Tuesday, February 24, 2026
Google search engine
Home Blog Page 289

ಪಾವಗಡ ನಾಗಲಮಡಿಕೆಗೆ ನದಿ ನೀರು ಕೊಟ್ಟ ಆಂಧ್ರದ ಶಾಸಕ!

Publicstory.in


ಪಾವಗಡ: ಉತ್ತರ ಪಿನಾಕಿನಿ ಮೂಲಕ ಆಂಧ್ರದ ಪೇರೂರು ಡ್ಯಾಂಗೆ ನೀರು ಹರಿಸುವ ಕಾಮಗಾರಿಗೆ ಭಾನುವಾರ ಚಾಲನೆ ಸಿಗಲಿದೆ.

ಆಂಧ್ರ ಪ್ರದೇಶ ರಾಪ್ತಾಡು ಶಾಸಕ ತೋಪುದುರ್ತಿ ಪ್ರಕಾಶ್ ರೆಡ್ಡಿ ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ತಿಮ್ಮಾಪುರ ಏರಿಯ ಮೇಲೆ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಹಂದ್ರಿನಿವಾ ಕೆನಾಲ್ ನಿಂದ ಉತ್ತರ ಪಿನಾಕಿನಿ ನದಿ ಮೂಲಕ ಆಂಧ್ರದ ಪೆರೂರಿಗೆ ನೀರು ಹರಿಸುವ ಕಾಮಗಾರಿಗೆ ಆಂಧ್ರ ಸರ್ಕಾರ ಎರಡು ದಿನಗಳ ಹಿಂದೆಯಷ್ಟೆ, ಜನವರಿ-23 ರಂದು ಅನುಮೋದನೆ ನೀಡಿತ್ತು.

ಹಂದ್ರಿನಿವಾ ಕಾಲುವೆಯಿಂದ ಸುಮಾರು 26 ಕಿ.ಮೀ ದೂರದ ಪೇರೂರಿಗೆ ಉತ್ತರ ಪಿನಾಕಿನಿ ನದಿಯಲ್ಲಿ ನೀರು ಹರಿಸಲು ಅಗತ್ಯವಿರುವ ಜಂಗಲ್ ಕಟಿಂಗ್, ನದಿಯಲ್ಲಿ ಕಾಲುವೆ ನಿರ್ಮಿಸಲು, ಎಚ್.ಡಿ.ಪಿ.ಇ(ಹೈ ಡೆನ್ಸಿಟಿ ಪಾಲಿಥಿಲಿನ್) ಫಿಲ್ಮ್ ಅಳವಡಿಸಲು ಇತ್ಯಾದಿ ಕಾಮಗಾರಿಗಳಿಗಾಗಿ 1.19 ಕೋಟಿ ರೂಪಾಯಿಯನ್ನು ಆಂಧ್ರ ಸರ್ಕಾರ ಮಂಜೂರು ಮಾಡಿದೆ. ಕಾಮಗಾರಿ ಮುಗಿದ ಕೂಡಲೇ 1 ಟಿ.ಎಂ.ಸಿ ನೀರು ನದಿ ಮೂಲಕ ಪೆರೂರು ಡ್ಯಾಂಗೆ ಹರಿಯಲಿದೆ.

ಆಂಧ್ರ ಸರ್ಕಾರ ಕಾಮಗಾರಿ ಗೆ ಅನುಮೋದನೆ ನೀಡಿರುವ ಆದೇಶ ಪ್ರತಿ.

ಉತ್ತರ ಪಿನಾಕಿನಿ ನದಿ ಮೂಲಕ ನೀರು ಹರಿದು ಪೇರೂರು ಡ್ಯಾಂ ನಲ್ಲಿ ನೀರು ಸಂಗ್ರಹವಾದರೆ ತಾಲ್ಲೂಕಿನ ಬಿ.ಕೆ.ಹಳ್ಳಿ, ತಿಮ್ಮಮ್ಮನಹಳ್ಳಿ, ಬುಗಡೂರು, ಪೆಂಡ್ಲಿಜೀವಿ, ನಾಗಲಮಡಿಕೆ, ಕ್ಯಾತಗಾನಚೆರ್ಲು ಸೇರಿದಂತೆ ಹತ್ತಾರು ಗ್ರಾಮಗಳಿಗೆ ಅನುಕೂಲವಾಗಲಿದೆ.

ಅಂತರ್ಜಲ ಹೆಚ್ಚಿ ಕೊಳವೆ ಬಾವಿಗಳಲ್ಲಿ ಸದಾ ನೀರಿರುತ್ತದೆ. ತಾಲ್ಲೂಕಿನ ಜನತೆಯೂ ಭಾನುವಾರ ನಾಗಲಮಡಿಕೆಗೆ ಆಗಮಿಸುವ ಶಾಸಕ ತೋಪುದುರ್ಪಿ ಪ್ರಕಾಶ್ ರೆಡ್ಡಿ ಅವರಿಗೆ ಭವ್ಯ ಸ್ವಾಗತ ನೀಡಲು ಸಿದ್ದತೆ ನಡೆಸುತ್ತಿದ್ದಾರೆ.

ಕೆಲವೇ ತಿಂಗಳಲ್ಲಿ ಆಂಧ್ರ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ತಂದು, ರಾಜ್ಯದ ಮುಖ್ಯಮಂತ್ರಿ ಯಡ್ಯೂರಪ್ಪ ಅವರನ್ನು ಭೇಟಿ ಮಾಡಿ ಸರ್ಕಾರದ ಅನುಮತಿ ಪಡೆದು ತಮ್ಮ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಯೋಜನೆ ಅನುಷ್ಠಾನ ಮಾಡುತ್ತಿರುವ ಪ್ರಕಾಶ್ ರೆಡ್ಡಿ ಅವರ ಬದ್ಧತೆ ಬಗ್ಗೆ ತಾಲ್ಲೂಕಿನ ಜನತೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ಆಡಂಬರ, ಪ್ರಚಾರವಿಲ್ಲದೆ, ವೇದಿಕೆಗಳಲ್ಲಿ ನೀರು ತರುತ್ತೇನೆ ಎಂದು ಬಡಾಯಿಯ ಮಾತನಾಡದೆ. ಎರಡು ರಾಜ್ಯಗಳ ಸರ್ಕಾರದ ಸಮ್ಮತಿಯೊಂದಿಗೆ ತಮ್ಮ ಕ್ಷೇತ್ರದ ಜನರಿಗಾಗಿ ಶ್ರಮಿಸುತ್ತಿರುವ ಅವರ ಕರ್ತವ್ಯ ನಿಷ್ಠೆಯನ್ನು ಜನತೆ ಕೊಂಡಾಡುತ್ತಿದ್ದಾರೆ.

ನೆರೆ ರಾಜ್ಯದ ಶಾಸಕರಿಂದ ತಾಲ್ಲೂಕಿಗೆ ನೀರು ಬರುತ್ತಿದೆ. ನಾಗಲಮಡಿಕೆ ಹೋಬಳಿಯ ಜನರಿಗೆ ಇದರಿಂದ ತಕ್ಕ ಮಟ್ಟಿನ ಅನುಕೂಲವಾಗುತ್ತದೆ ಎಂಬ ಸಮಾಧಾನದ ಮಾತು ಜನರ ಮಧ್ಯೆ ಹರಿದಾಡುತ್ತಿದೆ.

ಶಿಕ್ಷಕರಿಗೆ ಸಿಹಿ ಸುದ್ದಿ: TET ಅರ್ಹತಾ ಪರೀಕ್ಷೆಯಲ್ಲಿ ಬದಲಾವಣೆ- ಸಚಿವ ಸುರೇಶ್ ಕುಮಾರ್

Tumukuru: . ಶಿಕ್ಷಕರ ಟಿಇಟಿ ಪರೀಕ್ಷೆ ತೊಡಕುಗಳನ್ನ ಪರಿಹಾರ ಮಾಡಲು ಚರ್ಚಿಸಲಾಗಿದೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಇಟಿ ಪರೀಕ್ಷೆಯಲ್ಲಿ C and R ರೂಲ್ ನ ಕೆಲ ಅರ್ಹತಾ ಮಟ್ಟವನ್ನ ಇಟ್ಟಿದ್ದಾರೆ. ಇದರಿಂದ ಶಿಕ್ಷಕರ ಆಯ್ಕೆ ಕಠಿಣ ವಾಗಿದೆ. ಈ ಅರ್ಹತಾ ಮಟ್ಟ ಬೇಕೋ ಬೇಡವೋ ಅನ್ನುವ ಚರ್ಚೆ ನಡೀತಿದೆ. ಸದ್ಯದಲ್ಲೇ ಪರಿಹಾರ ದೊರೆಯಲಿದೆ ಎಂದರು.

ಹಿಂದಿನ ಸರ್ಕಾರ ಹೊರಡಿಸಿದ ಆದೇಶದಂತೆ ಆರ್.ಟಿ.ಇ ಪದ್ದತಿ ಮುಂದುವರೆದಿದೆ. ಅರ್ಜಿ ಹಾಕುವ ವಿದ್ಯಾರ್ಥಿಯ ನಿವಾಸದ ೧ ಕಿ.ಮಿ.ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಇರಬಾರದು. ಅದೇ ಆದೇಶ ಮುಂದುವರೆದಿದೆ…ಬದಲಾಣೆ ಬಗ್ಗೆ ಸಿಎಂ ಬಳಿ ಚರ್ಚಿಸುತ್ತೇನೆ. ಆದರೆ ಸರ್ಕಾರಿ ಶಾಲೆನೂ ಸದೃಢವಾಗಬೇಕು ಎಂಬ ಆಶಯ ನನ್ನದು ಎಂದು ತಿಳಿಸಿದರು.

ಎರಡರ ನಡುವೆ ಬ್ಯಾಲೆನ್ಸ್ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕು. ಎಲ್ಲಾ ಶಾಲೆಗಳಲ್ಲಿ ಶುದ್ಧವಾದ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆರ್.ಒ.ಪ್ಲಾಂಟ್ ಗಳನ್ನು ಕೊಡುತಿದ್ದೇವೆ. ವಿದ್ಯಾರ್ಥಿಗಳಿಗೆ ನೀರು ಕುಡಿಯುವ ಅಭ್ಯಾಸ ಆಗಬೇಕು. ಆ ನಿಟ್ಟಿನಲ್ಲಿ ಕೇರಳ ಮಾದರಿಯಲ್ಲಿ ವಾಟರ್ ಬೆಲ್ ಪದ್ದತಿ ಜಾರಿ ಮಾಡುತ್ತೇವೆ ಎಂದು ಹೇಳಿದರು.

ಸರ್ಕಾರಿ ಶಾಲೆಯ ಆಂಗ್ಲ ಮಾಧ್ಯಮ ತರಗತಿಗಳು ಚೆನ್ನಾಗಿ‌ ನಡೀತಿದೆ. ಇನ್ನೂ ಹೆಚ್ಚಿನ ಪಬ್ಲಿಕ್ ಶಾಲೆಗಳು ಬೇಕಂತ ಶಾಸಕರುಗಳು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಚಿಂತನೆ ಮಾಡಲಾಗುವುದು ಎಂದು ತಿಳಿಸಿದರು.

ಪದವಿ ಕಾಲೇಜಿಗೆ ಭೇಟಿ


ಇದಕ್ಕೂ ಮುನ್ನ ಸಚಿವರು ಸರ್ಕಾರಿ ಪದವಿ ಕಾಲೇಜಿಗೆ ಭೇಟಿ ನೀಡಿದರು.

ಆನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಥಮ ದರ್ಜೆ ಕಾಲೇಜಿನಲ್ಲಿ 1600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಸುಸಜ್ಜಿತವಾದ ಕಾಲೇಜು ನಿರ್ಮಾಣವಾಗಬೇಕಾಗಿದೆ ಎಂದರು.

ಕಾಲೇಜಿನ ವಾತಾವರಣವನ್ನು ಕಣ್ಣಾರೆ ಕಂಡಿದ್ದೇನೆ. ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಜಾಗದ ತೊಡಕಿದೆ. ಅದನ್ನು ನಿವಾರಿಸಿ ಉತ್ತಮ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಾಸಕ ಜ್ಯೋತಿಗಣೇಶ್, ಕಾಲೇಜಿನ ಅಧ್ಯಾಪಕರು ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

VOTER LIST: ಯುವಕರಿಗೆ ಚನ್ನಬಸಪ್ಪ ಮನವಿ

Publicstory. in


Tumukuru; ಮತದಾನದ ಹಕ್ಕು ನಮ್ಮೆಲ್ಲರ ಹಕ್ಕು, ನಮ್ಮ ಮತದಾನದ ಮೂಲಕ ಭಾರತವನ್ನು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಕರೆ ನೀಡಿದರು.

ತುಮಕೂರಿನ ಬಾಲಭವನದ ನಡೆದ ರಾಷ್ಟ್ರೀಯ ಮತದಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದು ರಾಷ್ಟ್ರದಾದ್ಯಂತ ಮತದಾನದ ದಿನ ಆಚರಣೆ ಮಾಡುತ್ತಿದ್ದು, ದೇಶದ 18ವರ್ಷ ಮೇಲ್ಪಟ್ಟ ಎಲ್ಲಾ ಯುವಕರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಬೇಕು ಎಂಬುದು ಈ ರಾಷ್ಟ್ರೀಯ ಮತದಾನ ದಿನದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

2011ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಹಾಗೂ ಚುನಾವಣೆಯಲ್ಲಿ ಭಾಗವಹಿಸುವವರ ಸಂಖ್ಯೆ ಶೇ.60%ರಷ್ಟು ಮಾತ್ರ ಇತ್ತು. ಇದೀಗ ಪ್ರಸ್ತುತ ಶೇ.80ಕ್ಕೂ ಹೆಚ್ಚು ಇದೆ. ಆಗ ಎಲ್ಲಾ ಜನರಿಗೆ ಮತದಾನ, ಪ್ರಜಾಪ್ರಭುತ್ವ ಹಾಗೂ ಮೂಲಭೂತ ಅಂಶಗಳ ಬಗ್ಗೆ ಜಾಗೃತಿ ಇರಲಿಲ್ಲ. ಚುನಾವಣಾ ಪ್ರಚಾರದ ಸ್ವೀಪ್ ಕಾರ್ಯಕ್ರಮಗಳ ಮೂಲಕ ಮತದಾನದ ಸಾಕ್ಷರತೆ ನೀಡಲಾಗುತ್ತಿದೆ.

ನಮ್ಮ ಜಿಲ್ಲೆಯ ಬಿಎಲ್‍ಓಗಳು 18ವರ್ಷ ಮೇಲ್ಪಟ್ಟ ಎಲ್ಲಾ ಯುವ ಜನರನ್ನು ಮತದಾರ ಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ. ಮತದಾರರಿಗೆ ಮತದಾನ ಮಾಡಲು ಗುರುತಿಗಾಗಿ ಎಪಿಕ್ ಕಾರ್ಡ್ ನೀಡಲಾಗುತ್ತಿದೆ. ಒಳ್ಳೆಯ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನು ಮನದಲ್ಲಿಟ್ಟುಕೊಂಡು ನಾವು ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗದೆ, ನಮ್ಮ ಅಮೂಲ್ಯವಾದ ಮತವನ್ನು ಸ್ವಾತಂತ್ರವಾಗಿ ನ್ಯಾಯಸಮ್ಮತವಾಗಿ, ಮುಕ್ತವಾಗಿ ಸ್ವಇಚ್ಚೆಯಿಂದ ಚಲಾಯಿಸಬೇಕು. ಆಗ ಮಾತ್ರ ನಮ್ಮ ದೇಶ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಸಾಧ್ಯ ಎಂದು ಅವರು ತಿಳಿಸಿದರು.

ಜಿಲ್ಲೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಧೀಶರಾದ ರಾಘವೇಂದ್ರ ಶೆಟ್ಟಿಗಾರ್ ಅವರು ಮಾತನಾಡಿ, ಭಾರತದ ಸಂವಿಧಾನದಲ್ಲಿ ಭಾರತದ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರಿಗೆ ನೀಡಿದೆ. ಯುವ ಮತದಾರರಿಗೆ ಮತದಾನದ ಅರಿವು ಮೂಡಿಸುವುದೇ ಮುಖ್ಯ ಉದ್ದೇಶವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಸಂವಿಧಾನ ತಿಳಿಸಿರುವಂತೆ ಮತದಾನದ ಹಕ್ಕನ್ನು ಜಾಗರೂಕತೆಯಿಂದ, ಉತ್ತಮ ರೀತಿಯಾಗಿ ಚಲಾಯಿಸಬೇಕು ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳು ಹಾಗೂ ಪ್ರಬಂಧ ಮತ್ತು ರಸಪ್ರಶ್ನೆಯ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಟೌನ್‍ಹಾಲ್ ವೃತ್ತದಿಂದ ಬಾಲಭವನದವರೆಗೂ ಅರಿವಿನ ಜಾಥಾವು ನಡೆಯಿತು.

SIDDARTHA COLLEGE: ಪರಮೇಶ್ವರ್ ಹೇಳಿದ್ದೇನು?

Publicstory. In


ತುಮಕೂರು: ವಾಣಿಜ್ಯಮತ್ತು ಉದ್ಯಮ ಕ್ಷೇತ್ರದಲ್ಲಿ ಅನೇಕ ಸವಾಲುಗಳಿದ್ದು, ಆಸವಾಲುಗಳಿಗೆ ಕಾರಣಗಳನ್ನು ಹುಡುಕಿ ಅದಕ್ಕೆ ತಕ್ಕ ಪರಿಹಾರವನ್ನು ಕಂಡುಕೊಳ್ಳಬೇಕಾದ ಸಾಮರ್ಥ್ಯ ಮತ್ತು ಪರಿಣಿತಿ ಪಡೆದುಕೊಳ್ಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಜಿ.ಪರಮೇಶ್ವರ್ ಇಂಜನಿಯರಿಂಗ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತುಮಕೂರು ನಗರದ ಸಿದ್ಧಾರ್ಥ ತಾಂತ್ರಿಕ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಿಂದ ನೂತನವಾಗಿ ಆರಂಭಿಸಲಾದ ಉದ್ಯಮ ಸಂಪನ್ಮೂಲ ಕೇಂದ್ರವನ್ನು ಉದ್ಘಾಟಸಿ ಮಾತನಾಡಿದರು.

ಉದ್ಯಮ ಎನ್ನುವ ಪರಿಕಲ್ಪನೆಯು ಯುವಜನರನ್ನು ಉತ್ತೇಜಿಸುವುದಾಗಿದೆ. ಯುವಮನಸ್ಸುಗಳಲ್ಲಿ ಜೀವನದಲ್ಲಿ ಸಾಧಿಸುವ ಛಲ ಇರಬೇಕು. ನೀವು ಏನು ಮಾಡುತ್ತಿದ್ದಿರಾ ಎಂಬ ಬಗ್ಗೆ ನಿಮಗೆ ಸ್ಪಸ್ಟತೆ ಇರಬೇಕು. ಆಗ ಯುವಜನರು ಉದ್ಯಮವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಕಲಿಕೆಯ ಹಂತದಲ್ಲಿ ಪ್ರಾಕಲ್ಪನೆಗಳನ್ನು ಹಾಕಿಕೊಂಡು ವಿಭಿನ್ನ ರೀತಿಯಲ್ಲಿ ಆಲೋಚಿಸಿದಾಗ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ಶಿಕ್ಷಣ ಎನ್ನುವುದು ಪುಸ್ತಕಕ್ಕೆ ಸೀಮಿತವಾಗದೆ ಪ್ರಾಯೋಗಿಕ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗುತ್ತದೆ ಎಂದರು.

ಐಐಟಿ ಮತ್ತು ಇಡಿ ಸಂಸ್ಥೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ವಾಕ್ಚಾತುರ್ಯಕ್ಕೆ ಸಹಭಾಗಿಯಾಗಿದೆ. ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಪಡೆಯುವಲ್ಲಿ ಅವಕಾಶವನ್ನು ಕಲ್ಪಿಸುತ್ತದೆ.ಇದರಿಂದ ಉದ್ಯೋಗವನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನ ಮೈಕ್ರೋ ಎಲೆಕ್ಟ್ರಿಕಲ್ ನಿರ್ದೇಶಕ ಡಾ.ವಿ.ನಾಗರಾಜ್ ಮಾತನಾಡಿ, ಉದ್ಯಮ ಮಾಡುವುದರಿಂದ ಬೇರೆಯವರಿಗೆ ನೀವು ಉದ್ಯೋಗವನ್ನು ನೀಡಿದಂತಾಗುತ್ತದೆ. ಅಂದರೆ ಈ ದೇಶದಲ್ಲಿ ಉದ್ಯಮದಿಂದ ನಿರುದ್ಯೋಗವನ್ನು ಹೊಗಲಾಡಿಸಬಹುದು. ಉದ್ಯಮಗಳಲ್ಲಿ ಸರ್ಕಾರದಿಂದ ಬಿಡುಗಡೆಯಾಗುವ ಯೋಜನೆ ಬಳಸಿಕೊಂಡು ನಿಮ್ಮ ಉದ್ಯೋಗ ಪ್ರಾರಂಭಿಸಬಹುದು. ಅದಕ್ಕೆತಕ್ಕಹಲವಾರು ವೇಧಿಕೆ ಲಭಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸ್ನೇಹ ಮನೋವಿಕಾಸ ಕೇಂದ್ರದ ಡಾ.ಪದ್ಮಾಕ್ಷಿ ಲೋಕೇಶ್, ಸಾಹೆ ವಿಶ್ವವಿದ್ಯಾಲಯದ ಡಾ.ಎಮ್.ಝಡ್.ಕುರಿಯನ್, ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್, ಪವನ್ ಕುಮಾರ ಡೀನ್ಡಾ.ಎಂ.ಸಿದ್ದಪ್ಪ, ರಿಜಿಸ್ಟ್ರಾರ ಡಾ. ಕರುಣಾಕರ್ ಮೊದಲಾದವರು ಉಪಸ್ಥಿತರಿದ್ದರು.

Tumukuru: DC, CEO, COMMISSIONER ಗೆ ಪ್ರಶಸ್ತಿ

Tumkuru: 2019ರಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಾಗೂ ವಿಧಾನಸಭಾ ಉಪ ಚುನಾವಣೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಹಾಗೂ ಪಾಲಿಕೆ ಆಯುಕ್ತ ಟಿ. ಭೂಬಾಲನ್ ಅವರನ್ನು ರಾಜ್ಯಪಾಲರಾದ ವಜುಬಾಯ್ ರೂಢಬಾಯ್ ವಾಲಾ ಅವರು ಸನ್ಮಾನಿಸಿದರು.

ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ನಡೆದ ರಾಜ್ಯಮಟ್ಟದ ರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಓ ಹಾಗೂ ಪಾಲಿಕೆ ಆಯುಕ್ತರಿಗೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್, ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್, ಮತ್ತಿತರರು ಹಾಜರಿದ್ದರು.

ಸುಬಾಶ್ಚಂದ್ರ ಬೋಸ್ ನೆನೆದ ಜನಪರಸಂಘಟನೆಗಳ ಒಕ್ಕೂಟ

Publicstory. in


Tumukuru: ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ತುಮಕೂರಿನ ಜನಚಳವಳಿ ಕೇಂದ್ರದಲ್ಲಿ ಸ್ವಾತಂತ್ರ್ಯ ಸೇನಾನಿ ಸುಭಾಶ್ಚಂದ್ರ ಬೋಸ್ ಅವರ 124ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ಬಹಳ ಚಿಕ್ಕ ವಯಸ್ಸಿನಲ್ಲೇ ಬ್ರಿಟೀಷರ ವಿರುದ್ದ ಹೋರಾಟ ನಡೆಸಿದ ಸುಭಾಶ್ಚಂದ್ರ ಬೋಸ್ ವೈಜ್ಞಾನಿಕವಾಗಿ ದೇಶವನ್ನು ಮುನ್ನಡೆಸಬೇಕು. ಸಮಾಜವಾದಿ ಚಿಂತನೆಗಳ ಮುಖಾಂತರ ದೇಶವನ್ನು ಕಟ್ಟಬೇಕು ಎಂಬುದು ಅವರ ಬಹಳ ದೊಡ್ಡ ನಿಲುವಾಗಿತ್ತು. ಆದರೆ ಇಂದಿನ ಸಂದರ್ಭದಲ್ಲಿ ಅವರನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳ ಲಾಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಹೇಳಿದರು.

ಅವರ ಹೋರಾಟದ ನಿಲುವುಗಳು ಹಾಗೂ ದೇಶಪ್ರೇಮದ ವಿಚಾರಗಳನ್ನು ಇಂದಿನ ಯುವಕರಿಗೆ ಅರ್ಥ ಮಾಡಿಸಬೇಕಾಗಿದೆ. ಕಾರ್ಮಿಕ ಹಾಗೂ ದುಡಿಯುವ ರಂಗದ ಬಗ್ಗೆ ಸ್ಪಷ್ಟವಾದ ನಿಲುವು ಹೊಂದಿದ್ದ ಶುಭಾಶ್ಚಂದ್ರ ಬೋಸ್ ಮಾನವೀಯ ನಿಲುವುಗಳನ್ನು ಗೌರವಿಸುತ್ತಿದ್ದರು.

ಪ್ರಜಾಪ್ರಭುತ್ವದಲ್ಲಿ ಅಗಾಧವಾದ ನಂಬಿಕೆಯನ್ನು ಹೊಂದಿದ್ದರು. ಇಂತಹ ಮಹಾನ್ ವ್ಯಕ್ತಿಗಳ ವಿಚಾರಗಳು ವಿಚಾರಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದರು.

ಸಾಹಿತಿ ಡಾ.ಓ.ನಾಗರಾಜು ಮಾತನಾಡಿ, ಬೋಸ್ ಅವರ ಜೀವನ ಚರಿತ್ರೆಯು ಅತ್ಯಂತ ರೋಮಾಂಚನ ಮತ್ತು ಒಂದು ದಂತ ಕತೆಯಾಗಿದೆ. ಅವರು ಅತ್ಯಂತ ಚಿಕ್ಕವಯಸ್ಸಿನಲ್ಲೇ ಉನ್ನತ ವಿದ್ಯಾಭ್ಯಾಶವನ್ನು ಪಡೆದು ಅಪಾರವಾದ ಪಾಂಡಿತ್ಯ, ದೇಶಪ್ರೇಮಿ, ಶಿಸ್ತಿನ ಸಿಪಾಯಿ ಎಂದರು.

ಯಾವುದೇ ವಿಚಾರವನ್ನು ಆಳವಾಗಿ ತಿಳಿದುಕೊಂಡು ಮಾತನಾಡುವ ವಾಕ್ಚಾತುರ್ಯವನ್ನು ಹೊಂದಿದ್ದರು. ದೇಶದಿಂದ ಬ್ರಿಟೀಷರನ್ನು ತೊಲಗಿಸಲು ಐಎನ್‍ಎ ಸೈನ್ಯವನ್ನು ಜಾತ್ಯತೀತವಾಗಿ ಕಟ್ಟಿ ಎಲ್ಲ ವರ್ಗದ ಯುವಕ-ಯುವತಿಯರಿಗೆ ಸೈನ್ಯದಲ್ಲಿ ಅವಕಾಶ ನೀಡಿದ್ದರು. ನೀವೊಂದು ಹನಿ ರಕ್ತ ಕೊಟ್ಟರೆ, ನಾನು ದೇಶದ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂಬುದು ಅವರ ಪ್ರಮುಖ ಘೋಷನೆಯಾಗಿತ್ತು ಎಂದರು.

ಅಂದಿನ ಸಮಾಜವಾದಿ ರಾಷ್ಟ್ರಗಳ ಜೊತೆ ನಿಕಟವಾದ ಸಂಬಂಧ, ಅಲ್ಲಿನ ಸೈನ್ಯವನ್ನು ನಮ್ಮ ದೇಶಕ್ಕೆ ಕರೆತರುವ ಪ್ರಯತ್ನ ಮಾಡಿ ಬ್ರಿಟೀಷರಿಗೆ ನಡುಕವುಂಟು ಮಾಡಿದ್ದರು. ದೇಶಪ್ರೇಮ, ಸಮಾಜವಾದಿ ಚಿಂತನೆ, ಸಮಾಜದ ಕಟ್ಟಡ ಕಡೆಯ ವ್ಯಕ್ತಿಯ ಸ್ವಾತಂತ್ರ್ಯ ಇವುಗಳ ಬಗ್ಗೆ ಸ್ಪಷ್ಟವಾದ ನಿಲುವು ಹೊಂದಿದ್ದರು. ಇವರ ಆದರ್ಶಗಳು ಇಂದಿನ ಯುವಜನತೆಗೆ ಮಾದರಿಯಾಗಿವೆ ಎಂದು ಹೇಳಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ ಮಾತನಾಡಿ, ರಷ್ಯಾ ಕ್ರಾಂತಿಯು ಸುಭಾಶ್ಚಂದ್ರ ಬೋಸ್ ಮೇಲೆ ಅಗಾಧ ಪರಿಣಾಮ ಬೀರಿತು. ಅದರ ಸ್ಫೂರ್ತಿಯಿಂದಲೇ ಅವರು ನಮ್ಮ ದೇಶದಲ್ಲಿ ಸೈನ್ಯವನ್ನು ಕಟ್ಟಲು ಸಾಧ್ಯವಾಯಿತು ಎಂದರು.

1946ರಲ್ಲಿ ನಾನು ಮೈಸೂರಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಎಲ್ಲ ಯುವಕರ ಕೈಯಲ್ಲಿ ಸಉಭಾಶ್ಚಂದ್ರ ಬೋಸ್ ಪೋಟೋ ಹಿಡಿದು ಬ್ರಿಟೀಷರ ವಿರುದ್ಧ ಪ್ರತಿಭಟನೆ ನಡೆಸಿದೆವು. ಹೋರಾಟ ತೀವ್ರಗೊಂಡಿದ್ದರಿಂದ ನಾವು ಬಂದನಕ್ಕೆ ಒಳಗಾದೆವು ಎಂದು ಮೆಲುಕುಹಾಕಿದರು.

ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ ಮಾತನಾಡಿ, ಸುಭಾಶ್ಚಂದ್ರ ಬೋಸ್ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮನ್ನು ಸಂಫೂರ್ಣವಾಗಿ ತೊಡಗಿಸಿಕೊಂಡಿದ್ದರು. ಅವರು ಐಎನ್‍ಎ ಸೈನ್ಯ ಕಟ್ಟಿದ ಸಂದರ್ಭದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಿದ್ದರು ಎಂದರು.

ಸಿಪಿಐ ಎಂ ನ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿದ್ದ ಲಕ್ಷ್ಮಿ ಸೆಹೆಗಲ್ ಕೂಡ ಐಎನ್‍ಎ ಸೈನ್ಯದ ಕ್ಯಾಪ್ಟನ್ ಆಗಿದ್ದರು. ಅವರು ಸರ್ಕಾರಿ ವೈದ್ಯ ಆಗಿದ್ದರೂ ವೈದ್ಯ ವೃತ್ತಿಗೆ ರಾಜಿನಾಮೆ ಸಲ್ಲಿಸಿ ದೇಶದ ಸಮಾಜವಾದಿ ಚಿಂತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರ ಅಂತಿಮ ದಿನಗಳಲ್ಲಿ ಸುಭಾಶ್ಚಂದ್ರ ಬೋಸ್ ಸೈನ್ಯದ ಜೊತೆಗಿದ್ದ ಹಲವಾರು ಘಟನೆಗಳನ್ನು ಸ್ಮರಿಸಿದರು. ಬೋಸ್ ಮರಣದ ಸುದ್ದಿ ಸೆಹೆಗಲ್ ಅವರ ಅಂತಿಮ ದಿನದವರೆಗೂ ಬಹಳವಾಗಿ ಕಾಡಿತ್ತು ಎಂದು ತಿಳಿಸಿದರು.

ವೇದಿಕೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ, ಡಿವೈಎಫ್‍ಐ ಜಿಲ್ಲಾಧ್ಯಕ್ಷ ಎಸ್. ರಾಘವೇಂದ್ರ, ಸಿಐಟಿಯು ತಾಲೂಕು ಅಧ್ಯಕ್ಷ ಷಣ್ಮುಖಪ್ಪ, ರಂಗಧಾಮಯ್ಯ, ಯುವಮುಖಂಡ ಜಿ. ದರ್ಶನ್ ಮೊದಲಾದವರು ಉಪಸ್ಥಿತರಿದ್ದರು.

ಸುಬಾಶ್ಚಂದ್ರ ಬೋಸ್ ನೆನೆದ ಜನಪರಸಂಘಟನೆಗಳ ಒಕ್ಕೂಟ

Publicstory. in


Tumukuru: ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ತುಮಕೂರಿನ ಜನಚಳವಳಿ ಕೇಂದ್ರದಲ್ಲಿ ಸ್ವಾತಂತ್ರ್ಯ ಸೇನಾನಿ ಸುಭಾಶ್ಚಂದ್ರ ಬೋಸ್ ಅವರ 124ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ಬಹಳ ಚಿಕ್ಕ ವಯಸ್ಸಿನಲ್ಲೇ ಬ್ರಿಟೀಷರ ವಿರುದ್ದ ಹೋರಾಟ ನಡೆಸಿದ ಸುಭಾಶ್ಚಂದ್ರ ಬೋಸ್ ವೈಜ್ಞಾನಿಕವಾಗಿ ದೇಶವನ್ನು ಮುನ್ನಡೆಸಬೇಕು. ಸಮಾಜವಾದಿ ಚಿಂತನೆಗಳ ಮುಖಾಂತರ ದೇಶವನ್ನು ಕಟ್ಟಬೇಕು ಎಂಬುದು ಅವರ ಬಹಳ ದೊಡ್ಡ ನಿಲುವಾಗಿತ್ತು. ಆದರೆ ಇಂದಿನ ಸಂದರ್ಭದಲ್ಲಿ ಅವರನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳ ಲಾಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಹೇಳಿದರು.

ಅವರ ಹೋರಾಟದ ನಿಲುವುಗಳು ಹಾಗೂ ದೇಶಪ್ರೇಮದ ವಿಚಾರಗಳನ್ನು ಇಂದಿನ ಯುವಕರಿಗೆ ಅರ್ಥ ಮಾಡಿಸಬೇಕಾಗಿದೆ. ಕಾರ್ಮಿಕ ಹಾಗೂ ದುಡಿಯುವ ರಂಗದ ಬಗ್ಗೆ ಸ್ಪಷ್ಟವಾದ ನಿಲುವು ಹೊಂದಿದ್ದ ಶುಭಾಶ್ಚಂದ್ರ ಬೋಸ್ ಮಾನವೀಯ ನಿಲುವುಗಳನ್ನು ಗೌರವಿಸುತ್ತಿದ್ದರು.

ಪ್ರಜಾಪ್ರಭುತ್ವದಲ್ಲಿ ಅಗಾಧವಾದ ನಂಬಿಕೆಯನ್ನು ಹೊಂದಿದ್ದರು. ಇಂತಹ ಮಹಾನ್ ವ್ಯಕ್ತಿಗಳ ವಿಚಾರಗಳು ವಿಚಾರಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದರು.

ಸಾಹಿತಿ ಡಾ.ಓ.ನಾಗರಾಜು ಮಾತನಾಡಿ, ಬೋಸ್ ಅವರ ಜೀವನ ಚರಿತ್ರೆಯು ಅತ್ಯಂತ ರೋಮಾಂಚನ ಮತ್ತು ಒಂದು ದಂತ ಕತೆಯಾಗಿದೆ. ಅವರು ಅತ್ಯಂತ ಚಿಕ್ಕವಯಸ್ಸಿನಲ್ಲೇ ಉನ್ನತ ವಿದ್ಯಾಭ್ಯಾಶವನ್ನು ಪಡೆದು ಅಪಾರವಾದ ಪಾಂಡಿತ್ಯ, ದೇಶಪ್ರೇಮಿ, ಶಿಸ್ತಿನ ಸಿಪಾಯಿ ಎಂದರು.

ಯಾವುದೇ ವಿಚಾರವನ್ನು ಆಳವಾಗಿ ತಿಳಿದುಕೊಂಡು ಮಾತನಾಡುವ ವಾಕ್ಚಾತುರ್ಯವನ್ನು ಹೊಂದಿದ್ದರು. ದೇಶದಿಂದ ಬ್ರಿಟೀಷರನ್ನು ತೊಲಗಿಸಲು ಐಎನ್‍ಎ ಸೈನ್ಯವನ್ನು ಜಾತ್ಯತೀತವಾಗಿ ಕಟ್ಟಿ ಎಲ್ಲ ವರ್ಗದ ಯುವಕ-ಯುವತಿಯರಿಗೆ ಸೈನ್ಯದಲ್ಲಿ ಅವಕಾಶ ನೀಡಿದ್ದರು. ನೀವೊಂದು ಹನಿ ರಕ್ತ ಕೊಟ್ಟರೆ, ನಾನು ದೇಶದ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂಬುದು ಅವರ ಪ್ರಮುಖ ಘೋಷನೆಯಾಗಿತ್ತು ಎಂದರು.

ಅಂದಿನ ಸಮಾಜವಾದಿ ರಾಷ್ಟ್ರಗಳ ಜೊತೆ ನಿಕಟವಾದ ಸಂಬಂಧ, ಅಲ್ಲಿನ ಸೈನ್ಯವನ್ನು ನಮ್ಮ ದೇಶಕ್ಕೆ ಕರೆತರುವ ಪ್ರಯತ್ನ ಮಾಡಿ ಬ್ರಿಟೀಷರಿಗೆ ನಡುಕವುಂಟು ಮಾಡಿದ್ದರು. ದೇಶಪ್ರೇಮ, ಸಮಾಜವಾದಿ ಚಿಂತನೆ, ಸಮಾಜದ ಕಟ್ಟಡ ಕಡೆಯ ವ್ಯಕ್ತಿಯ ಸ್ವಾತಂತ್ರ್ಯ ಇವುಗಳ ಬಗ್ಗೆ ಸ್ಪಷ್ಟವಾದ ನಿಲುವು ಹೊಂದಿದ್ದರು. ಇವರ ಆದರ್ಶಗಳು ಇಂದಿನ ಯುವಜನತೆಗೆ ಮಾದರಿಯಾಗಿವೆ ಎಂದು ಹೇಳಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ ಮಾತನಾಡಿ, ರಷ್ಯಾ ಕ್ರಾಂತಿಯು ಸುಭಾಶ್ಚಂದ್ರ ಬೋಸ್ ಮೇಲೆ ಅಗಾಧ ಪರಿಣಾಮ ಬೀರಿತು. ಅದರ ಸ್ಫೂರ್ತಿಯಿಂದಲೇ ಅವರು ನಮ್ಮ ದೇಶದಲ್ಲಿ ಸೈನ್ಯವನ್ನು ಕಟ್ಟಲು ಸಾಧ್ಯವಾಯಿತು ಎಂದರು.

1946ರಲ್ಲಿ ನಾನು ಮೈಸೂರಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಎಲ್ಲ ಯುವಕರ ಕೈಯಲ್ಲಿ ಸಉಭಾಶ್ಚಂದ್ರ ಬೋಸ್ ಪೋಟೋ ಹಿಡಿದು ಬ್ರಿಟೀಷರ ವಿರುದ್ಧ ಪ್ರತಿಭಟನೆ ನಡೆಸಿದೆವು. ಹೋರಾಟ ತೀವ್ರಗೊಂಡಿದ್ದರಿಂದ ನಾವು ಬಂದನಕ್ಕೆ ಒಳಗಾದೆವು ಎಂದು ಮೆಲುಕುಹಾಕಿದರು.

ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ ಮಾತನಾಡಿ, ಸುಭಾಶ್ಚಂದ್ರ ಬೋಸ್ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮನ್ನು ಸಂಫೂರ್ಣವಾಗಿ ತೊಡಗಿಸಿಕೊಂಡಿದ್ದರು. ಅವರು ಐಎನ್‍ಎ ಸೈನ್ಯ ಕಟ್ಟಿದ ಸಂದರ್ಭದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಿದ್ದರು ಎಂದರು.

ಸಿಪಿಐ ಎಂ ನ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿದ್ದ ಲಕ್ಷ್ಮಿ ಸೆಹೆಗಲ್ ಕೂಡ ಐಎನ್‍ಎ ಸೈನ್ಯದ ಕ್ಯಾಪ್ಟನ್ ಆಗಿದ್ದರು. ಅವರು ಸರ್ಕಾರಿ ವೈದ್ಯ ಆಗಿದ್ದರೂ ವೈದ್ಯ ವೃತ್ತಿಗೆ ರಾಜಿನಾಮೆ ಸಲ್ಲಿಸಿ ದೇಶದ ಸಮಾಜವಾದಿ ಚಿಂತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರ ಅಂತಿಮ ದಿನಗಳಲ್ಲಿ ಸುಭಾಶ್ಚಂದ್ರ ಬೋಸ್ ಸೈನ್ಯದ ಜೊತೆಗಿದ್ದ ಹಲವಾರು ಘಟನೆಗಳನ್ನು ಸ್ಮರಿಸಿದರು. ಬೋಸ್ ಮರಣದ ಸುದ್ದಿ ಸೆಹೆಗಲ್ ಅವರ ಅಂತಿಮ ದಿನದವರೆಗೂ ಬಹಳವಾಗಿ ಕಾಡಿತ್ತು ಎಂದು ತಿಳಿಸಿದರು.

ವೇದಿಕೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ, ಡಿವೈಎಫ್‍ಐ ಜಿಲ್ಲಾಧ್ಯಕ್ಷ ಎಸ್. ರಾಘವೇಂದ್ರ, ಸಿಐಟಿಯು ತಾಲೂಕು ಅಧ್ಯಕ್ಷ ಷಣ್ಮುಖಪ್ಪ, ರಂಗಧಾಮಯ್ಯ, ಯುವಮುಖಂಡ ಜಿ. ದರ್ಶನ್ ಮೊದಲಾದವರು ಉಪಸ್ಥಿತರಿದ್ದರು.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಿದ ಗುಬ್ಬಿ ವೀರಣ್ಣ: ಶಾಂತರಾಜು

Publicstory. in


Gubbi: ಗುಬ್ಬಿ ವೀರಣ್ಣ ನವರ ಬಾಲ್ಯ ಜೀವನ ಹಾಗೂ ರಂಗಭೂಮಿಗೆ ಗುಬ್ಬಿ ಕಂಪನಿಯ ಕೊಡುಗೆ ಅಪಾರ. ಕನ್ನಡ ರಂಗಭೂಮಿ ಇತಿಹಾಸದಲ್ಲಿ ಮುಕುಟ ಪ್ರಾಯವಾಗಿದ್ದರೆ. ಡಾ. ರಾಜಕುಮಾರ್ ರವರಂಥಹ ಮೇರು ನಟರನ್ನು ಈ ನಾಡಿಗೆ ನೀಡಿದೆ.ಒಂದು ಕುಟುಂಬದಂತೆ ತಮ್ಮ ನಾಟಕ ಕಂಪನಿಯನ್ನು ಕಟ್ಟಿ ಬೆಳೆಸಿದ್ದಾರೆ ಎಂದು ಸಾಹಿತಿ ಆರ್.ಪಾಲಾಕ್ಷ ಹೇಳಿದರು.

ಗುಬ್ಬಿ ಕಸಾಪ ಆಯೋಜಿಸಿದ್ದ ಗುಬ್ಬಿ ವೀರಣ್ಣ ಅವರ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ.ಸಾ.ಪ. ಅಧ್ಯಕ್ಷ ಶಾಂತರಾಜು ಮಾತನಾಡುತ್ತಾ, ಗುಬ್ಬಿ ವೀರಣ್ಣ ನವರ ಜನ್ಮ ದಿನದಂದೇ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿರುವುದು ಕಾಕತಾಳೀಯ. ಗುಬ್ಬಿ ವೀರಣ್ಣ ನವರು ಹೆಣ್ಣು ಮಕ್ಕಳ ಭವಿಷ್ಯ ಬಗ್ಗೆ ಕಾಳಜಿ ಇದ್ದುದರಿಂಗಾಗಿಯೇ ಈ ಶಾಲೆಯನ್ನು ಸ್ಥಾಪಿಸಿದ್ದಾರೆ.ಅವರು ಸಂಸ್ಕೃತಿ ಜೊತೆಗೆ ಸಾಮಾಜಿಕ ಕಾಳಜಿಯನ್ನು ಹೊದ್ದಿದ್ದರು ಎಂದರು.

ಹೆಣ್ಣು ಮಕ್ಕಳಿಗಾಗಿಯೇ ಸರ್ಕಾರವು ಅನೇಕ ಕಾನೂನುಗಳನ್ನು ರೂಪಿಸಿದೆ.ಹೆಣ್ಣು ಮಕ್ಕಳು ಸಾಂವಿಧಾನಿಕ ಸವಲತ್ತುಗಳನ್ನು ಬಳಸಿಕೊಂಡು ಅನ್ಯಾಯದ ವಿರುದ್ಧ ಹೋರಾಡುತ್ತಾ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.

ಮುಖ್ಯೋಪಾದಯರಾದ ಗಂಗಾಧರ್ ರವರು ಮತನಾಡಿ, ಈ ಶಾಲೆಯಲ್ಲಿ ಓದುವುದು ಹೆಮ್ಮೆಯ ವಿಚಾರ. ಗುಬ್ಬಿ ವೀರಣ್ಣನವರು ಈ ಶಾಲೆಯನ್ನು ಸ್ಥಾಪಿಸಲು ಈ ಜಾಗವನ್ನು ನೀಡಲು ಸಿದ್ಧವಿರುವುದಾಗಿ ಸರ್ಕಾರಕ್ಕೆ ಬರೆದ ಅವರ ಕೈ ಬರಹದ ಪತ್ರವನ್ನು ಈಗಲೂ ನಮ್ಮ ಶಾಲೆಯಲ್ಲಿ ಇಟ್ಟಿದ್ದೇವೆ.ಅವರ ಆಶಯವನ್ನು ನೀವು ಈಡೇರಿಸಬೇಕು.ನಿಮ್ನ ಆಲೋಚನೆಗಳು ಸ್ಮಾರ್ಟ್ ಆಗುತ್ತಾ ಹೋಗುತ್ತಿರಲಿ ಎಂದು ತಿಳಿಸಿದರು.

ದ್ರೋಣ ‘ದಿ ಮಾಸ್ಟರ್’ ಲುಕ್ ನಲ್ಲಿ ಶಿವರಾಜ್ ಕುಮಾರ್

0

ಪಬ್ಲಿಕ್ ಸ್ಟೋರಿ.ಇನ್


ಡಾ.ಶಿವರಾಜ್ ಕುಮಾರ್ ಅವರ ‘ದ್ರೋಣ’ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆಯಂತೆ.

ದ್ರೋಣ.. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮತ್ತೊಂದು ಸ್ಪೆಷಲ್ ಸಿನಿಮಾ.

ದಿ ಮಾಸ್ಟರ್ ಎನ್ನುವ ಟ್ಯಾಗ್ ಲೈನ್ ನೊಂದಿಗೆ ದ್ರೋಣ ತೆರೆಗೆ ಬರುತ್ತಿದೆ. ಪ್ರಸ್ತುತ ಸಮಾಜದಲ್ಲಿ, ಶೈಕ್ಷಣಿಕ ಕ್ಷೇತ್ರದ ಅವ್ಯವಸ್ಥೆ, ಸರ್ಕಾರಿ ಶಾಲೆಗಳ ಬಗೆಗಿನ ಕೀಳಿರಿಮೆ. ಶೈಕ್ಷಣಿಕ ಕ್ಷೇತ್ರದಲ್ಲಿನ ಅನ್ಯಾಯ ಧೋರಣೆ ವಿರುದ್ಧ ಹೋರಾಟ ಮಾಡುವ ಶಿಕ್ಷಕನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾದ ಮೂಲಕ ಮತ್ತೊಮ್ಮೆ ವಿಶಿಷ್ಠಪಾತ್ರದಲ್ಲಿ ಅಭಿಮಾನಿಗಳ ಮುಂದೆ ಶಿವಣ್ಣ ಬರ್ತಿದ್ದಾರೆ.

ನಾಯಕಿಯಾಗಿ ತಮಿಳಿನ ಇನಿಯಾ ನಟಿಸಿದ್ದಾರೆ. ಸ್ವಾತಿ ಶರ್ಮಾ, ರಂಗಾಯಣ ರಘು, ಬಾಬು ಹಿರಣ್ಣಯ್ಯ, ಶಂಕರ್ ರಾವ್, ರೇಖಾದಾಸ್, ರಾಮಸ್ವಾಮಿ ಗೌಡ, ಶ್ರೀನಿವಾಸ್ ಗೌಡ, ಆನಂದ್, ನಾರಾಯಣ ಸ್ವಾಮಿ, ರವಿಕಿಶನ್, ಜಯಶ್ರೀ, ಮಾಸ್ಟರ್ ಮಹೇಂದ್ರ ಸೇರಿದಂತೆ ಬಹು ದೊಡ್ಡ ತಾರಾಬಳಗವಿದೆ.

ಪ್ರಮೋದ್ ಚಕ್ರವರ್ತಿ ನಿರ್ದೇಶಿಸಿದ್ದಾರೆ. ಡಾಲ್ಫಿನ್ ಮೀಡಿಯಾ ಹೌಸ್ ಬ್ಯಾನರ್ ನಲ್ಲಿ ಮಹದೇವ.ಬಿ, ಎಸ್.ಬಿ.ಹೆಚ್ (ಸಂಗಮೇಶ್ ಬಿ) ಶೇಷು ಚಕ್ರವರ್ತಿ ನಿರ್ಮಾಣ ಮಾಡಿದ್ದಾರೆ. ರಾಮ್ ಕ್ರಿಶ್ ಸಂಗೀತ, ಜಗದೀಶ್ ವಾಲಿ ಛಾಯಾಗ್ರಹಣ ನೀಡಿದ್ದಾರೆ. ಟೀಸರ್ ಈಗಾಗಲೆ ರಿಲೀಸ್ ಆಗಿದೆ. ಕನ್ನಡ ಸಿನಿ ಪ್ರಿಯರಲ್ಲಿ ವಿಶೇಷ ಕುತೂಹಲವನ್ನು ಹುಟ್ಟಿಸಿದೆ. ಈಚೆಗೆ ರಿಲೀಸ್ ಆಗಿದ್ದ ಮೊದಲ ಲಿರಿಕಲ್ ವಿಡಿಯೋ ರಾಮನ ಹಾಡು ಜನ ಮನ್ನಣೆಗಳಿಸಿದೆ.

ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು ಪ್ರಚಾರ ಕಾರ್ಯವನ್ನ ಶುರುಮಾಡೋದಕ್ಕೆ ಚಿತ್ರ ತಂಡ ಮುಂದಾಗಿದೆ. ಮೊದಲ ಮೇಕಿಂಗ್ ವಿಡಿಯೋ ರಿಲೀಸ್ ಮಾಡೋದಕ್ಕೆ ತಯಾರಿ ನಡೆದಿದೆ. ಈ ವಾರ ದ್ರೋಣ ಚಿತ್ರದ ಮೊದಲ ಮೇಕಿಂಗ್ ವಿಡಿಯೋ ರಿಲೀಸ್ ಆಗಲಿದೆ. ಸದ್ಯದಲ್ಲೇ ಆಡಿಯೋ ಲಾಂಚ್ ಮತ್ತು ಟ್ರೈಲರ್ ನ ಲಾಂಚ್ ಮಾಡಿ ಚಿತ್ರ ಬಿಡುಗಡೆ ಮಾಡುವ ದಿನಾಂಕ ಅಭಿಮಾನಿಗಳಿಗೆ ತಿಳಿಸಲಿದ್ದಾರಂತೆ.

ಸಿನಿ ಪ್ರಿಯರಂತೂ ಶಿವಣ್ಣ ಅವರು ವಿಭಿನ್ನ ಪಾತ್ರದಲ್ಲಿ ನಟಿಸಿರುವ ಚಿತ್ರದ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ.

ವರ್ಷದಲ್ಲಿ 1 ಲಕ್ಷ ಹೆಣ್ಣು ಭ್ರೂಣ ಹತ್ಯೆ: CEO ಶುಭಕಲ್ಯಾಣ್

Publicstory. in


Tumukuru: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಕಾನೂನು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಕ್ಕಳ ಸಹಾಯವಾಣಿ -1098 ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ ಸಹಯೋಗದಲ್ಲಿ ನಗರದ ಬಾಲಭವನದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ” ಉದ್ಘಾಟಿಸಿ ಅವರು ಮಾತನಾಡಿದರು.

ಸಾಧಕ ಮಕ್ಕಳನ್ನು ಸನ್ಮಾನಿಸಲಾಯಿತು

ಹಿಂದಿನ ಕಾಲದಿಂದಲೂ ಶೋಷಿತ ವರ್ಗವೆಂದೇ ಕರೆಸಿಕೊಳ್ಳುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಹಾಗೂ ಶಿಕ್ಷಣದ ಬಗ್ಗೆ ಪ್ರತಿಯೊಬ್ಬರು ಯೋಚಿಸಬೇಕು. ಹೆಣ್ಣು ಭ್ರೂಣಹತ್ಯೆ, ವರದಕ್ಷಿಣೆ, ಬಾಲ್ಯವಿವಾಹ, ಅತ್ಯಾಚಾರ ಸೇರಿದಂತೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಹೆಣ್ಣಿನ ರಕ್ಷಣೆಗೆ ಈ ಆಧುನಿಕ ಯುಗದಲ್ಲಿ ಕಾನೂನು ಅನಿವಾರ್ಯ. ಹಾಗಾಗಿ ಎಲ್ಲರೂ ಕಾನೂನನ್ನು ಅರಿತುಕೊಳ್ಳಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.

ದಕ್ಷಿಣ ಭಾರತ ಭಾಗದಲ್ಲಿ ಬಾಲ್ಯವಿವಾಹ ಕಡಿಮೆಯಾಗಿದೆ. ಉತ್ತರ ಭಾರತದ ಕೆಲವೊಂದು ಪ್ರದೇಶಗಳಲ್ಲಿ ಇನ್ನೂ ಬಾಲ್ಯವಿವಾಹ ಚಾಲ್ತಿಯಲ್ಲಿದೆ. ಬಾಲ್ಯ ವಿವಾಹ ಕಾನೂನು ಪ್ರಕಾರ ಅಪರಾಧ. ಹಾಗಾಗಿ ಬಾಲ್ಯ ವಿವಾಹ ಕಂಡುಬಂದಲ್ಲಿ ಯಾರೂ ಬೇಕಾದರೂ ಹತ್ತಿರದ ಪೊಲೀಸ್ ಠಾಣೆ ಅಥವಾ ತಾಲ್ಲೂಕಿನ ಪ್ರಥಮ ನ್ಯಾಯಿಕ ದಂಡಾಧಿಕಾರಿ ಅವರಿಗೆ ದೂರು ನೀಡಬಹುದು ಎಂದು ಅವರು ತಿಳಿಸಿದರು.

ಹೆಣ್ಣು ಮಕ್ಕಳಿಗೆ ಹೆಚ್ಚಿನ ಬೆಂಬಲ, ಅವಕಾಶಗಳನ್ನು ನೀಡುವ ಸಲುವಾಗಿ ಮತ್ತು ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಲಿಂಗ ತಾರತಮ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಕಲ್ಯಾಣ್ ಮಾತನಾಡಿ, ಒಂದು ವರ್ಷದಲ್ಲಿ ಸುಮಾರು ಒಂದು ಲಕ್ಷ ಹೆಣ್ಣು ಮಕ್ಕಳು ತಾಯಿಯ ಗರ್ಭದಲ್ಲಿಯೇ ಸಾವನ್ನಪ್ಪುತ್ತಿವೆ. ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಇನ್ನೂ ನಿಂತಿಲ್ಲ ಎಂದು ವಿಷಾದಿಸಿದ ಅವರು ಇಂದು ಈ ಭೂಮಿ ಮೇಲೆ ಹೆಣ್ಣಾಗಿ ಹುಟ್ಟಿರುವ ನೀವುಗಳು ಉನ್ನತ ಶಿಕ್ಷಣ ಪಡೆಯುವ ಮುಖಾಂತರ ಅಪಾರವಾದ ಸಾಧನೆ ಮಾಡಬೇಕು ಎಂದು ಮಕ್ಕಳಿಗೆ ತಿಳಿ ಹೇಳಿದರು.


ಪ್ರಸ್ತುತ ಕಾಲ ಘಟ್ಟದಲ್ಲಿ ಪ್ರತಿ ವರ್ಷವೂ ಸಹ ಎಸ್‍ಎಸ್‍ಎಲ್‍ಸಿಯಲ್ಲಿ ಪರೀಕ್ಷೆಯಲ್ಲಿ ಹೆಣ್ಣು ಮಕ್ಕಳ ಮೇಲುಗೈ ಸಾಧಿಸುತ್ತಾರೆ. ಅದು ಎಸ್‍ಎಸ್‍ಎಲ್‍ಸಿಗೆ ಮಾತ್ರ ಸೀಮಿತವಾಗಿರಬಾರದು. ಉನ್ನತ ಮಟ್ಟದ ಶಿಕ್ಷಣದ ಸಾಧನೆ ಹಾಗೂ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವವರೆಗೂ ಮುಂದುವರೆಸಬೇಕು ಎಂದು ಶುಭಾ ಕಲ್ಯಾಣ್ ಹೇಳಿದರು.

ಹೆಣ್ಣು ಮಕ್ಕಳು ಸಂಸ್ಕೃತಿ ಚೌಕಟ್ಟಿನಲ್ಲಿಯೇ ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆದು ಸಾಧನೆ ಮಾಡಬಹುದು. ತಂದೆ-ತಾಯಿಯ ಮಾತನ್ನು ಶಿರಸವಹಿಸಿ ಪಾಲಿಸಬೇಕು. ಅವರ ಮಾರ್ಗದರ್ಶನದಲ್ಲಿ ಬೆಳೆಯಬೇಕು ಎಂದು ಮಕ್ಕಳಿಗೆ ಅವರು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಗಾಯಿತ್ರಿ ಅವರು ಮಾತನಾಡಿ, 2008 ರಿಂದ ದೇಶದ ಎಲ್ಲಾ ರಾಜ್ಯಗಳಲ್ಲೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ಮಹಿಳೆಯರ ರಕ್ಷಣೆ ಮತ್ತು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಸಹ “ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ” ಎಂಬ ಗಾದೆ ಮಾತಿದೆ. ಆದರೆ ಈ ರೀತಿಯ ಮನೋಭಾವನೆಯನ್ನು ತೆಗೆದು ಹಾಕಬೇಕು. ಹೆಣ್ಣು ಮಕ್ಕಳಿಗೆ ಯಾವುದೇ ಕಟ್ಟುಪಾಡುಗಳನ್ನು ವಿಧಿಸದೆ, ಅವರ ಮೆಲೆ ನಿರ್ಭಂದ ಹೇರದೆ ಹೆಚ್ಚಿನ ಅವಕಾಶಗಳನ್ನು ಹೆಣ್ಣು ಮಕ್ಕಳಿಗೆ ಒದಗಿಸಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ ಮಾತನಾಡಿ, ಭಾರತದ ನೆಲದಲ್ಲಿ, ಸಾಂವಿಧಾನಿಕ ವ್ಯವಸ್ಥೆಯಲ್ಲಿ ಹೆಣ್ಣಿಗೆ ಪ್ರತಿಷ್ಟಿತ ಸ್ಥಾನವಿದೆ. ಹಾಗಾಗಿ ಎಲ್ಲಾ ಹೆಣ್ಣು ಮಕ್ಕಳು ಸಾಧನೆಯಡೆಗೆ ಮುನ್ನಡೆಯಬೇಕು. ಸಾಮಾಜಿಕ ಸಮಸ್ಯೆಗಳಿಗೆ ದಿವ್ಯ ಔಷಧ ಶಿಕ್ಷಣವಾಗಿದೆ. ಸಮಾಜ, ಸರ್ಕಾರ, ಪೋಷಕರು, ಶಿಕ್ಷಕರು ಪ್ರತಿಯೊಂದು ಮಗುವಿಗೆ ಶಿಕ್ಷಣವನ್ನು ಒದಗಿಸುವ ಕರ್ತವ್ಯವನ್ನು ಪಾಲಿಸಬೇಕು ಎಂದು ಅವರು ತಿಳಿಸಿದರು.

ಮಕ್ಕಳು ಶೈಕ್ಷಣಿಕ ವ್ಯವಸ್ಥೆಯಲ್ಲಿ ಕಲಿತದದ್ದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣ ಎನ್ನುವುದು ನಿರಂತರವಾಗಿರಬೇಕು. ಮಹಿಳೆಯರ ಸಾಧನೆಯನ್ನು ಮಾರ್ಗದರ್ಶನವನ್ನಾಗಿಸಿಕೊಂಡು ಉತ್ತಮ ಭವಿಷ್ಯ ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.