Thursday, May 7, 2026
Google search engine
Home Blog Page 185

ಮಗಳೇ..

0

ಜಿ ಎನ್ ಮೋಹನ್

”ಮಗಳೇ..”
ಅಂತ ಕರೆದಾಗ ಇಡೀ ಸಭೆಯೇ ಸ್ತಬ್ಧವಾಗಿ ಹೋಯಿತು.

ಎಲ್ಲರ ಹುಬ್ಬುಗಳೂ ಮೇಲೇರಿದವು
ಇದೇನಪ್ಪಾ ಹೀಗೆ, ಅದೂ ಈ ಕಾರ್ಯಕ್ರಮದಲ್ಲಿ.. ಎಂದು ಗುಸು ಗುಸು ಆರಂಭವಾಯಿತು.

ಆಗ ಸಿ ಆರ್ ಸಿಂಹ ಕೇಳಿದರು – Alieda, you are my daughter u know, can i take the privilege of calling you as daughter?? ಅಂತ.

ವೇದಿಕೆಯ ಮೇಲಿದ್ದ ದೂರ ದೇಶದ ಹಕ್ಕಿ ಅಲೀಡಾಗೂ, ವೇದಿಕೆಯ ಮುಂದಿದ್ದ ಸಭಿಕರಿಗೂ ತಲೆಬುಡ ಅರ್ಥವಾಗಲಿಲ್ಲ

ಆಗ ಆಗ ಸಿ ಆರ್ ಸಿಂಹ ಹೇಳಿದರು-
”ಮಗೂ ನಾನು ಚೆ ಗೆವಾರ ನಾಟಕದಲ್ಲಿ ಚೆ ಗೆವಾರನ ಪಾತ್ರ ಮಾಡಿದವನಮ್ಮ, ಚೆಗೆವಾರ ಅಂದಿನಿಂದ ನನ್ನನ್ನು ಆವರಿಸಿಕೊಂಡು ಬಿಟ್ಟಿದ್ದಾನೆ.
ನೀನು ನನ್ನ ಮಗಳಲ್ಲದೆ ಇನ್ನೇನು?”

ಆಗ ನೋಡಬೇಕಿತ್ತು ಚಪ್ಪಾಳೆಯ ಸುರಿಮಳೆ.

ವೇದಿಕೆಯ ಮೇಲೆ ಕುಳಿತಿದ್ದ ಅಲೀಡಾ ಅಲ್ಲಿಂದ ಎದ್ದು ಬಂದವರೇ ತನ್ನ ಅಪ್ಪ ಸಿ ಆರ್ ಸಿಂಹ ಅಲಿಯಾಸ್ ಚೆಗೆವಾರನನ್ನು ಅಪ್ಪಿಕೊಂಡರು

ಇದು ನಡೆದದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ

1998 ಇರಬೇಕು

ಚೆ ಗೆವಾರನ ಮಗಳು ಅಲೀಡಾಗೆ ಕ್ಯೂಬಾವನ್ನು, ಚೆಗೆವಾರನನ್ನು ಇನ್ನಿಲ್ಲದಂತೆ ಪ್ರೀತಿಸಿದ ಭಾರತಕ್ಕೆ ಭೇಟಿ ನೀಡಬೇಕು ಎನ್ನುವ ಆಸೆ ಇತ್ತು

ಅದು ನನಸಾಯಿತು. ಕ್ಯೂಬಾದ ರಾಯಭಾರಿಯ ಜೊತೆ ಬೆಂಗಳೂರಿಗೂ ಬಂದಿಳಿದರು

ಬೆಂಗಳೂರಿಗೆ ಬರುತ್ತಾರೆ ಎಂದು ಗೊತ್ತಾಗಿದ್ದು ಹಿಂದಿನ ದಿನವಷ್ಟೇ..
ಆಗ ಮೊಬೈಲ್ ಇಲ್ಲದ ಕಾಲ

ವಿಷಯ ತಿಳಿಸಲು ಪ್ರಜಾವಾಣಿ, ಕನ್ನಡಪ್ರಭದ ‘ನಗರದಲ್ಲಿ ಇಂದು’ ಕಾಲಂ ಮಾತ್ರವೇ ಆಧಾರ

ಕೇವಲ ಎರಡು ಸಾಲಿನ ‘ನಗರದಲ್ಲಿ ಇಂದು’ ಹೇಗೆ ಕೆಲಸ ಮಾಡಿತೆಂದರೆ ಸಭಾಂಗಣದ ಹೊಟ್ಟೆ ಬಿರಿದು ಹೋಯಿತು

ಆಗ ಮುಖ್ಯಮಂತ್ರಿ ಆಗಿದ್ದ ಎಸ್ ಎಂ ಕೃಷ್ಣರೇ ‘ನಗರದಲ್ಲಿ ಇಂದು’ ನೋಡಿ ಸೀದಾ ಬಂದು ಸೆನೆಟ್ ಹಾಲ್ ಸೇರಿಕೊಂಡರು.

ಆಗಲೇ ಈ ಘಟನೆ ನಡೆದದ್ದು

ಬಿ ವಿ ಕಾರಂತರು ಕನ್ನಡ ಹವ್ಯಾಸಿ ರಂಗಭೂಮಿ ಇನ್ನೂ ಕಣ್ಣು ಬಿಡುವಾಗಲೇ ‘ಚೆ ಗೆವಾರ’ ನಾಟಕ ನಿರ್ದೇಶಿಸಿದ್ದರು
ಆಗ ಚೆಗೆವಾರನ ಪಾತ್ರ ಮಾಡಿದ್ದು ಸಿ ಆರ್ ಸಿಂಹ

ಇದೆಲ್ಲಾ ಆಗಿ ವರ್ಷಗಳು ಸರಿದು ಹೋಗಿದ್ದವು

ಬ್ರಿಗೆಡ್ ರೋಡ್ ನ ಪರಮೇಶ್ ಸ್ಟುಡಿಯೋದಲ್ಲಿ ನನ್ನ ಕವಿತೆಗಳ ರೆಕಾರ್ಡಿಂಗ್ ನಡೆಯುತ್ತಿತ್ತು.

ನನ್ನ ‘ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ’ ಕವನ ಸಂಕಲನದ ಬಿಡುಗಡೆ ಸಮಯದಲ್ಲೇ ಅದನ್ನು ‘ಕೇಳು ಕವಿತೆ’ಯಾಗಿ ಸಿ ಡಿ ರೂಪದಲ್ಲಿ ಓದುಗರ ಕೈಗಿಡಲು ‘ಅಭಿನವ’ದ ರವಿಕುಮಾರ್ ಮುಂದಾಗಿದ್ದರು.

ಸಿ ಆರ್ ಸಿಂಹ ನನ್ನ ‘ಜಕ್ಕಿಣಿಯರ ಮುಂದೆ ಮ್ಯಾಕ್ಬೆತ್’ ಕವಿತೆ ವಾಚಿಸುವವರಿದ್ದರು.

ನಾನು ಅವರೂ ಮೊದಲ ಬಾರಿಗೆ ಭೇಟಿಯಾಗುತ್ತಿದ್ದೆವು

ನಾನು ಅವರನ್ನು ನೋಡಿದೊಡನೆ ‘ಗುಡ್ ಮಾರ್ನಿಂಗ್ ಚೆ ಗೆವಾರ’ ಎಂದೆ

ಅಷ್ಟೇ ಆ ಪಾಸ್ ವರ್ಡ್ ಇನ್ನಿಲ್ಲದಂತೆ ಕೆಲಸ ಮಾಡಿತು

ಚೆ ಗೆವಾರ ಎನ್ನುವ ಹೆಸರು ನಮ್ಮಿಬ್ಬರ ನಡುವೆ ಎಷ್ಟು ಅನ್ಯೋನ್ಯತೆ ಉಂಟು ಮಾಡಿತೆಂದರೆ ನಾನು ಅವರೂ ಕ್ಯೂಬಾ, ಚೆ, ಕ್ಯಾಸ್ಟ್ರೋ ಬಗ್ಗೆ ಮಾತನಾಡಿಕೊಂಡದ್ದು ಅದೆಷ್ಟು ಬಾರಿಯೋ..

‘ನಡೀರಿ ಕ್ಯೂಬಾಗೆ ಹೋಗಿ ಬರೋಣ’ ಎಂದು ನನಗೆ ಬಲವಂತ ಮಾಡುತ್ತಿದ್ದರು.

ಸಿ ಆರ್ ಸಿಂಹ ನಮ್ಮೊಂದಿಗೆ ಇಲ್ಲ.
ಅವರ ನೆನಪಿಗೆ ಮಗ ಋತ್ವಿಕ್ ಸಿಂಹ ರಂಗ ಉತ್ಸವ ಹಮ್ಮಿಕೊಂಡಿದ್ದರು.

ಆಹ್ವಾನ ಪತ್ರಿಕೆಯಲ್ಲಿ ಸಿಂಹರ ಮುಖ ಕಂಡೊಡನೆ ಈ ಎಲ್ಲವೂ ಸುರುಳಿ ಬಿಚ್ಚಿಕೊಳ್ಳುತ್ತಾ ಹೋಯಿತು

ಅದಿರಲಿ ‘ಸಂಚಯ’ದ ಗಣೇಶ್ ಗೊತ್ತಲ್ಲಾ
ಅವರು ನನ್ನ ಬೆನ್ನು ಹತ್ತಿದ್ದಾರೆ
ಚೆ ಗೆವಾರ ನಾಟಕ ಬರೆದುಕೊಡಿ ಅಂತ
ಎಸ್ , ನಾನೂ ಮನಸ್ಸು ಮಾಡಿದ್ದೇನೆ.

ಮಗಳೇ..

0

ಜಿ ಎನ್ ಮೋಹನ್

”ಮಗಳೇ..”
ಅಂತ ಕರೆದಾಗ ಇಡೀ ಸಭೆಯೇ ಸ್ತಬ್ಧವಾಗಿ ಹೋಯಿತು.

ಎಲ್ಲರ ಹುಬ್ಬುಗಳೂ ಮೇಲೇರಿದವು
ಇದೇನಪ್ಪಾ ಹೀಗೆ, ಅದೂ ಈ ಕಾರ್ಯಕ್ರಮದಲ್ಲಿ.. ಎಂದು ಗುಸು ಗುಸು ಆರಂಭವಾಯಿತು.

ಆಗ ಸಿ ಆರ್ ಸಿಂಹ ಕೇಳಿದರು – Alieda, you are my daughter u know, can i take the privilege of calling you as daughter?? ಅಂತ.

ವೇದಿಕೆಯ ಮೇಲಿದ್ದ ದೂರ ದೇಶದ ಹಕ್ಕಿ ಅಲೀಡಾಗೂ, ವೇದಿಕೆಯ ಮುಂದಿದ್ದ ಸಭಿಕರಿಗೂ ತಲೆಬುಡ ಅರ್ಥವಾಗಲಿಲ್ಲ

ಆಗ ಆಗ ಸಿ ಆರ್ ಸಿಂಹ ಹೇಳಿದರು-
”ಮಗೂ ನಾನು ಚೆ ಗೆವಾರ ನಾಟಕದಲ್ಲಿ ಚೆ ಗೆವಾರನ ಪಾತ್ರ ಮಾಡಿದವನಮ್ಮ, ಚೆಗೆವಾರ ಅಂದಿನಿಂದ ನನ್ನನ್ನು ಆವರಿಸಿಕೊಂಡು ಬಿಟ್ಟಿದ್ದಾನೆ.
ನೀನು ನನ್ನ ಮಗಳಲ್ಲದೆ ಇನ್ನೇನು?”

ಆಗ ನೋಡಬೇಕಿತ್ತು ಚಪ್ಪಾಳೆಯ ಸುರಿಮಳೆ.

ವೇದಿಕೆಯ ಮೇಲೆ ಕುಳಿತಿದ್ದ ಅಲೀಡಾ ಅಲ್ಲಿಂದ ಎದ್ದು ಬಂದವರೇ ತನ್ನ ಅಪ್ಪ ಸಿ ಆರ್ ಸಿಂಹ ಅಲಿಯಾಸ್ ಚೆಗೆವಾರನನ್ನು ಅಪ್ಪಿಕೊಂಡರು

ಇದು ನಡೆದದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ

1998 ಇರಬೇಕು

ಚೆ ಗೆವಾರನ ಮಗಳು ಅಲೀಡಾಗೆ ಕ್ಯೂಬಾವನ್ನು, ಚೆಗೆವಾರನನ್ನು ಇನ್ನಿಲ್ಲದಂತೆ ಪ್ರೀತಿಸಿದ ಭಾರತಕ್ಕೆ ಭೇಟಿ ನೀಡಬೇಕು ಎನ್ನುವ ಆಸೆ ಇತ್ತು

ಅದು ನನಸಾಯಿತು. ಕ್ಯೂಬಾದ ರಾಯಭಾರಿಯ ಜೊತೆ ಬೆಂಗಳೂರಿಗೂ ಬಂದಿಳಿದರು

ಬೆಂಗಳೂರಿಗೆ ಬರುತ್ತಾರೆ ಎಂದು ಗೊತ್ತಾಗಿದ್ದು ಹಿಂದಿನ ದಿನವಷ್ಟೇ..
ಆಗ ಮೊಬೈಲ್ ಇಲ್ಲದ ಕಾಲ

ವಿಷಯ ತಿಳಿಸಲು ಪ್ರಜಾವಾಣಿ, ಕನ್ನಡಪ್ರಭದ ‘ನಗರದಲ್ಲಿ ಇಂದು’ ಕಾಲಂ ಮಾತ್ರವೇ ಆಧಾರ

ಕೇವಲ ಎರಡು ಸಾಲಿನ ‘ನಗರದಲ್ಲಿ ಇಂದು’ ಹೇಗೆ ಕೆಲಸ ಮಾಡಿತೆಂದರೆ ಸಭಾಂಗಣದ ಹೊಟ್ಟೆ ಬಿರಿದು ಹೋಯಿತು

ಆಗ ಮುಖ್ಯಮಂತ್ರಿ ಆಗಿದ್ದ ಎಸ್ ಎಂ ಕೃಷ್ಣರೇ ‘ನಗರದಲ್ಲಿ ಇಂದು’ ನೋಡಿ ಸೀದಾ ಬಂದು ಸೆನೆಟ್ ಹಾಲ್ ಸೇರಿಕೊಂಡರು.

ಆಗಲೇ ಈ ಘಟನೆ ನಡೆದದ್ದು

ಬಿ ವಿ ಕಾರಂತರು ಕನ್ನಡ ಹವ್ಯಾಸಿ ರಂಗಭೂಮಿ ಇನ್ನೂ ಕಣ್ಣು ಬಿಡುವಾಗಲೇ ‘ಚೆ ಗೆವಾರ’ ನಾಟಕ ನಿರ್ದೇಶಿಸಿದ್ದರು
ಆಗ ಚೆಗೆವಾರನ ಪಾತ್ರ ಮಾಡಿದ್ದು ಸಿ ಆರ್ ಸಿಂಹ

ಇದೆಲ್ಲಾ ಆಗಿ ವರ್ಷಗಳು ಸರಿದು ಹೋಗಿದ್ದವು

ಬ್ರಿಗೆಡ್ ರೋಡ್ ನ ಪರಮೇಶ್ ಸ್ಟುಡಿಯೋದಲ್ಲಿ ನನ್ನ ಕವಿತೆಗಳ ರೆಕಾರ್ಡಿಂಗ್ ನಡೆಯುತ್ತಿತ್ತು.

ನನ್ನ ‘ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ’ ಕವನ ಸಂಕಲನದ ಬಿಡುಗಡೆ ಸಮಯದಲ್ಲೇ ಅದನ್ನು ‘ಕೇಳು ಕವಿತೆ’ಯಾಗಿ ಸಿ ಡಿ ರೂಪದಲ್ಲಿ ಓದುಗರ ಕೈಗಿಡಲು ‘ಅಭಿನವ’ದ ರವಿಕುಮಾರ್ ಮುಂದಾಗಿದ್ದರು.

ಸಿ ಆರ್ ಸಿಂಹ ನನ್ನ ‘ಜಕ್ಕಿಣಿಯರ ಮುಂದೆ ಮ್ಯಾಕ್ಬೆತ್’ ಕವಿತೆ ವಾಚಿಸುವವರಿದ್ದರು.

ನಾನು ಅವರೂ ಮೊದಲ ಬಾರಿಗೆ ಭೇಟಿಯಾಗುತ್ತಿದ್ದೆವು

ನಾನು ಅವರನ್ನು ನೋಡಿದೊಡನೆ ‘ಗುಡ್ ಮಾರ್ನಿಂಗ್ ಚೆ ಗೆವಾರ’ ಎಂದೆ

ಅಷ್ಟೇ ಆ ಪಾಸ್ ವರ್ಡ್ ಇನ್ನಿಲ್ಲದಂತೆ ಕೆಲಸ ಮಾಡಿತು

ಚೆ ಗೆವಾರ ಎನ್ನುವ ಹೆಸರು ನಮ್ಮಿಬ್ಬರ ನಡುವೆ ಎಷ್ಟು ಅನ್ಯೋನ್ಯತೆ ಉಂಟು ಮಾಡಿತೆಂದರೆ ನಾನು ಅವರೂ ಕ್ಯೂಬಾ, ಚೆ, ಕ್ಯಾಸ್ಟ್ರೋ ಬಗ್ಗೆ ಮಾತನಾಡಿಕೊಂಡದ್ದು ಅದೆಷ್ಟು ಬಾರಿಯೋ..

‘ನಡೀರಿ ಕ್ಯೂಬಾಗೆ ಹೋಗಿ ಬರೋಣ’ ಎಂದು ನನಗೆ ಬಲವಂತ ಮಾಡುತ್ತಿದ್ದರು.

ಸಿ ಆರ್ ಸಿಂಹ ನಮ್ಮೊಂದಿಗೆ ಇಲ್ಲ.
ಅವರ ನೆನಪಿಗೆ ಮಗ ಋತ್ವಿಕ್ ಸಿಂಹ ರಂಗ ಉತ್ಸವ ಹಮ್ಮಿಕೊಂಡಿದ್ದರು.

ಆಹ್ವಾನ ಪತ್ರಿಕೆಯಲ್ಲಿ ಸಿಂಹರ ಮುಖ ಕಂಡೊಡನೆ ಈ ಎಲ್ಲವೂ ಸುರುಳಿ ಬಿಚ್ಚಿಕೊಳ್ಳುತ್ತಾ ಹೋಯಿತು

ಅದಿರಲಿ ‘ಸಂಚಯ’ದ ಗಣೇಶ್ ಗೊತ್ತಲ್ಲಾ
ಅವರು ನನ್ನ ಬೆನ್ನು ಹತ್ತಿದ್ದಾರೆ
ಚೆ ಗೆವಾರ ನಾಟಕ ಬರೆದುಕೊಡಿ ಅಂತ
ಎಸ್ , ನಾನೂ ಮನಸ್ಸು ಮಾಡಿದ್ದೇನೆ.

ಮಗಳೇ..

0

ಜಿ ಎನ್ ಮೋಹನ್

”ಮಗಳೇ..”
ಅಂತ ಕರೆದಾಗ ಇಡೀ ಸಭೆಯೇ ಸ್ತಬ್ಧವಾಗಿ ಹೋಯಿತು.

ಎಲ್ಲರ ಹುಬ್ಬುಗಳೂ ಮೇಲೇರಿದವು
ಇದೇನಪ್ಪಾ ಹೀಗೆ, ಅದೂ ಈ ಕಾರ್ಯಕ್ರಮದಲ್ಲಿ.. ಎಂದು ಗುಸು ಗುಸು ಆರಂಭವಾಯಿತು.

ಆಗ ಸಿ ಆರ್ ಸಿಂಹ ಕೇಳಿದರು – Alieda, you are my daughter u know, can i take the privilege of calling you as daughter?? ಅಂತ.

ವೇದಿಕೆಯ ಮೇಲಿದ್ದ ದೂರ ದೇಶದ ಹಕ್ಕಿ ಅಲೀಡಾಗೂ, ವೇದಿಕೆಯ ಮುಂದಿದ್ದ ಸಭಿಕರಿಗೂ ತಲೆಬುಡ ಅರ್ಥವಾಗಲಿಲ್ಲ

ಆಗ ಆಗ ಸಿ ಆರ್ ಸಿಂಹ ಹೇಳಿದರು-
”ಮಗೂ ನಾನು ಚೆ ಗೆವಾರ ನಾಟಕದಲ್ಲಿ ಚೆ ಗೆವಾರನ ಪಾತ್ರ ಮಾಡಿದವನಮ್ಮ, ಚೆಗೆವಾರ ಅಂದಿನಿಂದ ನನ್ನನ್ನು ಆವರಿಸಿಕೊಂಡು ಬಿಟ್ಟಿದ್ದಾನೆ.
ನೀನು ನನ್ನ ಮಗಳಲ್ಲದೆ ಇನ್ನೇನು?”

ಆಗ ನೋಡಬೇಕಿತ್ತು ಚಪ್ಪಾಳೆಯ ಸುರಿಮಳೆ.

ವೇದಿಕೆಯ ಮೇಲೆ ಕುಳಿತಿದ್ದ ಅಲೀಡಾ ಅಲ್ಲಿಂದ ಎದ್ದು ಬಂದವರೇ ತನ್ನ ಅಪ್ಪ ಸಿ ಆರ್ ಸಿಂಹ ಅಲಿಯಾಸ್ ಚೆಗೆವಾರನನ್ನು ಅಪ್ಪಿಕೊಂಡರು

ಇದು ನಡೆದದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ

1998 ಇರಬೇಕು

ಚೆ ಗೆವಾರನ ಮಗಳು ಅಲೀಡಾಗೆ ಕ್ಯೂಬಾವನ್ನು, ಚೆಗೆವಾರನನ್ನು ಇನ್ನಿಲ್ಲದಂತೆ ಪ್ರೀತಿಸಿದ ಭಾರತಕ್ಕೆ ಭೇಟಿ ನೀಡಬೇಕು ಎನ್ನುವ ಆಸೆ ಇತ್ತು

ಅದು ನನಸಾಯಿತು. ಕ್ಯೂಬಾದ ರಾಯಭಾರಿಯ ಜೊತೆ ಬೆಂಗಳೂರಿಗೂ ಬಂದಿಳಿದರು

ಬೆಂಗಳೂರಿಗೆ ಬರುತ್ತಾರೆ ಎಂದು ಗೊತ್ತಾಗಿದ್ದು ಹಿಂದಿನ ದಿನವಷ್ಟೇ..
ಆಗ ಮೊಬೈಲ್ ಇಲ್ಲದ ಕಾಲ

ವಿಷಯ ತಿಳಿಸಲು ಪ್ರಜಾವಾಣಿ, ಕನ್ನಡಪ್ರಭದ ‘ನಗರದಲ್ಲಿ ಇಂದು’ ಕಾಲಂ ಮಾತ್ರವೇ ಆಧಾರ

ಕೇವಲ ಎರಡು ಸಾಲಿನ ‘ನಗರದಲ್ಲಿ ಇಂದು’ ಹೇಗೆ ಕೆಲಸ ಮಾಡಿತೆಂದರೆ ಸಭಾಂಗಣದ ಹೊಟ್ಟೆ ಬಿರಿದು ಹೋಯಿತು

ಆಗ ಮುಖ್ಯಮಂತ್ರಿ ಆಗಿದ್ದ ಎಸ್ ಎಂ ಕೃಷ್ಣರೇ ‘ನಗರದಲ್ಲಿ ಇಂದು’ ನೋಡಿ ಸೀದಾ ಬಂದು ಸೆನೆಟ್ ಹಾಲ್ ಸೇರಿಕೊಂಡರು.

ಆಗಲೇ ಈ ಘಟನೆ ನಡೆದದ್ದು

ಬಿ ವಿ ಕಾರಂತರು ಕನ್ನಡ ಹವ್ಯಾಸಿ ರಂಗಭೂಮಿ ಇನ್ನೂ ಕಣ್ಣು ಬಿಡುವಾಗಲೇ ‘ಚೆ ಗೆವಾರ’ ನಾಟಕ ನಿರ್ದೇಶಿಸಿದ್ದರು
ಆಗ ಚೆಗೆವಾರನ ಪಾತ್ರ ಮಾಡಿದ್ದು ಸಿ ಆರ್ ಸಿಂಹ

ಇದೆಲ್ಲಾ ಆಗಿ ವರ್ಷಗಳು ಸರಿದು ಹೋಗಿದ್ದವು

ಬ್ರಿಗೆಡ್ ರೋಡ್ ನ ಪರಮೇಶ್ ಸ್ಟುಡಿಯೋದಲ್ಲಿ ನನ್ನ ಕವಿತೆಗಳ ರೆಕಾರ್ಡಿಂಗ್ ನಡೆಯುತ್ತಿತ್ತು.

ನನ್ನ ‘ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ’ ಕವನ ಸಂಕಲನದ ಬಿಡುಗಡೆ ಸಮಯದಲ್ಲೇ ಅದನ್ನು ‘ಕೇಳು ಕವಿತೆ’ಯಾಗಿ ಸಿ ಡಿ ರೂಪದಲ್ಲಿ ಓದುಗರ ಕೈಗಿಡಲು ‘ಅಭಿನವ’ದ ರವಿಕುಮಾರ್ ಮುಂದಾಗಿದ್ದರು.

ಸಿ ಆರ್ ಸಿಂಹ ನನ್ನ ‘ಜಕ್ಕಿಣಿಯರ ಮುಂದೆ ಮ್ಯಾಕ್ಬೆತ್’ ಕವಿತೆ ವಾಚಿಸುವವರಿದ್ದರು.

ನಾನು ಅವರೂ ಮೊದಲ ಬಾರಿಗೆ ಭೇಟಿಯಾಗುತ್ತಿದ್ದೆವು

ನಾನು ಅವರನ್ನು ನೋಡಿದೊಡನೆ ‘ಗುಡ್ ಮಾರ್ನಿಂಗ್ ಚೆ ಗೆವಾರ’ ಎಂದೆ

ಅಷ್ಟೇ ಆ ಪಾಸ್ ವರ್ಡ್ ಇನ್ನಿಲ್ಲದಂತೆ ಕೆಲಸ ಮಾಡಿತು

ಚೆ ಗೆವಾರ ಎನ್ನುವ ಹೆಸರು ನಮ್ಮಿಬ್ಬರ ನಡುವೆ ಎಷ್ಟು ಅನ್ಯೋನ್ಯತೆ ಉಂಟು ಮಾಡಿತೆಂದರೆ ನಾನು ಅವರೂ ಕ್ಯೂಬಾ, ಚೆ, ಕ್ಯಾಸ್ಟ್ರೋ ಬಗ್ಗೆ ಮಾತನಾಡಿಕೊಂಡದ್ದು ಅದೆಷ್ಟು ಬಾರಿಯೋ..

‘ನಡೀರಿ ಕ್ಯೂಬಾಗೆ ಹೋಗಿ ಬರೋಣ’ ಎಂದು ನನಗೆ ಬಲವಂತ ಮಾಡುತ್ತಿದ್ದರು.

ಸಿ ಆರ್ ಸಿಂಹ ನಮ್ಮೊಂದಿಗೆ ಇಲ್ಲ.
ಅವರ ನೆನಪಿಗೆ ಮಗ ಋತ್ವಿಕ್ ಸಿಂಹ ರಂಗ ಉತ್ಸವ ಹಮ್ಮಿಕೊಂಡಿದ್ದರು.

ಆಹ್ವಾನ ಪತ್ರಿಕೆಯಲ್ಲಿ ಸಿಂಹರ ಮುಖ ಕಂಡೊಡನೆ ಈ ಎಲ್ಲವೂ ಸುರುಳಿ ಬಿಚ್ಚಿಕೊಳ್ಳುತ್ತಾ ಹೋಯಿತು

ಅದಿರಲಿ ‘ಸಂಚಯ’ದ ಗಣೇಶ್ ಗೊತ್ತಲ್ಲಾ
ಅವರು ನನ್ನ ಬೆನ್ನು ಹತ್ತಿದ್ದಾರೆ
ಚೆ ಗೆವಾರ ನಾಟಕ ಬರೆದುಕೊಡಿ ಅಂತ
ಎಸ್ , ನಾನೂ ಮನಸ್ಸು ಮಾಡಿದ್ದೇನೆ.

ಮಗಳೇ..

0

ಜಿ ಎನ್ ಮೋಹನ್

”ಮಗಳೇ..”
ಅಂತ ಕರೆದಾಗ ಇಡೀ ಸಭೆಯೇ ಸ್ತಬ್ಧವಾಗಿ ಹೋಯಿತು.

ಎಲ್ಲರ ಹುಬ್ಬುಗಳೂ ಮೇಲೇರಿದವು
ಇದೇನಪ್ಪಾ ಹೀಗೆ, ಅದೂ ಈ ಕಾರ್ಯಕ್ರಮದಲ್ಲಿ.. ಎಂದು ಗುಸು ಗುಸು ಆರಂಭವಾಯಿತು.

ಆಗ ಸಿ ಆರ್ ಸಿಂಹ ಕೇಳಿದರು – Alieda, you are my daughter u know, can i take the privilege of calling you as daughter?? ಅಂತ.

ವೇದಿಕೆಯ ಮೇಲಿದ್ದ ದೂರ ದೇಶದ ಹಕ್ಕಿ ಅಲೀಡಾಗೂ, ವೇದಿಕೆಯ ಮುಂದಿದ್ದ ಸಭಿಕರಿಗೂ ತಲೆಬುಡ ಅರ್ಥವಾಗಲಿಲ್ಲ

ಆಗ ಆಗ ಸಿ ಆರ್ ಸಿಂಹ ಹೇಳಿದರು-
”ಮಗೂ ನಾನು ಚೆ ಗೆವಾರ ನಾಟಕದಲ್ಲಿ ಚೆ ಗೆವಾರನ ಪಾತ್ರ ಮಾಡಿದವನಮ್ಮ, ಚೆಗೆವಾರ ಅಂದಿನಿಂದ ನನ್ನನ್ನು ಆವರಿಸಿಕೊಂಡು ಬಿಟ್ಟಿದ್ದಾನೆ.
ನೀನು ನನ್ನ ಮಗಳಲ್ಲದೆ ಇನ್ನೇನು?”

ಆಗ ನೋಡಬೇಕಿತ್ತು ಚಪ್ಪಾಳೆಯ ಸುರಿಮಳೆ.

ವೇದಿಕೆಯ ಮೇಲೆ ಕುಳಿತಿದ್ದ ಅಲೀಡಾ ಅಲ್ಲಿಂದ ಎದ್ದು ಬಂದವರೇ ತನ್ನ ಅಪ್ಪ ಸಿ ಆರ್ ಸಿಂಹ ಅಲಿಯಾಸ್ ಚೆಗೆವಾರನನ್ನು ಅಪ್ಪಿಕೊಂಡರು

ಇದು ನಡೆದದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ

1998 ಇರಬೇಕು

ಚೆ ಗೆವಾರನ ಮಗಳು ಅಲೀಡಾಗೆ ಕ್ಯೂಬಾವನ್ನು, ಚೆಗೆವಾರನನ್ನು ಇನ್ನಿಲ್ಲದಂತೆ ಪ್ರೀತಿಸಿದ ಭಾರತಕ್ಕೆ ಭೇಟಿ ನೀಡಬೇಕು ಎನ್ನುವ ಆಸೆ ಇತ್ತು

ಅದು ನನಸಾಯಿತು. ಕ್ಯೂಬಾದ ರಾಯಭಾರಿಯ ಜೊತೆ ಬೆಂಗಳೂರಿಗೂ ಬಂದಿಳಿದರು

ಬೆಂಗಳೂರಿಗೆ ಬರುತ್ತಾರೆ ಎಂದು ಗೊತ್ತಾಗಿದ್ದು ಹಿಂದಿನ ದಿನವಷ್ಟೇ..
ಆಗ ಮೊಬೈಲ್ ಇಲ್ಲದ ಕಾಲ

ವಿಷಯ ತಿಳಿಸಲು ಪ್ರಜಾವಾಣಿ, ಕನ್ನಡಪ್ರಭದ ‘ನಗರದಲ್ಲಿ ಇಂದು’ ಕಾಲಂ ಮಾತ್ರವೇ ಆಧಾರ

ಕೇವಲ ಎರಡು ಸಾಲಿನ ‘ನಗರದಲ್ಲಿ ಇಂದು’ ಹೇಗೆ ಕೆಲಸ ಮಾಡಿತೆಂದರೆ ಸಭಾಂಗಣದ ಹೊಟ್ಟೆ ಬಿರಿದು ಹೋಯಿತು

ಆಗ ಮುಖ್ಯಮಂತ್ರಿ ಆಗಿದ್ದ ಎಸ್ ಎಂ ಕೃಷ್ಣರೇ ‘ನಗರದಲ್ಲಿ ಇಂದು’ ನೋಡಿ ಸೀದಾ ಬಂದು ಸೆನೆಟ್ ಹಾಲ್ ಸೇರಿಕೊಂಡರು.

ಆಗಲೇ ಈ ಘಟನೆ ನಡೆದದ್ದು

ಬಿ ವಿ ಕಾರಂತರು ಕನ್ನಡ ಹವ್ಯಾಸಿ ರಂಗಭೂಮಿ ಇನ್ನೂ ಕಣ್ಣು ಬಿಡುವಾಗಲೇ ‘ಚೆ ಗೆವಾರ’ ನಾಟಕ ನಿರ್ದೇಶಿಸಿದ್ದರು
ಆಗ ಚೆಗೆವಾರನ ಪಾತ್ರ ಮಾಡಿದ್ದು ಸಿ ಆರ್ ಸಿಂಹ

ಇದೆಲ್ಲಾ ಆಗಿ ವರ್ಷಗಳು ಸರಿದು ಹೋಗಿದ್ದವು

ಬ್ರಿಗೆಡ್ ರೋಡ್ ನ ಪರಮೇಶ್ ಸ್ಟುಡಿಯೋದಲ್ಲಿ ನನ್ನ ಕವಿತೆಗಳ ರೆಕಾರ್ಡಿಂಗ್ ನಡೆಯುತ್ತಿತ್ತು.

ನನ್ನ ‘ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ’ ಕವನ ಸಂಕಲನದ ಬಿಡುಗಡೆ ಸಮಯದಲ್ಲೇ ಅದನ್ನು ‘ಕೇಳು ಕವಿತೆ’ಯಾಗಿ ಸಿ ಡಿ ರೂಪದಲ್ಲಿ ಓದುಗರ ಕೈಗಿಡಲು ‘ಅಭಿನವ’ದ ರವಿಕುಮಾರ್ ಮುಂದಾಗಿದ್ದರು.

ಸಿ ಆರ್ ಸಿಂಹ ನನ್ನ ‘ಜಕ್ಕಿಣಿಯರ ಮುಂದೆ ಮ್ಯಾಕ್ಬೆತ್’ ಕವಿತೆ ವಾಚಿಸುವವರಿದ್ದರು.

ನಾನು ಅವರೂ ಮೊದಲ ಬಾರಿಗೆ ಭೇಟಿಯಾಗುತ್ತಿದ್ದೆವು

ನಾನು ಅವರನ್ನು ನೋಡಿದೊಡನೆ ‘ಗುಡ್ ಮಾರ್ನಿಂಗ್ ಚೆ ಗೆವಾರ’ ಎಂದೆ

ಅಷ್ಟೇ ಆ ಪಾಸ್ ವರ್ಡ್ ಇನ್ನಿಲ್ಲದಂತೆ ಕೆಲಸ ಮಾಡಿತು

ಚೆ ಗೆವಾರ ಎನ್ನುವ ಹೆಸರು ನಮ್ಮಿಬ್ಬರ ನಡುವೆ ಎಷ್ಟು ಅನ್ಯೋನ್ಯತೆ ಉಂಟು ಮಾಡಿತೆಂದರೆ ನಾನು ಅವರೂ ಕ್ಯೂಬಾ, ಚೆ, ಕ್ಯಾಸ್ಟ್ರೋ ಬಗ್ಗೆ ಮಾತನಾಡಿಕೊಂಡದ್ದು ಅದೆಷ್ಟು ಬಾರಿಯೋ..

‘ನಡೀರಿ ಕ್ಯೂಬಾಗೆ ಹೋಗಿ ಬರೋಣ’ ಎಂದು ನನಗೆ ಬಲವಂತ ಮಾಡುತ್ತಿದ್ದರು.

ಸಿ ಆರ್ ಸಿಂಹ ನಮ್ಮೊಂದಿಗೆ ಇಲ್ಲ.
ಅವರ ನೆನಪಿಗೆ ಮಗ ಋತ್ವಿಕ್ ಸಿಂಹ ರಂಗ ಉತ್ಸವ ಹಮ್ಮಿಕೊಂಡಿದ್ದರು.

ಆಹ್ವಾನ ಪತ್ರಿಕೆಯಲ್ಲಿ ಸಿಂಹರ ಮುಖ ಕಂಡೊಡನೆ ಈ ಎಲ್ಲವೂ ಸುರುಳಿ ಬಿಚ್ಚಿಕೊಳ್ಳುತ್ತಾ ಹೋಯಿತು

ಅದಿರಲಿ ‘ಸಂಚಯ’ದ ಗಣೇಶ್ ಗೊತ್ತಲ್ಲಾ
ಅವರು ನನ್ನ ಬೆನ್ನು ಹತ್ತಿದ್ದಾರೆ
ಚೆ ಗೆವಾರ ನಾಟಕ ಬರೆದುಕೊಡಿ ಅಂತ
ಎಸ್ , ನಾನೂ ಮನಸ್ಸು ಮಾಡಿದ್ದೇನೆ.

ಸೀಲ್ ಡೌನ್ ಆಗಿದ್ದ ಗೊರವನಹಳ್ಳಿ ಲಕ್ಷ್ಮಿ ದೇಗುಲ ಓಪನ್ ಯಾವಾಗ..?

ತುಮಕೂರು

ಜಿಲ್ಲೆಯ ಪ್ರಸಿದ್ದ ಕ್ಷೇತ್ರಗಳಲ್ಲಿ ಒಂದಾದ ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿ ಲಕ್ಷ್ಮಿ ದೇವಾಲಯದ ಅರ್ಚಕರೊಬ್ಬರ ಪತ್ನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮಹಾಲಕ್ಷ್ಮೀ ದೇವಾಲಯ ಸೀಲ್ ಡೌನ್ ಆಗಿತ್ತು.

ಭಕ್ತಾಧಿಗಳ ಅನುಕೂಲಕ್ಕಾಗಿ ಹಾಗೂ ಕೆಲವೇ ದಿನಗಳಲ್ಲಿ ವರ್ಗ ಮಹಾಲಕ್ಷ್ಮಿ ಹಬ್ಬ ಇರುವ ಕಾರಣದಿಂದಾಗಿ ಜುಲೈ 28 ರಿಂದ ಮುಂಜಾನೆಯಿಂದ ಮಹಾಲಕ್ಷ್ಮೀ ದರ್ಶನಕ್ಕೆ ಅನುಕೂಲ ಮಾಡುವುದಾಗಿ ಮಧುಗಿರಿ ಉಪವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಡಾ.ನಂದಿನಿದೇವಿ ತಿಳಿಸಿದ್ದಾರೆ.

ಇದರೊಂದಿಗೆ ಜುಲೈ.31ರ ಶುಕ್ರವಾರ ನಡೆಯಲಿರುವ ವರಮಹಾಲಕ್ಷ್ಮೀ ಹಬ್ಬಕ್ಕೆ ಆಡಳಿತ ಮಂಡಳಿಯಿಂದ ಸಕಲ ಸಿದ್ದತೆ ನಡೆಸುವುದಾಗಿ ತಿಳಿಸಿದೆ.

ಆದರೆ ಭಕ್ತರಿಗೆ ಮಹಾಲಕ್ಷ್ಮೀ ದರ್ಶನಕ್ಕೆ ಮಾತ್ರ ಅವಕಾಶ ಇದೆ. ಹೂವು-ಹಣ್ಣು-ಕಾಯಿ ಮತ್ತು ಪ್ರಸಾದ ವಿನಿಯೋಗ ನಿಷೇಧಿಸಲಾಗಿದೆ.

ತುಮಕೂರಿನಲ್ಲಿ ತಹಬದಿಗೆ ಬಾರದ ಕೊರೊನಾ: ನಡುಕ ಉಂಟು ಮಾಡಿದ ಇಂದಿನ ಸಂಖ್ಯೆ

Publicstory. in


ತುಮಕೂರು: ಕೊರೊನಾ ಕಾಣಿಸಿಕೊಂಡ ಆರಂಭದಲ್ಲಿ ಸೋಂಕಿಗೆ ಕಡಿವಾಣ ಹಾಕಿದಂತೆ ಇತ್ತು. ಆದರೆ ಈಚೆಗೆ ಹೆಚ್ಚುತ್ತಿರುವ ಕೊರೊನಾ ಸೋಂಕು ತಹಬದಿಗೆ ಬರುವಂತೆ ಕಾಣುತ್ತಿಲ್ಲ.

ಸೋಮವಾರ ಒಂದೇ 132 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಕೈ ಮೀರಿ ಹೋಗುತ್ತಿದೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 1346ಕ್ಕೆ ಮುಟ್ಟಿದ್ದು, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಗುಣಮುಖವಾಗುತ್ತಿರುವವರ ಸಂಖ್ಯೆ ಕೂಡ ಕಡಿಮೆ ಇದೆ. ಇದರಿಂದಾಗಿ ಸೋಂಕಿನ ವಿರುದ್ಧ ಹೋರಾಟಕ್ಕೆ ಜಿಲ್ಲಾಡಳಿತ ಹೊಸ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ.

ಸೋಮವಾರ ತುಮಕೂರಿನಲ್ಲಿ 56, ಗುಬ್ಬಿಯಲ್ಲಿ 6, ಕುಣಿಗಲ್ ನಲ್ಲಿ 22 ಮಂದಿಗೆ ಸೋಂಕು ತಗುಲಿದೆ.

ಇನ್ನೂ, ಮಧುಗಿರಿಯಲ್ಲಿ 8, ಪಾವಗಡದಲ್ಲಿ5 ತುರುವೇಕೆರೆಯಲ್ಲಿ 13, ತಿಪಟೂರು 9 ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ 13 ಮಂದಿಗೆ ಸೋಂಕು ತಗುಲಿದೆ.

ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಮೃತರಾದವರ ಸಂಖ್ಯೆ 43ಕ್ಕೇರಿದೆ.

ಇದೆಲ್ಲಾ ನಿಮಗೆ ಹೇಗೆ ಗೊತ್ತಾಗುತ್ತೆ??

ಜಿ ಎನ್ ಮೋಹನ್


‘ಇದೆಲ್ಲಾ ನಿಮಗೆ ಹೇಗೆ ಗೊತ್ತಾಗುತ್ತೆ?’- ಅನ್ನೋ ಪ್ರಶ್ನೆ ನನಗೆ ಮೇಲಿಂದ ಮೇಲೆ ಎದುರಾಗಿದೆ.

ನನಗೆ ಮಾತ್ರ ಅಲ್ಲ ಯಾವುದೇ ಜರ್ನಲಿಸ್ಟ್ ಎಲ್ಲಿ, ಯಾರಿಗೇ ಸಿಗಲಿ ಬರುವ ಮೊತ್ತ ಮೊದಲ ಪ್ರಶ್ನೆಯೇ ‘ಈ ವಿಷಯ ನಿಮಗೆ ಹೇಗೆ ಗೊತ್ತಾಯ್ತು?’ ಅಂತ.

ಎಲ್ಲಾ ಪತ್ರಿಕೆ, ಚಾನಲ್ ಗಳು ಘಂಟಾಘೋಷವಾಗಿ ಕುಮಾರಸ್ವಾಮಿ ಅಧಿಕಾರವನ್ನು ಬಿ.ಎಸ್. ಯಡಿಯೂರಪ್ಪನವರಿಗೆ ಹಸ್ತಾಂತರಿಸುತ್ತಾರೆ ಅಂತ ಘೋಷಿಸುತ್ತಿದ್ದಾಗ ನಮ್ಮ ಸೀನಿಯರ್ ಕರೆಸ್ಟಾನ್ಡೆಂಟ್ ಸೋಮಶೇಖರ್ ಕವಚೂರು ‘ಖಂಡಿತಾ ಹಸ್ತಾಂತರ ಇಲ್ಲ’ ಅನ್ನುವ ಸುದ್ದಿ ಹೊತ್ತು ತಂದಿದ್ದರು.

ಈ ನ್ಯೂಸ್ ಬ್ರೇಕ್ ಮಾಡುವುದಕ್ಕೆ ಹಿಂದೆ ಮುಂದೆ ನೋಡ ಬೇಕಾದ ಸ್ಥಿತಿ ಇತ್ತು.

ಪರಿಸ್ಥಿತಿಯ ಮೇಲ್ಮೈ ಅವಲೋಕನ ಮಾಡಿದರೆ ಹೌದು ಖಂಡಿತಾ ಅಧಿಕಾರ ಹಸ್ತಾಂತರ ಸುಸೂತ್ರವಾಗಿ ಆಗುತ್ತೆ ಅನ್ನೋ ಸನ್ನಿವೇಶವೇ ಇತ್ತು.

ಈ ನ್ಯೂಸ್ ಪ್ರಸಾರ ಮಾಡಬಾರದು ಅಂತ ಬೆಂಗಳೂರು ಚೀಫ್, ಇದು ಹಂಡ್ರೆಡ್ ಪರ್ಸೆಂಟ್ ಕರೆಕ್ಟ್ ನ್ಯೂಸ್ ಅಂತ ಕವಚೂರು ವಾದಕ್ಕೆ ಬಿದ್ದರು. ನಾನು ಥರ್ಡ್ ಅಂಪೈರ್ ಥರಾ ಈ ನ್ಯೂಸ್ ಏರ್ ಮಾಡೋಣಾ ಅಂತ ತೀರ್ಮಾನ ಕೊಟ್ಟೆ.

ಪ್ರೈಮ್ ಬುಲೆಟಿನ್ ನಲ್ಲಿ ಸುದ್ದಿ ಪ್ರಸಾರ ಆಗಿದ್ದೇ ತಡ ಎಷ್ಟೋ ಪತ್ರಕರ್ತರು ನಕ್ಕುಬಿಟ್ಟರು.

‘ಸೋಮಶೇಖರ್ ಕವಚೂರು ಬಿಡಪ್ಪಾ ಜೋಬಿಂದ ತೆಗೆದು ಸುದ್ದಿ ಕೊಡ್ತಾನೆ..’ ಅಂದವರೂ ಇದ್ದರು. ಇನ್ನು ಕೆಲವರು ನೇರಾನೇರ ನನಗೇ ಫೋನ್ ಮಾಡಿ ‘ಏನು ಇಂಥ ರಿಸ್ಕ್ ತೆಗೊಂಡೆ’ ಅಂದ್ರು.

ಇನ್ನು ಕೆಲವರು ‘ನಾಳೆ ಸಂಜೆ ಅಷ್ಟೊತ್ತಿಗೆ ಈಟಿವಿ ಕಥೆ ಮುಗೀತು’ ಅಂತ ಷರಾ ಬರೆದುಬಿಟ್ಟರು.

ನನಗೆ ಒಂದು ದೊಡ್ಡ ವಿಶ್ವಾಸ ಇತ್ತು. ಅದು ಸೋಮಶೇಖರ್ ಕವಚೂರ್ ಕಾಂಟ್ಯಾಕ್ಟ್ಸ್ ಗಳದ್ದು.

ಮಾರನೆಯ ದಿನ ಸಂಜೆ ಐದು ಗಂಟೆಯ ಆಸುಪಾಸು. ಸೋಮಶೇಖರ್ ಫೋನ್ ಬಂತು. ‘ಸಾರ್, ಸಾಧ್ಯವಾದರೆ ಒಂದು ಸ್ಪೆಷಲ್ ಬುಲೆಟಿನ್ ಮಾಡೋಣ. ಐದು ನಿಮಿಷ ಸಿಕ್ಕರೂ ಸಾಕು’ ಅಂತ. ‘ಏನು ವಿಷಯ?’ ಅಂದೆ. ‘ಕುಮಾರಸ್ವಾಮಿ ಅಂಡ್ ಕಂಪನಿ ಈಗ ರಾಜಭವನಕ್ಕೆ ಬಸ್ ನಲ್ಲಿ ಬರ್ತಾರೆ. ಜಮೀರ್ ಟ್ರಾವೆಲ್ಸ್ ಬಸ್. ಬಂದವರೇ ರಾಜ್ಯಪಾಲರ ಕೈಗೆ ರಾಜಿನಾಮೆ ಕೊಡ್ತಾರೆ ಅಂತ ಕೆ.ಎನ್. ಸೋಮಯಾಜಿ ಥರಾ ಭವಿಷ್ಯ ಹೇಳ್ತಾ ಇದ್ರು.

ಆಗಲೂ ನಾನು ‘ವಾಟ್ ಈಸ್ ಯುವರ್ ಸೋರ್ಸ್?’ ಅಂತ ಕೇಳಲಿಲ್ಲ. ಗಾಢನಂಬುಗೆಯ ಮೇಲೆ, ಪ್ರಸಾರವಾಗುತ್ತಿದ್ದ ಧಾರವಾಹಿಯನ್ನು ಅರ್ಧಕ್ಕೇ ನಿಲ್ಲಿಸಿ ಬುಲೆಟಿನ್ ಗೆ ಸಜ್ಜಾಗೇ ಬಿಟ್ಟೆವು.

ಸೋಮಶೇಖರ್ ಹೇಳಿದ್ದಂತೆ ನಡೆದುಹೋಯಿತು.

ಬಹುಶಃ ಅಂದು, ಆ ನಂತರವೂ ಸೋಮಶೇಖರ್ ಮತ್ತು ಅವರಂತಹ ರಿಪೋರ್ಟರ್ಸ್ ಗಳು ಇಂತಹ ಬೆಚ್ಚಿಬೀಳುವ ಸುದ್ದಿಗಳನ್ನು ನೀಡುತ್ತಲೇ ಇದ್ದಾರೆ. ‘ವಾಟ್ ಈಸ್ ಯುವರ್ ಸೋರ್ಸ್’ ಅಂತ ಕೇಳುವ ತಪ್ಪು ಬಹುಶಃ ಅವರ ಸೀನಿಯರ್ ಗಳು ಖಂಡಿತಾ ಮಾಡಿರಲಿಕ್ಕಿಲ್ಲ.

ಸೀನಿಯರ್ ಗಳ ಮಾತು ಬಿಡಿ, ಕೋರ್ಟ್ ಗಳೂ ಸಹಾ ‘ವಾಟ್ ಈಸ್ ಯುವರ್ ಸೋರ್ಸ್’ ಎನ್ನುವ ಪ್ರಶ್ನೆ ಕೇಳುವುದಿಲ್ಲ. ಏಕೆಂದರೆ ಮಾಹಿತಿಯ ಮೂಲ ಮೀನಿನ ಹೆಜ್ಜೆಯಂತೆ, ಸುದ್ದಿಮೂಲವನ್ನು ಬಿಟ್ಟು ಕೊಡದಂತೆ ಕಾನೂನೇ ಬೆಂಗಾವಲಿಗೆ ನಿಂತಿದೆ.

ಆದರೆ ‘ವಾಟ್ ಈಸ್ ಯುವರ್ ಸೋರ್ಸ್’ ಅಂತ ಗೊತ್ತು ಮಾಡಿಕೊಳ್ಳುವ ಹುಚ್ಚುತನಕ್ಕೆ ಬಿದ್ದವರ ಸಂಖ್ಯೆ ಕಡಿಮೆಯೇನಲ್ಲ. ಸುದ್ದಿಮೂಲವನ್ನು ನಾನು ಬಯಲಿಗಿಡುವುದಿಲ್ಲ ಎಂದು ಜಿದ್ದಿಗೆ ಬಿದ್ದ ಪತ್ರಕರ್ತರ ಸಂಖ್ಯೆಯೂ ಅಷ್ಟೇ ದೊಡ್ಡದಿದೆ.

ಪತ್ರಿಕೋದ್ಯಮದ ಕ್ಲಾಸ್ ರೂಮ್ ನಲ್ಲಿ ಮೊದಲು ಹೇಳಿಕೊಡುವ ಪಾಠವೇ ನ್ಯೂಸ್ ಸೋರ್ಸ್ ಗಳ ಬಗ್ಗೆ. ಹೇಗೆ ನ್ಯೂಸ್ ಸೋರ್ಸ್ ಗಳನ್ನು ಬೆಳೆಸಿಕೊಳ್ಳಬೇಕು, ಯಾರು ನ್ಯೂಸ್ ಸೋರ್ಸ್ ಆಗುತ್ತಾರೆ, ಅವರ ಜೊತೆ ಅಗತ್ಯವಿಲ್ಲದಿದ್ದರೂ ಹೇಗೆ ನಿರಂತರ ಟಚ್ ನಲ್ಲಿರಬೇಕು. ಹೊಸ ಹೊಸಬರನ್ನ ಹೇಗೆ ನ್ಯೂಸ್ ಸೋರ್ಸ್ ಆಗಿ ಗುರುತಿಸಿ ನಮ್ಮ ಕಾಂಟ್ಯಾಕ್ಟ್ ಬೆಳೆಸಿಕೊಳ್ಳುತ್ತಲೇ ಇರಬೇಕು, ಹೀಗೆ…

ವಿಧಾನಸೌಧದ ನ್ಯೂಸ್ ಹೊರಗೆ ಎಳೆಯಬೇಕಾದರೆ ಬರೀ ಸಿ.ಎಂ ಕಾಂಟ್ಯಾಕ್ಟ್ ಇದ್ದರೆ ಮಾತ್ರ ಸಾಲದು, ಬಾಗಿಲು ಕಾಯುವ ಜವಾನನ ಕಾಂಟ್ಯಾಕ್ಟ್ ಕೂಡಾ ಬೇಕು.

ಬೆಂಗಳೂರು ವಿಶ್ವವಿದ್ಯಾಲಯದ ಮಾಸ್ ಕಮ್ಯುನಿಕೇಷನ್ ವಿಭಾಗದಲ್ಲಿ ಮಾತನಾಡುವ ಅವಕಾಶ ಬಂತು. ಅಲ್ಲಿದ್ದ ಅರಳುಗಣ್ಣಿನ, ನಾಳೆ ಪತ್ರಕರ್ತರಾಗಲಿರುವ ಎಲ್ಲರದ್ದೂ ಒಂದೇ ಕುತೂಹಲ. ಅಲ್ಲಾ ನಿಮಗೆ ಎಲ್ಲಾ ವಿಷಯ ಹೇಗೆ ಗೊತ್ತಾಗುತ್ತೆ ಅಂತ.

ನಾನು ಆಗ ಅವರನ್ನು ನಿಮ್ಮ ಬಳಿ ಎಷ್ಟು ಫೋನ್ ನಂಬರ್ ಗಳಿವೆ ಅನ್ನೋ ಪ್ರಶ್ನೆ ಕೇಳಬೇಕಾಗಿ ಬಂತು. 20, 50, 200ರವರೆಗೆ ಬಂದ ಸಂಖ್ಯೆ ಅಲ್ಲಿಗೇ ನಿಂತಿತು.

ಮತ್ತೆ ಕೇಳಿದೆ- ಈ ನಂಬರ್ ಗಳಲ್ಲಿ ನಿಮ್ಮ ಅಣ್ಣ, ತಂಗಿ, ಮಾವ, ಅತ್ತೆ, ಕ್ಲಾಸ್ ಮೇಟ್ ಹೀಗೆ ಎಲ್ಲರ ನಂಬರ್ ತೆಗೆದು ಎಷ್ಟು ನಂಬರ್ ಉಳಿಯಿತು ಹೇಳಿ ಅಂತ.

ನಾನು ಕೇಳಿದ್ದು ಏನು ಅಂತ ಅವರಿಗೆ ಗೊತ್ತಾಯಿತು. ಹೌದು ಸಾರ್ ಇನ್ಮೇಲೆ ಕಾಂಟ್ಯಾಕ್ಟ್ ಬೆಳೆಸಿಕೊಳ್ತೇವೆ. ಮುಂದಿನ ಸಲ ನೀವು ಬರುವ ವೇಳೆಗೆ ನಮ್ಮ ಫೋನ್ ಡೈರಿಯಲ್ಲಿ ಹೊಸ ನಂಬರ್ ಗಳಿಗೆ ಜಾಗ ಇಲ್ಲಾ ಅನ್ನುವ ಹಾಗೇ ಮಾಡಿರ್ತೀವಿ ಅಂತ.

ಒಬ್ಬ ಪತ್ರಕರ್ತ ರಾಜಕಾರಣಿಯ ಜೊತೆಗೂ ಕಾಂಟ್ಯಾಕ್ಟ್ ಹೊಂದಿರುತ್ತಾನೆ. ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುವವನ ಜೊತೆಗೂ ಟಚ್ ನಲ್ಲಿರುತ್ತಾನೆ.

ವಿಜಯ್ ಮಲ್ಯ ಕೊಡೋ ಪಾರ್ಟಿಯಲ್ಲೂ ಕಾಣಿಸಿಕೊಳ್ಳುತ್ತಾನೆ. ದೀಪಿಕಾ ಪಡುಕೋಣೆ ‘ಬ್ರೇಕ್ ಕೆ ಬಾದ್’ ಪ್ರೀಮಿಯರ್ ನಲ್ಲೂ ಕಾಣಿಸಿಕೊಳ್ತಾನೆ.

ಕತ್ತಿ ಮಚ್ಚು ಮಸೆದು ನಾಳೆ ನಾಲ್ವರ ತಲೆ ಎಗರಿಸ್ತೀನಿ ಅನ್ನೋವರೂ ಗೊತ್ತಿರ್ತಾರೆ. ಬೇಡಪ್ಪಾ ಈ ಎಲ್ಲಾ ಸಹವಾಸ ಅಂತ ಶರಣಾಗಿರುವವರ ಜೊತೇನೂ ಇರ್ತಾರೆ.

ನಿತ್ಯಾನಂದ ಆಶ್ರಮದ ಫೋನ್ ನಂಬರ್ರೂ ಅವರ ಬಳಿ ಇರುತ್ತೆ. ರಜನೀಕಾಂತ್ ಫ್ಲಾಟ್ ನಂಬರ್ರೂ ಗೊತ್ತಿರುತ್ತೆ. ಚಿಕ್ಕಮಗಳೂರು ನಕ್ಸಲೈಟ್ ಗಳ ಕಾಂಟ್ಯಾಕ್ಟ್ ಇರುತ್ತೆ.

ಏರ್ ಪೋರ್ಟ್ ಅಧಿಕಾರಿ ವಾಸುದೇವ ರಾವ್ ಕೂಡಾ ಗೊತ್ತಿರಬೇಕು, ಬಜರಂಗದಳದ ಪಬ್ ಅಟ್ಯಾಕರ್ಸ್ ಗೊತ್ತಿರಬೇಕು, ರವಿ ಪೂಜಾರಿ ಗ್ಯಾಂಗ್ ಗೊತ್ತಿರುತ್ತೆ, ರೆವೆನ್ಯೂ ಮಿನಿಸ್ಟರ್ರೂ ಗೊತ್ತಿರುತ್ತಾರೆ, ಸ್ಟ್ರೈಕ್ ಗೆ ಸಜ್ಜಾಗಿರೋ ವರ್ಕರ್ಸ್ ಯೂನಿಯನ್ ಲೀಡರ್ರು ಗೊತ್ತು, ನೈಸ್ ರೋಡ್ ಮೇಲೆ ಕುಳಿತು ಪ್ರೊಟೆಸ್ಟ್ ಮಾಡೋ ರೈತನೂ ಗೊತ್ತು.

ಹಾಗಿರುವಾಗ ರವಿ ಪೂಜಾರಿ ಗ್ಯಾಂಗ್ ಗುಂಡು ಹಾರಿಸಿದ್ದರ ಹಿಂದೆ ನೀನಿಲ್ಲ ಅಂತ ಏನು ಗ್ಯಾರಂಟಿ ಅಂತ ಅರೆಸ್ಟ್ ಮಾಡಿದ್ರೆ, ನಕ್ಸಲೈಟ್ ಗಳ ಚಲವಲನದ ಸುಳಿವು ಕೊಡಬೇಕಾದ್ದು ನಿನ್ನ ಜವಾಬ್ದಾರಿ ಅಂದ್ರೆ, ನೈಸ್ ರೋಡ್ ನಲ್ಲಿ ರೈತರು ಪ್ರೊಟೆಸ್ಟ್ ಮಾಡೋ ವಿಚಾರ ಯಾಕೆ ತಿಳಿಸಲಿಲ್ಲ ಅಂದ್ರೆ ಅವರಿಗೆ ಜರ್ನಲಿಸಂ ಎಬಿಸಿಡಿ ಗೊತ್ತಿಲ್ಲ ಅಂತ ಅರ್ಥ.

ಪಬ್ ಅಟ್ಯಾಕ್ ಮಾಡಿದ ಸುದ್ದಿ ನಮಗೆ ಯಾಕೆ ತಿಳಿಸಲಿಲ್ಲ ಅಂತ ಪತ್ರಕರ್ತರ ಮೇಲೆ ಏರಿ ಹೋದರೆ ಆತ ಜರ್ನಲಿಸ್ಟ್ ಕೆಲಸ ಮಾಡಬೇಕಾ, ಪೊಲೀಸ್ ಕೆಲಸ ಮಾಡಬೇಕಾ ಅನ್ನೋ ಪ್ರಶ್ನೆ ಬರುತ್ತೆ.

ನಂಜುಂಡಸ್ವಾಮಿ ರೈತ ಸಂಘದವರು ಕೆಎಫ್ ಸಿ ಮೇಲೆ ದಾಳಿ ಮಾಡಿದಾಗ ನೀವು ಹೇಗೆ ಶೂಟ್ ಮಾಡಿದ್ರಿ ಅಂತ ಎನ್ ಡಿಟಿವಿ ನೂಪುರ್ ಬಸುನ ಕೇಳಿದರೆ ಕ್ಯಾಮೆರಾಗೂ, ಪೊಲೀಸ್ ಲಾಠಿಗೂ ಇರೋ ವ್ಯತ್ಯಾಸಾನೇ ಅದೂ ಅಂತ ಹೇಳಿಯಾರು.

ಅಟ್ಯಾಕ್ ಮಾಡೋವಾಗ ನೀವು ಮಾತ್ರ ಯಾಕೆ ಅಲ್ಲಿದ್ರಿ? ನಿಮಗೆ ಮಾತ್ರ ಅದು ಹೇಗೆ ಗೊತ್ತಾಯ್ತು? ನೀವೂ, ಅವರೂ ಫೋನ್ ಮಾಡಿಕೊಂಡಿದ್ದೀರಿ ಅಂದ್ರೆ, ಹೌದು ಅದಕ್ಕೇ ನಾವು ಜರ್ನಲಿಸ್ಟ್ ಗಳು ಅಂತ ಹೇಳೋ ಪಡೆಯೂ ಇದೆ.

ಮುತ್ತತ್ತಿ ಫಾರೆಸ್ಟ್ ನಲ್ಲಿ ರಾತ್ರೋರಾತ್ರಿ ಸಯನೈಡ್ ನುಂಗಿ ಉಗ್ರರು ಪ್ರಾಣ ಬಿಟ್ರು… ಗೊತ್ತಾಗಿದ್ದು ಪ್ರಜಾವಾಣಿಯ ಮಂಡ್ಯ ರಿಪೋರ್ಟರ್ ಆಗಿದ್ದ ಕುಸುಮಾ ಶಾನ್ ಭಾಗ್ ಗೆ.

ಆ ಅಧೋರಾತ್ರಿಯಲ್ಲಿ ಟ್ಯಾಕ್ಸಿ ಹಿಡಿದು ಕಾಡಿಗೆ ನುಗ್ಗಿದರು. ನಿಮಗೇ ಹೇಗೆ ಗೊತ್ತಾಯ್ತು? ನಿಮ್ಮ ಮೊಬೈಲ್ ಗೆ ಫೋನ್ ಮಾಡಿದವರು ಯಾರು? ಈ ರಾತ್ರಿಯಲ್ಲಿ ಬರಬೇಕು ಅಂದ್ರೆ ನಿಮಗೇನು ಅಷ್ಟೊಂದು ಇಂಟರೆಸ್ಟು ಅಂತ ಪ್ರಶ್ನೆ ಉದುರಿಸಿ ‘ನೀನೇ ಯಾಕೆ ಎಲ್ ಟಿಟಿಇ ಆಗಿರಬಾರದು’ ಅನ್ನೋ ಥರಾ ನೋಡಿದ್ರೆ ಪಾಪ ‘ಮುಕ್ತಪತ್ರಿಕೆ ಅನ್ನೋದು ಸವಲತ್ತಲ್ಲ, ಯಾವುದೇ ಸಮಾಜದ ಅನಿವಾರ್ಯ ಅಂಗ’ ಅಂದ ಥಾಮಸ್ ಜೆಫರ್ಸನ್ ಸಹಾ ನಕ್ಕಾರು.

ಇದೆಲ್ಲಾ ನಿಮಗೆ ಹೇಗೆ ಗೊತ್ತಾಗುತ್ತೆ??

ಜಿ ಎನ್ ಮೋಹನ್


‘ಇದೆಲ್ಲಾ ನಿಮಗೆ ಹೇಗೆ ಗೊತ್ತಾಗುತ್ತೆ?’- ಅನ್ನೋ ಪ್ರಶ್ನೆ ನನಗೆ ಮೇಲಿಂದ ಮೇಲೆ ಎದುರಾಗಿದೆ.

ನನಗೆ ಮಾತ್ರ ಅಲ್ಲ ಯಾವುದೇ ಜರ್ನಲಿಸ್ಟ್ ಎಲ್ಲಿ, ಯಾರಿಗೇ ಸಿಗಲಿ ಬರುವ ಮೊತ್ತ ಮೊದಲ ಪ್ರಶ್ನೆಯೇ ‘ಈ ವಿಷಯ ನಿಮಗೆ ಹೇಗೆ ಗೊತ್ತಾಯ್ತು?’ ಅಂತ.

ಎಲ್ಲಾ ಪತ್ರಿಕೆ, ಚಾನಲ್ ಗಳು ಘಂಟಾಘೋಷವಾಗಿ ಕುಮಾರಸ್ವಾಮಿ ಅಧಿಕಾರವನ್ನು ಬಿ.ಎಸ್. ಯಡಿಯೂರಪ್ಪನವರಿಗೆ ಹಸ್ತಾಂತರಿಸುತ್ತಾರೆ ಅಂತ ಘೋಷಿಸುತ್ತಿದ್ದಾಗ ನಮ್ಮ ಸೀನಿಯರ್ ಕರೆಸ್ಟಾನ್ಡೆಂಟ್ ಸೋಮಶೇಖರ್ ಕವಚೂರು ‘ಖಂಡಿತಾ ಹಸ್ತಾಂತರ ಇಲ್ಲ’ ಅನ್ನುವ ಸುದ್ದಿ ಹೊತ್ತು ತಂದಿದ್ದರು.

ಈ ನ್ಯೂಸ್ ಬ್ರೇಕ್ ಮಾಡುವುದಕ್ಕೆ ಹಿಂದೆ ಮುಂದೆ ನೋಡ ಬೇಕಾದ ಸ್ಥಿತಿ ಇತ್ತು.

ಪರಿಸ್ಥಿತಿಯ ಮೇಲ್ಮೈ ಅವಲೋಕನ ಮಾಡಿದರೆ ಹೌದು ಖಂಡಿತಾ ಅಧಿಕಾರ ಹಸ್ತಾಂತರ ಸುಸೂತ್ರವಾಗಿ ಆಗುತ್ತೆ ಅನ್ನೋ ಸನ್ನಿವೇಶವೇ ಇತ್ತು.

ಈ ನ್ಯೂಸ್ ಪ್ರಸಾರ ಮಾಡಬಾರದು ಅಂತ ಬೆಂಗಳೂರು ಚೀಫ್, ಇದು ಹಂಡ್ರೆಡ್ ಪರ್ಸೆಂಟ್ ಕರೆಕ್ಟ್ ನ್ಯೂಸ್ ಅಂತ ಕವಚೂರು ವಾದಕ್ಕೆ ಬಿದ್ದರು. ನಾನು ಥರ್ಡ್ ಅಂಪೈರ್ ಥರಾ ಈ ನ್ಯೂಸ್ ಏರ್ ಮಾಡೋಣಾ ಅಂತ ತೀರ್ಮಾನ ಕೊಟ್ಟೆ.

ಪ್ರೈಮ್ ಬುಲೆಟಿನ್ ನಲ್ಲಿ ಸುದ್ದಿ ಪ್ರಸಾರ ಆಗಿದ್ದೇ ತಡ ಎಷ್ಟೋ ಪತ್ರಕರ್ತರು ನಕ್ಕುಬಿಟ್ಟರು.

‘ಸೋಮಶೇಖರ್ ಕವಚೂರು ಬಿಡಪ್ಪಾ ಜೋಬಿಂದ ತೆಗೆದು ಸುದ್ದಿ ಕೊಡ್ತಾನೆ..’ ಅಂದವರೂ ಇದ್ದರು. ಇನ್ನು ಕೆಲವರು ನೇರಾನೇರ ನನಗೇ ಫೋನ್ ಮಾಡಿ ‘ಏನು ಇಂಥ ರಿಸ್ಕ್ ತೆಗೊಂಡೆ’ ಅಂದ್ರು.

ಇನ್ನು ಕೆಲವರು ‘ನಾಳೆ ಸಂಜೆ ಅಷ್ಟೊತ್ತಿಗೆ ಈಟಿವಿ ಕಥೆ ಮುಗೀತು’ ಅಂತ ಷರಾ ಬರೆದುಬಿಟ್ಟರು.

ನನಗೆ ಒಂದು ದೊಡ್ಡ ವಿಶ್ವಾಸ ಇತ್ತು. ಅದು ಸೋಮಶೇಖರ್ ಕವಚೂರ್ ಕಾಂಟ್ಯಾಕ್ಟ್ಸ್ ಗಳದ್ದು.

ಮಾರನೆಯ ದಿನ ಸಂಜೆ ಐದು ಗಂಟೆಯ ಆಸುಪಾಸು. ಸೋಮಶೇಖರ್ ಫೋನ್ ಬಂತು. ‘ಸಾರ್, ಸಾಧ್ಯವಾದರೆ ಒಂದು ಸ್ಪೆಷಲ್ ಬುಲೆಟಿನ್ ಮಾಡೋಣ. ಐದು ನಿಮಿಷ ಸಿಕ್ಕರೂ ಸಾಕು’ ಅಂತ. ‘ಏನು ವಿಷಯ?’ ಅಂದೆ. ‘ಕುಮಾರಸ್ವಾಮಿ ಅಂಡ್ ಕಂಪನಿ ಈಗ ರಾಜಭವನಕ್ಕೆ ಬಸ್ ನಲ್ಲಿ ಬರ್ತಾರೆ. ಜಮೀರ್ ಟ್ರಾವೆಲ್ಸ್ ಬಸ್. ಬಂದವರೇ ರಾಜ್ಯಪಾಲರ ಕೈಗೆ ರಾಜಿನಾಮೆ ಕೊಡ್ತಾರೆ ಅಂತ ಕೆ.ಎನ್. ಸೋಮಯಾಜಿ ಥರಾ ಭವಿಷ್ಯ ಹೇಳ್ತಾ ಇದ್ರು.

ಆಗಲೂ ನಾನು ‘ವಾಟ್ ಈಸ್ ಯುವರ್ ಸೋರ್ಸ್?’ ಅಂತ ಕೇಳಲಿಲ್ಲ. ಗಾಢನಂಬುಗೆಯ ಮೇಲೆ, ಪ್ರಸಾರವಾಗುತ್ತಿದ್ದ ಧಾರವಾಹಿಯನ್ನು ಅರ್ಧಕ್ಕೇ ನಿಲ್ಲಿಸಿ ಬುಲೆಟಿನ್ ಗೆ ಸಜ್ಜಾಗೇ ಬಿಟ್ಟೆವು.

ಸೋಮಶೇಖರ್ ಹೇಳಿದ್ದಂತೆ ನಡೆದುಹೋಯಿತು.

ಬಹುಶಃ ಅಂದು, ಆ ನಂತರವೂ ಸೋಮಶೇಖರ್ ಮತ್ತು ಅವರಂತಹ ರಿಪೋರ್ಟರ್ಸ್ ಗಳು ಇಂತಹ ಬೆಚ್ಚಿಬೀಳುವ ಸುದ್ದಿಗಳನ್ನು ನೀಡುತ್ತಲೇ ಇದ್ದಾರೆ. ‘ವಾಟ್ ಈಸ್ ಯುವರ್ ಸೋರ್ಸ್’ ಅಂತ ಕೇಳುವ ತಪ್ಪು ಬಹುಶಃ ಅವರ ಸೀನಿಯರ್ ಗಳು ಖಂಡಿತಾ ಮಾಡಿರಲಿಕ್ಕಿಲ್ಲ.

ಸೀನಿಯರ್ ಗಳ ಮಾತು ಬಿಡಿ, ಕೋರ್ಟ್ ಗಳೂ ಸಹಾ ‘ವಾಟ್ ಈಸ್ ಯುವರ್ ಸೋರ್ಸ್’ ಎನ್ನುವ ಪ್ರಶ್ನೆ ಕೇಳುವುದಿಲ್ಲ. ಏಕೆಂದರೆ ಮಾಹಿತಿಯ ಮೂಲ ಮೀನಿನ ಹೆಜ್ಜೆಯಂತೆ, ಸುದ್ದಿಮೂಲವನ್ನು ಬಿಟ್ಟು ಕೊಡದಂತೆ ಕಾನೂನೇ ಬೆಂಗಾವಲಿಗೆ ನಿಂತಿದೆ.

ಆದರೆ ‘ವಾಟ್ ಈಸ್ ಯುವರ್ ಸೋರ್ಸ್’ ಅಂತ ಗೊತ್ತು ಮಾಡಿಕೊಳ್ಳುವ ಹುಚ್ಚುತನಕ್ಕೆ ಬಿದ್ದವರ ಸಂಖ್ಯೆ ಕಡಿಮೆಯೇನಲ್ಲ. ಸುದ್ದಿಮೂಲವನ್ನು ನಾನು ಬಯಲಿಗಿಡುವುದಿಲ್ಲ ಎಂದು ಜಿದ್ದಿಗೆ ಬಿದ್ದ ಪತ್ರಕರ್ತರ ಸಂಖ್ಯೆಯೂ ಅಷ್ಟೇ ದೊಡ್ಡದಿದೆ.

ಪತ್ರಿಕೋದ್ಯಮದ ಕ್ಲಾಸ್ ರೂಮ್ ನಲ್ಲಿ ಮೊದಲು ಹೇಳಿಕೊಡುವ ಪಾಠವೇ ನ್ಯೂಸ್ ಸೋರ್ಸ್ ಗಳ ಬಗ್ಗೆ. ಹೇಗೆ ನ್ಯೂಸ್ ಸೋರ್ಸ್ ಗಳನ್ನು ಬೆಳೆಸಿಕೊಳ್ಳಬೇಕು, ಯಾರು ನ್ಯೂಸ್ ಸೋರ್ಸ್ ಆಗುತ್ತಾರೆ, ಅವರ ಜೊತೆ ಅಗತ್ಯವಿಲ್ಲದಿದ್ದರೂ ಹೇಗೆ ನಿರಂತರ ಟಚ್ ನಲ್ಲಿರಬೇಕು. ಹೊಸ ಹೊಸಬರನ್ನ ಹೇಗೆ ನ್ಯೂಸ್ ಸೋರ್ಸ್ ಆಗಿ ಗುರುತಿಸಿ ನಮ್ಮ ಕಾಂಟ್ಯಾಕ್ಟ್ ಬೆಳೆಸಿಕೊಳ್ಳುತ್ತಲೇ ಇರಬೇಕು, ಹೀಗೆ…

ವಿಧಾನಸೌಧದ ನ್ಯೂಸ್ ಹೊರಗೆ ಎಳೆಯಬೇಕಾದರೆ ಬರೀ ಸಿ.ಎಂ ಕಾಂಟ್ಯಾಕ್ಟ್ ಇದ್ದರೆ ಮಾತ್ರ ಸಾಲದು, ಬಾಗಿಲು ಕಾಯುವ ಜವಾನನ ಕಾಂಟ್ಯಾಕ್ಟ್ ಕೂಡಾ ಬೇಕು.

ಬೆಂಗಳೂರು ವಿಶ್ವವಿದ್ಯಾಲಯದ ಮಾಸ್ ಕಮ್ಯುನಿಕೇಷನ್ ವಿಭಾಗದಲ್ಲಿ ಮಾತನಾಡುವ ಅವಕಾಶ ಬಂತು. ಅಲ್ಲಿದ್ದ ಅರಳುಗಣ್ಣಿನ, ನಾಳೆ ಪತ್ರಕರ್ತರಾಗಲಿರುವ ಎಲ್ಲರದ್ದೂ ಒಂದೇ ಕುತೂಹಲ. ಅಲ್ಲಾ ನಿಮಗೆ ಎಲ್ಲಾ ವಿಷಯ ಹೇಗೆ ಗೊತ್ತಾಗುತ್ತೆ ಅಂತ.

ನಾನು ಆಗ ಅವರನ್ನು ನಿಮ್ಮ ಬಳಿ ಎಷ್ಟು ಫೋನ್ ನಂಬರ್ ಗಳಿವೆ ಅನ್ನೋ ಪ್ರಶ್ನೆ ಕೇಳಬೇಕಾಗಿ ಬಂತು. 20, 50, 200ರವರೆಗೆ ಬಂದ ಸಂಖ್ಯೆ ಅಲ್ಲಿಗೇ ನಿಂತಿತು.

ಮತ್ತೆ ಕೇಳಿದೆ- ಈ ನಂಬರ್ ಗಳಲ್ಲಿ ನಿಮ್ಮ ಅಣ್ಣ, ತಂಗಿ, ಮಾವ, ಅತ್ತೆ, ಕ್ಲಾಸ್ ಮೇಟ್ ಹೀಗೆ ಎಲ್ಲರ ನಂಬರ್ ತೆಗೆದು ಎಷ್ಟು ನಂಬರ್ ಉಳಿಯಿತು ಹೇಳಿ ಅಂತ.

ನಾನು ಕೇಳಿದ್ದು ಏನು ಅಂತ ಅವರಿಗೆ ಗೊತ್ತಾಯಿತು. ಹೌದು ಸಾರ್ ಇನ್ಮೇಲೆ ಕಾಂಟ್ಯಾಕ್ಟ್ ಬೆಳೆಸಿಕೊಳ್ತೇವೆ. ಮುಂದಿನ ಸಲ ನೀವು ಬರುವ ವೇಳೆಗೆ ನಮ್ಮ ಫೋನ್ ಡೈರಿಯಲ್ಲಿ ಹೊಸ ನಂಬರ್ ಗಳಿಗೆ ಜಾಗ ಇಲ್ಲಾ ಅನ್ನುವ ಹಾಗೇ ಮಾಡಿರ್ತೀವಿ ಅಂತ.

ಒಬ್ಬ ಪತ್ರಕರ್ತ ರಾಜಕಾರಣಿಯ ಜೊತೆಗೂ ಕಾಂಟ್ಯಾಕ್ಟ್ ಹೊಂದಿರುತ್ತಾನೆ. ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುವವನ ಜೊತೆಗೂ ಟಚ್ ನಲ್ಲಿರುತ್ತಾನೆ.

ವಿಜಯ್ ಮಲ್ಯ ಕೊಡೋ ಪಾರ್ಟಿಯಲ್ಲೂ ಕಾಣಿಸಿಕೊಳ್ಳುತ್ತಾನೆ. ದೀಪಿಕಾ ಪಡುಕೋಣೆ ‘ಬ್ರೇಕ್ ಕೆ ಬಾದ್’ ಪ್ರೀಮಿಯರ್ ನಲ್ಲೂ ಕಾಣಿಸಿಕೊಳ್ತಾನೆ.

ಕತ್ತಿ ಮಚ್ಚು ಮಸೆದು ನಾಳೆ ನಾಲ್ವರ ತಲೆ ಎಗರಿಸ್ತೀನಿ ಅನ್ನೋವರೂ ಗೊತ್ತಿರ್ತಾರೆ. ಬೇಡಪ್ಪಾ ಈ ಎಲ್ಲಾ ಸಹವಾಸ ಅಂತ ಶರಣಾಗಿರುವವರ ಜೊತೇನೂ ಇರ್ತಾರೆ.

ನಿತ್ಯಾನಂದ ಆಶ್ರಮದ ಫೋನ್ ನಂಬರ್ರೂ ಅವರ ಬಳಿ ಇರುತ್ತೆ. ರಜನೀಕಾಂತ್ ಫ್ಲಾಟ್ ನಂಬರ್ರೂ ಗೊತ್ತಿರುತ್ತೆ. ಚಿಕ್ಕಮಗಳೂರು ನಕ್ಸಲೈಟ್ ಗಳ ಕಾಂಟ್ಯಾಕ್ಟ್ ಇರುತ್ತೆ.

ಏರ್ ಪೋರ್ಟ್ ಅಧಿಕಾರಿ ವಾಸುದೇವ ರಾವ್ ಕೂಡಾ ಗೊತ್ತಿರಬೇಕು, ಬಜರಂಗದಳದ ಪಬ್ ಅಟ್ಯಾಕರ್ಸ್ ಗೊತ್ತಿರಬೇಕು, ರವಿ ಪೂಜಾರಿ ಗ್ಯಾಂಗ್ ಗೊತ್ತಿರುತ್ತೆ, ರೆವೆನ್ಯೂ ಮಿನಿಸ್ಟರ್ರೂ ಗೊತ್ತಿರುತ್ತಾರೆ, ಸ್ಟ್ರೈಕ್ ಗೆ ಸಜ್ಜಾಗಿರೋ ವರ್ಕರ್ಸ್ ಯೂನಿಯನ್ ಲೀಡರ್ರು ಗೊತ್ತು, ನೈಸ್ ರೋಡ್ ಮೇಲೆ ಕುಳಿತು ಪ್ರೊಟೆಸ್ಟ್ ಮಾಡೋ ರೈತನೂ ಗೊತ್ತು.

ಹಾಗಿರುವಾಗ ರವಿ ಪೂಜಾರಿ ಗ್ಯಾಂಗ್ ಗುಂಡು ಹಾರಿಸಿದ್ದರ ಹಿಂದೆ ನೀನಿಲ್ಲ ಅಂತ ಏನು ಗ್ಯಾರಂಟಿ ಅಂತ ಅರೆಸ್ಟ್ ಮಾಡಿದ್ರೆ, ನಕ್ಸಲೈಟ್ ಗಳ ಚಲವಲನದ ಸುಳಿವು ಕೊಡಬೇಕಾದ್ದು ನಿನ್ನ ಜವಾಬ್ದಾರಿ ಅಂದ್ರೆ, ನೈಸ್ ರೋಡ್ ನಲ್ಲಿ ರೈತರು ಪ್ರೊಟೆಸ್ಟ್ ಮಾಡೋ ವಿಚಾರ ಯಾಕೆ ತಿಳಿಸಲಿಲ್ಲ ಅಂದ್ರೆ ಅವರಿಗೆ ಜರ್ನಲಿಸಂ ಎಬಿಸಿಡಿ ಗೊತ್ತಿಲ್ಲ ಅಂತ ಅರ್ಥ.

ಪಬ್ ಅಟ್ಯಾಕ್ ಮಾಡಿದ ಸುದ್ದಿ ನಮಗೆ ಯಾಕೆ ತಿಳಿಸಲಿಲ್ಲ ಅಂತ ಪತ್ರಕರ್ತರ ಮೇಲೆ ಏರಿ ಹೋದರೆ ಆತ ಜರ್ನಲಿಸ್ಟ್ ಕೆಲಸ ಮಾಡಬೇಕಾ, ಪೊಲೀಸ್ ಕೆಲಸ ಮಾಡಬೇಕಾ ಅನ್ನೋ ಪ್ರಶ್ನೆ ಬರುತ್ತೆ.

ನಂಜುಂಡಸ್ವಾಮಿ ರೈತ ಸಂಘದವರು ಕೆಎಫ್ ಸಿ ಮೇಲೆ ದಾಳಿ ಮಾಡಿದಾಗ ನೀವು ಹೇಗೆ ಶೂಟ್ ಮಾಡಿದ್ರಿ ಅಂತ ಎನ್ ಡಿಟಿವಿ ನೂಪುರ್ ಬಸುನ ಕೇಳಿದರೆ ಕ್ಯಾಮೆರಾಗೂ, ಪೊಲೀಸ್ ಲಾಠಿಗೂ ಇರೋ ವ್ಯತ್ಯಾಸಾನೇ ಅದೂ ಅಂತ ಹೇಳಿಯಾರು.

ಅಟ್ಯಾಕ್ ಮಾಡೋವಾಗ ನೀವು ಮಾತ್ರ ಯಾಕೆ ಅಲ್ಲಿದ್ರಿ? ನಿಮಗೆ ಮಾತ್ರ ಅದು ಹೇಗೆ ಗೊತ್ತಾಯ್ತು? ನೀವೂ, ಅವರೂ ಫೋನ್ ಮಾಡಿಕೊಂಡಿದ್ದೀರಿ ಅಂದ್ರೆ, ಹೌದು ಅದಕ್ಕೇ ನಾವು ಜರ್ನಲಿಸ್ಟ್ ಗಳು ಅಂತ ಹೇಳೋ ಪಡೆಯೂ ಇದೆ.

ಮುತ್ತತ್ತಿ ಫಾರೆಸ್ಟ್ ನಲ್ಲಿ ರಾತ್ರೋರಾತ್ರಿ ಸಯನೈಡ್ ನುಂಗಿ ಉಗ್ರರು ಪ್ರಾಣ ಬಿಟ್ರು… ಗೊತ್ತಾಗಿದ್ದು ಪ್ರಜಾವಾಣಿಯ ಮಂಡ್ಯ ರಿಪೋರ್ಟರ್ ಆಗಿದ್ದ ಕುಸುಮಾ ಶಾನ್ ಭಾಗ್ ಗೆ.

ಆ ಅಧೋರಾತ್ರಿಯಲ್ಲಿ ಟ್ಯಾಕ್ಸಿ ಹಿಡಿದು ಕಾಡಿಗೆ ನುಗ್ಗಿದರು. ನಿಮಗೇ ಹೇಗೆ ಗೊತ್ತಾಯ್ತು? ನಿಮ್ಮ ಮೊಬೈಲ್ ಗೆ ಫೋನ್ ಮಾಡಿದವರು ಯಾರು? ಈ ರಾತ್ರಿಯಲ್ಲಿ ಬರಬೇಕು ಅಂದ್ರೆ ನಿಮಗೇನು ಅಷ್ಟೊಂದು ಇಂಟರೆಸ್ಟು ಅಂತ ಪ್ರಶ್ನೆ ಉದುರಿಸಿ ‘ನೀನೇ ಯಾಕೆ ಎಲ್ ಟಿಟಿಇ ಆಗಿರಬಾರದು’ ಅನ್ನೋ ಥರಾ ನೋಡಿದ್ರೆ ಪಾಪ ‘ಮುಕ್ತಪತ್ರಿಕೆ ಅನ್ನೋದು ಸವಲತ್ತಲ್ಲ, ಯಾವುದೇ ಸಮಾಜದ ಅನಿವಾರ್ಯ ಅಂಗ’ ಅಂದ ಥಾಮಸ್ ಜೆಫರ್ಸನ್ ಸಹಾ ನಕ್ಕಾರು.

ಜಿಲ್ಲೆಯಲ್ಲಿ 106 ಮಂದಿಗೆ ಸೋಂಕು ದೃಢ

ತುಮಕೂರು ಜಿಲ್ಲೆಯಲ್ಲಿ ಭಾನುವಾರ 106 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೊರೋನಾ ದೃಢಪಟ್ಟವರ ಸಂಖ್ಯೆ 1214 ಕ್ಕೆ ಏರಿಕೆಯಾಗಿದೆ.

ತುಮಕೂರು 50, ಮಧುಗಿರಿ 8, ಗುಬ್ಬಿ 9, ತಿಪಟೂರು 5, ಕುಣಿಗಲ್ 11, ತುರುವೇಕೆರೆ 6, ಚಿಕ್ಕನಾಯಕನಹಳ್ಳಿ 2, ಶಿರಾ 1, ಪಾವಗಡ 5, ಕೊರಟಗೆರೆ 9 ಪ್ರಕರಣಗಳು ಪತ್ತೆಯಾಗಿವೆ.

ಇಂದು 28 ಮಂದಿ   ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 612 ಮಂದಿ ಬಿಡುಗಡೆಯಾಗಿದ್ದಾರೆ.    42 ಮಂದಿ ಮೃತಪಟ್ಟಿದ್ದಾರೆ.  560  ಸಕ್ರಿಯ ಪ್ರಕರಣಗಳಿವೆ.

ಒಂದು ನವಿಲುಕೋಸಿನಲ್ಲಿ ಏನೆಲ್ಲಾ..

ಜಿ ಎನ್ ಮೋಹನ್


ಕಿಟಕಿಯಿಂದ ಇಣುಕಿ ನೋಡಿದೆ. ಬೆಳ್ಳಂಬೆಳಗ್ಗೆ ಆ ಕೆಂಪು ಕೆನ್ನೆಯ ರೇಷ್ಮೆ ಬಣ್ಣದ ಹುಡುಗಿ ತಲೆ ಮೇಲೆ ಕೈಹೊತ್ತು ಕುಳಿತಿದ್ದಳು. ಮುಖದಲ್ಲಿ ಚಿಂತೆಯ ಗೆರೆಗಳು ಆಗಲೇ ಜಾಗ ಹುಡುಕಿಕೊಂಡಿತ್ತು.

ಸಂಜೆ ಆಫೀಸಿನಿಂದ ಬಂದಾಗ ಆಕೆಯ ಮನೆಯೇ ಸೂತಕದಲ್ಲಿತ್ತು. ಯಾರೋ ಸತ್ತಿದ್ದಾರೆ ಎಂಬುದಕ್ಕೆ ಇನ್ಯಾವ ಸಾಕ್ಷಿಯೂ ಬೇಕಿರಲಿಲ್ಲ. ಎದುರಿಗಿದ್ದ ಮನೆಯ ಸಾವಿಗೆ ನಾನು ಸಂತಾಪ ಸೂಚಿಸದಿದ್ದರೆ ತಪ್ಪಾದೀತು ಎಂದು ಅವರ ಮನೆ ಹೊಕ್ಕೆ. ಏನಾಯ್ತು ಎಂದು ಕೇಳಿದೆ. ನೋಲ್ ಕೋಲ್ (ನವಿಲುಕೋಸು) ಸತ್ತು ಹೋಗಿದೆ ಎಂದರು.

ನನ್ನ ಹರಕು ಮುರುಕು ಹಿಂದಿ ಜ್ಞಾನಕ್ಕೆ ಅವರು ಹೇಳಿದ್ದು ದಕ್ಕುವುದಾದರೂ ಹೇಗೆ? ಒಂದಿಷ್ಟು ಹೊತ್ತು ಅವರೊಡನೆ ನಾನೂ ಮೌನ ಆಚರಿಸಿದೆ.

ಒಂದೆರಡು ದಿನ ಕಳೆದಿರಬೇಕು. ಭಾನುವಾರ ಬೆಳ್ಳಂಬೆಳಗ್ಗೆ ಇಡೀ ಮನೆಯೇ ಕಾರು ಸವಾರಿಗೆ ಸಜ್ಜಾಗಿತ್ತು. ಸಂಡೇ ಔಟಿಂಗ್ ಅಂದುಕೊಂಡೆ. ಆದರೆ ಗಂಟೆ ಕಳೆಯುವುದರೊಳಗೆ ಹೊರಗೆ ಮತ್ತೆ ಸದ್ದುಗದ್ದಲ. ಯಥಾಪ್ರಕಾರ ಕಿಟಕಿಯಲ್ಲಿ ಇಣುಕಿದೆ.

ಅದೇ ಹುಡುಗಿ. ಕೆಂಪು ಕೆನ್ನೆ, ರೇಷ್ಮೆ ಬಣ್ಣ. ಆದರೆ ಈ ಬಾರಿ ಸಂಭ್ರಮ ಮುಖದ ಎಲ್ಲಾ ಕಡೆ ಜಾಗ ಮಾಡಿಕೊಂಡಿತ್ತು.

ಗಣೇಶನ ಹಬ್ಬಕ್ಕೆ ಮನೆ ಮಂದಿಯೆಲ್ಲಾ ಹೋಗಿ, ಗಣಗಣ ಗಂಟೆ ಬಾರಿಸಿಕೊಂಡು, ಜೈಕಾರ ಹಾಕುತ್ತಾ, ಅಕ್ಕಿ ತಟ್ಟೆಯಲ್ಲಿ ಗಣೇಶ ತರುತ್ತಾರಲ್ಲಾ ಹಾಗೆ ಕಾರಿನಿಂದ ಇಳಿಸಿದ ಏನನ್ನೋ ಅಷ್ಟೇ ಭಯ ಭಕ್ತಿಯಿಂದ ತರುತ್ತಿದ್ದರು.

ಅರೆ! ನರ್ಸರಿಯಿಂದ ತಂದ ಗಿಡ.
ಇದಕ್ಯಾಕೆ ಇಷ್ಟೊಂದು ಗಲಾಟೆ?

ಒಂದೆರಡು ವಾರ ಕಳೆದಿತ್ತು. ಕಿಟಕಿಯಿಂದ ಇಣುಕಿದಾಗ ಕಂಡದ್ದು ಗಾಬರಿಯ ಮುಖಗಳು. ನರ್ಸರಿ ಗಿಡ ಕೈಕೊಟ್ಟಿತ್ತು. ಎಲೆಗಳೆಲ್ಲಾ ಪೊಗದಸ್ತಾಗಿ ಬೆಳೆದಿದ್ದರೂ ಹುಳು ತಿಂದು ಹಾಕಿತ್ತು.

ಮನೆಯವರಿಗೆ ಜ್ವರ ಬಂತೇನೋ ಎಂಬಷ್ಟು ಕಾತರದಿಂದ ಓಡಿದ ಕಾರು ಸ್ವಲ್ಪ ಹೊತ್ತಿನಲ್ಲೇ ಕ್ರಿಮಿನಾಶಕ ಹೊತ್ತು ತಂತು. ಗಿಡಗಳನ್ನು ಬದುಕಿಸುವ ಕೆಲಸ ನಡೆದಿತ್ತು.

ಒಂದಷ್ಟು ದಿನ ಕಳೆಯಿತು.

ಬೆಳ್ಳಂಬೆಳಗ್ಗೆ ಬಾಗಿಲು ಬಡಿದ ಸದ್ದು. ಕರೆಗಂಟೆ ಇದೆ ಎಂಬುದೇ ಮರೆತು ಹೋಗುವಷ್ಟು ಏಕಾಂಗಿಯಾಗಿ ಹೋಗಿದ್ದ ನನಗೆ ಆಶ್ಚರ್ಯ. ಬಾಗಿಲು ತೆರೆದಾಗ ಅದೇ ಹುಡುಗಿ ಕೈಯಲ್ಲಿ ಸ್ವೀಟ್ಸ್. ಮುಖದ ಕ್ಯಾನ್ ವಾಸ್ ನಲ್ಲಿ ಚೆಲ್ಲಾಡಿದ ಸಂಭ್ರಮದ ಬಣ್ಣ.

‘ನೋಲ್ ಕೋಲ್ ಆಗಯಾ?’ ಹುಡುಗಿ ಕುಣಿಯುತ್ತಾ ಇನ್ನಷ್ಟು ಮನೆಯತ್ತ ಜಿಗಿದಳು.

ಅರ್ಥವಾಗದೆ ಕಿಟಕಿಯಲ್ಲಿ ಇಣುಕಿದೆ. ಅಪಾರ್ಟ್ ಮೆಂಟಿನ ಎಲ್ಲರೂ ಗಿಡದ ಸುತ್ತಾ ನೆರೆದಿದ್ದರು. ನಾನೂ ಮೆಟ್ಟಿಲಿಳಿದೆ. ಇಣುಕಿ ನೋಡಿದಾಗ ಆ ಪುಟ್ಟ ಟ್ರೇಯ ಕ್ಯಾನ್ ವಾಸ್ ನಲ್ಲಿ ನವಿಲುಕೋಸು ಗಡ್ಡೆ ಮೂಡಿತ್ತು.

ಅಪಾರ್ಟ್ ಮೆಂಟಿನ ಅಷ್ಟೂ ಮನೆಗಳನ್ನೂ ಸಂತಸದಲ್ಲಿ ಮುಳುಗಿಸಿಬಿಡುವ ತಾಖತ್ತು ಒಂದು ಪುಟ್ಟ ನವಿಲುಕೋಸಿನ ಗಡ್ಡೆಗಿದೆ ಎಂದು ನನಗೆ ಗೊತ್ತಾದದ್ದೇ ಆಗ.

ರಾತ್ರಿ ಮಾತನಾಡುತ್ತ ಕುಳಿತಿದ್ದಾಗ ನನಗೆ ಆತ ಹೇಳಿದ್ದು ಇಷ್ಟೆ – ನಾವು ಕಾಶ್ಮೀರದವರಿಗೆ ಊಟ ತಿಂಡಿ ಏನೇ ಇರಲಿ ಪ್ರತೀ ದಿನ ಅದರಲ್ಲಿ ನೋಲ್ ಕೋಲ್ ಇರಲೇಬೇಕು. ಪ್ರತೀ ಮನೆ, ಪ್ರತೀ ಊಟ, ಪ್ರತೀ ಊರು ಅಥವಾ ಇಡೀ ಕಾಶ್ಮೀರ ಒಂದು ನೋಲ್ ಕೋಲ್ ನ ಅಂತರಗಂಗೆಯನ್ನು ಹೊಂದಿದೆ ಎಂದ.

ಕಾಶ್ಮೀರ ಬಿಟ್ಟು ಬಹುದೂರ ಬಂದಿದ್ದೇವೆ. ನಾನು ಓದಿದ ಶಾಲೆ, ಕೈ ಮುಗಿದು ನಿಂತಿದ್ದ ಗುಡಿ, ತೊರೆಗಳ ಮೇಲಿನ ಆ ಮರದ ಸೇತುವೆ, ಮಂಜು ಎಲ್ಲಾ ನೆನಪಾಗುತ್ತದೆ.

ಈಗಷ್ಟೇ ಅಪ್ಪ ಅಮ್ಮನನ್ನು ಬಿಟ್ಟು ಬಂದಿರೋ, ಇನ್ನೂ ಪುಟ್ಟ ಹುಡುಗಿ ಥರಾನೇ ಇರೋ ನನ್ನ ಹೆಂಡತಿಗೆ ತವರು. ಇವೆಲ್ಲಾ ಈ ದೂರದ ಊರಿಗೆ ಹೇಗೆ ತರಲಿ. ಬೇಕೆಂದರೂ ಕಾಶ್ಮೀರಕ್ಕೆ ದಿಢೀರನೆ ಹೇಗೆ ಹೋಗಲಿ ಎಂದ.

ತಕ್ಷಣ ಮಿಂಚೊಂದು ತಲೆಯಲ್ಲಿ ಸುಳಿಯಿತು. ಆತ ಮನೆಯ ಮುಂದಿನ ಪುಟ್ಟ ಟ್ರೇಯೊಳಗೆ ಕಾಶ್ಮೀರವನ್ನೇ ಸೃಷ್ಟಿಸಿಕೊಳ್ಳುತ್ತಿದ್ದ.

ಆ ಹಿಮ, ಆ ಶಾಲೆ, ಆ ಸೇತುವೆ ತರಲಾಗದ ಆ ಸುಂದರಿ ಒಂದು ನವಿಲುಕೋಸು ಬೆಳೆಯುವುದರ ಮೂಲಕ ಕಾಶ್ಮೀರವೇ ಅಲ್ಲಿ ಮೊಳಕೆಯೊಡೆಯುವುದನ್ನು ಕಾಣುತ್ತಿದ್ದರು.

ಗಿಡ ಸತ್ತಾಗ ಅವರ ಪಾಲಿಗೆ ಸೂತಕ ಆವರಿಸಿದ್ದು ಏಕೆ ಎಂದು ಗೊತ್ತಾಯಿತು.

ಒಂದು ನವಿಲುಕೋಸು ಏನೆಲ್ಲಾ ಆಗಿತ್ತು.

ಆ ಸುಂದರಿಗೆ ಸುಂದರ ತವರು. ಕಾಶ್ಮೀರದಲ್ಲಿ ಹುಟ್ಟದ ಮಗನಿಗೆ ಕಾಶ್ಮೀರದ ಪಾಠ. ಹನುಮಂತ ಇಡೀ ಸಂಜೀವಿನಿ ಪರ್ವತವನ್ನು ಹೊತ್ತು ತಂದನೋ ಇಲ್ಲವೋ ಗೊತ್ತಿಲ್ಲ. ಆದರೆ ಅವರು ಒಂದು ಪುಟ್ಟ ಟ್ರೇನಲ್ಲಿ ಇಡೀ ಕಾಶ್ಮೀರವನ್ನೇ ಬೆಳೆದಿದ್ದರು.

ಒಂದು ನವಿಲುಕೋಸಿನಲ್ಲಿ ಏನೆಲ್ಲಾ..