Saturday, April 20, 2024
Google search engine
Homeಜನಮನನನ್ನ ಮೊದಲ‌ ವಿಮಾನಯಾನ

ನನ್ನ ಮೊದಲ‌ ವಿಮಾನಯಾನ

ವಿಮಾನ ಹಾರಾಟವನ್ನು ಬಾಲ್ಯದಿಂದ ಆಗಸದಲ್ಲಿ ನೋಡಿದ್ದೆ ಹೊರತು ಅದನ್ನು ಹತ್ತುವದಿರಲಿ‌ ಅದನ್ನು ಹತ್ತಿರದಿಂದ ಸಹ ನೋಡಿರಲಿಲ್ಲ. ಹೀಗೆ ಯಾವುದೋ ಒಂದು ಕಾರಣಕ್ಕೆ ವಿಮಾನ ಪ್ರಯಾಣ ಮಾಡಲೇಬೇಕೆಂಬ ಆಸೆ ನನ್ನಲ್ಲಿ ಚಿಗುರು ಒಡೆಯಿತು. ವಿಮಾನ ಪ್ರಯಾಣವನ್ನ ಮಾಡುವ‌ ಓಕೆ. ಸರಿ. ಹೋಗುವದಾದರು ಎಲ್ಲಿಗೆ? ಏಕೆಂದರೆ,‌ ನನ್ನದು ವಿಮಾನ‌ ಹತ್ತುವ ಉದ್ದೇಶವೇ ಹೊರತು ಕೆಲಸ ನಿಮಿತ್ತ ಅಥವಾ ಪ್ರವಾಸ ಕೈಗೊಳ್ಳುವ ಉದ್ದೇಶವೇ ಇರಲಿಲ್ಲ.

ಹೀಗೆ ಗುರಿ ಇಲ್ಲದ ಪ್ರಯಾಣವನ್ನು ಮಾಡಲೇಬೇಕೆಂಬ ಛಲದಲ್ಲಿ ಸರಿ,ಎಲ್ಲಿಗಾದರು ಹೋಗಬೇಕಲ್ಲವೆ? ಹತ್ತಿರದ ಊರುಗಳನ್ನು ಪಟ್ಟಿ ಮಾಡ ತೊಡಗಿ ತೀರಾ ಹತ್ತಿರವೂ ಅಲ್ಲದ ದೂರವೂ ಅಲ್ಲದ ನೆರೆಯ ಕೇರಳದ ರಾಜಧಾನಿ ತಿರುವನಂತಪುರವನ್ನು ಆಯ್ಕೆ ಮಾಡಿಕೊಂಡು ತುಮಕೂರಿನ‌ ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಟಿಕೇಟನ್ನು ಕಳೆದ ಏಪ್ರಿಲ್ 18 ದಿನಾಂಕಕ್ಕೆ ಬುಕ್ ಮಾಡಿದ್ದಾಯ್ತು.

ಪೋರ್ಟ್ ನ್ನು ನಾನು ನೋಡಿರದ ಕಾರಣ , ಅಲ್ಲಿ ವಿಮಾನ ಹತ್ತುವ ಪ್ರಕ್ರಿಯೆಗಳನ್ನು ಟ್ರಾವೆಲ್ ಏಜೆನ್ಸಿಯರಲ್ಲಿ ತಿಳಿದುಕೊಂಡು ಸಿದ್ದನಾಗಿದ್ದೆ.‌ ಪ್ರಯಾಣದ ದಿನ ಬಂತು. ನಾನು ಬುಕ್ ಮಾಡಿದ್ದ ಏರ್ ಇಂಡಿಯಾ ವಿಮಾನವು ಬೆಳಗ್ಗೆ ಎಂಟು ಗಂಟೆಗೆ ಹೊರಡುವುದಿತ್ತು. ನಮ್ಮೂರಿನಿಂದ ಬೆಳಗ್ಗೆ ಎಂಟು ಗಂಟೆಗೆ ಅಲ್ಲಿಗೆ ತಲುಪಲು ಸಾಧ್ಯವಾಗದ ಕಾರಣ ,ಹಿಂದಿನ ರಾತ್ರಿಯ ಎರಡು ಗಂಟೆಗೆ ವಿಮಾನ ನಿಲ್ದಾಣ ತಲುಪಿ ಬೆಳಗಿನ ವಿಮಾನಕ್ಕೆ ಕಾದು ಕಾದು ಸುಸ್ತಾಯ್ತು.

ಅಂತು ಸಮಯವಾಯ್ತು. ಏರ್ ಇಂಡಿಯಾ ಸಿಬ್ಬಂದಿ ನಮ್ಮನ್ನ ವಿಮಾನಕ್ಕೆ ಹತ್ತಿಸಿದ್ದಾಯ್ತು. ಹತ್ತುವ ಮುನ್ನ ವಿಮಾನದ ಮುಂದೆ ನಿಂತು ಒಂದು ಸೆಲ್ಫಿ ತಗೆದುಕೊಂಡು ಆಕ್ಷಣವೇ ಫೇಸದ ಬುಕ್ಕಲ್ಲಿ ಆ ಫೋಟೋಕ್ಕೆ ನನ್ನ ಮೊದಲ ವಿಮಾನಯಾನ ಎಂಬ ಒಕ್ಕಣೆಯೊಂದಿಗೆ ಅಪ್ಲೋಡ್ ಮಾಡುವುದನ್ನ ಮರೆಯಲಿಲ್ಲ.

ವಿಮಾನ ಟೇಕ್ ಆಫ್ ಆಗಲು ಅಣಿಯಾಗುತ್ತಿತ್ತು.‌ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರುವುದಕ್ಕೂ ಕ್ಯೂ ನಿಂತು ಒಂದಾಂದ ಮೇಲೆ ಒಂದರಂತೆ ಹಾರಬೇಕು ಎಂಬುದು ಆಗಲೇ ಗೊತ್ತಾಗಿದ್ದು.‌ ಅಂಥೂ ಇಂತೂ ವಿಮಾನ ರನ್ ವೇ ಗೆ ಬಂದು ರನ್ ವೇ ಯಲ್ಲಿ ಹಾರಲು ವೇಗ ಹೆಚ್ಚಿಸಿಕೊಂಡಂತೆ ನನ್ನ ಹೃಯದ ಬಡಿತದ ವೇಗವೂ ಹೆಚ್ಚಾಗ ತೊಡಗಿತು. ವೇಗವಾಗಿ ಓಡಿದ ವಿಮಾನ ಮೇಲಕ್ಕೆ ಹಾರುವುದಕ್ಕೆ‌ ತೊಡಗಿದಾಗ ಸಣ್ಣಗೆ ಹೆದರಿಕೆ ಆಗ ತೊಡಗಿತ್ತು. ವಿಮಾನವು ಗರಿಷ್ಠ ಎತ್ತರಕ್ಕೆ ಹಾರಿ ಸಮಾನಂತರವಾಗಿ ಚಲಿಸುತ್ತಿರುವಾಗ ಸ್ಪಲ್ಪ ಸಮಾಧಾನವಾಗಿ..ಓ ವಿಮಾನ ಪ್ರಯಾಣ ಇಷ್ಟೆ ಎನಿಸತೊಡಗಿತ್ತು.

ಏರ್ ಇಂಡಿಯಾದವರು ಅಂದೆಂಥಹುದೋ ಒಂದು‌ ಕೇಕು ಒಂದರ್ಧ ಲೀಟರ್ ನೀರನ್ನು ಕೊಟ್ಟು ಇದೇ ತಿಂಡಿ ಎಂದರು. ಅದನ್ನು ತಿನ್ನುತ್ತಾ ವಿಂಡೋ ಪಕ್ಕದಲ್ಲಿದ್ದ ನಾನು ಭೂಮಿಯತ್ತ ನೋಡಿ ಎಂಜಾಯ್ ಮಾಡುವಷ್ಟರಲ್ಲಿ ವಿಮಾನ‌ಸಿಬ್ಬಂದಿ ಬೆಲ್ಟ್ ಹಾಕಿಕೊಳ್ಳಿ.‌ಇನ್ನೇನು ವಿಮಾನ ಲ್ಯಾಂಡ್ ಆಗುತ್ತೆ ಎಂದರು.‌

ಬೆಂಗಳೂರಿನಿಂದ ಸರಿ ಸುಮಾರು 680 ಕಿಮೀ ಇರುವ ತ್ರಿವೇಂಡ್ರಮ್ ಗೆ ಕೇವಲ ನಲವತ್ತು ನಿಮಿಷದಲ್ಲಿ‌ ತಂದಿಳಿಸಿಯೇ ಬಿಟ್ಟರು. ಕಡಿಮೆ ದೂರದ ಪ್ರಯಾಣ ನನ್ನದಾಗಿದ್ದರಿಂದ ವಿಮಾನವನ್ನು ಹೆಚ್ಚು ಹೊತ್ತು ಎಂಜಾಯ್ ಮಾಡಲು ಆಗಲಿಲ್ಲ. ವಿಮಾನದ ಇ ವೇಗ ನೋಡಿದಾಗ ಪ್ರಧಾನಿ ಮೋದಿಯವರು ನಮ್ಮ ತುಮಕೂರು-ಬೆಂಗಳೂರು ನಡುವಿನ‌ ಪ್ರಯಾಣದಷ್ಟೆ ವಿದೇಶಗಳನ್ನು ಸುತ್ತುತ್ತಾರಲ್ಲ.

ಅದರ ರಹಸ್ಯ ಈ ವಿಮಾನ ವೇಗ ನೋಡಿದಾಗ ತಿಳಿಯಿತು. ಆಶ್ಚರ್ಯ ಎಂದರೆ, ವಿಮಾನ ಮಾರ್ಗ ಮಧ್ಯೆ ಬಸ್ಸಿನವರ ಥರಹ ಯಾವ ಡಾಬಾಗೂ ಊಟಕ್ಕೆ ನಿಲ್ಲಿಸಲಿಲ್ಲ..ಹ…ಹ..ಹ..
ಅಂತೂ ನನ್ನ ವಿಮಾನ ಆಸೆ ಪೂರೈಸಿಕೊಂಡು ಹೆಂಗೂ ಬಂದಿರುವೆ ಎಂದೇಳಿ ತ್ರಿವೇಂಡ್ರಮ್ ಮತ್ತು ಸುತ್ತ ಮುತ್ತಲಿನ‌ ಪ್ರವಾಸ ಸ್ಥಳ ವೀಕ್ಷೀಸಿ ಅದೇ ದಿ‌ನ ರಾತ್ರಿ ಅಲ್ಲಿಂದ ವೋಲ್ವೋ ಬಸ್ಸು ಹಿಡಿದು ಸುದೀರ್ಘ 13 ಗಂಟೆಗಳ ಪ್ರಯಾಣದೊಂದಿಗೆ ಮೈಸೂರು ತಲುಪಿ ಅಲ್ಲಿಂ ನಮ್ಮೂರು ಗುಬ್ಬಿ ತಾಲ್ಲೂಕಿನ‌ ಮಠಗ್ರಾಮಕ್ಕೆ ಸೇರುವಷ್ಟರಲ್ಲಿ‌ ಆಯಾಸವಾಗಿ ವಿಮಾನ‌ ಪ್ರಯಾಣ ಎಷ್ಟು ವೇಗ ಮತ್ತು ಸಲೀಸು ಎನಿಸಿತ್ತು. ನನ್ನ ಮೊದಲ‌ ವಿಮಾನಯಾನವು ಒಂದು ರೋಮಾಂಚನವೇ ಸರಿ‌.

ಲೇಖಕರು
ಲಕ್ಷ್ಮೀಕಾಂತರಾಜು ಎಂಜಿ
ಮಠಗ್ರಾಮ.
ತಾಳೆಕೊಪ್ಪ ಅಂಚೆ ಗುಬ್ಬಿ‌ ತಾಲ್ಲೂಕು
9844777110

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?