Wednesday, February 25, 2026
Google search engine
Home Blog Page 284

ವಿಷ ಸೇವಿಸಿದ ಚಾಲಕ; ಆತ್ಮಹತ್ಯೆಗೆ ಯತ್ನ

ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನಲ್ಲಿ  ನಡೆದಿದೆ.
ಕೆಎಸ್ಆರ್.ಟಿ.ಸಿ ಜಿಲ್ಲಾ ಅಧಿಕಾರಿ ಗಜೇಂದ್ರಕುಮಾರ್ ಸಮ್ಮುಖದಲ್ಲೇ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎಂ.ಡಿ.ಕಮ್ಮಾರ್ ವಿಷ ಸೇವಿಸಿದ ಚಾಲಕ. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅವರು ಹಲವು ವರ್ಷಗಳಿಂದ ಕೆಎಸ್ಆರ್.ಟಿ.ಸಿ. ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಕೆಲಸದ ವೇಳೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ವಿಷ ಸೇವಿಸಿದ ಚಾಲಕ ಎಂ.ಡಿ.ಕಮ್ಮಾರ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು ಈಗ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ವಿಜ್ಞಾನ ಪರಿಷತ್ ಗೆ ಚುನಾವಣೆ ;ನಾಗಾಲೋಟದಲ್ಲಿ ಈ ಬಸವರಾಜು ಬಣ

Publicstory.in: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಸಮಿತಿಯ 24 ಸದಸ್ಯ ಸ್ಥಾನಗಳಿಗೆ ಫೆಬ್ರವರಿ 23 ರಂದು ಚುನಾವಣೆ ನಡೆಯಲಿದೆ.

ಪ್ರಗತಿಪರ ಆಲೋಚನೆಗಳು, ವೈಜ್ಞಾನಿಕತೆ, ವೈಚಾರಿಕತೆ ಮತ್ತು ಧರ್ಮಾಧಾರಿತ ಮೌಢ್ಯ, ಕಂದಾಚಾರ, ಸಂಪ್ರಾದಾಯ, ಅವೈಜ್ಞಾನಿಕತೆಯ ನಡುವೆ ಚುನಾವಣೆ ನಡೆಯಲಿದೆ. ಉಭಯ ಬಣಗಳು ರಾಜ್ಯಾದ್ಯಂತ ತಮ್ಮ ತಂಡಗಳ ಮೂಲಕ ಪ್ರಚಾರದಲ್ಲಿ ತೊಡಗಿವೆ.

ವಿಜ್ಞಾನ ಪರಿಷತ್ ಸದಸ್ಯರನ್ನು ನೇರವಾಗಿ ಸಂಪರ್ಕಿಸಿ ಮತ ಯಾಚಿಸುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಸಾಮಾಜಿಕ ಜಾಲತಾಣಗಳಲ್ಲೂ ಪ್ರಚಾರ ಜೋರಾಗಿಯೇ ನಡೆದಿದೆ.

ಮೈಸೂರು ವಿಭಾಗದಲ್ಲಿ ಸ್ಪರ್ಧಿಸಿರುವ ಈ.ಬಸವರಾಜು ಒಂದು ಬಣದ ನೇತೃತ್ವ ವಹಿಸಿದ್ದು ಅವರ ನೇತೃತ್ವದ ತಂಡಗಳು ಪ್ರಚಾರದಲ್ಲಿ ಸಾಕಷ್ಟು ಮುಂದಿವೆ. ಈ ತಂಡಗಳು ತಮ್ಮ ವಿಭಾಗದಲ್ಲಿ ಪ್ರತಿಯೊಬ್ಬರನ್ನು ಭೇಟಿ ಮಾಡಿ, ಮೊಬೈಲ್ ಮೂಲಕ ಸಂಪರ್ಕಿಸಿ ಮತ ಯಾಚನೆ ಮಾಡುತ್ತಿದ್ದರೆ, ಗುರುನಂಜಯ್ಯ ನೇತೃತ್ವ ತಂಡ ಪ್ರಚಾರದಲ್ಲಿ ಹಿಂದೆ ಬಿದ್ದಿದೆ. ಈ ತಂಡ ದುರ್ಬಲವಾಗಿದ್ದು ಪ್ರಚಾರದಲ್ಲಿ ಅಷ್ಟೊಂದು ಆಸಕ್ತಿ ವಹಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಬೆಂಗಳೂರು ವಿಭಾಗದದಲ್ಲಿ ಸ್ಪರ್ಧಿಸಿರುವ ಉದಯರತ್ನಕುಮಾರ್ ನೇತೃತ್ವದ ತಂಡದಲ್ಲಿ ಡಾ.ವೈ.ಸಿ. ಕಮಲ, ಎಂ.ಗುರುಸಿದ್ದಸ್ವಾಮಿ, ಎಂ.ಎಸ್.ಪರಮೇಶ್ವರಯ್ಯ, ಎಸ್.ಎಂ. ಲೋಕೇಶ್ವರಪ್ಪ, ಜಿ.ಎಂ. ಶಂಕರಮೂರ್ತಿ ಅವರಿದ್ದು ಅತ್ಯಂತ ಪ್ರಗತಿಪರ ಆಚಲೋನೆಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿದೆ.  ಈ ತಂಡದಲ್ಲಿರುವ ಬಹುತೇಕರು ವಿಜ್ಞಾನ ಚಳವಳಿಯಲ್ಲಿ ಸಾಕಷ್ಟು ಕೆಲಸ ಮಾಡಿರುವವರು.

ವಿಜ್ಞಾನ ಸಂಘಟನೆ ಮಾಡುವುದು, ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು, ಮೌಢ್ಯವನ್ನು ತೊಲಗಿಸುವಂತಹ ಹಲವು ಕಾರ್ಯಗಳಲ್ಲಿ ಈ ತಂಡ ಭಾಗಿಯಾಗಿದೆ.

ಮತ್ತೊಂದು ತಂಡದಲ್ಲಿ ಪಿ.ಎಸ್. ಕೌಶಿಕ್, ಎಂ.ಎಸ್. ಮುಷ್ಟೂರಪ್ಪ, ಶಿವಕುಮಾರ್, ಬಿ.ಎನ್.ಶ್ರೀನಾಥ್, ಎಚ್.ಎಸ್. ಟಿ ಸ್ವಾಮಿ, ಹುಲಿಕಲ್ ನಟರಾಜ್ ಇದ್ದು ಬಲಪಂಥೀಯ ವಿಚಾರಧಾರೆಯನ್ನು ಹೊಂದಿರುವ ತಂಡ ಇದಾಗಿದೆ. ಮೈಸೂರು ವಿಭಾಗದಲ್ಲಿ ಮರುವನಯ್ಯ, ನರೇಂದ್ರ ಮಂಜುನಾಥ, ಚಿಕ್ಕಸ್ವಾಮಿ, ಜಗದೀಶ್ ಇದ್ದರೆ,  ಇದೇ ತಂಡಕ್ಕೆ ಬೆಂಬಲವಾಗಿ ಕಲ್ಬುರ್ಗಿ ವಿಭಾಗದಲ್ಲಿ ಲಕ್ಕಪ್ಪ ಶೆಟ್ಟಿ, ಮಹಾರುದ್ರಪ್ಪ, ಗಿರೀಶ್ ಕಡ್ಲೇವಾಡ, ಕುಂಟೆಪ್ಪ ಗೌರಿಪುರ್, ವೀರೇಂದ್ರ ಪಾಟೀಲ್, ಗನತೆ ಇದ್ದಾರೆ. ಬೆಳಗಾವಿ ವಿಭಾಗದಲ್ಲಿ ಇದೇ ಗುಂಪಿನ ಡಾ.ಲಿಂಗರಾಜ ಅಂಗಡಿ, ಶಂಕರಪ್ಪ ತಿಮ್ಮಪ್ಪ ನಾಯಿಕ, ಸಿ.ಡಿ ಪಾಟೀಲ್, ಹುದ್ದಾರ್, ಮೀನಾಕ್ಷಿ ಶಿವಾನಂದ, ಕುಡಸೋಮಣ್ಣನವರ್ ಸೇರಿ ಆರು ಮಂದಿ ಕಣದಲ್ಲಿದ್ದಾರೆ. ಈ ತಂಡಗಳು ಅಷ್ಟೊಂದು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿಲ್ಲ.

ಮೈಸೂರು ವಿಭಾಗದಲ್ಲಿ ಹಾಸನದಿಂದ ಸ್ಪರ್ಧಿಸಿರುವ ಈ. ಬಸವರಾಜು ಅವರ ತಂಡ ಪ್ರಚಾರದಲ್ಲಿ ಸಾಕಷ್ಟು ಮುಂದಿದ್ದು ಮತದಾರರನ್ನು ತನ್ನತ್ತ ಸೆಳೆದಿದೆ. ಕಳೆದ 40 ವರ್ಷಗಳಿಂದಲೂ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿರುವ ಈ. ಬಸವರಾಜು ತಂಡವನ್ನು ಗೆಲ್ಲಿಸಲು ಕೂಡ ಮತದಾರರು ಮನಸ್ಸು ಮಾಡಿದ್ದಾರೆ. ಇವರ ತಂಡದಲ್ಲಿ ರಾಮಚಂದ್ರ ಶ್ರೀಮತಿ ಹರಿಪ್ರಸಾದ್, ಬಿ.ಜಿ.ಕೃಷ್ಣಮೂರ್ತಿರಾಜ್ ಅರಸ್, ಎ.ಎನ್. ಮಹೇಶ್ ಇದ್ದು ಇವರನ್ನು ಗೆಲ್ಲಿಸಲು ಮತದಾರರು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ.

ಪಬ್ಲಿಕ್ ಸ್ಟೋರಿ.ಇನ್ ಜೊತೆ ಮಾತನಾಡಿದ ಈ.ಬಸವರಾಜು ನಾವು ರಾಜ್ಯದ ಎಲ್ಲಾ ವಿಭಾಗದಲ್ಲೂ ಸಂಪರ್ಕ ಇಟ್ಟುಕೊಂಡಿದ್ದೇವೆ. ಪ್ರತಿದಿನವೂ ನಡೆಯುತ್ತಿರುವ ಬೆಳವಣಿಗೆಗಳ ಮಾಹಿತಿ ಪಡೆಯುತ್ತಿದ್ದೇವೆ. ಎಲ್ಲೆಡೆ ನಮ್ಮ ತಂಡಗಳೇ ಗೆಲ್ಲುತ್ತವೆ. ಮೌಢ್ಯ, ಕಂದಾಚಾರ, ಭೂತ, ಪಿಶಾಚಿ ಇಂತಹವುಗಳ ಬಗ್ಗೆ ಜನರು ಭೀತಿಯಲ್ಲಿದ್ದು ಅವರಲ್ಲಿ ವೈಜ್ಞಾನಿಕ ಮನೋಭಾವವನ್ನು ತುಂಬಿ ಭಯಮುಕ್ತಗೊಳಿಸಿದ್ದೇವೆ.

ಶಾಲಾ ಕಾಲೇಜುಗಳಲ್ಲಿ ಪವಾಡ ರಹಸ್ಯ ಬಯಲು, ಮಾಟ, ಮಂತ್ರದ ಕುರಿತು ಜಾಗೃತಿಯನ್ನು ಮೂಡಿಸಿದ್ದೇವೆ. ಈ ಮೂಲಕ ಶಿಕ್ಷಕರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವಲ್ಲಿ ಶ್ರಮಿಸಿದ್ದೇವೆ. ವಿಜ್ಞಾನ ಹೋರಾಟಗಳಲ್ಲಿ ಭಾಗಿಯಾಗಿದ್ದೇವೆ. ಇದೇ ಕಾರಣಕ್ಕೆ ನಮ್ಮ ತಂಡಗಳ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಲ್ಬುರ್ಗಿ ವಿಭಾಗದಲ್ಲಿ ದಾ.ನಿ. ಬಾಬುರಾವ, ನಿಜಾನಂದ ರೆಡ್ಡಿ ಶರಣಪ್ಪಗೌಢ, ರಘುನಾಥ ರೆಡ್ಡಿ ಸಿದ್ದಲಿಂಗಪ್ಪ, ಡಾ.ಸಂಗಮೇಶ ಎಸ್.ಹರೇಮಠ, ಸುರೇಂದ್ರನಾಥ ಆರ್. ಹುಡಗಿಕರ್, ನರಸಪ್ಪ ಟಿ. ರಂಗೋಲಿ, ಬೆಳಗಾವಿ ವಿಭಾಗದಲ್ಲಿ ಅನ್ನದಾನೇಶ್ವರ ಹಳ್ಳಿಕೇರಿ, ಡಾ.ಎ.ಎಸ್ ಎಲಿ, ಜಿ.ಎಸ್. ಕಾಂಬಲೆ, ಪಂಚಾಕ್ಷರಿ ಸಿದ್ರಾಮಪ್ಪ, ದೊಡ್ಡಬಸಪ್ಪ, ರಾಮಪ್ಪ ಗುರವಾಡ ನಮ್ಮ ತಂಡದವರಾಗಿದ್ದಾರೆ ಎಂದು ಬಸರಾಜು ಹೇಳಿದರು.

ಒಟ್ಟಾರೆಯಾಗಿ ಇದುವರೆಗಿನ ಪ್ರಚಾರವನ್ನು ನೋಡಿದರೆ ಈ.ಬಸವರಾಜು ಪರವಾಗಿರುವ ತಂಡಗಳೇ ಎಲ್ಲಾ ವಿಭಾಗದಲ್ಲೂ ಮೇಲುಗೈ ಸಾಧಿಸಲಿವೆ ಎಂಬುದು ಕಂಡುಬರುತ್ತಿದೆ. ಬಸವರಾಜು ಪರ ತಂಡಗಳು ಗೆದ್ದರೆ ಉತ್ತರ ಕರ್ನಾಟಕದವರಿಗೆ ಆದ್ಯಕ್ಷ ಸ್ಥಾನವನ್ನು ನೀಡಲು ಮುಂದಾಗಿದ್ದಾರೆ. ವಿಜ್ಞಾನ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ದಾನಿಬಾಬುರಾವ್ ಮತ್ತು ಎ.ಎನ್. ಮಹೇಶ್ ಬಾಬು ಹೆಸರುಗಳು ಹೆಚ್ಚು ಚಾಲ್ತಿಯಲ್ಲಿದ್ದು ಇವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲು ಬಸವರಾಜು ತಂಡಗಳು ತೀರ್ಮಾನಿಸಿವೆ.

ಇಡೀ ದಿನ IT ದಾಳಿ: ವಿಚಾರಣೆಗೆ ಹಾಜರಾಗುವೆ: ರಾಯಸಂದ್ರ ರವಿ

Tumkuru: ಐಟಿ ಅಧಿಕಾರಿಗಳ ದಾಳಿಯ ಕುರಿತು ಪಬ್ಲಿಕ್ ಸ್ಟೋರಿ.ಇನ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ರವಿಕುಮಾರ್ ಸೋಮವಾರ ಬೆಳಗ್ಗೆ 11 ಗಂಟೆಯಿಂದ ರಾತ್ರಿವರೆಗೂ ಪರಿಶೀಲನೆ ನಡೆಸಿದರು ಎಂದು ತಿಳಿಸಿದರು.

. ಇಂದು (ಮಂಗಳವಾರ) ಬೆಳಗ್ಗೆ 11 ಗಂಟೆಗೆ ಐಟಿ ಕಚೇರಿಗೆ ಬರಲು ಹೇಳಿಹೋಗಿದ್ದಾರೆ. ವಿಚಾರಣೆಗೆ ಹಾಜರಾಗುತ್ತೇನೆ. ಎಲ್ಲದ್ದಕ್ಕೂ ಉತ್ತರಿಸುತ್ತೇನೆ ಎಂದು ಹೇಳಿದರು.

ರಾಜಕೀಯ ಗೊತ್ತಿಲ್ಲ


ಇದು ಸಾಮಾನ್ಯ ತಪಾಸಣೆ ಇರಬಹುದು. ಇದರಲ್ಲಿ ರಾಜಕೀಯ ವಿಚಾರ ನನಗೆ ಗೊತ್ತಿಲ್ಲ, ನನಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಉತ್ತರ ನೀಡಿದ್ದೇನೆ. ಎಲ್ಲ ಮಾಹಿತಿ ಕೊಟ್ಟಿದ್ದೇನೆ ಎಂದು ಹೇಳಿದರು.

ತುಮಕೂರಿನ ಎಸ್ಐಟಿ ಬ್ಯಾಕ್ ಗೇಟ್ ನ ಗಂಗೋತ್ರಿ ರಸ್ತೆಯಲ್ಲಿರುವ ರವಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಆ ಪಕ್ಷದಲ್ಲಿ ಗುರುತಿಸಿಕೊಂಡು ತುರುವೇಕೆರೆಯಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.

ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ನಡೆಸಿಕೊಂಡ ರೀತಿಗೆ ಬೇಸತ್ತ ರವಿಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನ ಮಾಡಿದಾಗ ತುಮಕೂರು ಮತ್ತು ರಾಜ್ಯ ಬಿಜೆಪಿ ಮುಖಂಡರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಸೇರಿದ್ದರು.

ಆ ಸಂದರ್ಭದಲ್ಲಿ ಎದುರಾದ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ನಿಂದ ಟಿಕೆಟ್ ಲಭಿಸಿತ್ತು. ನಂತರ ಸೋಲು ಅನುಭವಿಸಿದರು.

ರವಿ ಗುತ್ತಿಗೆದಾರರಾಗಿ ಹಲವು ಕಾಮಗಾರಿಗಳನ್ನು ಕೈಗೊಂಡಿದ್ದರು.

ರಾಯಸಂದ್ರ ರವಿ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ

Tumkur: ಕಾಂಗ್ರೆಸ್ ಮುಖಂಡ ರವಿಕುಮಾರ್ ರಾಯಸಂದ್ರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು ಕೆಲ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ತುಮಕೂರಿನ ಎಸ್ಐಟಿ ಬ್ಯಾಕ್ ಗೇಟ್ ನ ಗಂಗೋತ್ರಿ ರಸ್ತೆಯಲ್ಲಿರುವ ರವಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಆ ಪಕ್ಷದಲ್ಲಿ ಗುರುತಿಸಿಕೊಂಡು ತುರುವೇಕೆರೆಯಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.

ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ನಡೆಸಿಕೊಂಡ ರೀತಿಗೆ ಬೇಸತ್ತ ರವಿಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನ ಮಾಡಿದಾಗ ತುಮಕೂರು ಮತ್ತು ರಾಜ್ಯ ಬಿಜೆಪಿ ಮುಖಂಡರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಸೇರಿದ್ದರು.

ಆ ಸಂದರ್ಭದಲ್ಲಿ ಎದುರಾದ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ನಿಂದ ಟಿಕೆಟ್ ಲಭಿಸಿತ್ತು. ನಂತರ ಸೋಲು ಅನುಭವಿಸಿದರು.

ರವಿ ಗುತ್ತಿಗೆದಾರರಾಗಿ ಹಲವು ಕಾಮಗಾರಿಗಳನ್ನು ಕೈಗೊಂಡಿದ್ದರು.

ಮಾಜಿ ಸಚಿವ ಮಂಜುನಾಥ್ ಗೆ ತುಮಕೂರಿನಲ್ಲಿ ಇಂದು ಅಂತಿಮ ನಮನ

ಮಂಜುನಾಥ್, ತುಮಕೂರು ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯ


Tumkuru: ಜೆಡಿಎಸ್ ನ ಮಾಜಿ ರಾಜ್ಯಾಧ್ಯಕ್ಷರು, ಮಾಜಿ ಸಚಿವರು ಆದ ಡಿ. ಮಂಜುನಾಥ್ ಅವರ ಪಾರ್ಥಿವ ಶರೀರ ಇಂದು ( ಫೆ 4-02-2020] ಬೆಳಿಗ್ಗೆ 11 ಗಂಟೆಗೆ ತುಮಕೂರು ಮಹಾನಗರ ಪಾಲಿಕೆ ಆವರಣಕ್ಕೆ ಬರಲಿದ್ದು ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಮೃತರಿಗೆ ಪತ್ನಿ, ಮೂವರು ಗಂಡು, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಹಿರಿಯೂರು ತಾಲ್ಲೂ
ಕಿನ ಜವಗೊಂಡನ ಹಳ್ಳಿಯ ತೋಟದಲ್ಲಿ ಮಂಗಳವಾರ ಸಂಜೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಅವರು ಕೆಲ ಅನಾರೋಗ್ಯದಿಂದ ಬಳಲುತ್ತಿದ್ದರು.

ಇವರ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಜಾಜೂರು ಗ್ರಾಮ. ದುರುಗಪ್ಪ ಮತ್ತು ಯಲ್ಲಮ್ಮ ದಂಪತಿಗೆ ಜನಿಸಿದ್ದ ಮೂವರು ಹೆಣ್ಣು, ಏಳು ಗಂಡು ಮಕ್ಕಳಲ್ಲಿ ಮಂಜುನಾಥ್‌ ಮೂರನೇಯವರು.

ದಲಿತರಿಗೆ ಶಿಕ್ಷಣ ಗಗನಕುಸುಮವಾಗಿದ್ದ ಕಾಲದಲ್ಲಿ ಇವರು ಓದಿದರು. ಇವರವ ತಂದೆ ದುರುಗಪ್ಪ ಅವರ ಶ್ರಮ ಪುತ್ರನ ಯಶಸ್ಸಿಗೆ ಕಾರಣ ಎಂಬುದನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದರು.

ರಾಜ್ಯ ವಿಜ್ಞಾನ ಪರಿಷತ್ ಗೆ ಚುನಾವಣೆ: ಜಿದ್ದಾಜಿದ್ದಿ ಪ್ರಚಾರ

ಕೆ.ಇ.ಸಿದ್ದಯ್ಯ


Tumkur: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಫೆಬ್ರವರಿ 23ರಂದು ಚುನಾವಣೆ ನಡೆಯಲಿದೆ.

ಈ ಚುನಾವಣೆಗೆ ಸ್ಪರ್ಥಿಸಿರುವ ಸದಸ್ಯರು ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದಾರೆ.

ಪ್ರಚಾರಕ್ಕೆ ಈ ಬಾರಿ ಫೇಸ್ಬುಕ್, ವಾಟ್ಅಪ್, ಇನ್ಸಾಗ್ರಾಂ ಹಾಗೂ ಮೆಸೇಜ್ ಮಾಡುವ ಮೂಲಕ ಮತದಾರರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಒಟ್ಟು 9500 ಸಾವಿರ ಮತದಾರರಿದ್ದಾರೆ. ಬೆಂಗಳೂರು ವಿಭಾಗದಲ್ಲಿ 2201, ಮೈಸೂರು ವಿಭಾಗದಲ್ಲಿ 1500, ಕಲ್ಬುರ್ಗಿ ವಿಭಾಗದಲ್ಲಿ 2900 ಹಾಗೂ ಬೆಳಗಾವಿ ವಿಭಾಗದಲ್ಲಿ 2000 ಮತದಾರರಿದ್ದಾರೆ. ಪ್ರತಿ ವಿಭಾಗದಲ್ಲೂ ಎರಡು ತಂಡಗಳು ಸದಸ್ಯರಾಗಿ ಆಯ್ಕೆಯಾಗಲು ಪರಸ್ಪರ ಪೈಪೋಟಿ ನಡೆಸಿವೆ.

ಹೀಗೆ ಒಟ್ಟು ಎಂಟು ತಂಡಗಳಿದ್ದು ಈ ತಂಡಗಳಿಂದ ಒಟ್ಟು 24 ಸದಸ್ಯರು ಮಾತ್ರ ಆಯ್ಕೆಗೊಳ್ಳಬೇಕಾಗಿದೆ.

ಬೆಂಗಳೂರು ವಿಭಾಗದಲ್ಲಿ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಸೇರಿ 9 ಜಿಲ್ಲೆಗಳು ಬರಲಿವೆ.

ಮೈಸೂರು ವಿಭಾಗದಲ್ಲಿ ಮಂಡ್ಯ, ಚಾಮರಾಜನಗರ, ಮಡಿಕೇರಿ, ಉಡುಪಿ, ಹಾಸನ, ಮೈಸೂರು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಸೇರಿ 8 ಜಿಲ್ಲೆಗಳು, ಕಲ್ಬುರ್ಗಿ ವಿಭಾಗದಲ್ಲಿ ಬೀದರ್, ರಾಯಚೂರು, ಯಾದಗಿರಿ, ಗುಲಬರ್ಗ ಸೇರಿ 7 ಜಿಲ್ಲೆಗಳು ಮತ್ತು ಬೆಳಗಾವಿ ವಿಭಾಗದಲ್ಲಿ, ಗದಗ, ಧಾರವಾಡ, ಉತ್ತರ ಕನ್ನಡ ಸೇರಿ 7 ಜಿಲ್ಲೆಗಳು ಬರುತ್ತವೆ.

ಮತದಾನ ಫೆಬ್ರವರಿ 23ರಂದು ನಡೆಯಲಿದೆ. ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತಿದ್ದು , ಪ್ರತಿಯೊಬ್ಬ ಸ್ಪರ್ಧಿಗೂ ಒಂದೊಂದು ಚಿಹ್ನೆಯನ್ನು ನೀಡಲಾಗುವುದು. ಪ್ರತಿಯೊಂದು ವಿಭಾಗದಲ್ಲೂ ಓರ್ವ ಮತದಾರ ಒಟ್ಟು ಆರು ಮತಗಳನ್ನು ಚಲಾಯಿಸಲು ಅವಕಾಶವಿದೆ. ತನಗೆ ಸರಿಕಂಡ ಅಭ್ಯರ್ಥಿಯನ್ನು ಕಾರ್ಯ ಕಾರಿ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಬಹುದು. .

ಪ್ರತಿ ಮೂರು ವರ್ಷಗಳಿಗೊಮ್ಮೆ ರಾಜ್ಯ ವಿಜ್ಞಾನ ಪರಿಷತ್ ಗೆ ಚುನಾವಣೆ ನಡೆಯುತ್ತದೆ. ಹಿಂದಿನ ಕಾರ್ಯಕಾರಿ ಸಮಿತಿ ಸದಸ್ಯರ ಅವಧಿ ಫೆಬ್ರವರಿ ಅಂತ್ಯದೊಳಗೆ ಮುಕ್ತಾಯವಾಗಲಿದೆ. ಆದ್ದರಿಂದ ಚುನಾವಣೆ ನಡೆಯುತ್ತಿದೆ. ಅಧ್ಯಕ್ಷರು ಮತ್ತು ಕಾರ್ಯದರ್ಶಿಯ ಅವಧಿಯೂ ಮುಗಿಯುತ್ತಿದೆ. ಕಾರ್ಯಕಾರಿ ಸಮಿತಿಗೆ ಸದಸ್ಯರು ಆಯ್ಕೆಯಾದ ನಂತರ ಎಲ್ಲಾ ಸದಸ್ಯರು ಮುಂದಿನ ಅವಧಿಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಅವರನ್ನು ಆಯ್ಕೆ ಮಾಡಲಿದ್ದಾರೆ.

ಪಾಲಿಕೆ ಸದಸ್ಯ ಕುಮಾರ್ ವಿರುದ್ಧ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಜಾ

Publicstory.in


ತುಮಕೂರು: ತುಮಕೂರು ಮಹಾನಗರ ಪಾಲಿಕೆ ಸದಸ್ಯ ಕುಮಾರ್ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಸದಸ್ಯ ಟಿ.ಆರ್. ನಾಗರಾಜ್ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ದೇಶಪಾಂಡೆ ಗೋವಿಂದ ರಾಜಶಂಕರ್ ಸೋಮವಾರ ವಜಾಗೊಳಿಸಿದರು.

ಕುಮಾರ್ ಅವರಿಗೆ ಮೇಯರ್, ಉಪ ಮೇಯರ್ ಸೇರಿದಂತೆ ಯಾವುದೇ ಸಮಿತಿಗಳ ನೇಮಕದಲ್ಲಿ ಮತದಾನದ ಹಕ್ಕು ನೀಡಬಾರದು ಹಾಗೂ ಅವರನ್ನು ಸಭೆಯಲ್ಲಿ ಪಾಲ್ಗೊಳ್ಳುವ ಅಧಿಕಾರ ರದ್ದುಗೊಳಿಸಬೇಕು ಸೇರಿ ಚುನಾವಣಾ ತಕರಾರು ಅರ್ಜಿಯನ್ನು ನಾಗರಾಜ್ ಸಲ್ಲಿಸಿದ್ದರು.

ಚಿಕ್ಕಪೇಟೆ ವಾರ್ಡ್ ನಿಂದ ನಾಗರಾಜ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕುಮಾರ್ (ಬನಶಂಕರಿ ಕುಮಾರ್) ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು, ಹಿಂದಿನ ಅವಧಿಯಲ್ಲಿ ಇದೇ ವಾರ್ಡ್ ನಿಂದ ನಾಗರಾಜ್ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಅಲ್ಲದೇ ಉಪ ಮೇಯರ್ ಸಹ ಆಗಿದ್ದರು.

ಮತದಾನದ ವೇಳೆ ವಾರ್ಡ್ ಗಳ ಮತದಾರರನ್ನು ಆಚೀಚೆ ಮಾಡಲಾಗಿದೆ. ವಾರ್ಡ್ ನ ಮತದಾರರಲ್ಲದವರನ್ನು ಮತದಾನ ಪಟ್ಟಿಗೆ ಸೇರಿಸಲಾಗಿದೆ. ವಾರ್ಡ್ ನ ಕೆಲವು ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ಅಲ್ಲದೇ ವಾರ್ಡ್ ವಿಂಗಡಣೆಯಲ್ಲೂ ತಪ್ಪಾಗಿದೆ, ಹೀಗಾಗಿ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು.
ಕುಮಾರ್ ಪರವಾಗಿ ವಾದ ಮಂಡಿಸಿದ ವಕೀಲರಾದ ಎಸ್.ರಮೇಶ್ ಅವರು ಇದೊಂದು ದುರುದ್ದೇಶ ಪೂರಿತ ಅರ್ಜಿಯಾಗಿದೆ. ಅರ್ಜಿದಾರರು ಈ ಹಿಂದೆ ಅದೇ ವಾರ್ಡ್ ಅನ್ನು ಪ್ರತಿನಿಧಿಸುತ್ತಿದ್ದರು. ವಾರ್ಡ್ ವಿಂಗಡನೆ ಮಾಡಿದಾಗ, ಮತದಾರರ ಪಟ್ಟಿಯನ್ನು ಪರಿಷ್ಕರಿಸಿದ ವೇಳೆ ನಾಗರಾಜ್ ಅವರು ಪಾಲಿಕೆಯ ಸದಸ್ಯರೇ ಆಗಿದ್ದರು. ಆಗ ಅವರು ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. ಅಲ್ಲದೇ ಮತದಾನದ ದಿನ ಅಥವಾ ಮತದಾನದ ನಂತರವೂ ಚುನಾವಣಾಧಿಕಾರಿಗೆ ಯಾವುದೇ ಆಕ್ಷೇಪ ಸಲ್ಲಿಸಿಲ್ಲ ಎಂದು ವಾದಿಸಿದ್ದರು.

ಕ್ರಮಾದೇಶ 7 ನಿಯಮ 11 ಡಿ ಉಲ್ಲಂಘನೆಯಾಗಿದ್ದು, ತಕರಾರು ಅರ್ಜಿಯನ್ನೇ ವಜಾಗೊಳಿಸಬೇಕು ಎಂದು ಕುಮಾರ್ ಪರ ವಕೀಲರು ಕೇಳಿದ್ದರು.

ಚುನಾವಣಾ ಅರ್ಜಿಯು ಕಾರ್ಪೋರೇಷನ್ ಅಧಿನಿಯಮ 33 ಮತ್ತು 35ರ ಅಡಿ ಪೂರಕವಾಗಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಪ್ರತಿವಾದಿಗಳಾಗಿ ಮಾಡಿಲ್ಲ. ಇದು ಚುನಾವಣಾ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ಈ ತಕರಾರು ಅರ್ಜಿ ಊರ್ಜಿತವಲ್ಲ ಎಂದು ವಕೀಲ ರಮೇಶ್ ನ್ಯಾಯಾಲಯದ ಎದುರು ವಾದಿಸಿದ್ದರು. ಎರಡೂ ಕಡೆಯ ವಾದ-ವಿವಾದ ಆಲಿಸಿದ ನ್ಯಾಯಾಧೀಶರು, ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿತು.

ಬೆಂಗಳೂರು ಕೇಂದ್ರ ವಿ.ವಿ.ಕುಲಸಚಿವರಾಗಿ ಡಾ.ರಮೇಶ್ ನೇಮಕ

ಡಾ.ರಾಜಶೇಖರ ಕೋಠಿ


ಮಂಡ್ಯ: ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಡಾ.ರಮೇಶ್ ಅವರೀಗ ಬೆಂಗಳೂರು ಕೇಂದ್ರ ವಿ.ವಿ.ಯ ಮೌಲ್ಯಮಾಪನ ಕುಲಸಚಿವರು.

ಶಿವಮೊಗ್ಗದ ಸಮಾಜಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರೊಫೆಸರ್ ಆಗಿದ್ದ ಅವರು ತುಮಕೂರು ವಿ.ವಿಯ MSW ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು ಕಟ್ಟಿ ಬೆಳೆಸಿದವರು.

ಮ‌ೂಲತಃ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಗೊಲ್ಲಹಳ್ಳಿಯ ಶ್ರೀಮತಿ ಚಿಕ್ಕಮ್ಮ ಮತ್ತು ಭದ್ರಗಿರಯ್ಯನವರ ಹಿರಿಯ ಪುತ್ರರಾದ *ಪ್ರೊ.ಬಿ.ರಮೇಶ್ ರವರು* ತಮ್ಮ ಬಾಲ್ಯದಿಂದಲೂ ಜೀವಪರ,ಜನಪರ ಆಲೋಚನೆ ಹೊಂದಿರುವ ಸ್ನೇಹ ಜೀವಿ.

ಜ್ಞಾನಭಾರತಿ ಕ್ಯಾಂಪಸ್ ಮೂಲಕ ತಮ್ಮ ವ್ಯಕ್ತಿತ್ವವನ್ನು ಹೆಚ್ಚು ವಿಸ್ತರಿಸಿಕೊಂಡು ಭರತ ಭೂಮಿಯ ಮಹಾನ್ ಸಾಮಾಜಿಕ ಸುಧಾರಕರ ಜೀವನದ ಮೌಲ್ಯವನ್ನು ಅಕ್ಷರಶಃ ತಮ್ಮ ಬದುಕಿಗೆ ಅಳವಡಿಸಿಕೊಂಡು ವಿದ್ಯಾರ್ಥಿ ಯುವ ಮಿತ್ರರಿಗೆ ನಾಯಕತ್ವದ ಗುಣಗಳನ್ನು ರೊಪಿಸಿ,ಜೀವನೋಪಾಯದ ಮಾರ್ಗಗಳನ್ನು ಕಲ್ಪಿಸುವಲ್ಲಿ ಇವರ ಕೊಡುಗೆ ಅಪಾರ.

ಅಷ್ಟು ಮಾತ್ರವಲ್ಲದೆ ತುಮಕೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅದ್ಯಯನ ಕೇಂದ್ರದ ನಿರ್ದೇಶಕರಾಗಿ ಪ್ರಮಾಣೀಕವಾಗಿ ಮತ್ತು ದಕ್ಷತೆಯಿಂದ ಹತ್ತು ಹಲವು ರಚನಾತ್ಮಕ ಯೋಜನೆಗಳನ್ನು ರೊಪಿಸಿ, ಯಶಸ್ವಿಯಾಗಿದ್ದಾರೆ.

ಇವರ ಸಾಮಾಜಿಕ ಕಳಕಳಿಯ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು 2018 ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ (ಆಡಳಿತ) ನೇಮಕ ಮಾಡಿತು.

ತದನಂತರ ತಮ್ಮ ಪ್ರಾಧ್ಯಾಪಕ ವೃತ್ತಿ ಬದುಕಿನ ಮತ್ತು ಆಡಳಿತದ ಅನುಭವತ್ಮಾಕ ಜ್ಞಾನವನ್ನು ಯಶಸ್ವಿಯಾಗಿ ತಮಗೆ ನೀಡಿದ ಹುದ್ದೆಯನ್ನು ಅಧಿಕಾರವೆಂದು ಭಾವಿಸದೆ ಜವಾಬ್ದಾರಿ ಎಂದು ಅರಿತು ದಕ್ಷತೆಯಿಂದ ಮತ್ತು ಚಾಣಾಕ್ಷತನದಿಂದ ರಾಜ್ಯದ ಉದ್ದ-ಅಗಲಕ್ಕೂ ದೂರ ಶಿಕ್ಷಣವನ್ನು ಪ್ರಸರಣಗೂಳಿಸಿ ಕ.ರಾ.ಮು.ವಿವಿಯ ವಿಧ್ಯಾರ್ಥಿಗಳ, ಪ್ರಾಧ್ಯಾಪಕರ ಹಾಗೂ ಶಿಕ್ಷಕೇತರ ನೌಕರರ ಅಭ್ಯುದಯಕ್ಕೆ ದುಡಿದು ಎಲ್ಲರ ಪ್ರೀತಿ, ಸ್ನೇಹ, ವಿಶ್ವಾಸ ಗಳಿಸಿ, ವಿವಿಯ ಜನಮಾನಸದಲ್ಲಿ ಶಾಶ್ವತವಾದ ಸ್ಥಾನಗಳಿಸಿ ಯಶಸ್ವಿಯಾಗಿದ್ದಾರೆ.

ಈಗಿನ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಲಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ವಕೀಲರೊಬ್ಬರ ಹಲ್ಲು ಮುರಿದ ಪೊಲೀಸರು…

Banavara : ದೂರು ನೀಡಲು ಹೋದ ಯುವ ವಕೀಲರೊಬ್ಬರಿಗೆ ಪೊಲೀಸರು ಹಲ್ಲು ಮುರಿದು ಮನಬಂದಂತೆ ಥಳಿಸಿರುವ ಘಟನೆ ಬೆಂಗಳೂರಿನ ಬಾಣಾವರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಕಳೆದ ರಾತ್ರಿ 9.30 ರಲ್ಲಿ ಬಾಣಾವರ ಠಾಣೆಗೆ ಹೋದ ಯುವ ವಕೀಲರು ತಮ್ಮ ತಂದೆ-ತಾಯಿಯನ್ನು ಅತ್ತೆಯ ಮನೆಯಲ್ಲಿ ಕಾನೂನುಬಾಹಿರವಾಗಿ ಇಟ್ಟುಕೊಂಡಿದ್ದಾರೆ ಎಂದು ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಕೂಡಲೇ ಪೊಲೀಸರು ಆ ಯುವ ವಕೀಲರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೊಲೀಸರ ಥಳಿತದಿಂದ ವಕೀಲನ ಮೇಲ್ಭಾಗದ ಅರ್ಧದಷ್ಟು ಹಲ್ಲುಗಳು ಮುರಿದು ಹೋಗಿವೆ. 13 ಮಂದಿ ಪೊಲೀಸರು ಒಬ್ಬರಾದ ಮೇಲೆ ಒಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ವಕೀಲ ತಿಳಿಸಿದ್ದಾರೆ.

ಸಬ್ ಇನ್ಸ್ ಪೆಕ್ಟರ್ ಮುರುಳಿ ಸಮ್ಮುಖದಲ್ಲಿ ಎಲ್ಲಾ ಪೊಲೀಸರು ಅಮಾನವೀಯವಾಗಿ ಕ್ರೌರ್ಯದಿಂದ ನನ್ನ ತೊಡೆ, ತಲೆ, ಕತ್ತು, ಬೆನ್ನು, ಕಾಲು ಹೀಗೆ ಎಲ್ಲೆಂದರಲ್ಲಿ ಹೊಡೆದರು. ಒಂದು ಗಂಟೆ ಕಾಲ ಬಟ್ಟೆ ಬಿಚ್ಚಿಸಿ ಅಪರಾಧಿಯಂತೆ ನಿಲ್ಲಿಸಿದ್ದರು ಎಂದು ನೊಂದ ವಕೀಲ ಹೇಳಿದ್ದಾರೆ.

ನನ್ನ ಮೇಲೆ ರಾಕ್ಷಸರಂತೆ ಹಲ್ಲೆ ನಡೆಸಿದ ಪೊಲೀಸರು ಒಂದು ಗಂಟೆಯ ನಂತರ ಅಂಬೇಡ್ಕರ್ ಕಾಲೇಜಿಗೆ ಕರೆದುಕೊಂಡು ಹೋದರು. ತಡರಾತ್ರಿಯಾಧರೂ ಒಂದು ಅಗುಳು ಅನ್ನವನ್ನು ನೀಡಲಿಲ್ಲ. ನೀರು ಕೇಳಿದರೂ ಕೊಡಲಿಲ್ಲ ಎಂದು ದೂರಲಾಗಿದೆ.

ಅಂಬೇಡ್ಕರ್ ಕಾಲೇಜಿನಿಂದ ಬೌರಿಂಗ್ ಆಸ್ಪತ್ರೆಗೆ ಕೇವಲ 20 ನಿಮಿಷದಲ್ಲಿ ಹೋಗಬಹುದು. ಆದರೆ ಜೀಪಿನಲ್ಲಿ ನನ್ನನ್ನು ಕುಳ್ಳರಿಸಿಕೊಂಡ ಪೊಲೀಸರು ದಾರಿ ಮಧ್ಯೆ ಚಹಾ ಕುಡಿದು, ಜೀಪಿನ್ನು ಅಲ್ಲಲ್ಲಿ ನಿಲ್ಲಿಸಿಕೊಂಡು ಬೌರಿಂಗ್ ಆಸ್ಪತ್ರೆ ಹೋಗಲು ಸುಮಾರು 40 ನಿಮಿಷ ತೆಗೆದುಕೊಂಡರು. ಪೊಲೀಸರು ಬೇಕಂತಲೇ ವಿಳಂಬ ಮಾಡಿದರು ಎಂದು ವಕೀಲ ಹೇಳಿದ್ದಾರೆ.

ಠಾಣೆಯಲ್ಲಿ ನನ್ನ ಮೇಲೆ 13 ಮಂದಿ ಪೊಲೀಸರು ಮನಬಂದಂತೆ ಥಳಿಸಿ ಹಲ್ಲೆ ನಡೆಸಿ ಹಿಂಸೆ ನೀಡಿದ್ದು ಠಾಣೆಯಲ್ಲಿದ್ದ ಸಿಸಿಟಿವಿಯಲ್ಲಿ ಇದೆಲ್ಲವೂ ರೆಕಾರ್ಡ್ ಆಗಿತ್ತು. ಇದೆಲ್ಲವನ್ನು ಪೊಲೀಸರು ಡಿಲೀಟ್ ಮಾಡಿದ್ದಾರೆ ಎಂದು ನೊಂದ ವಕೀಲ ಆರೋಪಿಸಿದ್ದಾರೆ.

ಪೊಲೀಸರಿಂದ ಹಲ್ಲೆಗೊಳಗಾದ ಯುವ ವಕೀಲರನ್ನು ಬೌರಿಂಗ್ ಆಸ್ಪತ್ರೆಗೆ ಕರೆತಂದಾಗ ಅತನಿಂದ ಮಾಹಿತಿ ಪಡೆಯಲು ಮೊಬೈಲ್ ನಲ್ಲಿ ವಿಡಿಯೋ ಮಾಡಲು ಹೋದಾಗ ಪೊಲೀಸರು ಅಡ್ಡಿಪಡಿಸಿದ್ದಾರೆ. ವಿಡಿಯೋ ಮಾಡುವ ವಕೀಲರು ನಾವು ಮಾಹಿತಿಯಷ್ಟೇ ಪಡೆಯುತ್ತಿದ್ದೇವೆ. ನಾವು ಯಾವುದೇ ಪ್ರಚೋದನೆ ನೀಡಿಲ್ಲ ಎಂದು ಹೇಳಿದರೂ ಪೊಲೀಸರು ವಕೀಲನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿದ್ದು ಪೂರ್ತಿ ವಿಡಿಯೋ ಮಾಡಲು ಬಿಡಲಿಲ್ಲ ಎಂದು ಆರೋಪಿಸಲಾಗಿದೆ.

ವಿಡಿಯೋ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದೆ.

30 ಲಕ್ಷ ಕಳ್ಳತನ: FIR ದಾಖಲಿಸದ JAyANAGR PSI ಅಮಾನತು

ತುಮಕೂರು:- ಗಂಭೀರ ಕಳ್ಳತನ ಪ್ರಕರಣದ ದೂರು ದಾಖಲಿಸದೆ ಬೇಜವಾಬ್ದಾರಿ ತೋರಿದ ಕಾರಣ ಜಯನಗರ ಠಾಣೆ ಪಿಎಸ್ಐ ಮುತ್ತುರಾಜ್ ಅವರನ್ನು ಜಿಲ್ಲಾ ರಕ್ಷಣಾಧಿಕಾರಿ ಕೋನವಂಶಿ ಕೃಷ್ಣ ಸೇವೆಯಿಂದ ಅಮಾನತ್ತು ಮಾಡಿದ್ದಾರೆ.

ತುಮಕೂರು ನಗರದ ಬನಶಂಕರಿಯ ಶಿಲ್ಪ ಜೂಯಲರಿ ಮಾಲೀಕ ಟಿ ಪಿ ನಾಗರಾಜು ನ.16 ರಂದು ಜೂವೆಲರಿ ಅಂಗಡಿ ಕೆಲಸ ಮುಗಿಸಿ ಬಾಗಿಲು ಹಾಕುವ ವೇಳೆ 30 ಲಕ್ಷ ಬೆಳೆಬಾಳುವ ಚಿನ್ನಬೆಳ್ಳಿ ಆಭರಣವಿದ್ದ ಕೈಚೀಲವನ್ನು ಕಳ್ಳರು ಗಮನ ಬೇರೆಡೆ ಸೆಳೆದು ದೋಚಿದ್ದರು.

ನ.17 ರಂದು ಟಿ ‌.ಪಿ.ನಾಗರಾಜು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪಿಎಸ್ಐ ದೂರು ದಾಖಲಿಸಲು ನಿರಾಕರಿಸಿದ್ದರು.
ಅಂಗಡಿ ಮಾಲೀಕ ಟಿ.ಪಿ ನಾಗರಾಜು ಜ.29 ರಂದು ವಸ್ತುಸ್ತಿತಿ ವಿವರಿಸಿ ಜಯನಗರ ಠಾಣೆ ಪಿಎಸ್ಐ ದೂರು ದಾಖಲಿಸಲು ನಿರ್ಲಕ್ಷ ತೋರಿದ್ದ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ದೂರುದಾರ ನೀಡಿದ ಅರ್ಜಿ ಪರಾಮರ್ಶಿಸಿದ ವರಿಷ್ಟಾಧಿಕಾರಿಗಳು ಈ ಪ್ರಕರಣ ಗಂಭೀರ ಪ್ರಕರಣವಾಗಿದ್ದರೂ ದೂರು ದಾಖಲಿಸದೆ ಅತೀವ ನಿರ್ಲಕ್ಷತೆ ಹಾಗು ಬೇಜವಾಬ್ದಾರಿ ತೋರಿರುವುದು ಮೇಲ್ನೋಟಕ್ಕೆ ಸಾಭೀತಾಗಿರುವುದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಪಿಎಸ್ಐ ಮುತ್ತುರಾಜ್ ಅವರನ್ನು ಅಮಾನತ್ತು ಮಾಡಿದ್ದಾರೆ.