Wednesday, June 18, 2025
Google search engine
Home Blog Page 328

ನನ್ನ ಮೊದಲ‌ ವಿಮಾನಯಾನ

0

ವಿಮಾನ ಹಾರಾಟವನ್ನು ಬಾಲ್ಯದಿಂದ ಆಗಸದಲ್ಲಿ ನೋಡಿದ್ದೆ ಹೊರತು ಅದನ್ನು ಹತ್ತುವದಿರಲಿ‌ ಅದನ್ನು ಹತ್ತಿರದಿಂದ ಸಹ ನೋಡಿರಲಿಲ್ಲ. ಹೀಗೆ ಯಾವುದೋ ಒಂದು ಕಾರಣಕ್ಕೆ ವಿಮಾನ ಪ್ರಯಾಣ ಮಾಡಲೇಬೇಕೆಂಬ ಆಸೆ ನನ್ನಲ್ಲಿ ಚಿಗುರು ಒಡೆಯಿತು. ವಿಮಾನ ಪ್ರಯಾಣವನ್ನ ಮಾಡುವ‌ ಓಕೆ. ಸರಿ. ಹೋಗುವದಾದರು ಎಲ್ಲಿಗೆ? ಏಕೆಂದರೆ,‌ ನನ್ನದು ವಿಮಾನ‌ ಹತ್ತುವ ಉದ್ದೇಶವೇ ಹೊರತು ಕೆಲಸ ನಿಮಿತ್ತ ಅಥವಾ ಪ್ರವಾಸ ಕೈಗೊಳ್ಳುವ ಉದ್ದೇಶವೇ ಇರಲಿಲ್ಲ.

ಹೀಗೆ ಗುರಿ ಇಲ್ಲದ ಪ್ರಯಾಣವನ್ನು ಮಾಡಲೇಬೇಕೆಂಬ ಛಲದಲ್ಲಿ ಸರಿ,ಎಲ್ಲಿಗಾದರು ಹೋಗಬೇಕಲ್ಲವೆ? ಹತ್ತಿರದ ಊರುಗಳನ್ನು ಪಟ್ಟಿ ಮಾಡ ತೊಡಗಿ ತೀರಾ ಹತ್ತಿರವೂ ಅಲ್ಲದ ದೂರವೂ ಅಲ್ಲದ ನೆರೆಯ ಕೇರಳದ ರಾಜಧಾನಿ ತಿರುವನಂತಪುರವನ್ನು ಆಯ್ಕೆ ಮಾಡಿಕೊಂಡು ತುಮಕೂರಿನ‌ ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಟಿಕೇಟನ್ನು ಕಳೆದ ಏಪ್ರಿಲ್ 18 ದಿನಾಂಕಕ್ಕೆ ಬುಕ್ ಮಾಡಿದ್ದಾಯ್ತು.

ಪೋರ್ಟ್ ನ್ನು ನಾನು ನೋಡಿರದ ಕಾರಣ , ಅಲ್ಲಿ ವಿಮಾನ ಹತ್ತುವ ಪ್ರಕ್ರಿಯೆಗಳನ್ನು ಟ್ರಾವೆಲ್ ಏಜೆನ್ಸಿಯರಲ್ಲಿ ತಿಳಿದುಕೊಂಡು ಸಿದ್ದನಾಗಿದ್ದೆ.‌ ಪ್ರಯಾಣದ ದಿನ ಬಂತು. ನಾನು ಬುಕ್ ಮಾಡಿದ್ದ ಏರ್ ಇಂಡಿಯಾ ವಿಮಾನವು ಬೆಳಗ್ಗೆ ಎಂಟು ಗಂಟೆಗೆ ಹೊರಡುವುದಿತ್ತು. ನಮ್ಮೂರಿನಿಂದ ಬೆಳಗ್ಗೆ ಎಂಟು ಗಂಟೆಗೆ ಅಲ್ಲಿಗೆ ತಲುಪಲು ಸಾಧ್ಯವಾಗದ ಕಾರಣ ,ಹಿಂದಿನ ರಾತ್ರಿಯ ಎರಡು ಗಂಟೆಗೆ ವಿಮಾನ ನಿಲ್ದಾಣ ತಲುಪಿ ಬೆಳಗಿನ ವಿಮಾನಕ್ಕೆ ಕಾದು ಕಾದು ಸುಸ್ತಾಯ್ತು.

ಅಂತು ಸಮಯವಾಯ್ತು. ಏರ್ ಇಂಡಿಯಾ ಸಿಬ್ಬಂದಿ ನಮ್ಮನ್ನ ವಿಮಾನಕ್ಕೆ ಹತ್ತಿಸಿದ್ದಾಯ್ತು. ಹತ್ತುವ ಮುನ್ನ ವಿಮಾನದ ಮುಂದೆ ನಿಂತು ಒಂದು ಸೆಲ್ಫಿ ತಗೆದುಕೊಂಡು ಆಕ್ಷಣವೇ ಫೇಸದ ಬುಕ್ಕಲ್ಲಿ ಆ ಫೋಟೋಕ್ಕೆ ನನ್ನ ಮೊದಲ ವಿಮಾನಯಾನ ಎಂಬ ಒಕ್ಕಣೆಯೊಂದಿಗೆ ಅಪ್ಲೋಡ್ ಮಾಡುವುದನ್ನ ಮರೆಯಲಿಲ್ಲ.

ವಿಮಾನ ಟೇಕ್ ಆಫ್ ಆಗಲು ಅಣಿಯಾಗುತ್ತಿತ್ತು.‌ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರುವುದಕ್ಕೂ ಕ್ಯೂ ನಿಂತು ಒಂದಾಂದ ಮೇಲೆ ಒಂದರಂತೆ ಹಾರಬೇಕು ಎಂಬುದು ಆಗಲೇ ಗೊತ್ತಾಗಿದ್ದು.‌ ಅಂಥೂ ಇಂತೂ ವಿಮಾನ ರನ್ ವೇ ಗೆ ಬಂದು ರನ್ ವೇ ಯಲ್ಲಿ ಹಾರಲು ವೇಗ ಹೆಚ್ಚಿಸಿಕೊಂಡಂತೆ ನನ್ನ ಹೃಯದ ಬಡಿತದ ವೇಗವೂ ಹೆಚ್ಚಾಗ ತೊಡಗಿತು. ವೇಗವಾಗಿ ಓಡಿದ ವಿಮಾನ ಮೇಲಕ್ಕೆ ಹಾರುವುದಕ್ಕೆ‌ ತೊಡಗಿದಾಗ ಸಣ್ಣಗೆ ಹೆದರಿಕೆ ಆಗ ತೊಡಗಿತ್ತು. ವಿಮಾನವು ಗರಿಷ್ಠ ಎತ್ತರಕ್ಕೆ ಹಾರಿ ಸಮಾನಂತರವಾಗಿ ಚಲಿಸುತ್ತಿರುವಾಗ ಸ್ಪಲ್ಪ ಸಮಾಧಾನವಾಗಿ..ಓ ವಿಮಾನ ಪ್ರಯಾಣ ಇಷ್ಟೆ ಎನಿಸತೊಡಗಿತ್ತು.

ಏರ್ ಇಂಡಿಯಾದವರು ಅಂದೆಂಥಹುದೋ ಒಂದು‌ ಕೇಕು ಒಂದರ್ಧ ಲೀಟರ್ ನೀರನ್ನು ಕೊಟ್ಟು ಇದೇ ತಿಂಡಿ ಎಂದರು. ಅದನ್ನು ತಿನ್ನುತ್ತಾ ವಿಂಡೋ ಪಕ್ಕದಲ್ಲಿದ್ದ ನಾನು ಭೂಮಿಯತ್ತ ನೋಡಿ ಎಂಜಾಯ್ ಮಾಡುವಷ್ಟರಲ್ಲಿ ವಿಮಾನ‌ಸಿಬ್ಬಂದಿ ಬೆಲ್ಟ್ ಹಾಕಿಕೊಳ್ಳಿ.‌ಇನ್ನೇನು ವಿಮಾನ ಲ್ಯಾಂಡ್ ಆಗುತ್ತೆ ಎಂದರು.‌

ಬೆಂಗಳೂರಿನಿಂದ ಸರಿ ಸುಮಾರು 680 ಕಿಮೀ ಇರುವ ತ್ರಿವೇಂಡ್ರಮ್ ಗೆ ಕೇವಲ ನಲವತ್ತು ನಿಮಿಷದಲ್ಲಿ‌ ತಂದಿಳಿಸಿಯೇ ಬಿಟ್ಟರು. ಕಡಿಮೆ ದೂರದ ಪ್ರಯಾಣ ನನ್ನದಾಗಿದ್ದರಿಂದ ವಿಮಾನವನ್ನು ಹೆಚ್ಚು ಹೊತ್ತು ಎಂಜಾಯ್ ಮಾಡಲು ಆಗಲಿಲ್ಲ. ವಿಮಾನದ ಇ ವೇಗ ನೋಡಿದಾಗ ಪ್ರಧಾನಿ ಮೋದಿಯವರು ನಮ್ಮ ತುಮಕೂರು-ಬೆಂಗಳೂರು ನಡುವಿನ‌ ಪ್ರಯಾಣದಷ್ಟೆ ವಿದೇಶಗಳನ್ನು ಸುತ್ತುತ್ತಾರಲ್ಲ.

ಅದರ ರಹಸ್ಯ ಈ ವಿಮಾನ ವೇಗ ನೋಡಿದಾಗ ತಿಳಿಯಿತು. ಆಶ್ಚರ್ಯ ಎಂದರೆ, ವಿಮಾನ ಮಾರ್ಗ ಮಧ್ಯೆ ಬಸ್ಸಿನವರ ಥರಹ ಯಾವ ಡಾಬಾಗೂ ಊಟಕ್ಕೆ ನಿಲ್ಲಿಸಲಿಲ್ಲ..ಹ…ಹ..ಹ..
ಅಂತೂ ನನ್ನ ವಿಮಾನ ಆಸೆ ಪೂರೈಸಿಕೊಂಡು ಹೆಂಗೂ ಬಂದಿರುವೆ ಎಂದೇಳಿ ತ್ರಿವೇಂಡ್ರಮ್ ಮತ್ತು ಸುತ್ತ ಮುತ್ತಲಿನ‌ ಪ್ರವಾಸ ಸ್ಥಳ ವೀಕ್ಷೀಸಿ ಅದೇ ದಿ‌ನ ರಾತ್ರಿ ಅಲ್ಲಿಂದ ವೋಲ್ವೋ ಬಸ್ಸು ಹಿಡಿದು ಸುದೀರ್ಘ 13 ಗಂಟೆಗಳ ಪ್ರಯಾಣದೊಂದಿಗೆ ಮೈಸೂರು ತಲುಪಿ ಅಲ್ಲಿಂ ನಮ್ಮೂರು ಗುಬ್ಬಿ ತಾಲ್ಲೂಕಿನ‌ ಮಠಗ್ರಾಮಕ್ಕೆ ಸೇರುವಷ್ಟರಲ್ಲಿ‌ ಆಯಾಸವಾಗಿ ವಿಮಾನ‌ ಪ್ರಯಾಣ ಎಷ್ಟು ವೇಗ ಮತ್ತು ಸಲೀಸು ಎನಿಸಿತ್ತು. ನನ್ನ ಮೊದಲ‌ ವಿಮಾನಯಾನವು ಒಂದು ರೋಮಾಂಚನವೇ ಸರಿ‌.

ಲೇಖಕರು
ಲಕ್ಷ್ಮೀಕಾಂತರಾಜು ಎಂಜಿ
ಮಠಗ್ರಾಮ.
ತಾಳೆಕೊಪ್ಪ ಅಂಚೆ ಗುಬ್ಬಿ‌ ತಾಲ್ಲೂಕು
9844777110

ಕುಣಿಗಲ್ ಬಂದ್: ಬುದ್ಧಿ ಕಲಿಯುವವರೇ ಜನಪ್ರತಿನಿಧಿಗಳು?

ತುಮಕೂರು: ನಾಗಮಂಗಲಕ್ಕೆ ನೀರು ತೆಗೆದುಕೊಂಡು ಹುನ್ನಾರದ ವಿರುದ್ಧ ಕುಣಿಗಲ್ ಜನರು, ಜನಪ್ರತಿನಿಧಿಗಳು, ವಿವಿ ಧ ಸಂಘ ಸಂಸ್ಥೆಗಳು, ವಕೀಲರು ಬುಧವಾರ ಕುಣಿಗಲ್ ಬಂದ್ ನಲ್ಲಿ ತೋರಿದ ಒಗ್ಗಟ್ಟು, ಶಕ್ತಿ ಪ್ರದರ್ಶನ, ಕೋಪ ಜಿಲ್ಲೆಯ ಶಾಸಕರು, ಸಂಸದರುಗಳಿಗೆ ಕಣ್ತೆರೆಸುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಕುಣಿಗಲ್ ತಾಲ್ಲೂಕಿನ ಜನರ ಭಾವನೆಗಳಿಗೆ ಬೆಲೆ ನೀಡಬೇಕು.

ಮಂಡ್ಯ, ರಾಮನಗರ ಜಿಲ್ಲೆಗಳಿಗೆ ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ ಹೇಮಾವತಿ ನೀರನ್ನು ತೆಗೆದುಕೊಂಡು ಹೋಗುವ ಹುನ್ನಾರ ಮೊದಲಿನಿಂದಲೂ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಇದಕ್ಕೆ ಜಿಲ್ಲೆಯಲ್ಲಿನ ಒಡಕಿನ ರಾಜಕಾರಣ ಸ್ವಲ್ಪ ಮಟ್ಟಿಗೆ ಸಹಾಯ ಮಾಡಿದೆ ಎಂದು ಹೇಳಲೇಬೇಕಾಗುತ್ತದೆ.

ತುಮಕೂರು ಹೇಮಾವತಿ ನಾಲೆ, ನಾಗಮಂಗಲ ಹೇಮಾವತಿ ನಾಲೆ ಸೇರ 24.5 ಟಿಎಂಸಿ ಅಡಿ ಹೇಮಾವತಿ ನೀರನ್ನು ಜಿಲ್ಲೆಗೆ ಹಂಚಿಕೆ ಮಾಡಲಾಗಿದೆ. ಆದರೆ ಈ ಎರಡೂ ನಾಲೆಗಳಲ್ಲಿ ತುಮಕೂರು ನಾಲೆಗೆ ಎಷ್ಟು ನೀರು ಹಂಚಿಕೆ ಮಾಡಲಾಗಿದೆ ಎಂಬುದನ್ನು ಎಲ್ಲೂ ಸ್ಪಷ್ಟವಾಗಿ ಹೇಳಿಲ್ಲ.

ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರು ಸರಿಯಾಗಿ ಹರಿಯುತ್ತಿಲ್ಲ ಎಂಬುದನ್ನು ಯಾರೂ ಬೇಕಾದರೂ ಹೇಳಬಲ್ಲರು. ತುಮಕೂರು ಜಿಲ್ಲೆಯ ನೀರಿನ ಮೇಲೆ ಕಣ್ಣು ಹಾಕಿದವರೇ ಹೆಚ್ಚು, ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ದಾಬಸಪೇಟೆ ಕೈಗಾರಿಕಾ ಪ್ರದೇಶಕ್ಕೆ ನೀರು ಹಂಚಿಕೆ ಮಾಡಲಾಗಿದೆ.

ದಾಬಸಪೇಟೆ ಕೈಗಾರಿಕೆಗಳಿಗೆ ತುಮಕೂರು ನೀರಿನ ಹಂಚಿಕೆಯ ಸರ್ಕಾರದ ಆದೇಶವನ್ನು ಈಗಿನ ಬಿಜೆಪಿ ಸರ್ಕಾರ ವಾಪಸ್ ಪಡೆಯುವಂತೆ ಜಿಲ್ಲೆಯ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಶಾಸಕರು ಹಕ್ಕೊತ್ತಾಯ ಮಂಡಿಸಬೇಕು. ಇದಕ್ಕೆ ಬಿಜೆಪಿ ಶಾಸಕರು ನೇತೃತ್ವ ವಹಿಸಬೇಕು.

ಇನ್ನೂ ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲಕ್ಕೆ ನೀರು ತೆಗೆದುಕೊಂಡು ಹೋಗುವ ವಿಷಯುವನ್ನು ಸೂಕ್ಷ್ಮವಾಗಿ ಗಮನಿಸಬೇಕು. ತಾಲ್ಲೂಕಿನ ರೈತರ ಅಹವಾಲುಗಳಿಗೆ ಸರ್ಕಾರ ಕಿವಿಯಾಗಬೇಕು. ಅಲ್ಲಿನ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಬಗ್ಗೆ ಜಿಲ್ಲೆಯ ಎಲ್ಲ ಪಕ್ಷಗಳು ಶಾಸಕರು, ಸಂಸದರು ತುಟಿ ಬಿಚ್ಚಿ ಮಾತನಾಡಬೇಕಾಗಿದೆ.

ಜಿಲ್ಲೆಯಲ್ಲಿ ಎರಡು ದಶಕಗಳಿಂದ ನೀರಿನ ರಾಜಕಾರಣ ನಡೆಯುತ್ತಿದೆ. ನೀರಿನ ಹೆಸರಿನಲ್ಲಿ ರಾಜಕಾರಣ ಮಾಡುವುದು ತಪ್ಪಬೇಕು.

ರಾಜಕಾರಣಕ್ಕಿಂತಲೂ ಜಿಲ್ಲೆಯ ರೈತರ ಕಷ್ಟಗಳನ್ನು ಬಗೆಹರಿಸುವತ್ತ ಗಮನ ಕೊಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ,
ಜಿಲ್ಲೆಗೆ ಹೇಮಾವತಿ, ಭದ್ರಾ, ಭದ್ರಾ ಮೇಲ್ದಂಡೆ, ಎತ್ತಿನಹೊಳೆಯಿಂದ ಮತ್ತಷ್ಟು ನೀರನ್ನು ತರುವ ಕಡೆಗೆ ಚಿಂತನ ಮಂಥನ ನಡೆಯಬೇಕು.

ಹೇಮಾವತಿಯಿಂದ ಕೈಗಾರಿಕೆಗೆ ಹಂಚಿಕೆಯಾಗಿರುವ ನೀರನ್ನು ಕಡಿತಗೊಳಿಸಿ ಅದನ್ನು ರೈತರಿಗೆ ನೀಡುವ ಕಡೆಯೂ ಗಮನ ಹರಿಸಬೇಕು. ತುಮಕೂರು ನಗರ, ಶಿರಾ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕೊಳಚೆ ನೀರನ್ನು ಸಂಸ್ಕರಿಸಿ ಕೈಗಾರಿಕೆಗಳಿಗೆ ನೀಡುವ ಸಂಬಂಧ ಗಟ್ಟಿ ದ್ವನಿ ಮೊಳಗಬೇಕಾಗಿದೆ.

ಕುಣಿಗಲ್ ಬಂದ್ ಗೆ ಬಾರಿ ಬೆಂಬಲ

ಈ ಮೆರವಣಿಗೆಯಲ್ಲಿ ಆ ರೈತ ಸಂಘದ ಮುಖಂಡರು, MLA, ಮಾಜಿ MLA, ವಕೀಲ ಸಂಘದವರು, ಶ್ರೀಶಕ್ತಿ ಸಂಘದವರು, ಸಾರ್ವಜನಿಕರು ಎಲ್ಲರೂ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ .

ಸಭೆಯಲ್ಲಿ ಮಾಜಿ ಎಂಎಲ್ಎ ನಾಗರಾಜಯ್ಯ, ರಾಮಸ್ವಾಮಿಗೌಡ , ಮಾಜಿ ಎಂಪಿ ಮುದ್ದಹನುಮೆಗೌಡ, ರೈತ ಸಂಘದ ಅಧ್ಯಕ್ಷ ಆನಂದ್ ಪಟೇಲ್, ಹಾಲಿ ಶಾಸಕರು , ವಕೀಲರು ವಿದ್ಯಾಸಂಘ ಸಂಸ್ಥೆಗಳು ಭಾಗವಹಿಸಿದ್ದರು .

ಕೊರಟಗೆರೆಯಲ್ಲಿ ಭೀಕರ ಅಪಘಾತ

ಖಾಸಗಿ ಬಸ್ ವೊಂದು ಪಲ್ಟಿಯಾಗಿ ಹತ್ತು ಮಂದಿ ಸಾವನ್ನಪ್ಪಿರುವ ಘಟನೆ ಕೊರಟಗೆರೆ ತಾಲೂಕು ಜಟ್ಟಿ ಅಗ್ರಹಾರದ ಸಮೀಪ ಸಂಭವಿಸಿದೆ.

ವಿಡಿಯೋಗೆ ಇಲ್ಲಿ ಕ್ಲಿಕ್ ಮಾಡಿ

ಪಾವಗಡದಿಂದ 6 ಗಂಟೆಗೆ ಹೊರಡುವ ವಿಜಯಲಕ್ಷ್ಮಿ ಬಸ್ ತುಮಕೂರಿಗೆ ಬರುವಾಗ ಮಾರ್ಗ ಮಧ್ಯೆ ಪಲ್ಟಿಯಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

ಅತಿ ವೇಗವಾಗಿ ಬರುತ್ತಿದ್ದುದೇ ದುರಂತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ವಿಡಿಯೋಗೆ ಇಲ್ಲಿ ಕ್ಲಿಕ್ ಮಾಡಿ

ಪ್ರವಾಸಿ ಮಂದಿರದಲ್ಲಿ ಕುಣಿಗಲ್ ಬಂದ್ ಗೆ ಸಜ್ಜಾಗುತ್ತಿರುವ ಜನಸ್ತೋಮ.

ಮಾರ್ಕೋನಿ ಕುಣಿಗಲ್

ತಾಲ್ಲೂಕಿನ ಮಾರ್ಕೋನಿ ಜಲಾಶಯದಲ್ಲಿ ಅಲ್ಲಿ ರೈತರಿಗೆ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯದಲ್ಲಿ ಅಲ್ಲಿನ ರೈತರಿಗೆ ಅಚ್ಚುಕಟ್ಟುದಾರರಿಗೆ ನೀರು ಕೊಳದಲ್ಲಿ ಬೆಳೆ ಬೆಳೆಯಲು ನೀರು ಕೊಡದೆ ಇವತ್ತು ನಾಗಮಂಗಲ ತಾಲೂಕಿಗೆ ಅಲ್ಲಿಂದ ಕುಡಿಯುವ ನೀರನ್ನು ಡಂಪ್ ಮಾಡ್ತಾ ಇದ್ದರೆ ಈ ಕಾಮಗಾರಿ ಸುಮಾರು ಮೂರು ವರ್ಷದಿಂದಲೇ ನಡೆಯುತ್ತಾ ಬಂದಿದೆ.

ಆವಾಗ ಹೋರಾಟ ಮಾಡುವುದೇ ಬಿಟ್ಟು ಕಾಮಗಾರಿ ಮುಗಿದ ಮಳೆ ನೀರು ಸಪ್ಲೆ ಟೈಮ್ನಲ್ಲಿ ಹೋರಾಟ ಮಾಡುತ್ತಿದ್ದಾರೆ.ಅದನ್ನು ಆಗಲೇ ತಡೆಯದಿದ್ದರೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ .

ಮಲಗುವ ಹಾಸಿಗೆ‌‌ ಹೀಗಿರಲಿ

0

ಜೀವನದ ಮೂರು ಭಾಗವನ್ನು ನಾವು ಹಾಸಿಗೆಯಲ್ಲೆ ಕಳೆಯುತ್ತೇವೆ. ಇಂತ ಹಾಸಿಗೆ ಹೇಗಿರಬೇಕು ಎಂಬುದನ್ನೇ ನಾವು ಯೋಚಿಸುವುದಿಲ್ಲ.

ಕೆಲಸ ಮಾಡುವವರು ಎಲ್ಲಿ ಮಲಗಿದರೂ ಅಲ್ಲಿಯೇ ನಿದ್ದೆ ಮಾಡುತ್ತಾರೆ ಎನ್ನುತ್ತಾರೆ ಕೆಲವರು. ನಾವು ಮಲಗುವ ಹಾಸಿಗೆಗೂ, ಆರೋಗ್ಯ ಕ್ಕೂ ಸಂಬಂಧ ಇದೆ ಎನ್ನುತ್ತಾರೆ ನರರೋಗ ತಜ್ಞರು ಹಾಗೂ ಮೂಳೆ ತಜ್ಞರು.

ಹಾಸಿಗೆ ಸರಿ ಇಲ್ಲದಿದ್ದರೆ ಬೆನ್ನು ನೋವು, ಮಂಡಿ ನೋವು, ಮೈಕೈ ನೋವು ಬರಬಹುದು.ಮಕ್ಕಳಿಗೆ ಅಲರ್ಜಿ,‌ಆಸ್ತಮಾವು ತಗುಲಬಹುದು.

ಹಾಸಿಗೆ‌‌ ಯಾವುದಿರಬೇಕು, ಹೇಗಿರಬೇಕು ಎಂದು ಕೆಲವರು ಚಿಂತಿಸುವುದೇ ಇಲ್ಲ. ಹಾಸಿಗೆ ಗೆ ಬಂಡವಾಳ ಹೂಡುವಾಗ ಎಚ್ಚರಿಕೆಯಿಂದ ಇರಬೇಕು. ಬಹಳ ಜೋಪಾನವಾಗಿ ಖರೀದಿಸಬೇಕು.

ಈಗ 3 ಲಕ್ಷ ರೂಪಾಯಿ ವರೆಗೂ ಹಾಸಿಗೆ ಗಳಿವೆ. ಹಾಸಿಗೆ ಇದ್ದಷ್ಟು ಕಾಲು‌‌ ಚಾಚಬೇಕು ಎಂಬ ಗಾದೆ ಮಾತೇ ಇದೆ. ಅದೇ ರೀತಿ ನಮ್ಮಲ್ಲಿ ಎಷ್ಟು ಹಣ ಇದೆಯೋ ಅಷ್ಟರಲ್ಲಿ ಉತ್ತಮ ಹಾಸಿಗೆ ಖರೀದಿಸುವ ಜಾಣ್ಮೆ ತೋರಬೇಕು.

ಯುರೋಪ್ ನಲ್ಲಿ ಹಾಸಿಗೆ ಕಲ್ಪನೆ ಮೊದಲಿಗೆ ಮೂಡಿತು. ಅಮೆರಿಕದಲ್ಲಿ‌ ಹಾಸಿಗೆಗೆ ಹೆಚ್ಚಿನ ಮಹತ್ವ ಇದೆ. ಅಲ್ಲಿ ಹಾಸಿಗೆಗೆ ಇಪ್ಪತ್ತರಿಂದ ಇಪ್ಪತ್ತೈದು ವರ್ಷಗಳ ವರೆಗೂ ವಾರಂಟಿ ನೀಡುತ್ತವೆ ಅಲ್ಲಿನ ಹಾಸಿಗೆ ಕಂಪನಿಗಳು.

ಪ್ರಪಂಚದಲ್ಲಿ ಹಾಸಿಗೆ ಉದ್ಯಮ ಹುಲುಸಾಗಿ ಬೆಳೆಯುತ್ತಿದೆ. ಎಲ್ಲ ದೇಶಗಳಲ್ಲೂ ಉತ್ತಮವಾಗಿದೆ. ಹಲವು ದೇಶಗಳು ಹಾಸಿಗೆಗಳನ್ನು ಅಮದು ಮಾಡಿಕೊಳ್ಳುತ್ತಿವೆ.

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ‌‌ ಹಾಸಿಗೆ ಉದ್ಯಮ 2022ರ ವೇಳೆಗೆ 2.22 ಬಿಲಿಯನ್ ಡಾಲರ್‌ ಮುಟ್ಟಲಿದೆ.

ಭಾರತದಲ್ಲಿ ಹತ್ತಿ, ನಾರಿನ ಹಾಸಿಗೆ ಪುರಾತನ ಕಾಲದಿಂದ ಬಳಕೆಯಲ್ಲಿದೆ. ಹತ್ತಿ, ನಾರಿನ ಹಾಸಿಗೆ ಆರೋಗ್ಯಕ್ಕೆ ಉತ್ತಮ ಎಂಬ ನಂಬಿಕೆ ಇದೆ. ಆದರೆ ಹತ್ತಿ, ನಾರಿನ ಹಾಸಿಗೆಗಳ ಬಾಳಿಕೆ ಅವಧಿ ತೀರಾ ಕಡಿಮೆ. ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಬೆನ್ನು ನೋವಿಗೆ ಕಾರಣವಾಗಲಿವೆ.
ಹತ್ತಿ ಹಾಸಿಗೆಗೆ ಫಂಗಸ್ ಹೆಚ್ಚುವ ಸಾಧ್ಯತೆ ಹೆಚ್ಚು. ದೂಳು ಸೇರಿಕೊಂಡು ಅಲರ್ಜಿಗೂ ಕಾರಣವಾಗಲಿದೆ. ಬಹುತೇಕರ ಬೆನ್ನು ನೋವಿಗೆ ಹತ್ತಿ ಹಾಸಿಗೆ ಸರಿಯಾದ ನಿರ್ವಹಣೆ ಕೊರತೆ ಕಾರಣ.

ನಾರಿನ ಹಾಸಿಗೆ ಸರಿಯಾಗಿ ನಿರ್ವಹಣೆ ಮಾಡದಿದ್ದರೆ ರೋಗಕ್ಕೂ ರಹದಾರಿ ಆಗಬಹುದು.ಮಳೆಗಾಲದಲ್ಲಿ ಹತ್ತಿ ಹಾಸಿಗೆಯನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು. ಬಿಸಿಲಿನಲ್ಲಿ ಒಣಗಿಸಬೇಕು. ಎರಡು ವರ್ಷಕ್ಕೊಮ್ಮೆಯಾದರೂ ಬಿಚ್ಚಿ ಹೊಲಿಸಬೇಕು.

ನವ ಮಾದರಿ ಹಾಸಿಗೆಗಳು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು
ರಬ್ಬರ್ ಸಿಂಥಟಿಕ್ ಹಾಸಿಗೆಗಳು, ಫೋಮ್ ಹಾಸಿಗೆಗಳು, ಸ್ಪ್ರಿಂಗ್ ಹಾಸಿಗೆಗಳು ಬೆನ್ನಿನ ಆರೋಗ್ಯದ ಕಾರಣದಿಂದ ಒಳ್ಳೆಯದು ಎನ್ನುತ್ತಾರೆ ವೈದ್ಯರು.

ಭಾರತದಲ್ಲಿ ಕರ್ನಾಲ್, ಡ್ಯೂಪ್ಲೆಕ್ಸ್ ಮತ್ತಿತರ ಕಂಪನಿ ಗಳ ಹಾಸಿಗೆಗಳು ಗಮನ ಸೆಳೆಯುತ್ತಿವೆ.
ಏನೇ ಆದರೂ ಹಾಸಿಗೆ ಕೊಳ್ಳುವ ಮುನ್ನ ಯೋಚಿಸಿ ಕೊಳ್ಳುವುದು ಒಳ್ಳೆಯದು.

ಅಗ್ರಹಾರ ಬಳಿ ಬೀಕರ ಅಪಘಾತ…

0

ಅಗ್ರಹಾರ ಬಳಿ ಬೀಕರ ಅಪಘಾತ… 8 ಕ್ಕೂ ಹೆಚ್ಚು ಜನರು ಸ್ಥಳದಲ್ಲೆ ಸಾವು. ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ… ಬಸ್ ಕೆಳಗೆ ಇನ್ನಷ್ಟು ಜನರು ಸಿಲುಕಿರುವ ಶಂಕೆ.. ಈಗಷ್ಟೆ ನಡೆದ ಘಟನೆ‌. ಪಾವಗಡದಿಂದ ತುಮಕೂರಿಗೆ ತೆರಳುತ್ತಿದ್ದ ವಿಜಯಲಕ್ಷ್ಮಿ ಖಾಸಗಿ ಬಸ್

ಇಂದು ಕುಣಿಗಲ್ ಬಂದ್

ಮಾರ್ಕೋನಹಳ್ಳಿ ಜಲಾಶಯದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿರುವುದನ್ನು ಖಂಡಿಸಿ ಅಕ್ಟೋಬರ್ 30ರಂದು ಕುಣಿಗಲ್ ಬಂದ್ ಗೆ ಕರೆ ನೀಡಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ನಡೆಯಲಿರುವ ಬಂದ್ ಗೆ ಪಕ್ಷತೀತವಾಗಿ ಬೆಂಬಲ ವ್ಯಕ್ತವಾಗಿದೆ.ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲಕ್ಕೆ ನೀರು ತೆಗೆದುಕೊಂಡು ಹೋಗಲಾಗುತ್ತಿದೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಡ್ಯಾಂನ ಕೋಡಿ ಭಾಗದಲ್ಲಿರುವ ಸೈಫನ್ ಸ್ಥಳದಲ್ಲಿ 80 ಅಡಿ ಜಾಕ್ ವೆಲ್ ನಿರ್ಮಿಸಿ ಪಂಪ್ ಮಾಡುವ ಕಾಮಗಾರಿಗೆ ನಮ್ಮ ವಿರೋಧವಿದೆ. 80 ಅಡಿ ಆಳದಲ್ಲಿ ಜಾಕ್ ವೆಲ್ ನಿರ್ಮಿಸಿದರೆ ಡ್ಯಾಂಗೆ ಧಕ್ಕೆಯಾಗಲಿದೆ.ಇದರ ಜೊತೆಗೆ ರಾಷ್ಟ್ರೀಯ ಹಸಿರು ಪೀಠದ ಆದೇಶವನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ. ಡ್ಯಾಂ ಹಿನ್ನೀರಿನ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಮಾಡಬಾರದು ಎಂಬ ನಿಯಮವಿದೆ. ಇದನ್ನು ಉಲ್ಲಂಘಿಸಿ ಡ್ಯಾಂ ಒಳಗೆ ಕಾಮಗಾರಿ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಅನಂದ್ ಪಟೇಲ್ ಕಿಡಿ ಕಾರಿದ್ದಾರೆ.ಮಾರ್ಕೋನಹಳ್ಳಿ ಜಲಾಶಯವನ್ನು ನೀರಾವರಿ ಉಪಯೋಗಕ್ಕೆಂದೇ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಯಾವುದೇ ನದಿಗಳ ಸಂಪರ್ಕವೂ ಇಲ್ಲ. ಯಾವುದೇ ಅಲೋಕೇಶನ್ ಕೂಡ ಇಲ್ಲ. ಕುಣಿಗಲ್ ನ ಅಮೃತೂರು, ಎಡೆಯೂರು ಮತ್ತು ಹುಲಿಯೂರುದುರ್ಗ ಮತ್ತು ನಾಗಮಂಗಲದ ಕೆಲವು ಭಾಗಗಳಲ್ಲಿ ಕೈಗೊಂಡಿರುವ ನೀರಾವರಿಗೆ ಈ ಡ್ಯಾಂನಿಂದ ನೀರುಣಿಸಲಾಗುತ್ತಿತ್ತು. ಹೀಗಾಗಿ ಈಗಿನ ಅವೈಜ್ಞಾನಿಕ ಕಾಮಗಾರಿಯಿಂದ ರೈತರಿಗೆ ತೊಂದರೆಯಾಗಲಿದೆ ಎಂದರು.ನಾಗಮಂಗಲಕ್ಕೆ ಶ್ರವಣಬೆಳಗೊಳ ಬ್ಯಾಂಕ್ ಕೆನಾಲ್, ನಾಗಮಂಗಲ ಬ್ಯಾಂಕ್ ಕೆನಾಲ್ ನಿಂದ ನೀರು ಪಡೆಯಲಾಗುತ್ತಿದೆ. ಹೇಮಾವತಿಯಿಂದಲೂ ಮತ್ತಷ್ಟು ನೀರು ಪಡೆಯಲು ಅವಕಾಶವಿದೆ. ಆದರೆ ಮಾರ್ಕೋನಹಳ್ಳಿ ಡ್ಯಾನಿಂದ ಅವೈಜ್ಞಾನಿಕ ಕಾಮಗಾರಿ ಮೂಲಕ ನೀರು ತೆಗೆದುಕೊಂಡು ಹೋಗುವುದು ಸರಿಯಲ್ಲ ಎಂದು ಹೇಳಿದರು.

ಕೆರೆ ಮಾಯ…! ನಾಳೆ ನಾವು ಮಾಯ..!

ತುಳಸೀತನಯ

ತುಮಕೂರು:
ಇತ್ತೀಚಿನ ದಿನಗಳಲ್ಲಿ ಸಂಘ ಸಂಸ್ಥೆಗಳು ಸೇರಿದಂತೆ ಸರ್ಕಾರ ಜಲಸಂರಕ್ಷಣೆ ಮಾಡಬೇಕು ಎಂದು ಬೊಬ್ಬೆ ಹೊಡೆಯುತ್ತಿದೆ. ಇದಕ್ಕೆಂದೆ ಸಾಕಷ್ಟು ಹಣ ಕೂಡ ಪ್ರತೀ ವರ್ಷ ಖರ್ಚು ಮಾಡಲಾಗುತ್ತಿದೆ. ಆದರೆ ವಾಸ್ತವದಲ್ಲಿ ಮಾತ್ರ ಮಾಡಿದ ಉದ್ದೇಶ ಸಫಲವಾಗಿರುವುದಿಲ್ಲ. ಇದಕ್ಕೊಂದು ಜೀವಂತ ಉದಾಹರಣೆ ಜಿಲ್ಲೆ ಹಾಗೂ ತಾಲ್ಲೂಕು ಗಡಿಭಾಗದ ಅಕ್ಕಾಜಿಹಳ್ಳಿ ಕೆರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಫ್ತಿಗೆ ಬರುವ ಅಕ್ಕಾಜಿಹಳ್ಳಿ, ಗಡಿ ಗ್ರಾಮ. ಗ್ರಾಮದ ಸಮೀಪ ದೂರದಲ್ಲೆ ಚಿಕ್ಕಬಳ್ಳಾಪುರ, ಗೌರಿಬಿದನೂರು ತಾಲ್ಲೂಕಿನ ಗಡಿ ಇದೆ. ಅಕ್ಕಾಜಿಹಳ್ಳಿ ಗಡಿಗ್ರಾಮವಾಗಿರುವುದರಿಂದಲೋ ಏನೋ ಇಂದಿಗೂ ಯಾವುದೇ ಅಭಿವೃದ್ಧಿ ಕಾಣದೆ ಶಾಪಗ್ರಸ್ಥವಾಗಿಯೇ ಉಳಿದಿದೆ. ಗ್ರಾಮಕ್ಕೆ ಹೊಂದಿಕೊಂಡಂತೆ ನೀರಾವರಿ ಉದ್ದೇಶಕ್ಕಾಗಿ 1901ರಲ್ಲಿ ಕೆರೆ ನಿರ್ಮಾಣ ಮಾಡಲಾಗಿದೆ. ಪಂಚಾಯತ್ ರಾಜ್ ಇಲಾಖೆಗೆ ಒಳಪಟ್ಟಿರುವ, ನೂರು ವರ್ಷ ಪೂರೈಸಿರುವ ಕೆರೆ ನಿರ್ವಹಣೆ, ಪುನಶ್ಚೇತನ ಕಾಣದೆ ಇಂದು ಅಳಿವಿನಂಚಿಗೆ ತಲುಪಿದೆ. ಸುಮಾರು 12 ಎಕ್ಟೇರ್ ವಿಸ್ತೀರ್ಣ ಹೊಂದಿರುವ ಕೆರೆ ಭೂಗಳರ ಒತ್ತುವರಿಗೆ ಬಲಿಯಾಗಿದೆ. ಏರಿ ಮೇಲೆ ನಿಂತು ಒಂದು ಸಾರಿ ಕಣ್ಣಾಯಿಸಿದರೆ 12 ಎಕ್ಟೇರ್ ವಿಸ್ತೀರ್ಣ ಇರಬೇಕಿದ್ದ ಕೆರೆ ಒಂದಿಷ್ಟು ಪ್ರದೇಶ ಮಾತ್ರ ಕಣ್ಣಿಗೆ ಬೀಳುತ್ತದೆ. 4.8 ಎಂಟಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಕೆರೆಯ ತುಂಬೆಲ್ಲಾ ಬೃಹದಾಕಾರದ ಬೇಲಿ ಬೆಳೆದು ನಿಂತಿದೆ. ಈ ಹಿಂದೆ ಕೆರೆ ತುಂಬಿದಾಗ ಕೆರೆಯ ಹಿಂಭಾಗ ಸುಮಾರು 10 ಎಕ್ಟೇರಿಗೂ ಹೆಚ್ಚು ಅಚ್ಚುಕಟ್ಟು ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿತ್ತು. ಮಳೆ, ಬೇಸಿಗೆಗಾಲ ಎನ್ನದೇ ಸದಾ ಕಾಲ ರೈತರು ಈ ಭಾಗದಲ್ಲಿ ವ್ಯವಸಾಯ ಮಾಡುತ್ತಿದ್ದರು. ಭತ್ತದ ಗದ್ದೆ, ಜೋಳದ ಬೆಳೆಗಳು ಕಣ್ಣುಕೋರೈಸುವಂತೆ ಕಾಣುತ್ತಿದ್ದವು. ಆದರೀಗ ಕೆರೆಗೆ ನೀರಿಲ್ಲದೆ ಇಡೀ ಅಚ್ಚುಕಟ್ಟು ಪ್ರದೇಶ ಬರಡು ಭೂಮಿಯಂತಾಗಿದೆ.


ಕೆರೆ ಈ ರೀತಿ ದುಸ್ಥಿತಿ ತಲುಪಲು ನಿರ್ವಹಣೆ ಮಾಡದಿರುವುದೇ ಕಾರಣ ಎಂದು ಈ ಭಾಗದ ರೈತರು ಆರೋಪಿಸುತ್ತಾರೆ. ಆಗೋ, ಇಗೋ ಎಂಬಂತೆ ಯಾವಾಗಲೋ ಒಂದು ವರ್ಷ ಕೆರೆ ನಿರ್ವಹಣೆ ಹೆಸರಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿ ಬಿಲ್ ಮಾಡಿಕೊಂಡಿರುವುದು ಬಿಟ್ಟರೆ ಶಾಶ್ವತವಾದ ಒಂದೂ ಕೆಲಸ ಇಲ್ಲಿವರೆಗೆ ಮಾಡಿಲ್ಲ. ಕಳೆದ ಏಳೆಂಟು ವರ್ಷದಿಂದ ಯಾವುದೇ ನಿರ್ವಹಣೆ ಇಲ್ಲದಿದ್ದ ಕಾರಣಕ್ಕೆ ಕೆರೆ ಏರಿಯ ಮೇಲೆ ಬೃಹದಾಕಾರದ ಬೇಲಿಗಳು ಬೆಳಿದು ನಿಂತಿದ್ದವು. ಅವುಗಳನ್ನು ಈ ಬಾರಿ ಬೇಸಿಗೆಯಲ್ಲಿ ಕತ್ತರಿಸುವ ಕೆಲಸ ಹಾಗೂ ಏರಿಗೆ ಮಣ್ಣು ಹಾಕುವ ದೃಷ್ಟಿಯಿಂದ ರೂ. 1 ಲಕ್ಷ ಪಂಚಾಯತ್ ರಾಜ್ ಇಲಾಖೆ ಬಿಡುಗಡೆ ಮಾಡಿತ್ತು. ಅದರಂತೆ ಕೆಲಸ ಕಾಟಾಚಾರಕ್ಕೆ ಮಾಡಿ ಮುಗಿಸಿ ಬಿಲ್ ಮಾಡಿಕೊಳ್ಳಲಾಗಿದೆಯೇ ಹೊರತು, ಕಾಮಗಾರಿ ಒಂದೊಮ್ಮೆ ಈಗ ವೀಕ್ಷಿಸಿದವರಿಗೆ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇಲ್ಲಿ ಏನು ಕೆಲಸ ಮಾಡಿದ್ದಾರೆ ಎಂಬುದಕ್ಕೆ ಇಲ್ಲಿ ಈಗ ಯಾವುದೇ ಕುರುಹುಗಳು ಸಿಗುವುದಿಲ್ಲ. ಅಷ್ಟರ ಮಟ್ಟಿಗೆ ಕಳಪೆ ಕೆಲಸ ಮಾಡಿ ಮುಗಿಸಿದ್ದಾರೆ. ಅವೈಜ್ಞಾನಿಕವಾಗಿ ಏರಿಗೆ ಮಣ್ಣು ಹಾಕಿ ತೇಪೆ ಹಾಕಲಾಗಿದ್ದು, ಏರಿಯಮೇಲೆ ನೀರು ನಿಲ್ಲುತ್ತಿದೆ. ಜೊತೆಗೆ ಹಾಕಿರುವ ಮಣ್ಣು ಅಲ್ಲಲ್ಲಿ ಮಳೆ ನೀರಿಗೆ ಕೊರೆದು ಹೋಗಿದೆ. ಬೃಹದಾಕಾರದ ಬೇಲಿ ಸರಿಯಾಗಿ ತೆಗೆಯದ ಕಾರಣ ಮೂರೇ ತಿಂಗಳಲ್ಲಿ ಯಥಾ ಸ್ಥಿತಿಗೆ ಬೇಲಿ ಬೆಳೆದು ನಿಂತಿದೆ. ಇದರಿಂದಾಗಿ ಅಷ್ಟೋ ಇಷ್ಟೋ ಓಡಾಡಲು ಸುಗಮವಾಗಿದ್ದ ಏರಿ ಮೇಲಿನ ರಸ್ತೆ ಈಗ ಓಡಾಡಲೂ ಆಗದ ಸ್ಥಿತಿಗೆ ತಲುಪಿದೆ. ಇದೇ ಏರಿ ಮೇಲೆ ಅಕ್ಕಾಜಿಹಳ್ಳಿಯಿಂದ ಅವದಾರನಹಳ್ಳಿ, ದೊಡ್ಡಪಾಳ್ಯಕ್ಕೆ ಪ್ರತಿನಿತ್ಯ ಓಡಾಡುವವರು ಇದ್ದಾರೆ. ಏರಿಯ ಈ ದುಸ್ಥಿಯಿಂದ ಈಗ ದಾರಿಹೋಕರು ಪರದಾಡುವಂತಾಗಿದೆ ಎಂಬುದು ಈ ಭಾಗದ ಜನರ ಆಂಬೋಣ.
ಇನ್ನೂ ಕೆರೆಗೆ ನೀರು ತುಂಬುವ ಮೂಲಗಳೂ ಕೂಡ ಒತ್ತುವರಿಗೆ ಬಲಿಯಾಗಿರುವುದು ಒಂದೆಡೆಯಾದರೆ, ಇತ್ತೀಚೆಗೆ ಉತ್ತಮ ಮಳೆಯಾಗದಿರುವುದು ಕೆರೆ ತುಂಬುತ್ತಿಲ್ಲ. ಜೊತೆಗೆ ಕೆರೆಗೆ ನೀರೊದಗಿಸುವ ಹಳ್ಳಗಳಿಗೆ ಅಡ್ಡಲಾಗಿ ಚಕ್ ಡ್ಯಾಂಗಳ ನಿರ್ಮಾಣ ಕೆರೆ ತುಂಬಲು ತೊಡಕಾಗಿದೆ. ಆದರೆ ಕೆರೆ ಸರಿಯಾದ ರೀತಿಯಲ್ಲಿ ಆಗಿದ್ಹಾಗೆ ಪುನಶ್ಚೇತನ, ನಿರ್ವಹಣೆ ಮಾಡಿದ್ದರೆ ಈ ವರ್ಷ ಹಾಗೂ ಕಳೆದ ಮೂರು ವರ್ಷದ ಹಿಂದೆ ಉತ್ತಮ ಮಳೆಗೆ ಕೆರೆ ತುಂಬುತ್ತಿತ್ತು. ನೀರು ಸಂರಕ್ಷಣೆ ಮಾಡಲು ಸರ್ಕಾರ ಬೊಬ್ಬೆ ಹೊಡೆಯುತ್ತಿವೆ ಹೊರತು ವಾಸ್ತವದ ಚಿತ್ರಣ ಮಾತ್ರ ಬದಲಾಗುತ್ತಿಲ್ಲ. ಅಕ್ಕಾಜಿಹಳ್ಳಿ ಕೆರೆಗೆ ಕೂಗಳತೆ ದೂರದಲ್ಲಿರುವ ಬೊಮ್ಮಲದೇವಿಪುರ ಕೆರೆ ಕೂಡ ನೂರು ವರ್ಷಗಳು ಪೂರೈಸಿದೆಯಾದರೂ ಮೇಲ್ಕಾಣಿಸಿದ ಯಾವುದೇ ಸಮಸ್ಯೆಯಿಂದ ಹೊರತಾಗಿಲ್ಲ. ಏರಿ ಒಂದನ್ನು ಬಿಟ್ಟು ಇಲ್ಲಿ ಕೆರೆ ಇತ್ತೆಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲದಷ್ಟರ ಮಟ್ಟಿಗೆ ಒತ್ತುವರಿಗೆ ಬಲಿಯಾಗಿದೆ.

ಪಂಚಾಯತ್ ರಾಜ್ ಇಲಾಖೆಗೆ ತಾಲ್ಲೂಕಿನಲ್ಲಿ ಒಟ್ಟು 87 ಕರೆಗಳು ಒಳಪಡುತ್ತವೆ. ವರ್ಷಕ್ಕೆ 14 ರಿಂದ 15 ಲಕ್ಷ ಹಣ ಅನುದಾನ ಮಾತ್ರ ನಿರ್ವಹಣೆಗೆಂದು ನೀಡಲಾಗುತ್ತಿದೆ. ಸಮರ್ಪಕ ಅನುದಾನದ ಕೊರತೆಯಿಂದಾಗಿ ಕೆರೆಗಳ ನಿರ್ವಹಣೆ ಕಷ್ಟವಾಗುತ್ತಿದೆ. ಹಾಗಾಗಿ ಬಹಳಷ್ಟು ಕೆರೆಗಳು ನಿರ್ವಹಣೆ, ಪುನಶ್ಚೇತನ ಆಗದೇ ನೀರು ಸಂಗ್ರಹಣೆಯಾಗುತ್ತಿಲ್ಲ. ಪ್ರತೀ ವರ್ಷ ಮಳೆ ಸರಿಯಾಗಿ ಆಗುವುದಿಲ್ಲ. ಅಪರೂಪಕ್ಕೆ ಆಗುವ ಮಳೆ ನೀರು ಕೆರೆ ನಿರ್ವಹಣೆ ಇಲ್ಲದ ಕಾರಣಕ್ಕೆ ಸಂಗ್ರಹವಾಗದೇ ಕೆಲವೊಮ್ಮೆ ಪೋಲಾಗುತ್ತದೆ. ಸರ್ಕಾರ ಇಲಾಖಾ ಕೆರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಲ್ಲಿ ನಿರ್ವಹಣೆ ಸಾಧ್ಯ ಎನ್ನುತ್ತಾರೆ ಪಂಚಾಯತ್ ರಾಜ್ ಇಲಾಖೆ ಎಇಇ ಮಂಜುನಾಥ.

ದೀಪಾವಳಿಗೂ  ಶ್ರೀರಾಮನಿಗೂ  ಇರುವ ನಂಟೇನು?

1

ಲೇಖಕರು

ಕೆ.ಜೆ.ಹರ್ಷಿತ

 ದೀಪಾವಳಿ ಹಬ್ಬ ಯಾವಾಗ ಬರುತ್ತದೆ ಎಂದು ಮಕ್ಕಳು ಕಾಯುತ್ತಿರುತ್ತಾರೆ. ಹಬ್ಬ ಬಂದರೆ ಹೊಸ ಬಟ್ಟೆ ಜೊತೆಗೆ ಇಷ್ಟವಾದ ಪಟಾಕಿ ಸಿಡಿಸಿ ಸಂಭ್ರಮಿಸಬಹುದು ಎಂಬ ಆಸೆ ಮಕ್ಕಳದ್ದು.

ಇಂತಹ ಸಂಭ್ರಮದ ದೀಪಾವಳಿ ಹಬ್ಬದ  ಆಚರಣೆ ಪ್ರಚಲಿತಕ್ಕೆ ಬಂದದ್ದಕ್ಕೆ ಸಾಕಷ್ಟು ಕತೆಗಳಿವೆ.  ಶ್ರೀರಾಮನಿಗೂ ದೀಪಾವಳಿಗೂ ನಂಟಿದೆಯಂತೆ.

ಹೌದು ಕಾರ್ತೀಕ ಮಾಸದ ಕೃಷ್ಣಪಕ್ಷದ ಚತುರ್ದರ್ಶಿ  ಹಿಂದಿನ ದಿನದಿಂದಲೇ ದೀಪಾವಳಿಯು ಆರಂಭವಾಗುತ್ತದೆ. ಶರನ್ನವರಾತ್ರಿ ಆಗಿ ಇಪ್ಪತ್ತೊಂದನೇ ದಿನಕ್ಕೆ ದೀಪಾವಳಿ ಆಚರಿಸಲಾಗುತ್ತದೆ. ಅಸುರ ಸಂಹಾರದ ದ್ಯೋತಕವಾಗಿ  ದೀಪಾವಳಿಯನ್ನು ಆಚರಿಸಲಾಗುತ್ತದೆ.

ಆಯೋದ್ಯೆಗೆ ಮರಳಿದ ದಿನ

ಶ್ರೀರಾಮನು ರಾಮ ಸೇತು ಮುಖಾಂತರ ಲಂಕೆಗೆ ಹೋಗಿ ರಾವಣ ಸೈನ್ಯದೊಡನೆ ಕಾದಾಡಿ, ರಾವಣನ್ನು ಸಂಹರಿಸುತ್ತಾನೆ.  ಯುದ್ಧದಲ್ಲಿ ಜಯಗಳಿಸಿದ ನಂತರ ಲಂಕೆಯಲ್ಲಿ ಬಂಧನದಲ್ಲಿದ್ದ ಸೀತಾದೇವಿಯನ್ನು ಅಯೋಧ್ಯೆಗೆ ಕರೆತಂದ. ಶ್ರೀರಾಮಚಂದ್ರ ಲಂಕೆಯಿಂದ ಅಯೋಧ್ಯೆಗೆ ಬರಲು ತೆಗೆದುಕೊಂಡ ಸಮಯ ಇಪ್ಪತ್ತೊಂದು ದಿನ ಎಂದು ಹೇಳಲಾಗುತ್ತದೆ.

ಶ್ರೀರಾಮನಿಗೆ ದೀಪಗಳ ಸ್ವಾಗತ

ಶ್ರೀರಾಮಚಂದ್ರ ಅಯೋಧ್ಯೆಗೆ ಹಿಂತಿರುಗಿದ ದಿನದಂದು  ಆಯೋಧ್ಯೆ ಜನತೆ ಸಂತೋಷ, ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ.  ರಾವಣನ ವಧೆ ಮಾಡಿದ ಸಂಭ್ರಮಾಚರಣೆ ಅದಾಗಿತ್ತು. ಆದ್ದರಿಂದ ಆಗಿನಿಂದಲೂ ಈ ಪದ್ಧತಿ ನಡೆದುಕೊಂಡು ಬರುತ್ತಿದೆ. ಶ್ರೀರಾಮ ಅಯೋಧ್ಯೆಗೆ ಮತ್ತೆ ಪ್ರವೇಶಿಸಿದ ದಿನವೆಂದು ಈಗಲೂ ಅಲ್ಲಿನ ಜನರು ದೀಪೋತ್ಸವ ಆಚರಿಸುತ್ತಾರೆ.

ಹಬ್ಬದ ವೈಶಿಷ್ಟ್ಯ

ದೀಪಾವಳಿಯ ಹಿಂದಿನ ದಿನ ನೀರು ತುಂಬುವ ಹಬ್ಬ ಮಾಡಲಾಗುತ್ತದೆ.  ನಂತರದ ದಿನ ನರಕ ಚತುರ್ದಶಿ, ಆ ನಂತರ ಅಮಾವಾಸ್ಯೆ ಲಕ್ಷ್ಮಿ ಪೂಜೆ. ಅಮಾವಾಸ್ಯೆಯಂದು ವ್ಯಾಪಾರಸ್ಥರು ಅಂಗಡಿ ಮಳಿಗೆಗಳನ್ನು ಅಲಂಕರಿಸಿ ಲಕ್ಷ್ಮೀ ಪೂಜೆ ಆಚರಿಸುತ್ತಾರೆ. ಹಾಗೂ ಅದಾದ ಮರು ದಿನ ಬಲಿ ಪಾಡ್ಯಮಿ ಆಚರಿಸಲಾಗುತ್ತದೆ.

ನರಕ ಚತುರ್ದಶಿ ಹಿನ್ನೆಲೆಯಿದು

ನರಕಾಸುರನನ್ನು ದೇವಿ  ಕೊಂದ ಸ್ಮರಣೆಗಾಗಿ ನರಕ ಚತುರ್ದಶಿ ಆಚರಿಸುವ ರೂಢಿಯೂ ಇದೆ. ಬಲಿ ಪಾಡ್ಯಮಿ, ವಾಮನ ಅವತಾರದಲ್ಲಿ ಶ‍್ರೀಮಹಾವಿಷ್ಣು ಬಲಿ ಮಹಾರಾಜನನ್ನು ಪಾತಳಕ್ಕೆ ತುಳಿದ ದಿನ ಎಂದೂ ಹೇಳಲಾಗುತ್ತದೆ. ಹೀಗಾಗಿಯೇ ಹಸುವಿನ ಸಗಣಿಯಲ್ಲಿ ಬಲಿ ಕೋಟೆ ಹಾಕಿ ಪೂಜಿಸಲಾಗುತ್ತದೆ.