Thursday, May 7, 2026
Google search engine
Home Blog Page 173

ಬೆಂಗಳೂರಿನಲ್ಲಿರುವ ಶಿರಾ ಮತದಾರರಿಗೆ ಡಿಸಿಎಂ ಹೇಳಿದ್ದೇನು ಗೊತ್ತಾ?

Publicstory. in


ಬೆಂಗಳೂರು: ಇಷ್ಟು ದಿನ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ನಾಯಕರಿಗೆ ಸಮಸ್ಯೆಗಳ ಅರಿವೇ ಇರಲಿಲ್ಲ. ಇನ್ನು ಅವರು ಆ ಸಮಸ್ಯೆಗಳ ಪರಿಹಾರದ ಬಗ್ಗೆ ಮಾತನಾಡುವುದು ಎಲ್ಲಿಂದ ಬಂತು. ಹೀಗಾಗಿ ರಾಜ್ಯ ಸಾಕಷ್ಟು ಬೆಲೆ ತೆತ್ತಿತು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಟೀಕಾಪ್ರಹಾರ ನಡೆಸಿದರು.ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ನೆಲೆಸಿರುವ ಶಿರಾ ವಿಧಾನಸಭಾ ಕ್ಷೇತ್ರದ ಮತದಾರರ ಸಭೆಯಲ್ಲಿ ಅವರು‌ ಮಾತನಾಡಿದರು. ಸಚಿವ ಕೆ.ಗೋಪಾಲಯ್ಯ ಆಯೋಜಿಸಿದ್ದರು.ಅಭಿವೃದ್ಧಿ, ಜನರ ಕೌಶಲ್ಯ, ಶಿಕ್ಷಣ ಇತ್ಯಾದಿಗಳ ಮಹತ್ವ ಗೊತ್ತಿಲ್ಲದ ನಾಯಕರು ಜನರನ್ನು ಸದಾ ಕತ್ತಲೆಯಲ್ಲೇ ಇಟ್ಟರು. ಸಮಸ್ಯೆಗಳನ್ನು ಯಾವಾಗಲೂ ಜೀವಂತವಾಗಿಟ್ಟುಕೊಂಡು ಜನರ ಕಣ್ಣೀರಿನ ಮೇಲೆ ರಾಜಕೀಯ ಮಾಡುವುದೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಚಾಳಿ ಎಂದರು.ಕೆಲ ನಾಯಕರು ಮತ್ತು ಪಕ್ಷಗಳಿಗೆ ಚುನಾವಣೆ ಎಂದರೆ ಭಾವನಾತ್ಮಕ ವಿಷಯಗಳನ್ನು ಕೆದಕುವುದು ಹಾಗೂ ಜಾತಿಯಂತಹ ಸೂಕ್ಷ್ಮ ವಿಚಾರಗಳನ್ನು ಮುನ್ನೆಲೆಗೆ ತಂದು ಬೇಳೆ ಬೇಯಿಸಿಕೊಳ್ಳುವುದು ಅಭ್ಯಾಸವಾಗಿದೆ. ಈ ಚುನಾವಣೆಯಲ್ಲೂ ಅದೇ ಪುನರಾವರ್ತನೆ ಆಗುತ್ತಿದೆ. ಇದು ನಿಜಕ್ಕೂ ಅಸಹ್ಯದ ಪರಮಾವಧಿ. ಪ್ರಗತಿಯ ವಿಷಯ ಬಿಟ್ಟು ಭಾವನಾತ್ಮಕ ವಿಷಯಗಳ ಮೂಲಕ ರಾಜಕೀಯ ಮಾಡುವ ಶಕ್ತಿಗಳಿಗೆ ಪಾಠ ಕಲಿಸಬೇಕು ಎಂದು ಅವರು ಹೇಳಿದರು.ಜನರ ಮುಂದೆ ಬಂದಾಗ ಪ್ರಗತಿಯ ಬಗ್ಗೆ ಮಾತನಾಡಬೇಕು. ನಮಗೆ ಹಾಗೆ ಮಾತನಾಡಲು ಧೈರ್ಯವಿದೆ. ಕೈಗಾರಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಪೂರಕವಾದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಸುಧಾರಣೆ ತಿದ್ದುಪಡಿ ಕಾಯ್ದೆ ಇತ್ಯಾದಿಗಳನ್ನು ಜಾರಿಗೆ ತಂದಿದ್ದೇವೆ. ಕೃಷಿಕರ ಪಕ್ಷ ಎಂದು ಹೇಳಿಕೊಳ್ಳುವ ಪಕ್ಷಗಳ ನಾಯಕರು ರೈತರಿಗಾಗಿ ಏನು ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು.ಕೆಲವರಿಗೆ ರಾಜಕೀಯ ಎಂದರೆ ತಾವು, ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಬೆಳೆಸಿಕೊಳ್ಳುವುದೇ ಆಗಿದೆ. ನಿರಂತರವಾಗಿ ಜಾತಿ ಹೆಸರು ಹೇಳಿಕೊಂಡೇ ತಮ್ಮ ಕುಟುಂಬಗಳನ್ನು ಬೆಳೆಸಿಕೊಂಡರು, ಮನೆಯಲ್ಲಿ ಇದ್ದವರೆಲ್ಲರನ್ನೂ ನಾಯಕರನ್ನಾಗಿ ಬೆಳೆಸಿಕೊಂಡರು. ಅವರನ್ನು ನಂಬಿದ ಕಾರ್ಯಕರ್ತರು ಬೀದಿ ಪಾಲಾದರು. ಆ ಮಹಾನ್‌ ನಾಯಕರಿಗೆ ಮತ ಹಾಕಿದರು ಕೂಡ ಅತಂತ್ರರಾಗುವ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದರು. ಇಂತಹ ನಾಯಕರು ಹಾಗೂ ಅವರು ಪ್ರತಿನಿಧಿಸುವ ರಾಜಕೀಯ ಪಕ್ಷಗಳು ನಮಗೆ ಬೇಕೆ ಎಂಬುದನ್ನು ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಡಿಸಿಎಂ ಟೀಕಾಪ್ರಹಾರ ನಡೆಸಿದರು.ಶಿರಾದಲ್ಲಿ ಅಭಿವೃದ್ಧಿ ಶೂನ್ಯಇತ್ತೀಚೆಗೆ ನಮ್ಮ ಅಭ್ಯರ್ಥಿ ನಾಮಪತ್ರ ಸಲ್ಲಿಸಬೇಕಾದರೆ ನಾನು ಕೂಡ ಶಿರಾಗೆ ಹೋಗಿಬಂದೆ. ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆಯೂ ನನ್ನಲ್ಲಿ ಮಾಹಿತಿ ಇದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳನ್ನು ಈ ಕ್ಷೇತ್ರದಿಂದ ಗೆಲ್ಲಿಸಲಾಗಿದೆ. ಆದರೆ, ನಿರಂತರವಾಗಿ ಅಲ್ಲಿ ರಾಜಕೀಯ ನಡೆದಿದೆಯೇ ಹೊರತು ಕಿಂಚಿತ್ತೂ ಅಭಿವೃದ್ಧಿಯಾಗಿಲ್ಲ. ಹೆದ್ದಾರಿಗೆ ಹೊಂದಿಕೊಂಡಿರುವ ಆ ಪಟ್ಟಣದಲ್ಲಿ ಒಂದು ಕೈಗಾರಿಕೆ ಇಲ್ಲ. ಕೃಷಿಕರಂತೂ ಕಷ್ಟದ ಜೀವನ ನಡೆಸುತ್ತಿದ್ದಾರೆಂದು ಡಾ.ಅಶ್ವತ್ಥನಾರಾಯಣ ದೂರಿದರು.ಸಭೆಯಲ್ಲಿ ಸಚಿವ ಗೋಪಾಲಯ್ಯ, ಮಾಜಿ ಸಂಸದ ಹಾಗೂ ರಾಜೇಶಗೌಡ ಅವರ ತಂದೆ ಮೂಡಲಗಿರಿಯಪ್ಪ ಸೇರಿದಂತೆ ಬಿಜೆಪಿಯ ಮುಖಂಡರು ಪಾಲ್ಗೊಂಡಿದ್ದರು.

ಆಂಧ್ರ ಕಾಂಗ್ರೆಸ್ ಲೀಡರ್ ರಘುವೀರಾ ರೆಡ್ಡಿ ಜತೆ ಮಾತುಕತೆ; ಗಡಿದಾಟಿ ಅಚ್ಚರಿ ಮೂಡಿಸಿದ ಡಿಸಿಎಂ

Publicstory. in


ಶಿರಾ: ಉಪ ಚುನಾವಣೆ ಎದುರಿಸುತ್ತಿರುವ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಅನಿರೀಕ್ಷಿತವಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ರಾಜ್ಯದ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನ ನೀಲಕಂಠಾಪುರಕ್ಕೆ ಭೇಟಿ ನೀಡಿ ಅಲ್ಲಿನ ಮಾಜಿ ಸಚಿವ ಹಾಗೂ ಆಂಧ್ರದ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ರಘುವೀರಾ ರೆಡ್ಡಿ ಅವರನ್ನು ಭೇಟಿಯಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದರು. ಈ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಡಿಸಿಎಂ ಬರುತ್ತಿದ್ದಂತೆಯೇ ಆತ್ಮೀಯವಾಗಿ ಬರಮಾಡಿಕೊಂಡ ರೆಡ್ಡಿ, ಪ್ರೀತಿಯಿಂದ ಸತ್ಕರಿಸಿ ಗೌರವಿಸಿದರು.

ಬಳಿಕ ಇಬ್ಬರೇ ಸುದೀರ್ಘ ಮಾತುಕತೆ ನಡೆಸಿದರಲ್ಲದೆ, ಈ ಸಂದರ್ಭದಲ್ಲಿ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಡಾ.ಅಶ್ವತ್ಥನಾರಾಯಣ ಮನವಿ ಮಾಡಿಕೊಂಡರು.

ಇದಕ್ಕೆ ಪ್ರತಿಯಾಗಿ ರೆಡ್ಡಿ ನಗುಮೊಗದಿಂದಲೇ ಪ್ರತಿಕ್ರಿಯಿಸಿದರು. ಉಭಯ ಕುಶಲೋಪರಿಯ ಜತೆಗೆ ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜಕೀಯ ಪರಿಸ್ಥತಿಗಳ ಬಗ್ಗೆಯೂ ಅವರು ಮಾತನಾಡಿಕೊಂಡರು.

ತಮ್ಮ ಗ್ರಾಮದಲ್ಲಿ ರೆಡ್ಡಿ ಅವರು ಶ್ರೀ ಅಯ್ಯಪ್ಪ ಸ್ವಾಮಿ, ಪಂಚಮುಖಿ ಗಣಪತಿ, ಆಂಜನೇಯ ಸ್ವಾಮಿ ದೇಗುಲಗಳನ್ನು ನಿರ್ಮಾಣ ಮಾಡಿಸುತ್ತಿದ್ದು, ಆ ದೇವಾಲಯಗಳಿಗೆ ಡಿಸಿಎಂ ಅವರನ್ನು ಕರೆದುಕೊಂಡು ಹೋಗಿ ಮಾಹಿತಿ ನೀಡಿದರು.

ಕರ್ನಾಟಕಕ್ಕೆ ಸೇರಿದ ಬಿಜೆಪಿ ನಾಯಕರೊಬ್ಬರು ಅದರಲ್ಲೂ ಕಟ್ಟರ್ ವಿರೋಧ ಪಕ್ಷವಾದ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಲು ಗಡಿ ದಾಟಿ ಬಂದ ಕ್ಷಣಗಳನ್ನು ನೀಲಕಂಠಾಪುರದ ಜನರು ಆಶ್ಚರ್ಯಚಕಿತರಾಗಿ ಗಮನಿಸಿದರು.

ಇಡೀ ಊರಿನ ಜನ ಡಿಸಿಎಂ ಬೇಟಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಡಾ.ಅಶ್ವತ್ಥನಾರಾಯಣ ಅವರು ಮಧ್ಯಾಹ್ನದ ಭೋಜನವನ್ನು ರೆಡ್ಡಿ ಅವರ ನಿವಾಸದಲ್ಲಿಯೇ ಸೇವಿಸಿದರು.

ರಘುವೀರಾ ರೆಡ್ಡಿ ಅವರು ಆಂಧ್ರ ಪ್ರದೇಶದ ವರ್ಚಸ್ವಿ ನಾಯಕರಾಗಿದ್ದು, ಯಾದವ ಸಮುದಾಯಕ್ಕೆ ಸೇರಿದವರು. ಈ ಹಿಂದೆ ಅವರನ್ನು ನಮ್ಮ ರಾಜ್ಯದ ಚಿತ್ರದುರ್ಗ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವಂತೆ ರಾಜ್ಯದ ಜನ ಒತ್ತಡ ಹೇರಿದ್ದರು.

ಕರ್ನಾಟಕ-ಆಂಧ್ರ ಗಡಿಭಾಗದಲ್ಲಿ ಅತ್ಯಂತ ಪ್ರಭಾವಿ ಆಗಿರುವ ಅವರು, ಶಿರಾ ಮತ್ತು ಮಧುಗಿರಿ ಮುಂತಾದ ಪ್ರದೇಶಗಳಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದಾರೆ.

ಮಾತೃಭಾಷೆ

0

ಲಕ್ಷ್ಮೀಸುಬ್ರಹ್ಮಣ್ಯ


ಪದಗಳಿಗೆ ಪ್ರೀತಿಯ ಮುತ್ತಿಟ್ಟು
ಮೆರೆಸ ಬೇಕೆನಿಸುತ್ತದೆ,
ಅದರಲ್ಲಿರುವ ಭಾವಕ್ಕೆ ಮತ್ತು ಬಳಸುವ
ನಮ್ಮ ಭಾಷೆಗೆ.

ಅರಿವು ಮೂಡಿದಾಗಿ೦ದ ಆಲೋಚನೆಗೆ ಅಡಿಪಾಯ ಹಾಕಿದ ಭಾಷೆ
ಭಾವನೆಗಳಿಗೆ ಬಣ್ಣ ಬಣ್ಣದ ಗರಿ ಇಟ್ಟ ಭಾಷೆ
ತೊದಲು ನುಡಿಯಿಂದ ಹಿಡಿದು ಉದ್ದುದ್ದ ಭಾಷಣ ಹೇಳುವ ಭಾಷೆ
ಅಜ್ಜಿಯ ಅಕ್ಕರೆಯ ಕೈತುತ್ತಿನ ಜೊತೆಗೆ ಕಥೆಗಳ ಹೆಣೆಯುವ ಭಾಷೆ!!

ಚಂಪೂ ವೆಂಬ ಮುತ್ತಿನ ಪದಗಳ ಮಣಿ ಹಾರವನ್ನು ಕೊರಳಿಗೆ ಧರಿಸಿ
ರಾರಾಜಿಸುವ ರಗಳೆಗಳ ಮೂಗುನತ್ತನು ಹಾಕಿ
ವಚನಗಳ ಒಡ್ಯಾಣವನು ಧರಿಸಿ
ಕಿವಿಗಳಿಗೆ ಕೀರ್ತನೆಯ ಲೋಲಾಕು ಹಾಕಿ
ಹಳದಿ ಕೆಂಪು ಸೀರೆಯಲ್ಲಿ ಎಷ್ಟು ಚೆಂದ ನೀನು!!

ಎತ್ತಿ ಮೆರೆಸಬೇಕೆನಿಸುತ್ತದೆ ನಿನ್ನ
ನಮ್ಮಮ್ಮ ನೀನು ಬಲು ಮುದ್ದು!!!

ಕೆ.ಬಿ. ನೆನಪಿನ ಕವಿಗೋಷ್ಠಿ ಭಾನುವಾರ

Publicstory. in


Tumkuru: ಜನಮಾನಸದಲ್ಲಿ ಕೆಬಿ ಎಂದೇ ಪ್ರಸಿದ್ಧಿಯಾಗಿರುವ ದಿವಂಗತ ಕೆ.ಬಿ.ಸಿದ್ದಯ್ಯ ಅವರ ನೆನಪಿನ ಕವಿಗೋಷ್ಠಿ ಇದೇ ಭಾನುವಾರ ಅ.18 ರಂದು ಬೆಳಿಗ್ಗೆ 10.30ಕ್ಕೆ ತುಮಕೂರಿನ ಎಂಪ್ರೆಸ್ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ.

ದರೈಸ್ತ್ರೀ ಸಾಂಸ್ಕೃತಿಕ ಬಳಗ ಕವಿಗೋಷ್ಠಿ ಆಯೋಜನೆ ಮಾಡಿದ್ದು, ಹಿರಿಯ ವಿಮರ್ಶಕ ನಟರಾಜ್ ಬೂದಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕವಿ ಗೋಷ್ಠಿಯ ಅನ್ನಪೂರ್ಣ ವೆಂಕಟನಂಜಪ್ಪ‌ ಚಾಲನೆ ನೀಡುವರು. ಗಂಗರಾಜಮ್ಮ ಸಿದ್ದಯ್ಯ, ಶಿವಣ್ಣ ತಿಮ್ಲಾಪುರ ಉಪಸ್ಥಿತರಿರುವರು. ಕಾರ್ಯಕ್ರಮವನ್ನು ಕೊಟ್ಟ ಶಂಕರ್ ನಿರ್ವಹಣೆ ಮಾಡುವರು.

ಕವಿಗೋಷ್ಠಿಯಲ್ಲಿ ಕೆ.ಪಿ.ನಟರಾಜ್, ಗೀತಾ ವಸಂತ್, ಬಿಳಿಗೆರೆ ಕೃಷ್ಣಮೂರ್ತಿ, ಮಲ್ಲಿಕಾ ಬಸವರಾಜ್, ಉಗಮ ಶ್ರೀನಿವಾಸ್, ಶೈಲಾ ನಾಗರಾಜ್, ಕಂಟಲಗೆರೆ ಸಣ್ಣಹೊನ್ನಯ್ಯ, ಕಮಲಾ ಬಡ್ಡಿಹಳ್ಳಿ, ಡಾ.ಅರುಂಧತಿ ರಂಗಸ್ವಾಮಿ, ಜಿ.ಇಂದ್ರಕುಮಾರ್,ರವಿಕುಮಾರ್ ನೀ.ಹ., ರವಿಕುಮಾರ್, ಗುರುಪ್ರಸಾದ್ ಕಂಟಲಗೆರೆ, ಶಬ್ಬೀರ್ ಹುಳಿಯಾರು, ಕರಿಯಣ್ಣ ನಿಶಾದ ಪಾವಗಡ, ಕುಮಾರ ಇಂದ್ರಬೆಟ್ಟ, ಬಿದಲೋಟಿ ರಂಗನಾಥ್, ಪಲ್ಲವಿ ಚೆನ್ನಂಜಪ್ಪ, ಧರ್ಮರಾಜ್ ಕಡವಿಗೆರೆ, ಮಾ.ನ.ದಿನೇಶ್, ಕೆ.ಕಾಂತರಾಜ್, ಗೋವಿಂದರಾಜು ಕಲ್ಲೂರು ಭಾಗವಹಿಸುವರು.

ಅಧ್ಯಕ್ಷತೆಯನ್ನು

ಶಿರಾ ಉಪ ಚುನಾವಣೆ: JDS ಏನು? ಎತ್ತ?

0

ತುಮಕೂರು: ಶಿರಾ ಉಪ ಚುನಾವಣೆಯಲ್ಲಿ ವಿಚಿತ್ರ ಪರಿಸ್ಥಿತಿಗೆ ಸಿಲುಕಿರುವ ಜೆಡಿಎಸ್ ಗೆ ಕಾರ್ಯಕರ್ತರೇ ಮುಖಂಡರಂತೆ ಆಂತರ್ಯದಲ್ಲಿ ಕೆಲಸ ಮಾಡುತ್ತಾರೆಯೇ ಎಂಬ ಅನುಮಾನ ಬಿಜೆಪಿ ಹಾಗೂ ಕಾಂಗ್ರೆಸ್ ಅನ್ನು ಕಾಡುತ್ತಿದೆ.

ಕ್ಷೇತ್ರದಲ್ಲಿ ಜೆಡಿಎಸ್ ಹಲವು ಮುಖಂಡರ ಭಾರದಿಂದ ನಲುಗುತ್ತಿತ್ತು. ಶಾಸಕರಾಗಿದ್ದ ದಿವಂಗತ ಸತ್ಯನಾರಾಯಣ್ ಅವರ ನಂತರ ಅನೇಕರು ಟಿಕೆಟ್ ಮೇಲೆ ಆಸೆ ಇಟ್ಟುಕೊಂಡಿದ್ದರು.

ಸೋತು ಸುಣ್ಣವಾಗಿದ್ದ ಸತ್ಯನಾರಾಯಣ ಅವರಿಗೆ ಈ ಸಲದ ಚುನಾವಣೆಯಲ್ಲೇ ಟಿಕೆಟ್ ತಪ್ಪಿಸಿ ತಾವು ಪಡೆಯುವ ಸಾಹಸವನ್ನು ಈ ಮುಖಂಡರು ಮಾಡಿದ್ದರು. ಇದಕ್ಕೆ ಸತ್ಯನಾರಾಯಣ್ ಬಳಿ ಹಣ ಇರಲಿಲ್ಲ ಎಂಬ ಕಾರಣವೂ ಒಂದಾಗಿತ್ತು. ಆದರೆ ದೇವೇಗೌಡರು ಈ ಮಾತಿಗೆ ಕಿಮ್ಮತ್ತು ನೀಡಿರಲಿಲ್ಲ. ಸತ್ಯನಾರಾಯಣ್ ಅವರಿಗೇ‌ನೆ ಟಿಕೆಟ್ ನೀಡಿದ್ದರು. ಕೊನೆಗು ಅವರು ಗೆಲವು ಸಾಧಿಸಿದರು.

ಮುಖಂಡರ ಭಾರದಲ್ಲಿ ಮುಳುಗುತ್ತಿದ್ದ ಜೆಡಿಎಸ್ ನ ಒಬ್ಬೊಬ್ಬರೇ ಮುಖಂಡರು ಬಿಜೆಪಿ ಕಡೆ ಮುಖ ಮಾಡಿದರು. ಸತ್ಯನಾರಾಯಣ್ ನಿಧನದ ಬಳಿಕ ಈ ವಲಸೆ ಹೋಗುವುದು ಹೆಚ್ಚಿದೆ.

ಈಗ ಜೆಡಿಎಸ್ ನಾವಿಕನಿಲ್ಲದ ದೋಣಿಯಂತೆ ಕಾಣುತ್ತಿರುವುದು ನಿಚ್ಚಳವಾಗಿದೆ. ಶಿರಾದಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲೆ ಕೂಡ ಅದಕ್ಕೆ ಒಳ್ಳೆಯ ನಾವಿಕ ಬೇಕಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ಯಾರೋರೊ ಒಳಿ ಮಾತನಾಡುತ್ತಿರುವುದು ಸಹ ಸಮ್ಮನೇನಲ್ಲ . ಅವರು ಜಿಲ್ಲೆಯಲ್ಲಿ ರಾಜಕೀಯ ದಾಳ ಉರುಳಿಸುವ ಸಲುವಾಗಿ ಕಾಯುತ್ತಿದ್ದಾರಷ್ಟೇ.

ಎಚ್.ಡಿ.ದೇವೇಗೌಡರನ್ನು ಕರೆತಂದು ಸೋಲಿಸಿದ ಬಳಿಕ ಜಿಲ್ಲೆಯ ಜೆಡಿಎಸ್ ನಾಯಕ ದೊಡ್ಡ ದನಿ ತೆಗೆಯದಷ್ಟು ಸಣ್ಣಗಾಗಿದ್ದಾರೆ. ಗುಬ್ಬಿ ಶಾಸಕರು, ಚಿಕ್ಕನಾಯಕನಹಳ್ಳಿ ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹದ ಅಲೆಗಳು ಜೋರಾಗಿಯೇ ಬೀಸುತ್ತಿವೆ. ಇದಕ್ಕೆ ಬೆಂಬಲ ನೀಡಿದಂತೆ ಈ ಮುಖಂಡರು ಪಕ್ಷ ಕಟ್ಟುವಲ್ಲಿ ತೋರದ ಉತ್ಸಾಹ ಹಲವು ಚರ್ಚೆಗಳಿಗೆ ನಾಂದಿಯಾಡಿದೆ.

ಮುಂದಿನ ಚುನಾವಣೆ ವೇಳೆಗೆ ಏನಾಗುತ್ತದೋ ಕಾದುನೋಡಬೇಕು. ಇವೆಲ್ಲ ಕಾರಣಗಳ ಹಿನ್ನೆಲೆಯಲ್ಲಿ ಶಿರಾ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಕಾಣಿಸಿಕೊಳ್ಳದೇ ಇರುವುದು ಆ ಪಕ್ಷ ಮಂಕಾದಂತೆ ಕಾಣುತ್ತಿದೆ.

ಸಂಪನ್ಮೂಲದ ಕೊರತೆ ಕಾರಣವೂ ಪ್ರಚಾರದಲ್ಲಿ ಜೆಡಿಎಸ್ ಹಿಂದೆ ಇರಲು ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಭ್ಯರ್ಥಿ ಅಮ್ಮಾಜಮ್ಮ ಅವರು ಕೊರೊನಾ ಸೋಂಕಿನ ಕಾರಣ ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಅಭ್ಯರ್ಥಿ ಇಲ್ಲದೇ ಚುನಾವಣೆಯ ಎದುರಿಸುವ ಇಕ್ಕಟ್ಟಿಗೆ ಆ ಪಕ್ಷ ಸಿಲುಕಿದೆ.

ಆದರೆ ಫೇಸ್ ಬುಕ್ ನಲ್ಲಿ ಹಲವರು ಕೈಗೊಂಡಿರುವ ನಿಮ್ಮ ಮತ ಯಾರಿಗೆ ಅಭಿಯಾನದಲ್ಲಿ ಅಮ್ಮಾಜಮ್ಮ ಹಿಂದೆ ಬಿದ್ದಿಲ್ಲ ಎಂಬುದೇ ಅಚ್ಚರಿಗೆ ಕಾರಣವಾಗಿದೆ.

ಸಾವಿಗೀಡಾದ ತಮ್ಮ ನಾಯಕನ ಕುಟುಂಬವನ್ನು ನಡು ನೀರಿನಲ್ಲಿ ಕೈ ಬಿಟ್ಟ ಮುಖಂಡರಿಗೆ ಪಾಠ ಕಲಿಸಲೆಂಬಂತೆ ಕಾರ್ಯಕರ್ತರೇ ಮುಖಂಡರಾಗಿ ಕೆಲಸ ನಿರ್ವಹಿಸಿದರೆ ಜೆಡಿಎಸ್ ಕಟ್ಟಿ ಹಾಕಲು ಸಾಧ್ಯವಾಗುವುದಿಲ್ಲ.

ಇಂತಹ ಪರಿಸ್ಥಿತಿ ನಿರ್ಮಾಣವಾಗಲಿದೆಯೇ ಎಂಬುದನ್ನು ಅರಿಯಲು ಇನ್ನೂ ಹತ್ತು ಹನ್ನೆರಡು ದಿನ ಕಾಯಬೇಕಾಗಿದೆ. ಕೊನೆ ದಿನಗಳಲ್ಲಿ ಅನುಕಂಪ ಯಾರ ಕೊರಳಿಗೆ ಒಂದು ಬೀಳಲಿದೆ ಎಂಬುದನ್ನು ಯಾರು ಬಲ್ಲರು ? ಅದು ಮತದಾರರಿಗಷ್ಟೇ ಗೊತ್ತು.

ಪೊಲೀಸರಿಂದ ಕೊರೊನಾ ಪಾಠ…!

Publicstory. in


ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ಪೊಲೀಸರ ಕೊರೊನಾ ಕುರಿತು ಜನರಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಚ್ಚಿದ್ದಾರೆ.ಹೆಲ್ಮೆಟ್ ಇಲ್ಲ, ಮಾಸ್ಕ್ ಇಲ್ಲ ಎಂದು ಬರೀ ದಂಡ ವಿಧಿಸುವ ಪೊಲೀಸರನ್ನು ಕಂಡು ಜುಗುಪ್ಸೆಪಡುತ್ತಿದ್ದ ಜನರೀಗ ಪೊಲೀಸರ ಕೊರೊನಾ ಪಾಠಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.ದಂಡದಿಂದ ಮಾತ್ರವಲ್ಲ ಪಾಠದಿಂದಲೂ ಜನರ ಮನ ಪರಿವರ್ತನೆ ಸಾಧ್ಯ ಎಂದು ತೋರಿಸಲು ಹೊರಟ ಪೊಲೀಸರ ಕ್ರಮ ಚೆನ್ನಾಗಿದೆ.ಚಿಕ್ಕನಾಯಕನಹಳ್ಳಿ ವೃತ್ತದ ಸಿ.ಪಿ.ಐ ಶ್ರೀಮತಿ ವೀಣಾ ಎಸ್. ಎಂ ಮಾತನಾಡಿ,
ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಮನೆಯಿಂದ ಹೊರಗಡೆ ಹೋಗಿ ವಾಪಸ್ ಮನೆಗೆ ಬಂದಾಗ ತಪ್ಪದೆ ಬಿಸಿನೀರಿನಿಂದ ಸ್ನಾನ ಮಾಡುವ ಬಗ್ಗೆ ಜನರಿಗೆ ತಿಳಿ ಹೇಳುವ ಕೆಲಸ ಮಾಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸಭೆ ಸಮಾರಂಭಗಳಿಗೆ ಅವಶ್ಯಕತೆ ಇದ್ದರೆ ಮಾತ್ರ ಭಾಗವಹಿಸಿ, ಚಿಕ್ಕ ಮಕ್ಕಳು ಹಾಗೂ ವಯಸ್ಸಾದರವರ ಬಗ್ಗೆ ಎಚ್ಚರ ವಹಿಸುವ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ, ಕೆಮ್ಮುವಾಗ ಮತ್ತು ಸೀನುವಾಗ ಕಡ್ಡಾಯವಾಗಿ ಕರಾವಸ್ತ್ರ ಬಳಸಿ, ಉಸಿರಾಟ ದಲ್ಲಿ ತೊಂದರೆ ಉಂಟಾದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ದಿನಸಿ ಅಂಗಡಿ, ಮೆಡಿಕಲ್, ಹಾಲು ಹಾಗೂ ದಿನನಿತ್ಯ ಬಳಕೆಗೆ ವಸ್ತುಗಳನ್ನು ತರಲು ಹೋದಗ 06 ಅಡಿ ಅಂತರವರುವ ಬಗ್ಗೆಯೂ ತಿಳಿವಳಿಕೆ ನೀಡಲಾಗುವುದು ಎಂದು ತಿಳಿಸಿದರು.ಪೊಲೀಸ್ ಅಧಿಕಾರಿ ರವೀಂದ್ರ.ಕೆ ನೇತೃತ್ವದಲ್ಲಿ ಅಭಿಯಾನ ಮೂಡಿಸುವುದಾಗಿ ತಿಳಿಸಿದರು.

ನಟರಾಜು ಮಡಿವಾಳ ಇನ್ನಿಲ್ಲ

ಚಿಕ್ಕನಾಯಕನಹಳ್ಳಿ: ಜೆಡಿಎಸ್ ವಕ್ತಾರ ಹಾಗೂ ಮಾಜಿ ಶಾಸಕ ಸುರೇಶ್ ಬಾಬು ಅವರ ಆತ್ಮೀಯರು ಮತ್ತು ತಾಲೂಕು ಮಡಿವಾಳ ಸಂಘದ ಅಧ್ಯಕ್ಷರಾದ ನಟರಾಜು ಮಡಿವಾಳ ಬುಧವಾರ ನಿಧಾನರಾಗಿದ್ದಾರೆ.

ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರು ಕೋವಿಡ್ ಕೇರ್ನಲ್ಲಿ ಇದ್ದ ಕಾರಣ ಸರ್ಕಾರದ ನಿಯಮದಂತೆ ಅಂತ್ಯಸಂಸ್ಕಾರವನ್ನು ಅವರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಅವರ ಗೆಳೆಯರಾದ ಕೃಷ್ಣೆ ಗೌಡ ರವರು ತಿಳಿಸಿದ್ದಾರೆ.

ಕಂದಕ ನಿವಾರಿಸುವ  ವಿದ್ಯಾಗಮ: ಸಚಿವರ ಜತೆ ಕೈ ಜೋಡಿಸೋಣ

0

ಆರ್.ತಿಪ್ಪೇಸ್ವಾಮಿ


ಕೋವಿಡ್-19 ಕಾರಣದಿಂದ ಶಾಲೆಗಳು ಮುಚ್ಚಿರುವ ಈ ಕಷ್ಟಕಾಲದಲ್ಲಿ ಮಕ್ಕಳು ಅದರಲ್ಲೂ ಗ್ರಾಮೀಣ, ಬಡ ವಿದ್ಯಾರ್ಥಿಗಳು ಕಲಿಕೆಯಿಂದ ದೂರ ಉಳಿಯುವುದನ್ನು ತಪ್ಪಿಸಲು, ಔಪಚಾರಿಕ ಶಿಕ್ಷಣಕ್ಕೆ ಪರ್ಯಾಯವಾಗಿ, ಮಕ್ಕಳನ್ನು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿ ಇಟ್ಟುಕೊಳ್ಳುವ ಹಾಗೂ ಅವರಲ್ಲಿ ನಿರಂತರ ಕಲಿಕೆಯನ್ನು ಸ್ವಯಂ ಕಲಿಕಾ ವಿಧಾನಗಳ ಮೂಲಕ ಮುಂದುವರೆಸುವುದೇ ಈ ʻವಿದ್ಯಾಗಮʼ.

ಈ ಕಾಯ್ರಕ್ರಮದ ಅಡಿಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ವಾಸ ಮಾಡುವ ಸ್ಥಳಕ್ಕೇ ತೆರಳಿ, ಅಲ್ಲಿ ಲಭ್ಯವಿರುವ ಸ್ಥಳಾವಕಾಶದಲ್ಲಿ ಒಂದೆರಡು ಅವಧಿಯ ಕಾಲ ಇಲಾಖಾ ರೂಪಿಸಿರುವ ʻಪಠ್ಯವಸ್ಥುʼವನ್ನು ಮಕ್ಕಳಿಗೆ ಬೋಧನೆ ಮಾಡಿ, ಹೋಂ ವರ್ಕ್ ನೀಡಿ, ಮೌಲ್ಯಮಾಪನ ಮಾಡುವುದೇ ಪ್ರಮುಖ ಆಶಯವಾಗಿದೆ.

ಕೇಂದ್ರ ಸರ್ಕಾರವೂ ಸಹ ಮೆಚ್ಚುಗೆ ವ್ಯಕ್ತಪಡಿಸಿ, ಇತರ ರಾಜ್ಯಗಳಿಗೆ ಮಾದರಿ ಎಂದಿರುವ ಈ ಮಹತ್ವಾಕಾಂಕ್ಷಿ ಕಾಯ್ರಕ್ರಮ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಜಾರಿಗೆ ಬಂದ ಬಳಿಕ 4-5ತಿಂಗಳಿನಿಂದ ಮನೆಯಲ್ಲೇ ಇದ್ದ ಮಕ್ಕಳಿಗೆ ಹೊಸ ಚೈತನ್ಯ ಬಂದತಾಯಿತು.

ಗ್ರಾಮೀಣ ಭಾಗದ ಮಕ್ಕಳ ಪೋಷಕರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರೂ ತಮ್ಮ ಮಕ್ಕಳ ಶೈಕ್ಷಣಿಕ ʻಭವಿಷ್ಯʼಕ್ಕೆ ಕವಿದಿದ್ದ ಕಾರ್ಮೋಡ ದೂರವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.

ಲಾಕ್ಡೌನ್ ನಿಂದ ಉದ್ಯೋಗ ಕಳೇದುಕೊಂಡು ಬೇರೆ ಬೇರೆ ನಗರಗಳಿಂದ ಸ್ವಂತ ಊರುಗಳಿಗೆ ವಾಪಸ್ಸಾದ ಹಾಗೂ ಖಾಸಗಿ ಶಾಲೆಗೆ ದಾಖಲು ಮಾಡಿದ್ದ ಎಷ್ಟೋ ಸ್ಥಳೀಯ ಪೋಷಕರು ತಮ್ಮ ಮಕ್ಕಳನ್ನು ಸ್ಥಳೀಯ ಸರ್ಕಾರಿ ಶಾಲೆಗೆ ದಾಖಲು ಮಾಡುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಳಕ್ಕೆ ಕಾರಣವಾಗಿದೆ.

ಅಲ್ಲದೇ ಮಕ್ಕಳಿಗೆ ಮೂಲಭೂತ ಶೈಕ್ಷಣಿಕ ಪರಿಕಲ್ಪನೆಗಳನ್ನೂ ಹಾಗೂ ಕನಿಷ್ಠ ಕಲಿಕಾ ಸಾಮರ್ಥ್ಯಗಳ ಕಲಿಕೆಯನ್ನು ಉಂಟುಮಾಡಿದೆ.

ಈ ಕಾರ್ಯಕ್ರಮ ಜಾರಿಗೆ ತರುವ ಮೂಲಕ ಪ್ರತಿ ಮಗುವೂ ಕಲಿಕಾ ವ್ಯಾಪ್ತಿಯಲ್ಲಿ ಬರುವಂತೆ ಕಾರ್ಯಯೋಜನೆ ರೂಪಿಸಿ, ಭೌತಿಕವಾಗಿ ಶಾಲೆ ಪ್ರಾರಂಭಿಸುವರೆಗೆ ಶಿಕ್ಷಕರು ಮಕ್ಕಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದು, ಮಕ್ಕಳ ಸ್ವಯಂ ಕಲಿಕೆಗೆ ಪ್ರೇರೇಪಿಸಿ, ಪಠ್ಯಪುಸ್ತಕ, ಅವಶ್ಯ ಅಭ್ಯಾಸ ಪುಸ್ತಕಗಳು/ ಅಬ್ಯಾಸ ಹಾಳೆಗಳನ್ನು ಮಕ್ಕಳಿಗೆ ಪೋಷಕರ ಮೂಲಕ ತಲುಪಿಸುವುದು.

ಬಾಲ ಕಾರ್ಮಿಕ, ಬಾಲ್ಯ ವಿವಾಹ ಮುಂತಾದ ಸಾಮಾಜಿಕ ಪಿಡುಗುಗಳಿಗೆ ಮಕ್ಕಳು ಒಳಗಾಗುವುದನ್ನು ತಡೆಗಟ್ಟುವುದು, ಶಾಲೆಗಳು ಮುಚ್ಚಿರುವ ಸಮಯದಲ್ಲಿ ಶಿಕ್ಷಕರ ಮೂಲಕ ಮಕ್ಕಳ ಮನೋಸ್ಥೈರ್ಯವನ್ನು ವೃದ್ಧಿಸುವುದು, ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಖಾತ್ರಿಪಡಿಸಿಕೊಳ್ಳುವುದು, ವಿಶೇಷ ಅಗತ್ಯತೆಯುಳ್ಳ ಮಕ್ಕಳ ಹಾಗೂ ವಲಸೆ ಮಕ್ಕಳ ಅವಶ್ಯಕತೆಗಳಿಗೆ ವಿಶೇಷ ಆದ್ಯತೆ ನೀಡುವುದು. ಶಿಕ್ಷಕರು, ಮೇಲುಸ್ತುವಾರಿ ಆಡಳಿತ ಮಂಡಳಿಯವರು ಸ್ವಯಂ ಸೇವಕರು, ಪೋಷಕರು, ಹಾಗೂ ಸಮುದಾಯದ ಎಲ್ಲಾ ಭಾಗೀದಾರರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಈ ಕಾಯ್ರಕ್ರಮದ ಪ್ರಮುಖ ಉದ್ದೇಶಗಳಾಗಿವೆ.

ಕಳೆದ ಆಗಷ್ಟ್ 4ರಿಂದ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಾಲಾ ಶಿಕ್ಷಣದ ಕಲಿಕಾ ಪೂರಕವಾಗಿ ಕಾಲ್ಪನಿಕ ಕಲಿಕಾ ಕೇಂದ್ರಗಳ ಮೂಲಕ ಅನುಷ್ಠಾನಗೊಳಿಸಲಾಗಿದೆ. ಇದರಿಂದ ಮಕ್ಕಳ ಕಲಿಕೆಯನ್ನು ನಿರಂತರವಾಗಿಸಲು ಮತ್ತು ಕಲಿಕಾ ಅಂತರವನ್ನು ಸದ್ಯದ ಪರಿಸ್ಥಿತಿಯಲ್ಲಿ ಸರಿದೂಗಿಸಲು, ವಿಪತ್ತಿನಿಂದ ಉಂಟಾದ ಕಲಿಕಾ ಕಂದರವನ್ನು ವಿವಿಧ ಚಟುವಟಿಕೆಗಳ ಮೂಲಕ ಸಕ್ರಿಯಗೊಳಿಸಲು ಹಾಗೂ ಬಲವರ್ಧಿಸಲು ಸದರಿ ಕಾರ್ಯಕ್ರಮವು ಸಮುದಾಯದ ಅನೌಪಚಾರಿಕ ವಲಯದಲ್ಲಿನ ಅನುಷ್ಠಾನಾತ್ಮಕ ಶೈಕ್ಷಣಿಕ ಚಟುವಟಿಕೆಯಾಗಿದೆ. ಪ್ರಸ್ತುತ ಶಾಲಾ ಶಿಕ್ಷಕ ಸಮುದಾಯವು ಗ್ರಾಮ ಸಮುದಾಯಕ್ಕೆ ತೆರಳಿ ತಾತ್ಕಾಲಿಕವಾಗಿ ರೂಪುಗೊಂಡ ಕಲಿಕಾ ಕೇಂದ್ರಗಳಲ್ಲಿ ಮಕ್ಕಳ ಕಲಿಕಾ ಪ್ರಕ್ರಿಯೆಯನ್ನು ಕ್ರಿಯಾಶೀಲಗೊಳಿಸುವ ಹಿನ್ನೆಲೆಯಲ್ಲಿ ವಿದ್ಯಾಗಮ ಕಾಯ್ರಕ್ರಮವನ್ನು ವಿನ್ಯಾಸಗೊಳಿಸಿದೆ.

ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಭವಿಷ್ಯಕ್ಕೆ ಧಕ್ಕೆಯಾಗದಂತೆ ಕ್ರಮವಹಿಸುವುದು ಅತ್ಯಗತ್ಯ ಹಾಗೂ ಇಂತಹ ಸನ್ನಿವೇಶವು ಮಕ್ಕಳ ಕಲಿಕಾ ಬೆಳವಣಿಗೆಗೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದಂತೆ ಕಲಿಕಾ ಪ್ರಕ್ರಿಯೆಯನ್ನು ನಿರಂತರವಾಗಿಸುವುದು ಶಿಕ್ಷಣ ಇಲಾಖೆಯ ಪ್ರಮುಖ ಜವಾಬ್ದಾರಿಯೂ ಹೌದು. ಇದಕ್ಕೆ ಪುಷ್ಠಿನೀಡುವಂತೆ ಇಲಾಖೆಯು ಸಾಕಷ್ಟು ಮಾರ್ಗಸೂಚಿಗಳನ್ನು ಶಿಕ್ಷಕರು ಮತ್ತು ಇಲಾಖೆಯ ಎಲ್ಲಾ ಸ್ತರದ ಅಧಿಕಾರಿಗಳಿಗೆ ನೀಡಿ, ಕೋವಿಡ್-19 ನಿಯಮಾನುಸಾರ ಅನುಷ್ಠಾನ ಮಾಡಲು ಸುತ್ತೋಲೆ ಹೊರಡಿಸಿ, ಸೂಕ್ತ ಮೌಲ್ಯಮಾಪನ ಕ್ರಮಗಳೊಂದಿಗೆ ಮಕ್ಕಳ ಕಲಿಕಾ ಪ್ರಗತಿಗೆ ಮುಂದಾಗಲು ತಿಳಿಸಿದೆ.

ಕಾರ್ಯಕ್ರಮ ಅನುಷ್ಠಾನಗೊಂಡು, ಎರಡು ತಿಂಗಳು ಕಳೆದಿದ್ದು, ಹಲವು ಧನಾತ್ಮಕ ಅಂಶಗಳನ್ನು ಕಾಣಬಹುದಾಗಿದೆ. ಶಿಕ್ಷಕರು ಮಕ್ಕಳು ಇರುವ ಸಮುದಾಯಕ್ಕೇ ತೆರಳುವುದರಿಂದ ಮಕ್ಕಳ ಕೌಟುಂಬಿಕ, ಆರ್ಥಿಕ ಪರಿಸ್ಥಿತಿಯ ಜತೆಗೆ ಭೌಗೊಳಿಕ ಪ್ರದೇಶ ಪರಿಚಯವಾಗಿದೆ.

ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ಶಾಲೆಯ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಸಂಘಗಳ ಮೂಲಕ ತನ್ನದೇ ಆದ ಕೊಡುಗೆ ನೀಡುವ ಬಗ್ಗೆ ಅನೇಕ ಕಡೆ ಚರ್ಚೆ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕಾರಣವಾಗಿದೆ.

ಸಮುದಾಯಕ್ಕೆ ತೆರಳಿ ಪೋಷಕರ ಮುಂದೆ ಮಕ್ಕಳಿಗೆ ಬೋಧನೆ ಮಾಡುವುದರಿಂದ ಶಿಕ್ಷಕರ ಬಗ್ಗೆ ಗೌರವ ಹೆಚ್ಚಳಕ್ಕೂ ಕಾರಣವಾಗಿದೆ. ಮಕ್ಕಳಿಗೆ ಪಾಠ ಬೋಧನೆ ಮಾಡುವ ಸಂದರ್ಭದಲ್ಲಿ ಸ್ಥಳೀಯ ಕಲಾವಿದರು, ನಿವೃತ್ತ ಶಿಕ್ಷಕರು, ವಿವಿಧ ಕ್ಷೇತ್ರಗಳ ಸಾಧಕರು, ಸಂಪನ್ಮೂಲ ವ್ಯಕ್ತಿಗಳನ್ನು ಸುಲಭವಾಗಿ ದೊರೆಯುವುದರಿಂದ ಕಲಿಕೆಯೂ ಪರಿಣಾಮಕಾರಿಯಾಗಿ ಉಂಟಾಗಿದೆ.

ಅಷ್ಟೇ ಅಲ್ಲದೆ, ಪರಿಸರ ಅಧ್ಯಯನ ವಿಷಯದಲ್ಲಿ ಸ್ಥಳೀಯ ಜೀವ ವೈವಿಧ್ಯತೆ, ಕುಟುಂಬ, ಸಂಬಂಧಗಳು, ಆಹಾರ ವೈವಿಧ್ಯತೆ, ಆಹಾರ ಸರಪಳಿ ಇತ್ಯಾದಿ ಸಾಕಷ್ಟು ಅಂಶಗಳು ಬಹುಬೇಗ ಮಕ್ಕಳಿಗೆ ಅರ್ಥವಾಗಲು ಅನುಕೂಲವಾಗಿದೆ.

ಇದರ ಸಾಧಕ-ಬಾಧಕಗಳು ಇಷ್ಟು ದಿನ ಮುನ್ನಲೆಗೆ ಬಾರದಿದ್ದರೂ ಈ ಎರಡು-ಮೂರು ದಿನಗಳಿಂದ ಮಾಧ್ಯಮಗಳಲ್ಲಿ ʻವಿದ್ಯಾಗಮʼ ಏಕಾಏಕಿ ಬಂದಿರುವುದು ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಗೆ ಗ್ರಹಣ ಹಿಡಿಯುವ ಪರಿಸ್ಥಿತಿ ಎದುರಾಗಿದೆ.

ಈ ಕಾರ್ಯಕ್ರಮ ಅನುಷ್ಠಾನದಿಂದಲೇ ಶಿಕ್ಷಕರ ಮತ್ತು ಮಕ್ಕಳಿಗೆ ಕೊರೋನ ಹಬ್ಬಲು ಕಾರಣವಾಗಿದೆ ಎಂಬುದು ಹಲವರ ವಾದವಾಗಿದೆ. ಅವರ ವಾದ ಸರಿ ಇರಬಹುದು. ಶಿಕ್ಷಕರು ಮತ್ತು ಮಕ್ಕಳಿಗೆ ಕೊರೋನ ಹರಡಲು ವಿದ್ಯಾಗಮ ಒಂದೇ ಕಾರಣವಾಗಿರದೇ ಬೇರೆ ಬೇರೆ ಕಾರಣಗಳೂ ಇರಬಹುದು.

ಯಾರಿಗೂ ಕಾಣದ ಸತ್ಯವೂ ಇದರ ಹಿಂದೆ ಅಡಗಿರಲೂ ಬಹುದು. ಆದರೆ, ಎಷ್ಟೋ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ನೀಡಿರುವ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಿ, ಪರಿಣಾಮಕಾರಿ ಕಲಿಕೆಯನ್ನುಂಟು ಮಾಡಿ, ಇಲಾಖೆಯ ಆಶಯವನ್ನು ಈಡೇರಿಸಿದ ಯಶಸ್ಸು ಶಿಕ್ಷಕರಿಗೆ ಸಲ್ಲುತ್ತದೆ. ಸರ್ಕಾರಿ ಶಾಲೆಗಳ ಶಿಕ್ಷಕರ ಕ್ರಿಯಶೀಲತೆ ಹಾಗೂ ಸಮಾಜೋಮುಖಿ ಕಾರ್ಯಗಳು ಕೆಲ ಖಾಸಗಿ ಶಾಲೆಗಳಿಗೂ ಹೊಡೆತ ನೀಡಿವೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಸಮಯೋಚಿತ, ಸದುದ್ದೇಶಪೂರಿತ ಈ ಕಾಯ್ರಕ್ರಮ ಯಾವುದೇ ಲೋಪಗಳಿಲ್ಲದೆ, ವಿದ್ಯಾರ್ಥಿಗಳಿಗೆ ನಿರಂತರ ಕಲಿಕೆಯನ್ನೂ ನೀಡುವ ಜೊತೆಜೊತೆಗೇ ಕೊರೋನಾ ಸಂದರ್ಭದಲ್ಲಿ ಅನುಸರಿಸಬೇಕಾದ ಹಲವು ಸುರಕ್ಷತಾ ಕ್ರಮಗಳನ್ನು ರೂಢಿಸಿಕೊಳ್ಳಲು ಪೋಷಕರಿಗೂ ಅರ್ಥೈಸಿದೆ.

ಖಾಸಗಿ ಶಾಲೆಗಳ ಆನ್ಲೈನ್ ತರಗತಿಗಳಿಗಿಂತಲೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ʻವಿದ್ಯಾಗಮʼ ಕಾರ್ಯಕ್ರಮ ಹಾಗೂ ಚಂದನ ವಾಹಿನಿಯ ಸಂವೇದ ಇ-ಕಲಿಕೆ ಪೋಷಕರಲ್ಲಿ ಹೊಸ ಭರವಸೆಯನ್ನೇ ಹುಟ್ಟುಹಾಕಿರುವುದರಲ್ಲಿ ಸಂಶಯವಿಲ್ಲ.

ಕೆಲ ಗ್ರಾಮಗಳಲ್ಲಿ ಶಿಕ್ಷಕರಿಗೆ ಬಹಿಷ್ಕಾರ ಹಾಕಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕೆಲವು ಪೋಷಕರೇ ʻವಿದ್ಯಾಗಮʼ ವನ್ನು ವಿರೋಧಿಸಿರುವುದೂ ಇದೆ. ಇಷ್ಟೆಲ್ಲಾ ಪರ-ವಿರೋಧಗಳ ನಡುವೆಯೂ ಈ ಕಾರ್ಯಕ್ರಮವನ್ನು ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಲು ಮಾನ್ಯ ಶಿಕ್ಷಣ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿರುವುದನ್ನು ಶಿಕ್ಷಕರು, ಮಕ್ಕಳು, ಪೋಷಕರು ಮತ್ತು ಸಮುದಾಯ ಸಂತಸಪಡುವ ಬದಲಾಗಿ, ಆತಂಕ ಪಡುವಂತಾಗಿದೆ.

ಗ್ರಾಮೀಣ ಭಾಗದ ಮಕ್ಕಳ ಪೋಷಕರಿಗೆ ಅದರಲ್ಲೂ. ಬಡ, ಹಿಂದುಳಿದ, ವಲಸೆ ಮಕ್ಕಳು ಸೇರಿದಂತೆ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ವರದಾನವಾಗಿದ್ದ ಈ ವಿದ್ಯಾಗಮ ಸ್ಥಗಿತ ತುಂಬಲಾರದ ನಷ್ಟ ಉಂಟು ಮಾಡುವುದರಲ್ಲಿ ಎರಡು ಮಾತಿಲ್ಲ.

ಕೋವಿಡ್ನಿಂದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಅಲ್ಪ ಮಟ್ಟಿನ ತೊಂದರೆಯಾಗಿರುವುದೇನೋ ನಿಜ. ಆದರೆ ವಿದ್ಯಾಗಮ ಕಾರ್ಯಕ್ರಮದಿಂದಾಗಿರುವ ಅನುಕೂಲ-ಅನನುಕೂಲಗಳನ್ನು ಒರೆಹಚ್ಚಿ, ತಜ್ಞರ ಅಭಿಪ್ರಾಯ ಪಡೆದು, ಮುಂದಿನ ದಿನಗಳಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಿ, ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಮಕ್ಕಳ ಕಲಿಕೆಯಲ್ಲಿ ಉಂಟಾಗಬಹುದಾದ ಬಹುದೊಡ್ಡ ಕಂದರವನ್ನು ಸ್ವಲ್ಪಮಟ್ಟಿಗಾದರೂ ಮುಚ್ಚಲು ಪ್ರಯತ್ನಿಸಬಹುದು.

ಈ ನಿಟ್ಟಿನಲ್ಲಿ ಇಡೀ ರಾಜ್ಯದ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರು, ಸಮುದಾಯ ಶಿಕ್ಷಣ ಸಚಿವರ ಪರವಾಗಿ ನಿಲ್ಲಲೇಬೇಕಾದ ಅನಿವಾರ್ಯತೆ ತುರ್ತಾಗಿ ಆಗಬೇಕಿದೆ.


ಲೇಖಕರು ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ,
ದ್ವಾರನಕುಂಟೆ, ಸಿರಾ ತಾ.

ಶಿರಾ ಉಪ ಚುನಾವಣೆ: ರಾಜೇಶ್ ಗೌಡಗೆ ಬಿಜೆಪಿ ಟಿಕೆಟ್

Publicstory. in


Tumkuru: ಸಿರಾ ಉಪ ಚುನಾವಣೆಯಲ್ಲಿ ಬಿಜೆಪಿಯು ಜೆಡಿಎಸ್ ನಿಂದ ಕರೆ ತಂದಿರುವ ರಾಜೇಶ್ ಗೌಡ ಅವರಿಗೆ ಟಿಕೆಟ್ ‌ನೀಡಲಿದೆ.

ಕಾಂಗ್ರೆಸ್ ನಿಂದ ಟಿ.ಬಿ.ಜಯಚಂದ್ರ, ಜೆಡಿಎಸ್ ನಿಂದ ನಿಧನರಾದ ಶಾಸಕ ಸತ್ಯನಾರಾಯಣ್ ಅವರ ಪತ್ನಿ ಮುಲ್ಲಾಜಮ್ಮ ಅವರಿಗೆ ಈಗಾಗಲೇ ಟಿಕೆಟ್ ಘೋಷಣೆಯಾಗಿದೆ. ಇನ್ನೂ ಬಿಜೆಪಿ ಅಧಿಕೃತವಾಗಿ ಅಭ್ಯರ್ಥಿ ಹೆಸರು ಬಹಿರಂಗಪಡಿಸಬೇಕಾಗಿದೆ.

ಬಿಜೆಪಿಯಲ್ಲಿ ಎಸ್.ಆರ್.ಗೌಡ, ಬಿ.ಕೆ.ಮಂಜು‌ನಾಥ್ ಹೆಸರು ಪಟ್ಟಿಯಲ್ಲಿ ಇದ್ದರೂ ಇಬ್ಬರಿಗೂ ಟಿಕೆಟ್ ಸಿಗದಿರುವುದು ಬಹುತೇಖ ಖಚಿತವಾಗಿದೆ.

ಈ ಇಬ್ಬರ ನಾಯಕರ ನಡುವೆ ಹಾವು ಮುಂಗಸಿ ಆಟ ನಡೆದಿದೆ. ಯಾರಿಗೆ ಕೊಟ್ಟರೂ ಮತ್ತೊಬ್ಬರು ಕಾಳೆಲೆಯುತ್ತಿದ್ದರು. ಅಲ್ಲದೇ ಬಲಾಢ್ಯ ಜೆಡಿಎಸ್, ಕಾಂಗ್ರೆಸ್ ಸೋಲಿಸಲು ಸರಿಯಾದ ಅಭ್ಯರ್ಥಿ ಬೇಕೆಂದು ಬಿಜೆಪಿ ಹುಡುಕಾಟ ನಡೆಸಿತ್ತು.

ಆರಂಭದಲ್ಲಿ ಮಾಜಿ ಶಾಸಕ ಬಿ.ಸುರೇಶಗೌಡ ಅವರ ಹೆಸರನ್ನು ತೇಲಿ ಬಿಡಲಾಗಿತ್ತು. ಅವರೇ ನಿಲ್ಲುವಂತೆ ಒತ್ತಡವನ್ನು ಹೇರಲಾಗಿತ್ತು. ಕಾರ್ಯಕರ್ತರ ಅಭಿಲಾಷೆಯೂ ಅದೇ ಆಗಿತ್ತು. ಆದರೆ ಸುರೇಶಗೌಡರು ತಮ್ಮ ಗ್ರಾಮಾಂತರ ಕ್ಷೇತ್ರ ಬಿಟ್ಟು ಬರುವುದಿಲ್ಲ. ಬೇರೆಲ್ಲೂ ಸ್ಪರ್ಧಿಸುವುದಿಲ್ಲ ಎಂದ ಹೇಳಿದ ಕಾರಣ ಬೇರೆ ಮುಖಂಡರ ಹುಡುಕಾಟದಲ್ಲಿ ತೊಡಗಿತ್ತು.

ಡಾ. ರಾಜೇಶಗೌಡ ಅವರು ಮಾಜಿ ಸಂಸದ ಮೂಡ್ಲಗಿರಿಯಪ್ಪ ಅವರ ಮಗನಾಗಿದ್ದಾರೆ. ಮೂಡ್ಲಗಿರಿಯಪ್ಪ ಕಾಂಗ್ರೆಸ್ ನಲ್ಲಿ ಇದ್ದವರು. ಹೀಗಾಗಿ ಕಾಂಗ್ರೆಸ್ ಮತಬುಟ್ಟಿಗೆ ಕೈ ಹಾಕಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.

ಬಿಜೆಪಿಯು ಸಹ ಅಳೆದು ತೂಗಿ ಕುಂಚಿಟಿಗರಿಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಕುಂಚಿಟಿಗರ ಮತ ವಿಭಜನೆ ಯಾರಿಗೆ ಲಾಭ ತಂದುಕೊಡಬಹುದು ಎಂಬುದು ಕುತೂಜಲವಾಗಿದೆ.

ಹೀಗಾಗಿ ಮೂರು ಪಕ್ಷಗಳು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗೊಲ್ಲ ಸಮುದಾಯವನ್ನು ಸೆಳೆಯಲು ಕಸರತ್ತು ನಡೆಸಿವೆ.

ಜಿ ಎಸ್ ಅಮೂರ್ ಅವರ ನೆಪದಲ್ಲಿ…

0

ಜಿ.ಎನ್.ಮೋಹನ್


ಜಿ ಎಸ್ ಅಮೂರರು ಆ ಪ್ರಶಸ್ತಿಯನ್ನು ನನಗೆ ಪ್ರದಾನ ಮಾಡಿದರು ಎನ್ನುವುದು ನನ್ನ ಹೆಮ್ಮೆ.

ಒಂದು ಪ್ರಶಸ್ತಿ ಫಲಕದ ಕಾರಣಕ್ಕೆ ನನಗೆ ಒಂದು ಪ್ರಶಸ್ತಿಯ ಬಗ್ಗೆ ಮೋಹ ಹುಟ್ಟಿತ್ತು ಎಂದರೆ ನೀವು ನಂಬಬೇಕು. ಹಾಗೆ ಅತಿ ಆಸೆ ಹುಟ್ಟಿಸಿದ್ದು ಪುತಿನ ಪ್ರಶಸ್ತಿ ಫಲಕ. ನಾನು ಆ ಪ್ರಶಸ್ತಿ ಫಲಕದ ಬಗ್ಗೆ ಎಷ್ಟು ಮೋಹಿತನಾಗಿದ್ದನೆಂದರೆ ನನಗೆ ಪ್ರಶಸ್ತಿ ಕೊಡದಿದ್ದರೂ ಒಂದು ಫಲಕ ಕೊಟ್ಟಿದ್ದರೂ ಧನ್ಯ! ಎಂದುಕೊಳ್ಳುವಷ್ಟು.

ಪುತಿನ ಪ್ರಶಸ್ತಿಯ ಫಲಕ ನೀವು ನೋಡಿದ್ದರೆ ನನ್ನ ಆಸೆಯನ್ನು ನೀವು ಖಂಡಿತಾ ಸರಿಯಾಗಿ ಗ್ರಹಿಸುತ್ತೀರಿ. ಪು ತಿ ನ ಅವರ ತವರು ಆ ಮೇಲುಕೋಟೆಯನ್ನೇ ಮೂಲವಾಗಿಸಿಕೊಂಡ ಕಂಚಿನ ವಿನ್ಯಾಸವದು. ಒಂದು ಹೂವು ಅಥವಾ ಚಾಮರ ಎನ್ನಬಹುದಾದ ವಿನ್ಯಾಸದೊಳಗೆ ಅಡಗಿದ್ದ ಮೇಲುಕೋಟೆಯ ದೃಶ್ಯ.

ಒಂದು ದಿನ ಜಿ ಎಸ್ ಶಿವರುದ್ರಪ್ಪನವರ ಫೋನ್ ಕಾಲ್. ನನಗೋ ಅಚ್ಚರಿ ಜಿ ಎಸ್ ಎಸ್ ಯಾಕೆ ಫೋನ್ ಮಾಡ್ತಿದ್ದಾರೆ ಅಂತ. ಎತ್ತಿದಾಗ ಆ ಕಡೆಯಿಂದ ಮೆಲು ದನಿಯಲ್ಲಿ ಅಭಿನಂದನೆಗಳು ಎಂದರು. ಗೊತ್ತಾಗಲಿಲ್ಲ. ನಿಮಗೆ ಈ ಸಾಲಿನ ಪು ತಿ ನ ಪ್ರಶಸ್ತಿ ಕೊಡುತ್ತಿದ್ದೇವೆ ಎಂದರು.

ನನಗೋ ಸ್ವರ್ಗಕ್ಕೆ ಮೂರೇ ಗೇಣು. ಪ್ರಶಸ್ತಿ ಬಂತು ಅಂತ ಅಲ್ಲ. ನಾನು ಕನವರಿಸುತ್ತಿದ್ದ ಪ್ರಶಸ್ತಿ ಫಲಕ ಸಿಗುತ್ತೆ ಅಂತ.

ಈ ಪ್ರಶಸ್ತಿ ಸಮಿತಿಯ ಅಧ್ಯಕ್ಷರು ಜಿ ಎಸ್ ಎಸ್. ಸದಸ್ಯರಾಗಿದ್ದವರು ಪ್ರಶಸ್ತಿ ಆಯ್ಕೆಯ ಸಮಿತಿಯಲ್ಲಿದ್ದವರು ಎಚ್ ಎಸ್ ವೆಂಕಟೇಶಮೂರ್ತಿ, ಬಿ ಆರ್ ಲಕ್ಷ್ಮಣರಾವ್, ಜಿ ಪಿ ಬಸವರಾಜು. ನನ್ನ ‘ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ’ ಕೃತಿಗೆ ಬಹುಮಾನ ಘೋಷಿಸಲಾಗಿತ್ತು.

ಇಷ್ಟೆಲ್ಲಾ ದೊಡ್ಡ ಹೆಸರುಗಳು ಕೂಡಿ ನನ್ನ ಕವನ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದರು ಎನ್ನುವುದೇ ನನಗೆ ರೋಮಾಂಚನ ಕೊಟ್ಟಿದ್ದಾಗ ಜಿ ಎಸ್ ಎಸ್ ಮೆಲ್ಲನೆ ದನಿಯಲ್ಲಿ ಜಿ ಎಸ್ ಆಮೂರರು ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾರೆ ಎಂದರು. ವಾರೆವ್ವಾ..! ಅನಿಸಿತು.

ಹತ್ತು ಹಲವು ಒಳ್ಳೆಯದೆಲ್ಲವೂ ಸೇರಿ ನನ್ನೆಡೆಗೆ ನಡೆದು ಬಂದದ್ದು ಅಂತಿದ್ದರೆ ಅದು ಈ ಪ್ರಶಸ್ತಿಯೇ.

ಈ ಸಂಭ್ರಮ ನನ್ನೊಳಗೆ ಎಷ್ಟಿತ್ತೆಂದರೆ ನಾನು ಈ ಸಮಾರಂಭದಂದೇ ನನ್ನ ಕವನ ಸಂಕಲನದ ಎರಡನೆಯ ಮುದ್ರಣ ಬಿಡುಗಡೆ ಮಾಡಿಸಬೇಕೆಂದು ‘ಅಭಿನವ’ದ ರವಿಕುಮಾರ್ ಅವರ ಬೆನ್ನು ಬಿದ್ದೆ. ಅಷ್ಟೇ ಅಲ್ಲದೆ ಎ ಎನ್ ಮುಕುಂದ್ ಅವರು ಅದ್ಭುತವಾಗಿ ತೆಗೆದಿದ್ದ ಪುತಿನ ಅವರ ಫೋಟೋವನ್ನು ಇಟ್ಟುಕೊಂಡು ಗ್ರೀಟಿಂಗ್ ಕಾರ್ಡ್ ಸಹಾ ತಯಾರಿಸಿದೆ.

ಪ್ರಶಸ್ತಿ ಸಮಾರಂಭದ ದಿನ ಜಿ ಎಸ್ ಅಮೂರರು ಇನ್ಸ್ಟಿಟ್ಯೂಟ್ ಆ ವರ್ಲ್ಡ್ ಕಲ್ಚರ್ ಗೆ ಬರುತ್ತಿದ್ದಂತೆಯೇ ‘ಎಲ್ಲಿ ಮೋಹನ್’ ಎಂದು ಕೇಳುತ್ತಲೇ ಬಂದರು.ನನ್ನ ಅವರ ಭೇಟಿ ಅದೇ ಮೊದಲು.ಆ ಮೊದಲು ಅವರ ಅನೇಕ ಭಾಷಣಗಳಿಗೆ ಕಿವಿಯಾಗಿದ್ದೆ ಅಷ್ಟೇ. ಜಿ ಎಸ್ ಎಸ್ ನನ್ನನ್ನು ಕರೆದು ಅವರ ಮುಂದೆ ನಿಲ್ಲಿಸಿದರು. ಜಿ ಎಸ್ ಎಸ್, ಅಮೂರ್ ಹಾಗೂ ನಾನೂ ತಿಂಡಿ ಕಾಫಿ ಮುಗಿಸುವವರೆಗೆ ನಡೆಸಿದ ಹರಟೆ ನನ್ನ ಮನಸ್ಸಿನಲ್ಲಿ ಸ್ಥಿರವಾಗಿ ನಿಂತಿದೆ.

ವೇದಿಕೆಯ ಮೇಲೆ ನನ್ನ ಕವಿತೆಗಳ ಬಗ್ಗೆ ಅಪಾರ ಪ್ರೀತಿ ಹರಿಸಿದ ಆಮೂರರು ನಾನು ಸಂಕೋಚಗೊಳ್ಳುವಂತೆ ಮಾಡಿದರು. ಪ್ರಶಸ್ತಿಯನ್ನು ಅವರು ನನ್ನ ಉಡಿಗೆ ತುಂಬುವಾಗ ಪ್ರಶಸ್ತಿ ಫಲಕದ ಕಾರಣವೂ ಸೇರಿ ಅಭಿನವ, ಜಿ ಎಸ್ ಎಸ್ , ಎಚ್ ಎಸ್ ವಿ, ಬಿ ಆರ್ ಎಲ್, ಜಿ ಪಿ ಹೀಗೆ ಅನೇಕರ ಕಾರಣಕ್ಕೆ ಮನಸ್ಸು ಮೂಕವಾಗಿತ್ತು.

ನಾನು ಪಡೆದ ಪ್ರಶಸ್ತಿಗಳ ಪೈಕಿ ನನ್ನೊಡನೆ ಸಂಸಾರ ಮಾಡಿರುವುದು ಬೆರಳೆಣಿಕೆಯಷ್ಟು ಮಾತ್ರ. ಅದರಲ್ಲಿ ಮೊದಲ ಸಾಲಲ್ಲಿ ನಿಲ್ಲುವುದು ಈ ಪುತಿನ ಪ್ರಶಸ್ತಿಯೇ ಅದರೊಂದಿಗೆ ಇಷ್ಟೊಂದು ನೆನಪು ತಳುಕು ಹಾಕಿಕೊಂಡಿರುವಾಗ ಅದನ್ನು ಬಿಡುವುದಾದರೂ ಹೇಗೆ..? .