Saturday, December 6, 2025
Google search engine
Home Blog Page 331

ತುಮಕೂರು ಎಸ್ಪಿ ಕೌರವನಾಗಿ ರಂಗಕ್ಕೆ ಬಂದಾಗ… ಹೀಗಿತ್ತು

2

ಪೊಲೀಸ್ ವರಿಷ್ಠರೊಬ್ಬರು ರಂಗದ ಮೇಲೆ ಅದೂ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅಂದರೆ ಮೆಚ್ಚಲೇ ಬೇಕು. ಒಬ್ಬ ಅಧಿಕಾರಿ ಸಾಮಾನ್ಯರನ್ನು ತಲುಪುವುದು ಅಂದರೆ ಹೀಗೇನೆ. ಡಾ.ವಂಶಿಕೃಷ್ಣ ಆಯ್ಕೆ ಮಾಡಿಕೊಂಡಿದ್ದು ದುರ್ಯೋದನ ಪಾತ್ರವನ್ನು ಅದು ಒಂದು ಹಾಡು ಮಾತ್ರ. ಆ ಒಂದು ಹಾಡಿಗೆ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ಕಲೆ ಎಲ್ಲರನ್ನು ಆಕರ್ಷಿಸುತ್ತದೆ. ಸಾಹಿತ್ಯ, ಸಂಗೀತ ರಂಗಭೂಮಿ –ಹೀಗೆ ಕೆಲವು ಕಲೆಗಳು ಜನರಿಗೆ ಅನಂದ ಉಂಟು ಮಾಡುವ ಶಕ್ತಿ ಇರುತ್ತದೆ. ಅದೇ ರೀತಿ ರಂಗಭೂಮಿಗೂ ಅಂತಹ ಶಕ್ತಿ ಇದೆ. ಬಾಲರಿಂದ ವೃದ್ಧವರೆಗೂ, ಅನಕ್ಷರನಿಂದ ಅಧಿಕಾರಿವರೆಗೂ ಎಲ್ಲರೂ ರಂಗಭೂಮಿ ಕಲೆಗೆ ಸೋಲದವರಿಲ್ಲ. ನಾಟಕ ಪ್ರೇಕ್ಷಕರನ್ನು ತಲ್ಲೀನರನ್ನಾಗಿಸುವಂತೆ ಮಾಡುತ್ತದೆ. ಅದರಲ್ಲೂ ಪೌರಾಣಿಕ ನಾಟಕಗಳೆಂದರೆ ಜನರಿಗೆ ಇನ್ನಿಲ್ಲದ ಆಸಕ್ತಿ.

ಹೌದು, ನಾಟಕ ಎಲ್ಲರನ್ನು ವೇದಿಕೆ ಮೇಲೆ ಕುಣಿಯುವಂತೆ ಮಾಢುವ ವಿಶೇಷ ಶಕ್ತಿ ಇದೆ. ಹಳ್ಳಿಯ ಹೈದನೂ ರಂಗದ ಮೇಲೆ ನಿಂತು ಹಾಡುತ್ತಾನೆ. ಸರ್ಕಾರಿ ನೌಕರರು ನಟಿಸುತ್ತಾರೆ. ಹಾಗೆಯೇ ಪೊಲೀಸರು ಕೂಡ ನಾಟಕದಲ್ಲಿ ನಟಿಸುವುದು ಸಾಮಾನ್ಯ. ಆದರೆ ಒಬ್ಬ ಅಧಿಕಾರಿ ಅದೂ ಜಿಲ್ಲಾ ಮಟ್ಟದ ಪೊಲೀಸ್ ವರಿಷ್ಠರು ನಾಟದಲ್ಲಿ ಅಭಿನಯಿಸುತ್ತಾರೆಂದರೆ ವಿಶೇಷವೇ. ಅಂದಹಾಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಟ ಡಾ.ವಂಶಿ ಕೃಷ್ಣ ಅವರು ಇಂದು ರಂಗದ ಮೇಲೆ ಕಾಣಿಸಿಕೊಂಡು ಗಮನ ಸೆಳೆದರು.

ವಂಶಿಕೃಷ್ಣ ಅವರು ಮೂಲತಃ ಆಂಧ್ರದವರು. ತೆಲುಗು ಮತ್ತು ಇಂಗ್ಲೀಷ್ ಚೆನ್ನಾಗಿ ಮಾತನಾಢಬಲ್ಲರು. ಆದರೆ ಕನ್ನಡ ಅಷ್ಟೊಂದು ಸರಾಗವಾಗಿ ಹೇಳಲು ಬರುವುದಿಲ್ಲ. ಅಂತಾಧ್ಧರಲ್ಲೂ ಅವರ ಯಾವುದೇ ಬಿಂಕವನ್ನು ಇಟ್ಟುಕೊಳ್ಳದೆ ರಂಗದ ಮೇಲೆ ದುರ್ಯೋಧನನ ಪೋಷಾಕಿನಲ್ಲಿ ಕಾಣಿಸಿಕೊಂಡು ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಿದರು.

ಕೇವಲ ಜನರ ರಕ್ಷಣೆ ಮಾತ್ರವಲ್ಲ. ದುಷ್ಟರನ್ನು ಮಟ್ಟಹಾಕುವುದಲ್ಲ. ಪ್ರೇಕ್ಷಕರ, ನಾಟಕ ಪ್ರೇಮಿಗಳ ಹೃದಯವನ್ನೂ ಗೆಲ್ಲಬಲ್ಲೆ ಎಂಬುದನ್ನು ತೋರಿಸಿಕೊಟ್ಟರು. ದುರ್ಯೋಧನನ ಗತ್ತು, ಅವರಲ್ಲಿತ್ತು. ಮೊದಲೇ ಪೊಲೀಸ್ ಕಟ್ಟುಮಸ್ತಾದ ದೇಹ. ದುರ್ಯೋಧನನ ಪಾತ್ರಕ್ಕೆ ಮಾಡಿ ಹೇಳಿಸಿದಂತೆ ಇತ್ತು. ಅಂತೂ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ರಂಗದ ಮೇಲಿದ್ದ ಕೆಲವೇ ಕ್ಷಣವಾದರೂ ಪ್ರೇಕ್ಷಕರ ಹೃದಯದಲ್ಲಿ ನೆಲೆಸಿದರು ಎಂದೇ ಹೇಳಬೇಕು.

ಬೆಳಕಿನ ಹಬ್ಬ ದೀಪಾವಳಿ ಪಟಾಕಿ ಹಬ್ಬವಾಗಿದ್ದು ಹೇಗೆ?

0

ಲೇಖಕರು

ಕೆ.ಜೆ.ಹರ್ಷಿತ

ನಾಡಿನ ಹಬ್ಬಗಳಲ್ಲಿ ದೀಪಾವಳಿ ಪ್ರಮುಖ ಹಬ್ಬ. ವ್ಯಾಪಾರಿಗಳು, ಉದ್ಯಮಿಗಳಿಗೆ ಹೊಸ ಲೆಕ್ಕದ ಪುಸ್ತಕ ಆರಂಭವಾಗುವ ದಿನ. ರೈತರ ಪಾಲಿನ ಕೊಯ್ಲು, ಜಾನುವಾರು ಹಬ್ಬ.

ಕತ್ತಲೆಯು ನಮ್ಮಲ್ಲಿ ಅಧೈರ್ಯವನ್ನು ತುಂಬುತ್ತದೆ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಆದ್ದರಿಂದ ಜನರು ಭರವಸೆಯ ಬೆಳಕನ್ನು ಹಣತೆಗಳನ್ನು ಹಚ್ಚಿ ಸ್ವಾಗತಿಸುತ್ತಾರೆ. ಕೆಟ್ಟ ಶಕ್ತಿಗಳನ್ನು ದೂರಮಾಡಲು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.

ಹಿಂದೆ ದೀಪಾವಳಿ ಹಬ್ಬದಂದು ಮಣ್ಣಿನ ಹಣತೆಗಳನ್ನು ಹಚ್ಚಿ ಮನೆ, ದೇಗುಲಗಳನ್ನು ದೀಪಗಳಿಂದ ಅಲಂಕರಿಸಿ, ಬಾಳೆಕಂದು, ಮಾವಿನ ತೋರಣ ಕಟ್ಟಿ ಮನೆಮಂದಿಯೆಲ್ಲ ಉತ್ಸಾಹದಿಂದ ಆಚರಿಸುತ್ತಿದ್ದರು. ಗ್ರಾಮೀಣ ಭಾಗದಲ್ಲಿ ಜಾನುವಾರುಗಳನ್ನು ಅಲಂಕರಿಸಿ ಬೆಂಕಿಯ ಸುತ್ತಲೂ ಸುತ್ತಿಸಿ ಈಡಿನ ಹಬ್ಬವಾಗಿ ಆಚರಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಣ್ಣಿನ ದೀಪಗಳು ಕಡಿಮೆಯಾಗಿ ತರಹೇವಾರಿ ಪಟಾಕಿಗಳು ದೀಪಾವಳಿ ಹಬ್ಬವನ್ನು ತೆಕ್ಕೆಗೆ ತೆಗೆದುಕೊಂಡಿವೆ.

ಬಲಿ ರಾಜನ ಕಥೆ

ದೀಪಾವಳಿಯ ಹಬ್ಬಕ್ಕೆ ಬಲಿರಾಜನ ಕತೆಯೂ ಸೇರಿಕೊಂಡಿದೆ. ವಾಮನ ಅವತಾರದಲ್ಲಿ ಬಂದ ವಿಷ್ಣುವು ಬಲಿರಾಜನನ್ನು ಮೂರು ಅಡಿ ಜಾಗ ಬೇಕೆಂದು ಕೇಳಿದನು. ಆಗ ಬಲಿರಾಜ ಅಹಂಕಾರ ಹಾಗೂ ಕ್ಷುಲಕ ಎನ್ನುವ ಭಾವದಿಂದ ಸಮ್ಮತಿ ವ್ಯಕ್ತ ಪಡಿಸಿದನು. ಆಗ ವಾಮನನು ಒಂದು ಹೆಜ್ಜೆಯನ್ನು ಭೂಮಿಯಲ್ಲಿ, ಇನ್ನೊಂದು ಹೆಜ್ಜೆಯನ್ನು ಸ್ವರ್ಗದಲ್ಲಿ ಇಟ್ಟನು. ನಂತರ ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕೆಂದು ಬಲಿ ರಾಜನನ್ನು ಕೇಳಿದನು. ಆಗ ಬಲಿ ರಾಜನು ತನ್ನ ತಲೆಯ ಮೇಲೆ ಇಡು ಎಂದು ಹೇಳಿದನು. ಆಗ  ವಾಮನ ರೂಪದಲ್ಲಿದ್ದ ವಿಷ್ಣು ಬಲಿರಾಜನ ತಲೆಯ ಮೇಲೆ ಕಾಲಿಟ್ಟು ಪಾತಾಳಕ್ಕೆ ತುಳಿಯುತ್ತಾನೆ.

ಹೀಗಾಗಿ ಮನೆಗಳಲ್ಲಿ ಬಲಿ ಪಾಡ್ಯಮಿಯಂದು  [2019, ಅಕ್ಟೋಬರ್ 29 ಮಂಗಳವಾರ]  ಹಸುವಿನ ಸಗಣಿಯಿಂದ ಬಲಿ ಕೋಟೆ ಹಾಕಿ ಅದನ್ನು ಜೋಳದ ತೆನೆ, ರಾಗಿ ತೆನೆ, ಸಜ್ಜೆ ತೆನೆ, ಉಚ್ಚೆಳ್ಳು ಹೂವು, ಕುಂಬಳ ಹೂವು ಇತ್ಯಾದಿಗಳಿಂದ ಅಲಂಕರಿಸಿ ಕೋಟೆಯ ಸುತ್ತಲೂ ದೀಪಗಳನ್ನಿಟ್ಟು ಕೋಟೆಯ ಮಧ್ಯಭಾಗಕ್ಕೆ ಹಾಲು ಎರೆದು ಪೂಜಿಸುವ ಪದ್ದತಿ ಇದೆ.

ಬಡಮಾರನಹಳ್ಳಿಯಲ್ಲಿ ಮಾಲ್ಮೀಕಿ ಜಯಂತಿ

0

ಶಿರಾ; ತಾಲ್ಲೂಕಿನ ಬಡಮಾರನಹಳ್ಳಿಯಲ್ಲಿ ಇದೇ 30 ರಂದು ಮಧ್ಯಾಹ್ನ ೧ ಗಂಟೆಗೆ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತಿದೆ.

ವೀರ ಮದಕರಿ ನಾಯಕ ಯುವಕರ ಸಂಘ ಆಯೋಜಿಸಿರುವ ಸಮಾರಂಭದಲ್ಲಿ ಪ್ರಸನ್ನಾನಂದ ಪುರಿ ಸ್ವಾಮೀ ಜಿ, ವಾಲ್ಮೀಕಿ ಸಂಜಯ ಕುಮಾರ ಸ್ವಾಮೀಜಿ, ಬಿ.ಪಿ.ಲಿಂಗಯ್ಯ ಮತ್ತಿತರರು ಭಾಗವಹಿಸುವರು.

ಸ್ವಾಮೀಜಿಗಳ ಭವ್ಯ ಮೆರವಣಿಗೆ ‌ನಂತರ ಸಭಾ ಕಾರ್ಯಕ್ರಮ ಆರಂಭವಾಗಲಿದೆ. ಗ್ರಾಮಸ್ಥರು ಸಮಾರಂಭ ಆಯೋಜನೆಗಾಗಿ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ ಎಂದು ವಕೀಲ, ಸಮುದಾಯದ ಮುಖಂಡರಾದ ಮನೋಹರ್ ಅವರು ಪಬ್ಲಿಕ್ ಸ್ಟೋರಿಗೆ ತಿಳಿಸಿದ್ದಾರೆ.

ಈಜಲು ಹೋದ ಇಬ್ಬರು ಬಾಲಕರು ನೀರು ಪಾಲು

ಶಿರಾ: ಈಜಲು ಹೋದ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ಶಿರಾ ತಾಲೂಕು ಪಟ್ಟನಾಯಕನಹಳ್ಳಿಯಲ್ಲಿ ನಡೆದಿದೆ. ಮೃತರನ್ನು 9 ವರ್ಷದ ಮಾರುತಿ ಮತ್ತು 11 ವರ್ಷದ ಸಲ್ಮಾನ್ ಎಂದು ಗುರುತಿಸಲಾಗಿದೆ.

ಶನಿವಾರ ಸಂಜೆ ಪಟ್ಟನಾಯಕನಹಳ್ಳಿಯ ಸಿಡಿಯಜ್ಜನಪಾಳ್ಯದಲ್ಲಿ ಶಾಲೆ ಬಿಟ್ಟ ಕೂಡಲೇ ಆ ಮಕ್ಕಳು ಆಟವಾಡುತ್ತ ಗ್ರಾಮದ ಸಮೀಪವೇ ಇರುವ ಕಟ್ಟೆಗೆ ಹೋಗಿದ್ದಾರೆ. ನೀರಿನಲ್ಲಿ ಈಜಲು ಹೋದಾಗ ಈಜು ಬಾರದೆ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ ಎನ್ನಲಾಗಿದೆ.

ಎರಡು ಕುಟುಂಬಗಳ ಪೋಷಕರು ಶನಿವಾರ ಸಂಜೆಯವರೆಗೂ ಸುತ್ತಮುತ್ತಲ ಹೊಲಗದ್ದೆಗಳಲ್ಲಿ ಹುಡುಕಿದ್ದಾರೆ. ಎಲ್ಲಿಯೂ ಕಾಣದಿದ್ದಾಗ ಕಂಗಾಲಾಗಿದ್ದಾರೆ. ಕತ್ತಲು ಹೆಚ್ಚಿದಂತೆ ಏನೂ ಮಾಡಲು ತೋಚದೆ ಮನೆಗೆ ಮರಳಿದ್ದಾರೆ.
ಭಾನುವಾರ ಮುಂಜಾನೆ ಎದ್ದು ಕಟ್ಟೆಯ ಬಳಿ ನೋಡಿದಾಗ ಇಬ್ಬರು ಬಾಲಕರ ಶವಗಳು ತೇಲುತ್ತಿದ್ದುದು ಕಂಡು ಬಂದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮದ ನೂರಾರು ಮಂದಿ ಕಟ್ಟೆಯ ಬಳಿಗೆ ಬಂದು ಶವಗಳನ್ನು ವೀಕ್ಷಿಸಿದರು.

ಮಕ್ಕಳ ತಂದೆ-ತಾಯಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಮಹಿಳೆಯರು ಅವರನ್ನು ಸಾಂತ್ವನಗೊಳಿಸುತ್ತಾ ತಾವು ಕಣ್ಣೀರು ಹಾಕತೊಡಗಿದರು. ಎಲ್ಲರೂ ದುಃಖದ ಮಡುವಿನಲ್ಲಿ ಮುಳುಗಿದ್ದರು.

ಶ್ !! ಕೇಬಿ ವಾಕಿಂಗ್ ಹೋಗಿದ್ದಾರೆ

0

ಕ್ಷಮಿಸಿ
ಕೇಬಿ ವಾಕಿಂಗ್
ಹೋಗಿದ್ದಾರೆ
ಇನ್ನೇನು
ಬರುತ್ತಾರೆ

ಟೀಶರ್ಟ್ ಮೇಲೆ
ಕಾಕಾ
ಲುಂಗಿಗೆ ಇನ್ ಶರ್ಟ್
ಮಾಡಿ
ದಪ್ಪ ದಂಡ ಹಿಡಿದು
ಹೊಗಿದ್ದಾರೆ
ಕೇಬಿ
ಇನ್ನೇನು ಬರುತ್ತಾರೆ
ಈದಿನ
ಸ್ವಲ್ಪ ಲೇಟಾಗಬಹುದು
ಅಷ್ಟೇ…

https://www.youtube.com/watch?v=OfeYZCpF4yk

ಉದ್ದಕೂ ಬಿದ್ದ
ಉಪ್ಪಾರಳ್ಳಿ
ರಸ್ತೆ
ಬಿಕೋ ಅನ್ನಿಸುತ್ತದೆ
ಕೇಬಿಯ
ಕಾಯುತ್ತಿದೆ
ವಾಪಸ್
ಬರುವವರೆಂದು
ಸರ್ಕಲ್‌ ಹೊಟೆಲಲ್ಲಿ
ಟೀ ಕುಡಿದು
‘ಬನ್ ತಿಂತಿಯೇನೋ’
ಎಂದು
ಕೇಳುವವರೆಂದು.

ವಾಕಿಂಗ್ ಹೋಗಿದ್ದಾರೆ
ಕೇಬಿ
ಇನ್ನೇನು ಬರುತ್ತಾರೆ

ಅಲ್ಲಮನ ಜೊತೆ ಹೋಗಿದ್ದರೆ
ಮಾತ್ರ
ತಡವಾಗುತ್ತದೆ
ಮುಂದಣ ಹೆಜ್ಜೆಗಳನ್ನು ಅರಿಯದೇ
ಅಲ್ಲಿಂದ ಬರಲಾರರು
ಬರುವಾಗ

[espro-slider id=1486]
ಬಕಾಲ ಮುನಿಯ
ಕಂಡು
ಮಾತಾಡಿಸಿ ದಕ್ಲರ ಜೊತೆ
ಹೋಗಿ
ಗಲ್ಲೇಬಾನಿಯ ಆಳಕ್ಕಿಣುಕಿ
ಅಲ್ಲೇ
ನಿಂತುಬಿಟ್ಟರೋ
ಏನೋ?
ಯಾರಾದರೂ ಎಚ್ಚರಿಸಿ
ಕಳಿಸುವವರೆಗೆ
ನಾವೂ ಕಾಯಬೇಕು

ಇಲ್ಲಾ….
ಇಲ್ಲೆ ಎಲ್ಲೋ ತಿರುವಿನಲ್ಲಿ
ಇದ್ದಾರೆ
ಇನ್ನೇನು ಬರುತ್ತಾರೆ
ವಾಕಿಂಗ್ನಿಂದ
ಕೇಬಿ.

ನಟರಾಜ್ ಹೊನ್ನವಳ್ಳಿ

ರಂಗಕರ್ಮಿ

ಪಟಾಕಿ ದುಡ್ಡು ನಟಿ ಶಿಲ್ಪಾಶೆಟ್ಟಿ ಏನ್ ಮಾಡ್ತಾರೆ?

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ, ಆಕೆಯ ತಂಗಿ ಶಮಿತಾ ಇಬ್ಬರೂ ಪಟಾಕಿ ದುಡ್ಡುಏನ್ ಮಾಡ್ತಾರೆ.

ಇಬ್ಬರೂ ನಟಿ ಮಣಿಯರು ತಮ್ಮ ಹದಿಮೂರನೇ ವರ್ಷಕ್ಕೆ ಪಟಾಕಿ ಖರೀದಿ ಮಾಡುವುದನ್ನು ಬಿಟ್ಟರಂತೆ. ಆ ಹಣದಲ್ಲಿ ಸಮೋಸಾ, ವಡೆ ಖರೀದಿಸಿ ಬಡವರಿಗೆ ಕೊಡುತ್ತಿದ್ದರಂತೆ.
ಪಟಾಕಿ ಹೊಡೆಯುವುದರಿಂದ ಪರಿಸರಕ್ಕೆ ಹಾನಿ. ಅದರ ಶಬ್ದ ಕಿರಿಕಿರಿ ಉಂಟು ಮಾಡುತ್ತದೆ ಎಂದಿದ್ದಾರೆ ಶಿಲ್ಪಾ ಶೆಟ್ಟಿ.

ನಾಲ್ಕು ವರ್ಷದ ನನ್ನ ಮಗನಿಗೂ ಪಟಾಕಿ ಕಂಡರೆ ಇಷ್ಟ ಇಲ್ಲ ಎಂದಿರುವ ಅವರು, ಮನೆಯನ್ನು ವಿದ್ಯುತ್ ದೀಪಾಂಲಂಕಾರ ಮಾಡಿ ಸಿಹಿ ಅಡುಗೆ ಮಾಡುವ ಮೂಲಕ ದೀಪಾವಳಿ ಆಚರಿಸುವುದಾಗಿ ಹೇಳಿಕೊಂಡಿದ್ದಾರೆ.

ಎಲ್ಲರಿಗೂ ದಕ್ಕದ ಕೆಬಿಎಸ್

1

ಲೇಖಕರು

ಕೆ.ಈ.ಸಿದ್ದಯ್ಯ

ಪತ್ರಕರ್ತರು ಹಾಗೂ ಸಾಹಿತಿ

ಅದು ಕವಿ ದ್ವಾರನಕುಂಟೆ ಎಚ್. ಗೋವಿಂದಯ್ಯ ಅವರ ‘ಉರಿದು ಬಿದ್ದು ಮರ’ ಕವನ ಸಂಕಲನ ಬಿಡುಗಡೆ ಸಮಾರಂಭ. ನಡೆದದ್ದು ತುಮಕೂರಿನ ಕನ್ನಡ ಭವನದಲ್ಲಿ. ಹಿರಿಯ ಸಾಹಿತಿ ಡಾ.ಅಗ್ರಹಾರ ಕೃಷ್ಣಮೂರ್ತಿ ಉದ್ಘಾಟನೆ,ಕವಿ ಕೆ.ಬಿ.ಸಿದ್ದಯ್ಯ ಅತಿಥಿಗಳು. ನಾನೂ ವೇದಿಕೆಯ ಮೇಲಿದ್ದೆ. ಕೆ.ಬಿ. ಪಕ್ಕದಲ್ಲೇ ಕೂತಿದ್ದ ನನ್ನ ಕಿವಿಯಲ್ಲಿ ಈ ‘ದಲಿತ’ ತೆಗೆಯುತ್ತಾರಲ್ಲ ಯಾಕೆ ಗೊತ್ತೇ ಅಂದರು. ನಾನು ‘ಅದು ರಾಜಕೀಯ, ಆ ಪದವನ್ನೇ ಇಲ್ಲವಾಗಿಸಿದರೆ ದಲಿತರೇ ಇಲ್ಲವಾಗುತ್ತಾರಲ್ಲ ಅಂದೆ ಯು ಆರ್ ಕರೆಕ್ಟ್ ಅಂದರು. ನಂತರ ಕೆ.ಬಿ ಸಭೆಯಲ್ಲಿ ಮಾತನಾಡಿದರು. ‘ದಲಿತ ಪದ ತೆಗೆಯುವುದರ ಹಿಂದೆ ಸಾಂಸ್ಕøತಿಕ ರಾಜಕಾರಣವಿದೆ. ದಲಿತರ ಐಡೆಂಟಿಟಿಯನ್ನು ಇಲ್ಲವಾಗಿಸುವ ಪ್ರಯತ್ನ ಅದು’ ಎಂದು ಮಾತು ಮುಗಿಸಿ ಬಂದು ಮತ್ತೆ ಕುಳಿತರು. ‘ಸಿದ್ದಯ್ಯ ಕರೆಕ್ಟ್ ಅಲ್ವೇನೋ’ ಅಂದರು. ‘ಹೌದು’ ಎಂದಿದ್ದೆ. ಪ್ರತಿ ಭಾಷಣವೂ ಭಿನ್ನತೆಯಿಂದ ಕೂಡಿರುತ್ತಿತ್ತು.

ಹಿರಿಯರು ಮತ್ತು ಕಿರಿಯರು ಎನ್ನದೆ ಎಲ್ಲರೊಂದಿಗೆ ಆಪ್ತವಾಗಿ ಬೆರೆಯುತ್ತಿದ್ದ, ಹೆಗಲ ಮೇಲೆ ಕೈಹಾಕಿ ಮಾತನಾಡಿಸುತ್ತಿದ್ದ ಅವರ ನಡವಳಿಕೆ ನನ್ನಂತಹವರು ಕುಗ್ಗುವಂತೆ ಮಾಡಿತ್ತಿತ್ತು. ಅಂಥ ಕೆಬಿ ಇಲ್ಲ, ಮುಂಜಾನೆಯೇ ತೀರಿಹೋದರೆಂಬ ಸುದ್ದಿ ನನ್ನನ್ನು ನಿದ್ರೆಯಿಂದ ಏಳುವಂತೆ ಮಾಡಿತ್ತು. ಅಪಘಾತದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ ಅವರು ಉಳಿಯುವ ಲಕ್ಷಣಗಳು ಇಲ್ಲದಿದ್ದರೂ ಒಂದು ಆಸೆಯಂತೂ ಚಿಗುರೊಡೆತ್ತು. ಆ ಚಿಗುರು ಮಳೆಗಾಲದ ರಭಸಕ್ಕೆ ಸಿಕ್ಕಿ ನಲುಗಿ ಹೋಯಿತು.
ಆಪ್ತ ವಲಯದಲ್ಲಿ ಬಕಾಲ ಮುನಿ ಮತ್ತು ಕೆಬಿ ಆಗಿದ್ದರು. ಇಂಗ್ಲೀಷ್ ಸಾಹಿತ್ಯದ ವ್ಯಾಪಕ ಓದು ಅವರೊಬ್ಬ ಪ್ರಬುದ್ಧ ಭಾಷಣಕಾರರನ್ನಾಗಿ ಮಾಡಿತ್ತು. ನನಗೆ ತಿಳಿದ ಮಟ್ಟಿಗೆ ಅವರ ಬರಹಕ್ಕಿಂತ ಭಾಷಣವೇ ತೀಕ್ಷ್ಣವಾಗಿರುತ್ತಿತ್ತು. ಭಾಷಣದಲ್ಲಿದ್ದ ಒಳನೋಟಗಳು ಬರಹದಲ್ಲಿ ಕಂಡುಬರಲಿಲ್ಲ. ಖಂಡಕಾವ್ಯ ಪರಂಪರೆ ಮುಂದುವರಿಕೆಗೆ ಪ್ರಯತ್ನಿಸಿದರು. ದಕ್ಲಕಥಾದೇವಿ, ಬಕಾಲ, ಅನಾತ್ಮ, ಗಲ್ಲೇಬಾನೆ ಎಂಬ ನಾಲ್ಕು ಖಂಡಕಾವ್ಯಗಳನ್ನು ಕೊಟ್ಟ ಕೆಬಿ ಸಮಾಜೋ-ಆಧ್ಯಾತ್ಮಿಕ ದೃಷ್ಟಿಕೋನದಿಂದ ಬರೆದರು. ಅವರ ಕಾವ್ಯ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ ಎಂಬ ಆರೋಪಗಳು ಇವೆ. ಕತ್ತಲೊಡನೆ ಮಾತುಕತೆ, ಬುದ್ದನ ನಾಲ್ಕು ಸತ್ಯಗಳು ಎಂಬ ಗದ್ಯಕೃತಿಗಳು ಹೊರಬಂದಿವೆ.

ಬರೆದಿದ್ದು ಕಡಿಮೆಯಾದರೂ ಎಲ್ಲವೂ ಮೌಲ್ವಿಕ ಕೃತಿಗಳೇ. ಕಿರಿದರೋಳ್ ಪಿರಿದರ್ಥವನ್ನು ಕಟ್ಟಿಕೊಡುವಂತಹವು. ವಿಮರ್ಶಕ ಕಿ.ರಂ. ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ ಮೊದಲಾದವರು ಕೆಬಿ ಅವರ ಖಂಡಕಾವ್ಯಗಳನ್ನು ಬಿಡುಗಡೆ ಮಾಡಿ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಮೇಲ್ನೋಟಕ್ಕೆ ಕೃತಿಗಳ ಶೀರ್ಷಿಕೆಗಳೆಲ್ಲವೂ ಕುಲಮೂಲದಿಂದ ಬಂದಥವುಗಳು ಎಂಬಂತೆ ಕಂಡುಬಂದರೂ ಕಾವ್ಯದ ಆಳದೊಳಗೆ ವಿಶ್ವವ್ಯಾಪಿ ವಿಷಯಗಳನ್ನು ಮುಖಾಮುಖಿಯಾಗಿಸುತ್ತವೆ. ಜಾಗತಿಕರಣದ ಹುನ್ನಾರಗಳಿಂದ ದೇಶೀ ಸಂಸ್ಕøತಿಗೆ ಪೆಟ್ಟು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಅವರ ಬರಹ ಸಾಮಾನ್ಯ ಓದುಗನಿಗೆ ನಿಲುಕುವುದು ಕಷ್ಟ.
ತುಮಕೂರು ಮತ್ತು ರಾಜ್ಯದ ಸಾಹಿತ್ಯದ ವಲಯದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದ ಕವಿ ಕೆ.ಬಿ.ಸಿದ್ದಯ್ಯ ಒಳಮೀಸಲಾತಿ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಕೆಲವೊಮ್ಮೆ ಸಾಹಿತಿಯಂತೆ, ರಾಜಕಾರಣಿಯಂತೆ ಅವರ ನಡಿಗೆ ಇತ್ತು. ಯಾಕೆಂದರೆ ಹೋರಾಟಗಾರರಾಗಿದ್ದ ಕಾರಣ ಹಾಗೆ ಕಂಡಿದ್ದು ಸಹಜವೂ ಹೌದು. ಭಾಷಣದಲ್ಲಿ ಕೆಲವರಿಗೆ ಚಾಟಿ ಬೀಸಿ ಬಿಸಿ ಮುಟ್ಟಿಸಿದ್ದರು. ಆದರೆ ಅವರ ಬರಹಗಳಲ್ಲಿ ರಾಜಕೀಯ ಪ್ರವೇಶವಾಗದಂತೆ ನೋಡಿಕೊಂಡರು.

ಕೆ.ಬಿ.ಸಿದ್ದಯ್ಯ ಮತ್ತು ಸ್ನೇಹ ಬಳಗ ಕುಡಿಯಲು ಕೂತರೆ ಗಂಟೆಗಳೇ ಕಳೆಯುತ್ತಿದ್ದವು. ಅಲ್ಲಿ ಚರ್ಚೆಯಾಗುತ್ತಿದ್ದ ವಿಷಯ ಹಲವು. ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ, ಸಾಹಿತ್ಯಕ, ವ್ಯಕ್ತಿಗತ ಹೀಗೆ ಎಲ್ಲ ಕೋನಗಳಿಂದ ಚರ್ಚೆ ನಡೆಯುತ್ತಿತ್ತು. ಇಂಗ್ಲೀಷ್ ಸಾಹಿತ್ಯ ಷೇಕ್ಸ್‍ಪಿಯರ್ ನಾಟಕಗಳ ಸಾಲುಗಳನ್ನು ಉದ್ದರಿಸಿ ವಿವರಿಸುತ್ತಿದ್ದರು. ಉಳಿದವರು ಇವರ ಮಾತುಗಳನ್ನು ಕೇಳುತ್ತಾ ಮದ್ಯ ಹೀರುತ್ತಾ ಕೇಳಿಕೊಳ್ಳಬೇಕಾಗಿತ್ತು. ಹಾಗಿತ್ತು ಅವರ ವಾಗ್ಜರಿ. ಕೇಳಲು ಆನಂದ.

ದರೈಸ್ತ್ರಿ ಪ್ರಶಸ್ತಿ ಸ್ಥಾಪಿಸಿ ಅಹಿಂದ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರತಿವರ್ಷವು ಪ್ರಶಸ್ತಿ ಕೊಡಲು ಹಣಕಾಸಿನ ತೊಂದರೆಯಾಗುತ್ತದೆ ಎಂದು ಹೇಳಿದಾಗ ಹಾಗಾದರೆ ಏನು ಮಾಡಬೇಕು ಎಂದು ನನ್ನನ್ನೇ ಕೇಳಿದ್ದರು. ಮೂರು ವರ್ಷಕ್ಕೊಮ್ಮೆ ಪ್ರಶಸ್ತಿ ನೀಡಿದರೆ ಒಳ್ಳೆಯದು. ಹಣ ಸಂಗ್ರಹಕ್ಕೂ ಕಷ್ಟವಾಗುವುದಿಲ್ಲ ಎಂದು ಹೇಳಿದಾಗ ಯೋಚನೆ ಮಾಡೋಣ ಎಂದಷ್ಟೇ ಹೇಳಿದ್ದರು. ಅಪಘಾತ ಆಗುವುದಕ್ಕೂ ಮೊದಲು ಸಿಕ್ಕಿದ್ದ ಕೆಬಿ ಪ್ರೀತಿಯಿಂದಲೇ ಮಾತಾಡಿ ಹೇಗಿದ್ದೀಯ ಎಂದು ಆರೋಗ್ಯ ವಿಚಾರಿಸಿ ಬೆನ್ನು ತಟ್ಟಿ ಹೋಗಿದ್ದರು. ಅದು ಇನ್ನೂ ನೆನಪಿದೆ ಆದರೆ ಅವರಿಲ್ಲ.

ಸುದೀರ್ಘ ಕಾಲ ಸಾಹಿತ್ಯ ಕ್ಷೇತ್ರದಲ್ಲಿದ್ದರೂ ಅವರು ಇನ್ನೂ ಬರೆಯಬೇಕಾಗಿತ್ತು. ಇಂಗ್ಲೀಷ್‍ನಿಂದ ಅನುವಾದ ಸಾಹಿತ್ಯ ಬರೇಕಿತ್ತು. ಆದರೆ ಅಂತಹ ಕೆಲಸಕ್ಕೆ ಕೈ ಹಾಕಲೇ ಇಲ್ಲವೆಂಬ ಬಗ್ಗೆ ಹಲವರಲ್ಲಿ ಸಿಟ್ಟು ಕೂಡ ಇದೆ. ಅದು ಪ್ರೀತಿ ಸಿಟ್ಟು. ದ್ವೇಷದ ಸಿಟ್ಟಲ್ಲ ಎಂಬುದನ್ನು ನಾವು ಮನಗಾಣಬೇಕಾಗಿದೆ.

ಗಾಂಧಿ ಅಸ್ಮಿತೆ ಪಡೆಯಿರಿ: ಶಾಸಕ ಜ್ಯೋತಿಗಣೇಶ್

ಗಾಂಧಿಯವರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗಾಂಧಿಯ ಜೀವನಚರಿತ್ರೆ ಕುರಿತ ಛಾಯಾಚಿತ್ರ ಪ್ರದರ್ಶನ ಹಲವು ಅಪರೂಪದ ಚಿತ್ರಗಳು ಗಮನ ಸೆಳೆದವು. ಅಕ್ಟೋಬರ್ 28ರವರೆಗೆ ಪ್ರದರ್ಶನ ಇರಲಿದೆ.

ವಾರ್ತಾ ಮತ್ತು ಪ್ರಸಾರ ಇಲಾಖೆ ಆಯೋಜಿಸಿದ್ದ ಪ್ರದರ್ಶನದಲ್ಲಿ ನೂರಾರು ಮಂದಿ ಪಾಲ್ಗೊಂಡು ಗಾಂಧಿ ಸ್ಮರಣೆ ಮಾಡಿಕೊಂಡರು. ಗಾಂಧಿ ಹಲವು ವೈವಿಧ್ಯಮ ಫೋಟೋಗಳು ನೋಡುಗರ ಗಮನ ಸೆಳೆದವು.ಸಾವಿರಾರು ಅಕ್ಷರಗಳಲ್ಲಿ ಹೇಳಬೇಕಾದ ವಿಷಯವು ಒಂದೊಂದು ಪೋಟೋಗಳು ಪ್ರೇಕ್ಷಕರಿಗೆ ಹೇಳಿದವು.

ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ಯುವತಿಯರು ಪ್ರದರ್ಶನಕ್ಕೆ ಭೇಟಿ ಕೊಟ್ಟು ಮಾಹಿತಿ ಪಡೆದರು. ಸಂಜೆಯವರೆಗೂ ನಡೆಯುವ ಗಾಂಧಿ ಜೀವನಚರಿತ್ರೆ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ಸಾವಿರಾರು ಮಂದಿ ಭೇಟಿ ನೀರಿಕ್ಷೆ ವಾರ್ತಾ ಮತ್ತು ಪ್ರಸಾರ ಇಲಾಖೆಯದ್ದು. ಯುವ ಪೀಳಿಗೆಗೆ ಗಾಂಧಿ ಮಾಹಿತಿಯನ್ನು ರವಾನಿಸಿ ಗಾಂಧಿ ಮೌಲ್ಯಗಳನ್ನು ಪ್ರಚುರಪಡಿಸುವುದು ಪ್ರದರ್ಶನದ ಉದ್ದೇಶವಾಗಿದೆ.

ಪ್ರದರ್ಶನಕ್ಕೆ ಶಾಸಕ ಜಿ.ಬಿ ಜ್ಯೋತಿಗಣೇಶ್ ಗಾಂಧೀ ಜೀವನ ಮೌಲ್ಯಗಳು ಹಾಗೂ ಅವರ ಹೋರಾಟಗಳ ಅಪರೂಪದ ಛಾಯಾಚಿತ್ರ ವೀಕ್ಷಿಸಿ ಸ್ಮರಣೆ ಮಾಡಿಕೊಳ್ಳಬಹುದು ಎಂದರು.

ಜಿಲ್ಲಾಧಿಕಾರಿ ಡಾ.ರಾಕೇಶ್ಕುಮಾರ್ ಸತ್ಯ ಅಹಿಂಸೆಯ ಮೂಲಕ ಸ್ವಾತಂತ್ರ್ಯ ಹೋರಾಟ ಹಾಗೂ ಅಪಾರ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ತೋರಿಸಿದ ಮಹಾತ್ಮ ಗಾಂಧೀ ಸ್ಮರಣೆ ಸದಾಕಾಲವೂ ನಮಗೆಲ್ಲ ಪ್ರೇರಕ. ಗಾಂಧೀ ಕನಸನ್ನು ನನಸಾಗಿಸುವಲ್ಲಿ ಯುವಕರು ಕೈಜೋಡಿಸಬೇಕು ಎಂದು ತಿಳಿಸಿದರು.

ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್, ವಿಭಾಗೀಯ ಸಂಚಾಲಕ ಫಕ್ರುದ್ದೀನ್, ಬಸ್ ನಿಲ್ದಾಣಾಧಿಕಾರಿ ಶಿವಕುಮಾರ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಮಾತನಾಡಿದರು.

ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟಗಳಲ್ಲಿ ಮಹಾತ್ಮಾ ಗಾಂಧೀ ಕರ್ನಾಟಕಕ್ಕೆ ಭೇಟಿ ನೀಡಿದ ಪ್ರದೇಶಗಳು, ಅಸ್ಪøಶತೆ ನಿವಾರಣೆಗಾಗಿ ಗಾಂಧೀ ನಡೆಸಿದ ಆಂದೋಲನ, 1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೇಸ್ ಅಧಿವೇಶನ ಸೇರಿದಂತೆ ಅವರ ಜೀವನ ಚರಿತ್ರೆಯ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.

ನಿಜದೊಳು ಪುಗಲಿಲ್ಲ ಗಲ್ಲೇಬಾನಿಯ

0

ಡಾ.ಓ.ನಾಗರಾಜು

ಬೆಳೆಸಲಿಲ್ಲ ಕರವಿಡಿದು ಒಳಗೊಳ್ಳಲಿಲ್ಲಎಂದು ಬರಿದೆ ದೂರಿದೆನಲ್ಲಓದಿಸಲಿಲ್ಲ ಬರೆಸಲಿಲ್ಲ ಬುದ್ದಿಗಲಸಿ ಮೇಲೆತ್ತಲಿಲ್ಲಎಂದೆಣಿಸಿದ ಸೆಡವಿನಲಿಬರಿದೆ ಅಂತರ ಕಾಯ್ದುಕೊಂಡೆನಲ್ಲಮುಡಿದಿದ್ದರು ಬುದ್ಧನಗೆಮಲ್ಲಿಗೆಯ ಶ್ವೇತಕುರುಳ ಶಿರೋರುಹದಲಿಮಿಂಚಿಸುತ್ತಿದ್ದರು ಅಲ್ಲಮನ ಜ್ಞಾನ ಪ್ರಭೆಯ ವೇದಿಕೆಯಲಿ ಬೆಳ್ಳಿದಾಡಿಯ ನೀವಿತೋರಿದ್ದರು ಅನಾತ್ಮನಮಳೆಬಿಲ್ಲ ಹುಬ್ಬಕುಣಿಸಿಚಂದ್ರಹಾಸನಲಿಅಬ್ಬರಿಸುತಿದ್ದರು ಅವರೆ ದಮನಿತ ದರೈಸ್ತ್ರೀ ದನಿಯಾಗಿ ದಂತ ಹೊಳಹಿನ ಕ್ರಾಂತಿ ಕಿಡಿಯಾಗಿಪರಂಪರೆಯ ದರ್ಶಿಸಿದ್ದರುಬಕಾಲನ ನುಡಿಸಿ ಬಡಿಸಿಆಯ್ದುಕೊಳಲಿಲ್ಲ ನಾವೆಚೆಲ್ಲಿದ ಅ ಆ ಸಂತನ ಚಿಂತನಾಮುತ್ತುಗಳನಿಜದೊಳು ಪುಗಲಿಲ್ಲ ಗಲ್ಲೇಬಾನಿಯಂತರಂಗಅಂಕಾಲನವಿನಾ ಜರಿದಾಡಿದೆವಲ್ಲ

ಮುಂದುವರೆಸುತ್ತಿದ್ದೆನೆ?ಜರಿಯುವುದ ಆ ಒಂದು ವಿದ್ಯಮಾನ ಜರುಗದೇ ಹೋಗಿದ್ದರೆ..!ಆ ಒಂದು ದಿನ ಇಳಿಹೊತ್ತಿನ ಅಹರ್ನಿಶಿ ಸಂಕ್ರಮಣದಲಿಸಭಾಂಗಣದ ತುಂಬೆಲ್ಲಾ ತುಳುಕಿರಲು ಆಬಾಲಾವಯೋಕಲಾಭಿಜನರ್ಕಳುತ್ರಿಕರಣಗಳ ಸಹಿತ ಅಣಿಯಾಗಿದ್ದವಲ್ಲ ಮಾಧ್ಯಮಂಗಳು..!ಬಿಡುಗಡೆ ಮಾಡಿದಹೊತ್ತಿಗೆಯ ನೆತ್ತಿಯಲಿ ಹೊತ್ತರು ಕೆ ಬಿ ಸಿದ್ದಯ್ಯನೆರೆದವರ ದಂಗುಬಡಿಸಿಕುರಂಗರಾಜನ ಪಾದವಿದುಹೊತ್ತುನಾವ್ ಮೆರೆಸದೆ ಇನ್ನಾರು ಮೆರೆಸುವರುಎಂದುಘೋಷಿಸಿ ಬಿಟ್ಟರಲ್ಲ..!ನಂಬಿ…ಕೊಚ್ಚಿಹೋಯಿತು ಕ್ಷಣದಲಿಇಲ್ಲಿವರೆಗಿನ ಸ್ವಾರ್ಥತನು ಕೊಂಪೆಯ ಅಸಹನೆಅನಾದರ ಪಂಕತುಂಬಿಕೊಂಡೆನಾಗಲೆ ಅಆ ಸಂತನಸಂಚಿತ ಠೇವಣಿಯಾಗಿ ಈಗವರು ನೆನಕೆಯ ಭಂಡಾರಖಾಲಿತನ ಎಂಬುದಿಲ್ಲ ಈಗನನ್ನೊಳಗಿರವರು ಅನಾತ್ಮಕುರಂಗನ ಸಮಕ್ಷಮದಲಿ..ಇನಿತೂ ಅಂತರವಿಲ್ಲ ಅಗೊಬರುತಿಹರು ನಮ್ಮ ಅಲ್ಲಮ..ಬರಿದೆ ದೂರಿದೆವಲ್ಲ..?

-ಡಾ.ಓ.ನಾಗರಾಜು

ಸಾಹಿತಿ -ಸಂಶೋಧಕ ರಂಗಪ್ರೇಮಿತುಮಕೂರು

9448659646dr.o.nagaraj@gmail.com

ಅಬ್ಬಬ್ಬಾ! ಇಲ್ನೋಡಿ ಸ್ಮಾರ್ಟ್ ಸಿಟಿ

ತುಮಕೂರು: ಎಲ್ಲೆಡೆ ಜೋರು ಪ್ರಚಾರ ಪಡೆದುಕೊಂಡಿರುವ ಸ್ಮಾರ್ಟ್ ಸಿಟಿಗಳು ಹೇಗಿರಬಹುದು ಎಂಬ ಕುತೂಹಲವೇ?

ತುಮಕೂರು ನಗರಕ್ಕೆ ಬಂದು ನೋಡಿ ಎನ್ನುತ್ತಾರೆ ವಕೀಲ ಎಂ.ಬಿ.ನವೀನ ಕುಮಾರ್.

ದೇಶದಲ್ಲಿ ಎರಡನೇ ಹಂತದಲ್ಲಿ ಆಯ್ಕೆಯಾದ ಸ್ಮಾರ್ಟ್ ಸಿಟಿಗಳಲ್ಲಿ ತುಮಕೂರು ನಗರ ಸಹ ಸೇರಿದೆ. ಸ್ಮಾರ್ಟ್ ಸಿಟಿಗೆ ನಗರ ಆಯ್ಕೆಯಾಗುತ್ತಿದ್ದಂತೆ ಜನ ಸಂಭ್ರಮಿಸಿದ್ದರು. ಈಗ ಅದೇ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ನಡೆಯುತ್ತಿರುವ ಕಾಮಗಾರಿಗಳು ಅವೈಜ್ಞಾನಿಕ ವಾಗಿವೆ. ಕುಂಟುತ್ತಾ ಸಾಗಿವೆ. ಇದರಿಂದ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಕಾಮಗಾರಿಯಿಂದಾಗಿ ರಸ್ತೆ ಗಳ ದೂಳುಮಯವಾಗಿವೆ. ಇದರಿಂದ ಮಕ್ಕಳು, ದೊಡ್ಡವರು ಆಸ್ತಮಾ, ಜ್ವರ, ಕೆಮ್ಮಿನಿಂದ ನರಳುತ್ತಿದ್ದಾರೆ.

ಸ್ಮಾರ್ಟ್ ಸಿಟಿ ಕಾಮಗಾರಿಗಳಿಂದ ಯಾರಿಗೂ ನೆಮ್ಮದಿ ಇಲ್ಲ. ಕಾಮಗಾರಿ ಇಷ್ಟು ನಿಧಾನವಾಗಿ ಮಾಡಬಾರದು. ಕಾಮಗಾರಿ ವೇಳೆ ರಸ್ತೆ ನಿರ್ವಹಣೆ ಗಾಗಿಯೇ ಹಣ ನೀಡುತ್ತಾರೆ. ಅಗೆದ‌ ಮಣ್ಣನ್ನು ಹೊರಗೆ ಸಾಗಿಸುವ ಬದಲು ರಸ್ತೆಯಲ್ಲೇ ಹರಡಲಾಗುತ್ತಿದೆ. ಇದರಿಂದ ದೂಳು ಹೆಚ್ಚಾಗಿದೆ. ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಾರೆ ವಕೀಲ ನವೀನ್.

ಬಾರ್ ಲೈನ್ ರಸ್ತೆಯಲ್ಲಿ ಮೂರು ತಿಂಗಳಿಂದ ರಸ್ತೆ ಅಗೆತ ಆರಂಭಿಸಿರುವುದು ಇನ್ನು ಮುಗಿದಿಲ್ಲ. ಮಳೆ ಬಂದರೆ ರಸ್ತೆಗೆ ಕಾಲಿಡಲಾಗುವುದಿಲ್ಲ. ಮಳೆ ನಿಂತರೆ ದೂಳಿಗೆ ಉಸಿರಾಡಲು ಸಾಧ್ಯವಾಗುವುದಿಲ್ಲ. ಇಂತ ಅದ್ವಾನ ಎಲ್ಲೂ ಕಂಡಿಲ್ಲ. ಶಾಸಕರು ಗಮನ ಹರಿಸಬೇಕು ಎಂದರು.

ಇನ್ನೊಂದೆಡೆ ‌ದುಂಡು ಮೇಜಿನ ಸಭೆ ನಡೆಸಿರುವ ನಾಗರಿಕ ಸಂಘಟನೆ ಗಳು ಇಡೀ ಯೋಜನೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.

ಅತ್ತ ತುಮಕೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಗಳು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವರ ಸಹ ಭಾಗಿತ್ವ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

( ಚಿತ್ರಗಳು: ನಿರಂಜನ್)