Thursday, February 19, 2026
Google search engine
Home Blog Page 330

ಇಂದು ಕುಣಿಗಲ್ ಬಂದ್

ಮಾರ್ಕೋನಹಳ್ಳಿ ಜಲಾಶಯದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿರುವುದನ್ನು ಖಂಡಿಸಿ ಅಕ್ಟೋಬರ್ 30ರಂದು ಕುಣಿಗಲ್ ಬಂದ್ ಗೆ ಕರೆ ನೀಡಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ನಡೆಯಲಿರುವ ಬಂದ್ ಗೆ ಪಕ್ಷತೀತವಾಗಿ ಬೆಂಬಲ ವ್ಯಕ್ತವಾಗಿದೆ.ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲಕ್ಕೆ ನೀರು ತೆಗೆದುಕೊಂಡು ಹೋಗಲಾಗುತ್ತಿದೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಡ್ಯಾಂನ ಕೋಡಿ ಭಾಗದಲ್ಲಿರುವ ಸೈಫನ್ ಸ್ಥಳದಲ್ಲಿ 80 ಅಡಿ ಜಾಕ್ ವೆಲ್ ನಿರ್ಮಿಸಿ ಪಂಪ್ ಮಾಡುವ ಕಾಮಗಾರಿಗೆ ನಮ್ಮ ವಿರೋಧವಿದೆ. 80 ಅಡಿ ಆಳದಲ್ಲಿ ಜಾಕ್ ವೆಲ್ ನಿರ್ಮಿಸಿದರೆ ಡ್ಯಾಂಗೆ ಧಕ್ಕೆಯಾಗಲಿದೆ.ಇದರ ಜೊತೆಗೆ ರಾಷ್ಟ್ರೀಯ ಹಸಿರು ಪೀಠದ ಆದೇಶವನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ. ಡ್ಯಾಂ ಹಿನ್ನೀರಿನ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಮಾಡಬಾರದು ಎಂಬ ನಿಯಮವಿದೆ. ಇದನ್ನು ಉಲ್ಲಂಘಿಸಿ ಡ್ಯಾಂ ಒಳಗೆ ಕಾಮಗಾರಿ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಅನಂದ್ ಪಟೇಲ್ ಕಿಡಿ ಕಾರಿದ್ದಾರೆ.ಮಾರ್ಕೋನಹಳ್ಳಿ ಜಲಾಶಯವನ್ನು ನೀರಾವರಿ ಉಪಯೋಗಕ್ಕೆಂದೇ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಯಾವುದೇ ನದಿಗಳ ಸಂಪರ್ಕವೂ ಇಲ್ಲ. ಯಾವುದೇ ಅಲೋಕೇಶನ್ ಕೂಡ ಇಲ್ಲ. ಕುಣಿಗಲ್ ನ ಅಮೃತೂರು, ಎಡೆಯೂರು ಮತ್ತು ಹುಲಿಯೂರುದುರ್ಗ ಮತ್ತು ನಾಗಮಂಗಲದ ಕೆಲವು ಭಾಗಗಳಲ್ಲಿ ಕೈಗೊಂಡಿರುವ ನೀರಾವರಿಗೆ ಈ ಡ್ಯಾಂನಿಂದ ನೀರುಣಿಸಲಾಗುತ್ತಿತ್ತು. ಹೀಗಾಗಿ ಈಗಿನ ಅವೈಜ್ಞಾನಿಕ ಕಾಮಗಾರಿಯಿಂದ ರೈತರಿಗೆ ತೊಂದರೆಯಾಗಲಿದೆ ಎಂದರು.ನಾಗಮಂಗಲಕ್ಕೆ ಶ್ರವಣಬೆಳಗೊಳ ಬ್ಯಾಂಕ್ ಕೆನಾಲ್, ನಾಗಮಂಗಲ ಬ್ಯಾಂಕ್ ಕೆನಾಲ್ ನಿಂದ ನೀರು ಪಡೆಯಲಾಗುತ್ತಿದೆ. ಹೇಮಾವತಿಯಿಂದಲೂ ಮತ್ತಷ್ಟು ನೀರು ಪಡೆಯಲು ಅವಕಾಶವಿದೆ. ಆದರೆ ಮಾರ್ಕೋನಹಳ್ಳಿ ಡ್ಯಾನಿಂದ ಅವೈಜ್ಞಾನಿಕ ಕಾಮಗಾರಿ ಮೂಲಕ ನೀರು ತೆಗೆದುಕೊಂಡು ಹೋಗುವುದು ಸರಿಯಲ್ಲ ಎಂದು ಹೇಳಿದರು.

ಕೆರೆ ಮಾಯ…! ನಾಳೆ ನಾವು ಮಾಯ..!

ತುಳಸೀತನಯ

ತುಮಕೂರು:
ಇತ್ತೀಚಿನ ದಿನಗಳಲ್ಲಿ ಸಂಘ ಸಂಸ್ಥೆಗಳು ಸೇರಿದಂತೆ ಸರ್ಕಾರ ಜಲಸಂರಕ್ಷಣೆ ಮಾಡಬೇಕು ಎಂದು ಬೊಬ್ಬೆ ಹೊಡೆಯುತ್ತಿದೆ. ಇದಕ್ಕೆಂದೆ ಸಾಕಷ್ಟು ಹಣ ಕೂಡ ಪ್ರತೀ ವರ್ಷ ಖರ್ಚು ಮಾಡಲಾಗುತ್ತಿದೆ. ಆದರೆ ವಾಸ್ತವದಲ್ಲಿ ಮಾತ್ರ ಮಾಡಿದ ಉದ್ದೇಶ ಸಫಲವಾಗಿರುವುದಿಲ್ಲ. ಇದಕ್ಕೊಂದು ಜೀವಂತ ಉದಾಹರಣೆ ಜಿಲ್ಲೆ ಹಾಗೂ ತಾಲ್ಲೂಕು ಗಡಿಭಾಗದ ಅಕ್ಕಾಜಿಹಳ್ಳಿ ಕೆರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಫ್ತಿಗೆ ಬರುವ ಅಕ್ಕಾಜಿಹಳ್ಳಿ, ಗಡಿ ಗ್ರಾಮ. ಗ್ರಾಮದ ಸಮೀಪ ದೂರದಲ್ಲೆ ಚಿಕ್ಕಬಳ್ಳಾಪುರ, ಗೌರಿಬಿದನೂರು ತಾಲ್ಲೂಕಿನ ಗಡಿ ಇದೆ. ಅಕ್ಕಾಜಿಹಳ್ಳಿ ಗಡಿಗ್ರಾಮವಾಗಿರುವುದರಿಂದಲೋ ಏನೋ ಇಂದಿಗೂ ಯಾವುದೇ ಅಭಿವೃದ್ಧಿ ಕಾಣದೆ ಶಾಪಗ್ರಸ್ಥವಾಗಿಯೇ ಉಳಿದಿದೆ. ಗ್ರಾಮಕ್ಕೆ ಹೊಂದಿಕೊಂಡಂತೆ ನೀರಾವರಿ ಉದ್ದೇಶಕ್ಕಾಗಿ 1901ರಲ್ಲಿ ಕೆರೆ ನಿರ್ಮಾಣ ಮಾಡಲಾಗಿದೆ. ಪಂಚಾಯತ್ ರಾಜ್ ಇಲಾಖೆಗೆ ಒಳಪಟ್ಟಿರುವ, ನೂರು ವರ್ಷ ಪೂರೈಸಿರುವ ಕೆರೆ ನಿರ್ವಹಣೆ, ಪುನಶ್ಚೇತನ ಕಾಣದೆ ಇಂದು ಅಳಿವಿನಂಚಿಗೆ ತಲುಪಿದೆ. ಸುಮಾರು 12 ಎಕ್ಟೇರ್ ವಿಸ್ತೀರ್ಣ ಹೊಂದಿರುವ ಕೆರೆ ಭೂಗಳರ ಒತ್ತುವರಿಗೆ ಬಲಿಯಾಗಿದೆ. ಏರಿ ಮೇಲೆ ನಿಂತು ಒಂದು ಸಾರಿ ಕಣ್ಣಾಯಿಸಿದರೆ 12 ಎಕ್ಟೇರ್ ವಿಸ್ತೀರ್ಣ ಇರಬೇಕಿದ್ದ ಕೆರೆ ಒಂದಿಷ್ಟು ಪ್ರದೇಶ ಮಾತ್ರ ಕಣ್ಣಿಗೆ ಬೀಳುತ್ತದೆ. 4.8 ಎಂಟಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಕೆರೆಯ ತುಂಬೆಲ್ಲಾ ಬೃಹದಾಕಾರದ ಬೇಲಿ ಬೆಳೆದು ನಿಂತಿದೆ. ಈ ಹಿಂದೆ ಕೆರೆ ತುಂಬಿದಾಗ ಕೆರೆಯ ಹಿಂಭಾಗ ಸುಮಾರು 10 ಎಕ್ಟೇರಿಗೂ ಹೆಚ್ಚು ಅಚ್ಚುಕಟ್ಟು ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿತ್ತು. ಮಳೆ, ಬೇಸಿಗೆಗಾಲ ಎನ್ನದೇ ಸದಾ ಕಾಲ ರೈತರು ಈ ಭಾಗದಲ್ಲಿ ವ್ಯವಸಾಯ ಮಾಡುತ್ತಿದ್ದರು. ಭತ್ತದ ಗದ್ದೆ, ಜೋಳದ ಬೆಳೆಗಳು ಕಣ್ಣುಕೋರೈಸುವಂತೆ ಕಾಣುತ್ತಿದ್ದವು. ಆದರೀಗ ಕೆರೆಗೆ ನೀರಿಲ್ಲದೆ ಇಡೀ ಅಚ್ಚುಕಟ್ಟು ಪ್ರದೇಶ ಬರಡು ಭೂಮಿಯಂತಾಗಿದೆ.


ಕೆರೆ ಈ ರೀತಿ ದುಸ್ಥಿತಿ ತಲುಪಲು ನಿರ್ವಹಣೆ ಮಾಡದಿರುವುದೇ ಕಾರಣ ಎಂದು ಈ ಭಾಗದ ರೈತರು ಆರೋಪಿಸುತ್ತಾರೆ. ಆಗೋ, ಇಗೋ ಎಂಬಂತೆ ಯಾವಾಗಲೋ ಒಂದು ವರ್ಷ ಕೆರೆ ನಿರ್ವಹಣೆ ಹೆಸರಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿ ಬಿಲ್ ಮಾಡಿಕೊಂಡಿರುವುದು ಬಿಟ್ಟರೆ ಶಾಶ್ವತವಾದ ಒಂದೂ ಕೆಲಸ ಇಲ್ಲಿವರೆಗೆ ಮಾಡಿಲ್ಲ. ಕಳೆದ ಏಳೆಂಟು ವರ್ಷದಿಂದ ಯಾವುದೇ ನಿರ್ವಹಣೆ ಇಲ್ಲದಿದ್ದ ಕಾರಣಕ್ಕೆ ಕೆರೆ ಏರಿಯ ಮೇಲೆ ಬೃಹದಾಕಾರದ ಬೇಲಿಗಳು ಬೆಳಿದು ನಿಂತಿದ್ದವು. ಅವುಗಳನ್ನು ಈ ಬಾರಿ ಬೇಸಿಗೆಯಲ್ಲಿ ಕತ್ತರಿಸುವ ಕೆಲಸ ಹಾಗೂ ಏರಿಗೆ ಮಣ್ಣು ಹಾಕುವ ದೃಷ್ಟಿಯಿಂದ ರೂ. 1 ಲಕ್ಷ ಪಂಚಾಯತ್ ರಾಜ್ ಇಲಾಖೆ ಬಿಡುಗಡೆ ಮಾಡಿತ್ತು. ಅದರಂತೆ ಕೆಲಸ ಕಾಟಾಚಾರಕ್ಕೆ ಮಾಡಿ ಮುಗಿಸಿ ಬಿಲ್ ಮಾಡಿಕೊಳ್ಳಲಾಗಿದೆಯೇ ಹೊರತು, ಕಾಮಗಾರಿ ಒಂದೊಮ್ಮೆ ಈಗ ವೀಕ್ಷಿಸಿದವರಿಗೆ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇಲ್ಲಿ ಏನು ಕೆಲಸ ಮಾಡಿದ್ದಾರೆ ಎಂಬುದಕ್ಕೆ ಇಲ್ಲಿ ಈಗ ಯಾವುದೇ ಕುರುಹುಗಳು ಸಿಗುವುದಿಲ್ಲ. ಅಷ್ಟರ ಮಟ್ಟಿಗೆ ಕಳಪೆ ಕೆಲಸ ಮಾಡಿ ಮುಗಿಸಿದ್ದಾರೆ. ಅವೈಜ್ಞಾನಿಕವಾಗಿ ಏರಿಗೆ ಮಣ್ಣು ಹಾಕಿ ತೇಪೆ ಹಾಕಲಾಗಿದ್ದು, ಏರಿಯಮೇಲೆ ನೀರು ನಿಲ್ಲುತ್ತಿದೆ. ಜೊತೆಗೆ ಹಾಕಿರುವ ಮಣ್ಣು ಅಲ್ಲಲ್ಲಿ ಮಳೆ ನೀರಿಗೆ ಕೊರೆದು ಹೋಗಿದೆ. ಬೃಹದಾಕಾರದ ಬೇಲಿ ಸರಿಯಾಗಿ ತೆಗೆಯದ ಕಾರಣ ಮೂರೇ ತಿಂಗಳಲ್ಲಿ ಯಥಾ ಸ್ಥಿತಿಗೆ ಬೇಲಿ ಬೆಳೆದು ನಿಂತಿದೆ. ಇದರಿಂದಾಗಿ ಅಷ್ಟೋ ಇಷ್ಟೋ ಓಡಾಡಲು ಸುಗಮವಾಗಿದ್ದ ಏರಿ ಮೇಲಿನ ರಸ್ತೆ ಈಗ ಓಡಾಡಲೂ ಆಗದ ಸ್ಥಿತಿಗೆ ತಲುಪಿದೆ. ಇದೇ ಏರಿ ಮೇಲೆ ಅಕ್ಕಾಜಿಹಳ್ಳಿಯಿಂದ ಅವದಾರನಹಳ್ಳಿ, ದೊಡ್ಡಪಾಳ್ಯಕ್ಕೆ ಪ್ರತಿನಿತ್ಯ ಓಡಾಡುವವರು ಇದ್ದಾರೆ. ಏರಿಯ ಈ ದುಸ್ಥಿಯಿಂದ ಈಗ ದಾರಿಹೋಕರು ಪರದಾಡುವಂತಾಗಿದೆ ಎಂಬುದು ಈ ಭಾಗದ ಜನರ ಆಂಬೋಣ.
ಇನ್ನೂ ಕೆರೆಗೆ ನೀರು ತುಂಬುವ ಮೂಲಗಳೂ ಕೂಡ ಒತ್ತುವರಿಗೆ ಬಲಿಯಾಗಿರುವುದು ಒಂದೆಡೆಯಾದರೆ, ಇತ್ತೀಚೆಗೆ ಉತ್ತಮ ಮಳೆಯಾಗದಿರುವುದು ಕೆರೆ ತುಂಬುತ್ತಿಲ್ಲ. ಜೊತೆಗೆ ಕೆರೆಗೆ ನೀರೊದಗಿಸುವ ಹಳ್ಳಗಳಿಗೆ ಅಡ್ಡಲಾಗಿ ಚಕ್ ಡ್ಯಾಂಗಳ ನಿರ್ಮಾಣ ಕೆರೆ ತುಂಬಲು ತೊಡಕಾಗಿದೆ. ಆದರೆ ಕೆರೆ ಸರಿಯಾದ ರೀತಿಯಲ್ಲಿ ಆಗಿದ್ಹಾಗೆ ಪುನಶ್ಚೇತನ, ನಿರ್ವಹಣೆ ಮಾಡಿದ್ದರೆ ಈ ವರ್ಷ ಹಾಗೂ ಕಳೆದ ಮೂರು ವರ್ಷದ ಹಿಂದೆ ಉತ್ತಮ ಮಳೆಗೆ ಕೆರೆ ತುಂಬುತ್ತಿತ್ತು. ನೀರು ಸಂರಕ್ಷಣೆ ಮಾಡಲು ಸರ್ಕಾರ ಬೊಬ್ಬೆ ಹೊಡೆಯುತ್ತಿವೆ ಹೊರತು ವಾಸ್ತವದ ಚಿತ್ರಣ ಮಾತ್ರ ಬದಲಾಗುತ್ತಿಲ್ಲ. ಅಕ್ಕಾಜಿಹಳ್ಳಿ ಕೆರೆಗೆ ಕೂಗಳತೆ ದೂರದಲ್ಲಿರುವ ಬೊಮ್ಮಲದೇವಿಪುರ ಕೆರೆ ಕೂಡ ನೂರು ವರ್ಷಗಳು ಪೂರೈಸಿದೆಯಾದರೂ ಮೇಲ್ಕಾಣಿಸಿದ ಯಾವುದೇ ಸಮಸ್ಯೆಯಿಂದ ಹೊರತಾಗಿಲ್ಲ. ಏರಿ ಒಂದನ್ನು ಬಿಟ್ಟು ಇಲ್ಲಿ ಕೆರೆ ಇತ್ತೆಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲದಷ್ಟರ ಮಟ್ಟಿಗೆ ಒತ್ತುವರಿಗೆ ಬಲಿಯಾಗಿದೆ.

ಪಂಚಾಯತ್ ರಾಜ್ ಇಲಾಖೆಗೆ ತಾಲ್ಲೂಕಿನಲ್ಲಿ ಒಟ್ಟು 87 ಕರೆಗಳು ಒಳಪಡುತ್ತವೆ. ವರ್ಷಕ್ಕೆ 14 ರಿಂದ 15 ಲಕ್ಷ ಹಣ ಅನುದಾನ ಮಾತ್ರ ನಿರ್ವಹಣೆಗೆಂದು ನೀಡಲಾಗುತ್ತಿದೆ. ಸಮರ್ಪಕ ಅನುದಾನದ ಕೊರತೆಯಿಂದಾಗಿ ಕೆರೆಗಳ ನಿರ್ವಹಣೆ ಕಷ್ಟವಾಗುತ್ತಿದೆ. ಹಾಗಾಗಿ ಬಹಳಷ್ಟು ಕೆರೆಗಳು ನಿರ್ವಹಣೆ, ಪುನಶ್ಚೇತನ ಆಗದೇ ನೀರು ಸಂಗ್ರಹಣೆಯಾಗುತ್ತಿಲ್ಲ. ಪ್ರತೀ ವರ್ಷ ಮಳೆ ಸರಿಯಾಗಿ ಆಗುವುದಿಲ್ಲ. ಅಪರೂಪಕ್ಕೆ ಆಗುವ ಮಳೆ ನೀರು ಕೆರೆ ನಿರ್ವಹಣೆ ಇಲ್ಲದ ಕಾರಣಕ್ಕೆ ಸಂಗ್ರಹವಾಗದೇ ಕೆಲವೊಮ್ಮೆ ಪೋಲಾಗುತ್ತದೆ. ಸರ್ಕಾರ ಇಲಾಖಾ ಕೆರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಲ್ಲಿ ನಿರ್ವಹಣೆ ಸಾಧ್ಯ ಎನ್ನುತ್ತಾರೆ ಪಂಚಾಯತ್ ರಾಜ್ ಇಲಾಖೆ ಎಇಇ ಮಂಜುನಾಥ.

ದೀಪಾವಳಿಗೂ  ಶ್ರೀರಾಮನಿಗೂ  ಇರುವ ನಂಟೇನು?

1

ಲೇಖಕರು

ಕೆ.ಜೆ.ಹರ್ಷಿತ

 ದೀಪಾವಳಿ ಹಬ್ಬ ಯಾವಾಗ ಬರುತ್ತದೆ ಎಂದು ಮಕ್ಕಳು ಕಾಯುತ್ತಿರುತ್ತಾರೆ. ಹಬ್ಬ ಬಂದರೆ ಹೊಸ ಬಟ್ಟೆ ಜೊತೆಗೆ ಇಷ್ಟವಾದ ಪಟಾಕಿ ಸಿಡಿಸಿ ಸಂಭ್ರಮಿಸಬಹುದು ಎಂಬ ಆಸೆ ಮಕ್ಕಳದ್ದು.

ಇಂತಹ ಸಂಭ್ರಮದ ದೀಪಾವಳಿ ಹಬ್ಬದ  ಆಚರಣೆ ಪ್ರಚಲಿತಕ್ಕೆ ಬಂದದ್ದಕ್ಕೆ ಸಾಕಷ್ಟು ಕತೆಗಳಿವೆ.  ಶ್ರೀರಾಮನಿಗೂ ದೀಪಾವಳಿಗೂ ನಂಟಿದೆಯಂತೆ.

ಹೌದು ಕಾರ್ತೀಕ ಮಾಸದ ಕೃಷ್ಣಪಕ್ಷದ ಚತುರ್ದರ್ಶಿ  ಹಿಂದಿನ ದಿನದಿಂದಲೇ ದೀಪಾವಳಿಯು ಆರಂಭವಾಗುತ್ತದೆ. ಶರನ್ನವರಾತ್ರಿ ಆಗಿ ಇಪ್ಪತ್ತೊಂದನೇ ದಿನಕ್ಕೆ ದೀಪಾವಳಿ ಆಚರಿಸಲಾಗುತ್ತದೆ. ಅಸುರ ಸಂಹಾರದ ದ್ಯೋತಕವಾಗಿ  ದೀಪಾವಳಿಯನ್ನು ಆಚರಿಸಲಾಗುತ್ತದೆ.

ಆಯೋದ್ಯೆಗೆ ಮರಳಿದ ದಿನ

ಶ್ರೀರಾಮನು ರಾಮ ಸೇತು ಮುಖಾಂತರ ಲಂಕೆಗೆ ಹೋಗಿ ರಾವಣ ಸೈನ್ಯದೊಡನೆ ಕಾದಾಡಿ, ರಾವಣನ್ನು ಸಂಹರಿಸುತ್ತಾನೆ.  ಯುದ್ಧದಲ್ಲಿ ಜಯಗಳಿಸಿದ ನಂತರ ಲಂಕೆಯಲ್ಲಿ ಬಂಧನದಲ್ಲಿದ್ದ ಸೀತಾದೇವಿಯನ್ನು ಅಯೋಧ್ಯೆಗೆ ಕರೆತಂದ. ಶ್ರೀರಾಮಚಂದ್ರ ಲಂಕೆಯಿಂದ ಅಯೋಧ್ಯೆಗೆ ಬರಲು ತೆಗೆದುಕೊಂಡ ಸಮಯ ಇಪ್ಪತ್ತೊಂದು ದಿನ ಎಂದು ಹೇಳಲಾಗುತ್ತದೆ.

ಶ್ರೀರಾಮನಿಗೆ ದೀಪಗಳ ಸ್ವಾಗತ

ಶ್ರೀರಾಮಚಂದ್ರ ಅಯೋಧ್ಯೆಗೆ ಹಿಂತಿರುಗಿದ ದಿನದಂದು  ಆಯೋಧ್ಯೆ ಜನತೆ ಸಂತೋಷ, ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ.  ರಾವಣನ ವಧೆ ಮಾಡಿದ ಸಂಭ್ರಮಾಚರಣೆ ಅದಾಗಿತ್ತು. ಆದ್ದರಿಂದ ಆಗಿನಿಂದಲೂ ಈ ಪದ್ಧತಿ ನಡೆದುಕೊಂಡು ಬರುತ್ತಿದೆ. ಶ್ರೀರಾಮ ಅಯೋಧ್ಯೆಗೆ ಮತ್ತೆ ಪ್ರವೇಶಿಸಿದ ದಿನವೆಂದು ಈಗಲೂ ಅಲ್ಲಿನ ಜನರು ದೀಪೋತ್ಸವ ಆಚರಿಸುತ್ತಾರೆ.

ಹಬ್ಬದ ವೈಶಿಷ್ಟ್ಯ

ದೀಪಾವಳಿಯ ಹಿಂದಿನ ದಿನ ನೀರು ತುಂಬುವ ಹಬ್ಬ ಮಾಡಲಾಗುತ್ತದೆ.  ನಂತರದ ದಿನ ನರಕ ಚತುರ್ದಶಿ, ಆ ನಂತರ ಅಮಾವಾಸ್ಯೆ ಲಕ್ಷ್ಮಿ ಪೂಜೆ. ಅಮಾವಾಸ್ಯೆಯಂದು ವ್ಯಾಪಾರಸ್ಥರು ಅಂಗಡಿ ಮಳಿಗೆಗಳನ್ನು ಅಲಂಕರಿಸಿ ಲಕ್ಷ್ಮೀ ಪೂಜೆ ಆಚರಿಸುತ್ತಾರೆ. ಹಾಗೂ ಅದಾದ ಮರು ದಿನ ಬಲಿ ಪಾಡ್ಯಮಿ ಆಚರಿಸಲಾಗುತ್ತದೆ.

ನರಕ ಚತುರ್ದಶಿ ಹಿನ್ನೆಲೆಯಿದು

ನರಕಾಸುರನನ್ನು ದೇವಿ  ಕೊಂದ ಸ್ಮರಣೆಗಾಗಿ ನರಕ ಚತುರ್ದಶಿ ಆಚರಿಸುವ ರೂಢಿಯೂ ಇದೆ. ಬಲಿ ಪಾಡ್ಯಮಿ, ವಾಮನ ಅವತಾರದಲ್ಲಿ ಶ‍್ರೀಮಹಾವಿಷ್ಣು ಬಲಿ ಮಹಾರಾಜನನ್ನು ಪಾತಳಕ್ಕೆ ತುಳಿದ ದಿನ ಎಂದೂ ಹೇಳಲಾಗುತ್ತದೆ. ಹೀಗಾಗಿಯೇ ಹಸುವಿನ ಸಗಣಿಯಲ್ಲಿ ಬಲಿ ಕೋಟೆ ಹಾಕಿ ಪೂಜಿಸಲಾಗುತ್ತದೆ.

ಎಸ್ಎಸ್ಎಲ್ ಸಿ ಪರೀಕ್ಷೆ : ಅವಧಿ ವಿಸ್ತರಣೆ

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿ, ಪುನರಾವರ್ತಿತ ವಿದ್ಯಾರ್ಥಿಗಳ ವಿವರಗಳನ್ನು ಪರೀಕ್ಷಾ ಮಂಡಳಿಯ ಜಾಲತಾಣದಲ್ಲಿ ಅಪ್ಲೋಡ್ ಮಾಡಲು ಹಾಗೂ ಖಾಸಗಿ ಶಾಲಾ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳಲು ನಿಗದಿಪಡಿಸಿದ್ದ ಅವಧಿ ವಿಸ್ತರಿಸಲಾಗಿದೆ.

ಶಾಲಾ ಮುಖ್ಯ ಶಿಕ್ಷಕರು ಮಾರ್ಚ್-ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಖಾಸಗಿ ಆಭ್ಯರ್ಥಿಗಳನ್ನು ನೋಂದಣಿ ಮಾಡಿಕೊಳ್ಳಲು, ಶಾಲೆಯ ಸಂಕೇತ ಪಡೆಯಲು ಹಾಗೂ ಮಂಡಳಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ ಎಲ್ಲಾ ವಿದ್ಯಾರ್ಥಿಗಳ ಮಾಹಿತಿ ಅಪ್ಲೋಡ್ ಮಾಡಲು ಅಕ್ಟೋಬರ್ 31ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.

ನಿಗದಿತ ಅವಧಿಯ ನಂತರ ನೋಂದಣಿ/ ಅಪ್ಲೋಡ್ ಮಾಡಲು ದಂಡ ವಿಧಿಸಲಾಗುವುದು ಹಾಗೂ 100 ರೂ.ಗಳ ದಂಡ ಶುಲ್ಕ ಸಹಿತ ನೋಂದಣಿ/ ಅಪ್ಲೋಡ್ ಮಾಡಲು ನವೆಂಬರ್ 11 ಕಡೆಯ ದಿನವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಂ.ಆರ್. ಕಾಮಾಕ್ಷಿ ತಿಳಿಸಿದ್ದಾರೆ.

2002 ಮತ್ತು ಹಿಂದಿನ ವರ್ಷಗಳ ಪರೀಕ್ಷೆಯಲ್ಲಿ ಅನಿತ್ತೀರ್ಣರಾದ ಪುನರಾವರ್ತಿತ ವಿದ್ಯಾರ್ಥಿಗಳ ಎಂಎಸ್ಎ, ನಾಮಿನಲ್ ರೋಲ್ ಮತ್ತು ಸಂಬಂಧಿಸಿದ ದಾಖಲೆಗಳನ್ನು ಮಂಡಳಿಗೆ ಭೌತಿಕವಾಗಿ ಸಲ್ಲಿಸಲು ನವೆಂಬರ್ 22 ಕೊನೆಯ ದಿನಾಂಕವಾಗಿದೆ.

64 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರು ಇವರು
2019-20ನೇ ಸಾಲಿನ ರಾಜ್ಯೋತ್ಸವ ಪಟ್ಟಿ ಪ್ರಕಟವಾಗಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 64 ಗಣ್ಯರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಸಾಹಿತ್ಯ:
1. ಡಾ.ಮಂಜಪ್ಪಶೆಟ್ಟಿ ಮಸಗಲಿ
2. ಪ್ರೊ.ಜಿ.ರಾಜಶೇಖರಪ್ಪ
3. ಚಂದ್ರಕಾಂತ ಕರದಳ್ಳಿ
4 ಡಾ. ಸರಸ್ವತಿ ಚಿಮ್ಮಲಗಿ
ರಂಗಭೂಮಿ
5. ಪರಶುರಾಮ ಸಿದ್ದಿ
6. ಪಾಲ್ ಸುದರ್ಶನ್
7. ಹೂಲಿ ಶೇಖರ್
8. ಎನ್.ಶಿವಲಿಂಗಯ್ಯ
9. ಡಾ. ಎಚ್.ಕೆ.ರಾಮನಾಥ
10. ಭಾರ್ಗವಿ ನಾರಾಯಣ
ಸಂಗೀತ
11. ಛೋಟಿ ರೆಹಮತ್ ಖಾನ್
12. ನಾಗವಲ್ಲಿ ನಾಗರಾಜ್
13. ಡಾ.ಮುದ್ದುಮೋಹನ
14. ಶ್ರೀನಿವಾಸ ಉಡುಪ
ಜಾನಪದ
15 ನೀಲ್ ಗಾರರು ದೊಡ್ಡಗವಿಬಸಪ್ಪ, ಮಂಟೇಸ್ವಾಮಿ ಪರಂಪರೆ
16. ಹೊಳಬಸಯ್ಯ ದುಂಡಯ್ಯ ಸಂಬಳದ
17. ಭೀಮಸಿಂಗ್ ಸಕಾರಾಮ್ ರಾಥೋಡ್
18. ಉಸ್ಮಾನ್ ಸಾಬ್ ಖಾದರ್ ಸಾಬ್್
19. ಕೊಟ್ರೇಶ ಚೆನ್ನಬಸಪ್ಪ ಕೊಟ್ರಪ್ಪನವರ
20. ಕೆ.ಆರ್. ಹೊಸಳಯ್ಯ
ಶಿಲ್ಪಕಲೆ
21. ವಿ.ಎ.ದೇಶಪಾಂಡೆ,
22. ಕೆ. ಜ್ಞಾನೇಶ್ವರ

ಚಿತ್ರಕಲೆ
23. ಯು. ರಮೇಶರಾವ್
24. ಮೋಹನ ಸಿತನೂರು
ಕ್ರೀಡೆ
25. ವಿಶ್ವನಾಥ್ ಭಾಸ್ಕರ್ ಗಾಣಿಗ
26. ಚೇನಂಡ ಎ. ಕುಟ್ಟಪ್ಪ
27. ನಂದಿತ ನಾಗನಗೌಡರ್
ಯೋಗ
28. ವನಿತಕ್ಕ
29. ಕು. ಖುಷಿ
ಯಕ್ಷಗಾನ
30. ಶ್ರೀಧರ ಭಂಡಾರಿ ಪುತ್ತೂರು
ಬಯಲಾಟ
31. ವೈ.ಮಲ್ಲಪ್ಪ ಗವಾಯಿ.
ಚನಲಚಿತ್ರ
32. ಶೈಲಶ್ರೀ
ಕಿರುತೆರೆ
33. ಜಯಕುಮಾರ ಕೊಡಗನೂರ
ಶಿಕ್ಷಣ
34. ಎಸ್.ಆರ್. ಗುಂಜಾಳ್
35. ಪ್ರೊ.ಟಿ.ಶಿವಣ್ಣ
36. ಡಾ. ಕೆ.ಚಿದಾನಂದಗೌಡ
37. ಡಾ.ಗುರುರಾಜ ಕರ್ಜಗಿ
ಸಂಕೀರ್ಣ
38. ಡಾ. ವಿಜಯ ಸಂಕೇಶ್ವರ
39. ಎಸ್.ಟಿ. ಶಾಂತ ಗಂಗಾಧರ್
40 ಡಾ. ಚನ್ನವೀರ ಶಿವಾಚಾರ್ಯರು
41. ಲೆಫ್ಟಿನೆಂಟ್ ಜನರಲ್ ಬಿ.ಎನ್. ಬಿ.ಎಂ. ಪ್ರಸಾದ್
42. ಡಾ. ನಾ. ಸೋಮೇಶ್ವರ್
43. ಕೆ. ಪ್ರಕಾಶ ಶೆಟ್ಟಿ ಅಧ್ಯಕ್ಷರು, ಎಂ.ಆರ್.ಜಿ. ಗ್ರೂಪ್
ಪತ್ರಿಕೋದ್ಯಮ
44. ಬಿ.ವಿ. ಮಲ್ಲಿಕಾರ್ಜುನಯ್ಯ
ಸಹಕಾರ
45. ರಮೇಶ ವೈದ್ಯ
ಸಮಾಜ ಸೇವೆ
46. ಎಸ್.ಜಿ. ಭಾರತಿ
47. ಕತ್ರಿಗೆ ಚನ್ನಪ್ಪ
ಕೃಷಿ
48. ಬಿ.ಕೆ.ದೇವರಾವ್
49. ವಿಶ್ವೇಶ್ವರ ಸಜ್ಜನ್
ಪರಿಸರ
50. ಸಾಲುಮರದ ವೀರಾಚಾರ್
51. ಶಿವಾಜಿ ಛತ್ರಪ್ಪ ಕಾಗಣಿಕರ್
ಸಂಘ-ಸಂಸ್ಥೆಗಳು
52. ಪ್ರಭಾತ್ ಆರ್ಟ್ ಇಂಟರ್ ನ್ಯಾಷನಲ್
53. ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ಹನಮಂತಪುರ
ವೈದ್ಯಕೀಯ
54. ಡಾ. ಹನುಮಂತರಾಯ ಪಂಡಿತ್
55. ಡಾ. ಆಂಜನಪ್ಪ
56. ಡಾ. ನಾಗರತ್ನ
57. ಡಾ. ಜಿ.ಟಿ.ಸುಭಾಷ್
58. ಡಾ. ಕೃಷ್ಣಪ್ರಸಾದ್
ನ್ಯಾಯಾಂಗ
59. ಕುಮಾರ್ ಎನ್.
ಹೊರನಾಢು
60. ಜಯವಂತ ಮನ್ನೋಳಿ
61. ಗಂಗಾಧರ ಬೇವಿನಕೊಪ್ಪ
62. ಬಿ.ಜಿ. ಮೋಹನದಾಸ್
ಗುಡಿ ಕೈಗಾರಿಕೆ
63. ನವರತ್ನ ಇಂದುಕುಮಾರ
ವಿಮರ್ಶೆ
64. ಕೆ.ವಿ.ಸುಬ್ರಮಣ್ಯಂ

ತುಮಕೂರಿನಲ್ಲಿ ಮಳೆ ಎಷ್ಟು ಆಯ್ತು ಗೊತ್ತಾ?

ಬಯಲುಸೀಮೆ ತುಮಕೂರಿನಲ್ಲಿ ವಾರ್ಷಿಕವಾಗಿ ಬೀಳುತ್ತಿದ್ದ ಮಳೆಗಿಂತಲೂ ಹೆಚ್ಚು ಬಿದ್ದಿದೆ.
ಜಿಲ್ಲೆ ವಾರ್ಷಿಕ ಮಳೆ ಪ್ರಮಾಣ 640 ಮಿ.ಮಿ. ಆದರೆ ಈ ವರ್ಷ ಈಗಾಗಲೇ 740 ಮಿ.ಮಿ. ಮಳೆಯಾಗಿದೆ. ಇನ್ಮೂ ಮಳೆಗಳು ಇರುವ ಕಾರಣ ಮತ್ತಷ್ಟು ನೀರು ಸಿಗಲಿದೆ. ಆದರೆ‌ ಇದು ಕಷ್ಟಕ್ಕೂ ಕಾರಣವಾಗಲಿದೆ ಎನ್ನುತ್ತಾರೆ ರೈತರಾದ ಪದ್ಮರಾಜ್

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಹದಿನೈದು ವರ್ಷಗಳ ನಂತರ ಎಲ್ಲಾ ಕಡೆಯು ರಾಗಿ ಹೊಲಗಳು ಚೆನ್ನಾಗಿವೆ. ನಡುವೆ ಬಿತ್ತನೆ ಮಾಡಿರುವ ಅಕ್ಕಡಿ ಸಾಲಿನಲ್ಲಿರುವ ಸಾಸಿವೆ, ಜೋಳ, ಅವರೆ, ಅಲಸಂದೆ, ತೊಗರಿ, ನವಣೆ, ಹುಚ್ಚೇಳು, ಹುರುಳಿ ಬೆಳೆಗಳು ಇಳುವರಿಯ ನೀಡುವಲ್ಲಿ ಪೈಪೋಟಿ ನಡೆದಿದೆ, ಎಲ್ಲಾ ಖುಷಿಯ ನಡುವೆ ಬೆಲೆ ಕುಸಿಯುವ ಅತಂಕ ಕಾಣುತ್ತಿದೆ.

ಸಜ್ಜೆ ಕೊರಳೆ ಹೊಲಗಳು ಸಹ ಉತ್ತಮವಾದ ಇಳುವರಿ ನೀಡುತ್ತವೆ.
ರಾಗಿ ಹೊಲಗಳು 4 ಅಡಿಗೂ ಹೆಚ್ಚು ಬೆಳೆದಿದೆ.
ರಾಗಿ ಪೈರುಗಳಿಗಿಂತಲೂ ಹೆಚ್ಚು ಎತ್ತರವಾಗಿ ಬೇರೆ ಬೆಳೆಗಳು ಬೆಳದಿವೆ. ತೆನೆಗಳು ದಷ್ಟಪುಷ್ಟವಾಗಿ ಕಾಣುತ್ತಿವೆ. ವಾರ್ಷಿಕ ವಾಡಿಕೆ ಮಳೆ 630 ಮಿಮೀ. ಇದುವರೆಗೂ ಬಂದಿರುವ ಮಳೆ 760 ಮಿಮೀ. ಜುಲೈನಲ್ಲಿ ಮಾತ್ರ ಮಳೆ ಕೈಕೊಟ್ಟಿದರಿಂದ ಕುಂಟೆ ಹೊಡೆಯುವುದು, ಕಳೆ ಕೀಳುವುದು ಮಾಡಲು ಅಗಲಿಲ್ಲ. ಪ್ರತಿ ತಿಂಗಳು ವಾಡಿಕೆ ಮಳೆಗಿಂತಲೂ ಹೆಚ್ಚು ಅಗಿದೆ. ಹಿರಿಯ ರೈತರು ತಿಳಿಸಿದಂತೆ ಹದವಾಗಿ ಮಳೆಯಾಗಿದೆ.

ಹೊಲಗಳು ಸಿಕ್ಕಪಟ್ಟೆ ಬೆಳೆದಿರುವುದರಿಂದ ತೆನೆಯ ಭಾರ ಹೆಚ್ಚಾಗಿ ನೆಲಕ್ಕೆ ಬಾಗುವುದು ಪ್ರಾರಂಭವಾಗಿ ರೈತರುಗಳಿಗೆ ಅತಂಕ ತಂದಿದೆ.
ತೆನೆಗಳು ನೆಲಕ್ಕೆ ತಾಗಿದರೆ ಮೊಳಕೆ ಹೊಡೆದು ಬೆಳೆ ಹಾಳುಗುತ್ತದೆ. ಮೇವು ಸಹ ಗೆದ್ದಳು ಹತ್ತಿ ಹಾಳುಗುತ್ತದೆ. ಇದು ಅತ್ಯಂತ ಅಪಾಯ ಸ್ಥಿತಿ.
ಹದಿನೈದು ವರ್ಷಗಳ ನಂತರ ಈ ರೀತಿಯ ಬೆಳೆಗಳನ್ನು ನೋಡುತ್ತಿದ್ದೆವೆ ಎನ್ನುತ್ತಾರೆ.
ಮಳೆ ಎಲ್ಲಾ ಕಡೆಯು ಬೆಳೆಗೆ ಅನುಕೂಲ ವಾದ ರೀತಿ ಅಗಿದೆ. ಬೆಳೆಯ ಇಳುವರಿಯು ಸಹ ಒಂದೇ ಸಮ ಬರುತ್ತದೆ.

ಸದ್ಯದ ಮಟ್ಟಿಗೆ ರೈತನ ಮುಖದಲ್ಲಿ ಹೆಚ್ಚಿನ ಮಂದಹಾಸ ಮೂಡಿಸಿದೆ. ಹೆಚ್ಚಿನ ಇಳುವರಿಯಿಂದ ರಾಗಿ ಬೆಲೆಯು ಕುಸಿಯುವ ಹಂತ ತಲುಪಿದೆ.
ಬೆಲೆ ಕುಸಿತವಾದರೆ ರೈತನ ಸ್ಥಿತಿಯಲ್ಲಿ ಬದಲಾವಣೆ ಕಾಣಲು ಸಾಧ್ಯವಿಲ್ಲ.

ಆರ್ ಸಿಇಪಿ ವಿರುದ್ಧ ಮಕ್ಕಳ ಆಕ್ರೋಶ

ಭಾರತ ಕೃಷಿ ಆಧಾರಿತ ದೇಶ, ಇಲ್ಲಿ ರೈತರೇ ದೇಶದ ಬೆನ್ನೆಲುಬು. ಇಂಥ ರೈತರು ಈಗ ಸಂಕಷ್ಟಕ್ಕೆ ಗುರಿಯಾಗಬೇಕಾಗಿ ಬಂದಿದೆ. ಏನಂದ್ರೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರೆ ದೇಶದ ರೈತರ ಬದುಕಿಗೆ ಧಕ್ಕೆಯಾಗುತ್ತದೆ ಎಂದು ಶಿರಾ ತಾಲೂಕಿನ ಹೊಂಬಾಳೆ ಯುವಜಆರ್ ಸಿಇಪಿ ಕೃಷಿ ಸರಕುಗಳನ ಸಂಘ ಆತಂಕ ವ್ಯಕ್ತಪಡಿಸಿದೆ.

ಸಿರಾ ತಾಲೂಕಿನ ಗುಳಿಗೇನಹಳ್ಳಿಯಲ್ಲಿ ಹೊಂಬಾಳೆ ಯುವಜನ ಸಂಘ ಆಯೋಜಿಸಿದ್ದ ಆರ್‌ಸಿಇಪಿ ಬೇಡ ನಿಲ್ಸಿ ಅಭಿಯಾನದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಂಜುನಾಥ್‌ ಆರ್ ಸಿಇಪಿ ಕೃಷಿ ಸರಕುಗಳ ಮೇಲಿನ ಆಮದು ಸುಂಕವನ್ನು ಶಾಶ್ವತವಾಗಿ ಶೂನ್ಯಕ್ಕೆ ತರುತ್ತದೆ, ಕೃಷಿ ಮತ್ತ ಹೈನುಗಾರಿಕೆ ಕ್ಷೇತ್ರಕ್ಕೆ ಭಾರಿ ಹೊಡೆತ ಬೀಳುತ್ತದೆ ಎಂದರು.

ಅನನ್ಯ ಯುವಜನ ಸಂಘದ ಅಧ್ಯಕ್ಷ ಕೆಂಪರಾಜು, ಆರ್‌ಸಿಇಪಿ ಒಪ್ಪಂದದಿಂದ ಅನೇಕ ದೇಶಗಳು ತಮ್ಮ ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ನೋಡುತ್ತಿವೆ, ವಿದೇಶಿ ನಿಗಮಗಳು ರಾಷ್ಟ್ರೀಯ ನ್ಯಾಯಾಲಯಗಳಲ್ಲಿ ನಮ್ಮ ಸ್ವಂತ ರೈತರಿಗೆ ಮತ್ತು ಕಾರ್ಮಿಕರಿಗೆ ಸಹಾಯಮಾಡಿದಲ್ಲಿ ಸರಕಾರದ ವಿರುದ್ಧ ಮೊಕದ್ದಮೆ ಹೂಡಬಹುದು. ಹಾಗಾಗಿ ಈ ಒಪ್ಪಂದವು ದೇಶಕ್ಕೆ ಮತ್ತು ರೈತರಿಗೆ ಮುಳುವಾಗಲಿದೆ. ಇದನ್ನು ವಿರೋಧಿಸಬೇಕು ಎಂದು ಹೇಳಿದರು.

ಅಭಿಯಾನದಲ್ಲಿ ಹೊಂಬಾಳೆ ಯುವಜನ ಸಂಘದ ಉಪಾಧ್ಯಕ್ಷೆ ಶಾರದಾ, ಕಾರ್ಯದರ್ಶಿ ಮೇಘ ರಾಮದಾಸ್‌, ಅನನ್ಯ ಯುವಜನ ಸಂಘದ ಸದಸ್ಯ ಶರೀಫ್‌, ನವಚಿಗುರು ಟೀನೇಜರ್ಸ್‌ ಕ್ಲಬ್‌ ಸದಸ್ಯರು, ನವವಿಕಾಸ ಟೀನೇಜರ್ಸ್‌ ಕ್ಲಬ್‌ ಸದಸ್ಯರು, ಅದರ್ಶ ಯುವತಿ ಮಂಡಳಿಯ ಸದಸ್ಯೆ ಸಹನ, ಮಾತೃಭೂಮಿ ಯುವಜನ ಸಂಘದ ಸದಸ್ಯ ನಾಗರಾಜು, ಭವ್ಯ ಮತ್ತು ಕ್ರಾಂತಿ ಮಕ್ಕಳ ಸಂಘದ ಸದಸ್ಯರು ಭಾಗವಹಿಸಿದ್ದರು.

ಪ್ರಾಮಾಣಿಕತೆ ಬದುಕಿನ ಅವಿಭಾಜ್ಯ ಅಂಗವಾಗಬೇಕು

ಪ್ರಾಮಾಣಿಕತೆ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಮಾತಿಗೂ ಕೃತಿಗೂ ಸಂಬಂಧವಿರಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯವು ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಜಾಗೃತಿ ಅರಿವು ಸಪ್ತಾಹ’ದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.

ಪ್ರಾಮಾಣಿಕತೆ ಹಾಗೂ ಸಮಗ್ರತೆ ಇಲ್ಲದ ಬದುಕು ವ್ಯರ್ಥ. ಸ್ವಚ್ಛ ಪರಿಸರದ ಜತೆಗೆ ಸ್ವಚ್ಛ ಸಮಾಜದ ನಿರ್ಮಾಣವೂ ಆಗಬೇಕೆಂದರೆ ಭ್ರಷ್ಟಾಚಾರ ತೊಲಗಬೇಕು ಎಂದರು.

ಸಮಾಜದಲ್ಲಿ ಮೌಲ್ಯಗಳು ಅವನತಿಯತ್ತ ಸಾಗುತ್ತಿವೆ. ಲಂಚ ಕೊಡುವುದು, ಪಡೆಯುವುದು ಎರಡೂ ತಪ್ಪು ಎಂಬ ಅರಿವು ಸಮಾಜದಲ್ಲಿ ಮೂಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಕೆಲಸವನ್ನು ಅನಗತ್ಯವಾಗಿ ಮುಂದೂಡುವುದೂ ಭ್ರಷ್ಟಾಚಾರದ ಒಂದು ಭಾಗ ಎಂದರು.

ಕುಲಸಚಿವ ಪ್ರೊ. ಕೆ. ಎನ್. ಗಂಗಾನಾಯಕ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಜೆ. ಸುರೇಶ್, ಹಣಕಾಸು ಅಧಿಕಾರಿ ಪ್ರೊ. ಪಿ. ಪರಮಶಿವಯ್ಯ ಉಪಸ್ಥಿತರಿದ್ದರು.

ಹಸಿ ಸಗಣಿಗೂ ಕಾಲ ಬಂತು ಅನ್ನಿ

ಇಟ್ಟರೆ ಸಗಣಿಯಾದೆ
ತಟ್ಟಿದರೆ ಬೆರಣಿಯಾದೆ
ನೀನಾರಿಗಾದೆಯೋ ಎಲೆ ಮಾನವಈ ಪದ್ಯವನ್ನು ಎಲ್ಲರೂ ಕೇಳಿರಬಹುದು. ಹಾಡಿರಲುಬಹುದು. ಹಸುವಿನ ಹಾಲು, ಸಗಣಿಯ ಮಹತ್ವ ವಿವರಿಸಿರಲೂಬಹುದು. ಇದು ಸಾಮಾನ್ಯ. ದನ ಸಾಕಿದವರು ನಿತ್ಯವೂ ಸಗಣಿಯನ್ನು ತಿಪ್ಪೆಗೆ ಹಾಕಿ ವರ್ಷಕ್ಕೊಮ್ಮೆ ಮಾರಾಟ ಮಾಡಿಯೂ ಇದ್ದಾರೆ. ಆದರೆ ಹಸಿ ಸಗಣಿ ಮಾರಾಟ ಮಾಡಿದ್ದನ್ನು ಕೇಳಿದ್ದೀರಾ ನೋಡಿದ್ದೀರಾ?!

https://youtu.be/9jvxjVVhUDIಹೌದು, ಈಗ ಕಾಲ ಬದಲಾಗಿದೆ. ದನಗಳು ಸಾಕುವವರು ಅಪರೂಪವಾಗಿದ್ದಾರೆ. ಹೀಗಾಗಿ ದನದ ಸಗಣಿ ಸಿಗುವುದು ಮತ್ತೂ ದುಸ್ತರವಾಗಿದೆ. ನಗರಗಳು ಬೆಳೆದಿವೆ. ವಿಸ್ತಾರ ಪಡೆದುಕೊಳ್ಳುತ್ತಿವೆ. ನಗರೀಕರಣ ಹೆಚ್ಚಿದಂತೆ ಹಳ್ಳಿಗಳಿಂದ ವಲಸೆ ಹೋದವರು ಹಬ್ಬಗಳನ್ನು ಆಚರಿಸುವುದು ನಿಲ್ಲಿಸುತ್ತಾರೆಯೇ? ಖಂಡಿತವಾಗಿಯೂ ಇಲ್ಲ.ಹಬ್ಬಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವುದು ದೀಪಾವಳಿ. ಇದು ಹಳ್ಳಿಸೊಗಡಿನ ಹಬ್ಬ. ಕೃಷಿಕರ ಹಬ್ಬ. ಎಲ್ಲಾ ಬೆಳೆಗಳು ಫಸಲಿಗೆ ಬಂದು ನಿಂತಿರುವ ಸಂದರ್ಭ. ಹಾಗಾಗಿ ರಾಗಿತೆನೆ, ಸಜ್ಜೆತೆನೆ, ಗರಿಕೆ, ನವಣೆತೆನೆ, ಅಣ್ಣೆಸೊಪ್ಪು ತೆನೆ – ಹೀಗೆ ಎಲ್ಲಾ ಬೆಳೆಯ ತೆನೆಗಳನ್ನು ಇಟ್ಟು ಪೂಜಿಸಲಾಗುತ್ತದೆ.ದೀಪಾವಳಿಗೆ ದೀಪ ಹಚ್ಚಲು ಸಗಣಿ ಬೇಕೇಬೇಕು. ಪ್ರತಿಯೊಂದು ಉಂಡೆಗಳನ್ನು ಮಾಡಿ ಅದಕ್ಕೆ ಈ ತೆನೆಗಳನ್ನು ಸಿಕ್ಕಿಸಿ ಪೂಜೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗ ಇದು ವಿಶೇಷವಲ್ಲ. ಹಸಿ ಸಗಣಿ ಮಾರುವುದು ವಿಶೇಷ.ದೀಪಾವಳಿಗೆ ದೀಪಹಚ್ಚಲು, ತೆನೆಗಳನ್ನು ಅದಕ್ಕೆ ಸಿಕ್ಕಿಸಲು ನಗರಗಳಲ್ಲಿ ಹಸಿ ಸಗಣಿ ಸಿಗುವುದು ಕಷ್ಟ. ಇದನ್ನೇ ವ್ಯಾಪಾರಸ್ಥರು ಮಾರಾಟದ ವಸ್ತುವನ್ನಾಗಿ ಮಾರಾಟ ಮಾಡುತ್ತಿದ್ದಾರೆ. ತುಮಕೂರು ನಗರದ ಸೋಮೇಶ್ವರ ಮುಖ್ಯರಸ್ತೆಯ ಸುನಿತಾ ಹೋಟೆಲ್ ಬಳಿ ಮಕ್ಕಳು ಹಸಿ ಸಗಣಿ ಇಟ್ಟುಕೊಂಡು ಮಾರುತ್ತಿದ್ದರು.ಒಂದು ಮಿದಿಕೆ ಸಗಣಿ ಬೆಲೆ 10 ರೂಪಾಯಿ. ಅದು ಹಸುವಿನ ಸಗಣಿ. ಹಸುಗಳು ಹಾಕಿದ್ದ ತೊಪ್ಪೆಗಳನ್ನು ತಂದು ಮಾರಾಟಕ್ಕೆ ಇಟ್ಟುಕೊಂಡಿದ್ದಿದು ಕಂಡುಬಂತು. ಎಷ್ಟು ಎಂದು ವಿಚಾರಿಸಿದಾಗ ಒಂದು ಹಿಡಿ 10 ರೂಪಾಯಿ ಎನ್ನುತ್ತಿದ್ದರು. ಹಬ್ಬಕ್ಕೆ ಸಗಣಿ ಬೇಕಲ್ಲ ಎಂದು ಗ್ರಾಹಕರು ಅರ್ಥಾತ್ ಭಕ್ತರು 10 ರೂಪಾಯಿ ಕೊಟ್ಟು ಖರೀದಿಯೂ ಮಾಡಿದರು. ಆ ಮಕ್ಕಳು ಹತ್ತು ರೂಪಾಯಿ ಸಿಕ್ಕಿತ್ತಲ್ಲ ಎಂಬುದಕ್ಕೆ ಅವರ ಮುಖದಲ್ಲಿನ ಮಂದಹಾಸವೇ ಹೇಳುತ್ತಿತ್ತು. ಅಂತೂ ಹಸಿ ಸಗಣಿಗೂ ಕಾಲ ಬಂತು ಅನ್ನಿ.

ಶಿರಾದಲ್ಲಿ ಡಿ.ಕೆ.ಶಿಗೆ ಅದ್ಧೂರಿ ಸ್ವಾಗತ

ತುಮಕೂರು:
ಕಳೆದ 55 ದಿನಗಳ ಹಿಂದೆ ಶಾಸಕ ಡಿ.ಕೆ.ಶಿವಕುಮಾರ್ ಇಡಿ ಬಂಧನಕ್ಕೆ ಒಳಗಾದ ಸಂದರ್ಭದಲ್ಲಿ  ಜಿಲ್ಲೆಯ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಮಠದ ಪೀಠಾಧಿಪತಿ ನಂಜಾವಧೂತ ಸ್ವಾಮೀಜಿ ಬಂಧನ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಯಲ್ಲಿ ಜೈಲಿನಿಂದ  ಜಾಮೀನು ಪಡೆದು ಹೊರಬಂದಿರುವ ಡಿ.ಕೆ.ಶಿ ಭಾನುವಾರ ಸ್ವಾಮೀಜಿ ಭೇಟಿ ಮಾಡಲು ಬಂದರು..
ಶಿವಕುಮಾರ್‌ ಅವರು 7.50ರ ಹೊತ್ತಿಗೆ ಶಿರಾ ಪಟ್ಟಣಕ್ಕೆ ಬಂದರು. ಕಾಂಗ್ರೆಸ್‌ ಮುಖಂಡ ಟಿ.ಬಿ.ಜಯಚಂದ್ರ ಅವರು ಶಿವಕುಮಾರ್‌ ಅವರನ್ನು ಸ್ವಾಗತಿಸಿದರು.
ಸಾವಿರಾರು ಜನ ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು
ಶಿರಾ ಶಾಸಕ ಬಿ.ಸತ್ಯನಾರಾಯಣ, ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅವರು ಶಿವಕುಮಾರ್‌ ಅವರನ್ನು ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ  ಉಬಯಕುಶಲೋಪರಿ ವಿಚಾರಿಸದರು.
ಡಿ.ಕೆ.ಶಿವಕುಮಾರ್‌ ಅವರನ್ನು ಬರಮಾಡಿಕೊಳ್ಳಲು ಅಭಿಮಾನಿಗಳು ನಗರದ ವೃತ್ತದಲ್ಲಿ ಸಂಜೆ 5 ಗಂಟೆಯಿಂದಲೂ ಕಾಯುತ್ತಿದ್ದರು.
ಡಿ.ಕೆ.ಶಿ. ಬಂಧನವಾದಾಗ ಒಕ್ಕಲಿಗ ಸಮುದಾಯ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತ್ತು. ಆ ಪ್ರತಿಭಟನೆಯಲ್ಲಿ ನಂಜಾವಧೂತ ಸ್ವಾಮೀಜಿ ಪ್ರಮುಖ ಪಾತ್ರ ವಹಿಸಿ ಬಂಧನದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಡಿ.ಕೆ.ಶಿ ಶೀರಾ ಪಟ್ಟಣಕ್ಕೆ ಬಂದ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಬಾವುಟಗಳ ಹಾರಾಟ ಜೋರಾಗಿತ್ತು. ೆರಡೂ ಪಕ್ಷದ ಕಾರ್ಯಕರ್ತರು, ಮುಖಂಡರಿಂದ ಡಿ.ಕೆ.ಶಿ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್ ಗಳು ಪಟ್ಟಣದ ತುಂಬಾ ರಾರಾಜಿಸುತ್ತಿದ್ದವು.
ಪಟ್ಟಣದಲ್ಲಿ ಅದ್ದೂರು ಮೆರವಣಿಗೆ ನಡೆದ ನಂತರ ಡಿ.ಕೆ.ಶಿವಕುಮಾರ್ ಹಾಗೂ ಮುಖಂಡರು ಪಟ್ಟಣನಾಯಕನಹಳ್ಳಿ ಗುರುಗುಂಡಬ್ರಹ್ಮೇಶ್ವರ ಮಠಕ್ಕೆ ಭೇಟಿ ನೀಡಿ ನಂಜವಾಧೂತ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಕೆಲಕಾಲ ಸ್ವಾಮೀಜಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿದ್ದರು.