Monday, December 22, 2025
Google search engine
Home Blog Page 318

ಮಹಾರಾಷ್ಟ್ರದ ಲ್ಲಿ ರೆಸಾರ್ಟ್‌ ರಾಜಕಾರಣ ಶುರು; ಶಾಸಕರ ಕಲೆ ಹಾಕುವತ್ತ ಚಿತ್ತ

: ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಓಡಿ ಹೋಗಿದ್ದಾರೆ ಎಂದು ಕಾಂಗ್ರೆಸ್ ಗೇಲಿ ಮಾಡಿದೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಣಧೀಪ್ ಸುರ್ಜಿವಾಲಾ, ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಮತ್ತು ಎನ್.ಸಿ.ಪಿ ನಾಯಕರು ಬಿಜೆಪಿಗೆ ಬಹುಮತಕ್ಕೆ ಬೇಕಾದ ಶಾಸಕರ ಸಂಖ್ಯೆಯ ಇಲ್ಲ ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿ ಕಾನೂನುಬಾಹಿರವಾಗಿ ಸರ್ಕಾರ ರಚನೆ ಮಾಡಿದೆ. ಹಾಗಾಗಿ ಬಹುಮತ ಸಾಬೀತುಪಡಿಸುವುದೊಂದೇ ಪರಿಹಾರ ಮಾರ್ಗ ಎಂದು ಹೇಳಿದ್ದಾರೆ.

ಕ್ಷಿಪ್ರ ನಾಟಕೀಯ ಬೆಳವಣಿಗೆಯಲ್ಲಿ ಬಿಜೆಪಿಯ ದೇವೇಂದ್ರ ಫಡ್ನಾವೀಸ್ ಮತ್ತು ಎನ್.ಸಿ.ಪಿಯ ಻ಜಿತ್ ಪವಾರ್ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಹೀಗಾಗಿ ನಮ್ಮದು ಸಾಮಾನ್ಯ ಬೇಡಿಕೆ. ಸದನದಲ್ಲಿ ಬಹುಮತ ಸಾಬೀತುಪಡಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್, ಎನ್.ಸಿ.ಪಿ. ಮತ್ತು ಶಿವಸೇನೆಗೆ ಬಹುಮತವಿದೆ. ಸದನದಲ್ಲಿ ನಾವು ಬಹುಮತವನ್ನು ಸ್ಥಾಪಿಸುತ್ತೇವೆ ಮತ್ತು ಸಾಬೀತುಪಡಿಸುತ್ತೇವೆ ಎಂದರು.

ಬಿಜೆಪಿ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬಂದಿದೆ. ಹಾಗಾಗಿಯೇ ಅದು ಬಹುಮತ ಸಾಬೀತುಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.

ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ಪಕ್ಷದ ಸರ್ವಸಮ್ಮತ ನಿರ್ಧಾರ ಎಂದು ಶರದ್ ಪವಾರ್ ಟ್ವೀಟ್ ಮಾಡಿ ಹೇಳಿದ್ದಾರೆ.

ನಮ್ಮ ತೀರ್ಮಾನ ಅಚಲ. ಅದು ಶಿವಸೇನೆ, ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚನೆ ಮಾಡುವುದು. ಅಜಿತ್ ಪವಾರ್ ಹೇಳಿಕೆ ಸುಳ್ಳು. ಅದು ದಾರಿತಪ್ಪಿಸುವ ಮತ್ತು ಗೊಂದಲ ಉಂಟು ಮಾಡುವ ಹೇಳಿಕೆ. ಅವರ ಹೇಳಿಕೆ ಜನರು ತಪ್ಪಾಗಿ ಗ್ರಹಿಸಲು ಅವಕಾಸ ಮಾಡಿಕೊಡುತ್ತದೆ. ಇದನ್ನು ನಂಬಬೇಡಿ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ಬಿಜೆಪಿ ಶಾಸಕರಿಗಾಗಿ ಹೋಟೆಲ್ ನಲ್ಲಿ ಕೊಠಡಿಗಳನ್ನು ಬುಕ್ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಚವಾಣ್ ದೂರಿದ್ದಾರೆ. ಕಾಂಗ್ರೆಸ್ ಮತ್ತು ಎನ್.ಸಿ.ಪಿ ಶಾಸಕರನ್ನು ಸೆಳೆದು ಈ ಕೊಠಡಿಗಳಲ್ಲಿ ಇಡಲು ಸಿದ್ದತೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಮಹಾರಾಷ್ಟ್ರ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು ಸನದಲ್ಲಿ ಬಹುಮತ ಸಾಬೀತುಪಡಿಸಲು ಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದೆ. ಒಟ್ಟು 105 ಶಾಸಕರ ಪೈಕಿ 99 ಶಾಸಕರು ಭಾಗವಹಿಸಿದ್ದು ಹೇಗೆ ಬಹುಮತ ಸಾಬೀತುಪಡಿಸಬೇಕೆಂಬುದು ಗೊತ್ತು ಎಂದು ಸಭೆಯ ನಂತರ ಆಶೀಶ್ ಸೆಲ್ಹಾರ್ ತಿಳಿಸಿದ್ದಾರೆ.

ಬಹುಮತಕ್ಕೆ ಬೇಕಾದ ಶಾಸಕರ ಸಂಖ್ಯೆಯನ್ನು ಕಲೆಹಾಕುವ ಸಂಬಂಧ ಪಕ್ಷೇತರ ಶಾಸಕರೊಂದಿಗೆ ಪ್ರತ್ಯೇಕವಾಗಿ ಸ್ಥಳಗಳಲ್ಲಿ ಸಭೆಗಳು ನಡೆಯುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ತುಮಕೂರಿಗೆ ರಂಗಾಯಣ ಬೇಕೇ ಬೇಕು; ಉಗಮ ಶ್ರೀನಿವಾಸ್

ಸಾಹಿತ್ಯ ಹಾಗೂ ಸಾಂಸ್ಕೃತಿಕ ವಾತಾವರಣದಲ್ಲಿ ಸೃಜನಶೀಲತೆ ಸಾಧ್ಯ ಎಂದು ಲೇಖಕಿ ಎಂ.ಸಿ. ಲಲಿತಾ ವ್ಯಾಖ್ಯಾನಿಸಿದರು.

ಅವರು ಇಲ್ಲಿನ ಬಾಲಭವನದಲ್ಲಿ ಬೆಂಗಳೂರಿನ ಬಾಲಭವನ ಸೊಸೈಟಿ, ತುಮಕೂರು ಜಿಲ್ಲಾ ಬಾಲಭವನ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತುಮಕೂರು ವತಿಯಿಂದ ಆಯೋಜಿಸಲಾಗಿದ್ದ ಸಾಹಿತ್ಯ ಚಿಗುರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳ ಕಥೆ ಬರೆಯುವ ಶಿಬಿರ ಏರ್ಪಡಿಸುವ ಮೂಲಕ ಬಾಲಭವನ ಸಾರ್ಥಕ ಕೆಲಸ ಮಾಡುತ್ತಿದೆ. ಸಾಂಸ್ಕøತಿಕ ವಾತಾವರಣದಲ್ಲಿ ಮಕ್ಕಳ ಜ್ಞಾನ ಮತ್ತಷ್ಟು ಪಕ್ವವಾಗಲಿದೆ ಎಂದರು. ಕಥೆ ಹೇಳುವುದರಿಂದ, ಕೇಳುವುದರಿಂದ ಮತ್ತಷ್ಟು ವಿಕಾಸವಾಗುತ್ತದೆ. ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳ ಬಗ್ಗೆ ಓದಿ ತಿಳಿದುಕೊಳ್ಳುವುದರಿಂದ ಭವಿಷ್ಯತ್‍ನಲ್ಲಿ ಪ್ರಯೋಜವಾಗಲಿದೆ ಎಂದರು.

ಕಥೆ, ಕವಿತೆ ಮುಂತಾದ ಸೃಜನಶೀಲ ಕ್ರಿಯೆಯಲ್ಲಿ ಮಕ್ಕಳು ತೊಡಗಿಕೊಳ್ಳುವುದರಿಂದ ಹೊಸ ಆಲೋಚನೆಗಳು ತೆರೆದುಕೊಳ್ಳುತ್ತದೆ ಎಂದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಹಲವಾರು ಕಥೆಗಳನ್ನು ಲಲಿತಾ ಹೇಳಿದರು.

ಬರೆಹಗಾರ ಹಾಗೂ ಪತ್ರಕರ್ತ ಸಾ.ಚಿ. ರಾಜಕುಮಾರ್ ಮಾತನಾಡಿ ಯಾವುದೇ ಕೆಲಸಕ್ಕೂ ಶ್ರಮ ಮತ್ತು ಪ್ರಯತ್ನ ಅತ್ಯಗತ್ಯ. ಇವೆರೆಡನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ಮಕ್ಕಳ ಬೌದ್ಧಿಕ ವಿಕಾಸಕ್ಕೆ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಸಾರ್ಥಕವಾದದ್ದು. ಈಗಾಗಲೇ ಬಾಲಭವನ ವತಿಯಿಂದ ಮಕ್ಕಳಿಗೆ ನಾಟಕಗಳ ಶಿಬಿರ ನಡೆಸಿದ್ದು ಈಗ ಕಥೆ, ಕವನ ಬರೆಯುವ ಶಿಬಿರ ನಡೆಸುತ್ತಿರುವುದು ಸಂತಸದ ಸಂಗತಿ ಎಂದರು.

ಮುಂದಿನ ದಿನಗಳಲ್ಲಿ ಈ ರೀತಿಯ ಶಿಬಿರಗಳು ನಿಮ್ಮ ಶೈಕ್ಷಣಿಕ ಪ್ರಗತಿಗೆ ನೆರವಿಗೆ ಬರಲಿದೆ ಎಂದು ವ್ಯಾಖ್ಯಾನಿಸಿದರು.

ಝೆನ್ ಟೀಮ್ ಮುಖ್ಯಸ್ಥ ಉಗಮ ಶ್ರೀನಿವಾಸ್ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ತುಮಕೂರಿನ ಬಾಲಭವನ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ. ಮೈಸೂರಿನಲ್ಲಿ ಪ್ರತಿ ವರ್ಷ ನಡೆಯುವ ಕಿನ್ನರ ಮೇಳ ರೀತಿ ತುಮಕೂರಿನಲ್ಲಿ ಬಾಲಭವನ ಕಿನ್ನರ ಮೇಳ ಆರಂಭಿಸುವಂತೆ ಸಲಹೆ ನೀಡಿದರು.
ಇಂತಹ ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ವಾತಾವರಣವನ್ನು ಮತ್ತಷ್ಟು ಮೂಡಿಸಲು ತುಮಕೂರಿಗೆ ರಂಗಾಯಣ ಅತ್ಯಗತ್ಯವಾಗಿದೆ. ಈಗಾಗಲೇ ಶಾಸಕ ಜ್ಯೋತಿ ಗಣೇಶ್ ಅವರು ರಂಗಾಯಣ ಸ್ಥಾಪನೆಗೆ ಉತ್ಸುಕರಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿಯವರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಮಮತಾ ಉಪಸ್ಥಿತರಿದ್ದರು. ಬಳಿಕ ಕಥೆ ಹಾಗೂ ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

ಚಿತ್ರಕಲೆಯಿಂದ ಬೌದ್ಧಿಕ ಸಾಮರ್ಥ್ಯ ವೃದ್ಧಿಸುತ್ತದೆ; ಚಿತ್ರಕಲಾ ಶಿಕ್ಷಕ ರಾಮಚಂದ್ರಾಚಾರ್ 

ಪಾವಗಡ: ಪಟ್ಟಣದಲ್ಲಿ ಭಾನುವಾರ ನವೋದಯ ಹವ್ಯಾಸಿ ಕಲಾ ಸಂಘ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಚಿತ್ರಕಲೆ, ಗಾಯನ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿದರು.

ಪರಿಸರ, ಪರಿಸರ ಸಂರಕ್ಷೆಣೆ ಕುರಿತ ಚಿತ್ರ ಬರೆಯಲು ಮಕ್ಕಳು ಉತ್ಸಾಹ ತೋರಿದರು. ಪೋಷಕರು ಮಕ್ಕಳ ಆಸಕ್ತಿಗೆ ಪ್ರೋತ್ಸಾಹ ನೀಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ   ಚಿತ್ರಕಲಾ ಶಿಕ್ಷಕ ರಾಮಚಂದ್ರಾಚಾರ್  ಮಾತನಾಡಿ,   ಚಿತ್ರಕಲೆಯಿಂದ ಮಕ್ಕಳಲ್ಲಿ ಸೃಜಲಶೀಲತೆ ಹೆಚ್ಚುತ್ತದೆ ಎಂದು  ತಿಳಿಸಿದರು.

ಚಿತ್ರಕಲೆಯಿಂದ ಸೃಜನಾತ್ಮಕ ಅಭಿವ್ಯಕ್ತಿ ಹೆಚ್ಚುತ್ತದೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯವಿರುವ ಸಾಮರ್ಥ್ಯ ಮಕ್ಕಳಲ್ಲಿ ವೃದ್ಧಿಸುತ್ತದೆ. ಮಕ್ಕಳಲ್ಲಿ ಪರಿಸರ, ಸ್ವಚ್ಚತೆ, ಇತ್ಯಾದಿ ಸಕಾರಾತ್ಮಕ ವಿಚಾರಗಳ ಬಗ್ಗೆ ಚಿತ್ರಕಲೆಯಿಂದ ಜಾಗೃತಿ ಮೂಡುತ್ತದೆ ಎಂದರು.

ಸಂಘದ ಉಪಾಧ್ಯಕ್ಷ ಈರಣ್ಣ, ತಾಲ್ಲೂಕಿನ ಸಾಕಷ್ಟು ಕಲಾವಿದರು ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. ಕೊತ್ತೂರಿನ ರಂಗಾಯಣ ರಘು, ದೇವಲಕೆರೆ ಮಂಜುನಾಥ್ ಸೇರಿಂತೆ ಚಲನಚಿತ್ರ ನಟರು, ನಿರ್ದೇಶಕರು ಚಲನಚಿತ್ರ ರಂಗದಲ್ಲಿದ್ದಾರೆ. ರಂಗಭೂಮಿ, ಜನಪದ ಸೇರಿದಂತೆ ವಿವಿಧ ಕಲಾ ಕ್ಷೇತ್ರಗಳಲ್ಲಿ ತಾಲ್ಲೂಕು ಮುಂಚೂಣಿಯಲ್ಲಿದೆ ಎಂದರು.

ನಮ್ಮ ಹಕ್ಕು ತಾಲ್ಲೂಕು ಘಟಕದ ಅಧ್ಯಕ್ಷ ಎ.ಗಿರೀಶ್,  ಶಾಲೆಗಳಲ್ಲಿ ಮಕ್ಕಳಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವಾಗಬೇಕು. ಕೇವಲ ಪಠ್ಯ, ಅಂಕಗಳಿಕೆಯಿಂದ ಜೀವನ ಪರಿಪೂರ್ಣವಾಗುವುದಿಲ್ಲ ಎಂದರು.

ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜ್ಞಾನಬೋಧಿನಿ ಶಾಲೆಯ ಎಸ್.ಎನ್. ನೇಹಾ ಪ್ರಥಮ, ಆದರ್ಶ ಶಾಲೆಯ ಎಸ್.ಅನನ್ಯ ದ್ವಿತೀಯ, ಶ್ರೀಶಾಲಾ ಶಾಲೆಯ ಬಿ. ದೀಕ್ಷಿತ್  ತೃತೀಯ ಸ್ಥಾನ ಪಡೆದರು.

ಪ್ರೌಢಶಾಲೆ ವಿಭಾಗದ ಶಾರದಾ ವಿದ್ಯಾಪೀಠದ ಕೆ. ಝಾನ್ಸಿ ಪ್ರಥಮ, ಗುಮ್ಮಘಟ್ಟ ಜಲದುರ್ಗಾಂಭ ಶಾಲೆಯ ಎನ್.ಅಶೋಕ ದ್ವಿತೀಯ, ಜೈಗುರುದೇವ ಶಾಲೆಯ  ಎಸ್. ಶಶಿಕುಮಾರನಾಯ್ಕ  ತೃತೀಯ ಸ್ಥಾನ ಪಡೆದದರು.

ಚಿತ್ರಕಲಾ ಸ್ಪರ್ಧೆ, ಗೀತ ಗಾಯಮ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ, ಪ್ರಮಾಣಪತ್ರ ವಿತರಿಸಲಾಯಿತು.

ನವೋದಯ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಕಾರನಾಗಪ್ಪ, ಉಪ ಪ್ರಾಂಶುಪಾಲ ಒ.ಧನಂಜಯ, ಹನುಮಂತರಾಯಪ್ಪ ಮಾತನಾಡಿದರು.

ಸಂಘದ ಕಾರ್ಯದರ್ಶಿ ತಿಪ್ಪೇಸ್ವಾಮಿ, ಪದಾಧಿಕಾರಿ ಸುವರ್ಣರೆಡ್ಡಿ,  ಹನುಮಂತರಾಯಪ್ಪ, ಗಣೇಶ್ ನಾಯ್ಕ, ಗೋವಿಂದಪ್ಪ ಉಪಸ್ಥಿತರಿದ್ದರು.

ಸುಪ್ರಿಂ ಮುಂದೆ ಮಹಾರಾಷ್ಟ್ರ ಸರ್ಕಾರದ ಭವಿಷ್ಯ:

ಮಹಾರಾಷ್ಟ್ರ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನಿಸಿರುವ ಪತ್ರ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ನೀಡಿರುವ ಶಾಸಕರ ಬೆಂಬಲ ಪತ್ರಗಳನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸಾಲಿಸಿಟರ್ ಜನರಲ್ ತುಷಾರ ಮೆಹ್ವಾ ಅವರಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಶಿವಸೇನೆ, ಎನ್.ಸಿ.ಪಿ ಮತ್ತು ಶಿವಸೇನೆ ಸಲ್ಲಿಸಿದ್ದ ತುರ್ತು ಅರ್ಜಿಯ ವಿಚಾರಣೆ ನಡೆಸಿಸ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ಸೋಮವಾರ 10.30ಕ್ಕೆ ಸರ್ಕಾರ ರಚನೆಗೆ ಆಹ್ವಾನಿಸಿರುವ ರಾಜ್ಯಪಾಲರ ಪತ್ರ ಮತ್ತು ಬೆಂಬಲ ಪತ್ರ ಎರಡನ್ನೂ ಹಾಜರುಪಡಿಸಿ ಎಂದು ಆದೇಶ ನೀಡಿದೆ.

ಇದೇ ವೇಳೆ ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್, ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಸುಪ್ರೀಂಕೋರ್ಟ್ ನೋಟೀಸ್ ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎನ್.ಸಿ.ಪಿ. ಮುಖಂಡ ನವಾಜ್ ಮಲ್ಲಿಕ್, ಸುಪ್ರೀಂ ಕೋರ್ಟ್ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಪಕ್ಷದ ಶಾಸಕರು ವಾಪಸ್ ಬಂದಿದ್ದಾರೆ. ಶರದ್ ಪವಾರ್ ಶಾಸಕರನ್ನು ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಅಲ್ಪಮತದ ಸರ್ಕಾರವೆಂಬ ವಾಸ್ತವನ್ನು ಅರ್ಥ ಮಾಡಿಕೊಳ್ಳಬೇಕು. ಗೌರವಯುತವಾಗಿ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೊಂದೆಡೆ ನಾಪತ್ತೆಯಾಗಿದ್ದ ಶಾಸಕ ದೌಲತ್ ದರೋಡ ಪತ್ತಯಾಗಿದ್ದಾರೆ. ನಾನು ಸುರಕ್ಷಿತವಾಗಿದ್ದೇನೆ. ಎನ್.ಸಿ.ಪಿ ;ಪಕ್ಷದ ಗಡಿಯಾರದ ಗುರುತಿನ ಮೇಲೆ ಗೆದ್ದು ಬಂದು ಶಾಸಕನಾಗಿದ್ದೇನೆ. ಪಕ್ಷವನ್ನು ಬದಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಶರದ್ ಪವಾರ್ ಮತ್ತು ಅಜಿತ್ ಪವಾರ್ ಏನೇ ನಿರ್ಧಾರ ತೆಗೆದುಕೊಂಡರೂ ಅವರ ಜೊತೆ ಇರುತ್ತೇನೆ. ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಸದ ಬಸವರಾಜ್, ಬುಗುಡನಹಳ್ಳಿ ಕೆರೆ ಹೂಳೆತ್ತುವ ಕೆಲಸ ತಡೆದಿದ್ದು ಏಕೆ?

ತುಮಕೂರು: ತಾಲೂಕಿನ ಬುಗುಡನಹಳ್ಳಿ ಕೆರೆಯಲ್ಲಿ ಕೈಗೊಂಡಿರುವ ಹೂಳೆತ್ತುವ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಸಂಸದ ಜಿ.ಎಸ್. ಬಸವರಾಜ್ ಅಧಿಕಾರಿಗಳಿಗೆ ಸೂಚಿಸಿದರು.

ಬುಗುಡನಹಳ್ಳಿ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಹೂಳೆತ್ತುವ ಕಾಮಗಾರಿ ವೀಕ್ಷಿಸಿ ಪರಿಶೀಲಿಸಿದ ನಂತರ ಮಾತನಾಡಿದ ಅವರು ಬುಗುಡನಹಳ್ಳಿ ಕೆರೆಯ ನೀರು ಸಂಗ್ರಹ ಸಾಮರ್ಥ್ಯವು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಹಳೆಯ ದಾಖಲೆಗಳ ಪ್ರಕಾರ 240 ಎಂಸಿಎಫ್‍ಟಿ ಹಾಗೂ ಈಗಿನ ಸರ್ವೇ ಪ್ರಕಾರ 300 ಎಂಸಿಎಫ್‍ಟಿ, ಪಾಲಿಕೆ ದಾಖಲೆ ಪ್ರಕಾರ 308 ಎಂಸಿಎಫ್‍ಟಿ, ಹೇಮಾವತಿ ನಾಲಾ ಇಲಖೆ ಪ್ರಕಾರ 363 ಎಂಸಿಎಫ್‍ಟಿ ಇರುತ್ತದೆ. ಕೆರೆ ಸಾಮರ್ಥ್ಯದ ಅಂಕಿ-ಅಂಶಗಳಿಗೆ ಸಂಬಂಧಿಸಿದಂತೆ ಮೂರು ಇಲಾಖೆಗಳು ಒದಗಿಸಿರುವ ಮಾಹಿತಿಯಲ್ಲಿ ವ್ಯತ್ಯಾಸವಿರುವುದು ಕಂಡು ಬಂದಿದೆ ಎಂದರು.

ಹೇಮಾವತಿ ನಾಲೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪಾಲಿಕೆಗಳ ನಡುವೆ ಸಮನ್ವಯತೆ ಇಲ್ಲದಿರುವುದರಿಂದ ಅಂಕಿ-ಅಂಶಗಳಲ್ಲಿ ಗೊಂದಲಗಳುಂಟಾಗಿವೆ. ಬರುವ ಬೇಸಿಗೆಯಲ್ಲಿ ನೀರು ಖಾಲಿಯಾದ ನಂತರ ಮತ್ತೊಮ್ಮೆ ಮೂರು ಇಲಾಖೆಗಳು ಒಡಗೂಡಿ ಹೊಸದಾಗಿ ಸರ್ವೆ ಕೈಗೊಂಡು ಕೆರೆ ಸಾಮರ್ಥ್ಯದ ಬಗ್ಗೆ ಪರಿಪೂರ್ಣ ದಾಖಲೆ ಒದಗಿಸುವವರೆಗೂ ಹೂಳೆತ್ತುವ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ನಗರದಲ್ಲಿರುವ ಗಂಗಸಂದ್ರ ಕೆರೆ, ಮರಳೂರು ಅಮಾನಿಕೆರೆಗೆ ಹೇಮಾತಿ ನೀರನ್ನು ತುಂಬಿಸಲು ಕಾರ್ಯಯೋಜನೆ ರೂಪಿಸಬೇಕು ಎಂದರಲ್ಲದೆ ಇಲಾಖಾಧಿಕಾರಿಗಳು ಯಾವುದೇ ಕಾಮಗಾರಿಗೆ ಸಂಬಂಧಿಸಿದ ಮಾಹಿತಿ ಕೇಳಿದಾಗ ನೀಡುವ ಬೇಜವಾಬ್ದಾರಿ ಉತ್ತರವನ್ನು ನಾನು ಸಹಿಸುವುದಿಲ್ಲ. ಈ ಕಾರಣಕ್ಕಾಗಿಯೇ ಕುಡಿಯುವ ನೀರು ಸೇರಿದಂತೆ ಜಿಲ್ಲೆಯ ಪ್ರತಿಯೊಂದು ಮಾಹಿತಿಯನ್ನು ಜಿಐಎಸ್ ಲೇಯರ್‍ವಾರು ಬೇಸ್‍ಮ್ಯಾಪ್-1ಗೆ ಅಪ್‍ಲೋಡ್ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿರುವುದು ಎಂದು ಸ್ಪಷ್ಟವಾಗಿ ತಿಳಿಸಿದರು.

ನಗರ ವ್ಯಾಪ್ತಿಯ ಮರಳೂರು ಅಮಾನಿಕೆರೆ, ಗಂಗಸಂದ್ರ, ಕುಪ್ಪೂರು, ದೇವರಾಯಪಟ್ಟಣ, ಹೊನ್ನೇನಳ್ಳಿ ಕೆರೆಗಳಿಂದ ನಗರಕ್ಕೆ 24×7 ನೀರು ಸರಬರಾಜು ಮಾಡುವ ಯೋಜನೆಯನ್ನು ರೂಪಿಸಲು ಚಿಂತನೆ ನಡೆಸಲಾಗಿದೆ‌ ಎಂದರು.

ಅದೇ ರೀತಿ ಬುಗುಡನಹಳ್ಳಿ ಕೆರೆ ಸೇರಿದಂತೆ ನಗರದ ಉಳಿದ ಕೆರೆಗಳ ಸರ್ವೇ ಕೈಗೊಂಡು ಮಾಹಿತಿಯನ್ನು ಬರುವ 15 ದಿನಗಳೊಳಗಾಗಿ ದಾಖಲೆ ಸಹಿತ ತಮಗೆ ಒದಗಿಸಬೇಕು. ಕೆರೆ ಹೂಳೆತ್ತುವ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರಿಗೆ ಈಗಾಗಲೇ ಪಾವತಿ ಮಾಡಿರುವ ಮೊತ್ತ ಸೇರಿ ಶೇ.50ರಷ್ಟು ಮಾತ್ರ ಹಣ ಪಾವತಿ ಮಾಡಬೇಕು. ಸರ್ವೇ ಕಾರ್ಯ ಪೂರ್ಣಗೊಂಡ ನಂತರ ಬಾಕಿ ಹಣವನ್ನು ಪಾವತಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಲೋಕಕಲ್ಯಾಣಕ್ಕಾಗಿ ಚಂಡಿ ಹೋಮ

ಪಾವಗಡ: ತಾಲ್ಲೂಕಿನ ತಿರುಮಣಿ ಬಳಿಯ ರಾಯಚೆರ್ಲು – ಅಚ್ಚಮ್ಮನಹಳ್ಳಿ ಮಧ್ಯದ ಪೋಲೇರಮ್ಮ ದೇಗುಲದಲ್ಲಿ ಉತ್ತಮ ಮಳೆ ಬೆಳೆ, ಲೋಕಕಲ್ಯಾಣಕ್ಕಾಗಿ ವಿಶೇಷ ಹೋಮ ಹವನ ಪೂಜೆ ನಡೆಸಲಾಯಿತು.

ಸತತ 5 ದಿನಗಳ ಕಾಲ  ನಡೆದ ವಿಶೇಷ ಪೂಜೆಯಲ್ಲಿ ವಿವಿದೆಡೆಯಿಂದ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು.

ಮಂಗಳವಾರ  ಗಣಪತಿ ಪೂಜೆ, ಸಹಸ್ರ ಮೋದಕ ಗಣಪತಿ ಹೋಮ ನಡೆಸಲಾಯಿತು. ರುದ್ರ ಹೋಮ, ಶತ ಚಂಡಿ ಪಾರಾಯಣ, ಶ್ರೀ ಚಕ್ರ ನವಾವರಣ ಪೂಜೆ ನಡೆಯಿತು.

ಶನಿವಾರ ಚಂಡಿ ಹೋಮದಲ್ಲಿ ಭಾಗವಹಿಸಲು ನಾಗಲ ಮಡಿಕೆ ಹೋಬಳಿಯೆ ವಿವಿಧ ಗ್ರಾಮಗಳ ಜನತೆ ಆಗಮಿಸಿದ್ದರು. ಚಂಡಿ ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಲಾಯಿತು.

ಪ್ರಧಾನ ಅರ್ಚಕ ವೇಣುಗೋಪಾಲಸ್ವಾಮಿ, ಪಾಂಡುರಂಗನಾಥಶರ್ಮ ಪೂಜೆಯ ನೇತೃತ್ವ ವಹಿಸಿದ್ದರು.

ಸತತ 5 ದಿನಗಳ ಕಾಲ ಹೋಮ ಹವನಾದಿಗಳನ್ನು ನಡೆಸಲಾಯಿತು. ಈ ಪ್ರದೇಶದಲ್ಲಿ ಉತ್ತಮ ಮಳೆ, ಬೆಳೆಯಾಗುವಂತೆ ಚಂಡಿ ಹೋಮ, ರುದ್ರ ಹೋಮ ನಡೆಸಲಾಗಿದೆ ಎಂದು ಪಾಂಡುರಂಗನಾಥಶರ್ಮ ಪಬ್ಲಿಕ್ ಸ್ಟೋರಿಗೆ ತಿಳಿಸಿದರು.

ಪ್ರಥಮ ಅಖಿಲ ಭಾರತ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಯಾಗಿ ಕೊರಟಗೆರೆ ಪೋರಿ

ತುಮಕೂರು:
ಜಿಲ್ಲೆಯ ಕೊರಟಗೆರೆ ಪಟ್ಟಣದ ಕೀರ್ತನಾ ನಾಯಕ್ ಅವರು ಹಾಸನದಲ್ಲಿ ನ. 29 ಹಾಗೂ 30ರಂದು ಹಾಸನದಲ್ಲಿ ನಡೆಯಲಿರುವ ಪ್ರಥಮ ಅಖಿಲ ಭಾರತ ಮಕ್ಕಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮೂಲತಃ ಕೊರಟಗೆರೆ ತಾಲ್ಲೂಕಿನ ಗಡಿಭಾಗದ ಬೊಮ್ಮಲದೇವಿಪುರ ಗ್ರಾಮದವರಾದ ವಿ.ಆರ್. ನರಸಿಂಹಮೂರ್ತಿ ಹಾಗೂ ಪಧ್ಮಾವತಮ್ಮ ಸದ್ಯ ಕೊರಟಗೆರೆ  ಪಟ್ಟಣದಲ್ಲಿ ವಾಸವಾಗಿದ್ದಾರೆ. ಅವರ ಮೊದಲನೇ ಮಗಳಾದ ಕೀರ್ತನಾ ನಾಯಕ್ ಮೇ. 30, 2002ರಲ್ಲಿ ಜನಿಸಿದರು. ಕೃಷಿಕ ತಂದೆತಾಯಿಯಾದರೂ ಕೀರ್ತನ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣವನ್ನು ಬೆಂಗಳೂರು 8ನೇ ಮೈಲಿಯಲ್ಲಿರುವ ಸೌಂದರ್ಯ ಶಾಲೆಯಲ್ಲಿ ವಿದ್ಯಾಭ್ಯಾಸ ಕೊಡಿಸಿದರು. ಪ್ರಾಥಮಿಕ ಹಂತದಿಂದ ಪ್ರೌಢಶಿಕ್ಷಣದವರೆಗೂ ಕೊರಟಗೆರೆಯಿಂದಲೇ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಪ್ರಾಯಣ ಮಾಡಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 98.08(613) ಅಂಕ ಪಡೆದು ಉತ್ತೀರ್ಣರಾದ ಕೀರ್ತನಾ ಸದ್ಯ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಐಐಟಿ ಬ್ಯಾಚಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾರೆ.
ಮೂರನೇ ತರಗತಿಯಲ್ಲಿ ಅನಾರೋಗ್ಯ ಕಾರಣದಿಂದಾಗಿ ಶಾಲೆಗೆ ಗೈರು ಹಾಜರಿಯಾದಾಗ ಶಾಲೆಯ ಶಿಕ್ಷಕರೊಬ್ಬರು ದಂಡಿಸಿದ ರೀತಿಯನ್ನು ತನಗನ್ನಿಸಿದ ಹಾಗೆ ಕಥೆ ಬರೆದು ತೋರಿಸಿದ ಸಂದರ್ಭದಲ್ಲಿ ಅದೇ ಶಿಕ್ಷಕರು ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಮೇಲೆ ಪ್ರೇರಣೆಗೊಂಡ ಕೀರ್ತ ಅಂದಿನಿಂದ ಭಾಷಣ, ನಿರೂಪಣೆ, ಚಿತ್ರಕಲೆ, ನಿರೂಪಣೆಯ ಗೀಳು ಹತ್ತಿಸಿಕೊಂಡರು.
ಕೃಷಿಯನ್ನೆ ಅವಲಂಭಿಸಿರುವ ಡಿಪ್ಲೋಮಾ ಓದಿರುವ ತಂದೆ, ಬಿಎ,ಬಿಇಡಿ ಮಾಡಿರುವ ತಾಯಿಯ ಪ್ರೇರಣೆಯಿಂದ ಚಿಕ್ಕಂದಿನಿಂದಲೇ ಪ್ರೇರಣೆಗೊಂಡ ಕೀರ್ತನಾ, ರಾಷ್ಟ್ರೀಯ ಹಬ್ಬ, ಧಾರ್ಮಿಕ ಜಯಂತೋತ್ಸವ, ರಾಜ್ಯೋತ್ಸವ ಹಬ್ಬ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳಲ್ಲಿ 130ಕ್ಕೂ ಹೆಚ್ಚು ಬಾರಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದಾರೆ. ಖ್ಯಾತ ಹಾಗೂ ಪ್ರಮುಖ ಕಾರ್ಯಕ್ರಮಗಳ ವೇದಿಕೆಯಲ್ಲಿ 150ಕ್ಕೂ ಹೆಚ್ಚು ಬಾರಿ ಕಾರ್ಯಕ್ರಮ ನಿರೂಪಣೆಯನ್ನೂ ಮಾಡಿದ್ದಾರೆ.
ರಾಜ್ಯದ ಗುಲ್ಬರ್ಗಾ, ಸಿಂಧನೂರು ಸೇರಿದಂತೆ ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿನ ಪ್ರತಿಒಷ್ಟಿತ ಶಾಲಾ ಕಾಲೇಜುಗಳಲ್ಲಿ ಅನೇಕ ಬಾರಿ ಪ್ರೇರಣಾ ತರಗತಿಗಳನ್ನು ನೀಡಿ ಗಮನ ಸೆಳೆದಿದ್ದಾರೆ. ಭಕ್ತ ಮಾರ್ಕಂಡೇಯ, ಶಿವಭಕ್ತಕಣ್ಣಪ್ಪ ಹರಿಕಥೆಗಳನ್ನು ಈಗಾಗಲೇ ಸಾಕಷ್ಟು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಉತ್ತಮ ಯೋಗಪಟುವೂ ಆದ ಕೀರ್ತನ ರಾಜ್ಯ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ 2 ಭಾರಿ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಟ್ರಾಫಿಕ್ ಜಾಗೃತಿ ಬಗ್ಗೆ ಭಾಷಣ ಮಾಡಿದ ಹಿನನೆಯಲ್ಲಿ `ಬೆಂಗಳೂರು ಪೊಲೀಸ್ ಕಮಿಷನರ್’ ಅವಾರ್ಡ್ ನ್ನು ಕೂಡ ಪಡೆದಿದ್ದಾರೆ. 102ರಲ್ಲಿ ಯಲಹಂಕ ಬಳಿಯ ಜಿಕೆವಿಕೆ ಕಾಲೇಜಿನಲ್ಲಿ ಪ್ರಾಣಿಧಯೆ, ಹಾಗೂ ಪರಿಸರ ಸಂರ್ಕಣೆ ಬಗ್ಗೆ ಜಾಗೃತಿ ಬಗೆಗಿನ ವಿಚಾರಸಂಕೀರ್ಣದಲ್ಲಿ ಭಾಗವಹಿಸಿ ಅಲ್ಲಿಯೂ ಕೂಡ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
ಶಿಕ್ಷಣಕ್ಕೆ ಸಂಬಂಧಿಸಿದಂತೆ ಬೆಂಗಳೂರು 8ನೇ ಮೈಲಿಯಲ್ಲಿರುವ ಕೆನ್ನಮೆಟಲ್ ಕಂಪನಿಯವರು 2018ರಲ್ಲಿ ಶಿಕ್ಷಣ ಸಂಬಂಧಿತ ಸ್ಪರ್ಧೆಯಲ್ಲೂ ಪ್ರಥಮಸ್ಥಾನಗಳಿಸಿದರು.
2014ರಿಂದ 2018ರ ವರೆಗೆ ಇಸ್ಕಾನ್ ವತಿಯಿಂದ ನಡೆದ ಭಾಷಣ ಸ್ಪರ್ಧೆಗಳಲ್ಲಿ ನಿರಂತರವಾಗಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇದಲ್ಲದೇ ನೂರಾರು ಕಾರ್ಯಕ್ರಮಗಳನ್ನು ಅತಿ ಚಿಕ್ಕ ವಯಸ್ಸಿನಲ್ಲೇ ನಿರೂಪಣೆ ಮಾಡಿ ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
2017ರಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲೂ ಕಾರ್ಯಕ್ರಮದ ಇಡೀ ಕಾರ್ಯಕ್ರಮದ ನಿರೂಪಣೆ ಮಾಡಿ ಗಮನ ಸೆಳೆದಿದ್ದರು.
ಕೀರ್ತನಾ ಈಗಾಗಲೇ `ಅಕ್ಷರಗಳ ಕೊಯ್ಲು’, `ಇಳೆಯಂಗಳದಿ’ ಎಂಬ ಎರಡು ಕವನ ಸಂಕಲಗಳ ಪುಸ್ತಕಗಳನ್ನು ಬರೆದು ಬಿಡುಗಡೆಗೊಳಿಸಿದ್ದಾರೆ. ಅವರ ಮತ್ತೊಂದು ಕವನ ಸಂಕಲನ `ಕಾಲಬದಲಾಗುತ್ತದೆ’ ಎಂಬ ಬಿಡಿ ಲೇಖನ ಸಂಗ್ರಹ ಬಿಡುಗಡೆಗೆ ಸಿದ್ದಗೊಂಡಿದೆ. ಅತೀ ಚಿಕ್ಕವಯಸ್ಸಿನಲ್ಲೆ ಯೋಗ, ಚಿತ್ರಕಲೆ, ನಿರೂಪಣೆ, ಭಾಷಣ, ಹರಿಕಥಾ ಕೀರ್ತನೆಗಳನ್ನು ಹಾಡುವುದು ಸೇರಿದಂತೆ ಇತರೆ ಕಲೆಗಳನ್ನು ರೂಢಿಸಿಕೊಂಡಿರುವ ಕೀರ್ತನ ಈಗ ಹಾಸನ ಚಿಲ್ಲೆಯಲ್ಲಿ ನಡೆಲಿರುವ ಅಖಿಲ ಭಾರತ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕೊರಟಗೆರೆ ತಾಲ್ಲೂಕಿಗೆ ತಂದ ಕೀರ್ತಿಯಾಗಿದೆ.

ಚಿಕ್ಕಂದಿನಿಂದಲೂ ಹೊಸತನ್ನು ಹುಡುಕುವ ಅವಳ ಬೌಧಿಕತೆಗೆ ಪೂರಕವಾದನ್ನು ಒದಗಿಸಿದೆವು. ಅತಿ ಕಿರಿಯ ವಯಸ್ಸಿನಲ್ಲಿ ಸಮ್ಮೆಳನ ಅಧ್ಯೆಕ್ಷೆಯಾಗಿ ಆಯ್ಕೆಯಾಗಿರುವುದು ಖುಷಿ ತಂದಿದೆ ಎಂದು ಪೋಷಕರು ಸಂತಸ ವ್ಯಕ್ತ ಪಡಿಸುತ್ತಾರೆ.

ಹೆತ್ತವರೊಂದಿಗೆ ಕೀರ್ತನಾ ನಾಯಕ್

ಹಗುರವಾಗಿ ಮಾತನಾಡಿದರೆ ಸುಮ್ಮನಿರೋಲ್ಲ; ಕುರುಬರ ಎಚ್ಚರಿಕೆ

ತುಮಕೂರು; ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಕಾಗಿನೆಲೆ ಮಹಾಸಂಸ್ಥಾನದ ಹೊಸದುರ್ಗ ಶಾಖಾ ಮಠದ ಮಠಾಧೀಶ ಈಶ್ವರಾನಂದಪುರಿ ಸ್ವಾಮಿಗಳನ್ನು ಅವಮಾನಿಸಿದ್ದಾರೆ ಎಂದು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರಪ್ಪ ಪುನರುಚ್ಚರಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕುರುಬ ಮುಖಂಡರು ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಬಗ್ಗೆ ಯಾರೇ ಹಗರುವಾಗಿ, ಅವಹೇಳನಕಾರಿಯಾಗಿ ಮಾತನಾಡಿದರೂ ಅಂಥವರ ವಿರುದ್ದ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮುಖಂಡರು ಕುರುಬ ಜನಾಂಗದ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಇದನ್ನು ಬಲವಾಗಿ ಖಂಡಿಸುತ್ತೇವೆ. ಹಿಂದೆ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಹೆಗಡೆ ಚುನಾವಣೆಯಲ್ಲಿ ಕುರುಬರ ಮತಗಳೇ ಬೇಡ ಎಂದಿದ್ದರು. ಮಾಜಿ ಸಚಿವ ಸೊಗಡು ಶಿವಣ್ಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಹಗರುವಾಗಿ ಮಾತನಾಡಿದ್ದರು. ಇಂತಹ ನಡವಳಿಕೆಗಳನ್ನು ಸಮಾಜ ಸಹಿಸುವುದಿಲ್ಲ ಎಂದು ತಿಳಿಸಿದರು.
ಹುಳಿಯಾರು ಪಂಚಾಯ್ತಿಯ ಸಭೆಯಲ್ಲಿ ಕನಕ ವೃತ್ತ ನಾಮಫಲಕ ವಿಷಯವಾಗಿ ಚರ್ಚಿಸಿ, ಠರಾವು ಪಾಸು ಮಾಡಿ ನಾಮಕರಣ ಮಾಡಿರುವುದು ಕಾನೂನು ಬದ್ಧವಾಗಿದೆ ಎಂದು ಸಮರ್ಥಿಸಿಕೊಂಡರು.

ಕಳೆದ 10 ದಿನಗಳಿಂದ ನಡೆದ ಹೋರಾಟದ ಫಲವಾಗಿ ಮತ್ತೆ ಸದರಿ ನಾಮಫಲಕದ ಪುನರ್ ಸ್ಥಾಪನೆ ಆಗಿರುವುದಕ್ಕೆ ಕರ್ನಾಟಕ ಪ್ರದೇಶ ಕುರುಬರ ಸಂಘ ಅಭಿನಂದನೆ ಸಲ್ಲಿಸುತ್ತಿದೆ ಎಂದರು.

ನಮ್ಮ ಹೋರಾಟಕ್ಕೆ ಸಹಕರಿಸಿದ ಎಲ್ಲ ಸಂಘಟನೆಗಳು, ಮಾಧ್ಯಮಗಳು, ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಶಾಂತಿ ಸಭೆಯಲ್ಲಿ ಹಗುರವಾಗಿ ವರ್ತಿಸಿದ ಪರಿಣಾಮ ಇಡೀ ರಾಜ್ಯದಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಕ್ಷಮಾಪಣೆ ಕೇಳಿ ಕನಕವೃತ್ತ ನಾಮಫಲಕ ಪ್ರತಿಷ್ಠಾಪನೆಗೆ ಸೂಚಿಸದ್ದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಕುರುಬ ಸಮಾಜದ ಮುಖಂಡರಾದ ಸಿ.ಶಿವಮೂರ್ತಿ, ಚಿಕ್ಕವೆಂಕಟಯ್ಯ, ರಾಜು,ಎ.ಮಹಾಲಿಂಗಯ್ಯ, ಕೆಂಪರಾಜು, ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.

ತಿಪಟೂರು ಗಣಪತಿ ಉತ್ಸವಕ್ಕೆ ಸಕಲ ಸಿದ್ಧತೆ; ಜಿಲ್ಲಾಧಿಕಾರಿ

ತಿಪಟೂರು: ಸತ್ಯ ಗಣಪತಿ ವಿಸರ್ಜನಾ ಮಹೋತ್ಸವ ನ. 23 ಮತ್ತು 24 ರಂದು ನಡೆಯಲಿದ್ದು ಈ ವೇಳೆ ಯಾವುದೆ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ . ರಾಕೇಶ್ ಕುಮಾರ್ ತಿಳಿಸಿದರು.

ನಗರದ ಕಲ್ಪತರು ಕಾಲೇಜಿನ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಇತಿಹಾಸ ಪ್ರಸಿದ್ಧ ಗಣಪತಿ ಜಾತ್ರೆಯನ್ನು ಶಾಂತ ರೀತಿಯಲ್ಲಿ ಯಶಸ್ವಿ ಮಾಡಬೇಕೆಂದು ತಿಳಿಸಿದರು.

ಶಾಸಕರಾದ ಬಿ ಸಿ ನಾಗೇಶ್ ರವರು ಮಾತನಾಡಿ ಕಳೆದ 90 ವರ್ಷಗಳಿಂದಲೂ ಕಲ್ಪತರು ನಾಡ ಹಬ್ಬವಾಗಿ ಗಣೇಶೋತ್ಸವವನ್ನು ಅಚರಿಸಿಕೊಂಡು ಬರುತ್ತಿದ್ದು ಕಲ್ಪತರು ನಾಡಿನ ಜನತೆ ಭಾಗವಹಿಸಿ ಯಶಸ್ವಿ ಮಾಡಬೇಕೆಂದು ತಿಳಿಸಿದರು.

ಶಾಂತಿ ಸಭೆಯಲ್ಲಿ ಮಾತನಾಡಿದ ಎಸ್ಪಿ ಕೊನಂವಂಶಿಕೃಷ್ಣ ಅವರು ಸತ್ಯಗಣಪತಿ ಜಾತ್ರೆಯು ರಾಜ್ಯದಲ್ಲೆ ಹೆಸರು ವಾಸಿಯಾಗಿದ್ದು ರಾಜ್ಯದಾದ್ಯಂತ ಜನರು ಬರುವುದರಿಂದ ಎಲ್ಲರೂ ಸಹಕರಿಸಿ ಕಾರ್ಯಕ್ರಮ ಯಶಸ್ವಿ ಮಾಡಬೆಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಲೋಕೇಶ್ವರ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ತರಕಾರಿ ನಾಗರಾಜು, ಉಪವಿಭಾಗಾಧಿಕಾರಿ ಕೆ.ಅರ್ ನಂದಿನಿ, ತಹಶಿಲ್ದಾರ್ ಅರತಿ,ಡಿ ವೈ ಎಸ್ ಪಿ ಕಲ್ಯಾಣ ಕುಮಾರ್ ,ಸಿ.ಪಿ.ಐ ನವೀನ್, ಗ್ರಾಮಂತರ ಪಿ ಸಿ ಐ ಜಯಲಕ್ಷೀ, ಪಿ ಎಸ್ ಐ ಕೃಷ್ಣಕುಮಾರ್,ನಗರ ಸಭಾ ಸದಸ್ಯರಾದ ಡಾ. ಓಹಿಲಾ , ಭಾರತಿ, ಸಂಗಮೇಶ್, ಯೋಗೀಶ್ ವಿನುತ ಮಾಜಿ ಸದಸ್ಯರಾದ ತರಕಾರಿ ಗಂಗಾಧರ್ ನಿಜಗುಣ ಇತರರು ಇದ್ದರು.
ನಗರದ ರಸ್ತೆಗಳನ್ನು ಸರಿ ಪಡಿಸಲು ನಗರಸಭಾ ಸದಸ್ಯರುಗಳ ಅಗ್ರಹ;
ತಿಪಟೂರು ನಗರದ ರಸ್ತೆಗಳು ಹಾಳಾಗಿದ್ದು ಅವುಗಳನ್ನು ಮೊದಲು ಸರಿಪಡಿಸಿ ಗಣೇಶನ ಮೆರವಣಿಗೆಗೆ ಅನೂಕೂಲಮಾಡಿ ಕೊಡಬೇಕೆಂದು ನಗರಸಭಾ ಸದಸ್ಯರುಗಳು ಅಗ್ರಹಿಸಿದರು. ಶಾಂತಿ ಸಭೆಯಲ್ಲಿ ಮಾತನಾಡಿದ ನಗರಸಭಾ ಸದಸ್ಯರುಗಳು ರಸ್ತೆಗಳು ಸರಿಪಡಿಸದಿದ್ದರೆ ಮೆರವಣಿಗೆ ಕಷ್ಟ ಸಾದ್ಯ ಎಂದ ಅವರು ನಗರ ಸಭೆಯ ಅಧಿಕಾರಿಗಳು ಬರಿ ಸುಳ್ಳು ಹೇಳುತ್ತಾರೆ ಎಂದು ಅರೋಪಿಸಿದರು.

ತಿಪಟೂರು ಭಾಜಪ ಚುಕ್ಕಾಣಿ ಹಿಡಿದ ಸುರೇಶದ್ವಯರು

ತಿಪಟೂರು: ಜನತಾ ಪಾರ್ಟಿಯ ತಿಪಟೂರು ಮಂಡಳದ ಅಧ್ಯಕ್ಷರಾಗಿ ಬಳ್ಳೇಕಟ್ಟೆ ಸುರೇಶ್ ಹಾಗೂ ನಗರ ಅಧ್ಯಕ್ಷರಾಗಿ (ಗುಲಾಬಿ)ಸುರೇಶ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ವೀಕ್ಷಕರಾಗಿ/ಚುನಾವಣಾಧಿಕಾರಗಳಾಗಿ ಬಿಜೆಪಿ
ಜಿಲ್ಲಾಧ್ಯಕ್ಷ ಜ್ಯೋತಿಗಣೇಶ್,
ಮಾಜಿ ಶಾಸಕ ನಿರ್ಮಲ ಕುಮಾರ ಸುರಾನ, ಪದಾದಿಕಾರಿಗಳಾದ ಶಿವಪ್ರಸಾದ್, ರಂಗಾನಾಯಕ್, ಸುರೇಶ್, ರುದ್ರೇಶ್, ದಿಲೀಪ್, ಗಂಗರಾಜು, ಶಂಕರಪ್ಪ, ಶಂಕರಣ್ಣ, ಶಿವಣ್ಣ, ಪ್ರಸನ್ನಕುಮಾರ, ಮಂಜುನಾಥ್ ಇತರ ಭಾಗವಹಿಸಿದ್ದರು.

ಸುದರ್ಶನಬಾಬು-ವಂದೇಮಾತರಂ ಹಾಡಿದರು. ದೇವರಾಜು-ಸ್ವಾಗತಿಸಿದರು.
ಗಂಗಾಧರಯ್ಯ ವಂದಿಸಿದರು.

ನಿಕಟಪೂರ್ವ ಅಧ್ಯಕ್ಷರಾದ ದಿವಾಕರ್ ಹಾಗೂ ಲೋಕೇಶ್ ನೂತನ ಅಧ್ಯಕ್ಷರುಗಳಿಗೆ ಪಕ್ಷದ ಬಾವುಟ ಹಸ್ತಾಂತರಿಸಿ ವಿದಾಯ ಭಾಷಣ ಮಾಡಿದರು.

ಮಾಜಿ ಶಾಸಕ ನಿರ್ಮಲ ಕುಮಾರ ಸುರಾನ, ಶಾಸಕರಾದ ಜ್ಯೋತಿಗಣೇಶ್ ಹಾಗೂ
ಬಿ ಸಿ ನಾಗೇಶ್ ಪಕ್ಷದ ಬೆಳವಣಿಗೆ ಬಗ್ಗೆ ಮಾತನಾಡಿದರು.