Friday, May 8, 2026
Google search engine
Home Blog Page 236

ಏನು ಮಾಡಿದೆಯಪ್ಪಾ ಶಿವನೇ ನಿನ್ನ ಗುಡಿಗೆ ಬೆಂಕಿ ಹೊತ್ತೀಸ..

ಜಿ ಎನ್ ಮೋಹನ್


‘ಅವತ್ತು ಇನ್ನೊಬ್ಬರು, ಒಬ್ಬರೇ ಒಬ್ಬರು ನನ್ನ ಆಟೋ ಹತ್ತಿದ್ರೆ ಸಾಕಿತ್ತು ಸಾರ್..’
ಅಂದ ಆತ ತಕ್ಷಣ ಕಣ್ಣೀರಾದ

ನಾನು ಅವನನ್ನು ಸಮಾಧಾನ ಪಡಿಸಬೇಕೋ ಇಲ್ಲಾ
‘ಅತ್ತಾರ ಅತ್ತು ಬಿಡು ಹೊನಲು ಬರಲಿ ನಕ್ಯಾಕ ಮರಸತೀ ದುಃಖ..’
ಅಂತ ಅಳಲು ಬಿಟ್ಟು ಬಿಡಬೇಕೋ ಗೊತ್ತಾಗದೆ ಕಂಗಾಲಾದೆ

ಆತನಿಗೆ ಅಳು ಕಂಟ್ರೋಲ್ ಮಾಡಲು ಆಗಲೇ ಇಲ್ಲ.
‘ಕ್ಷಮಿಸಿ ಸರ್, ಕ್ಷಮಿಸಿ ಸಾರ್’ ಎನ್ನುತ್ತಲೇ ಆತನ ಕಣ್ಣು ಎದುರಿಗಿದ್ದ ದಾರಿಯೂ ಕಾಣದಷ್ಟು ಮಂಜಾಗಿ ಹೋಯಿತು

ಇನ್ನೇನೂ ಮಾಡಲು ತೋಚದೆ ಆತ ರಸ್ತೆ ಬದಿಗೆ ಗಾಡಿ ನಿಲ್ಲಿಸಿದ
ಆಟೋ ಹತ್ತಿದಾಗೆಲ್ಲಾ ಸುಮ್ಮನೆ ಕೂರುವುದು ನನ್ನ ಜಾಯಮಾನವಲ್ಲ.
ಹಾಗಾಗಿ ಇವನನ್ನೂ ಮಾತಿಗೆಳೆದುಕೊಂಡು ಕುಳಿತಿದ್ದೆ.

ಅವತ್ತು ಏನು ಮಾಡಿದರೂ ಉಬೆರ್/ ಓಲಾ ಸಿಗುವ ಲಕ್ಷಣವೇ ಕಾಣಲಿಲ್ಲ
ಹಾಗಾಗಿ ನಾನು ಆಟೋಗೆ ಕೈ ಅಡ್ಡ ಹಾಕಿದ್ದೆ

ಸ್ವಲ್ಪ ದೂರ ಹೋಗಿರಬೇಕು ಉಬೆರ್, ಓಲಾ ಬಂದು ನಿಮಗೆ ಪ್ರಾಬ್ಲಮ್ ಆಗಿಲ್ವಾ..?? ಅಂದೆ

ಆತ ಶತಮಾನಗಳ ಮಾತನ್ನು ನುಂಗಿ ಕುಳಿತಿದ್ದವನಂತೆ ಮಾತು ಆಡುತ್ತಲೇ ಹೋದ
ನಮ್ಮ ಆಟೋ ಸಂತೆ ದಾಟಿತು, ಮೇಲ್ಸೇತುವೆ ಏರಿತು, ಗಲ್ಲಿ ಹೊಕ್ಕಿತು,
ಮಾಲ್ ಮುಂದೆ ಹಾಯ್ದಿತು, ಬಾಳೆ ಹಣ್ಣು ಮಂಡಿಯನ್ನೂ ನೋಡಿತು
ಇನ್ನೊಂದು ಮಾಲ್ ಗಾಗಿ ಬಡವರಿಗೆ ಬಟ್ಟೆ ನೀಡುತ್ತಿದ್ದ ಮಿಲ್ ಮುಚ್ಚಿದ್ದ ಬೀದಿಯನ್ನೂ ದಾಟಿತು

ಆದರೆ ಅವನ ಮಾತು ನಿಂತಿರಲಿಲ್ಲ
‘ಯಾವುದೀ ಪ್ರವಾಹವು ..’ ಎನ್ನುವುದಕ್ಕೆ ಅರ್ಥ ಕೊಡಲೇಬೇಕು ಎಂದು ಮನಸ್ಸು ಮಾಡಿಬಿಟ್ಟವನಂತೆ ಮಾತು ಆಡುತ್ತಲೇ ಹೋದ

ಹಾಗೆ ಮಾತನಾಡುತ್ತಿದ್ದವನೇ ಹೀಗೆ ದಿಢೀರ್ ಕಣ್ಣೀರಾಗಿ ಹೋದ
ನಾನು ಅವನು ಸಂಪೂರ್ಣ ಕಣ್ಣೀರಾಗುವವರೆಗೂ ಏನೊಂದೂ ಮಾತನಾಡದೆ ಕುಳಿತೆ
ಅವನು ಬಿಕ್ಕಿ ಬಿಕ್ಕಿ ಅತ್ತ. ಇನ್ನೊಂದು ಹನಿಯೂ ಉಳಿದಿಲ್ಲ ಎನ್ನುವವರೆಗೂ ಅತ್ತ

ಆಗ ನಾನು ಕೇಳಿದೆ ‘ಏನಾಯ್ತು’ ಅಂತ

ನನಗೆ ಇನ್ನು ಬೇಕಿದ್ದದ್ದು 20 ರೂಪಾಯಿ ಮಾತ್ರ ಸಾರ್
ಒಬ್ಬೇ ಒಬ್ಬರು ಆಟೋ ಹತ್ತಿದ್ದರೆ ಸಾಕಿತ್ತು ನನ್ನ ತಾಯಿಯನ್ನು ಗೌರವವಾಗಿ ಮನೆಗೆ ಸೇರಿಸುತ್ತಿದ್ದೆ ಎಂದ

ಅರೆ! 20 ರೂಪಾಯಿಗೂ.. ಆ ತಾಯಿಗೂ ಏನು ಸಂಬಂಧ ಅನಿಸಿತು

ನನಗೆ ಇದೆಲ್ಲಾ ಅರ್ಥವಾಗುವ ಸಾಧ್ಯತೆಯೇ ಇಲ್ಲ ಅಂತ ಅವನಿಗೆ ಅನಿಸಿತೇನೋ

ಹೇಳಿದ- ನಾನು ಆ ದಿನ ದೂರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆಟೋ ಓಡಿಸುತ್ತಿದ್ದೆ
ನನ್ನ ತಂಗಿಯಿಂದ ಫೋನ್ ಬಂತು- ಅಮ್ಮ ಹೋಗಿಬಿಟ್ಟರು ಅಣ್ಣ ಅಂದಳು
ನಾನೋ ಆಟೋ ಓಡಿಸುತ್ತಿದ್ದವನು ಜೊತೆಯಲ್ಲಿದ್ದ ಕಸ್ಟಮರ್ ನ ದಾರಿ ಅರ್ಧದಲ್ಲೇ ಇಳಿಸುವ ಹಾಗೂ ಇರಲಿಲ್ಲ
ಹಾಗಾಗಿ ಅವರು ಹೇಳಿದ ಕಡೆಗೆ ಕಣ್ಣಲ್ಲಿ ನೀರು ಇಟ್ಟುಕೊಂಡೇ ಆಟೋ ಓಡಿಸಿದೆ

ಅವರು ಇಳಿದ ತಕ್ಷಣವೇ ಆಸ್ಪತ್ರೆಗೆ ಫೋನ್ ಮಾಡಿದೆ
ಆಂಬುಲೆನ್ಸ್ ಇರಲಿ ಅಣ್ಣ ಒಂದು ಗಂಟೆಯೂಳಗೆ ಬಂದು ಬಿಡ್ತೀನಿ ಅಂತ
ಆಯ್ತಪ್ಪಾ ಆದ್ರೆ 500 ರೂಪಾಯಿ ಆಗುತ್ತೆ ಅಂದ
ಶವ ಸಾಗಿಸಲು ಫ್ರೀ ಆಂಬ್ಯುಲೆನ್ಸ್ ಕೊಡ್ತೀವಿ ಅಂತ ಸರ್ಕಾರ ಹೇಳಿತ್ತು
ನಾನು ‘ಯಾಕೆ ಅಣ್ಣ’ ಅಂದೆ. ‘ಅದು ನಮ್ಮ ಚಾರ್ಜ್ ಸತ್ತೋರ ಜೊತೆ ಓಡಾಡಬೇಕಲ್ಲಪ್ಪಾ’ ಅಂದ

ನನ್ನ ಜೋಬಲ್ಲಿ ಅದುವರೆಗೂ ದುಡಿದಿದ್ದೆಲ್ಲಾ ಎಣಿಸಿದೆ. ತಂಗಿ ಬಳಿ ಇದ್ದ ಪುಡಿಗಾಸು ಎಣಿಕೆ ಹಾಕಿದೆ. ಮನೆಯಲ್ಲಿ ಇರೋದು ಎಷ್ಟು ಫೋನ್ ಮಾಡಿ ಕೇಳಿದೆ
ಎಲ್ಲಾ ಸೇರಿದರೂ 500 ಆಗುತ್ತಿಲ್ಲ
ಜೊತೆಗೆ ಕಂಡ ಡ್ರೈವರ್ ಗಳಿಂದಲೂ ಅಷ್ಟಿಷ್ಟು ಸೇರಿಸಿದೆ

ಇನ್ನು 20 ರೂಪಾಯಿ ಮಾತ್ರ ಬೇಕಿತ್ತು
ಅಮ್ಮ ಅಲ್ಲಿ ಉಸಿರು ಇಲ್ಲದೆ ಮಲಗಿದ್ದಾರೆ ಅಂತ ಗೊತ್ತಿತ್ತು ತಕ್ಷಣ ಹೋಗಬೇಕು ಅನ್ನೋದು ಗೊತ್ತಿತ್ತು
ಏನು ಮಾಡಲಿ 20 ರೂಪಾಯಿ ಇಲ್ಲದೆ ಅಮ್ಮನನ್ನು ಮನೆಗೆ ಕರೆದುಕೊಂಡು ಹೋಗುವ ಹಾಗೇ ಇಲ್ಲ

ಸರಿ ಇದ್ದ ಎಲೆಕ್ಟ್ರಾನಿಕ್ ಸಿಟಿಯಲ್ಲೇ ಬೀದಿ ಬೀದಿ ಸುತ್ತಿದೆ
ಒಬ್ಬ, ಒಬ್ಬೇ ಒಬ್ಬ ನನ್ನ ಆಟೋ ಹತ್ತಲಿ ಅಂತ
ಸಾರ್ ಎಲ್ಲಿ ನೋಡಿದ್ರೂ ದೊಡ್ಡ ದೊಡ್ಡ ಬಿಲ್ಡಿಂಗ್ ಸಾರ್ ಸಾವಿರಾರು ಜನ ಬರ್ತಾರೆ ಹೋಗ್ತಾರೆ
ನನ್ನ ಕಣ್ಣೆದುರಿಗೇ ಬೇಕಾದಷ್ಟು ಉಬೆರ್ ಓಲಾಗಳು ಬಂತು
ಜನ ಹತ್ತಿ ಹೋದರು

ನಾನು ಕಣ್ಣಲ್ಲಿ ಆಸೆ ಇಟ್ಟುಕೊಂಡು ಎಲ್ಲರ ಮುಂದೆಯೂ ಸುತ್ತಿದೆ
ಆಗಲಿಲ್ಲ.. ಒಂದು ಗಂಟೆ ತಡವಾಯ್ತು ಆಟೋ ಗ್ಯಾಸ್ ಮುಗಿದು ಹೋದರೆ ಅನ್ನೋ ಭಯ ಶುರುವಾಯ್ತು

ಕೊನೆಗೆ ಆಸ್ಪತ್ರೆ ಕಡೆ ಗಟ್ಟಿ ಮನಸ್ಸು ಮಾಡಿ ಆಟೋ ಓಡಿಸಿದೆ
ಅಲ್ಲಿ ಅಂಬ್ಯುಲೆನ್ಸ್ ಡ್ರೈವರ್ ಗೆ 20 ರೂಪಾಯಿ ಕಡಿಮೆ ಇದೆ ಅಣ್ಣ ಅಂದೆ
ಆತ ಫೋನ್ ನಲ್ಲಿದ್ದ . ಕೈ ಸನ್ನೆಯಲ್ಲೇ ‘ಹೋಗ್ ಹೋಗ್ ಆಗೋದಿಲ್ಲ’ ಅಂದ

ನಾನು ಎಲ್ಲಿಗೆ ಹೋಗ್ಲಿ, ಅಮ್ಮ ಇಲ್ಲದೆ ಹೇಗೆ ಹೋಗ್ಲಿ ?
ಅವನ ಮುಂದೆಯೇ ಕುಕ್ಕುರುಗಾಲಲ್ಲಿ ಕೂತೆ
ಅವನು ಈಗ ಒಪ್ತಾನೆ, ಆಗ ಒಪ್ತಾನೆ ಅಂತ
ನಿಜ ಹೇಳ್ತೀನಿ ಸಾರ್ ಒಂದು ಗಂಟೆಗೂ ಜಾಸ್ತಿ ಫೋನ್ ಹಿಡಿದುಕೊಂಡೆ ನಿಂತಿದ್ದ, ನನ್ನ ಕಡೆ ಕಣ್ಣೆತ್ತಿ ಕೂಡಾ ನೋಡಲಿಲ್ಲ
ಅವನು ಒಂದು ಫೋನ್ ಕಡಿಮೆ ಮಾಡಿದ್ರೂ ನನ್ನ 20 ರೂಪಾಯಿ ಅವನಿಗೆ ಮಿಕ್ಕಿ ಹೋಗ್ತಿತ್ತು ಆದರೆ ಮಾಡ್ಲಿಲ್ಲ

ನಾನು ಆಸ್ಪತ್ರೆಯಲ್ಲಿ ಕೈ ಮುಗಿಯದವರಿಲ್ಲ
ಡ್ರೈವರ್ ವಾಚ್ ಮ್ಯಾನ್ ರೆಸೆಪ್ಷನಿಸ್ಟ್ ಮ್ಯಾನೇಜರ್ ಎಲ್ಲಾ ಡಾಕ್ಟರ್
20 ರೂ ಪಾಯಿ ನನ್ನ ಮತ್ತು ಅಮ್ಮನ ನಡುವೆ ಕಲ್ಲಿನಂತೆ ಕೂತು ಬಿಟ್ಟಿತ್ತು

ಬೆಳಗ್ಗೆ ಸತ್ತ ಅಮ್ಮನನ್ನ ಸಂಜೆ ಆದರೂ ಸಾಗಿಸಲಾಗಲಿಲ್ಲ

ಕೊನೆಗೆ ಒಂದು ನಿರ್ಧಾರಕ್ಕೆ ಬಂದೆ – ಸೀದಾ ಮ್ಯಾನೇಜರ್ ಹತ್ರ ಹೋಗಿ ಹೆಣ ನೀವೇ ಸುಟ್ಟು ಹಾಕಿಬಿಡಿ ನಮಗೆ ಬೇಡ ಅಂದೆ

ಅವರೇನೂ ಬಗ್ಲಿಲ್ಲ
ಆದರೆ ನಾನು ಇನ್ನೇನು ಮಾಡೋಕಾಗ್ತಿತ್ತು ಅಮ್ಮನ ಹಳೆ ಬಟ್ಟೆ, ಚೊಂಬು, ಮನೆಯಿಂದ ಅಮ್ಮನಿಗೆ ಇಷ್ಟ ಅಂತ ತಂದಿದ್ದ ಒಂದೆರಡು ಉಂಡೆ
ಎಲ್ಲ ಬ್ಯಾಗಿಗೆ ಹಾಕಿ ತಂಗಿಯೊಡನೆ ಹೊರಟೇಬಿಟ್ಟೆ

ಬಾಗಿಲು ದಾಟಿದೆ, ಗೇಟ್ ದಾಟಿದೆ, ರಸ್ತೆ ದಾಟಿದೆ
ಆಗ ಅವರಿಗೆ ಅನಿಸಿಹೋಯ್ತೆನೋ ಇವನು ನಿಜಕ್ಕೂ ಈ ಮಾತು ಹೇಳಿದ್ದಾನೆ ಇನ್ನು ನಾವೇ ಧಫನ್ ಮಾಡೋ ಹಾಗಾಗುತ್ತೆ ಅಂತ
ಆಗ ಬಂತು ನೋಡಿ ಸಾರ್ ನನ್ನ ಹಿಂದೆ ಆಂಬ್ಯುಲೆನ್
ಮನೆಗೆ ಕರೆದುಕೊಂಡು ಬಂದು ಅಮ್ಮನಿಗೆ ಚಾಪೆಯ ಮೇಲೆ ಮಲಗಿಸಿ ಕೈ ಮುಗಿದೆ ಅಂದ

ನಾನೂ ಆ ವೇಳೆಗೆ ನಿಟ್ಟುಸಿರಾಗಿದ್ದೆ
ಸ್ವಲ್ಪ ಹೊತ್ತು ಸುಮ್ಮನೆ ಕೂತೆ

ಹಾಗೆ ನಾವಿಬ್ಬರೂ ರಸ್ತೆ ಬದಿ ಆಟೋ ನಿಲ್ಲಿಸಿ ಎದೆ ಎದೆಗಳ ನಡುವೆ ಸೇತುವೆ ಇದೆಯೋ ಇಲ್ಲವೋ ಅಂತ ಪರೀಕ್ಷಿಸಿ ಕೊಳ್ಳುತ್ತಿದ್ದೆವು

ಇಷ್ಟೆಲ್ಲಾ ಆದ ಮೇಲೂ ನನಗೆ ಒಂದು ಪ್ರಶ್ನೆ ಕೇಳಲು ಬಾಕಿ ಇತ್ತು
‘ಹಾಗಿದ್ರೆ ನಿಮ್ಮ ಅವತ್ತಿನ ಕಲೆಕ್ಷನ್ ಅಮ್ಮನ ಕಾರ್ಯಕ್ಕೆ ಬಳಿಸಿದ್ರಿ?’ ಅಂದೆ

ಅದುವರೆಗೂ ಅತ್ತಿದ್ದ ಆ ಡ್ರೈವರ್ ಜೋರಾಗಿ ನಕ್ಕು ಬಿಟ್ಟ
ಸಾರ್ ಮನೆ ತಲುಪಿದ್ದು ಅಷ್ಟೇ, ಇನ್ನೂ ಬಾಡಿ ಕೆಳಗೆ ಇಳಿಸಿಲ್ಲ ಆತ ಬಾಗಿಲೇ ತೆಗೀಲಿಲ್ಲ.
480 ರೂಪಾಯಿ ಅವನ ಕೈಗೆ ಬಿದ್ದ ಮೇಲೇ ಅಮ್ಮ ಮನೆಗೆ ಎಂಟರ್ ಆಗಿದ್ದು ಅಂದ

ಏನು ಮಾಡಿದೆಯಪ್ಪಾ ಶಿವನೇ..
ನಿನ್ನ ಗುಡಿಗೆ ಬೆಂಕಿ ಹೊತ್ತೀಸ..

ಅನ್ನಬೇಕು ಅಂದುಕೊಂಡೆ

ಆಗ ಅವನೇ ಮಾತನಾಡಿದ
ಸಾರ್ ಅದು ಬಿಡಿ ಸಾರ್ ಈ ಕಥೆ ಕೇಳಿ ಅಂದ

ಅಮ್ಮ ಆಸ್ಪತ್ರೆ ಸೇರಿ 14 ದಿನ ಆಗಿತ್ತು. ಡಾಕ್ಟರ್ ಬಂದವರೇ ಇವರನ್ನ ನೋಡಿಕೊಳ್ಳೋರು ಯಾರಮ್ಮಾ ಅಂತ ಕೇಳಿದ್ರು ನನ್ನ ತಂಗಿ ಬಂದು ನಿಂತಳು
ಪೇಶಂಟ್ ವೀಕ್ ಆಗಿದ್ದಾರೆ ಐ ಸಿ ಯು ಗೆ ಅಡ್ಮಿಟ್ ಮಾಡ್ಬೇಕು ಅಂದ್ರು

ತಕ್ಷಣ ತಂಗಿ ನನಗೆ ಫೋನ್ ಮಾಡಿದಳು
ಅಣ್ಣ ಹೀಗಂತೆ ಅಂತ

ಅಮ್ಮನಿಗೆ ಪ್ರತೀ ದಿನ ಊಟ ತೆಗೆದುಕೊಂಡು ಹೋಗಬೇಕು ಅಂತ ಅಂದ್ರೂ ಅಷ್ಟು ಹೊತ್ತು ಡ್ಯೂಟಿ ಮಾಡದೆ ಹೋದ್ರೆ ಮನೇಲಿ ಅನ್ನ ಬೇಯಲ್ಲ ಸಾರ್ ಅಂತ ಸ್ಥಿತಿ ನಮ್ಮದು
ಹಾಗಿರುವಾಗ ಐ ಸಿ ಯು ಕಾಣಿಸೋದಿಕ್ಕೆ ಆಗುತ್ತಾ??

ಭಯ ಆಯ್ತು. ನಾನೇ ಡಾಕ್ಟರ್ ಗೆ ಫೋನ್ ಮಾಡಿದೆ ಸಾರ್ ಎಷ್ಟು ದಿನ ಇರಬೇಕಾಗುತ್ತೆ ಐ ಸಿ ಯು ನಲ್ಲಿ ಅಂತ
ಅವರು ಒಂದು ವಾರ ಆದ್ರೂ ಆಗಬಹುದು ಎರಡು ವಾರ ಆದ್ರೂ ಆಗಬಹುದು ಅಂದ್ರು
ಸಾರ್ ನಾನು ಬಡವ, ನೀವೇ ನೋಡಿದ್ದೀರಲ್ಲ ಸಾರ್ ನಾನು ಯೂನಿಫಾರ್ಮ್ ನಲ್ಲೆ ಆಸ್ಪತ್ರೆಗೆ ಬರ್ತೀನಿ ಅಂತ

ಡಾಕ್ಟರ್ ಫೋನ್ ಕಟ್ ಮಾಡಿದ್ರು
ಸರಿ ಇನ್ನೇನು ಅಮ್ಮ ಆಲ್ವಾ ಉಳಿದ್ರೆ ಉಳೀಲಿ ಇಲ್ಲಾ ಅಂದ್ರೆ ಸರಿಯಾಗಿ ನೋಡಿಕೊಳ್ಳಲಿಲ್ಲ ಅನ್ನೋ ಕೊರಗು ಇರೋದಿಲ್ಲ ಅಂತ ಅದಕ್ಕೂ ಸಜ್ಜಾದೆ

ಆಗ ಸಾರ್ ಅಗ್ಲೇ.. ಅಲ್ಲಿದ್ದ ಆಯಾ ಒಬ್ಬಳು ಫೋನ್ ಮಾಡಿದ್ಲು- ಯಾವ ಕಾರಣಕ್ಕೂ ಐ ಸಿ ಯು ಗೆ ಸೇರಿಸಬೇಡಿ
ದುಡ್ಡು ತಿನ್ನೋಕೆ ನಾಟಕ ಮಾಡ್ತಿದ್ದಾರೆ ನಿಮ್ಮ ತಾಯಿ ಸತ್ತು ಆಗ್ಲೇ ಒಂದು ಗಂಟೆ ಆಗಿದೆ ಅಂದರು

ನಾನು ಇದ್ದದ್ದು ಬೆಂಗಳೂರಿನಲ್ಲಿ…
ಜಗತ್ತಿನ ಕಿರೀಟ, ಭಾರತದ ಸಿಲಿಕಾನ್ ಸಿಟಿ ಯಲ್ಲಿ
ಐಟಿ, ಬಿಟಿ ಎಂದು ಮೀಸೆ ತಿರುಗುತ್ತಿರುವ ನಗರಿಯಲ್ಲಿ
ಅಮೆರಿಕಾದ ಉಬೆರ್ ಸಹಾ ಕಣ್ಣಿಟ್ಟಿರುವ ಮಹಾನ್ ನಗರಿ ಬೆಂಗಳೂರಿನಲ್ಲಿ

ಆತ ಹೇಳುತ್ತಿರುವ ಕಥೆ ಇಲ್ಲಿನ ಹೃದಯ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆಯದ್ದು

ಒಂದು ಕ್ಷಣ ಮಾತು ಹೊರಡಲಿಲ್ಲ

ಅದಕ್ಕೆ ಹೇಳಿದರಾ ಕವಿ ಎಕ್ಕುಂಡಿ –
‘ಕೆಂಡದ ಮೇಲೆ ನಡೆದವನಿಗೆ ಮಾತ್ರವೇ ಕೆಂಡದ ಬಿಸಿ ಗೊತ್ತಾಗಲು ಸಾಧ್ಯ’ ಅಂತ

ಆತ ಆಟೋ ಸ್ಟಾರ್ಟ್ ಮಾಡಲು ಹೊರಟ
ಒಂದು ನಿಮಿಷ ಅಂದೆ
ಈಗ ಕಣ್ಣೀರಾಗುವ ಸರದಿ ನನ್ನದಾಗಿತ್ತು

ಇದೆಲ್ಲಾ ಯಾಕೆ ನೆನಪಾಯ್ತು ಅಂದರೆ ಗೆಳತಿಯೊಬ್ಬಳು ಒಂದು ಪೋಸ್ಟರ್ ವಾಟ್ಸ್ ಅಪ್ ಮಾಡಿದ್ದಳು
ಅದು ಪುಟ್ಟ ಹೋಟೆಲ್ ನ ಹೊರಗಡೆ ಇದ್ದ ಒಂದು ಫಲಕದ ಫೋಟೋ

ಅದರಲ್ಲಿತ್ತು- ಇಲ್ಲಿ ನೀವು ತಿಂಡಿ ತಿಂದರೆ ಒಂದು ಮನೆಯ ಮಗು ಶಾಲೆ ಸೇರುತ್ತೆ
ಸ್ಟಾರ್ ಹೋಟೆಲ್ ನಲ್ಲಿ ತಿಂದರೆ ಅದರ ಸಿಇಓ ಗೆ
ಸಿಂಗಾಪುರ್ ನಲ್ಲಿ ಮಜಾ ಮಾಡಲು ಒಂದು ರಜಾ ಎಕ್ಸ್ಟ್ರಾ ಸಿಗುತ್ತೆ ಅಂತ..

ವಿಡಿಯೋ ಮಾಡಿ ನೇಣಿಗೆ ಶರಣಾದ ಕ್ಯಾಬ್ ಡ್ರೈವರ್

ತುಮಕೂರು:


ಹಣಕಾಸಿನ ಸಮಸ್ಯೆಯಿಂದ ಕ್ಯಾಬ್ ಚಾಲಕನೊಬ್ಬ ನೇಣಿಗೆ ಶರಣಾಗುವ ಮುನ್ನ ವಿಡಿಯೋ ಮಾಡಿ ನಂತರವ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.


ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡ್ಲಹಳ್ಳಿ ಗ್ರಾಮದ ನವಾಸಿ ನಂದೀಶಯ್ಯ ಎಂಬುವರ ಮಗ ಮಧು(25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.


ಬೆಂಗಳೂರು ನಗರದಲ್ಲಿ ಕಾರು ಚಾಲಕನಾಗಿದ್ದ ಮಧು ಕೊರೊನಾ ಲಾಕ್ ಡೌನ್ ಹಿನ್ನಲೆ ಕಳೆದ ವಾರದ ಹಿಂದೆ ತನ್ನ ಸ್ವಗ್ರಾಮ ಕೋಡ್ಲಹಳ್ಳಿಗೆ ಬಂದಿದ್ದರು.

ಹಣಕಾಸಿನ ಸಮಸ್ಯೆ ಉಂಟಾಗಿದ್ದರಿಂದ ಕೊರಟಗೆರೆ ತಾಲ್ಲೂಕಿನ ಮಾವತ್ತೂರು ಕೆರೆ ಸಮೀಪದ ಹುಣಸೆ ಮರಕ್ಕೆ ನೇಣು ಹಾಕಿಕೊಳ್ಳುವ ಮುನ್ನ ವಿಡಿಯೋ ಮಾಡಿ ತನ್ನ ಅಣ್ಣನಿಗೆ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಡಿಯೋದಲ್ಲಿ ಸಮಸ್ಯೆ‌ ಬಗ್ಗೆ ಸ್ವತಃ‌ ಮಧು ಹೇಳಿಕೊಂಡಿದ್ದಾನೆ.

ವಿಡಿಯೋ ಜಾಡು ಹಿಡಿದು ಸಾವಿನ ಖಚಿತ ಮಾಹಿತಿ ಯನ್ನು ಕೋಳಾಲ ಪೊಲೀಸರು ಕಲೆ ಹಾಕುತ್ತಿದ್ದಾರೆ.

ಯಾರ ಜೀವನವೂ ಅಷ್ಟು ಸುಲಭ, ಸರಾಗವಲ್ಲ ಏಕೆ ಗೊತ್ತಾ?

ರಘುನಂದನ ಎ.ಎಸ್.


ಮಹಾಭಾರತದಲ್ಲಿ ಕರ್ಣನು ಶ್ರೀಕೃಷ್ಣನನ್ನು ಕೇಳುತ್ತಾನೆ –
ನಾನು ಹುಟ್ಟಿದ ಕ್ಷಣದಿಂದ ನನ್ನ ತಾಯಿ ನನ್ನನ್ನು ತೊರೆದರು.
ನಾನು ನ್ಯಾಯಸಮ್ಮತವಲ್ಲದ ಮಗುವಾಗಿ ಜನಿಸಿದ್ದು ನನ್ನ ತಪ್ಪೇ ?

ಕ್ಷತ್ರಿಯರಲ್ಲ ಎಂದು ಪರಿಗಣಿಸಲ್ಪಟ್ಟಿದ್ದರಿಂದ ನಾನು ದ್ರೋಣಾಚಾರ್ಯರಿಂದ ಶಿಕ್ಷಣವನ್ನು ಪಡೆಯಲಿಲ್ಲ.
ಪರಶುರಾಮರು ನನಗೆ ಕಲಿಸಿದರು ಆದರೆ ನಂತರ ನಾನು ಕುಂತಿಯ ಮಗ ಕ್ಷತ್ರಿಯನಿಗೆ ಸೇರಿದವನೆಂದು ತಿಳಿದಾಗ ಎಲ್ಲವನ್ನೂ ಮರೆತುಬಿಡುವ ಶಾಪವನ್ನು ಕೊಟ್ಟರು .

ಒಂದು ಹಸುವಿಗೆ ಆಕಸ್ಮಿಕವಾಗಿ ನನ್ನ ಬಾಣ ಹೊಡೆದು, ಅದರ ಮಾಲೀಕರು ಯಾವುದೇ ತಪ್ಪಿಲ್ಲದೆ ನನ್ನನ್ನು ಶಪಿಸಿದರು.
ದ್ರೌಪದಿಯ ಸ್ವಯಂವರದಲ್ಲಿ ನನಗೆ ಅಪಮಾನವಾಯಿತು.

ಕುಂತಿ ಕೂಡ ಕೊನೆಗೆ ತನ್ನ ಇತರ ಗಂಡು ಮಕ್ಕಳನ್ನು ಉಳಿಸಲು ಮಾತ್ರ ಸತ್ಯವನ್ನು ಹೇಳಿದಳು.
ನಾನು ಪಡೆದದ್ದೆಲ್ಲವೂ ದುರ್ಯೋಧನನ ದಾನದ ಮೂಲಕ.
ಹಾಗಾದರೆ ಅವನ ಕಡೆ ನಾನು ಇರುವುದರಲ್ಲಿ ಏನು ತಪ್ಪು? ”

ಶ್ರೀಕೃಷ್ಣರು ಉತ್ತರಿಸುತ್ತಾ,

ಕರ್ಣ, ನಾನು ಜೈಲಿನಲ್ಲಿ ಜನಿಸಿದೆ.
ನನ್ನ ಜನನದ ಮುಂಚೆಯೇ ಸಾವು ನನಗಾಗಿ ಕಾಯುತ್ತಿತ್ತು.
ನಾನು ಹುಟ್ಟಿದ ರಾತ್ರಿ ನನ್ನ ಹೆತ್ತವರಿಂದ ಬೇರ್ಪಟ್ಟಿದ್ದೇನೆ.
ಬಾಲ್ಯದಿಂದಲೂ ನೀವು ಕತ್ತಿಗಳು, ರಥಗಳು, ಕುದುರೆಗಳು, ಬಿಲ್ಲು ಮತ್ತು ಬಾಣಗಳ ಶಬ್ದವನ್ನು ಕೇಳಿ ಬೆಳೆದಿದ್ದೀರಿ.

ನಾನು ನಡೆಯುವ ಮೊದಲೇ ನನ್ನ ಜೀವನದಲ್ಲಿ ಹಸುವಿನ ಹಿಂಡಿನ ಶೆಡ್, ಸಗಣಿ ಮತ್ತು ಅನೇಕ ಪ್ರಯತ್ನಗಳನ್ನು ಮಾತ್ರ ಪಡೆದುಕೊಂಡಿದ್ದೇನೆ!
ಸೇನೆ ಇಲ್ಲ, ಶಿಕ್ಷಣವಿಲ್ಲ. ಅವರ ಎಲ್ಲಾ ಸಮಸ್ಯೆಗಳಿಗೆ ನಾನು ಕಾರಣ ಎಂದು ಜನರು ಹೇಳುವುದನ್ನು ನಾನು ಕೇಳಬಹುದು.

ನಿಮ್ಮ ಶಿಕ್ಷಕರಿಂದ ನಿಮ್ಮ ಶೌರ್ಯಕ್ಕಾಗಿ ನೀವೆಲ್ಲರೂ ಮೆಚ್ಚುಗೆ ಪಡೆದಾಗ ನಾನು ಯಾವುದೇ ಶಿಕ್ಷಣವನ್ನು ಸಹ ಪಡೆದಿರಲಿಲ್ಲ.

ನಾನು ಋಷಿ ಸಂದೀಪನಿಯ ಗುರುಕುಲಕ್ಕೆ 16 ನೇ ವಯಸ್ಸಿನಲ್ಲಿ ಸೇರಿಕೊಂಡೆ!

ನನ್ನ ಇಡೀ ಸಮುದಾಯವನ್ನು ಜಮಸಂಧನಿಂದ ರಕ್ಷಿಸಲು ಯಮುನಾ ದಡದಿಂದ ದೂರದ ಸಮುದ್ರ ತೀರಕ್ಕೆ ಸ್ಥಳಾಂತರಿಸಬೇಕಾಯಿತು. ಓಡಿಹೋಗಲು ನನ್ನನ್ನು ಹೇಡಿ ಎಂದು ಕರೆಯಲಾಯಿತು !!
ದುರ್ಯೋಧನನು ಯುದ್ಧವನ್ನು ಗೆದ್ದರೆ ನಿಮಗೆ ಸಾಕಷ್ಟು ಮನ್ನಣೆ ಸಿಗುತ್ತದೆ. ಧರ್ಮರಾಜನು ಯುದ್ಧವನ್ನು ಗೆದ್ದರೆ ನನಗೆ ಏನು ಸಿಗುತ್ತದೆ? ಯುದ್ಧ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಮಾತ್ರ ಕಾರಣ.

ಕರ್ಣ, ಒಂದು ವಿಷಯ ನೆನಪಿಡಿ. ಪ್ರತಿಯೊಬ್ಬರಿಗೂ ಜೀವನದಲ್ಲಿ ಎದುರಿಸಲು ಸವಾಲುಗಳಿವೆ.
ಜೀವನವು ನ್ಯಾಯಯುತವಲ್ಲ ಮತ್ತು ಯಾರೊಬ್ಬರಲ್ಲೂ ಸುಲಭವಲ್ಲ !!!

ಆದರೆ ಯಾವುದು ಸರಿ (ಧರ್ಮ) ಎಂಬುದು ನಿಮ್ಮ ಮನಸ್ಸಿಗೆ (ಆತ್ಮಸಾಕ್ಷಿಗೆ) ತಿಳಿದಿದೆ. ನಾವು ಎಷ್ಟು ಅನ್ಯಾಯವನ್ನು ಪಡೆದುಕೊಂಡಿದ್ದೇವೆ, ಎಷ್ಟು ಬಾರಿ ನಾವು ನಾಚಿಕೆಗೇಡಿನವರಾಗಿದ್ದೇವೆ, ನಾವು ಎಷ್ಟು ಬಾರಿ ಬೀಳುತ್ತೇವೆ, ಆ ಸಮಯದಲ್ಲಿ ನೀವು ಹೇಗೆ ಪ್ರತಿಕ್ರಿಯಿಸಿದ್ದೀರಿ ಎಂಬುದು ಮುಖ್ಯವಾಗಿದೆ.

ಜೀವನದ ಅನ್ಯಾಯವು ತಪ್ಪಾದ ಹಾದಿಯಲ್ಲಿ ನಡೆಯಲು ನಿಮಗೆ ಪರವಾನಗಿ ನೀಡುವುದಿಲ್ಲ.

ಯಾವಾಗಲೂ ನೆನಪಿಡಿ, ಜೀವನವು ಕೆಲವು ಹಂತಗಳಲ್ಲಿ ಕಠಿಣವಾಗಬಹುದು, ಆದರೆ ನಾವು ಇರುವ ಪರಿಸ್ಥಿತಿ ಹಾಗೂ ನಾವು ತೆಗೆದುಕೊಳ್ಳುವ ನಿರ್ಧಾರ ಮತ್ತು ಧರ್ಮ ಪಾಲನೆಯ ಮೇಲೆ ನಿಂತಿದೆ.

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ಪಂಚಾಂಗ
ದಿನಾಂಕ : 8, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಶುಕ್ರವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ಪಾಡ್ಯ
(ನಿನ್ನೆ ಸಂಜೆ 4 ಗಂ॥ 19 ನಿ।। ರಿಂದ
ಇಂದು ಮಧ್ಯಾಹ್ನ 1 ಗಂ॥ 6 ನಿ।। ತನಕ)
ನಕ್ಷತ್ರ : ವಿಶಾಖ
(ನಿನ್ನೆ ಬೆಳಿಗ್ಗೆ 11 ಗಂ॥ 10 ನಿ।। ರಿಂದ
ಇಂದು ಬೆಳಿಗ್ಗೆ 8 ಗಂ॥ 40 ನಿ।। ತನಕ)
ಯೋಗ : ವರಿಯಾನ್
ಕರಣ : ಕೌಲವ
ವರ್ಜ್ಯಂ : (ಇಂದು ಬೆಳಿಗ್ಗೆ 12 ಗಂ॥ 19 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 46 ನಿ।। ತನಕ)
ಅಮೃತಕಾಲ : (ಇಂದು ಪ್ರಾತಃಕಾಲ 0 ಗಂ॥ 47 ನಿ।। ರಿಂದ ಇಂದು ಪ್ರಾತಃಕಾಲ 2 ಗಂ॥ 13 ನಿ।। ತನಕ)(ಇಂದು ರಾತ್ರಿ 9 ಗಂ॥ 5 ನಿ।। ರಿಂದ ಇಂದು ರಾತ್ರಿ 10 ಗಂ॥ 32 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 8 ಗಂ॥ 20 ನಿ।। ರಿಂದ ಇಂದು ಬೆಳಿಗ್ಗೆ 9 ಗಂ॥ 11 ನಿ।। ತನಕ)(ಇಂದು ಬೆಳಿಗ್ಗೆ 12 ಗಂ॥ 37 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 28 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 10 ಗಂ॥ 35 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 11 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 7 ಗಂ॥ 22 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 58 ನಿ।। ತನಕ)
ಯಮಗಂಡ : (ಇಂದು ಸಂಜೆ 3 ಗಂ॥ 25 ನಿ।। ರಿಂದ ಇಂದು ಸಂಜೆ 5 ಗಂ॥ 1 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 46 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 38 ನಿ।। ಗೆ
ರವಿರಾಶಿ : ಮೇಷ
ಚಂದ್ರರಾಶಿ : ವೃಶ್ಚಿಕ

ರಾಶಿ ಭವಿಷ್ಯ

ಮೇಷ ರಾಶಿ ಭವಿಷ್ಯ : 8 May 2020
ಜನರಲ್ಲಿ ಬೆರೆಯುವ ಭಯ ನಿಮ್ಮನ್ನು ಧೈರ್ಯಗೆಡಿಸಬಹುದು. ಇದನ್ನು ತೆಗೆದುಹಾಕಲು ನಿಮ್ಮ ಸ್ವಾಭಿಮಾನವನ್ನು ಪ್ರೋತ್ಸಾಹಿಸಿ. ಇಂದು ಯಾವುದೇ ವಿರುದ್ಧ ಲಿಂಗದ ಸಹಾಯದಿಂದ ನೀವು ವ್ಯಾಪರ ಅಥವಾ ಉದ್ಯೋಗದಲ್ಲಿ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಪೋಷಕರಿಗೆ ಮಹತ್ವಾಕಾಂಕ್ಷೆಯನ್ನು ಬಹಿರಂಗಪಡಿಸಲು ಸರಿಯಾದ ಸಮಯ. ಅವರು ಸಂಪೂರ್ಣವಾಗಿ ನಿಮಗೆ ಬೆಂಬಲ ನೀಡುತ್ತಾರೆ. ನೀವು ಗಮನ ಹರಿಸಬೇಕು ಮತ್ತು ಇದನ್ನು ಸಾಧಿಸಲು ಶ್ರಮಪಡಬೇಕು. ನೀವು ಇನ್ನು ಮುಂದೆ ನಿಮ್ಮ ಕಾಮಪ್ರಚೋದಕ ಕಲ್ಪನೆಗಳ ಬಗ್ಗೆ ಕನಸು ಕಾಣಬೇಕಾಗಿಲ್ಲ; ಅವು ಇಂದು ನಿಜವಾಗಬಹುದು.ಅದೃಷ್ಟ ಸಂಖ್ಯೆ: 5

ವೃಷಭ ರಾಶಿ ಭವಿಷ್ಯ : 8 May 2020
ದೈಹಿಕ ಲಾಭಕ್ಕಾಗಿ ವಿಶೇಷವಾಗಿ ಮಾನಸಿಕ ದೃಢತೆಗಾಗಿ ಧ್ಯಾನ ಮತ್ತು ಯೋಗ ಪ್ರಾರಂಭಿಸಿ. ವ್ಯಾಪಾರ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ಯುವಕರು ಶಾಲಾ ಯೋಜನೆಗಳಲ್ಲಿ ಕೆಲವು ಸಲಹೆ ಪಡೆಯಬಹುದು. ಇಂದು ಪ್ರಣಯದ ಭಾವನೆಗಳಿಗೆ ಪ್ರತಿಕ್ರಿಯೆ ದೊರಕುತ್ತದೆ. ಯಶಸ್ಸು ಖಂಡಿತವಾಗಿಯೂ ನಿಮ್ಮದಾಗಿದೆ – ನೀವು ಒಂದು ಬಾರಿ ಒಂದೇ ಹೆಜ್ಜೆಯಿಟ್ಟರೆ ಇದು ಪ್ರಮುಖ ಬದಲಾವಣೆ ತರುತ್ತದೆ. ಉಚಿತ ಸಮಯದಲ್ಲಿ ಯಾವುದೇ ಪುಸ್ತಕವನ್ನು ಓದಬಹುದು. ಆದಾಗ್ಯೂ ನಿಮ್ಮ ಮನೆಯ ಉಳಿದ ಸದಸ್ಯರು ನಿಮ್ಮ ಏಕಾಗ್ರತೆಗೆ ಭಂಗ ಉಂಟುಮಾಡಬಹುದು. ನಿಮ್ಮ ಜೀವನ ಸಂಗಾತಿ ಹಿಂದೆಂದೂ ಇಂದಿಗಿಂತ ಹೆಚ್ಚು ಅದ್ಭುತವಾಗಿರಲಿಲ್ಲ. ಅದೃಷ್ಟ ಸಂಖ್ಯೆ: 4

ಮಿಥುನ ರಾಶಿ ಭವಿಷ್ಯ : 8 May 2020
ನಿಮ್ಮ ಅಸೂಯೆ ವರ್ತನೆ ನಿಮ್ಮನ್ನು ದುಃಖಿಗಳಾಗಿಯೂ ಮತ್ತು ಖಿನ್ನರಾಗಿಯೂ ಮಾಡಬಹುದು. ಆದರೆ ಇದು ಒಂದು ಸ್ವಯಂಕೃತ ಗಾಯವಾಗಿರುವುದರಿಂದ ಇದರ ಬಗ್ಗೆ ಪ್ರಲಾಪಿಸುವ ಅಗತ್ಯವಿಲ್ಲ. ಇತರರ ಸಂತೋಷ ಮತ್ತು ಅತೃಪ್ತಿಯನ್ನು ಹಂಚಿಕೊಳ್ಳುವ ಮೂಲಕ ಇದನ್ನು ತೊಡೆದುಹಾಕಲು ಪಣತೊಡಿ. ದೊಡ್ಡ ಯೋಜನೆಗಳನ್ನು ಮತ್ತು ಕಲ್ಪನೆಗಳಿರುವ ಯಾರಾದರೂ ನಿಮ್ಮ ಗಮನ ಸೆಳೆಯುತ್ತಾರೆ – ಯಾವುದೇ ಹೂಡಿಕೆಗಳನ್ನು ಮಾಡುವ ಮೊದಲು ವ್ಯಕ್ತಿಯ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನು ದೃಢೀಕರಿಸಿ. ನಿಮ್ಮ ಸಂಗಾತಿಯ ಜೊತೆಗಿನ ಸಂಬಂಧ ನಿಮ್ಮ ಕಚೇರಿ ಕೆಲಸದ ಕಾರಣ ಹಾಳಾಗಬಹುದು. ನೀವು ಸ್ವಲ್ಪ ಪ್ರೀತಿ ಹಂಚಿಕೊಂಡಲ್ಲಿ ಇಂದು ನಿಮ್ಮ ಪ್ರಿಯತಮೆ ನಿಮ್ಮ ದೇವತೆಯಾಗುತ್ತಾಳೆ. ಅದೃಷ್ಟ ಸಂಖ್ಯೆ: 2

ಕರ್ಕ ರಾಶಿ ಭವಿಷ್ಯ : 8 May 2020
ಒತ್ತಡದ ಕೆಲಸದ ವೇಳಾಪಟ್ಟಿ ನಿಮ್ಮ ಸಹನೆಯನ್ನು ಕೆಣಕಬಹುದು. ಡೈರಿ ಉದ್ಯಮಕ್ಕೆ ಸೇರಿರುವವರು ಇಂದು ಆರ್ಥಿಕ ಲಾಭವನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ. ನೀವು ನಿಮ್ಮ ಆಕರ್ಷಣೆಯನ್ನು ಹಾಗೂ ನಿಮ್ಮ ಬುದ್ಧಿವಂತಿಕೆಯನ್ನು ಬಳಸಿದಲ್ಲಿ ಜನರು ನಿಮ್ಮ ಮತುಗಳನ್ನು ಕೇಳುತ್ತಾರೆ. ನಿಮ್ಮ ಪ್ರೀತಿಯ ಸಂಗಾತಿ ಇಂದು ಏನಾದರೂ ಸುಂದರವಾದದ್ದನ್ನು ಮಾಡಿ ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತಾರೆ. ನೀವು ಪ್ರಮುಖ ಭೂಮಿ ಒಪ್ಪಂದಗಳನ್ನು ಮಾಡಲು ಹಾಗೂ ಮನರಂಜನಾ ಯೋಜನೆಗಳಿಗಾಗಿ ಅನೇಕರನ್ನು ಸಂಘಟಿಸುವ ಒಂದು ಸ್ಥಾನದಲ್ಲಿರುತ್ತೀರಿ.ಅದೃಷ್ಟ ಸಂಖ್ಯೆ: 6

ಸಿಂಹ ರಾಶಿ ಭವಿಷ್ಯ : 8 May 2020
ಅನಿರೀಕ್ಷಿತ ಪ್ರಯಾಣದಿಂದ ಸುಸ್ತಾಗಬಹುದು ಹಾಗೂ ಇದು ನಿಮ್ಮನ್ನು ಕರಿಕಿರಿಗೊಳ್ಳುವಂತೆ ಮಾಡಬಹುದು. ಸ್ನಾಯುಗಳಿಗೆ ಆರಾಮ ನೀಡಲು ನಿಮ್ಮ ದೇಹವನ್ನು ತೈಲದಿಂದ ಮಸಾಜ್ ಮಾಡಿ ನಿಮ್ಮ ಸಹೋದರ-ಸಹೋದರಿಯರಲ್ಲಿ ಒಬ್ಬರು ಇಂದು ನಿಮ್ಮಿಂದ ಹಣವನ್ನು ಎರವಲು ಪಡೆಯಬಹುದು, ನೀವು ಅವರಿಗೆ ಹಣವನ್ನು ಸಾಲವಾಗಿ ಕೊಡುತ್ತೀರಿ ಆದರೆ ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ವೈಯಕ್ತಿಕ ರಂಗದಲ್ಲಿ ಮುಖ್ಯ ಬೆಳವಣಿಗೆಯಾಗುತ್ತಿದ್ದು ಇದು ನೀವು ಮತ್ತು ನಿಮ್ಮ ಇಡೀ ಕುಟುಂಬಕ್ಕೆ ಸಂತೋಷ ತರುತ್ತದೆ. ನೀವು ಪ್ರೀತಿಸುವ ವ್ಯಕ್ತಿಯ ಕಡೆಗಿನ ನಿಮ್ಮ ಒರಟು ವರ್ತನೆ ಸಂಬಂಧದಲ್ಲಿ ಬಹಳಷ್ಟು ಅಸಾಮರಸ್ಯವನ್ನು ತರಬಹುದು. ಅದೃಷ್ಟ ಸಂಖ್ಯೆ: 4

ಕನ್ಯಾ ರಾಶಿ ಭವಿಷ್ಯ : 8 May 2020
ನೀವು ವಿಶ್ರಾಂತಿ ಪಡೆಯಲು ಸಾಧ್ಯವಾಗುವ ಒಂದು ದಿನ. ನಿಮ್ಮ ಸ್ನಾಯುಗಳಿಗೆ ವಿಶ್ರಾಂತಿ ನೀಡಲು ತೈಲದಿಂದ ನಿಮ್ಮ ದೇಹಕ್ಕೆ ಮಸಾಜ್ ಮಾಡಿ. ಇನ್ನೂ ಸಂಬಳ ಪಡೆಯದವರು, ಇಂದು ಅವರು ಹಣಕ್ಕಾಗಿ ತುಂಬಾ ಚಿಂತೆ ಮಾಡಬಹುದು ಮತ್ತು ನಿಮ್ಮ ಸ್ನೇಹಿತರಿಂದ ಸಾಲವನ್ನು ಕೇಳಬಹುದು. ನೀವು ಕುಟುಂಬದ ಸದಸ್ಯರ ಜೊತೆ ಸ್ವಲ್ಪ ತೊಂದರೆ ಹೊಂದಿದ್ದರೂ ಇದು ನಿಮ್ಮ ಮನಶ್ಶಾಂತಿಯನ್ನು ಹಾಳು ಮಾಡಲು ಅವಕಾಶ ನೀಡಬೇಡಿ. ಇಂದು ಪ್ರಣಯದ ಭಾವನೆಗಳಿಗೆ ಪ್ರತಿಕ್ರಿಯೆ ದೊರಕುತ್ತದೆ. ನಿಮ್ಮ ವೃತ್ತಿ ಅವಕಾಶಗಳನ್ನು ಹೆಚ್ಚಿಸಲು ನಿಮ್ಮ ವೃತ್ತಿಪರ ಶಕ್ತಿಯನ್ನು ಬಳಸಿ. ಅದೃಷ್ಟ ಸಂಖ್ಯೆ: 3

ತುಲಾ ರಾಶಿ ಭವಿಷ್ಯ : 8 May 2020
ನಿಮ್ಮ ಕುಟುಂಬದ ನೀವು ಕಿರಿಕಿರಿ ಸಾಧ್ಯವಾಯಿತು ಇದು ನಿಮ್ಮಿಂದ ಸಾಕಷ್ಟು ನಿರೀಕ್ಷಿಸುತ್ತದೆ. ಬ್ಯಾಂಕ್ ವ್ಯವಹರಗಳಲ್ಲಿ ಕಾಳಜಿ ವಹಿಸಬೇಕು. ಕುಟುಂಬದ ಸದಸ್ಯರೊಂದಿಗೆ ಕೆಲವು ವಿಶ್ರಾಂತಿಯ ಕ್ಷಣಗಳನ್ನು ಕಳೆಯಿರಿ. ನಿಮ್ಮ ಅಚ್ಚುಮೆಚ್ಚಿನವರಿಂದ / ಪತಿ/ ಪತ್ನಿಯಿಂದ ಪಡೆಯುವ ದೂರವಾಣಿ ಕರೆ ನಿಮ್ಮ ದಿನವನ್ನು ಬೆಳಗಲಿದೆ. ಕೆಲಸದ ಸ್ಥಳದಲ್ಲಿ ನೀವು ಉತ್ತಮವಾಗಿ ಮಾಡಲು ಬಯಸಿದರೆ, ನಿಮ್ಮ ಕೆಲಸದಲ್ಲಿ ಆಧುನಿಕತೆಯನ್ನು ತರಲು ಪ್ರಯತ್ನಿಸಿ. ಇದರೊಂದಿಗೆ, ಹೊಸ ತಂತ್ರಜ್ಞಾನದೊಂದಿಗೆ ನವೀಕರಿಸಿಕೊಳ್ಳಿ. ಇಂದು ನಿಮ್ಮ ಬಿಡುವಿನ ವೇಳೆಯಲ್ಲಿ ನೀವು ಆಗಾಗ್ಗೆ ಯೋಚಿಸುವ ಕೆಲಸಗಳನ್ನು ಮಾಡುತ್ತೀರಿ. ಅದೃಷ್ಟ ಸಂಖ್ಯೆ: 5

ವೃಶ್ಚಿಕ ರಾಶಿ ಭವಿಷ್ಯ : 8 May 2020
ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ನಿಮ್ಮ ತಾಯಿಯ ಬದಿಯಿಂದ ಇಂದು ಹಣಕಾಸಿನ ಲಾಭವನ್ನು ಪಡೆಯುವ ಪೂರ್ಣ ಸಾಧ್ಯತೆ ಇದೆ.ನಿಮ್ಮ ಮಾಮ ಅಥವಾ ತಾತ ನಿಮಗೆ ಆರ್ಥಿಕ ಬೆಂಬಲ ಮಾಡಬಹುದು. ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರು ನಿಮ್ಮ ಹಣಕಾಸನ್ನು ನಿರ್ವಹಿಸಿದಲ್ಲಿ ನೀವು ಶೀಘ್ರದಲ್ಲೇ ನಿಮ್ಮ ಬಜೆಟ್ ಮೀರಬಹುದಾದ್ದರಿಂದ ಹಾಗೆ ಮಾಡಲು ಬಿಡಬೇಡಿ. ನೀವು ಸ್ವಲ್ಪ ಪ್ರೀತಿ ಹಂಚಿಕೊಂಡಲ್ಲಿ ಇಂದು ನಿಮ್ಮ ಪ್ರಿಯತಮೆ ನಿಮ್ಮ ದೇವತೆಯಾಗುತ್ತಾಳೆ. ಅದೃಷ್ಟ ಸಂಖ್ಯೆ: 7

ಧನು ರಾಶಿ ಭವಿಷ್ಯ : 8 May 2020
ನಿಮ್ಮ ಆರೋಗ್ಯ ಇಂದು ಪರಿಪೂರ್ಣವಾಗಿಲ್ಲದಿದ್ದರಿಂದ ನೀವು ನಿಮ್ಮ ಕೆಲಸದ ಮೇಲೆ ಗಮನ ಕೊಡುವುದು ಕಷ್ಟವಾಗಬಹುದು. ಇಂದು ನೀವು ಭೂಮಿ, ವಸತಿ, ಅಥವಾ ಸಾಂಸ್ಕೃತಿಕ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಗಮನ ನೀಡಬೇಕು. ನಿಮ್ಮ ಮಗುವಿನ ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆಮಂತ್ರಣ ಸಂತೋಷದ ಮೂಲವಾಗಬಹುದು. ಅವನು(ಳು) ನಿಮ್ಮ ನಿರೀಕ್ಷೆಗಳನ್ನು ಪೂರೈಸುವುದು ನಿಮ್ಮ ಕನಸನ್ನು ನನಸಾಗಿಸಬಹುದು. ಮನ್ಮಥನು ನಿಮ್ಮ ಜೀವನದಲ್ಲಿ ಪ್ರೀತಿಯ ಮಳೆ ಸುರಿಸುತ್ತ ನಿಮ್ಮೆಡೆಗೆ ನುಗ್ಗುತ್ತಿದ್ದಾನೆ. ನೀವು ಕೇವಲ ನಿಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದನ್ನು ತಿಳಿದಿದ್ದರೆ ಸಾಕು. ಅದೃಷ್ಟ ಸಂಖ್ಯೆ: 4

ಮಕರ ರಾಶಿ ಭವಿಷ್ಯ : 8 May 2020
ವಿಶ್ರಾಂತಿಯ ಸಲುವಾಗಿ ನಿಕಟ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ನೀವು ನಿಮ್ಮ ತಂತ್ರಗಳನ್ನು ಅಳವಡಿಸಿದಲ್ಲಿ ಇಂದು ಸ್ವಲ್ಪ ಹೆಚ್ಚುವರಿ ಹಣ ಸಂಪಾದಿಸುತ್ತೀರಿ. ಕಿರಿಯ ಸಹೋದರ ಅಥವಾ ಸಹೋದರಿ ನಿಮ್ಮ ಸಲಹೆ ಪಡೆಯಸಬಹುದು. ನಿಮ್ಮನ್ನು ದೀರ್ಘಕಾಲ ಹಿಡಿದಿಟ್ಟಿರುವ ಒಂದು ಏಕಾಂಗಿ ಹಂತ ನಿಮ್ಮ ಜೀವನ ಸಂಗಾತಿ ದೊರಕಿದ ತಕ್ಷಣ ಕೊನೆಗೊಳ್ಳುತ್ತದೆ. ನೌಕರರೊಡನೆ – ಸಹೋದ್ಯೋಗಿಗಳು ಮತ್ತು ಸಹಭಾಗಿಗಳೊಂದಿಗೆ ತೊಂದರೆಗಳ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಅದೃಷ್ಟ ಸಂಖ್ಯೆ: 4

ಕುಂಭ ರಾಶಿ ಭವಿಷ್ಯ: 8 May 2020
ಇತರರನ್ನು ಟೀಕಿಸುವ ನಿಮ್ಮ ಅಭ್ಯಾಸದಂದಾಗಿ ಇಂದು ನೀವೇ ಕೆಲವು ಟೀಕೆಗಳನ್ನು ಎದುರಿಸುವ ಸಾಧ್ಯತೆಗಳಿವೆ. ನಿಮ್ಮ ಹಾಸ್ಯಪ್ರಜ್ಞೆ ಜಾಗೃತವಾಗಿರಲಿ ಮತ್ತು ನಿಮ್ಮ ಸ್ವರಕ್ಷಣೆ ಕಡಿಮೆಯಿರಲಿ. ಹೀಗಿದ್ದಲ್ಲಿ ಟೀಕೆಯನ್ನು ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿ ಹೆಚ್ಚಿರುತ್ತದೆ. ಇಲ್ಲಿಯವರೆಗೆ ಅನಗತ್ಯವಾಗಿ ಹಣವನ್ನು ಖರ್ಚು ಮಾಡುತ್ತಿದ್ದವರು ಜೀವನದಲ್ಲಿ ಹಣದ ಪ್ರಾಮುಖ್ಯತೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಬಹುದು ಏಕೆಂದರೆ ಇಂದು ಇದ್ದಕ್ಕಿದ್ದಂತೆ ನಿಮಗೆ ಹಣದ ಅಗತ್ಯವಿರುತ್ತದೆ ಮತ್ತು ನಿಮಗೆ ಸಾಕಷ್ಟು ಹಣವಿರುವುದಿಲ್ಲ. ಈ ಅವಧಿ ನಿಮ್ಮ ಹೊಸ ಯೋಜನೆಗಳು ಹಾಗೂ ಆಲೋಚನೆಗಳ ಬಗ್ಗೆ ನಿಮ್ಮ ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಒಳ್ಳೆಯದಾಗಿದೆ. ಅದೃಷ್ಟ ಸಂಖ್ಯೆ: 2

ಮೀನ ರಾಶಿ ಭವಿಷ್ಯ : 8 May 2020
ಮಾನಸಿಕ ಸ್ಪಷ್ಟತೆಯನ್ನು ನಿರ್ವಹಿಸಲು ಗೊಂದಲ ಮತ್ತು ಹತಾಶೆಯನ್ನು ತಪ್ಪಿಸಿ ದೀರ್ಘಕಾಲದ ಲಾಭಗಳಿಗೆ ಸ್ಟಾಕ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದನ್ನು ಶಿಫಾರಸು ಮಾಡಲಾಗಿದೆ. ನಿಮ್ಮ ವಂಶಸ್ಥರಿಗೆ ಏನಾದರೂ ವಿಶೇಷವಾದದ್ದನ್ನು ಯೋಜಿಸಿ. ನಿಮಗೆ ಕಾರ್ಯಗತಗೊಳಿಸಲು / ಸಾಧಿಸಲು ಸಾಧ್ಯವಾಗುವ ಹಾಗೆ ಏನಾದರೂ ವಾಸ್ತವವಾದದ್ದನ್ನು ಯೋಜಿಸಿ. ನಿಮ್ಮ ಮುಂದಿನ ಪೀಳಿಗೆ ಈ ಕೊಡುಗೆಗಾಗಿ ನಿಮ್ಮನ್ನು ಯಾವತ್ತೂ ನೆನಪಿಡುತ್ತದೆ. ಇಂದು, ನೀವು ನಿಮ್ಮ ಪ್ರಿಯತಮೆ ನಿಮ್ಮನ್ನು ಎಷ್ಟು ಪ್ರೀತಿಸುತ್ತಾರೆಂದು ತಿಳಿದುಕೊಳ್ಳುತ್ತೀರಿ. ನಿಮ್ಮ ಗುರಿಗಳನ್ನು ಬೆನ್ನತ್ತಲು ಒಳ್ಳೆಯ ದಿನ. ಅವುಗಳನ್ನು ಮುಂಚಿತವಾಗಿ ಸಾಧಿಸಲು ಪಟ್ಟುಬಿಡದೆ ಕೆಲಸ ಮಾಡಲು ನಿಮ್ಮ ದೇಹವನ್ನು ರಿಚಾರ್ಜ್ ಮಾಡಿ. ಈ ವಿಷಯದಲ್ಲಿ ನೀವು ನಿಮ್ಮ ಸ್ನೇಹಿತರ ಸಹಾಯ ತೆಗೆದುಕೊಳ್ಳಬಹುದು. ಅದೃಷ್ಟ ಸಂಖ್ಯೆ: 8

ರೈಲು ಸೇವೆ ಪುನರಾರಂಭ ಸಿಪಿಐ(ಎಂ) ಸ್ವಾಗತ

Publicstory. in


Tumkuru: ಅಂತರ ರಾಜ್ಯ ವಲಸೆ ಕಾಮಿ೯ಕರಿಗೆ ರೈಲು ಸೇವೆ ಪುನರಾಂಭಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಸ್ವಾಗತಿಸಿವೆ.

ಇದು ಕಾಮಿ೯ಕರ ಹೋರಾಟಕ್ಕೆ ಸಂದ ಜಯವಾಗಿದೆ. ಹಲವು ಕಾಮಿ೯ಕಪರ ಮನಸ್ಸುಗಳ ಒತ್ತಾಸೆಯಾಗಿದ್ದ ವಲಸೆ ಕಾಮಿ೯ಕರಿಗೆ ರೈಲ ಸೇವೆ ಪ್ರಾರಂಭಿಸ ಬೇಕೆಂಬ ಒಕ್ಕೊರಲ ಕೂಗಿಗೆ ಸಕಾ೯ರ ಗೌರವ ನೀಡಿರುವುದು ಉತ್ತಮ ಬೆಳೆವಣಿಗೆಯಾಗಿದೆ.

ಸಿಪಿಐ(ಎಂ) ಸಹಾ ರೈಲು ಸೇವೆ ರದ್ದು ಮಾಡಿ ಕಾಮಿ೯ಕರನ್ನು ಒತ್ತಾಯ ಪೂರಕವಾಗಿ ಅವರ ಕೆಲಸದ ಸ್ಥಳಗಳಿಗೆ ಬಸ್ಗಳಲ್ಲಿ ತುಂಬಿ ಹಿಂತಿರುಗಿಸಿದ ಕ್ರಮ, ಅವರಿಗೆ ಅಥ೯ವಾಗದ ಭಾಷೆಯ ಸೇವಾ ಸಿಂಧು ಮೂಲಕ ಅಜಿ೯ ಕಡ್ಡಾಯ, ಆನಂತರ ಅದರ ಸವ೯ರ್ ಡೌನ್ ಮಾಡಿದ್ದನ್ನು ಖಂಡಿಸಿತ್ತು. ಕೂಡಲೆ ತವರಿಗೆ ಹೋಗ ಬಯಸುವ ಕಾಮಿ೯ಕರನ್ನು ಅವರ ಊರುಗಳಿಗೆ ಕಳುಹಿಸಲು ಅಗತ್ಯ ರೈಲ್ವೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿತ್ತು.

ಅದೆ ರೀತಿ ಹಲವು ಆಂಗ್ಲ ಮಾಧ್ಯಮ ದಿನ ಪತ್ರಿಕೆಗಳು ಮತ್ತು ಸುದ್ದಿ ಚಾನಲ್ ಗಳು, ಕೇಂದ್ರ ಕಾಮಿ೯ಕ ಸಂಘಟನೆಗಳ ಜಂಟಿ ಸಮಿತಿ ಎಲ್ಲರು ಕಾಮಿ೯ಕರ ಪರ ನಿಂತ ಫಲವಾಗಿ ರಾಜ್ಯ ಸಕಾ೯ರವು ಕೊನೆಗೂ ತನ್ನ ತಪ್ಪನ್ನು ಅರಿತು ರೈಲು ಸೇವೆ ಪುನರಾರಂಭ ಮಾಡಿದೆ.

ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸಕಾ೯ರವು ನಿರಂತರವಾಗಿ ದೃಢವಾಗಿ ಜನಪರವಾಗಿ ಕ್ರಮವಹಿಸದೆ ಎಡವುತ್ತಲೆ ಬಂದಿದೆ. ಅದಕ್ಕೆ ರಾಜ್ಯ ಸಕಾ೯ರದಲ್ಲಿ ಇರುವ ಎರಡು ಅಧಿಕಾರ ಕೇಂದ್ರಗಳು ಕಾರಣವಾಗಿವೆ. ಒಂದೆಡೆ ಅಧಿಕೃತ ಸಿಎಂ ಯಡಿಯೂರಪ್ಪ ಇನ್ನೊಂದಡೆ ಸೂಪರ್ ಸಿಎಂ ಸಂತೋಷ್ ನುಡುವಿನ ಬಣ ರಾಜಕೀಯಕ್ಕೆ ರಾಜ್ಯದ ಜನತೆ, ಲಾಕ್ಡೌನ್ ಸಂತ್ರಸ್ತರು ಸೂಕ್ತ ಸಮಯಕ್ಕೆ ಸರಿಯಾದ ಪರಿಹಾರ ವಿಲ್ಲದೆ ಬಲಿ ಪಶು ಆಗುತ್ತಿದ್ದಾರೆ ಎಂದು ಸಿಪಿಐ(ಎಂ) ಟೀಕಿಸಿದೆ.

ಮುಖ್ಯ ಮಂತ್ರಿ ಯಡಿಯೂರಪ್ಪನವರು ಕೊನೆಗೂ ಕೆಲವು ಅಸಂಘಟಿತರಿಗೆ ಪರಿಹಾರ ಪ್ಯಾಕೆಜ್ ಪ್ರಕಟಿಸಿರುವುದು ಅಸಮಪ೯ಕವಾಗಿದ್ದರು ಸಹಾ ಸ್ವಗತಾಹ೯ ಕ್ರಮವಾಗಿದೆ ಎಂದಿರುವ ಸಿಪಿಐ(ಎಂ), ಉಳಿದ ಅಸಂಘಟಿತ ಕಾಮಿ೯ಕರಿರಾದ ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸಗಾರರು, ಧಜಿ೯ಗಳು, ಮ್ಯಕಾನಿಕ್ಗಳು, ಹಮಾಲಿಗಳು ಮುಂತಾದವರಿಗೂ ಪರಿಹಾರ ನೀಡ ಬೇಕು.

ಸಂಘಟಿತ ಕಾಮಿ೯ಕರಿಗೆ ಕೆಲಸದ ಅವಧಿ ಹೆಚ್ಚಳ ಪ್ರಸ್ತಾವನೆ ಕೈಬಿಡಬೇಕು, ಅವರಿಗೆ ವೇತನ ಸಿಗುವಂತೆ, ಯಾರು ಕೆಲಸದಿಂದ ವಂಚಿತರಾಗದಂತೆ ಅಗತ್ಯ ಕ್ರಮಗಳನ್ನು ಅನುಸರಿಸಿ ಕಾಮಿ೯ಕರ ಹಿತ ಕಾಯಬೇಕಾಗಿ ರಾಜ್ಯ ಸಕಾ೯ರವನ್ನು ಸಿಪಿಐ(ಎಂ) ಒತ್ತಾಯಿಸಿದೆ.

ಕಾಮಿ೯ಕ ಸಂಘಟನೆಗಳ ಪ್ರತಿನಿಧಿಗಳ ಜೊತೆ ಚರ್ಚಿಸಿ ಸುಸ್ಥಿರ ಪರಿಹಾರ ಕಾಯ೯ಕ್ಕೆ ಸಕಾ೯ರ ಮುಂದಾಗ ಬೇಕೆಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾಯ೯ದಶಿ೯ಕೆ. ಎನ್.ಉಮೇಶ್ ಮತ್ತು ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾಯ೯ದಶಿ೯ಎನ್. ಪ್ರತಾಪ್ ಸಿಂಹ ಹೇಳಿದ್ದಾರೆ.

ಕೊರೊನಾ ವಾರಿಯರ್ಸ್ ಗೆ ಹೂಮಳೆ ಸುರಿಸಿದ ಮಾಜಿ ಶಾಸಕರು

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡ ಅವರು ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಪೊಲೀಸರು, ನರ್ಸ್ ಗಳು, ಆಶಾ ಕಾರ್ಯಕರ್ತೆಯರಿಗೆ ಹೂವಿನ ಮಳೆ ಸುರಿಯುವ ಮೂಲಕ ಗೌರವಿಸಿದರು.

ಸಚಿವ ಗೋವಿಂದ ಕಾರಜೋಳ ಸಹ ಇದಕ್ಕೆ ಕೈ ಜೋಡಿಸಿದರು. ಲಾಕ್ ಡೌನ್ ಆರಂಭವಾದಾಗಿನಿಂದ ಕ್ಷೇತ್ರದಲ್ಲಿ ಪಡಿತರ ಚೀಟಿ ಇಲ್ಲದವರಿಗೆ, ಕಡು ಬಡವರಿಗೆ, ನಿರ್ಗತಿಕರಿಗೆ, ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮಾಡುವುದರ ಜೊತೆಗೆ ಕೊರೊನಾ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಜನರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

https://youtu.be/sUV4xlXjJwU

ಜೀವನದ ಹಂಗು ತೊರೆದು ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್ಸ್ ಗೆ ಗೌರವ ಸಲ್ಲಿಸಬೇಕಾಗಿದೆ. ಅವರ ಮಾಡುತ್ತಿರುವ ಕೆಲಸ ಬೇರೆಯವರು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಕೃಷಿಕರು ಬೆಳೆದಿರುವ ಬೆಳೆಯನ್ನು ಮಾರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರಿಂದ ಖರೀದಿಸಿ ಬಡವರಿಗೆ ನೀಡಲಾಗುತ್ತಿದೆ ಎಂದು ಬಿ.ಸುರೇಶ ಗೌಡ ಹೇಳಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಸುರೇಶ ಗೌಡ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸುರೇಶಗೌಡರಂಥ ಜನಾನುರಾಗಿಯನ್ನು ನಾನು ಬೇರೇ ಎಲ್ಲೂ ನೋಡಿಲ್ಲ. ಕ್ಷೇತ್ರಕ್ಕಾಗಿ ಹಗಲಿರುಳು ಈ ಸಂಕಷ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ತುಮಕೂರು ಗ್ರಾಮಾಂತರದ ಹೆತ್ತೇನಹಳ್ಳಿ ಹಾಗೂ ಹೆಗ್ಗೆರೆ ಗ್ರಾಮಗಳಲ್ಲಿ ಉಚಿತ ಮಾಸ್ಕ್ ಹಾಗೂ ಕಿಟ್ ನ್ನು ನೀಡುವ ಕಾರ್ಯಕ್ರಮದ ಉದ್ಘಾಟನೆಯಲ್ಲಿ ದೀಪಬೆಳಗುವ ಬದಲು ಸುಮಾರು 48 ದಿನಗಳಿಂದ ತಮ್ಮ ಕುಟುಂಬದ ರಕ್ಷಣೆಯನ್ನು ಬದಿಗೊತ್ತಿ, ದೇಶದ, ಸಮಾಜದ ಹಿತದೃಷ್ಟಿಯಿಂದ ಮಹಾಮಾರಿ ಕೊರೋನ ವೈರಸ್ ವಿರುದ್ಧ ಹೋರಾಡುತ್ತಿರುವ ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ವೈದ್ಯರುಗಳಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಉಪಮುಖ್ಯಮಂತ್ರಿ ಲೋಕೋಪಯೋಗಿ ಸಚಿವರಾದ ಗೋವಿಂದ ಎಂ ಕಾರಜೋಳ, ಮಾಜಿ ಸಚಿವ ಎಸ್ ಶಿವಣ್ಣ, ಪುಷ್ಪ ಗಳಿಂದ ಹೂ ಮಳೆಗರೆದರು.

ಸುರೇಶ್ ಗೌಡ ರವರು, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಾದ ಶಾರದಾ ನರಸಿಂಹಮೂರ್ತಿ, ಜಿಲ್ಲಾ ಪಂಚಾಯತಿ ಸದಸ್ಯರಾದ ಶಿವಕುಮಾರ್, ಅನಿತಾ ಸಿದ್ದೇಗೌಡರು, ವೈ ಹೆಚ್ ಹುಚ್ಚಯ್ಯ ನವರು., ನರಸಿಂಹಮೂರ್ತಿ, ರಾಜೇಗೌಡರು, ಡಾಕ್ಟರ್ ನಾಗರಾಜುರವರು, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀ ಗಂಗಾಂಜನೆಯ, ಉಪಾಧ್ಯಕ್ಷರಾದ ಶ್ರೀ ಕೆ. ಏನ್. ಶಾಂತಕುಮಾರ್, ಹೆಗ್ಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ನಾಗರಾಜು, ತಾ ಪಂ ಸದಸ್ಯರುಗಳಾದ , ಡಿ, ಕೆ ಶಿವಕುಮಾರ್, ಕಂಠಪ್ಪ, ವಿಜಯಕುಮಾರ್, ಕವಿತ ರಮೇಶ್, ತಾಲೂಕು ಘಟಕದ ಅಧ್ಯಕ್ಷರಾದ, ಶಂಕರಣ್ಣ , ಗ್ರಾಮ ಪಂಚಾಯತಿ ಸದಸ್ಯರುಗಳಾದ ಭೋಜಣ್ಣ,ದೇವರಾಜು, ರಾಜಣ್ಣ ಮುಖಂಡರುಗಳಾದ, ನಾಗರತ್ನಮ್ಮ ಯುವ ಮೋರ್ಚಾದ ಅಧ್ಯಕ್ಷರಾದ ಗಿರೀಶ್, ಉಪಾಧ್ಯಕ್ಷರಾದ ಮದನ್, ಸ್ವಾಮಿ, ರಾಘವೇಂದ್ರ, ಇನ್ನೂ ಮುಂತಾದವರು ಉಪಸ್ಥಿತರಿದ್ದರು

ಮನುಕುಲದ ಮಹಾಬೆಳಕಾದ ಬುದ್ದ: ದೊರೈರಾಜ್

Publicstory. in


ತುಮಕೂರು: ಬುದ್ದ ಸಮ್ಮೆಲ್ಲರಂತೆ ಸಾಮಾನ್ಯ ಮನುಷ್ಯ. ಜನರೊಂದಿಗೆ ಬೆರೆತು ಮನುಕುಲದ ಮಹಾಬೆಳಕಾದ. ಆ ಕರುಣೆಯ ಬೆಳಕು ಇಡೀ ಜೀವಜಗತ್ತು ಉಳಿಸಬಲ್ಲದು ಎಂದು ಜನಪರ ಚಿಂತಕ ಕೆ.ದೊರೈರಾಜ್ ಅಭಿಪ್ರಾಯಪಟ್ಟರು.

ತುಮಕೂರಿನ ಜನಚಳವಳಿ ಕೇಂದ್ರದಲ್ಲಿ ಸಿಐಟಿಯ ಮತ್ತು ಸಮುದಾಯ ಕರ್ನಾಟಕದಿ ಹಮ್ಮಿಕೊಂಡಿದ್ದ ಬುದ್ದಪೂರ್ಣಿಮೆ ಮತ್ತು ರವೀಂದ್ರನಾಥ ಟ್ಯಾಗೋರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದು ಸತ್ಯ, ಯಾವುದು ಅಸತ್ಯ ಎಂಬ ಬಗ್ಗೆ ಸ್ಪಷ್ಟತೆ ಪಡೆದು ಆ ದಿಕ್ಕಿನಲ್ಲಿ ನಡೆಯಬೇಕಾಗಿದೆ. ವರ್ತಮಾನ ದಲ್ಲಿ ಸುಳ್ಳು ವಿಜೃಂಭಿಸುತ್ತಿದೆ.ಸುಳ್ಳೇ ನಮ್ಮನ್ನು ಆಳುತ್ತಿದೆ. ಸುಳ್ಳು ಮನುಷ್ಯನ ಮೆದುಳು ಸೇರಿಕೊಂಡು ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ ಎಂದರು.

ಬಹುಸಂಸ್ಕೃತಿ ಆಛಾರ ವಿಚಾರಗಳ ನಡುವೆ ನಂಬಿಕೆಗಳ ಸಂಘರ್ಷ ಹೆಚ್ಚು ಸುಳ್ಳಿಗೆ ಕಾರಣವಾಗಿದೆ. ಇದು ಸಾಮಾಜಿಕ ಸ್ಥಿತಿಯೂ ಆಗಿದೆ. ಪ್ರಭುತ್ವವೂ ಆಗಿ ನಮ್ಮನ್ನಾಳುತ್ತಿರುವುದು ದುರಂತ.ಗಳಿಗೆ ಕಾರಣವಾಗಿದೆ. ಬುದ್ದ ವೈಚಾರಿಕವಾಗಿ, ವೈಜ್ಞಾನಿಕವಾಗಿ ಮಾತನಾಡಿದ ಮತ್ತು ಬದುಕಿದ. ಆದರೆ ಬುದ್ದನ ಹುಟ್ಟಿನ ಕುರಿತು ಹೆಚ್ಚು ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬುದ್ದ ಮೈತ್ರಿ, ಕರುಣೆ, ಪ್ರೀತಿಯ ಕುರಿತು ಹೇಳಿದ. ಎಲ್ಲಾ ಜೀವರಾಶಿಗಳು ಪ್ರೀತಿಸಬೇಕು. ಒಟ್ಟಿಗೆ ಬಾಳಬೇಕು ಬದುಕಬೇಕು. ಕರುಣೆ ಹೆಚ್ಚಾದರೆ ಮನುಷ್ಯನ ಸಹಜ ತಪ್ಪುಗಳನ್ನ ಮನ್ನಿಸಲು ಸಾಧ್ಯವಾಗುತ್ತದೆ. ಜೀವವನ್ನು ಉಳಿಸುವ ಶಕ್ತಿ ಬರುತ್ತದೆ ಎಂದರು.

ಪರಿಸರವಾದಿ ಸಿ.ಯತಿರಾಜು ಮಾತನಾಡಿ, ರವೀಂದ್ರನಾಥ ಟ್ಯಾಗೋರ್ ನೈಸರ್ಗಿಕ ಶಿಕ್ಷಣಕ್ಕೆ ಒತ್ತು ನೀಡಿದರು. ಇಂದಿನ ವ್ಯಾಪಾರದ ಜಗತ್ತಿನಲ್ಲಿ ಶಿಕ್ಷಣವೂ ವ್ಯಾಪಾರವಾಗಿದೆ. ಮನಸು-ಮನಸುಗಳ ನಡುವೆ ಬಾಂಧವ್ಯ ಬೆಸೆಯಬೇಕು. ಎಲ್ಲರೊಡನೆ ಪ್ರೀತಿ ಇರಬೇಕು ಎಂಬುದನ್ನು ರವೀಂದ್ರನಾಥ ಟ್ಯಾಗೋರ್ ಸಾರಿದರು ಎಂದು ಹೇಳಿದರು.

ಇಂದು ವಲಸೆ ಕಾರ್ಮಿಕರು, ಆರ್ಥಿಕತೆ, ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಆದರೆ ಮಾಧ್ಯಮಗಳಲ್ಲಿ ಬೇರೆಯದೇ ಚರ್ಚೆ ನಡೆಯುತ್ತಿದೆ. ಸರ್ಕಾರಗಳು ಕೂಡ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮುದಾಯ ಜಿಲ್ಲಾ ಕಾರ್ಯದರ್ಶಿ ಕೆ.ಈ.ಸಿದ್ದಯ್ಯ ಮಾತನಾಡಿ ಸಾವಿನ ವ್ಯಾಪಾರಿಗಳ ಸಾಮ್ರಾಜ್ಯದಲ್ಲಿ ಬದುಕುತ್ತಿರುವ ನಮಗೆ ಬುದ್ದನ ಪ್ರೀತಿ, ಕರುಣೆ ಮತ್ತು ಮೈತ್ರಿ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಬಿ.ಉಮೇಶ್, ಸಿಐಟಿಯು ತಾಲೂಕು ಅಧ್ಯಕ್ಷ ಷಣ್ಮುಖಪ್ಪ, ಕಟ್ಟಡ ಕಾರ್ಮಿಕ ಮುಖಂಡ ಶಂಕರಪ್ಪ, ಬೀದಿಬದಿ ವ್ಯಾಪಾರಿಗಳ ಮುಖಂಡ ವಸೀಂ, ಪೌರ ಕಾರ್ಮಿಕ ಕೆಂಪಣ್ಣ ಉಪಸ್ಥಿತರಿದ್ದರು.

ಮನ ಮನದಲ್ಲಿ ಬೆಳಗಿದ ಬುದ್ಧ

ಮಕ್ಕಳಿಂದ ಮನೆಯಲ್ಲಿ ಬುದ್ದ ಪೂಜೆ.

Publicstory. in


ತುಮಕೂರು: ಜಿಲ್ಲೆಯಲ್ಲಿ ಮನ ಮನದಲ್ಲೂ ಬುದ್ಧ ಬೆಳಗಿದ. ಬುದ್ಧಪೂರ್ಣಿಮೆ ಅಂಗವಾಗಿ ಮನೆ ಮನೆಗಳಲ್ಲಿ ಬುದ್ಧನಿಗೆ ಪೂಜೆ ಸಲ್ಲಿಸಲಾಯಿತು. ಕೆಲವು ಮನೆಗಳಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೂ ಹೂಮಾಲೆ ಹಾಕಿ ಗೌರವಿಸಿದರು.

ಕರ್ನಾಟಕ ಬೌದ್ಧ ಸಮಾಜದ ತುಮಕೂರು ಘಟಕವು ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಮೇಶ್ ಬಿ.ಅವರ ನೇತೃತ್ವದಲ್ಲಿ “ಬುದ್ಧೋತ್ಥಾನ -ವೈಶಾಖ ಹುಣ್ಣುಮೆ ಕಾರ್ಯಕ್ರಮ “ವನ್ನು zoom app ಬಳಸಿ online ಮೂಲಕ ಆಚರಿಸಿತು.


ಬೆಂಗಳೂರು ಕೇಂದ್ರ ವಿ.ವಿ.ಕುಲಸಚಿವ ಪ್ರೊ,ರಮೇಶ್ ಅವರು, ಸಕಲ ಜೀವ ರಾಶಿಗೂ ಒಳಿತು ಬಯಸಿದ ಬುದ್ದ ನಿಸರ್ಗ ಮತ್ತು ಮಾನವೀಯತೆ ಮೌಲ್ಯ ಪುನರ್ ಸ್ಥಾಪನೆ ಮಾಡಿದ ಮಾಹಾದಾರ್ಶನಿಕ ಎಂದು ಬಣ್ಣಿಸಿದರು.


ಬುದ್ದವಂದನೆ ಮಾಡುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆ ಮಾಡಿದ ಚಾಮರಾಜನಗರ ನಳಂದ ವಿಶ್ವವಿದ್ಯಾಲಯದ ಪೂಜ್ಯ ಭೋದಿದತ್ತ ಬಂತೇಜೀಯವರು,ಜಗತ್ತಿನ ಬಹುತೇಕ ರಾಷ್ಟ್ರಗಳು ಇಂದು ಬುದ್ದಪೂರ್ಣಿಮೆಯನ್ನು ಆಚರಿಸುತ್ತಿವೆ. ಭಾರತದಲ್ಲಿ ಹುಟ್ಟಿದ ಈ ಮಹಾತ್ಮನ ಚಿಂತನೆಗಳು ವಿಶ್ವಕ್ಕೆ ಸರ್ವ ಕಾಲಕ್ಕೂ ಅಗತ್ಯವಾಗಿವೆ. ಹಾಗಾಗಿ ಪ್ರತಿ ಭಾರತೀಯನೂ ಹೆಮ್ಮೆಯಿಂದ ಬದುಕುವ ತತ್ವಜ್ಞಾನಿಯಾಗುವ ಆರ್ಹತೆ ದಕ್ಕುವುದು ಬುದ್ದರ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಎಂದು ಹೇಳಿದರು.

ನಾಲ್ಕು ಶ್ರೇಷ್ಠ ಸತ್ಯಗಳನ್ನು ಮತ್ತು ಅಷ್ಟಾಂಗ ಮಾರ್ಗ ನೈಜ ಬದುಕಿಗೆ ಬೇಕಾಗುವ ಅಂಶಗಳು ಸ್ವತಃ ಅನುಭವಿಸಿ ಹೇಳಿದ ವಿಚಾರಗಳು ವೈಚಾರಿಕತೆ ಮತ್ತು ಆಧ್ಯಾತ್ಮಿಕತೆಯ ನೆಲೆಯೊಳಗೆ ,ದ್ಯಾನ ಮತ್ತು ಅನಾಪಾನಸತಿ ಪಾಲನೆಯ ಮೂಲಕ ಅರ್ಥ ಮಾಡಿಕೊಂಡು ಜೀವನ ಸಾರ್ಥಕತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು .

ಕಾರ್ಯಕ್ರಮ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ವಿಶ್ರಾಂತ ಕುಲಪತಿಗಳಾದ ಪ್ರೊ .ಹಿ.ಚಿ.ಬೋರಲಿಂಗಯ್ಯ ರವರು.ಬುದ್ದ ಸಿದ್ಧಾರ್ಥನಾಗಿದ್ದಾಗ ಸಮಾಜದ ಉನ್ನತಿಗಾಗಿ ಚಿಂತಿಸಿ ತೆಗೆದುಕೊಂಡ ವಿವೇಕದ ನಿರ್ದಾರ ಇಂದು ಪ್ರಬುದ್ಧ ಚಿಂತನೆಗಳನ್ನು ಜಗತ್ತು ಒಪ್ಪಿಕೊಳ್ಳಲು ಸಾದ್ಯವಾಯಿತು ಎಂದರು.

ಬಾಬಾಸಾಹೇಬ್ ಬುದ್ದ ದಮ್ಮ ಸ್ವೀಕರಿಸಿ ಇತಿಹಾಸದ ಕಾಲ ಗರ್ಭದಲ್ಲಿ ಹುದುಗಿದ್ದ ನೈಜ ಸತ್ಯಗಳನ್ನು ಹೊರತಂದರು. ಸುಮಾರು 2564 ವರ್ಷಗಳ ಇತಿಹಾಸದ ಬುದ್ದರ ತತ್ವಗಳು ಇಂದಿಗೆ ಜೀವಂತವಾಗಿ ಎಲ್ಲಾ ಕಡೆ ಹಬ್ಬುತ್ತಿರುವುದು ಇಂದಿನ ಸಾಮಾಜಿಕ ಸುಧಾರಣೆಗೆ ಅಗತ್ಯವಾದ ಸಿದ್ದೌಷದ ಮಾಲ್ಯಗಳ ವೃದ್ಧಿಗೆ ಆತನ ಸಂದೇಶಗಳು ಅರ್ಥ ಪೂರ್ಣವಾದವೂ ಎಂದು ತಿಳಿಸಿದರು.

ಕುವೆಂಪು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪ್ರೊ.ಪ್ರಶಾಂತ್ ನಾಯಕ್ ಮಾತನಾಡಿ ಬುದ್ದ ನಮ್ಮ ನೆಲಕ್ಕೆ ಬಿತ್ತಿದ ವೈಚಾರಿಕತೆಯ ಜೀವನ ಮೌಲ್ಯಗಳ ಬೀಜ ಹನ್ನೆರಡನೆಯ ಶತಮಾನದ ಬಸವಣ್ಣ ಸಾರಿದ ತತ್ವಗಳ ಸಾರವೇ ಆಗಿದೆ ಎಂದು ಅಭಿಪ್ರಾಯಪಟ್ಟರು.

ಬುದ್ದನ ಪಂಚಶೀಲ ತತ್ವಗಳು ಕಳಬೇಡ ಕೊಳಬೇಡ….ಎಂಬ ಬಸವಣ್ಣನ ವಚನಗಳಿಗೆ ಪೂರಕವಾಗಿರುದು ,ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಸಂವಿಧಾನದ ಆಶಯಗಳು ಎಲ್ಲವೂ ಇಂದಿಗೆ ಸರ್ವ ಶ್ರೇಷ್ಠ ಜ್ಞಾನದ ಕುರುಹುಗಳಾಗಿವೆ ಎಂದು ತಿಳಿಸಿದರು.

ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಮೋಹನ್ ಚಂದ್ರ ಗುತ್ತಿ ಮಾತನಾಡಿ ಬುದ್ದ ಮತ್ತು ಗಾಂಧೀಜೀ ಇಂದಿನ ಸರ್ವಾಧಿಕಾರಿ ಆಡಳಿತದ ಸಮಾಜಕ್ಕೆ ಮಾದರಿಯಾಗಬೇಕು.ಅಹಿಂಸೆ ಮತ್ತು ಶಾಂತಿ ಜಗತ್ತಿಗೆ ಬೇಕಾದ ಮೊದಲ ಅದ್ಯತೆಯ ಅಸ್ತ್ರಗಳು ಇವು ನೀಡಿದ ಭಾರತೀಯ ಕೋರಿದರು ನೆಲದಲ್ಲಿ ಬುದ್ಧ ಚಿಂತನೆಗಳನ್ನು ಮತ್ತಷ್ಟು ಹೊರಹೊಮ್ಮಲಿ ಎಂದು ಅಶಿಸಿದರು.

ತುಮಕೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಬಸವರಾಜ್ ಜಿ.ಮಾತನಾಡಿ ರಾಜ್ಯಶಾಸ್ತ್ರ ಕ್ಕೆ ಬೇಕಾದ ಚಿಂತನೆಗಳು ಬುದ್ಧ ನೀಡಿದ್ದಾನೆ.ನಾವೂ ತಾರ್ಕಿಕವಾಗಿ ಚಿಂತಿಸಿ ಅನೇಕ ವಿಷಯಗಳನ್ನು ಕಲಿಯುವಂತೆ ಬುದ್ದತ್ವ ಮಾಡಿದೆ ಎಂದರು .

ಶ್ರೀದರ್ ಆಘಲಾಯ , ಡಾ.ರಾಜನಾಯ್ಕ, ಬಳ್ಳಾರಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಕುಮಾರ್ ಸಚಿನ್.ಬಿ.ಎಸ್ , ಮೈಸೂರಿನ ಬಹುಜನ ಕವಿ ಹನಸೋಗೆ ಸೋಮಶೇಖರ್ ಶುಭಾಶಯ ಕೋರಿದರು.

ಡಾ.ರಾಜಶೇಖರ್ ಸಿ ಪ್ರಾರ್ಥನೆ ಮಾಡಿದರು.ಡಾ ನಿಸರ್ಗ ಪ್ರಿಯಾರವರು ವಂದಿಸಿದರು .ಲಕ್ಷ್ಮೀ ರಂಗಯ್ಯ ಕೆ.ಎನ್ ಕಾರ್ಯಕ್ರಮ ನಿರೂಪಿಸಿದರು ಡಾ.ಸರವಣ ಕೆ. online ನಿರ್ವಹಣೆ ಮಾಡಿದರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಕವಿ ಪ್ರಾಧ್ಯಾಪಕ ವಿದ್ಯಾರ್ಥಿಗಳು ಬಾಗವಹಿಸಿದ್ದರು.

ತುಮಕೂರಿನಲ್ಲೂ ಮದ್ಯ ಮಾರಾಟಕ್ಕೆ ಅವಕಾಶ

ತುಮಕೂರು: ನಗರದ ಕಂಟೈನ್ಮೆಂಟ್ ವಲಯ ಹೊರತುಪಡಿಸಿ ತುಮಕೂರು ನಗರದಲ್ಲಿ ವೈನ್ ಶಾಪ್ ಸೇರಿದಂತೆ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಷರತ್ತಿಗೊಳಪಟ್ಟು ಅನುಮತಿ ನೀಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್-19 ವೈರಾಣು ನಿಯಂತ್ರಣ ಮತ್ತು ಸಡಿಲಿಕೆ ಕುರಿತು ಕರೆದಿದ್ದ ಜಿಲ್ಲಾ ಮಟ್ಟದಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು. ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಜನಜಂಗುಳಿ ನಿಯಂತ್ರಣದೊಂದಿಗೆ ಅಂಗಡಿಗಳ ಮಾಲೀಕರುಗಳು ಮತ್ತು ವರ್ತಕರುಗಳು ತಮ್ಮ ಸ್ವಯಂ ಜವಾಬ್ದಾರಿಯಿಂದ ಅಂಗಡಿಗಳನ್ನು ತೆರೆಯಲು ಸೂಚನೆ ನೀಡಿದರು.

ತುಮಕೂರು ನಗರದಲ್ಲಿ ವೈನ್‍ಶಾಪ್‍ಗಳು ಹಾಗೂ ಎಂಎಸ್‍ಐಎಲ್ ಅಂಗಡಿಗಳು ಬೆಳಿಗ್ಗೆ 9 ರಿಂದ ಸಂಜೆ 7ರವರೆಗೆ ತೆರೆಯಲು ಅನುಮತಿ ನೀಡಿದೆ. ಇಲ್ಲಿಯೂ ಸಾಮಾಜಿಕ ಅಂತರ, ಮಾಸ್ಕ್ ಧರಿಸಬೇಕು ಜೊತೆಗೆ
ಮಾಲಿಕರು ಸಿಸಿ ಟಿವಿ ಅಳವಡಿಸಬೇಕು. ಈ ಬಗ್ಗೆ ಕ್ರಮ ವಹಿಸುವಂತೆ ಜಿಲ್ಲಾ ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಅಂಗಡಿಗಳನ್ನು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ತೆರೆಯಲು ಅನುಮತಿ ನೀಡಿದೆ. ನಗರಕ್ಕೆ ನೇರವಾಗಿ ಸಂಪರ್ಕಿಸುವ ರಸ್ತೆಗಳ ಮೂಲಕ ಬರುವ ಎಲ್ಲಾ ವಾಹನಗಳನ್ನು ತಪಾಸಣೆಗೊಳಪಡಿಸಲು ಅಗತ್ಯವಿರುವ ಕಡೆ ಚೆಕ್‍ಪೋಸ್ಟ್ ಗಳನ್ನು ಕೂಡಲೇ ಸ್ಥಾಪಿಸಿ ನಗರಕ್ಕೆ ಬರುವ ಜನರನ್ನು ತಪಾಸಣೆಗೊಳಪಡಿಸುವಂತೆ ಸಚಿವರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.

ಅಂಗಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯವಾಗಿದೆ, ಸ್ಯಾನಿಟೈಸರ್ ಇಡುವುದು, ಬ್ಲೀಚಿಂಗ್ ಪೌಡರ್ ಮತ್ತು ಲೈಜಾಲ್ ಬಳಸಿ ಶೌಚಾಲಯವನ್ನು ಸ್ವಚ್ಛವಾಗಿಡುವುದು, ಸಿಬ್ಬಂದಿವರ್ಗದವರು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮುಂಜಾಗ್ರತಾ ಕ್ರಮ ವಹಿಸಬೇಕು ಮತ್ತು ಗ್ರಾಹಕರ ಮಾಹಿತಿಯನ್ನು ಪಡೆಯಬೇಕು ಎಂದರು.

ಜಿಮ್, ಶಾಪಿಂಗ್ ಕಾಂಪ್ಲೆಕ್ಸ್, ಸ್ವಿಮ್ಮಿಂಗ್ ಫೂಲ್ ಹಾಗೂ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅವಕಾಶವಿರುವುದಿಲ್ಲ. ಸರ್ಕಾರದ ಆದೇಶ ಮತ್ತು ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ವರ್ತಕರು ಪಾಲಿಸಬೇಕು.

ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಾನೂನು ಪಾಲಿಸದೇ ಇರುವ ಅಂಗಡಿಗಳ ಮೇಲೆ ನಿಗಾವಹಿಸಲು 6 ಮೊಬೈಲ್ ಸ್ವ್ಕಾಡ್‍ಗಳನ್ನು ರಚಿಸಲಾಗಿದ್ದಯ, ಅವು ಗಸ್ತಿನಲ್ಲಿರುತ್ತವೆ. ಸೂಚನೆ ಉಲ್ಲಂಘನೆ ಕಂಡುಬಂದ ಅಂಗಡಿಗಳ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಅಂತಹ ವ್ಯಾಪಾರ ಮಳಿಗೆಗಳನ್ನು ಮುಚ್ಚಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೊನ ವಂಶಿಕೃಷ್ಣ, ಜಿ.ಪಂ. ಸಿಇಓ ಶುಭಾ ಕಲ್ಯಾಣ್, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಡಿ.ಹೆಚ್.ಓ. ಡಾ: ಚಂದ್ರಿಕಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ: ವೀರಭದ್ರಯ್ಯ, ಛೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷರಾದ ಚಂದ್ರಶೇಖರ್, ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ, ಅಂಗಡಿಗಳ ಮಾಲೀಕರು, ವರ್ತಕರ ಸಂಘದ ಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಕಾಯಿ ಕಾಯಿ ನುಗ್ಗೇಕಾಯಿ ಆಸೆಗೆ..

ಜಿ ಎನ್ ಮೋಹನ್


ಅದು ಪತ್ರಿಕಾ ಗೋಷ್ಠಿ.

ಅಂತಿಂತ ಪತ್ರಿಕಾ ಗೋಷ್ಠಿಯಲ್ಲ.

ದೇಶ ವಿದೇಶದ ಎಲ್ಲಾ ಅಧ್ಯಕ್ಷರೂ ಕುತೂಹಲದಿಂದ ಕಾಯುತ್ತಿದ್ದ ಪತ್ರಿಕಾ ಗೋಷ್ಠಿ.

ಜಗತ್ತಿನ ಅನೇಕ ದೇಶಗಳಲ್ಲಿ ಸಂಚಲನ ಹುಟ್ಟಿಸಬಹುದಾದ ಪತ್ರಿಕಾ ಗೋಷ್ಠಿ.

ಜಗತ್ತಿನ ಹೋರಾಟಗಳಿಗೆ ಹೊಸ ಹುಮ್ಮಸ್ಸು ನೀಡಬಹುದಾದ, ಹೊಸ ತಿರುವು ನೀಡಬಹುದಾದ ಪತ್ರಿಕಾ ಗೋಷ್ಠಿ.

ಪತ್ರಿಕಾ ಗೋಷ್ಠಿಯ ಕೋಣೆಯಲ್ಲಿ ಪತ್ರಕರ್ತರು ಕಿಕ್ಕಿರಿದಿದ್ದರು. ದೇಶ ವಿದೇಶದ ಟೆಲಿವಿಷನ್ ಚಾನಲ್ ಗಳು ನೇರ ಪ್ರಸಾರಕ್ಕೆ ಸಜ್ಜಾಗಿದ್ದವು. ಹೊರಗಡೆ ಓ ಬಿ ವ್ಯಾನ್ ಗಳ ದಂಡು.

ಅದು ಫಿಡೆಲ್ ಕ್ಯಾಸ್ಟ್ರೋ ಪತ್ರಿಕಾ ಗೋಷ್ಠಿ.

ಅಂತಹ ಅಮೆರಿಕಾವನ್ನು ತನ್ನ ಒಂದು ಪುಟ್ಟ ಮುಷ್ಟಿಯಿಂದ ಗುದ್ದಿ ಗುದ್ದಿ ಹಾಕಿದ್ದ ಫಿಡೆಲ್ ಕ್ಯಾಸ್ಟ್ರೋ ಪತ್ರಿಕಾ ಗೋಷ್ಠಿ. ಸಿ ಐ ಎ ೬೩೮ ಬಾರಿ ಹತ್ಯೆ ಮಾಡಲು ಯತ್ನಿಸಿದರೂ ಬೆಕ್ಕಿನಂತೆ ಜೀವ ಉಳಿಸಿಕೊಂಡಿದ್ದ ಫಿಡೆಲ್ ಕ್ಯಾಸ್ಟ್ರೋ ಪತ್ರಿಕಾ ಗೋಷ್ಠಿ. ‘ಇನ್ನೇನಿದ್ದರೂ ಅವರು ನನ್ನ ಸಹಜ ಸಾವನ್ನಷ್ಟೇ ಕಾಯುತ್ತಾ ಕೂರಬೇಕು..’ ಎಂದು ಅಬ್ಬರಿಸಿ ಹೇಳಿದ್ದ ಕ್ಯಾಸ್ಟ್ರೋ ಪತ್ರಿಕಾ ಗೋಷ್ಠಿ.

ಇಡೀ ಜಗತ್ತು ಕಿವಿಯಾಗಿ ಈ ಗೋಷ್ಠಿಯತ್ತ ಕುಳಿತದ್ದಕ್ಕೆ ಕಾರಣವಿತ್ತು.

ಫಿಡೆಲ್ ಕ್ಯಾಸ್ಟ್ರೋ ಕ್ಯಾನ್ಸರ್ ಎಂದೇ ಸಂಶಯಿಸಲಾಗಿದ್ದ ಹೊಟ್ಟೆನೋವಿನಿಂದ ಸುಧೀರ್ಘ ಕಾಲ ಆಸ್ಪತ್ರೆಯ ಮಂಚದ ಮೇಲಿದ್ದು ಇದೇ ಮೊದಲ ಬಾರಿಗೆ ಜಗತ್ತನ್ನು ಉದ್ಧೇಶಿಸಿ ಮಾತನಾಡಲಿದ್ದರು.

ಅವರು ಇನ್ನೂ ನೂರು ವರ್ಷ ಉಳಿಯಲಿ ಎಂದು ಹಾರೈಸಿದವರಿಗೂ, ಮತ್ತೆ ಬದುಕಿಬಿಟ್ಟರಲ್ಲಾ ಎಂದು ಸಂಕಟಪಟ್ಟ ಇಬ್ಬರಿಗೂ ಮಹತ್ವವಾಗಿದ್ದ ಪತ್ರಿಕಾ ಗೋಷ್ಠಿ.

ಟಿ ವಿ ಕ್ಯಾಮೆರಾಗಳು ಆನ್ ಆದವು, ಅದರ ಬೆಳಕು ಕೋಣೆಯಲ್ಲಿ ಹರಡಿ ಚೆಲ್ಲಾಡಿ ಹೋಯಿತು. ದೇಶ ವಿದೇಶಗಳ ಸ್ಟುಡಿಯೋಗಳಲ್ಲಿ ಸಂಚಲನ, ಸುದ್ದಿ ವಾಚಕರು ಅಲರ್ಟ್ ಆದರು. ಫಿಡೆಲ್ ಕ್ಯಾಸ್ಟ್ರೋ ಒಂದು ಮಾತು ಇಡೀ ಜಗತ್ತಿಗೆ ಸಾಂತ್ವನವೂ ಹೌದು, ಚಾಟಿ ಏಟೂ ಹೌದು.

ಫಿಡೆಲ್ ಕ್ಯಾಸ್ಟ್ರೋ ಬಂದು ಕುಳಿತವರೇ ನನ್ನ ಜೀವ ಉಳಿಸಿದ ಮಹಾಶಯನಿಗೆ ಮೊದಲ ವಂದನೆ ಎಂದರು.

ಎಲ್ಲರ ಕಿವಿ ನೆಟ್ಟಗಾಯಿತು.

ಅದಾರು ಆ ಮಹಾಶಯ. ಸಾವ ದವಡೆಯಿಂದ ಕ್ಯಾಸ್ಟ್ರೋನ ಎತ್ತಿಕೊಂಡು ಹೊರಗೆ ಬಂದವರು ಎಂದು ಕುತೂಹಲ ಮೂಡಿತು. ತಕ್ಷಣ ಕೇಳಿಯೇಬಿಟ್ಟರು. ಕ್ಯಾಸ್ಟ್ರೋ ಒಂದು ಕ್ಷಣ ಕೂಡಾ ತಡಮಾಡಲಿಲ್ಲ. ತಮ್ಮ ಎದುರಿನ ಟೇಬಲ್ ಮೇಲಿದ್ದ ಅದನ್ನು ಎತ್ತಿ ಹಿಡಿದರು. ಇಡೀ ಸಭೆಯೇ ಕಕ್ಕಾಬಿಕ್ಕಿಯಾಗಿ ಹೋಯಿತು.

ಪತ್ರಿಕಾ ಗೋಷ್ಠಿಯತ್ತ ಕಣ್ಣು ನೆಟ್ಟಿದ್ದ, ಕಿವಿ ಕೊಟ್ಟಿದ್ದ ಜಗತ್ತು ಸಹಾ ‘ಏನಿದೇನಿದು?’ ಎಂದು ಕಣ್ಣು ಬಾಯಿ ಬಿಟ್ಟುಕೊಂಡು ನೋಡಿತು.

ನೀವು ನಂಬಬೇಕು. ಹಾಗೆ ಕ್ಯಾಸ್ಟ್ರೋ ಕೈನಲ್ಲಿ ಇದ್ದದ್ದು ನುಗ್ಗೇಕಾಯಿ.

ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಸಾಧ್ಯವಿಲ್ಲ ಆದರೆ ಸಾವು ಕಾಡುವ ಮನೆಗೆ ನುಗ್ಗೇಕಾಯಿ ಇರಬೇಕು ಎನ್ನುವುದು ಫಿಡೆಲ್ ಅನುಭವವಾಗಿ ಹೋಗಿತ್ತು.

‘ಇದೊಂದು ಪವಾಡದ ಕಾಯಿ. ಇದೇ ನನ್ನ ಜೀವ ಉಳಿಸಿದ್ದು..’ ಎಂದು ಬಣ್ಣಿಸಿದಾಗ ಇಡೀ ಸಭೆ ಕಣ್ಣು ಕಣ್ಣು ಬಿಟ್ಟಿತ್ತು.

ಆದರೆ ಫಿಡೆಲ್ ಅಲ್ಲಿಗೆ ನಿಲ್ಲಿಸಲಿಲ್ಲ ಅದು ಹೇಗೆ ಸಾಧ್ಯವಾಯಿತು ಎನ್ನುವುದನ್ನು ಬಿಡಿಸಿಡುತ್ತಾ ಹೋದರು.

ನುಗ್ಗೇಕಾಯಿ ಎನ್ನುವುದು ಹಸಿವನ್ನೂ, ಆರೋಗ್ಯವನ್ನೂ, ಜೀವಂತಿಕೆಯನ್ನೂ, ದೇಹದ ಕುಶಲತೆಯನ್ನೂ ಹೇಗೆ ಕಾಪಾಡುತ್ತದೆ ಎಂದು ಬಿಡಿಸಿಟ್ಟರು.

ಹಾಗೆ ಮಾತನಾಡುತ್ತಿರುವಾಗ ಅವರ ಎದುರಿಗಿದ್ದ ಬಟ್ಟಲಿನಲ್ಲಿ ಅದೇ ನುಗ್ಗೆಕಾಯಿಯಿಂದ ಮಾಡಿದ ಸೂಪ್ ನಿಂದ ಎದ್ದ ಹಬೆ ಕೋಣೆಯ ಸುತ್ತಾ ಸುತ್ತುತ್ತಿತ್ತು.

ಫಿಡೆಲ್ ಗುಣಮುಖರಾಗಿ ದಿನನಿತ್ಯದ ಚಟುವಟಿಕೆಗೆ ಸಜ್ಜಾದಾಗ ಅವರು ನಡೆಸಿದ ಮೊದಲ ಸಭೆಯೇ ನುಗ್ಗೆಕಾಯಿಯ ಬಗ್ಗೆ.

ಹೈಟಿಯಲ್ಲಿ ನಡೆದ ಭೂಕಂಪ ಫಿಡೆಲ್ ರನ್ನು ಇನ್ನಿಲ್ಲದಂತೆ ಕಾಡಿತ್ತು. ಸರಿಯಾಗಿ ಪರಿಹಾರ ಕಾರ್ಯಗಳು ಜರುಗದೆ ಕಾಲರಾ ತಲೆ ಎತ್ತಿತ್ತು. ಕಾಲರಾ ಎಂಬ ಜವರಾಯ ದಿನಕ್ಕೆ ಏನಿಲ್ಲೆಂದರೂ ೫೦ ಜನರನ್ನು ಆಪೋಶನ ತೆಗೆದುಕೊಳ್ಳುತ್ತಾ ಹೆಜ್ಜೆ ಹಾಕಿದ್ದ. ಹೈಟಿ ತತ್ತರಿಸಿ ಹೋಗಿತ್ತು. ಫಿಡೆಲ್ ಜಗತ್ತಿನ ಎಲ್ಲಾ ನೊಂದವರ ಬಂಧು. ಹಾಗಾಗಿಯೇ ಹೈಟಿಯ ಹಸಿವು ಇಲ್ಲವಾಗಿಸಲು, ಹೈಟಿಯ ಆರೋಗ್ಯಕ್ಕೆ ಬೆನ್ನೆಲುಬಾಗಲು ಏನಾದರೂ ಮಾಡಬೇಕು ಎಂದು ತಹತಹಿಸಿದರು. ಆಗಲೇ ಅವರು ಫೋನ್ ತಿರುಗಿಸಿದ್ದು ಫಿನ್ಲೆ ಇನ್ಸ್ಟಿಟ್ಯೂಟ್ ನ ಕನ್ಸೆಪ್ಸಿಯನ್ ಕ್ಯಾಂಪ ಹ್ಯೂರ್ಗೋ ಅವರಿಗೆ.

ಕ್ಯೂಬಾ ಜಗತ್ತಿಗೆ ಆರೋಗ್ಯದ ತೋರುದೀಪ. ಅಲ್ಲಿನ ಫಿನ್ಲೆ ಇನ್ಸ್ಟಿಟ್ಯೂಟ್ ಅನೇಕ ರೋಗಗಳಿಂದ ಕ್ಯೂಬಾವನ್ನು ಕಾಪಾಡಿದ ಸಂಸ್ಥೆ. ಹಲವು ರೋಗಗಳಿಗೆ ಲಸಿಕೆ ಕಂಡು ಹಿಡಿದ ಅದನ್ನು ಲ್ಯಾಟಿನ್ ಅಮೆರಿಕಾ ಹಾಗೂ ಇತರ ದೇಶಗಳಿಗೂ ಒದಗಿಸಿಕೊಟ್ಟ ಹೆಮ್ಮೆ ಇದರದ್ದು.

ಹಾಗೆ ಫಿಡೆಲ್ ಫೋನ್ ಮಾಡಿದ್ದು ಈ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ಹ್ಯೂರ್ಗೋಗೆ. ಆ ವೇಳೆಗಾಗಲೇ ಯೋಗ. ಯುನಾನಿ. ಆಯುರ್ವೇದ, ಹೋಮಿಯೋಪಥಿ ಎಲ್ಲದರ ಬಗ್ಗೆ ಸಾಕಷ್ಟು ಅನುಭವ ಇದ್ದ ಆಕೆ ನೀಡಿದ ಒಂದೇ ಪರಿಹಾರ-ನುಗ್ಗೇಕಾಯಿ.

ಫಿಡೆಲ್ ಆಶರ್ಯಚಕಿತರಾಗಿ ಹೋದರು. ಒಂದು ಕಾಯಿ ಜಗದ ಹಸಿವು ನೀಗಲು ಸಾಧ್ಯವೇ ಎಂದು.

ಹಾಗೆ ಮಾತುಕತೆ ನಡೆದು ಎರಡು ಗಂಟೆ ಕಳೆದಿತ್ತು ಅಷ್ಟೇ, ಫಿಡೆಲ್ ಮತ್ತೆ ಹ್ಯೂರ್ಗೋ ಅವರಿಗೆ ಫೋನ್ ತಿರುಗಿಸಿದರು. ಆ ಎರಡು ಗಂಟೆಯಲ್ಲಿ ಅವರು ಪುಸ್ತಕಗಳ ರಾಶಿಯನ್ನೇ ತಡಕಾಡಿದ್ದರು. ಅಂತರ್ಜಾಲದಲ್ಲಿ ಮುಳುಗೆದ್ದಿದ್ದರು. ಅವರು ನುಗ್ಗೇಕಾಯಿ ಏನು ಎಂಬುದನ್ನು ಹುಡುಕಿಮುಗಿಸಿದ್ದರು.

ಫೋನ್ ಮಾಡಿದವರೇ ಇದು ಜಗತ್ತಿನ ಹಸಿದವರ ಆಹಾರ ಎಂದು ಘೋಷಿಸಿದವರೇ ಯಾಕೆ ಇಷ್ಟು ದಿನ ಈ ನುಗ್ಗೇಕಾಯಿಯನ್ನು ನನ್ನ ಗಮನಕ್ಕೆ ತರಲಿಲ್ಲ ಎಂದು ಆಕ್ಷೇಪಿಸಿದರು.

ನುಗ್ಗೇಕಾಯಿ ಆ ವೇಳೆಗೆ ಕ್ಯೂಬಾಗೆ ಕಾಲಿಟ್ಟು ಸಾಕಷ್ಟು ವರ್ಷಗಳಾಗಿ ಹೋಗಿತ್ತು. ಕ್ರಾಂತಿಯ ನಂತರ ಕಾಲಿಗೆ ಚಕ್ರ ಕಟ್ಟಿಕೊಂಡು ಗರ ಗರನೆ ಜಗತ್ತು ಸುತ್ತುತ್ತಿದ್ದ ಚೆಗೆವಾರ ಹೋದ ಹೋದ ಕಡೆಯಿಂದ ಸಿಕ್ಕ ಗಿಡಗಳನ್ನೆಲ್ಲ ಹೊತ್ತು ಕ್ಯೂಬಾಗೆ ತರುತ್ತಿದ್ದ.

ಹಾಗೆ ಎಲ್ಲೆಲ್ಲಿಂದಲೋ ತಂದ ಗಿಡಗಳು ಕ್ಯೂಬಾದ ಹವಾಮಾನಕ್ಕೆ ಒಗ್ಗದೆ ನೆಲ ಕಚ್ಚುತ್ತಿದ್ದವು. ಆದರೆ ಈ ನುಗ್ಗೇಕಾಯಿ ಒಂದಿತ್ತು. ಅದು ಕ್ಯೂಬಾದ ಹವಾಮಾನದ ಹೊಡೆತಕ್ಕೆ ಕ್ಯಾರೇ ಎನ್ನದೆ ತಲೆ ಎತ್ತು ನಿಂತುಬಿಟ್ಟಿತ್ತು.

ಹವಾಮಾನ ವೈಪರೀತ್ಯವಾದಾಗಲೂ ತನಗೆ ಏನೂ ಆಗಿಲ್ಲ ಎನ್ನುವಂತೆ ಅರಳುತ್ತಲೇ ಇತ್ತು. ಇದರ ಜೊತೆಗೆ ಅದಕ್ಕೆ ನೀರೂ ಅಷ್ಟೇನೂ ಬೇಕಿರಲಿಲ್ಲ.

ಯಾವಾಗ ಫಿನ್ಲೆ ಇನ್ಸ್ಟಿಟೂಟ್ ನ ಹ್ಯೂರ್ಗೋ ಈ ಎಲ್ಲವನ್ನೂ ಕಿವಿಗೆ ಹಾಕಿದರೋ ಫಿಡೆಲ್ ಯಾರಾದರೂ ಭಾರತಕ್ಕೆ ಹೋಗಬೇಕಲ್ಲಾ ಎಂದರು.

ಹ್ಯೂರ್ಗೋ ಅವರಿಗೆ ಆ ವೇಳೆಗೆ ಭಾರತ ತಮ್ಮ ಅಂಗೈನ ರೇಖೆಯಷ್ಟೇ ಪರಿಚಿತವಾಗಿ ಹೋಗಿತ್ತು. ಯೋಗ, ಯುನಾನಿ, ಪ್ರಕೃತಿ ಚಿಕಿತ್ಸೆ ಹೀಗೆ ಅನೇಕ ಅಧ್ಯಯನಕ್ಕೆ, ಸಂಕಿರಣಕ್ಕೆ ಎಂದು ಅವರು ಮೇಲಿಂದ ಮೇಲೆ ಭಾರತಕ್ಕೆ ಬಂದಿದ್ದರು. ಫಿಡೆಲ್ ಮತ್ತೆ ಅವರನ್ನು ಹೊಸ ರೀತಿಯ ಭಾರತ ಯಾತ್ರೆಗೆ ಸಜ್ಜು ಮಾಡಿಬಿಟ್ಟರು.

ಭಾರತಕ್ಕೆ ಹೋಗಿ ಮೊದಲು ನುಗ್ಗೇಕಾಯಿಯ ಬಗ್ಗೆ ಅಧ್ಯಯನ ಮಾಡು, ಪ್ರಯೋಗಿಸಿ ನೋಡು, ಅನುಭವಿಗಳಿಂದ ಕಿವಿ ಮಾತು ಕೇಳು. ಬರುವಾಗ ಮಾತ್ರ ಬರಿಗೈಲಿ ಬರಬೇಡ ಎಂದು ಹೇಳಿಬಿಟ್ಟರು.

ಹಾಗೆ ಹೊರಟ ಹ್ಯೂರ್ಗೋ ಕಾಲಿಟ್ಟದ್ದು ತಮಿಳುನಾಡು, ಆಂಧ್ರ ಹಾಗೂ ಕೇರಳಕ್ಕೆ. ನುಗ್ಗೇಕಾಯಿಯ ಹತ್ತಾರು ವಿಧಗಳನ್ನು ಕೈಲಿ ಹಿಡಿದು ಹತ್ತಿರವಿದ್ದ ಬೀದಿ ಬದಿ ಹೋಟೆಲ್ ಗಳಿಗೆ, ಡಾಬಾಗಳಿಗೆ ನುಗ್ಗುತ್ತಿದ್ದರು. ಇದರಲ್ಲಿ ಏನು ವೆರೈಟಿ ಮಾಡಲು ನಿಮಗೆ ಬರುತ್ತೋ ಮಾಡಿ ಎನ್ನುತ್ತಿದ್ದರು. ಮಾಡಿದ್ದು ಉಂಡು ಅದರ ಟಿಪ್ಪಣಿ ಬರೆಯುತ್ತಿದ್ದರು. ಹಾಗೆ ಬರೆದ ಟಿಪ್ಪಣಿ ಕ್ಯಾಸ್ಟ್ರೋ ಅವರಿಗೆ ರವಾನೆಯಾಗುತ್ತಿತ್ತು.

ಕ್ಯಾಸ್ಟ್ರೋ ಅದನ್ನು ಓದುತ್ತ ಹೋದವರೇ ಫೋನ್ ಮಾಡಿ ೧೦೦ ಟನ್ ನುಗ್ಗೇಕಾಯಿ ಬೀಜ ತಗೊಂಡು ಬಾ ಎಂದು ಆದೇಶಿಸಿಯೇ ಬಿಟ್ಟರು. ಯಾವಾಗ ೧೦೦ ಟನ್ ಬೀಜ ಕ್ಯೂಬಾದ ಗಡಿಯೊಳಗೆ ಬಂದು ಇಳಿಯಿತೋ ಕ್ಯಾಸ್ಟ್ರೋ ಸಂತಸಕ್ಕೆ ಪಾರವೇ ಇರಲಿಲ್ಲ. ಎಳೆಯ ಮಗುವಿನಂತೆ ಆ ಬೀಜಗಳನ್ನು ಆಯ್ದುಕೊಂಡು ತಮ್ಮ ಮನೆಯ ಕಂಪೌಂಡ್ ನಲ್ಲಿ ಕೃಷಿಗೆ ಇಳಿದೇಬಿಟ್ಟರು.

‘ನಾನು ಕ್ಯಾಸ್ಟ್ರೋ ಮನೆ ಮುಂದೆ ಹಾದು ಹೋಗುವಾಗ ನೋಡುತ್ತೇನೆ ಭಾರತದ ಹೆಸರು ಹೇಳುತ್ತಿದ್ದ ಎಷ್ಟೊಂದು ನುಗ್ಗೇಕಾಯಿ ಮರಗಳು. ಅದರಲ್ಲಿ ತೂಗುತ್ತಿದ್ದ ನೂರಾರು ನುಗ್ಗೇಕಾಯಿ’ ಎಂದು ಬರೆದಿದ್ದು ಕೆ ಪಿ ನಾಯರ್.

ಕ್ಯೂಬಾ ಬಗ್ಗೆ ಸತತವಾಗಿ ಬರೆಯುತ್ತ ಬಂದಿರುವ ನಾಯರ್ ಕ್ಯಾಸ್ಟ್ರೋ ೯೦ ನೆಯ ಹುಟ್ಟುಹಬ್ಬಕ್ಕೆ ಒಂದಷ್ಟು ದಿನ ಮುನ್ನಾ ಅಲ್ಲಿದ್ದರು.

ಕೆ ಪಿ ನಾಯರ್ ಪ್ರಕಾರ ಕ್ಯಾಸ್ಟ್ರೋ ಅವರ ನುಗ್ಗೇಕಾಯಿ ಉತ್ಸಾಹಕ್ಕೆ ಅಲ್ಲಿನ ಮಾಧ್ಯಮಗಳೂ ಸಾಥ್ ನೀಡಿದವು. ಕ್ಯಾಸ್ಟ್ರೋ ತಮ್ಮ ಮನೆಯ ಅಂಗಳದಲ್ಲಿ ನುಗ್ಗೆಕಾಯಿ ಆರೈಕೆಯಲ್ಲಿದ್ದ ಫೋಟೋಗಳನ್ನು ಪ್ರಕಟಿಸಿದವು. ಅಷ್ಟೇ ಅಲ್ಲ, ಕ್ಯಾಸ್ಟ್ರೊ ತಮ್ಮ ಅಂಕಣವೊಂದನ್ನು ನುಗ್ಗೇಕಾಯಿಯ ಗುಣಗಾನಕ್ಕೆ ಮೀಸಲಿಟ್ಟರು.

‘ಫಿಡೆಲ್ ಗೆ ಒಳ್ಳೆಯ ಊಟ, ವೈನ್ ಹಾಗೆ ನುಗ್ಗೆಕಾಯಿ ಸೂಪ್ ಎಂದರೆ ಪ್ರಾಣ’ ಎಂದು ನೆನಸಿಕೊಂಡದ್ದು ಕ್ಯಾಸ್ಟ್ರೋ ಅವರಿಗೆ ದಶಕಗಳ ಕಾಲ ಅಡುಗೆ ಮಾಡಿ ಬಡಿಸಿದ ಎರಾಸ್ಮೋ ಹರ್ನಾಂಡಿಸ್ ಲಿಯೋನ್.

ಕ್ಯೂಬಾ ಮೇಲೆ ಅಮೆರಿಕಾ ನಿರ್ಬಂಧ ಹೇರಿದಾಗ, ಜಗತ್ತಿನ ಇತರ ಅನೇಕ ರಾಷ್ಟ್ರಗಳೂ ನಿರ್ಬಂಧ ಹೇರುವಂತೆ ನೋಡಿಕೊಂಡಾಗ ದೇಶ ತತ್ತರಿಸಿ ಹೋಗಿತ್ತು. ಆಹಾರ ಇಲ್ಲದೆ ಜನ ತತ್ತರಿಸತೊಡಗಿದಾಗ ನೊಂದು ಹೋದ ಕ್ಯಾಸ್ಟ್ರೋ ಜೈವಿಕ ತಂತ್ರಜ್ಞಾನದ ಮೊರೆ ಹೊಕ್ಕಿದ್ದರು. ಕ್ಯೂಬಾ ಹಸಿವು ಕಾಣದೆ ಬದುಕಲು ಹೊಸ ಹೊಸ ದಾರಿ ಹುಡುಕತೊಡಗಿದ್ದರು.

ಹೇಳಿದ್ದರು- “ಅವರು ಹಸಿದು ಸಾಯುವಂತೆ ಮಾಡಿದರು. ನಾವು ಹಂಚಿ ತಿನ್ನುವುದನ್ನು ಕಲಿತೆವು. ರೋಗಗಳಿಂದ ನರಳಿ ಸಾಯುವಂತೆ ಮಾಡಿದರು. ಹಸಿರು ಎಲೆಗಳಿಂದ ಜೀವ ಉಳಿಸಿಕೊಂಡೆವು. ನಮ್ಮ ದನಿಗಳನ್ನು ಕುಗ್ಗಿಸಲು ಯತ್ನಿಸಿದರು. ಅವು ಮರುಧ್ವನಿಗಳಾದವು ನಿಮ್ಮ ಎದೆಗಳಲ್ಲಿ..”

ಅಂತಹ ಹಸಿವಿನ ಸಮಯದಲ್ಲಿಯೇ ಭಾರತ ಮನೆ ಮನೆಗಳಿಗೆ ಹೋಗಿ ಗೋದಿ ಸಂಗ್ರಹಿಸಿ ಕ್ಯೂಬಾ ಗೆ ಕಳಿಸಿಕೊಟ್ಟಿತ್ತು. ಆ ಗೋದಿ ಹೊತ್ತ ‘ಕೆರಿಬ್ಬಿಯನ್ ಪ್ರಿನ್ಸೆಸ್’ ಹಡಗು ಕ್ಯೂಬಾದ ಬಂದರಿಗೆ ಬಂದಾಗ ಖುದ್ದು ಕ್ಯಾಸ್ಟ್ರೋ ಅಲ್ಲಿಗೆ ತೆರಳಿ- “ನೀವು ಕಳಿಸಿದ ಗೋದಿ ಹೋರಾಟದಲ್ಲಿ ನಾವು ಒಬ್ಬಂಟಿಯಲ್ಲ ಎಂದು ಸಾರಿದೆ. ಈ ಗೋದಿಯಿಂದ ಕ್ಯೂಬಾದ ಪ್ರತಿಯೊಬ್ಬ ಪ್ರಜೆಗೂ ಒಂದು ವಾರ ಉತ್ತಮ ಬ್ರೆಡ್ ನೀಡುತ್ತೇನೆ” ಎಂದು ಭಾವುಕರಾಗಿ ನುಡಿದಿದ್ದರು.

ಈಗ ಭಾರತ ಮತ್ತು ಕ್ಯೂಬಾದ ಮಧ್ಯೆ ಅದೇ ರೀತಿಯ ಬಾಂಧವ್ಯ ಬೆಸೆಯಲು ಮುಂದಾಗಿದ್ದು -ನುಗ್ಗೇಕಾಯಿ.

ಎಲ್ಲ ರೀತಿಯ ಅಮಿನೊ ಆಸಿಡ್ ಹೊಂದಿರುವ ಏಕೈಕ ಗಿಡವೆಂದರೆ ಅದು ನುಗ್ಗೇಕಾಯಿ.

ಒಂದು ಹೆಕ್ಟೇರ್ ಜಾಗದಲ್ಲಿ ೩೦೦ ಟನ್ ನುಗ್ಗೆಕಾಯಿ ಎಲೆ ಬೆಳೆಯಬಹುದು. ಈ ಎಲೆಗಳ ವೈದ್ಯಕೀಯ ಗುಣ ನಿಬ್ಬೆರಗಾಗಿಸುತ್ತದೆ. ಜೀರ್ಣ ಕ್ರಿಯೆಗೆ ಈ ಸೊಪ್ಪು, ಕಾಯಿ ಅತ್ಯುತ್ತಮ. ಒಳ್ಳೆಯ ನಿದ್ದೆ ಬೇಕೆಂದರೂ ಇದು ಬೆಸ್ಟ್ ಎಂದು ಉದ್ಘರಿಸಿದರು.

ಯಾವಾಗ ನುಗ್ಗೇಕಾಯಿ ಹಸಿದವರ ಮಿತ್ರ ಎನಿಸಿಹೋಯಿತೊ ಕ್ಯಾಸ್ಟ್ರೋ ಇಡೀ ದೇಶದಲ್ಲಿ ಅದು ಚಳವಳಿಯಾಗುವಂತೆ ನೋಡಿಕೊಂಡರು. ಅವರ ಮನೆಯಂಗಳದಿಂದ ಜಿಗಿದ ನುಗ್ಗೆಕಾಯಿ ದೇಶವಿಡೀ ಆವರಿಸಿಕೊಂಡು ನಿಂತಿತು. ಅಷ್ಟೇ ಅಲ್ಲ ಸಾವಿರಾರು ಎಕರೆ ಜಾಗದಲ್ಲಿ ಅದನ್ನು ಬೆಳೆಯಲು ಮುಂದಾಯಿತು.

ಅಲ್ಲಿಗೇ ನಿಲ್ಲದೆ ಚೀನಾದೊಂದಿಗೆ ಕೈ ಜೋಡಿಸಿ ಇನ್ನಷ್ಟು ಸಂಶೋಧನೆಗೆ ಅಡಿಪಾಯ ಹಾಕಿತು. ನುಗ್ಗೆಕಾಯಿಯಿಂದ ಕ್ಯಾನ್ಸರ್ ನಂತಹ ದೈತ್ಯನನ್ನೂ ಮಣಿಸುವುದು ಹೇಗೆ ಎಂದು ಸಂಶೋಧನೆಗಿಳಿಯಿತು.

ಈ ಮಧ್ಯೆ ವೆನೆಜುವೆಲಾದ ಅಧ್ಯಕ್ಷ ಹ್ಯೂಗೋ ಚಾವೆಜ್ ಕ್ಯೂಬಾಗೆ ಬಂದರು. ಅವರಿಗಿದ್ದ ಕ್ಯಾನ್ಸರ್ ಚಿಕಿತ್ಸೆಗಾಗಿ. ನುಗ್ಗೇಕಾಯಿಯ ಮಹಿಮೆ ಅವರಿಗೂ ಗೊತ್ತಾಯಿತು.

ಕ್ಯೂಬಾದಿಂದ ವೆನೆಜುವೆಲಾಗೂ ನುಗ್ಗೇಕಾಯಿ ಎಂಟ್ರಿ ಕೊಟ್ಟಿತು. ಅಲ್ಲಿಂದ ಲ್ಯಾಟಿನ್ ಅಮೆರಿಕಾದ ಎಲ್ಲಾ ದೇಶಗಳಿಗೂ ಪಸರಿಸಿತು. ಆಫ್ರಿಕಾದಲ್ಲಿಯೂ ನುಗ್ಗೇಕಾಯಿ.

ಎರಡು ಮೀನು ತುಂಡು ಬ್ರೆಡ್ ನಿಂದ ಎಲ್ಲರ ಹಸಿವು ತಣಿಸಿದ ಕ್ರಿಸ್ತ ಎನ್ನುತ್ತಾರೆ. ಆದರೆ ಇಲ್ಲಿ ನುಗ್ಗೇಕಾಯಿ ಬಡವರ ಬೆಳೆಯಾಗಿ ಹೋಗಿತ್ತು. ಕಣ್ಣೀರು ಒರೆಸುತ್ತಿತ್ತು.

ಹಾಗಾಗಿಯೇ ಕ್ಯೂಬಾ ಅದನ್ನು ವಿಮೋಚನೆಯ ಮರ ಎಂದಾಗ ಹಸಿದವರೆಲ್ಲರೂ ಹೌದೌದೆಂದರು.