Saturday, April 13, 2024
Google search engine
Homeಪೊಲಿಟಿಕಲ್ಗುಬ್ಬಿ ಶ್ರೀನಿವಾಸ್ ಗೆಲುವಿಗೆ ಸಹಕಾರ : ಆರ್.ರಾಜೇಂದ್ರ ಘೊಷಣೆ

ಗುಬ್ಬಿ ಶ್ರೀನಿವಾಸ್ ಗೆಲುವಿಗೆ ಸಹಕಾರ : ಆರ್.ರಾಜೇಂದ್ರ ಘೊಷಣೆ

Publicstory

ಗುಬ್ಬಿ: ವಿಧಾನ ಪರಿಷತ್ ಚುನಾವಣೆಗೆ ಸಹಕರಿಸಿದ ಗುಬ್ಬಿ ಶಾಸಕರ ಋಣ ನನ್ನ ಮೇಲೆ ಇದೆ. ಮುಂದಿನ  ವಿಧಾನಸಭೆ ಚುನಾವಣೆಯಲ್ಲಿ ಅವರ ಋಣ ತೀರುಸುತ್ತೇನೆ. ಗುಬ್ಬಿಯಲ್ಲಿ ಅವರ ಗೆಲುವಿಗೆ ಸಹಕಾರ ನೀಡುತ್ತೇನೆ ಎಂದು ವಿ.ಪ ಸದಸ್ಯ. ಆರ್.ರಾಜೇಂದ್ರ ತಿಳಿಸಿದರು.

ತಾಲೂಕಿನ ಹಾಗಲವಾಡಿ ಗ್ರಾಮದಲ್ಲಿ  ಎಚ್.ಸಿ.ಚಂದ್ರಶೇಖರ್ ಪೂಜಾರ್, ಗ್ರಾಪಂ ಸದಸ್ಯ ಎಚ್.ಕೆ.ಅನಿಲ್ ಕುಮಾರ್ ಹಾಗೂ ಕರಿಯಮ್ಮ ದೇವಿ ದೇವಾಲಯ ಸಮಿತಿಯ ಎಚ್.ಆರ್ ಕೆಂಪರಾಜು ಅವರು
ಏರ್ಪಡಿಸಿದ್ದ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಅವರಿಗೆ ಅಭಿನಂದನೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಸಂಸದ ಮುದ್ದಹನುಮೇಗೌಡರು ಉತ್ತಮ ರಾಜಕಾರಣಿ. ಬಹಳ ಬುದ್ದಿವಂತರು. ಅವರು ಯಾಕೆ ಬಿಜೆಪಿ ಕಡೆ ಮನಸು ಮಾಡಿದ್ದಾರೆ ಎಂಬ ವಿಷಯ ನಮಗೂ ಗೊತ್ತಾಗುತ್ತಿಲ್ಲ. ಗೌಡರ ಮನವೊಲಿಸುವ ಪ್ರಯತ್ನವನ್ನು ಹಿರಿಯರು ಮಾಡುತ್ತಾರೆಂಬ ವಿಶ್ವಾಸವಿದೆ ಎಂದರು.

ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ, ಹಾಗಲವಾಡಿ  ಚೇಳೂರು ಎರಡು ಹೋಬಳಿಗಳು. ಸಹ ಹಿಂದುಳಿದ ಪ್ರದೇಶವಾಗಿದ್ದು, ಅತಿ ಹೆಚ್ಚು ಬೋರ್ ವೆಲ್ ಗಳು, ಸಾಗುವಳಿ ಚೀಟಿಗಳನ್ನು ಈ ಭಾಗಕ್ಕೆ ಕೊಟ್ಟಿದ್ದೇನೆ. ಅನುದಾನವನ್ನು ಕೂಡ ಪ್ರಾಮಾಣಿಕವಾಗಿ ಈ ಭಾಗಕ್ಕೆ ಕೊಟ್ಟಿದ್ದೇನೆ. ಸುಬೀಕ್ಷವಾಗಿ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿದೆ. ನೀರಾವರಿ ವಿಷಯದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿ ಸ್ವಲ್ಪ ತಡವಾಗಿದೆ. ಪೈಪ್ ಲೈನ್ ಮುಖಾಂತರ ಕಾಮಾಗಾರಿ ಮಾಡಲಾಗಿ ಹಾಗಲವಾಡಿ ಕೆರೆಗೆ ಹೇಮೆ ಹರಿಸಲಾಗುವುದು ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಹಾಗಲವಾಡಿ , ಮಂಚಲದೊರೆ , ಅಳಿಲಘಟ್ಟ , ಶಿವಪುರ , ಹೊಸಕೆರೆ ಗ್ರಾಮ ಪಂಚಾಯ್ತಿ ಸದಸ್ಯರನ್ನ ವಿಧಾನ ಪರಿಷತ್ ಸದಸ್ಯ ಆರ್ ರಾಜೇಂದ್ರ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಜ್ಯೋತಿ ಮಹೇಶ್ ಗ್ರಾ.ಪಂ.ಅಧ್ಯಕ್ಷರು,ನಿರ್ಮಲ ಡಿಸಿಸಿ ಬ್ಯಾಂಕ್ ಸದಸ್ಯರು, ಸಿಂಗದಹಳ್ಳಿ ರಾಜ್ ಕುಮಾರ್,ಮರಿಲಿಂಗಯ್ಯ, ಪಾಂಡುರಂಗಯ್ಯ,ತೆನಾಲಿ ರಾಮಕೃಷ್ಣ,ಅನಿಲ್ ಕುಮಾರ್,ಕರಿಬಸವಯ್ಯ ಶಿವರಾಂ ಪುರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?