಗಂಜಿ ಕೇಂದ್ರಕ್ಕೆ ಬರುವಂತೆ ಸಂತ್ರಸ್ತರಿಗೆ ಜಿಲ್ಲಾಧಿಕಾರಿ ಮನವಿ

Publicstory/prajayoga

ಮಧುಗಿರಿ: ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು ತಗ್ಗುಪ್ರದೇಶದಲ್ಲಿರುವ ನಿವಾಸಿಗಳು ಸಮೀಪದ ಗಂಜಿ ಕೇಂದ್ರಕ್ಕೆ ರವಾನೆಯಾಗುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟಿಲ್ ಮನವಿ ಮಾಡಿದ್ದಾರೆ.

ಶಾಲೆಗೆ ರಜೆ ಘೋಷಣೆ

ನದಿ ತೀರದ ಶಾಲೆಗಳಿಗೆ ಎರಡು ದಿನ ರಜೆ ಘೋಷಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಂಬಂಧಿಸಿದ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಕೆರೆ-ಕಟ್ಟೆಗಳಲ್ಲಿ ನೀರು ಕಾಣಲಾಗುತ್ತಿದೆ. ಆದರೆ, ಈ ಬಾರಿಯ ಪೂರ್ವ ಮುಂಗಾರಲ್ಲೇ ಬಹುತೇಕ ಜಲಮೂಲಗಳು ಭರ್ತಿಯಾಗಿವೆ. ವೀರಾಪುರ, ವೀರನಾಗೇನಹಳ್ಳಿ, ರೆಡ್ಡಿ ಹಳ್ಳಿ, ಸೂರನಾಗೇನಹಳ್ಳಿ ಚನ್ನಸಾಗರ ಇಮ್ಮಡಗೊಂಡನಹಳ್ಳಿ ರೆಡ್ ಅರ್ಲಟ್ ಪ್ರದೇಶವೆಂದು ಗುರುತಿಸಲಾಗಿದೆ ಈ ಗ್ರಾಮಗಳು ಜಯಮಂಗಲಿ ನದಿಯ ಸಮೀಪ ವಿರುವುದರಿಂದ ಗ್ರಾಮವು ಸಂಪೂರ್ಣ ವಾಗಿ ಜಲಾವೃತ್ತವಾಗಿದೆ ಹಾಗೂ ಗ್ರಾಮದ 80ಹೆಚ್ಚು ಕುಟುಂಬಗಳನ್ನು ಸ್ಥಳಾಂತರಕ್ಕೆ ಇಗಾಗಲೇ ಸೂಚನೆ ನೀಡಲಾಗಿದ್ದು ಗ್ರಾಮದ ಸರ್ವೋದಯ ಶಾಲೆಯ ಬಳಿ ಗಂಜಿ ಕೇಂದ್ರ ತೆರಯಲು ಸಂಪುರ್ಣ ವಾದ ಸಿದ್ಧತೆಗಳು ಆರಂಭಸಿಲಾಗಿದ್ದು ಸುಮಾರು 15 ವಿದ್ಯುತ್ ಕಂಬಗಳು ನದಿಯ ರಭಸಕ್ಕೆ ಮುರಿದು ಬಿದ್ದಿವೆ ಎಂದರು.

ಸಾರ್ವಜನಿಕರ ಸೇವೆಯಲ್ಲಿ ನಮ್ಮ ಅಧಿಕಾರಿಗಳು 24/7 ಸಿದ್ದರಿದ್ದು ಸಮಸ್ಯೆ ತೊಂದರೆಯಾದಲ್ಲಿ ತಕ್ಷಣ ತಹಶಿಲ್ದಾರ್ ಅಥವ ಉಪವಿಭಾಗಧಿಕಾರಿಗಳಿಗೆ ಕರೆ ಮಾಡಿ ಎಂದರು. ಅವಶ್ಯಕತೆ ಬಿದ್ದಲ್ಲಿ ಜನರ ಸ್ಥಳಾಂತರಕ್ಕಾಗಿ ಬೆಂಗಳೂರಿನಿಂದ ಎರಡು ಬೋಟ್ ಗಳನ್ನು ತರುವ ವ್ಯವಸ್ಥೆ ಮಾಡಲಾಗಿದ್ದು ಎನ್ ಡಿ ಆರ್ ಎಫ್ ತಂಡದ ನೆರವು ಪಡೆಯಲಾಗುತ್ತದೆ ಎಂದರು.

ಈ ವೇಳೆ ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್, ಉಪ ವಿಭಾಗಧಿಕಾರಿ ಸೋಮಪ್ಪ ಕಡಕೋಳ, ತಹಶಿಲ್ದಾರ್ ಸುರೇಶ್ ಆಚಾರ್ ಹಾಗೂ ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?