Thursday, March 28, 2024
Google search engine
Homeಪೊಲಿಟಿಕಲ್ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ: ಕೆ.ಷಡಕ್ಷರಿ

ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ: ಕೆ.ಷಡಕ್ಷರಿ

Publicstory/prajayoga

ತಿಪಟೂರು : ಕಳೆದ 8 ವರ್ಷಗಳಿಂದ ಮೋದಿ ಅಲೆ ಎಂದು ಮತ ಹಾಕಿದ ಪಶ್ಚಾತ್ತಾಪಕ್ಕಾಗಿ ಇಂದು ನಿರುದ್ಯೋಗದ ಅಲೆಯಲ್ಲಿ ಯುವಕರು ಕೊಚ್ಚಿಹೊಗಿದ್ದಾರೆ. ಈಗಲಾದರು ಎಚ್ಚೆತ್ತುಕೊಳ್ಳದಿದ್ದರೆ ಭಾರತಕ್ಕೆ ಉಳಿಗಾವಿಲ್ಲ. ಮತ್ತೆ ಮೋದಿ ಎಂದರೆ ಶ್ರೀಲಂಕಾದಂತೆ ಭಾರತವಾಗುತ್ತದೆ ಎಂದು ಮಾಜಿ ಶಾಸಕ ಕೆ.ಷಡಕ್ಷರಿ ಹೇಳಿದರು.

ತಾಲೂಕಿನ ಮಾದಿಹಳ್ಳಿ ಗ್ರಾಮದಿಂದ ಗಾಂಧಿ ನಗರದಲ್ಲಿ ಸಮಾರೋಪಗೊಂಡ ಸ್ವತಂತ್ರ ಮಹೋತ್ಸವದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮೋದಿ ಎಂಬ ಅಲೆಗೆ ದೇಶವು ಈಗಾಗಲೇ ಕೊಚ್ಚಿ ಹೋಗುತ್ತಿದೆ. ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಅವರು ಕೆಲಸ ನೀಡಿ ಎಂದರೆ ಪಕೋಡ ಮಾರಿ ಎನ್ನುತ್ತಾರೆ. ಕಾಂಗ್ರೆಸ್ 70 ವರ್ಷದಿಂದ ಏನು ಮಾಡಿತ್ತು ಎಂದು ಕೇಳುವ ಮೊದಲು ಬಿಜೆಪಿ 8 ವರ್ಷದಿಂದ ದೇಶಕ್ಕೆ ಏನು ಮಾಡಿದೆ ಎಂಬುದನ್ನು ತಿಳಿಯಲಿ. ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ್ದ ಸಾರ್ವಜನಿಕ ಉದ್ದಿಮೆಗಳನ್ನು ಮಾರಿದ್ದೇ ಇವರ ಸಾಧನೆ ಎಂದರು.

ಪಠ್ಯಪುಸ್ತಕವನ್ನು ತಿರಚುವ ಜೊತೆಗೆ ಸಂವಿದಾನವನ್ನು ತಿರುಚುವುದೇ ಇವರ ಗುರಿ ಆಗಿದೆ. ಇನ್ನು ಪಠ್ಯ ಪುಸ್ತಕಕ್ಕೆ ಸಂಬಂಧಿಸಿದಂತೆ ನಮ್ಮ ಎನ್ಎಸ್‌ಯುಐ ಕಾರ್ಯಕರ್ತರು ಶಿಕ್ಷಣ ಸಚಿವರ ಕಛೇರಿ, ಅವರ ಗೃಹದ ಆವರಣದಲ್ಲೇ ಇದ್ದಿದ್ದರಿಂದ ಅಲ್ಲಿ ಪ್ರತಿಭಟನೆ ಮಾಡಲು ಹೋದರು. ಅದನ್ನೇ ದೊಡ್ಡವಿಷಯವನ್ನಾಗಿ ಮಾಡಿ, ಅವರ ಮೇಲೆ ಗಂಭೀರವಾದ ಪ್ರಕರಣವನ್ನು ಹಾಕಿದರು. ಆದರೆ ಅದೇ ಎಬಿವಿಪಿ ವಿದ್ಯಾರ್ಥಿಗಳು ಅರಗ ಜ್ಞಾನೇಂದ್ರನ ಮನೆ ಮುಂದೆ ಪ್ರತಿಭಟನೆ ಮಾಡಿದ್ದಕ್ಕೆ ಅವರಿಗೆ ಏನು ತಿಳಿಯುವುದಿಲ್ಲ ಎಂದು ಹೇಳುತ್ತಾರೆ.  ಈಗಲಾದರು ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಹಿಡಿಯುವುದು ಖಚಿತ. ಅಂತೆಯೇ ಅನ್ನಭಾಗ್ಯದ ಅಕ್ಕಿಯನ್ನೂ 10 ಕೆ.ಜಿಗೆ ಏರಿಸುವುದು ಖಚಿತವೆಂದರು.

ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡರಾದ ಲೋಕೇಶ್ವರ್, ಸಿ.ಬಿ.ಶಶಿಧರ್, ನ್ಯಾಕೇನಹಳ್ಳಿ ಸುರೇಶ್, ನಿಖಿಲ್ ರಾಜಣ್ಣ, ಅಣ್ಣಯ್ಯ, ಸೈಫುಲ್ಲಾ, ವಿ.ಯೋಗೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು, ನಗರಾಧ್ಯಕ್ಷ ಪ್ರಕಾಶ್, ನಗರಸಭಾ ಸದಸ್ಯರಾದ ಯೋಗೀಶ್, ಮಹೇಶ್, ಮೇಘನ ಸುಜಿತ್, ವಿನುತಾ ತಿಲಕ್ ಸೇರಿದಂತೆ ಹಲವಾರು ಜನರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?