Monday, December 29, 2025
Google search engine
Home Blog Page 310

ಕಳ್ಳರಿಂದ ಹತ್ಯೆ

ಮಧುಗಿರಿ : ದುಷ್ಕರ್ಮಿಗಳು ವ್ಯಕ್ತಿಯೋರ್ವನನ್ನು ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಹಣ ದೋಚಿ ಪರಾರಿಯಾಗಿರುವ ಘಟನೆ ತಾಲ್ಲೂಕು ಕಸಬಾ ವ್ಯಾಪ್ತಿಯ ಮರಬಹಳ್ಳಿ ಗೇಟ್ ಸಮೀಪ ಮಂಗಳವಾರ ರಾತ್ರಿ ನಡೆದಿದೆ.

ಗ್ರಾಮದ ಚೌಡಪ್ಪ (60) ಮೃತಪಟ್ಟವರು.

ಪುತ್ರ ಹನುಮಂತರಾಯಪ್ಪ (27) ಗಾಯಗೊಂಡವರು. ಮನೆಯ ಒಳಗೆ ನುಗ್ಗಿದ ಕಳ್ಳರು ಹಣ ದೋಚಲು ಮುಂದಾಗಿದ್ದಾರೆ.ಇದಕ್ಕೆ ಮನೆಯ ಮಾಲೀಕ ಹಾಗೂ ಪುತ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಚೌಡಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಾಯಗೊಂಡಿದ್ದ ಪುತ್ರ ಹನುಮಂತರಾಯನನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಪ್ರವೀಣ್ , ಸಿಪಿಐ ದಯಾನಂದ ಜಿ.ಶೇಗುಣಸಿ, ಪಿಎಸ್ ಐ ಕಾಂತರಾಜು ಭೇಟಿ ನೀಡಿದ್ದಾರೆ.

ಅಂಗನವಾಡಿ ಮಹಿಳಾ ಹೋರಾಟ: ಅಹೋರಾತ್ರಿಯ ಚಿತ್ರಣ

ತುಮಕೂರು: ಸುಮಾರು 30 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ತು‌ಮಕೂರಿನ ವಿವಿಧೆಡೆ ಬೀಡು ಬಿಟ್ಟಿದ್ದಾರೆ.

..

ಹಲವು‌‌ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ತಾಯಂದಿರನ್ನು ಬೆಂಗಳೂರು ಕಡೆಗೆ ಬಿಡದೇ ಈ ಚಳಿಯಲ್ಲಿ ತುಮಕೂರು ಅಮಾನಿಕೆರೆಯಲ್ಲಿ ಕೂಡಿ ಹಾಕಿದೆ.

ಕೆರೆಯಲ್ಲಿ ಸ್ವಲ್ಪ ನೀರಿದೆ. ವಿಪರೀತ ಚಳಿ. ಆದರೂ ಆ ಬಯಲಿನಲ್ಲಿ ಬೀಡು ಬಿಟ್ಟಿದ್ದಾರೆ. ಮುಂದೇನು ಮಾಡಬೇಕೆಂದು ತಡ ರಾತ್ರಿಯಾದರೂ ಸಭೆ ನಡೆಸುತ್ತಿದ್ದರು.

ನಾಲ್ಕೈದು ಸಾವಿರ ಮಹಿಳೆಯರು ಮಹಾ ದಾಸೋಹದ, ಡಾ.ಶಿವಕು‌ಮಾರ ಸ್ವಾಮೀಜಿ ತಪೋವನ ಸಿದ್ಧಗಂಗಾ ಮಠದಲ್ಲಿ ಬೀಡು ಬಿಟ್ಟಿದ್ದಾರೆ.

ಮತ್ತಷ್ಟು ಮಂದಿ ಬೀದಿ ಬೀದಿಯಲ್ಲಿ ಮಲಗಿದ್ದಾರೆ. ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕೈ ತೊಳೆದುಕೊಂಡಿದೆ.

ಈ‌ ನಡುವೆ, ಜನವಾದಿ ಮಹಿಳಾ ಸಂಘಟನೆ ಮಹಿಳೆಯರ ಹೋರಾಟಕ್ಕೆ ಬೆಂಬಲ ಸೂಚಿಸಿದೆ.‌ ಸರ್ಕಾರ ಮಹಿಳೆಯರ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ.

ಮಾನವ ಹಕ್ಕು ಮಹತ್ವ ಅರಿಯಿರಿ

Public story.in


ತುಮಕೂರು: ಸಂವಿಧಾನದ ಕರ್ತವ್ಯ ಮತ್ತು ಹಕ್ಕುಗಳನ್ನು ಸಾಮಾನ್ಯ ಜನರಿಗೆ ಅರ್ಥ ಮಾಡಿಸಬೇಕಾದದು ಯುವಜನರ ಜವಾಬ್ದಾರಿ ಎಂದು ಜೆ.ಎಂ.ಎಫ್.ಸಿ. ನ್ಯಾಯಾಲಯದ ೩ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಸ್.ಚಂದನ್ ಹೇಳಿದರು.

ಮಂಗಳವಾರ ಸುಫಿಯ ಕಾನೂನು ಕಾಲೇಜಿನಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾನವ ಹಕ್ಕುಗಳ ಮಹತ್ವ ಅರಿಯಬೇಕು ಹಾಗೂ ಅದಕ್ಕೆ ಧಕ್ಕೆಯಾದಾಗ ನ್ಯಾಯ ಪಡೆಯುವ ವಿಧಾನಗಳನ್ನು ತಿಳಿಯಬೇಕು, ಸಾಮಾನ್ಯ ಜನರಿಗೆ ತಿಳಿಸಿಕೊಡಬೇಕು ಎಂದು ತಿಳಿಸಿದರು.

ಮಾನವ ಹಕ್ಕುಗಳ ದಿನದ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಜಾಗೃತಿ ಮೂಡಿಸುವ ಕೆಲಸ ನಿತ್ಯವೂ ಆಗಬೇಕು ಎಂದು ಅವರು ಹೇಳಿದರು.

ಜೆ.ಎಂ.ಎಫ್.ಸಿ. ನ್ಯಾಯಾಲಯದ ೫ ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಕೆ.ಸಿ.ತಾರಾ ಮಾತನಾಡಿ, ವಿದ್ಯಾರ್ಥಿಗಳೂ ಕಾನೂನು ಪರೀಕ್ಷಾ ದೃಷ್ಟಿಯಿಂದ ಮಾತ್ರ ಓದದೇ. ಜ್ಞಾನಕ್ಕಾಗಿ ಅಧ್ಯಯನ ಮಾಡಲು ಸಲಹೆ ನೀಡಿದರು.

ಎಚ್.ಎಂ.ಎಸ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಾಜಿ ಶಾಸಕ ಷಫೀ ಅಹಮದ್ ಮಾತನಾಡಿ, ಕಾನೂನು ತಿಳಿಯಬೇಕು. ಇತರರಿಗೆ ತಿಳಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಎಸ್.ರಮೇಶ ಮಾತನಾಡಿ, ಇತಿಹಾಸ ಮರೆತು, ಭವಿಷ್ಯ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಹಿಂದಿನದನ್ನು ತಿಳಿದು,ಮುಂದಿನ ಗುರಿಯ ಕಡೆಎಚ್ಚರಿಕೆಯ ಹೆಜ್ಜೆ ಇಡಬಹುದು ಎಂದರು.
ನಿರ್ಭಯಾ, ದಿಶಾ ಪ್ರಕರಣ ಗಮನಿಸಿದಾಗ ಮನುಷ್ಯ ಸಮಾಜ ಇದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಮಹಿಳೆಯರ ಮಾನವ ಹಕ್ಕು ದಮನವಾಗುತ್ತಿದೆ. ಅವರಿಗೆ ಆಸ್ತಿಯ ಹಕ್ಕು, ರಾಜಕೀಯ ಹಕ್ಕು ಕೊಡಲು ಮೀನಾಮೇಷ ಎಣಿಸುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಧ್ಯಾಪಕ ಜೆ.ಸಿ.ರಂಗಧಾಮಯ್ಯ ಮಾನವ ಹಕ್ಕುಗಳು ಮಹತ್ವ ತಿಳಿಸಿದರು.

ಮುಖ್ಯಶಿಕ್ಷಕರ ಕರ್ತವ್ಯ ಲೋಪ : ಪೋಷಕರ ಧರಣಿ

Public story.in


ವೈ.ಎನ್.ಹೊಸಕೋಟೆ : ಶಾಲೆಗೆ ಮುಖ್ಯಶಿಕ್ಷಕರು ಸರಿಯಾಗಿ ಬರುತ್ತಿಲ್ಲವಾಗಿ ಮಕ್ಕಳ ಪ್ರಗತಿ ಕುಂಟಿತವಾಗುತ್ತಿದ್ದು, ಕೂಡಲೆ ಸಂಬAಧಿಸಿದ ಅಧಿಕಾರಿಗಳು ಇವರ ವಿರುದ್ದ ಕ್ರಮ ಕೈಗೊಳ್ಳಬೇಕು ಸಾಸಲಕುಂಟೆ ಗ್ರಾಮದ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯ ಪೋಷಕರು ಮಂಗಳವಾರ ಶಾಲೆಯ ಮುಂದೆ ಧರಣಿ ನಡೆಸಿದರು.

೧೨೦ ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ೫ ಜನ ಶಿಕ್ಷಕರಿದ್ದಾರೆ. ಅದರಲ್ಲಿ ಮುಖ್ಯೋಪಾಧ್ಯಯರು ಕಛೇರಿಗೆ ಸೀಮಿತವಾಗುತ್ತಾರೆ. ಒಬ್ಬರು ಸದಾ ಇಲಾಖಾ ತರಬೇತಿಗಳಿಗೆ ಮೀಸಲಾಗುತ್ತಾರೆ. ಇನ್ನೊಬ್ಬರು ೩ ವರ್ಷಗಳಿಂದ ನಿಯೋಜನೆಚಿಯಲ್ಲಿದ್ದಾರೆ.

ಉಳಿದ ಒಬ್ಬ ಟಿಜಿಟಿ ಶಿಕ್ಷಕ ಮತ್ತೊಬ್ಬ ಅತಿಥಿ ಶಿಕ್ಷಕ ಮಾತ್ರ ಪಾಠಗಳನ್ನು ಮಾಡುತ್ತಿದ್ದಾರೆ. ಇದರಿಂದ ಎಲ್ಲಾ ತರಗತಿಗಳಲ್ಲಿನ ಮಕ್ಕಳಲ್ಲಿ ಸಕಾಲಿಕವಾದ ಮತ್ತು ವ್ಯವಸ್ಥಿತವಾಗಿ ಕಲಿಕೆ ಆಗುತ್ತಿಲ್ಲ. ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಇಂತಹ ಶಿಕ್ಷಕರು ಶಾಲೆಗೆ ಅಗತ್ಯ ಇಲ್ಲ. ಹಾಗಾಗಿ ಈ ಕೂಡಲೆ ಮೇಲಾಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಂಡು ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಧರಣಿಯಲ್ಲಿ ಒತ್ತಾಯಿಸಿದರು.

ಪ್ರಸ್ತುತವಿರುವ ತಿಪ್ಪೇಸ್ವಾಮಿಯವರು ಮುಖ್ಯೋಪಾಧ್ಯಯರಾದ ದಿನದಿಂದ ಶಾಲೆಯು ಅವ್ಯವಸ್ಥೆಯ ಗೂಡಾಗಿದೆ. ಮನಸೋ ಇಚ್ಚೆ ಶಾಲೆಗೆ ಗೈರು ಹಾಜರಾಗುತ್ತಾರೆ. ನಂತರ ಬಂದು ಹಾಜರಾತಿ ವಹಿಯಲ್ಲಿ ಸಹಿ ಮಾಡುತ್ತಾರೆ. ರಾಷ್ಟ್ರೀಯ ಹಬ್ಬಗಳಂದು ಶಾಲೆಗೆ ಬರುವುದಿಲ್ಲ. ಶಾಲೆಯ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ.

ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣ ಇವರೇ ಎಂದು ಮುಖಂಡ ನರಸಿಂಹಯ್ಯ ದೂರಿದರು.
ಬೆಳಿಗ್ಗೆ ೧೦.೩೦ ರ ನಂತರ ಶಾಲೆ ಪ್ರಾರಂಭವಾಗಿ ೪.೧೦ ಕ್ಕೆ ಕೊನೆಗೊಳ್ಳುತ್ತಿದೆ. ಮಕ್ಕಳ ಬಿಸಿಯೂಟದ ಕಡೆ ಮುಖ್ಯಶಿಕ್ಷಕ ಗಮನ ನೀಡುತ್ತಿಲ್ಲ. ಹಲವು ಬಾರಿ ವಿದ್ಯಾರ್ಥಿಗಳು ಹುಳುಗಳಿರುವ ಆಹಾರ ತಿಂದಿದ್ದಾರೆ.

ಈ ಬಗ್ಗೆ ಶಾಲಾ ಸಮಿತಿ ಮತ್ತು ಪೋಷಕರು ಚರ್ಚಿಸಿದರೂ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಚರ್ಚೆ ಮಾಡಿದರೆ ನಿಮಗೆ ಬೇಕಿದ್ದರೆ ಕ್ಷೇತ್ರಶಿಕ್ಷಣಾಧಿಕಾರಿ ಅಥವಾ ಉಪನಿರ್ದೇಶಕರಿಗೆ ದೂರು ನೀಡಿ ಎಂದು ದರ್ಪದಿಂದ ಮಾತನಾಡುತ್ತಾರೆ.

ಸಹಶಿಕ್ಷಕರೊಡನೆ ಸಹಕಾರದಿಂದ ವರ್ತಿಸುತ್ತಿಲ್ಲ. ಬಡ್ತಿ ವಿಚಾರದಲ್ಲಿ ಇಬ್ಬರು ಶಿಕ್ಷಕರು ಹಲವು ದಿನಗಳ ಹಿಂದೆ ಕುರ್ಚಿಗಳನ್ನು ಎತ್ತಿ ಹೊಡೆದಾಡಲು ಮುಂದಾಗಿದ್ದರು. ಇಂತಹ ಶಿಕ್ಷಕರು ಇದ್ದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ನಂಬಿಕೆ ಇಲ್ಲ. ಹಾಗಾಗಿ ಇಲ್ಲಿನ ಶಿಕ್ಷಕರನ್ನು ಕೂಡಲೇ ವರ್ಗಾವಣೆ ಮಾಡಿ ಬೇರೆಯವರನ್ನು ನೇಮಿಸಬೇಕು ಎಂದು ಗ್ರಾಮಪಂಚಾಯಿತಿ ಸದಸ್ಯ ಶಿವಾರೆಡ್ಡಿ ಒತ್ತಾಯಿಸಿದರು.

ಈ ಶಿಕ್ಷಕ ಬೇಡ


ಮುಖ್ಯಶಿಕ್ಷಕರು ಯಾವುದೇ ಮಾಹಿತಿ ಇಲ್ಲದೆ ಗೈರುಹಾಜರಾಗುತ್ತಾರೆ. ಶಾಲಾ ಸಮಿತಿಗೆ ಸ್ಪಂದಿಸುವುದೇ ಇಲ್ಲ. ಶಾಲಾ ಪ್ರಗತಿಯತ್ತ ಗಮನ ಹರಿಸುವುದಿಲ್ಲ. ಇಂತಹ ಬೇಜವಾಬ್ದಾರಿ ಶಿಕ್ಷಕರು ನಮ್ಮ ಶಾಲೆಗೆ ಬೇಡ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಳು ಮತ್ತು ಉಪನಿರ್ದೇಶಕರಿಗೆ ವಿಷಯ ತಿಳಿಸಿದರೂ ಯಾರೋಬ್ಬರೂ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿಲ್ಲ. ಹಾಗಾಗಿ ನಾವು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಅಧಿಕಾರಿಗಳು ಬಂದು ಪರಿಶೀಲಿಸುವವರೆಗೂ ಧರಣಿ ಮುಂದುವರೆಸುತೇವೆ.
-ವೀರಾಂಜಿ, ಅಧ್ಯಕ್ಷರು, ಶಾಲಾ ಸಮಿತಿ, ಸ.ಹಿ.ಪ್ರಾ.ಶಾಲೆ, ಸಾಸಲಕುಂಟೆ

ವ್ಯವಸ್ಥೆ ಸರಿಪಡಿಸಿ


ಶಾಲಾ ಆವರಣದಲ್ಲಿ ಶುಭ್ರತೆ ಇಲ್ಲ. ಮುಳ್ಳು, ಗಿಡಗಂಟೆಗಳು ಬೆಳೆದು ಕ್ರಿಮಿಕೀಟಗಳು ಸೇರಿವೆ. ಶೌಚಾಲಯ ಗುಂಡಿಯ ಬಂಡೆ ಒಡೆದು ಬಿದ್ದು ಆಹುತಿಗೆ ಕಾಯುತ್ತಿದೆ. ಶಾಲೆಯ ಅವ್ಯವಸ್ಥೆಯ ತಾಣವಾಗಿದೆ. ಅಧಿಕಾರಿಗಳ ನಿರ್ಲಕ್ಷಕ್ಕೆ ಒಳಗಾಗಿ ಗ್ರಾಮದಲ್ಲಿ ಶಿಕ್ಷಣ ಹಾಳಾಗುತ್ತಿದೆ. ಉನ್ನತಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ವ್ಯವಸ್ಥೆಯನ್ನು ಸರಿಪಡಿಸಬೇಕು.
ಗುರುಮೂರ್ತಿ, ಶಾಲಾ ಸಮಿತಿಯ ಸದಸ್ಯ, ಸಾಸಲಕುಂಟೆ

ಬೇರೆಡೆ ಹೋಗೋಲ್ಲ, ಪರೀಕ್ಷೆ ಮುಗಿಯೋತನಕ ಕಾಲೇಜು ಮುಚ್ಚಬೇಡಿ.

ತುಮಕೂರು:
ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿನ ಶ್ರೀನಿವಾಸ ಪದವಿ ಪೂರ್ವ ಕಾಲೇಜಿನ ಮಾನ್ಯತೆ ರದ್ದುಗೊಳಿಸಿ ಸರ್ಕಾರದ ವಶಕ್ಕೆ ಪಡೆದುಕೊಂಡು ಕಾಲೇಜಿನ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ಸ್ಥಳಾಂತರಿಸಲು ಸೂಚಿಸಿರುವ ಮೇರೆಗೆ ವಿದ್ಯಾರ್ಥಿಗಳು ಬೇರೆ ಕಾಲೇಜಿಗೆ ಹೋಗುವುದಿಲ್ಲ ಎಂದು ಕಾಲೇಜು ಎದುರು ಪಟ್ಟು ಹಿಡಿದು ಕುಳಿತರು.

ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರದ ಅನುದಾನ ಪಡೆದ ಆರೋಪದ ಮೇರೆಗೆ ಇಲ್ಲಿನ ಶ್ರೀನಿವಾಸ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಮಾನ್ಯತೆ ರದ್ದುಗೊಳಿಲಾಗಿದೆ. ವೇತನಾನುದಾನ ಹಿಂಪಡೆದು ಸರ್ಕಾರದ ವಶಕ್ಕೆ ಪಡೆಯಲು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೋಮವಾರ ಸೂಚಿನೆ ನೀಡಲಾಗಿತ್ತು. ಈ ಹಿನ್ನೆಯಲ್ಲಿ ಡಿಡಿಪಿಯು ಅವರು ಕಾಲೇಜಿಗೆ ಭೇಟಿ ನಿಡಿ ಸೋಮವಾರ ವಿದ್ಯಾರ್ಥಿಗಳನ್ನು ಸರ್ಕಾರಿ ಜೂನಿಯರ್ ಕಾಲೇಜಿಗೆ ತೆರಳುವಂತೆ ಮನ ಒಲಿಸಿದ್ದರು. ಕಾಲೇಜಿನ ಮಾನ್ಯತೆ ರದ್ದಾಗಿದ್ದು, ಇಲ್ಲಿ ಪಾಠ ಪ್ರವಚನ ಮಾಡಲು ಅವಕಾಶ ಇಲ್ಲ. ಆಗಾಗಿ ವಿದ್ಯಾರ್ಥಿ ಭವಿಷ್ಯದ ದೃಷ್ಟಿಯಿಂದ ಸ್ಥಳಾಂತರ ಮಾಡಿ ಬೋಧನೆ ಮಾಡಿಸುವುದು ಅನಿವಾರ್ಯ ಎಂದು ಉಪನಿರ್ದೇಶಕಿ ಲಲಿತಾಕುಮಾರಿ ಅವರು ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀನಿವಾಸ ಕಾಲೇಜು ಬಳಿ ಬಂದ 253 ವಿದ್ಯಾರ್ಥಿಗಳು ಕೊಠಡಿ ಒಳಗೆ ಹೋಗದೇ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಕುಳಿತು ಬೇರೆ ಕಾಲೇಜಿಗೆ ಹೋಗುವುದಿಲ್ಲ. ಇದೇ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷಾತ್ಯಂದ ವರೆಗೆ ಬೋಧನೆ ಮುಂದುವರೆಸಿ ಎಂದು ಪಟ್ಟು ಹಿಡಿದು ಧರಣಿ ಕುಳಿತರು.

ಕಾಲೇಜಿನ ಆಡಳಿತ ಮಂಡಳಿ ಹಾಗೂ ಇಲಾಖೆ ನಡುವೆ ಏನೇ ವಿವಾದ ಇರಲಿ ಅದು ನಮಗೆ ಬೇಕಾಗಿಲ್ಲ. ನಮ್ಮ ಭವಿಷ್ಯದ ಹಿತದೃಷ್ಟಿಯಿಂದ ಕಾಲೇಜಿನ ಪಾಠ ಪ್ರವಚನವನ್ನು ಶೈಕ್ಷಣಿಕ ವರ್ಷಾಂತ್ಯದ ವರೆಗೆ ಯಥಾವತ್ತಾಗಿ ಮುಂದುವರೆಸುವಂತೆ ಪಟ್ಟು ಹಿಡಿದರು.

ಪರೀಕ್ಷೆಗಳು ಕೇವಲ ಮೂರು ತಿಂಗಳಿದ್ದು, ಈ ಸಮಯದಲ್ಲಿ ಬೇರೆ ಕಾಲೇಜಿಗೆ ಹೋಗುವುದರಿಂದ ಅಲ್ಲಿನ ವಾತಾವರಣ ಹಾಗೂ ಬದಲಾದ ಉಪನ್ಯಾಸದಿಂದ ತೊಂದರೆ ಉಂಟಾಗಲಿದೆ. ಜೊತೆಗೆ ನಮ್ಮ ಕಾಲೇಜಿನಲ್ಲಿರುವ ಭೂಗೋಳ ಶಾಸ್ತ್ರ, ಐಚ್ಛಿಕ ಕನ್ನಡ, ಸಂಸ್ಕೃತ ವಿಷಯಗಳು ಸ್ಥಳೀಯ ಕಾಲೇಜಿನಲ್ಲಿ ಇಲ್ಲ. ಸಂಬಂಧಿಸಿದ ವಿಷಯದ ಉಪನ್ಯಾಸಕರು ಆ ಕಾಲೇಜಲಿಲ್ಲ. ಈಗಾಗಲೇ ಅಲ್ಲಿ ಅಧಿಕ ಸಂಖ್ಯೆ ವಿದ್ಯಾರ್ಥಿಗಳಿದ್ದು, ಕೊಠಡಿ, ಶೌಚಾಲಯ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ಮತ್ತೆ ಈ ಕಾಲೇಜಿನ 253 ಸಂಖ್ಯೆ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿಗೆ ಸ್ಥಳಾಂತರವಾಗುವುದರಿಂದ ಸಮಸ್ಯೆಗಳು ಇನ್ನಷ್ಟು ಉಲ್ಬಣಿಸಲಿವೆ. ಹಾಗಾಗಿ ಪರೀಕ್ಷೆ ಮುಗಿಯುವ ತನಕ ಇದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು.

ಮದ್ಯಾಹ್ನದ ವರೆಗೆ ಕಾಲೇಜಿನ ಮುಂದೆ ಧರಣಿ ಕುಳಿತಿದ್ದ ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರೊಂದಿಗೆ ಆನಂತರ ಸ್ಥಳೀಯ ಶಾಸಕ ಡಾ. ಜಿ. ಪರಮೇಶ್ವರ ಅವರನ್ನು ತುಮಕೂರಿನಲ್ಲಿ ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡರು. ಸಮಸ್ಯೆ ಆಲಿಸಿದ ಶಾಸಕರು ತಕ್ಷಣ ಶೀಕ್ಷಣ ಸಚಿವ ಸುರೇಶ್ ಕುಮಾರ್ವ ಅವರಿಗೆ ದೂರವಾಣಿ ಕರೆ ಮಾಡಿ ಪರೀಕ್ಷೆಗಳು ಮುಗಿಯುವ ತನಕ ಇದೇ ಕಾಲೇಜಿನಲ್ಲಿ ಬೋಧನೆ ಮುಂದುವರೆಸಿ ಅನುಕೂಲ ಮಾಡುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂಧಿಸಿದ ಶಿಕ್ಷಣ ಸಚಿವರು ಶೈಕ್ಷಣಿಕ ವರ್ಷಾತ್ಯಂದ ವರೆಗೆ ವಿದ್ಯಾರ್ಥಿಗಳ ಬೋಧನೆಗೆ ಅನುಕೂಲ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳನ್ನು ಬೇರೆಡೆ ಸ್ಥಳಾಂತರಿಸುವ ಪ್ರಕ್ರಿಯೆ ಸದ್ಯಕ್ಕೆ ಮೊಟುಕಾಗಿದೆ. ಹಾಗಾಗಿ ಸಮಸ್ಯೆ ತಕ್ಷಣಕ್ಕೆ ಸುಖಾಂತ್ಯ ಪಡೆದುಕೊಂಡಿದೆ.

ಪಿಯುಸಿ ಪರೀಕ್ಷೆ ಮುಗಿದ ನಂತರ ಸಂಸ್ಥೆಯಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬಹುದು. ಅಲ್ಲಿವರೆಗೂ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಇಲ್ಲ ಎಂಬ ಭರವಸೆ ನೀಡಿದ ಮೇರೆಗೆ ವಿದ್ಯಾರ್ಥಿಗಳು ಸದ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.

ಬೇರೆಡೆ ಹೋಗೋಲ್ಲ, ಪರೀಕ್ಷೆ ಮುಗಿಯೋತನಕ ಕಾಲೇಜು ಮುಚ್ಚಬೇಡಿ.

ತುಮಕೂರು:
ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿನ ಶ್ರೀನಿವಾಸ ಪದವಿ ಪೂರ್ವ ಕಾಲೇಜಿನ ಮಾನ್ಯತೆ ರದ್ದುಗೊಳಿಸಿ ಸರ್ಕಾರದ ವಶಕ್ಕೆ ಪಡೆದುಕೊಂಡು ಕಾಲೇಜಿನ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ಸ್ಥಳಾಂತರಿಸಲು ಸೂಚಿಸಿರುವ ಮೇರೆಗೆ ವಿದ್ಯಾರ್ಥಿಗಳು ಬೇರೆ ಕಾಲೇಜಿಗೆ ಹೋಗುವುದಿಲ್ಲ ಎಂದು ಕಾಲೇಜು ಎದುರು ಪಟ್ಟು ಹಿಡಿದು ಕುಳಿತರು.

ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರದ ಅನುದಾನ ಪಡೆದ ಆರೋಪದ ಮೇರೆಗೆ ಇಲ್ಲಿನ ಶ್ರೀನಿವಾಸ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಮಾನ್ಯತೆ ರದ್ದುಗೊಳಿಲಾಗಿದೆ. ವೇತನಾನುದಾನ ಹಿಂಪಡೆದು ಸರ್ಕಾರದ ವಶಕ್ಕೆ ಪಡೆಯಲು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೋಮವಾರ ಸೂಚಿನೆ ನೀಡಲಾಗಿತ್ತು. ಈ ಹಿನ್ನೆಯಲ್ಲಿ ಡಿಡಿಪಿಯು ಅವರು ಕಾಲೇಜಿಗೆ ಭೇಟಿ ನಿಡಿ ಸೋಮವಾರ ವಿದ್ಯಾರ್ಥಿಗಳನ್ನು ಸರ್ಕಾರಿ ಜೂನಿಯರ್ ಕಾಲೇಜಿಗೆ ತೆರಳುವಂತೆ ಮನ ಒಲಿಸಿದ್ದರು. ಕಾಲೇಜಿನ ಮಾನ್ಯತೆ ರದ್ದಾಗಿದ್ದು, ಇಲ್ಲಿ ಪಾಠ ಪ್ರವಚನ ಮಾಡಲು ಅವಕಾಶ ಇಲ್ಲ. ಆಗಾಗಿ ವಿದ್ಯಾರ್ಥಿ ಭವಿಷ್ಯದ ದೃಷ್ಟಿಯಿಂದ ಸ್ಥಳಾಂತರ ಮಾಡಿ ಬೋಧನೆ ಮಾಡಿಸುವುದು ಅನಿವಾರ್ಯ ಎಂದು ಉಪನಿರ್ದೇಶಕಿ ಲಲಿತಾಕುಮಾರಿ ಅವರು ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀನಿವಾಸ ಕಾಲೇಜು ಬಳಿ ಬಂದ 253 ವಿದ್ಯಾರ್ಥಿಗಳು ಕೊಠಡಿ ಒಳಗೆ ಹೋಗದೇ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಕುಳಿತು ಬೇರೆ ಕಾಲೇಜಿಗೆ ಹೋಗುವುದಿಲ್ಲ. ಇದೇ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷಾತ್ಯಂದ ವರೆಗೆ ಬೋಧನೆ ಮುಂದುವರೆಸಿ ಎಂದು ಪಟ್ಟು ಹಿಡಿದು ಧರಣಿ ಕುಳಿತರು.

ಕಾಲೇಜಿನ ಆಡಳಿತ ಮಂಡಳಿ ಹಾಗೂ ಇಲಾಖೆ ನಡುವೆ ಏನೇ ವಿವಾದ ಇರಲಿ ಅದು ನಮಗೆ ಬೇಕಾಗಿಲ್ಲ. ನಮ್ಮ ಭವಿಷ್ಯದ ಹಿತದೃಷ್ಟಿಯಿಂದ ಕಾಲೇಜಿನ ಪಾಠ ಪ್ರವಚನವನ್ನು ಶೈಕ್ಷಣಿಕ ವರ್ಷಾಂತ್ಯದ ವರೆಗೆ ಯಥಾವತ್ತಾಗಿ ಮುಂದುವರೆಸುವಂತೆ ಪಟ್ಟು ಹಿಡಿದರು.

ಪರೀಕ್ಷೆಗಳು ಕೇವಲ ಮೂರು ತಿಂಗಳಿದ್ದು, ಈ ಸಮಯದಲ್ಲಿ ಬೇರೆ ಕಾಲೇಜಿಗೆ ಹೋಗುವುದರಿಂದ ಅಲ್ಲಿನ ವಾತಾವರಣ ಹಾಗೂ ಬದಲಾದ ಉಪನ್ಯಾಸದಿಂದ ತೊಂದರೆ ಉಂಟಾಗಲಿದೆ. ಜೊತೆಗೆ ನಮ್ಮ ಕಾಲೇಜಿನಲ್ಲಿರುವ ಭೂಗೋಳ ಶಾಸ್ತ್ರ, ಐಚ್ಛಿಕ ಕನ್ನಡ, ಸಂಸ್ಕೃತ ವಿಷಯಗಳು ಸ್ಥಳೀಯ ಕಾಲೇಜಿನಲ್ಲಿ ಇಲ್ಲ. ಸಂಬಂಧಿಸಿದ ವಿಷಯದ ಉಪನ್ಯಾಸಕರು ಆ ಕಾಲೇಜಲಿಲ್ಲ. ಈಗಾಗಲೇ ಅಲ್ಲಿ ಅಧಿಕ ಸಂಖ್ಯೆ ವಿದ್ಯಾರ್ಥಿಗಳಿದ್ದು, ಕೊಠಡಿ, ಶೌಚಾಲಯ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ಮತ್ತೆ ಈ ಕಾಲೇಜಿನ 253 ಸಂಖ್ಯೆ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿಗೆ ಸ್ಥಳಾಂತರವಾಗುವುದರಿಂದ ಸಮಸ್ಯೆಗಳು ಇನ್ನಷ್ಟು ಉಲ್ಬಣಿಸಲಿವೆ. ಹಾಗಾಗಿ ಪರೀಕ್ಷೆ ಮುಗಿಯುವ ತನಕ ಇದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು.

ಮದ್ಯಾಹ್ನದ ವರೆಗೆ ಕಾಲೇಜಿನ ಮುಂದೆ ಧರಣಿ ಕುಳಿತಿದ್ದ ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರೊಂದಿಗೆ ಆನಂತರ ಸ್ಥಳೀಯ ಶಾಸಕ ಡಾ. ಜಿ. ಪರಮೇಶ್ವರ ಅವರನ್ನು ತುಮಕೂರಿನಲ್ಲಿ ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡರು. ಸಮಸ್ಯೆ ಆಲಿಸಿದ ಶಾಸಕರು ತಕ್ಷಣ ಶೀಕ್ಷಣ ಸಚಿವ ಸುರೇಶ್ ಕುಮಾರ್ವ ಅವರಿಗೆ ದೂರವಾಣಿ ಕರೆ ಮಾಡಿ ಪರೀಕ್ಷೆಗಳು ಮುಗಿಯುವ ತನಕ ಇದೇ ಕಾಲೇಜಿನಲ್ಲಿ ಬೋಧನೆ ಮುಂದುವರೆಸಿ ಅನುಕೂಲ ಮಾಡುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂಧಿಸಿದ ಶಿಕ್ಷಣ ಸಚಿವರು ಶೈಕ್ಷಣಿಕ ವರ್ಷಾತ್ಯಂದ ವರೆಗೆ ವಿದ್ಯಾರ್ಥಿಗಳ ಬೋಧನೆಗೆ ಅನುಕೂಲ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳನ್ನು ಬೇರೆಡೆ ಸ್ಥಳಾಂತರಿಸುವ ಪ್ರಕ್ರಿಯೆ ಸದ್ಯಕ್ಕೆ ಮೊಟುಕಾಗಿದೆ. ಹಾಗಾಗಿ ಸಮಸ್ಯೆ ತಕ್ಷಣಕ್ಕೆ ಸುಖಾಂತ್ಯ ಪಡೆದುಕೊಂಡಿದೆ.

ಪಿಯುಸಿ ಪರೀಕ್ಷೆ ಮುಗಿದ ನಂತರ ಸಂಸ್ಥೆಯಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬಹುದು. ಅಲ್ಲಿವರೆಗೂ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಇಲ್ಲ ಎಂಬ ಭರವಸೆ ಮೇರೆಗೆ ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.

 

 

 

ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಅಂಗನವಾಡಿ ನಾಯಕಿಯರ ನಿಯೋಗ

ಅಂಗನವಾಡಿಗಳಲ್ಲೇ ಶಾಲಾ ಪೂರ್ವ ಶಿಕ್ಷಣವನ್ನು ಆರಂಭಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಪೊಲೀಸರು ತಡೆಯೊಡ್ಡಿದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತುಮಕೂರಿನ ಗಾಜಿನ ಮನೆಯಲ್ಲೇ ಠಿಕಾಣಿ ಹೂಡಿದ್ದಾರೆ.

ಇದೇ ವೇಳೆ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಅಂಗನವಾಡಿ ನಾಯಕಿಯರ ನಿಯೋಗವೊಂದನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ಬೆಳಗಿನಿಂದಲೂ ಪೊಲೀಸರು ಮತ್ತು ಅಂಗನವಾಡಿ ನೌಕರರ ಸಂಘದ ಪ್ರಮುಖರು ಮತ್ತು ಸಿಐಟಿಯು ಮುಖಂಡರ ಜೊತೆ ಪೊಲೀಸರು ಸತತ ಮಾತುಕತೆ ನಡೆಸಿದರು. ಸರ್ಕಾರದ ಮುಖ್ಯಸ್ಥರಿಂದ ಒಪ್ಪಿಗೆ ಪತ್ರ ತಂದರೆ ಮಾತ್ರ ಸರ್ಕಾರದ ಜೊತೆ ಮಾತುಕತೆಗೆ ಸಿದ್ದ ಎಂದು ಹೋರಾಟಗಾರರು ಖಚಿತಪಡಿಸಿದರು.

ಗಾಜಿನಮನೆಯ ಆವರಣಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನಂ ವಂಶಿಕೃಷ್ಣ ಅಂಗನವಾಡಿ ನಾಯಕರೊಂದಿಗೆ ಅರ್ಧ ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದರು. ಸರ್ಕಾರದಿಂದ ಅಧಿಕೃತ ಪತ್ರ ಬಂದರೆ ಮಾತ್ರ ನಾವು ಮಾತುಕತೆ ನಡೆಸುತ್ತೇವೆ ಎಂದು ಪಟ್ಟು ಹಿಡಿದರು. ಹೀಗಾಗಿ ಪೊಲೀಸರು ಅಲ್ಲಿಂದ ಮರಳಿದರು.
ಪೊಲೀಸರು ಮತ್ತೆ  ಧರಣಿ ಸ್ಥಳಕ್ಕೆ ಆಗಮಿಸಿ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಂಧೂ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದ, ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು, ಶಾಂತಾಘಂಟಿ, ನಾಗರತ್ನ ಅವರನ್ನೊಳಗೊಂಡ ನಿಯೋಗ ಶಿಕ್ಷಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಮತ್ತು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲು ತೆರಳಿದೆ.


ಗಾಜಿನ ಅರಮನೆಯಲ್ಲಿ ಸಮಾವೇಶಗೊಂಡ ಸಹಸ್ರ ಸಹಸ್ರ ಮಂದಿ ಕಾರ್ಯಕರ್ತೆಯರು ಸುಡು ಬಿಸಿಲಲ್ಲೇ ತಮ್ಮ ನಾಯಕರ ಭಾಷಣವನ್ನು ಆಲಿಸಿದರು. ಬೇಡಿಕೆಗಳು ಈಡೇರುವವರೆಗೂ ಇಲ್ಲಿಂದ ಕದಲುವುದಿಲ್ಲ. ಜಿಂದಾಬಾದ್ ಜಿಂದಾಬಾದ್ ಸಿಐಟಿಯು ಜಿಂದಾಬಾದ್, ಅಂಗನವಾಡಿ ಸಂಘಟನೆಗೆ ಜಯವಾಗಲಿ ಎಂಬ ಘೋಷಣೆಗಳು ಕ್ಷಣಕ್ಷಣಕ್ಕೂ ಮೊಳಗಿದವು.
ಇದಕ್ಕೂ ಮೊದಲು ತುಮಕೂರಿನ ಟೌನ್ ಹಾಲ್ ನಿಂದ ಗಾಜಿನ ಮನೆಯವರೆಗೂ ಅಂಗನವಾಡಿ ಕಾರ್ಯಕರ್ತೆಯರು ಮೆರವಣಿಗೆ ನಡೆಸಿದರು. ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತೆಯರು ಆಗಮಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ವೇದಿಕೆಯ ಮೇಲೆ ಎಸ್. ವರಲಕ್ಷ್ಮಿ, ಸುನಂದ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಂಧೂ, ಪ್ರಾಂತ ರೈತ ಸಂಘದ ಯು. ಬಸವರಾಜು, ನವೀನ್ ಕುಮಾರ್, ಗುರುರಾಜ್ ದೇಸಾಯಿ, ಹೀಗೆ ಹಲವು ಮುಖಂಡರು ಹಾಜರಿದ್ದು ಮಾತನಾಡಿದರು.


ಅಂಗನವಾಡಿ ಕಾರ್ಯಕರ್ತೆಯರ ಜನಸಾಗರ ಹರಿದುಬರುತ್ತಿರುವುದನ್ನು ಕಂಡ ಪೊಲೀಸರು ರಾಜ್ಯದ ವಿವಿಧ ಭಾಗಗಳಲ್ಲಿ ತಡೆಯೊಡ್ಡಿದರು. ಕೆಲವರನ್ನು ಗೃಹಬಂಧನದಲ್ಲಿಟ್ಟು ಬಿಡುಗಡೆ ಮಾಡಿದರು. ಬೆಂಗಳೂರು ಮತ್ತು ತುಮಕೂರಿನಲ್ಲಿ 144ನೇ ಸೆಕ್ಷನ್ ಹಾಕಲಾಗಿದೆ ಎಂದು ಕಾರ್ಯಕರ್ತೆಯರು ಒಂದೆಡೆ ಸೇರದಂತೆ ಪೊಲೀಸರು ಅಡ್ಡಿಪಡಿಸಿದರು. ಆದರೂ ಇದ್ಯಾವುದನ್ನೂ ಲೆಕ್ಕಿಸದೆ ಕಾರ್ಯಕರ್ತೆಯರು ಆಗಮಿಸಿದ್ದಾರೆ. ನಾವು ಶಾಂತಿಯುತವಾಗಿ ಧರಣಿ ಮಾಡುತ್ತೇವೆ. ಪಾದಯಾತ್ರೆ ನಡೆಸುತ್ತೇವೆ. ಆದರೆ ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಮುಖಂಡರು ಸಿಡಿಮಿಡಿ ವ್ಯಕ್ತಪಡಿಸಿದರು.

ಅಂಗನವಾಡಿ ತಾಯಂದಿರ ಬೇಡಿಕೆಗಳು ವೈಜ್ಞಾನಿಕವಾಗಿದೆ; ಗಾಂಧಿವಾದಿ ಪ್ರಸನ್ನ

ಅಂಗನವಾಡಿ ತಾಯಂದಿರ ಬೇಡಿಕೆಗಳು ವೈಜ್ಞಾನಿಕವಾಗಿದೆ. ಅವುಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ಗಾಂಧೀವಾದಿ ಪ್ರಸನ್ನ ಹೇಳಿದರು.
ತುಮಕೂರಿನ ಅಮಾನಿಕೆರೆಯಲ್ಲಿರುವ ಗಾಜಿನ ಮನೆಯಲ್ಲಿ ಸೇರಿದ್ದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ನೀವು ಹೋರಾಟ ಕೈಗೊಳ್ಳಿ. ನಮ್ಮ ಸಂಘಟನೆಯೂ ಸೇರಿದಂತೆ ಎಲ್ಲಾ ಜನಪರ ಸಂಘಟನೆಗಳು ಬೆಂಬಲಿಸಿ ನಿಮ್ಮ ಜೊತೆಗೆ ನಿಲ್ಲಲಿದ್ದೇವೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು. ಕಳೆದ 40 ವರ್ಷಗಳಿಂದ ಮಕ್ಕಳ ಲಾಲನೆ ಮತ್ತು ಕಲಿಕೆ ಎರಡನ್ನೂ ಮಾಡಿಕೊಂಡು ಬಂದಿದ್ದಾರೆ.  ಅವರ ಬೇಡಿಕೆಗಳನ್ನು ಈಡೇರಿಸದಿದ್ದರೆ ನಿಮ್ಮ ಸರ್ಕಾರವನ್ನು ಕೆಳಗಿಳಿಸುತ್ತಾರೆ. ರಾಜ್ಯಾದ್ಯಂತ ಹರಡಿಕೊಂಡಿರುವ ತಾಯಂದಿರು ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನಿಡಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಮಾತನಾಡಿ, ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಹತ್ತಿಕ್ಕಲು ಹೊರಟಿದೆ. ಎಲ್ಲೆಡೆ ಪಾದಯಾತ್ರೆಗೆ ಬರುತ್ತಿರುವ ಕಾರ್ಯಕರ್ತೆಯರನ್ನು ಪೊಲೀಸರು ತಡೆಯುತ್ತಿದ್ದಾರೆ. ಇದು ನಿಲ್ಲಬೇಕು. ಯಾವುದೇ ಕಾರಣಕ್ಕೂ ನಮ್ಮ ಪಾದಯಾತ್ರೆಯನ್ನು ಕೈಬಿಡುವುದಿಲ್ಲ ಎಂದು ಹೇಳಿದರು.

ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು. ಬರೀ ಮನವಿ ಕೊಟ್ಟು ಹೋಗಲು ನಾವು ಇಲ್ಲಿಗೆ ಬಂದಿಲ್ಲ. ಮನವಿ ಕೊಡುವುದಾಗಿದ್ದರೆ ಆಯಾ ಜಿಲ್ಲೆಗಳಲ್ಲೇ ಕೊಡುತ್ತಿದ್ದೆವು. ನಾವು ಹಲವು ಷರ್ಷಗಳಿಂದ ಹೇಳಿಕೊಂಡು ಬಂದಿದ್ದೇವೆ. ಶಾಲಾಪೂರ್ವ ಶಿಕ್ಷಣವನ್ನು ಅಂಗನವಾಡಿಗಳಲ್ಲೇ ಆರಂಭಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಭಾಗ್ಯಲಕ್ಷ್ಮಿ, ಪಲ್ಸ್ ಪೊಲೀಯೊ ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಸರ್ಕಾರ ಅಂಗನವಾಡಿ ನೌಕರರಿಂದ ಬೇರೆ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದೆ. ಅವರಿಗೆ ಸೂಕ್ತ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡುತ್ತಿಲ್ಲ ಎಂದು ದೂರಿದರು.

ರಾಜ್ಯದ ಮೂಲೆ ಮೂಲೆಗಳಿಂದ ತುಮಕೂರಿಗೆ ಧಾವಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು

ಪಬ್ಲಿಕ್ ಸ್ಟೋರಿ:  ತುಮಕೂರಿನ ಹಾದಿ ಬೀದಿ ಎಲ್ಲಿ ನೋಡಿದರೂ  ಪಾದಯಾತ್ರೆಗಾಗಿ ಆಗಮಿಸಿದ ಅಂಗನವಾಡಿ ಕಾರ್ಯಕರ್ತೆಯರು ಕಂಡು ಬರುತ್ತಿದ್ದಾರೆ.

ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಟೌನ್ ಹಾಲ್ ಸರ್ಕಲ್, ಎಸ್.ಪಿ. ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಗಾಜಿನ ಮನೆ ಸೇರಿದಂತೆ  ನಗರದ ಎಲ್ಲೆಡೆ ಗುಂಪು ಗುಂಪಾಗಿ ನೆರೆದಿದ್ದಾರೆ.

ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರ ಪಾದಯಾತ್ರೆಗೆ ಅನುಮತಿ ನೀಡುವ ವಿಚಾರ ರಾಜ್ಯ ಸರ್ಕಾರದ ಅಂಗಳ ತಲುಪಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಅಂಗನವಾಡಿ ನೌಕರರ ಫೆಡರೇಷನ್ ಮುಖಂಡರ ಜೊತೆ ಮಂಗಳವಾರ ಮಾತುಕತೆ ನಡೆಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರ ಪ್ರಸ್ತುತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ತಲುಪಿದೆ. ಸರ್ಕಾರದಿಂದ ಯಾವ ಭರವಸೆ ದೊರೆಯುತ್ತದೆ ಎನ್ನುವ ವಿಚಾರದ ಮೇಲೆ ಅಂಗನವಾಡಿ ಕಾರ್ಯಕರ್ತೆಯರು ಪಾದಯಾತ್ರೆ ಕುರಿತ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಈ ಬಗ್ಗೆ ಮುಖಂಡರು ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.

ಸರ್ಕಾರ ಮಾತುಕತೆಗೆ ಆಹ್ವಾನಿಸಿ ಸಮಯ ನೀಡಿದರೆ ಮತ್ತು ಸಕಾರಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಪಾದಯಾತ್ರೆ ಕೈ ಬಿಡಲು ಮುಖಂಡರು ನಿರ್ಧರಿಸಿದ್ದಾರೆ. ಒಂದು ವೇಳೆ ಸಕಾರಾತ್ಮಕ ಭರವಸೆ ದೊರೆಯದಿದ್ದರೆ ಯಾವುದೇ ಕಾರಣಕ್ಕೆ  ಪಾದಯಾತ್ರೆ, ಹೋರಾಟ ಹಿಂಪಡೆಯುವುದಿಲ್ಲ ಪಾದಯಾತ್ರೆ ನಡೆಸಿಯೇ ಸಿದ್ದ ಎನ್ನುವ ಅಭಿಪ್ರಾಯವನ್ನು ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ.

ವಿವಿಧೆಡೆಗಳಿಂದ ಕಾರ್ಯಕರ್ತೆಯರು ಸಾಗರೋಪಾದಿಯಲ್ಲಿ ಬರುತ್ತಲೇ ಇದ್ದಾರೆ. ತೀವ್ರ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಆದರೆ ಸಹಸ್ರಾರು ಸಂಖ್ಯೆಯಲ್ಲಿ ನಗರದತ್ತ ಬರುತ್ತಿರುವ ಕಾರ್ಯಕರ್ತೆಯರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಅನುಮತಿ ನಿರಾಕರಣೆ ಬಗ್ಗೆ ಮುಖಂಡರ ಅಸಮಾಧಾನ:  ಪಾದಯಾತ್ರೆಗೆ ಅನುಮತಿ ನೀಡುವುದಾಗಿ ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಆದರೆ ದಿಢೀರನೆ ಸೋಮವಾರ ರಾತ್ರಿ ಸರ್ಕಾರದಿಂದ ನಿರ್ದೇಶನ ಬಂದಿದೆ ಎಂದು  ಅನುಮತಿ ನಿರಾಕರಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ನಮ್ಮ ಹಕ್ಕು.   ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಿದ್ದಾರೆ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತಿದ್ದೇವೆ ಎಂದು ಸಿಐಟಿಯು ಮುಖಂಡರಾದ  ವರಲಕ್ಷ್ಮಿ ಪಬ್ಲಿಕ್ ಸ್ಟೋರಿಗೆ ತಿಳಿಸಿದರು.

ಪೊಲೀಸರ ಮೂಲಕ ಪಾದಯಾತ್ರೆಯನ್ನು ತಡೆದು ಪ್ರತಿಭಟನಾನಿರತರ ಜೊತೆ ಚರ್ಚಿಸದೆ ಸರ್ಕಾರ ದೌರ್ಜನ್ಯ ಎಸಗುತ್ತಿದೆ. ಶಾಂತಿಯುತವಾಗಿ ಪಾದಯಾತ್ರೆ ಮಾಡಲು ಅವಕಾಶ ನೀಡದೆ ನಿರಂಕುಸ ಧೋರಣೆ ಅನುಸರಿಸಲಾಗುತ್ತಿದೆ. ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡ ಮುಖ್ಯಮಂತ್ರಿಗಳು ನಿರ್ಧಾರ ಪ್ರಕಟಿಸದೆ ಲಕ್ಷಾಂತರ ಮಂದಿ ಕಾರ್ಯಕರ್ತೆಯರನ್ನು ಬೀದಿಯಲ್ಲಿ ನಿಲ್ಲುವಂತೆ ಮಾಡಿರುವುದು ವಿಷಾದನೀಯ ಎಂದು ಮುಖಂಡರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.