Thursday, February 26, 2026
Google search engine
Home Blog Page 253

ಜನ್ಮ‌ದಿನಾಂಕ ಹುಡುಕಲು ಪೊಲೀಸ್ ಬುದ್ಧಿ ಬಳಸುತ್ತಾ…

0

ಧನಂಜಯ


“ಜನುಮ ದಿನ” ದಿನಾಂಕ 18-4-2020. ನನಗೆ 41 ವರ್ಷ ತುಂಬಿದ ದಿನ.ಹುಟ್ಟಿನಿಂದ ಜೀವನ, ಓದಿನಿಂದ ಬುದ್ಧಿ, ಬುದ್ದಿಯಿಂದ ಪ್ರಬುದ್ಧತೆ, ಇವುಗಳಿಗೆ ಪೂರಕವಾಗಿ ವಿವೇಕ.ಇವೆಲ್ಲವನ್ನ ಮೈಗೂಡಿಸಿಕೊಂಡು ಬೆಳಸಿಕೊಂಡದ್ದು ಒಳ್ಳೆಯತನದ ಬದುಕು ಆರಕ್ಕೆರದ ಮೂರಕ್ಕಿಳಿಯದ ಆದರ್ಶ.

ಸದಾ ಯಶಸ್ಸು ಬಯಸುವ ಮನಸ್ಸು ಗೊಂದಲದ ಗೂಡಾದರೂ ಅಲ್ಲಿ ಒಳ್ಳೆಯತನವೇ ಮೇಲುಗೈ.ಆ ಒಳ್ಳೆಯತನದಿಂದ ಕೈ ತಪ್ಪಬಹುದಾಗಿದ್ದ ಅವಕಾಶಗಳೆಲ್ಲಾ ಭಗವಂತನ ಕೃಪೆಯಿಂದ ಕೈ ಹಿಡಿದವು. ಅದಕ್ಕೆ ಏನೋ ನನ್ನ ದೇವರ ಮನೆಯ ಬಾಗಿಲ ಮೇಲೆ ಯಾವಾಗಲೂ ‘ಒಳ್ಳೆಯತನವೇ ದೇವರು’ ಎಂಬ ಸ್ಲೋಗನ್ ಇದೆ.

ನಂಬಿಕೆಯ ದೇವರ ಪಟದ ಮುಂದೆ ಕೂತು ನಿತ್ಯ ಪೂಜಿಸುವಾಗ, ಎಲ್ಲೋ ಯಾರೋ ಪುಣ್ಯಾತ್ಮ ಬರೆದ ಸಾಲುಗಳು ಮಕ್ಕಳ ಗಾಯನದಿಂದ ಕಿವಿಗೆ ಇಂಪು ತಂದು ಒಂದೊಂದೇ ಸಾಲುಗಳ ಲಹರಿಯು ಕೇಳಿಸಲಾರಂಭಿಸಿದಾಕ್ಷಣ ದೇವರ ಮನೆಯಲ್ಲಿ ಮನಸ್ಸು ಮೌನಕ್ಕೆ ಜಾರಿ ಧ್ಯಾನಕ್ಕೆ ಹೊರಳಿ, ಹಾಡಿನ ಸಾಲಿನಂಥ ಜೀವನ ಸಾಗಿಸಲು ಅವಕಾಶ ಮಾಡಿ ಕೊಡೆಂದು ದೇವರಲ್ಲಿ ಮೊರೆಯಿಡುತ್ತದೆ.

“ಇನ್ನಷ್ಟು ಬೇಕೆನ್ನುವ ಹೃದಯಕ್ಕೆ ನೆಮ್ಮದಿಯು ಎಲ್ಲಿವುದು ರಾಮ, ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ, ಕಷ್ಟಗಳ ಕೊಡಬೇಡ ಎನಲಾರೆ ರಾಮ, ಕಷ್ಟ ಸಹಿಸುವ ಸಹನೆ ಕೊಡೆನಗೆ ರಾಮ, ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ, ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ, ಒಳಿತಿನೆಡೆಗೆ ಮುನ್ನೆಡವ ಮನಸ್ಸು ಕೊಡು ರಾಮ” ಜೊತೆಗೆ ಕೈ ಕಾಲು ಚೆನ್ನಾಗಿರುವುವಂತ ದೃಢಕಾಯ ಆರೋಗ್ಯ ಕೊಟ್ಟು ಕಾಪಾಡು. ಉಳಿದೆಲ್ಲಾ ಕಷ್ಟ ಕಾರ್ಪಣ್ಯಗಳನ್ನು ಶ್ರಮ ವಹಿಸಿ ದುಡಿಯುತ್ತಾ, ಸಹನೆಯಿಂದ ಎದುರಿಸುತ್ತೇನೆ.

ನೀ ಕೊಡುವ ಭಾಗ್ಯದ ಜೊತೆಗೆ ನಾ ಜತನದಿಂದ ಕಾಪಾಡಿಕೊಳ್ಳಬೇಕಾದ ಆರೋಗ್ಯ ಭಾಗ್ಯದಿಂದ ಉಳಿದಿದೆಲ್ಲಾ ಆಯಸ್ಸು ಇನ್ನೂ ಬೋನಸ್ ರೂಪದಲ್ಲಿದಿರುತ್ತದೆಂದು ತಿಳಿದು ನಾಲ್ಕು ಕಾಲ ಜನ ಮೆಚ್ಚುವ ರೀತಿಯಲ್ಲಿ ಬಾಳು ಸವೆಸುತ್ತೇನೆ.

ಇಷ್ಟೆಲ್ಲಾ ಯೋಚಿಸುವ ನನಗೆ ಕೆಲವೇ ವರ್ಷಗಳ ಹಿಂದಿನವರೆಗೂ ನನಗೆ ಹುಟ್ಟಿದ ದಿನವೇ ಖಚಿತವಾಗಿರಲಿಲ್ಲ.ಅಕ್ಷರ ತಿದ್ದಿದ ಸ್ಕೂಲ್ ಮಾಸ್ಟರ್ ಅಪ್ಪನ ಅರೆ ಬರೆ ನೆನಪಿಂದ ಖಚಿತವಾಗಿ ತಿಳಿದುಕೊಳ್ಳಲಾರದೇ ಶಾಲೆಗೆ ಸೇರ್ಪಡೆ ಮಾಡಿಕೊಳ್ಳುವ ಮಾಸದ ಮೊದಲ ದಿನವನ್ನೇ( ಬಹುತೇಕ ಆ ದಶಕದವರೆಗೆ ಹುಟ್ಟಿದವರ ಜನ್ಮ ದಿನವೆಲ್ಲಾ ಹೀಗೆ) ಬರೆದುಕೊಂಡು ಆ ದಿನವೇ ಜನ್ಮ ದಿನವಾಗಿಸಿಬಿಟ್ಟರು.

ಆದರೆ ನಿಜವಾಗಿಯೂ ಏಪ್ರಿಲ್ 18 ನನ್ನ ಹುಟ್ಟಿದ ದಿನ ಎಂಬುದು ಖಚಿತವಾಗಿ ಗೊತ್ತಾದದ್ದು, ಅದೂ ಎಂ ಎ ಮುಗಿದ ಮೇಲೆ, ಉದ್ಯೋಗಕ್ಕೆಂದು ಹುಡುಕಾಟದಲ್ಲಿ ತೊಡಗಿಕೊಂಡಾಗ. ಗೊತ್ತಿಲ್ಲದೇ ವಯಸ್ಸು ಜಾರಿ ಹೋಗುತ್ತಿದ್ದಾಗ. ಮೊದಲೇ ನನ್ನದು ವಯಸ್ಸಿಗೆ ಮೀರಿದ ದೇಹ ಬೆಳವಣಿಗೆ ಬೇರೆ, ಇದನ್ನರಿಯದ,ನನ್ನನ್ನು ಸಹಿಸದ ಜನ ಇಷ್ಟು ವಯಸ್ಸಾದರೂ ಕೆಲಸವಿಲ್ಲವೆಂದು ಕಿಚಾಯಿಸುತ್ತಿದ್ದಾಗ, ಜನ್ಮ ದಿನಾಂಕದ ಬಗ್ಗೆ ಅನುಮಾನ ಮತ್ತು ಗೊತ್ತು ಹಿಡಿಯಬೇಕೆಂಬ ಕುತೂಹಲ ಇವೆರಡೂ ಒಟ್ಟೊಟ್ಟಿಗೆ ಮೂಡಿತು.

ನನ್ನಪ್ಪ ನನ್ನಣ್ಣಂದಿರ ಜಾತಕ ಬರೆಸಿದ್ದರಿಂದ ಅವರ ಜನ್ಮ ದಿನಾಂಕಗಳು ಸರಿಯಾಗಿದ್ದದ್ದು, ಆದರೆ ನನ್ನ ಜಾತಕ ಬರೆಯಬೇಕಿದ್ದ ಪಕ್ಕದೂರಿನ ಅದೇ ಸುಬ್ಬಾಶಾಸ್ತ್ರಿಗಳು ಇದ್ದಕ್ಕಿದ್ದಂತೆ ಇಹಲೋಕ ತ್ಯಜಿಸಿದ್ದರಿಂದ ನನ್ನ ಜಾತಕ ಅಪ್ಪನ ಕೈ ಸೇರಲೂ ಇಲ್ಲ, ಜನ್ಮದಿನಾಂಕ ಖಚಿತ ವಾಗಲೂ ಇಲ್ಲ.

ಕುತೂಹಲದ ವಿಶಾಲತೆ ಜಾಸ್ತಿಯಾಗಿ, ಅಮ್ಮ ಆಗಾಗ ತನ್ನ ನೆನಪೋಲೆಯಿಂದ ಬಿಚ್ಚಿಡುತ್ತಿದ್ದ ಕೆಲವು ಸಹಜ ಸಂಗತಿಗಳಿಂದ ಅಂದರೆ, ನೀನು ಹುಟ್ಟಿದ್ದು ಬುಧವಾರ ಹಾಗಾಗಿ(ಕ್ಷೌರ) ಚೌರ ಮಾಡಿಸಿಕೊಳ್ಳಬೇಡ, ಹುಟ್ಟಿದ ವಾರ ಮಾಡಿಸಿಕೊಳ್ಳಬಾರದೆಂಬುದು ನಮ್ಮ ಸಂಪ್ರದಾಯ.

ಇನ್ನೂಂದು,ನೀನು ಹುಟ್ಟಿದ ದಿನ ಪ್ರತಿ ವರ್ಷ ನೆಡೆಯುವಂತೆ ಆ ವರ್ಷವೂ ನಮ್ಮ ಮನೆ ದೇವರ ಜಾತ್ರೆಯ ಜಲಧಿ ಉತ್ಸವಿತ್ತು.ನಿಮ್ಮ ಚಿಕ್ಕಪ್ಪ ನನಗೆ ಡೆಲಿವರಿ ಆದ ಮೇಲೆ ಆ ಉತ್ಸವಕ್ಕೆ ಹೋದರು.

ಮತ್ತೊಂದು ನೀನು ಹುಟ್ಟುವ ಎರಡು ವರ್ಷ ಮುಂಚೆ ನಿನ್ನಣ್ಣ ಹುಟ್ಟಿದ್ದು,(ಅವನ ಜಾತಕವಿದ್ದುದರಿಂದ ಅವನ ಜನ್ಮ ದಿನ ಕರಾರುವಾಕ್ಕಾಗಿತ್ತು) ಎಂದು ಪದೇ ಪದೇ ಹೇಳುತ್ತಿದ್ದ ಮಾತುಗಳನ್ನು ಆಧಾರವಾಗಿಟ್ಟುಕೊಂಡು, ಜನ್ಮ ದಿನದ ಜಾಡು ಹಿಡಿಯಲು ಪೋಲಿಸ್ ಬುದ್ದಿ ಬಳಸಲು ಮುಂದಾದೆ. ಅದಕ್ಕೆ ಆಧಾರವಾಗಿ ಉಳಿದುಕೊಂಡದ್ದು,ಹುಟ್ಟುವ ದಿನ ಜಲಧಿ ಉತ್ಸವ ಏರ್ಪಡಿಸಿದ್ದ ನಮ್ಮ ಮನೆ ದೇವರಾದ ಬಡವನಹಳ್ಳಿಯ ರಂಗನಾಥ ಸ್ವಾಮಿಯ ದೇವಸ್ಥಾನ. ಹುಡುಕುವ ಕಾಲಕ್ಕೆ ಆ ನಮ್ಮ ಚಿಕ್ಕಪ್ಪನ ಮಗನೇ ಮನೆ ದೇವರ ಕುಲ ಗೌಡಿಕೆಯ ಉತ್ತರಾಧಿಕಾರಿ ಜವಾಬ್ದಾರಿ ಹೊತ್ತಿದ್ದು ನನಗೆ ರೊಟ್ಟಿಯೇ ಜಾರಿ ತುಪ್ಪಕ್ಕೆ ಬಿದ್ದಂತಾಯಿತು.

ಪ್ರತಿ ವರ್ಷ ಚಾಚು ತಪ್ಪದೇ ಜಾತ್ರೆಗೆಂದು ಹೊರಡಿಸುತ್ತಿದ್ದ ಆಹ್ವಾನ ಪತ್ರಿಕೆಗಳನ್ನು ದೇವಸ್ಥಾನದಲ್ಲಿ ಸಂಗ್ರಹಿಟ್ಟಿರುವುದನ್ನು ಅವನಿಂದಲೇ ಖಚಿತ ಪಡಿಸಿಕೊಂಡು, ಹುಟ್ಟಿದ ಇಸವಿಯ ಆಚೀಚಿನ ಮೂರು ಮೂರು ವರ್ಷದ ಪತ್ರಿಕೆಗಳನ್ನು ಹೊರ ತೆಗಿಸಿ ಅಮ್ಮನ ನೆನಪೋಲೆಯ ಮಾತುಗಳಿಗೆ ಹೋಲಿಕೆ ಮಾಡಿದಾಗ 1979 ನೇ ಇಸವಿಯಲ್ಲಿ 18 ನೇ ತಾರೀಖು ಅಮ್ಮ ಹೇಳಿದ ಬುಧವಾರ, ಅವತ್ತೇ ಜಲಧಿ ಉತ್ಸವ .

ನೂರಕ್ಕೆ ನೂರರಷ್ಟು ಹುಟ್ಟಿದ ದಿನದ ಬಗೆಗಿನ ಗೊಂದಲಕ್ಕೆ ತೆರೆ ಬಿದ್ದದ್ದು. ಅವತ್ತಿಂದ ಏಪ್ರಿಲ್ 18 ಹುಟ್ಟಿದ ದಿನವಾಯಿತು. ಈ ಹುಟ್ಟಿದ ದಿನವೋ ಅಥವಾ ಆ ಹುಟ್ಟಿದ ಗಳಿಗೆಯೋ ನನ್ನನ್ನು ಸಾಮಾನ್ಯರಿಗಿಂತ ಸ್ವಲ್ಪ ಭಿನ್ನವಾದ ಆಲೋಚನಾ ಮನಸ್ಸಿನವನನ್ನಾಗಿಸಿ, ಬದುಕಿನ ಪಯಣದಲ್ಲಿ, ಯಶಸ್ಸಿನ ಹಾದಿಯೆಡೆಗೆ ಸಾಗಲು ಪಟ್ಟ ಪರಿಶ್ರಮಕ್ಕೆ ಭಗವಂತನ ಕೃಪೆಯು ನನ್ನ ಪಾಲಿಗೆ ಒಲಿದು,26ನೇ ವರ್ಷಕ್ಕೆ ಸರಿಯಾಗಿ ಉದ್ಯೋಗ, 27ನೇ ವರ್ಷಕ್ಕೆ ಮದುವೆ, ಮೂವತ್ತಾ ನಾಲ್ಕು ವಯಸ್ಸು ಮುಟ್ಟುವ ಮುಂಚೆ ಕಿರುತಿಗೆ, ಆರತಿಗೆಂದು ಮಕ್ಕಳಿಬ್ಬರು. ನಲವತ್ತು ವರ್ಷಕ್ಕೆ ಸರಿಯಾಗಿ ಕನಸು ಕಂಡ ಸ್ಥಳದಲ್ಲೇ ಸ್ವಂತ ಮನೆ.

ನಲವತ್ತೊಂದು ವರ್ಷದ ವಯಸ್ಸು ಮುಗಿದರೂ ಬಿ ಪಿ, ಶುಗರ್ ನಂತ ಸಾಮಾನ್ಯ ಕಾಯಿಲೆಗಳು ದೇಹಕ್ಕೆ ಎಡತಾಕದಂತ ಆರೋಗ್ಯ ಭಾಗ್ಯ.ಇದರ ನಡುವೆ ಹಳೆಯ ನೆನಪುಗಳ ಮೆಲುಕು ಹಾಕಿದರೆ,80ರ ದಶಕದ ಆಸು ಪಾಸಿನಲ್ಲಿ ಹುಟ್ಟಿದ ನಾನು ಮತ್ತು ನನ್ನ ಸಮಕಾಲೀನರೆಲ್ಲರೂ ಎಷ್ಟರ ಮಟ್ಟಿಗೆ ಧನ್ಯರೆನಿಸುವುದೋ ಹಾಗೆ ನತದೃಷ್ಟರೂ ಕೂಡ ಹೌದು ಎಂದೆನಿಸುವುದು ಅಷ್ಟೇ ಸತ್ಯ.

ಕಾರಣ ಪ್ರಾಕೃತಿಕವಾಗಿ ಸೋಸಲ್ಲ್ಪಟ್ಟ ಕೆರೆಯ ಆ ಸಿಹಿ ನೀರನ್ನು ನಿರ್ಭಯವಾಗಿ ಕುಡಿಯುತ್ತಾ, ಈಜುತ್ತಾ , ಜೇನು ಸವಿಯುತ್ತಾ ,ನಲಿವಿನಿಂದ, ಆರೋಗ್ಯಪೂರ್ಣವಾಗಿ ಸಾಗುತ್ತಿದ್ದ ಬದುಕು ಇಂದು ಅಂತರ್ಜಲದ ಮಟ್ಟದ ಕುಸಿತದಿಂದ ಸಿಗುವ ಸ್ವಲ್ಪ ನೀರನ್ನು ತಂತ್ರಜ್ಞಾನದ ಮೂಲಕ ಸೋಸಿ ಯೋಚಿಸಿ ಕುಡಿಯಬೇಕಿದೆ.

ಬಯಲು ಪ್ರದೇಶದಲ್ಲಿ ಧಾರೆಯಾಗಿ ಹರಿವ ನೀರು ನೋಡುವುದು ಕನಸಿನ ಮಾತಾಗಿದೆ. ಒಂದು ತಂತ್ರಜ್ಞಾನದ ಆವಿಷ್ಕರವಾಗಿ ಅದಕ್ಕಿಂತ ಸುಧಾರಿತ ಆವಿಷ್ಕರಕ್ಕೆ ಒಂದು ತಲೆಮಾರಿನ ಅರ್ಧದಷ್ಟು ಆಯಸ್ಸು ಕಳೆಯಬೇಕಾದ ಕಾಲವನ್ನು ನಮ್ಮ ಸಮಕಾಲೀನರು ನಾವು ನೀವುಗಳು ನೋಡಿದ್ದೇವೆ. ಅದೇ 90ರ ದಶಕದ ನಂತರ ಅದರ ವೇಗ ಶರವೇಗದಂತಾಗಿ 2G ಯಿಂದ 5Gಯೇ ಬಂದಾಯ್ತು.

ಬ್ಲಾಕ್ ಅಂಡ್ ವೈಟ್ ಟಿ ವಿ ಯಿಂದ ಕಲರ್ ಪುಲ್ ನ ವಿವಿಧ ಹಂತಗಳನ್ನು ದಾಟಿ ಥಿಯೇಟರ್ ನಲ್ಲಿನ ತರ ಕರ್ವಡ್ ಟಿ ವಿ ಯು ಹೋಗಿ,ಮತ್ತೂ ಸುಧಾರಿತ ಆವಿಷ್ಕರವಾಗುತ್ತಿರುವುದನ್ನು ದಶಕ ತುಂಬುವುದರಲ್ಲಿ ನೋಡಿದ್ದೇವೆ. ಈ ತಂತ್ರಜ್ಞಾನದ ಫಲವಾಗಿ ಅಂಗೈಯಲ್ಲೇ ಎಲ್ಲವೂ ಸಿಗುವಂತಾಗಿರುವುದರಿಂದ ಮರಳಿ ಹಳ್ಳಿಗೆ ಹಿಂದಿರುಗಿದ್ದೇನೆ.

ಇಂದಿನ ಜೀವಿತಾವಧಿಯಲ್ಲಿ, ಹುಟ್ಟು ನಿಧಾನವಾದರೂ ಸಾವಿನ ವೇಗ ಹೆಚ್ಚಿದೆ. ಸಾವಿಗೆ ನಾವು ಹೇಳುವ ಸಾಂತ್ವನ, ದು:ಖತಪ್ತರು ತಡೆದುಕೊಳ್ಳುವ ದುಃಖ ತೀರ ಗಂಭೀರ ಭಾವುಕರೆನಿಸಿಕೊಂಡವರಲ್ಲೂ ಅದು ಕೆಲವೇ ಗಂಟೆಗಳಿಗಿಳಿದಿದೆ.ಕುಡಿತ ಮುಕ್ಕಾಲು ಪಾಲು ಸರ್ವರಿಗೂ ವ್ಯಾಪಿಸಿ,ತಲೆಗೇರುವ ಮತ್ತಿನ ಪರಿಣಾಮದಿಂದ ಭಯ ನಿರ್ಭಯ ರೂಪ ತಾಳಿ,ರಸ್ತೆಯಲ್ಲಿ ತನ್ನದೇ ಲೋಕದಲ್ಲಿ ಸಾಗುವುದರಿಂದ, ತಾನೇ ತಾನಾಗಿ ಧೈರ್ಯ ಬಂದೊದಗುವುದರಿಂದ ದೆವ್ವ ಪಿಶಾಚಿಗಳ ಭಯ ಮತ್ತು ಕಲ್ಪನೆ ಕಡಿಮೆಯಾಗಿದೆ.

ಬೆಳಗಾಗೆದ್ದು, ಭಾವನಾತ್ಮಕ ಒಡನಾಟವಿಟ್ಟುಕೊಂಡಿದ್ದ ಮೂಕ ಪ್ರಾಣಿಗಳಾದ ದನಕರುಗಳ ಸಂಖ್ಯೆ ಕ್ಷೀಣಿಸಿ,ಯಂತ್ರಗಳು ಮಾನವೀಯತೆಗೆ ಮರುಗದವಾಗಿರುವುದರಿಂದ ಮನುಷ್ಯನೂ ಯಂತ್ರದಂತಾಗುತ್ತಿದ್ದಾನೆ.

ಊರುಗಳಲ್ಲಿನ ಯುವಕರೆಲ್ಲಾ ಮದುವೆಯಾದ ಕೂಡಲೇ ಕೂಡು ಕುಟುಂಬದಲ್ಲಿ ತಮ್ಮ ಸ್ವತಂತ್ರತೆಗೆ ಅಡ್ಡಿಯಾಗುವುದೆಂಬ (ಅತಂತ್ರ ಬದುಕಿನೆಡೆಗೆ ತೆರಳಲು) ಕುಂಟು ನೆಪವೊಡ್ಡಿ,ನಗರದ ಸುಲಭ ಸೌಲಭ್ಯಗಳ ಸೌಕರ್ಯಕ್ಕೆ ಮಾರು ಹೋಗಿ ನಗರ ಸೇರುತ್ತಿರುವುದರಿಂದ ಹಳ್ಳಿಗಳೆಲ್ಲಾ ಮುದುಕರ ತಾಣಗಳಾಗಿವೆ.

ಕ್ಯೂನಲ್ಲಿ ನಿಂತು ನಿಂತು ಟಿಕೇಟ್ ಸಿಗದೇ ಬ್ಲಾಕ್ ನಲ್ಲಿ ಹೆಚ್ಚು ದುಡ್ಡು ತೆತ್ತು ಯುದ್ಧ ಗೆದ್ದ ರೀತಿಯಲ್ಲಿ ಸೀಟ್ ನಲ್ಲಿ ಕುಳಿತು ಸಿನಿಮಾ ನೋಡುವ ಕಾಲ ಬದಲಾಗಿ ಬುಕ್ ಮೈ ಶೋ ನಲ್ಲಿ ರೇಟಿಂಗ್ ನೋಡಿ ಹೋಗುವವರನ್ನು ನೋಡುತ್ತಿದ್ದೇವೆ.

ಇಂತಹ ನೂರೆಂಟು ಬದಲಾವಣೆಗಳ ಕಾಲ ಘಟ್ಟದಲ್ಲಿ’ ಕೊರೊನಾ’ವೆಂಬ ಮಹಾಮಾರಿ ವಕ್ಕರಿಸಿ ದಿಕ್ಕು ತೋಚದಂತೆ ಮಾಡಿಟ್ಟಿದೆ.ದುಡ್ಡಿದ್ದವರಿಗೆ ಖರ್ಚು ಮಾಡಲಾಗದ ಸ್ಥಿತಿ, ದಿನದ ದುಡಿಮೆಯಿಂದಲೇ ಬದುಕು ಸಾಗಿಸುತ್ತಿದ್ದವರಿಗೆ ಕೆಲಸವಿಲ್ಲದಾಗಿದೆ.ಉತ್ಸಾಹದೀ ಕಲಿಯಬೇಕಾದ ಮಕ್ಕಳಿಗೆ ಶೈಕ್ಷಣಿಕ ವರ್ಷವನ್ನೇ ಮೂಂದೂಡಬೇಕಾದ ಪರಿಸ್ಥಿತಿ ಬಂದಿದೆ.

ಮನೆಯ ಒಳಗಿನ ನೋವನ್ನು ಮರೆಯಲು ಪಾರ್ಕ್ನಲ್ಲಿ ಕುಳಿತು ಸಮಾನ ವಯಸ್ಕರೊಡನೆ ಹರಟುತ್ತಿದ್ದ ಹಿರಿಯ ಜೀವಿಗಳು ಮನೆಯೊಳಗೆ ಬಂಧಿಯಾಗಿದ್ದಾರೆ.

ಇಂತಹ ಕೆಟ್ಟ ಕೊರೊನಾ ಕಾಲ ಘಟ್ಟ ದಲ್ಲಿ ನನ್ನ 41ನೇ ಹುಟ್ಟಿದ ದಿನ ಬಂದೊದಗಿದೆ.ನಾನು ಯಾವತ್ತೂ ಕೇಕ್ ಕತ್ತರಿಸಿಯೋ ಇಲ್ಲಾ ಅದ್ಧೂರಿ ಪಾರ್ಟಿ ಮಾಡಿಯೋ ಜನ್ಮ ದಿನವನ್ನು ಆಚರಿಕೊಂಡವನ್ನಲ್ಲ, ಅಂಥ ಮನಸ್ಥಿತಿಯು ನನ್ನದಲ್ಲ.ಅಂದು ಪೂರ್ಣ ಪ್ರಮಾಣದ ಶ್ರಮಜೀವಿಯಾಗಿರಲು ಬಯಸುತ್ತೇನೆ.

ಸಮಾಜದಲ್ಲಿನ ತೀವ್ರಗತಿಯ ಬದಲಾವಣೆ ನಡುವೆ ಇಂದಿಗೂ ಒಳ್ಳೆಯತನವೇ ದೇವರೆಂದು ಧೃಡವಾಗಿ ನಂಬಿ ಅದರ ಫಲವನ್ನು ಅನಭವಿಸಿದ್ದೇನೆ. ಅದುವೇ ಸರಿದಾರಿಯೆಂದು ಮುನ್ನಡೆಯುತ್ತಿರುವ ಈ ನಿಮ್ಮ ಧನಂಜಯ ಇನ್ನಷ್ಟು ಗಟ್ಟಿಯಾಗಿ ನಮ್ಮೆದುರಿಗೆ ನಿಂತು ಸಾಧಿಸಬೇಕಿಂದಿರುವುದನ್ನು ಸಾಧಿಸಿ, ನಾವಂದುಕೂಂಡಂತಿರುವ,ನಾವಿಟ್ಟಿರುವ ನಂಬಿಕೆಯನ್ನು ಉಳಿಸಿ,ಬದಲಾಗದ ಅದೇ ಧನಂಜಯನಾಗಿ ಉಳಿಯಲೆಂದು ಹಾರೈಸಿ.

ನಾವು ಯಾರ(ನಮ್ಮ ನಮ್ಮ ಮಕ್ಕಳ) ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದೇವೋ ಅವರುಗಳಿಗೆ ಈ ರೋಗ ತಾಗದಂತೆ,ಹಾಗೆಯೇ ಬದುಕಲ್ಲಿ ನಮ್ಮ ಆಶ್ರಯವನ್ನೇ,ಸಂತೋಷವನ್ನೇ ನಂಬಿಕೊಂಡಿರುವ,ಮನೆಯ ಹಿರಿಯ ಜೀವಿಗಳಿಗೆ ಈ ರೋಗ ಕಂಟಕಪ್ರಾಯ ವಾಗದಂತೆ ನಾವು ನೀವೆಲ್ಲರೂ ಚಾಚು ತಪ್ಪದೇ ಲಾಕ್ ಡೌನ್ ನಿಯಮಗಳನ್ನು ಪಾಲಿಸಿ,ಅಮೂಲ್ಯ,ಅಪರೂಪದ ಮಾನವ ಸಂಪನ್ಮೂಲವನ್ನ ಉಳಿಸಿ, ದೇಶವನ್ನು ಈ ಮಹಾಮಾರಿಯಿಂದ ಮುಕ್ತಗೊಳಿಸಲು ಕೈಲಾದಷ್ಟು ಶ್ರಮಿಸೋಣ…. ಇಂತಿ ನಿಮ್ಮ ಪ್ರೀತಿಯ ಕುವಿಧ……

ಆಂಧ್ರಪ್ರದೇಶದಿಂದ ವೈ.ಎನ್.ಹೊಸಕೋಟೆಗೆ ಜನ: ಆತಂಕದಲ್ಲಿ ಗ್ರಾಮಸ್ಥರು

Publicstory. in


ವೈಎನ್ ಹೊಸಕೋಟೆ: ಆಂಧ್ರಪ್ರದೇಶದ ಜನತೆ ಅಗತ್ಯ ವಸ್ತುಗಳು ಮತ್ತು ಇನ್ನಿತರ ವ್ಯವಹಾರಕ್ಕಾಗಿ ಹೋಬಳಿ ಕೇಂದ್ರಕ್ಕೆ ಪ್ರತಿನಿತ್ಯ ಆಗಮಿಸುತ್ತಿದ್ದು, ಇವರಿಂದ ಕೊರೊನಾ ಹರಡುವ ಸಾಧ್ಯತೆ ಇದೆ ಎಂದು ವಿವಿಧ ಗ್ರಾಮಗಳ ಸಾರ್ವಜನಿಕರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

https://youtu.be/1uRGWhpvUys
ವೈ.ಎನ್.ಹೊಸಕೋಟೆ ಹೋಬಳಿಯು ಸುತ್ತಲೂ ಆಂದ್ರಪ್ರದೇಶದ ಗಡಿಯನ್ನು ಹೊಂದಿದೆ. ಹೋಬಳಿ ಕೇಂದ್ರದಿಂದ 35 ಕಿಲೋಮೀಟರ್ ದೂರದಲ್ಲಿರುವ ಆಂಧ್ರಪ್ರದೇಶದ ಕಲ್ಯಾಣದುರ್ಗದಲ್ಲಿ ಈಗಾಗಲೇ ಕರೊನಾ ವೈರಸ್ ಸೋಂಕು ದೃಢಪಟ್ಟಿದೆ.


ಕಾರ್ಟೂನ್ ಕಾರ್ನರ್: ಕೆ.ಎಂ.ಮುಸ್ತಾಫ, ರಿಪ್ಪನ್ ಪೇಟೆ


ಅದರಂತೆ 8 ಕಿಲೋಮೀಟರ್ ದೂರದ ಕಂಬದೂರು ಮತ್ತು ಬೆಸ್ತರಹಳ್ಳಿ ಗ್ರಾಮಗಳಲ್ಲಿ ತಲಾ ಒಬ್ಬರನ್ನು ಸೋಂಕಿತರು ಎಂಬ ಅನುಮಾನದೊಂದಿದೆ ಕ್ವಾರಂಟೈನ್ ಮಾಡಲಾಗಿದೆ. ಸೋಂಕು ಪೀಡಿತ ಹಿಂದೂಪುರಕ್ಕೆ ಇಲ್ಲಿಂದ ಹಲವರು ವ್ಯವಹಾರಕ್ಕಾಗಿ ಹೋಗಿ ಬಂದಿರುವ ಉದಾಹರಣೆಗಳಿವೆ. ಇಂತಹ ಸ್ಥಿತಿಯಲ್ಲಿ ಹೋಬಳಿಯ ಸುತ್ತಮುತ್ತಲಿನ ಆಂಧ್ರಪ್ರದೇಶದ ಹಳ್ಳಿಗಳ ಜನತೆ ದಿನಂಪ್ರತಿ ವಿವಿದ ಉದ್ದೇಶಗಳಿಗಾಗಿ ಆಗಮಿಸುತ್ತಿದ್ದಾರೆ. ಒಂದು ವೇಳೆ ಸೋಂಕು ಹೊಂದಿರುವವರು ಈ ರೀತಿ ಹೋಬಳಿ ಕೇಂದ್ರಕ್ಕೆ ಆಗಮಿಸಿದರೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ.


ಕೇಂದ್ರಕ್ಕೆ ಮೂರು ಕಡೆಯಿಂದ ಆಂಧ್ರಪ್ರದೇಶದ ಸಂಪರ್ಕ ಹೊಂದಿಸುವ ರಸ್ತೆಗಳಿವೆ. ದೊಡ್ಡಹಳ್ಳಿ ಮತ್ತು ಸಿದ್ದಾಪುರದ ಬಳಿ ಚೆಕ್ ಪೋಸ್ಟ್ ನಿರ್ಮಿಸಿ ಆಂದ್ರಪ್ರದೇಶದವರು ರಾಜ್ಯಕ್ಕೆ ಬಾರದಂತೆ ತಡೆಯಲಾಗುತ್ತಿದೆ.

ಗಡಿಭಾಗದ ಕಚ್ಚಾರಸ್ತೆಗಳಲ್ಲಿ ಕಂದಕಗಳನ್ನು ತೆಗೆದು ಬೇಲಿಯನ್ನು ಹಾಕಿ ಸಂಚಾರ ಬಂದ್ ಮಾಡಲಾಗಿದೆ. ಗಡಿ ಭಾಗದ ಹಳ್ಳಿಗಳಲ್ಲಿ ಪೋಲಿಸ್ ಕಾವಲು ವ್ಯವಸ್ಥೆ ಮಾಡಲಾಗಿದೆ.

ಆದಾಗ್ಯೂ ಆಂಧ್ರದ ಜನತೆ ಇವೆಲ್ಲವನ್ನು ತಪ್ಪಿಸಿ ದ್ವಿಚಕ್ರ ವಾಹನಗಳಲ್ಲಿ ಕಳ್ಳ ದಾರಿಗಳ ಮೂಲಕ ಹೋಬಳಿ ಕೇಂದ್ರಕ್ಕೆ ಬಂದು ಹೋಗುತ್ತಿದ್ದು, ಇದರಿಂದ ವೈರಸ್ ಹರಡುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಮುಂಜಾನ 4-5 ಗಂಟೆಯಿಂದಲೇ ಗಡಿಗ್ರಾಮಗಳಲ್ಲಿ ವಾಹನಗಳ ಓಡಾಟ ಪ್ರಾರಂಭವಾಗುತ್ತಿದೆ. ಹೋಬಳಿಯ ಭೀಮನಕುಂಟೆ, ದಳವಾಯಿಹಳ್ಳಿ, ಗೌಡತಿಮ್ಮನಹಳ್ಳಿ, ಜಾಲೋಡು, ಮಾರಮ್ಮನಹಳ್ಳಿ ಮತ್ತು ಕುಣಿಹಳ್ಳಿಗಳ ಮೂಲಕ ಆಂದ್ರಿಗರು ಬಂದು ಹೋಗುತ್ತಿದ್ದಾರೆ. ಪೋಲೀಸ್ ವ್ಯವಸ್ಥೆ ಎಷ್ಟೇ ಕಟ್ಟುನಿಟ್ಟಾಗಿ ಕಾವಲಿದ್ದರೂ ಅವರನ್ನು ತಪ್ಪಿಸಿ ಹೋಬಳಿ ಕೇಂದ್ರದ ಮೂಲಕ ವಿವಿಧ ಪ್ರದೇಶಗಳಿಗೆ ಪ್ರಯಾಣಿಸುತ್ತಿರುವುದು ಸಾಮಾನ್ಯ ವಿಷಯವಾಗಿ ಪರಿಣಮಿಸಿದೆ. ಇದು ಹೀಗೆ ಇದು ಮುಂದುವರೆದರೆ ವೈ.ಎನ್.ಹೊಸಕೋಟೆ ಹೋಬಳಿಗೂ ಕರೋನ ವೈರಸ್ ಸೋಂಕುವ ದಿನಗಳು ದೂರ ಇಲ್ಲ ಎನಿಸುತ್ತದೆ.

ಈಗಲಾದರೂ ಸಂಬಂಧಿಸಿದವರು ಈ ಓಡಾಟವನ್ನು ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು. ವಿಶೇಷ ಪೋಲೀಸ್ ದಳದ ಸರ್ಪಗಾವಲು ಹಾಕಬೇಕು ಎಂದು ಹಲವು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರೀನ್ ಕೊ ವತಿಯಿಂದ ಮಾಸ್ಕ್ ವಿತರಣೆ

ಪಾವಗಡ ತಾಲ್ಲೂಕು ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ಗ್ರಾಮಗಳ ಜನತೆಗೆ ಗ್ರೀನ್ ಕೊ ಸೋಲಾರ್ ಕಂಪನಿ ವತಿಯಿಂದ ಮಾಸ್ಕ್ ವಿತರಿಸಲಾಯಿತು.

ಸಾಲಗಾರರಿಗೆ ಸಿಹಿ ಸುದ್ದಿ ಕೊಟ್ಟ ಆರ್ಬಿಐ.

ತುಮಕೂರು:

ಕೊರೊನಾ ಹಿನ್ನಲೆ ದೇಶದಾದ್ಯಂತ ಆರ್ಥಿಕ ವಹಿವಾಟು ನಿಂತು ಹೋಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಶೇ ರಿವರ್ಸ್‌ ರೆಪೊ ದರ ಶೇ. 4ರಷ್ಟು ನಿಗದಿ ಪಡಿಸಿದ್ದ ಆರ್‌ಬಿಐ, ಶುಕ್ರವಾರ 25 ಅಂಶ ಕಡಿತಗೊಳಿಸಿ ಶೇ. 3.75ಕ್ಕೆ ಇಳಿಕೆ ಮಾಡಿದೆ.

ಆರ್‌ಬಿಐ, ಹಣಕಾಸು ವ್ಯವಸ್ಥೆಯಲ್ಲಿನ ಹೆಚ್ಚುವರಿ ಹಣದ ಹರಿವಿಗೆ ಕಡಿವಾಣ ಹಾಕುವ ಉದ್ದೇಶದಿಂದ ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರ ‘ರಿವರ್ಸ್‌ ರೆಪೊ’ ಆಗಿರುತ್ತದೆ.


ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಆರ್ಥಿಕತೆ ಚೇತರಿಕೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. 


ಭಾರತ ಶೇ 1.9ರಷ್ಟು ಸಕಾರಾತ್ಮಕ ಬೆಳವಣಿಗೆ ಕಾಣಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಅಂದಾಜು ಮಾಡಿದೆ. ಇದು ಜಿ20 ಆರ್ಥಿಕತೆಗಳ ಪೈಕಿ ಅತಿ ಹೆಚ್ಚು ಎಂದರು. 
ಜಾಗತಿಕ ಆರ್ಥಿಕ ಮಾರುಕಟ್ಟೆಗಳಲ್ಲಿ ಏರಿಳಿತ ಮುಂದುವರಿಯಲಿದೆ.

ಕಚ್ಚಾ ತೈಲ ದರದಲ್ಲಿಯೂ ವ್ಯತ್ಯಾಸವಾಗಲಿದೆ. ಸಕಾರಾತ್ಮಕ ಜಿಡಿಪಿ ಕಂಡು ಬರಲಿವೆ ಜಗತ್ತಿನ ಕೆಲವೇ ರಾಷ್ಟ್ರಗಳಲ್ಲಿ ಭಾರತ ಸಹ ಸೇರಿದೆ. 
ಅಂತರರಾಷ್ಟ್ರೀಯ ಹಣಕಾಸು ನಿಧಿ ಅಂದಾಜಿನ ಪ್ರಕಾರ, 2021–22ರಲ್ಲಿ ಭಾರತದ ಆರ್ಥಿಕತೆ ಅತಿ ಹೆಚ್ಚು ಬೆಳವಣಿಗೆ ಕಾಣಲಿದೆ. 

ಲಾಕ್‌ಡೌನ್‌ ಅವಧಿಯಲ್ಲಿ ಇಂಟರ್‌ನೆಟ್‌ ಬ್ಯಾಂಕಿಂಗ್‌ ಅಥವಾ ಮೊಬೈಲ್‌ ಬ್ಯಾಂಕಿಂಗ್‌ನಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಎಟಿಎಂಗಳು ಶೇ. 91ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಿವೆ. ಆರ್‌ಬಿಐ ಕ್ರಮಗಳಿಂದಾಗಿ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹಣದ ಹರಿವು ಕಂಡು ಬಂದಿದೆ. 

ನಬಾರ್ಡ್‌, ಎಸ್‌ಐಡಿಬಿಐ, ಎನ್‌ಎಚ್‌ಬಿ ಸೇರಿದಂತೆ ಹಣಕಾಸು ಸಂಸ್ಥೆಗಳಿಗೆ ₹50,000 ಕೋಟಿ ವಿಶೇಷ ಹಣಕಾಸು ಸೌಲಭ್ಯ ನೀಡಲಾಗುತ್ತದೆ. ಲಾಕ್‌ಡೌನ್‌ ಅವಧಿಯಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ.

ಪ್ರಸ್ತುತ ಚಾಲ್ತಿಯಲ್ಲಿರುವ ಸಾಲಗಳ ಪಾವತಿ ಮೇಲೆ ಬ್ಯಾಂಕ್‌ಗಳು ನೀಡಿರುವ ತಾತ್ಕಾಲಿಕ ತಡೆಗೆ 90 ದಿನಗಳ ಎನ್‌ಪಿಎ ಅನ್ವಯವಾಗುವುದಿಲ್ಲ  .

ದೇಶದ ಕೋವಿಡ್‌–19 ಪರಿಸ್ಥತಿಯನ್ನು ಸಮೀಪದಿಂದ ಆರ್‌ಬಿಐ ಗಮನಿಸುತ್ತಿರುವುದಾಗಿ ಶಕ್ತಿಕಾಂತ ದಾಸ್‌ ಹೇಳಿದರು. ಮುನ್ನೆಲೆಯಲ್ಲಿ ನಿಂತು ಕೊರೊನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮೆಚ್ಚುಗೆ ಸೂಚಿಸಿದರು. 

ಬ್ಯಾಂಕಿಂಗ್‌ ವ್ಯವಸ್ಥೆ ಮುಂದುವರಿಸಲು ಸಹಕಾರಿಯಾಗಿರುವ ಆರ್‌ಬಿಐ ಸಿಬ್ಬಂದಿಯ ಕಾರ್ಯಾಚರಣೆ ನಡೆಸಿರುವುದಾಗಿ ತಿಳಿಸಿದ ಅವರು, ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದರು.

ಕುಂ ವೀ ಕೊಟ್ಟ ‘ರಿಟರ್ನ್ ಗಿಫ್ಟ್’

0

ಜಿ ಎನ್ ಮೋಹನ್


‘ಕಣ್ಣೀರಿನ ಕಡಲಿನ ಪಾಲು ಹಾಸ್ಯದ ಹರಿಗೋಲು’ ಅನ್ನುತ್ತಾರೆ ಟಿ ಪಿ ಕೈಲಾಸಂ.

ಹಾಸ್ಯದ ಮೂಲಕವೇ ಕಣ್ಣೀರಿನ ಕಥೆಗಳನ್ನು ನಮ್ಮೆಲ್ಲರ ಮುಂದಿಟ್ಟದ್ದು ಚಾರ್ಲಿ ಚಾಪ್ಲಿನ್.

ಕುಂ ವೀ ಈಗಿನಂತೆ ಬೆಂಗಳೂರನ್ನು ಆಗ ಇನ್ನೂ ತಮ್ಮದಾಗಿಸಿಕೊಂಡಿರಲಿಲ್ಲ. ಅದು ಫೇಸ್ ಬುಕ್ ಕಾಲವೂ ಅಲ್ಲ. ಒಮ್ಮೆ ಯಾವುದೋ ಕಾರಣಕ್ಕೆ ಫೋನ್ ಗೆ ಸಿಕ್ಕವರು ಚಾರ್ಲಿ ಚಾಪ್ಲಿನ್ ಬಗ್ಗೆ ಒಂದು ಪುಸ್ತಕ ಬರೆಯುತ್ತಿದ್ದೇನೆ ಎಂದರು.

ನನ್ನೊಳಗೆ ಒಂದು ಗುಂಗೀ ಹುಳ ಹೊಕ್ಕಿತು. ‘ನನಗೆ ಮಳೆ ಎಂದರೆ ಇಷ್ಟ. ಏಕೆಂದರೆ ಅದರೊಳಗೆ ನನ್ನ ಕಣ್ಣೀರು ಕಾಣಿಸುವುದಿಲ್ಲವಲ್ಲ’ ಎಂದ ಚಾರ್ಲಿ ಚಾಪ್ಲಿನ್ ಬಗ್ಗೆ ಕನ್ನಡಕ್ಕೆ ನಿಜಕ್ಕೂ ಒಂದು ಒಳ್ಳೆಯ ಕೃತಿಯ ಅಗತ್ಯವಿತ್ತು. ಅದರಲ್ಲೂ ಅದನ್ನು ಕುಂ ವೀ ಬರೆಯುತ್ತಾರೆ ಎಂದರೆ..?

ಹಾಗಾಗಿ ನನಗೆ ಎಲ್ಲಿ ಹೋದರೂ ಚಾರ್ಲಿ ಚಾಪ್ಲಿನ್ ಬಗ್ಗೆ ಪುಸ್ತಕ ಹುಡುಕುವುದು ಕೆಲಸವಾಗಿಹೋಯಿತು. ಆಗ ನಾನು ‘ಪ್ರಜಾವಾಣಿ’ಯ ವರದಿಗಾರನಾಗಿ ಕಲಬುರ್ಗಿಯಲ್ಲಿದ್ದೆ. ಅಲ್ಲಿನ ನವಕರ್ನಾಟಕ, ಸಿದ್ಧಲಿಂಗೇಶ್ವರ, ನೆರೆಯ ಹೈದ್ರಾಬಾದ್ ನ ರಸ್ತೆ ಬದಿ ಅಂಗಡಿಗಳು, ವಿಶಾಲಾಂಧ್ರದಂತಹ ಸ್ಟಾಲ್ ಗಳು, ಬೆಂಗಳೂರಿನಲ್ಲಿದ್ದ ಅಷ್ಟೂ ಪುಸ್ತಕ ತಾಣಗಳು.. ಎಲ್ಲದರಲ್ಲಿಯೂ ನನಗೆ ಬೇಕಾದ ಪುಸ್ತಕಕ್ಕಿಂತ ಚಾಪ್ಲಿನ್ ಪುಸ್ತಕ ಹುಡುಕುವುದೇ ನನ್ನ ಉದ್ಯೋಗವಾಯಿತು.

ಹಾಗೆ ಸಿಕ್ಕ ಪುಸ್ತಕಗಳನ್ನೆಲ್ಲಾ ಒಟ್ಟು ಮಾಡಿ ಕುಂ ವೀ ಅವರಿಗೆ ಕಳಿಸಿಕೊಟ್ಟೆ. ಕುಂ ವೀ ಗೆ ಎಷ್ಟು ಸಂತೋಷವಾಯಿತೆಂದರೆ ಪುಟ್ಟ ಕಾರ್ಡ್ ನಲ್ಲಿ, ತಮ್ಮ ಮುದ್ದಾದ ಅಕ್ಷರಗಳೊಂದಿಗೆ ‘ಥ್ಯಾಂಕ್ಸ್’ ಹೇಳಿದರು.

ಅಷ್ಟಕ್ಕೇ ಸುಮ್ಮನಾಗಲಿಲ್ಲ. ‘ಸಪ್ನಾ’ದವರು ಆ ಕೃತಿಯನ್ನು ಪ್ರಕಟಿಸಿದಾಗ ಅದರಲ್ಲೂ ನನಗೆ ಥ್ಯಾಂಕ್ಸ್ ಹೇಳಿದ್ದರು.

ಇದಾಗಿ ಮುಗಿಯಿತು. ಈ ಮಧ್ಯೆ ನಾನು ಕ್ಯೂಬಾಗೆ ಹೋಗಿ ಬಂದೆ. ಬಂದ ಮೂರು ವರ್ಷಗಳ ನಂತರ ಪ್ರವಾಸ ಕಥನ ಬರೆಯಲು ಕುಳಿತೆ. ಆಗ ಜಿ- ಮೇಲ್ ಕೂಡಾ ಇರಲಿಲ್ಲ, ಗೂಗಲ್ ಕೇಳುವುದೇ ಬೇಡ. ಇಂಟರ್ನೆಟ್ ಇನ್ನೂ ಕಣ್ಣು ಬಿಡುತ್ತಿತ್ತಷ್ಟೇ. ಹಾಗಾಗಿ ಕ್ಯೂಬಾ ಬಗ್ಗೆ ಅಧ್ಯಯನ ಮಾಡಲು ನೂರೆಂಟು ಕಡೆ ಹೋದೆ. ಹಲವು ಪತ್ರಿಕೆಗಳ ಸಂಗ್ರಹಾಲಯಕ್ಕೆ ಹೋದೆ. ಸಾಕಷ್ಟು ಜನರ ಮನೆ ಬಾಗಿಲು ತಟ್ಟಿದೆ. ಬೇಕಾದಷ್ಟು ಮಾಹಿತಿ ನನ್ನ ಕಣಜ ಸೇರಿತು.

ಆದರೆ ಸಮಸ್ಯೆ ಎಂದರೆ ನಾನು ಸಂಗ್ರಹಿಸಿದ ಮಾಹಿತಿಗಳಲ್ಲಿ ಒಂದಷ್ಟು ಬಗೆಹರಿಯದ ಗೊಂದಲಗಳಿದ್ದವು. ಅರ್ಥವಾಗದ ಹೆಸರುಗಳಿದ್ದವು, ಘಟನೆಗಳಿದ್ದವು. ಇಂಗ್ಲಿಷ್ ಮೂಲಕ ಈ ಎಲ್ಲವನ್ನೂ ತಡಕಾಡುತ್ತಿದ್ದ ನನಗೆ ಈ ಮಿಸ್ಸಿಂಗ್ ಲಿಂಕ್ ಗಳನ್ನು ಜೋಡಿಸುವುದೇ ದೊಡ್ಡ ತಲೆನೋವಾಯಿತು. ಅದನ್ನು ಜೋಡಿಸದೆ ಕ್ಯೂಬಾ ಅರ್ಥವೂ ಆಗುತ್ತಿರಲಿಲ್ಲ.

ಈ ಮಧ್ಯೆ ಒಂದು ತಪ್ಪು ಮಾಡಿಬಿಟ್ಟಿದ್ದೆ. ಕ್ಯೂಬಾದ ಬುಕ್ ಸ್ಟೋರಿನಲ್ಲಿ ಹೊಸಬರಿಗಾಗಿಯೇ ಕ್ಯೂಬಾ ಪರಿಚಯಿಸುವ ಗ್ರಾಫಿಕ್ ಪುಸ್ತಕ ಇತ್ತು. ಕೊಳ್ಳಬೇಕು ಎಂದುಕೊಂಡರೂ ನಾನು ಆ ನಂತರ ಇನ್ನೂ ಮುಂದುವರಿಸಬೇಕಾಗಿದ್ದ ಇಂಗ್ಲೆಂಡ್ ಭೇಟಿ ನನಗೆ ಆ ಅವಕಾಶ ನೀಡಿರಲಿಲ್ಲ. ಪ್ರವಾಸ ಕಥನ ಬರೆಯಲು ಕುಳಿತಾಗ ನನಗೆ ಬೇಕಾದದ್ದು ಆ ಪುಸ್ತಕವೇ ಎಂದು ಗೊತ್ತಾಗಿ ಹಳಹಳಿಸುತ್ತಿದ್ದೆ. ಸಾಕಷ್ಟು ದುಃಖದಲ್ಲಿದ್ದೆ.

ಆಗಲೇ ಒಂದು ದಿನ ನಮ್ಮ ಕಚೇರಿಯ ಬಾಗಿಲು ತಟ್ಟಿದ ಪೋಸ್ಟ್ ಮ್ಯಾನ್ ನನಗೊಂದು ಅಂಚೆ ಕೈಗಿತ್ತರು. ಒಂದು ಪುಸ್ತಕ. ತೆರೆದು ನೋಡುತ್ತೇನೆ.ವಾರೆವ್ವಾ ಯಾವ ಪುಸ್ತಕ ನಾನು ಕೊಳ್ಳಲಿಲ್ಲವಲ್ಲಾ, ಅದರಿಂದಾಗಿ ನನ್ನ ಈ ಕೃತಿ ನಿಂತು ಹೋಗುವ ಸಂದರ್ಭ ಬಂತಲ್ಲಾ ಎಂದು ಗೋಳಾಡುತ್ತಿದ್ದೆನೋ ಅದೇ ಪುಸ್ತಕ ನನ್ನ ಕೈನಲ್ಲಿತ್ತು.

ಕುಂ ವೀ ಥೇಟ್ ನನ್ನಂತೆಯೇ ನಾನು ಕ್ಯೂಬಾ ಬಗ್ಗೆ ಬರೆಯುತ್ತಿದ್ದೇನೆ ಎಂದು ಗೊತ್ತಾಗಿ ಊರೆಲ್ಲಾ ಕ್ಯೂಬಾದ ಬಗ್ಗೆ ಪುಸ್ತಕಗಳನ್ನು ಹುಡುಕುತ್ತಿದ್ದರು. ಈಗ ಬೆಲೆ ಕಟ್ಟಲಾಗದ ಅದೇ ಪುಸ್ತಕ ನನ್ನ ಕೈನಲ್ಲಿತ್ತು. ನಾನು ನೋಡಿದ ಪುಸ್ತಕ ಇಂಗ್ಲಿಷ್ ನದ್ದು ಇದು ತೆಲುಗು ಅನುವಾದ ಎನ್ನುವುದು ಬಿಟ್ಟರೆ ಏನೇನೂ ವ್ಯತ್ಯಾಸವಿರಲಿಲ್ಲ.

ನನಗೋ ‘ಎನಗೆ ಬರುತಿದೆ ಜಗದ ಮುದ, ಕುಣಿದಲ್ಲದೆ ನಾ ತಾಳೆನಿದ’ ಎನ್ನುವಷ್ಟು ಸಂತೋಷ. ಕುಂ ವೀ ಗೆ ನಾನು ಕಳಿಸಿದ ಚಾಪ್ಲಿನ್ ಪುಸ್ತಕಗಳಿಂದ ಏನು ಪ್ರಯೋಜನವಾಗಿತ್ತೋ ಗೊತ್ತಿಲ್ಲ ಆದರೆ ನನಗಂತೂ ಈ ಪುಸ್ತಕದಿಂದ ಸೆಸೇಮಳ ಗುಹೆ ಹೊಕ್ಕಲು ಬೇಕಿದ್ದ ಪಾಸ್ ವಾರ್ಡ್ ಸಿಕ್ಕಿ ಹೋಗಿತ್ತು.

ಆದರೆ ಇಲ್ಲೊಂದು ಸಮಸ್ಯೆ ಇತ್ತು. ನನಗೂ ತೆಲುಗಿಗೂ ಮಾರುದೂರ. ಆಗ ನನ್ನ ನೆರವಿಗೆ ಬಂದವರು ಈಗಿನ ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ಹಾಗೂ ಈಗಿನ ಕಲಬುರ್ಗಿ ರಂಗಾಯಣದ ನಿರ್ದೇಶಕರಾದ ಪ್ರಭಾಕರ ಜೋಶಿ ಅವರು. ಅವರಿಬ್ಬರೂ ತಮ್ಮ ಊರು ಸೇಡಂನಲ್ಲಿ ಕುಳಿತು ಇಡೀ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟರು. ಅಲ್ಲಿಯವರೆಗೂ ‘ನನ್ನ ನೀನು ಗೆಲ್ಲಲಾರೆ’ ಎನ್ನುವಂತೆ ಕುಳಿತಿದ್ದ ಮಾಹಿತಿಗಳು ಸಲೀಸಾಗಿ ಪುಸ್ತಕದ ರೂಪು ಪಡೆದವು.

‘ನನ್ನೊಳಗಿನ ಹಾಡು ಕ್ಯೂಬಾ’ ಹೊರಬಂದಾಗ ನಾನೂ ಸಹಾ ಕುಂ ವೀ ಗೆ ಥ್ಯಾಂಕ್ಸ್ ಹೇಳಿದ್ದೇನೆ. ಆಫ್ ಕೋರ್ಸ್, ಮಹಿಪಾಲರೆಡ್ಡಿ ಹಾಗೂ ಪ್ರಭಾಕರ ಜೋಶಿ ಅವರಿಗೂ

ಹಾಗೆ ಚಾಪ್ಲಿನ್ ಮತ್ತು ಕ್ಯೂಬಾ ಕೈಕುಲುಕಿದರು.

ನಿನ್ನೆ ಚಾಪ್ಲಿನ್ ಹುಟ್ಟುಹಬ್ಬ
ಅದಕ್ಕೆ ಇದೆಲ್ಲಾ ನೆನಪಿಗೆ ಬಂದಿತು.

ಮಾಸಿದ ಪಂಚೆ, ಹೆಗಲ ಮೇಲೆ ಟವಲ್‌ ಇವು ಮಾತ್ರ ರೈತರ ಡ್ರೆಸ್‌ ಕೋಡ್ ಆಗಬೇಕೇ…..?‌

2

ರಂಗನಕೆರೆ ಮಹೇಶ್


ತುಮಕೂರಿನಿಂದ ಊರಿಗೆ ಬರಲು KSRTC ಬಸ್ ಹತ್ತಿ ಕುಳಿತಿದ್ದೆ…ಸೀಟ್ ಸಿಕ್ಕದ 3 ಮಂದಿ ವಿದ್ಯಾರ್ಥಿನಿಯರು ಅಸ್ಪಷ್ಟ ಕನ್ನಡ ಭಾಷೆಯಲ್ಲಿ ಚರ್ಚೆಯಲ್ಲಿ ತೊಡಗಿದ್ದರು.

ಕನ್ನಡ ಭಾಷೆಯ ಮಧ್ಯೆ ಹೆಚ್ಚು ಇಂಗ್ಲಿಷ್‌ ಪದಗಳೇ ಬಳಕೆಯಾಗುತ್ತಿದ್ದವು. ಅದರಲ್ಲಿ ಒಬ್ಬ ವಿದ್ಯಾರ್ಥಿನಿ ತನಗೆ ಕನ್ನಡ ಮಾತನಾಡಲು ಬರುವುದೇ ಇಲ್ಲ ಎಂದು ಗರ್ವದಿಂದ ಬೀಗುತ್ತಿದ್ದಳು.

ನಾನು ಅವರ ಮಾತಿನ ಮಧ್ಯೆ ಪ್ರವೇಶಿಸಿ ಕನ್ನಡಿಗರಾಗಿ ಮಾತೃಭಾಷೆಗೆ ಹೀಗೆಲ್ಲಾ ಅವಮಾನ ಮಾಡಬಾರದು ಎಂದು ಅವರನ್ನು ಮೆಲ್ಲನೆ ಮಾತಿಗೆಳೆದು ಕನ್ನಡ ಭಾಷೆಯ ಹಿರಿಮೆ, ಸಾವಿರಾರು ವರ್ಷದ ಇತಿಹಾಸವನ್ನು ಅವರ ಮುಂದೆ ಬಿಚ್ಚಿಟ್ಟೆ. ಇಷ್ಟು ಹೇಳಿದ್ದೆ ತಡ ಅದಲ್ಲೊಬ್ಬ ವಿದ್ಯಾರ್ಥಿನಿ ಸಾರ್ ನೀವು ಏನು ಕೆಲಸ ಮಾಡುತ್ತೀರಾ ಎಂದು ಪ್ರಶ್ನಿಸಿದರು. ಆಗ ನಾನೊಬ್ಬ ರೈತ, ಕೃಷಿಯಲ್ಲಿ ತೊಡಗಿದ್ದೇನೆ ಎಂದು ಹೇಳಿದೆ.

ಆಗ ಮೂವರು ವಿದ್ಯಾರ್ಥಿನಿಯರು ಖಂಡಿತ ನೀವು ರೈತರಲ್ಲ… ಶಿಕ್ಷಕರೋ…ಉಪನ್ಯಾಸಕರೊ…ಅಥವಾ ಬೇರೇನೂ ಇರಬೇಕು ಎಂದು ನನ್ನಲ್ಲಿ ವಾದಿಸಿದರು.

ಏಕೆ ನಾನೇಕೆ ನಿಮಗೆ ರೈತನಾಗಿ ಕಾಣುತ್ತಿಲ್ಲ ಎಂದು ಪ್ರಶ್ನಿಸಿದೆ. ತಕ್ಷಣವೇ ನನ್ನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯನ್ನು ತೋರಿಸಿ ಅವ್ರು ರೈತರಿರ ಬಹುದು. ನೀವು ಮಾತ್ರ ರೈತರಾಗಲು ಸಾಧ್ಯವೇ ಇಲ್ಲ ಎಂದು ವಿದ್ಯಾರ್ಥಿನಿಯರು ಬಹಳ ಹೊತ್ತು ಚರ್ಚಿಸಿದರು.

ನಾನೇಕೆ ನಿಮಗೆ ರೈತನಾಗಿ ಕಾಣುತ್ತಿಲ್ಲ, ಅವರೇಕೆ ನಿಮಗೆ ರೈತರಾಗಿ ಕಾಣುತ್ತಾರೆ ಎಂದು ಪ್ರಶ್ನಿಸಿದೇ. ರೈತರೆಂದರೆ ನಿಮ್ಮ ಪಕ್ಕದಲ್ಲಿ ಕುಳಿರುವರ ಹಾಗೆ ಪಂಚೆ. ಹೆಗಲ ಮೇಲೆ ಟವಲ್ ಹಾಕಿರುತ್ತಾರೆ ಎಂಬ ಡ್ರಸ್ ಕೋಡ್ ಬಗ್ಗೆ ವಿವರಿಸಿದರು. ಹಾಗಾದರೆ ರೈತರು ಪ್ಯಾಂಟ್ ಶರ್ಟ್ ಹಾಕಬಾರದೆ? ಎಂದು ಪ್ರಶ್ನಿಸಿದೆ.

ಆಗ ವಿದ್ಯಾರ್ಥಿಗಳು ನಮ್ಮ ಅನುಭವಕ್ಕೆ ಬಂದಂತೆ ಹಾಗೂ ಪಠ್ಯದಲ್ಲಿರುವಂತೆ ರೈತರು ಪಂಚೆ ಟವಲ್ ಹಾಕಿರುತ್ತಾರೆ. ಅಲ್ಲದೆ ಎಲ್ಲಾ ಕಡೆ ರೈತರ ಚಿತ್ರಗಳನ್ನು ತೋರಿಸುವಾಗ ಮಾಸಿದ ಅಲ್ಲಲ್ಲಿ ಹರಿದ ಬಟ್ಟೆಯ ಭಾವಚಿತ್ರ ಹಾಕಿರುತ್ತಾರೆ ಎಂದು ಸಮಜಾಯಿಸಿ ನೀಡಿದರು.

ಕೊನೆಗೆ ರೈತರು ಸಹ ಮನುಷ್ಯರೇ ಅವರಿಗೆ ನೀವು ತಿಳಿಸಿದ ಡ್ರಸ್ ಮಾತ್ರ ಧರಿಸಬೇಕೇಂಬ ಕಾನೂನು ಇಲ್ಲ. ಹಿಂದಿನಿಂದಲೂ ಅಧಿಕಾರಿಗಳು ಹಾಗೂ ಮಾಧ್ಯಮಗಳು ರೈತರನ್ನು ಟವಲ್‌ ಹಾಗೂ ಪಂಚೆ ಧಿರಿಸಿನಲ್ಲಿ ಬಿಂಬಿಸುತ್ತಾ ಬಂದಿದ್ದಾರೆ. ರೈತರು ಸಹ ತಮಗೆ ಬೇಕಾದ ಧಿರಿಸುಗಳನ್ನು ಧರಿಸಬಹುದು ಎಂದು ವಿದ್ಯಾರ್ಥಿಗಳಲ್ಲಿ ನಂಬಿಕೆ ಬರಿಸುವಷ್ಟರಲ್ಲಿ ಗುಬ್ಬಿ ಬಸ್ ನಿಲ್ದಾಣ ಬಂದಿತ್ತು.

ನನ್ನ ಮನದಲ್ಲಿ ಮೂಡಿದ ಆಶ್ಚರ್ಯಕರ ವಿಷಯವೆಂದರೆ ಅವರೆಲ್ಲ ಗುಬ್ಬಿ ಸುತ್ತಮುತ್ತಲ ಹಳ್ಳಿಯವರಾಗಿದ್ದು, ಅವರ ತಂದೆಯರು ಕೃಷಿ ಬಿಟ್ಟು ಒಬ್ಬರು ಬಡಗಿ, ಮತ್ತೊಬ್ಬರು ಶಿಕ್ಷಕರು, ಇನ್ನೊಬ್ಬರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಆದರೆ ವಾಸ ಮಾತ್ರ ಗುಬ್ಬಿಯಲ್ಲಿದ್ದಾರೆ.

ನಮ್ಮ ಗ್ರಾಮೀಣ ಭಾಗದ ಮಕ್ಕಳಲ್ಲಿಯೇ ರೈತ, ಅವರು ಕೃಷಿ ಬದುಕು ಕಾಣೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ನಗರ ಪ್ರದೇಶದ ಮಕ್ಕಳಿಗೆ ರೈತ ಮತ್ತು ಕೃಷಿಯನ್ನು ಅರ್ಥ ಮಾಡಿಸುವುದು ಹೇಗೆ ಎಂಬ ಯಕ್ಷ ಪ್ರಶ್ನೆ ನನ್ನನ್ನು ಕಾಡುತ್ತಿದೆ.


ಲೇಖಕರಾದ ರಂಗನಕೆರೆ ಮಹೇಶ್ ಪತ್ರಕರ್ತರು.

ತುಮಕೂರು; ಕರೊನಾ ರೋಗಿ ಗುಣಮುಖ: ಯಾರಿಗೂ ಇಲ್ಲ ಸೋಂಕು

ತುಮಕೂರು : ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೋವಿಡ್ 19 ಎರಡು ಪ್ರಕರಣಗಳು ಕಂಡು ಬಂದಿದ್ದವು. ಅದು P 60 ಮತ್ತು P 84. P 60 ಪೇಷಂಟ್ 22 ಮಾರ್ಚ್ ಸಾವನ್ನಪ್ಪಿದ್ದರು. P 84 ಪ್ರಕರಣವನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಸಂಪೂರ್ಣವಾಗಿ ಗುಣಮುಖರಾಗಿ ಇಂದು ಜಿಲ್ಲೆಗೆ ವಾಪಸಾಗಿದ್ದಾರೆ.

P 84 ಅವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಇಸೋಲೇಶನ್ ಮಾಡುವುದಕ್ಕೆ ತಿಳಿಸಲಾಗಿದೆ. ಶಿರಾ ನಗರಕ್ಕೆ ಭೇಟಿ ನೀಡಿ ಅವರ ಮನೆಯವರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಮುಂದಿನ 14 ದಿನಗಳು ಮನೆಯಲ್ಲಿಯೇ ಕ್ವಾರೈಂಟೈನ್ ಆಗಿರಬೇಕು. ಅವರ ಸಂಬಂಧಿಕರದ್ದು ಕೂಡ ಎರಡು ಬಾರಿ ನೆಗೆಟಿವ್ ಬಂದಿರುವುದರಿಂದ ಮನೆಗೆ ಕಳುಹಿಸಲಾಗಿದೆ.

ಇದನ್ನು ಹೊರತುಪಡಿಸಿ ತುಮಕೂರು ಜಿಲ್ಲೆ ಅಥವಾ ಶಿರಾ ತಾಲೂಕಿನಲ್ಲಿ ಯಾವುದೇ ಪ್ರಕರಣ ಕಂಡುಬಂದಿಲ್ಲ, ಹೆಚ್ಚುವರಿಯಾಗಿ ತಬ್ಲಿಖಿ ಜಮಾತ್ ಗೆ ತೆರಳಿದ್ದ ಇತರೆ ವ್ಯಕ್ತಿಗಳ ಸ್ಯಾಂಪಲ್ ಗಳನ್ನು ನೆನ್ನೆ ಮತ್ತೆ ಕಳಿಸಲಾಗಿದೆ ಅದರ ರಿಪೋರ್ಟ್ ಬರುವುದು ಬಾಕಿಯಿದೆ, ಅದು ಬಂದ ನಂತರ ತಿಳಿಸಲಾಗುತ್ತದೆ.

ಮೇ 3ರವರೆಗೆ ಲಾಕ್ಡೌನ್ ಮುಂದುವರೆಯುತ್ತದೆ ಆದ್ದರಿಂದ ಸಾರ್ವಜನಿಕರು ಕಟ್ಟುನಿಟ್ಟಾಗಿ ಸರ್ಕಾರದ ಆದೇಶವನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದರು.

ಅಂಬ್ಯುಲೆನ್ಸ್ ನಲ್ಲಿ ಬಂದರೂ ಸಿಕ್ಕಿಬಿದ್ದರು…

ಪಾವಗಡ: ತಾಲ್ಲೂಕಿನ ಗುಂಡಾರ್ಲಹಳ್ಳಿಗೆ ಬುಧವಾರ ಬಾಡಿಗೆ ಆಧಾರದ ಮೇಲೆ ಜನರನ್ನು ಕರೆತಂದ ಅಂಬ್ಯುಲೆನ್ಸ್ ಅನ್ನು ತಡೆದು ಚಾಲಕನ್ನು ಗ್ರಾಮಸ್ಥರು ಪೊಲೀಸರ ವಶಕ್ಕೆ ಒಪ್ಪಿಸಿದರು.


ಕಾರ್ಟೂನ್ ಕಾರ್ನರ್: ಮುಸ್ತಫ ಕೆ.ಎಂ. ರಿಪ್ಪನ್ ಪೇಟೆ


ಗ್ರಾಮಕ್ಕೆ ಅನುಮಾನಾಸ್ಪದವಾಗಿ ಬಂದ ಅಂಬ್ಯುಲೆನ್ಸ್ ನಿಂದ ಮಹಿಳೆ ಹಾಗೂ ಇತರರು ಇಳಿದಿದ್ದು, ಯಾವುದೇ ರೋಗ ಇಲ್ಲದವರು ಅಂಬ್ಯುಲೆನ್ಸ್ ನಲ್ಲಿ ಬಂದಿರುವ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಅಂಬ್ಯುಲೆನ್ಸ್ ವಶಪಡಿಸಿಕೊಂಡಿದ್ದಾರೆ.

8 ಸಾವಿರ ಹಣ ಪಡೆದು 3 ಮಂದಿಯನ್ನು ಕರೆತಂದು ಗುಂಡಾರ್ಲಹಳ್ಳಿಯಲ್ಲಿ ಇಳಿಸಲಾಗಿದೆ. ಅಂಬ್ಯುಲೆನ್ಸ್ ನಲ್ಲಿ ಬಂದವರು ಯಾವ ಗ್ರಾಮದವರು ಎಂಬ ಬಗ್ಗೆ ಅಧಿಕಾರಿಗಳು ವಿಚಾರಿಸುತ್ತಿದ್ದಾರೆ.

ಒಂದೇ ದಿನ 5 ಟನ್ ತರಕಾರಿ, 3‌ ಟನ್ ಬಾಳೇಕಾಯಿ ವಿತರಿಸಿದ ಸುರೇಶಗೌಡ

Publicstory. in


Tumkuru: ತುಮಕೂರು‌ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡ ಅವರು ಕ್ಷೇತ್ರದ ಬಡವರಿಗೆ ಗುರುವಾರ ಒಂದೇ ದಿನ ಸುಮಾರು 5 ಟನ್ ತರಕಾರಿ ಹಾಗೂ 3 ಟನ್ ಬಾಳೇಕಾಯಿಯನ್ನು ವಿತರಿಸಿದರು.

ತರಕಾರಿ, ಬಾಳೇಕಾಯಿ ಬೆಳೆದು ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡಲು ಈ ಯೋಜನೆ ಹಾಕಿಕೊಂಡಿದ್ದಾರೆ.

ಕ್ಷೇತ್ರದಲ್ಲಿ ತರಕಾರಿ, ಬಾಳೆ ಬೆಳೆದಿರುವ ಸಾವಿರಾರು ರೈತರು ಕರೊನಾ, ಲಾಕ್ ಡೌನ್ ಕಾರಣ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದಾರೆ. ಇನ್ನೊಂದಡೆ, ಜನರಿಗೆ ತರಕಾರಿ ಕೊಳ್ಳಲು ಸಾಧ್ಯವಾಗದೇ ಸಮಸ್ಯೆಯಲ್ಲಿದ್ದಾರೆ. ಹೀಗಾಗಿ ಇಬ್ಬರನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. ಮೇ 3 ರವರೆಗೂ ಇದು ಮುಂದುವರೆಯಲಿದೆ.

ಓದಿ: https://publicstory.in/ತುಮಕೂರು-ಗ್ರಾಮಾಂತರದಲ್ಲಿ-ಸ/

ಕಾರ್ಯಕ್ರಮಕ್ಕೆ ಚಾಲ‌ನೆ ನೀಡಿದ ಸಂಸದೆ ಶೋಭಾ ಕರದ್ಲಾಂಜೆ, ಬಡವರಿಗೆ,‌ರೈತರಿಗೆ ಸಹಾಯ ಮಾಡುವುದು ಧರ್ಮದ ಕೆಲಸವಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಹ ಇದನ್ನೇ ಹೇಳಿದ್ದಾರೆ. ಜನರಿಗೆ ಸಹಾಯ ಹಸ್ತ ಚಾಚುವ ಕೆಲಸವನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಮಾಡಬೇಕು ಎಂದರು.

ಜ್ಯೋತಿ ಗಣೇಶ್, ಮಾಜಿ ಶಾಸಕ ಬಿ.ಸುರೇಶಗೌಡ, ತುಮಕೂರು ವಿ.ವಿ.ಸಿಂಡಿಕೇಟ್ ಸದಸ್ಯೆ ಐಶ್ವರ್ಯ ಸುರೇಶಗೌಡ‌ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಇದ್ದರು.

ಟೊಮೆಟೊ, ಗೆಣಸು ಮತ್ತಿತರ ತರಕಾರಿಗಳನ್ನು ಪ್ಯಾಕ್ ಮಾಡಿ ನೀಡಲಾಯಿತು. ಪಡಿತರ ಕಾರ್ಡ್ ಇಲ್ಲದವರಿಗೆ ಅಕ್ಕಿ, ಅಡುಗೆ ಎಣ್ಣೆ, ಈರುಳ್ಳಿ ವಿತರಿಸಲಾಯಿತು. ಹೊನ್ನುಡಿಕೆ, ಹೆಬ್ಬೂರು ಸುತ್ತಮುತ್ತಲಿನ ಅನೇಕ ಗ್ರಾಮಗಳಿಗೆ ನೀಡಲಾಯಿತು.

ಸಂಕ್ರಮಣ

ದೇವರಹಳ್ಳಿ ಧನಂಜಯ


ವಸ್ತಿಲಲಿ ಹೊಂಚಿ ಕುಂತಿದೆ ಅಪಾಯ!
ವಾಸ್ತವ ತಿಳಿಯದ ಮುಗ್ಧ
ಕೊನೇಕಾರ ರಂಗಯ್ಯ ರೋಟಿ ಕಟ್ಟಿದ್ದಾನೆ.
ಅವನ ಮಗ
ನಕ್ಷತ್ರಗಳ ಕೀಳಲು ಜಾವಣಿಗೆ ಎತ್ತಿದ್ದಾನೆ.

“ಮಗನ ಚೆನ್ನಾಗಿ ಓದಿಸಿ ಆಫೀಸರ್ ಮಾಡ್ತೀನಿ
ಎಷ್ಟೇ ಕರ್ಚ್ ಆಗಲಿ”
ಹೇಳಿದ ಮಾತಲ್ಲಿ ವಿಶ್ವಾಸ ಕಾಣಲಿಲ್ಲ
ಎದೆ ಜಾತ್ರೆಯಲಿ
ಕನಸುಗಳು ಮದಾಸಿ ನಿಂತಿಲ್ಲ

ಸಂಕ್ರಾಂತಿ ಬಂತು ಬೆಟ್ಟ ಹತ್ತಬೇಕು
ಹೊನ್ನ ಮರಡಿ ಪರಿಷೆ
ಬಂದೇಬಿಡ್ತು ಹರಕೆ ತೀರಿಸಬೇಕು
ನನ್ನ ಮಗನಿಗೆ
ದೇವರು ಒಳ್ಳೆಯದು ಮಾಡಬೇಕು

ಗೊತ್ತಿಲ್ವಾ ಬಂದೈತೆ ಕೂರೋನ ಶಕ್ತಿ ಎಲ್ಲೈತೆ
ದೇವರಿಗೆ ಅಂದೆ
“ಪಾಪಿಗಳು ಉಲ್ಡೋಗ್ಲಿ, ಪಾಪ ದೇವರು!”
ಜಾವಣಿಗೆ ಎಳೆದ ರಂಗಯ್ಯ
ಚರಕ್!ಗೊನೆ ಬಿತ್ತು.ಪಾಪ-ಪುಣ್ಯದ ಮಾತು.

ಸಂಕ್ರಮಣದ ಸೂರ್ಯನಿಗೆ
ಗ್ರಹಣ ಬಡಿದಿದೆ.
ಬಿಸಿಲ ಚಾಟಿಯ ಸರದಾರನಿಗೆ
ಏನೋ ಅಳುಕು.
ಒಳಒಳಗೆ ಎದೆಯ ಚಳುಕು.

ನೊಗ ಕಳಚಿವೆ ಸಪ್ತಾಶ್ವಗಳು;
ಕಡಗೀಲು ಕಳಚಿ,
ಸಪ್ತಮಿ ರಥ ಮುರಿದುಬಿದ್ದಿದೆ.
ಪಥಭ್ರಾಂತವಾಗಿದೆ
ಹೊತ್ತಿನ ತುತ್ತಿಗೆ ದುಡಿವವರ ಬದುಕು.