Saturday, May 9, 2026
Google search engine
Home Blog Page 208

ಪ್ರೀತಿ ಬರೀ ಬೊಗಳೆ!

0

ದೇವರಹಳ್ಳಿ ಧನಂಜಯ


ರಾತ್ರಿ ನಾನು ಕುಡಿದು ಮನೆಗೆ ಬಂದೆ.ಬಾಗಿಲು ತೆಗೆದ ಮಡದಿ ಊಟ ಆಯ್ತಾ ಎಂದರು.ಇಲ್ಲ ಎಂದೆ.ಕುಡಿಯಲು ಕೊಡಿಸುವವರು ಊಟ ಕೊಡಿಸುವುದಿಲ್ಲವೆ ಎಂದು ಕೇಳಿದರು.

ಮಾತನಾಡದೆ ನಾನೇ ಕೋಣೆಗೆ ಹೋಗಿ ಬಡಿಸಿಕೊಂಡು ಊಟಕ್ಕೆ ಕುಳಿತೆ.ಮೊದಲ ತುತ್ತು ಗಂಟಲಿನಲ್ಲಿ ಇಳಿಯುತ್ತಿದ್ದಾಗ ಹೆಂಡತಿ ಬಿಕ್ಕುವ ಸದ್ದು ಕೇಳಿಸಿತು.ಕಣ್ಣಂಚಿನಲ್ಲಿ ಕಂಬನಿ ತೊಟ್ಟಿಕ್ಕುತ್ತಿತ್ತು.

ನನ್ನ ಗಂಟಲಿನಲ್ಲಿ ತುತ್ತು ಇಳಿಯದಾಯಿತು. ಊಟ ನಿಲ್ಲಿಸಿ ಕೈ ತೊಳೆದು ಮೇಲೆದ್ದೆ.ನೀರು ಕುಡಿದು ಮಲಗಲು ಸಿದ್ಧನಾದೆ.ನಾನೂ ಊಟ ಮಾಡಿಲ್ಲ.ಪಾಪುಗೆ ಊಟ ಮಾಡಿಸಿ ಮಲಗಿಸಿದೆ.ನಿನ್ನ ಜತೆಯಲ್ಲೇ ಊಟ ಮಾಡಲು ಕಾದಿದ್ದೆ ಎಂದು ಕಣ್ಣೀರು ಒರಸಿಕೊಂಡರು.

ಶ್ರೀಮತಿ ಬಿಕ್ಕುತ್ತಲೇ ಹೇಳಿದರು.ನಾನು ನಿನ್ನ ಮದುವೆಯಾಗಿ ದೊಡ್ಡ ತಪ್ಪು ಮಾಡಿದೆ.ಮಗ ಮತ್ತು ಸಂಸಾರದ ಮೇಲಿನ ಪ್ರೀತಿ ಬರೀ ಬೊಗಳೆ.ನನಗೆ ಕೊಡುವುದೆಲ್ಲವುದನ್ನು ಕೊಟ್ಟು ಡೈವರ್ಸ್ ಮಾಡಿಬಿಡು.ಮಗನನ್ನಾದರೂ ಚನ್ನಾಗಿ ಬೆಳೆಸುತ್ತೀನಿ ಎಂದರು.

ಮನೆಯಿಂದ ಹೊರಗೆ ಹೋಗುವಾಗ ತಾಯಿ ಕಳೆದುಕೊಂಡ ಗೆಳೆಯರೊಬ್ಬರು ದುಃಖದಲ್ಲಿದ್ದಾರೆ.ಮಾತನಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಹೋಗಿದ್ದೆ.ಪ್ರತೀ ಬಾರಿಯೂ ಇಂಥದ್ದೇ ಕಾರಣ ಕೊಟ್ಟು ಕಾ ಲ್ತೆಗೆಯುತ್ತೇನೆ.ಕುಡಿದುಕೊಂಡು ಮನೆಗೆ ಬರುತ್ತೇನೆ.ಇಂದೂ ಹಾಗೇ ಮಾಡಿದೆ.

ನಾನೇನೂ ವೃತ್ತಿಪರ ಕುಡುಕನಲ್ಲ.ಸಂದರ್ಭ ಸಿಕ್ಕಾಗ ಗೆಳೆಯರ ಜತೆ ಸೇರಿ ಖುಷಿಗೆ ಅಥವಾ ದುಃಖಕ್ಕೆ ಕುಡಿಯುತ್ತೇನೆ.ಬಹುತೇಕ ಸಂದರ್ಭಗಳಲ್ಲಿ ಬೇರೆಯವರ ಕಂಪನಿಗೆಂದೇ ಕುಡೀಯುತ್ತೇನೆ.

ಕುಡಿತ ಚಟವಾಗಬಾರದು.ಖುಷಿಗಾಗಿ ಕುಡಿಯುವುದು ತಪ್ಪಲ್ಲ.ಪ್ರತೀ ಬಾರಿ ಕುಡಿಯುವ ಸಂದರ್ಭ ಬಂದಾಗೆಲ್ಲ ಈ ಮಾತುಗಳನ್ನು ನನಗೆ ನಾನೇ ಹೇಳಿಕೊಂಡು ನನ್ನ ಕುಡಿತವನ್ನು ಸಮರ್ಥಿಸಿಕೊಳ್ಳುತ್ತೇನೆ.

ಕಳೆದ ಎರಡು ದಿನಗಳಿಂದ ಎರಡೂವರೆ ವರ್ಷದ ಮಗ ಬಿಡದೆ ಕಾಡುತ್ತಿದ್ದ.ಮಲಗಿ ರೆಪ್ಪೆ ಮುಚ್ಚಿದಾಗೆಲ್ಲ ಅವನ ಮುದ್ದು ಮುಖ ಕಣ್ಣ ಮುಂದೆ ಬಂದು ನಿದ್ರೆ ಹಾರಿ ಹೋಗುತ್ತಿತ್ತು.ಮಗನ ಜತೆ ಖುಷಿಯಿಂದ ಕಾಲ ಕಳೆದು ಹತ್ತು ದಿನ ಕಳೆದಿದ್ದವು.

ಊರಿನಲ್ಲಿ ಹಾಸಿಗೆ ಹಿಡಿದಿದ್ದ ಅಪ್ಪನನ್ನು ನೋಡಿಕೊಳ್ಳುವ ಸಲುವಾಗಿ ಮಗನ ಜತೆಗಿನ ಖುಷಿಯ ಕ್ಷಣಗಳನ್ನು ಕಳೆದುಕೊಂಡಿದ್ದೆ.ನಾನೀಗ ಅಪ್ಪನಿಗೆ ಅಪ್ಪ.ಅಪ್ಪ ನನ್ನ ಮಗ.ಕಾಡುವ ಮಗ!

ಅಕ್ಕನ ಮಗ ಊರಿಗೆ ಬಂದ ಕಾರಣ ಒಂದು ರಾತ್ರಿ ಮಟ್ಟಿಗೆ ಅಪ್ಪನನ್ನು ನೋಡಿಕೊಳ್ಳುವ ಜವಾಬ್ಧಾರಿಯನ್ನು ಅವನ ಹೆಗಲಿಗೆ ಹಾಕಿ ಮಗನನ್ನು ನೋಡಲು ಬಂದಿದ್ದೆ.

ಮಗನ ಜತೆ ಆಟವಾಡುತ್ತಿದ್ದವನು ಗೆಳೆಯನ ಫೋನ್ ಕರೆ ಬಂದ ತಕ್ಷಣ ಮಡದಿಗೆ ಸಬೂಬು ಹೇಳಿ, ಗೆಳೆಯ ಕರೆಯದಿದ್ದರು ಈಗ ಬಂದೆ ಎಂದು ಹೇಳಿ ಏಕೆ ಹೋದೆ?

ನಾನು ಕುಡಿತದಲ್ಲಿ ವೃತ್ತಿಪರನಲ್ಲ. ಈ ಮಾತನ್ನು ಮತ್ತೆ ಮತ್ತೆ ನನಗೇ ಎಂಬಂತೆ ಹೇಳಿಕೊಳ್ಳುತ್ತೇನೆ.ನನಗಾಗಿ ನಾನು ಕುಡಿಯುವುದಿಲ್ಲ.ಗೆಳೆಯನ ದುಃಖ,ಕೆಲಸದ ಒತ್ತಡ,ಅಪರೂಪದ ಸ್ನೇಹಿತ ಜತೆಯಾಗಿದ್ದಾನೆ,ನನ್ನದೇ ಕಷ್ಟ,ಅತ್ತಿರದವರ ಮದುವೆ,ಅಪರೂಪಕ್ಕೆ ಸೇರಿದ್ದೇವೆ,ಹುಟ್ಟುಹಬ್ಬ,ಯಾರಿಗೂ ಪ್ರಮೋಷನ್ ಆಯ್ತು, ಬಾನ,ಬೀಗರ ಊಟ,ಹೊಸವರ್ಷ ಹೀಗೆ ಕುಡಿಯಲು ನನಗೆ ಕಾರಣ ಬೇಕು.ಸುಮ್ಮಸುಮ್ಮನೆ ಕುಡಿಯುವುದಿಲ್ಲ.ಮನಸ್ಸು ಕುಡಿಯುವ ಕಾರಣಗಳನ್ನು ಹುಡುಕುತ್ತಿರುತ್ತದೆ.

ಕುಡಿಯಲು ಕಾರಣ ಹುಡುಕುವ ಮನಸಿಗೆ ಜೊತೆಯಲ್ಲಿ ಊಟ ಮಾಡಲು ಕಾದು ಕುಳಿತ ಹೆಂಡತಿ, ಹೆಜ್ಜೆ ಸಪ್ಪಳಕ್ಕೆ ಚುರುಕಾಗುವ ಮಗನ ಕಿವಿಗಳು,ಅವನ ತುಂಟ ನಗು,ಹಾಸಿಗೆ ಹಿಡಿದಿರುವ ಅಪ್ಪನ ನರಳಾಟ,ಅವ್ವನ ಸಂಕಟ ಯಾಕೆ ಕಾಣುತ್ತಿಲ್ಲ?

ಕುಡಿದ ಪ್ರತೀ ರಾತ್ರಿಯೂ ನನ್ನ ಮೇಲೆ ನನಗೆ ಅಸಹ್ಯ ಮೂಡುತ್ತದೆ. ಇನ್ನು ಮುಂದೆ ಕುಡಿಯಬಾರದು ಎಂದು ಸರಿರಾತ್ರಿಯಲಿ ಶಪಥ ಮಾಡುತ್ತೇನೆ. ಮತ್ತೆ ಅದೇ ತಪ್ಪು ಅದೇ ಶಪಥ ಪ್ರೀತಿಪಾತ್ರರ ಮುಂದೆ ಸಣ್ಣವನಾಗುತ್ತಿದ್ದೇನೆ.

ಈ ರಾತ್ರಿಯೂ ನನ್ನ ಮೇಲೆ ನನಗೆ ಅಸಹ್ಯ ಮೂಡಿದೆ.ಹೌದು ಸುತ್ತಲಿನ ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ ಅದರಲ್ಲಿ ಅವರ ಬೆಚ್ಚಗಿನ ಬದುಕು ಇದೆ ಆ ಬೆಚ್ಚನೆಯ ಬದುಕಿನಲ್ಲಿ ನಾನು ಹೋಗಿದ್ದೀನಿ.ನನಗೆ ಏನಾದರು ಆದರೆ ಅವರ ಬದುಕಿನ ಹಳಿ ತಪ್ಪುತ್ತದೆ ಎಂಬ ಕಕ್ಕುಲಾತಿಯನ್ನು ಸ್ವಾರ್ಥ ಎನ್ನಲಾಗದು. ಈ ಬಾರಿ ಶಪಥ ಮಾಡುವುದಿಲ್ಲ.ಮತ್ತೊಮ್ಮೆ ಶಪಥ ಮುರಿಯುವ ಮನಸ್ಸು ನನಗಿಲ್ಲ.

ಅಬ್ಬಬ್ಬಾ! ಕೊರಟಗೆರೆ ಪೊಲೀಸ್ ಠಾಣೇಲಿ ಕಳ್ಳರ ಕೂಯ್ಲು ಅಷ್ಟೇ ಅಲ್ಲ ಮಳೆ ಕೂಯ್ಲೂ ಇದೆ…

Publicstory. in


ಕೊರಟಗೆರೆ: ತಾಲ್ಲೂಕಿನ ಜನರ ಬಹಳ ದಿನಗಳ‌ ನಿರೀಕ್ಷೆ ಕೊರಟಗೆರೆ ಪೊಲೀಸ್ ಠಾಣೆ ಕಟ್ಟಡ ಜೂ.10 ಲೋಕಾರ್ಪಣೆಗೆ ಸಿದ್ಧ ಗೊಂಡಿದೆ.

 

ಸುಮಾರು 80 ವರ್ಷ ಹಳೆಯ ಕಟ್ಟಡದಲ್ಲಿದ್ದ ಪೊಲೀಸ್ ಠಾಣೆ ಬಹಳ ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿತ್ತು. ಈಗ ಅದೇ ಜಾಗದಲ್ಲಿ ₹.1.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಗಣ್ಯರಿಂದ ಉದ್ಘಾಟನೆಗೆ ಸಿದ್ಧಗೊಂಡಿದೆ.

ಇದರೊಂದಿಗೆ ಇಲ್ಲಿನ ಸಿಬ್ಬಂದಿಗಾಗಿ ₹2.25 ಕೋಟಿ ವೆಚ್ಚದಲ್ಲಿ 12 ವಸತಿಗೃಹಗಳು ಕೂಡ ಉದ್ಘಾಟನೆಯಾಗಲಿವೆ.

ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್

 

ಸಮಿಶ್ರ ಸರ್ಕಾರದ ಅವದಿಯಲ್ಲಿ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಾಗಿದ್ದ ಡಾ.ಜಿ. ಪರಮೇಶ್ವರ್ ಅವರ ಕೊಡುಗೆಯಾಗಿ ಪಟ್ಟಣ ಸೇರಿದಂತೆ ಕೋಳಾಲ ಪೊಲೀಸ್ ಠಾಣೆಗಳು ಅನುಮೋದನೆಗೊಂಡು ಕೆಲವೇ ದಿನಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿವೆ.


ಇವರು ಅತ್ಯಂತ ಜನಪ್ರಿಯರು

ಇಲ್ಲಿನ ಠಾಣೆಯ ಇತಿಹಾಸವನ್ನು ನೋಡಿದಾಗ ಹಲವು ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ.

ಅತ್ಯಂತ ಜನಾನುರಾಗಿಯಾಗಿ, ಜನ ಸ್ನೇಹಿಯಾಗಿ ಜನಪ್ರಿಯರಾದವರು ಸಿಪಿಐ ಚಂದ್ರಶೇಖರ್.

ತಾಲ್ಲೂಕಿನ ಯಾವ ಗ್ರಾಮಕ್ಕೆ ಹೋದರು ಜನರು ಇವರ ಹೆಸರನ್ನು ನೆನಪಿಸಿಕೊಳ್ಳುತ್ತಾರೆ.

ದಕ್ಷ ಅಧಿಕಾರಿಯಾಗಿದ್ದ ಇವರು ಪಟ್ಟಣಕ್ಕೆ ಬಂದಿದ್ದ ಚಿರತೆ ಪತ್ರಕರ್ತರೊಬ್ಬರ ಮೇಲೆ ಎರಗುವಾಗ ಪ್ರಾಣದ ಹಂಗು ತೊರೆದು ಜೀವಂತ ಸೆರೆ ಹಿಡಿಯುವ ಮೂಲಕ ಮನೆ ಮಾತಾಗಿದ್ದರು.

ಹಲವು ಮಹತ್ವದ ಪ್ರಕರಣಗಳನ್ನು ಬೇಧಿಸಿದ್ದ ಅವರು, ಜನ ಸ್ನೇಹಿಗೂ ಹೆಸರಾಗಿದ್ದರು.

ಅಂತರ ರಾಜ್ಯ ದರೋಡೆಕೋರರನ್ನು ಬಂಧಿಸಿದ ಪ್ರಕರಣದಲ್ಲಿ ಅವರಿಗೆ ಇಲಾಖೆಯಲ್ಲಿ ಉತ್ತಮ ಹೆಸರಿದೆ.

ಈಗ ಇರುವ ಅಧಿಕಾರಿಗಳು ಸಹ ಜನಸ್ನೇಹಿಯಾಗಿದ್ದಾರೆ ಎನ್ನುತ್ತಾರೆ ಹಲವು ಮುಖಂಡರು ಹಾಗೂ ಜನರು.


ಪೊಲೀಸ್ ಇಲಾಖೆಯ ಆಧುನಿಕರಣ ಯೋಜನೆಯಡಿ ₹. 1.50 ಕೋಟಿ ವೆಚ್ಚದಲ್ಲಿ ಕೊರಟಗೆರೆ ಠಾಣೆ ಕಟ್ಟಡ ಮತ್ತು ಪೊಲೀಸ್ ಇಲಾಖೆಯ 2020-ಗೃಹ ಯೋಜನೆಯಡಿ ₹.2.25 ಕೋಟಿ ವೆಚ್ಚದಲ್ಲಿ 12 ವಸತಿಗೃಹಗಳನ್ನು ನಿರ್ಮಿಸಲಾಗಿದೆ‌.

ಡಾ.ಕೆ.ವಂಶಿಕೃಷ್ಣ, ಎಸ್ಪಿ ತುಮಕೂರು

2017-18ನೇ ಸಾಲಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಅವರು ಸರ್ಕಾರದಿಂದ ಮುಂಜೂರು ಮಾಡಿದ್ದರು.

ಬಹಳ ವರ್ಷಗಳಿಂದ ಇಡೀ ತಾಲ್ಲೂಕಿಗೆ ಒಂದೇ ಒಂದು ಪೊಲೀಸ್ ಠಾಣೆ ಇತ್ತು. ಒಂದು ಠಾಣೆ ವ್ಯಾಪ್ತಿಗೆ ಸುಮಾರು 400ಕ್ಕೂ ಹೆಚ್ಚು ಗ್ರಾಮಗಳು ಒಳಪಡುತ್ತಿದ್ದವು.


ಎಫ್.ಕೆ.ನದಾಫ್, ಸಿಪಿಐ

ಎಫ್.ಕೆ. ನಧಾಫ್, ಸಿಪಿಐ


ಎಚ್.ಮುತ್ತುರಾಜು, ಸಿಪಿಐ

“ಸ್ವಾಮಿ ವಿವೇಕಾನಂದರ ನುಡಿಮುತ್ತು ಆನ್ ಲೈನ್ ಸ್ಪರ್ಧೆ”

Tiptiru: ಚೈತನ್ಯ ಭಾರತ ಸಮಿತಿ, ತಿಪಟೂರು. ಇವರು ಜುಲೈ 4 ರ ಸ್ವಾಮಿ ವಿವೇಕಾನಂದರ ದೇಹತ್ಯಾಗದ ಪವಿತ್ರ ದಿನದ ನೆನಪಿಗಾಗಿ ಅವರ ನುಡಿಮುತ್ತುಗಳು ಮತ್ತು ಅವುಗಳ ಅರ್ಥವನ್ನ ಜೀವನದ ಹಿನ್ನೆಲೆಯಲ್ಲಿ ಹೇಳುವ 03 ನಿಮಿಷಗಳ ಆನ್ ಲೈನ್ ವೀಡಿಯೋ ಮುಖೇನ ಕಿರು ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಸತತವಾಗಿ ಮೂರ್ನಾಲ್ಕು ವರ್ಷಗಳಿಂದ ಸಾಮಾಜಿಕ ಮೌಲ್ಯ ತುಂಬುವ ಕಾರ್ಯಗಳನ್ನ ಮಾಡುತ್ತಾ ಬಂದಿರುವ ಈ ಸಮಿತಿಯು ಈಗ ಹೊಸದೊಂದು ಸ್ಪರ್ಧೆಯನ್ನು ಮಾಡಲು ಆರಂಭಿಸಿದೆ.

ಗೆದ್ದವರಿಗೆ ಸೂಕ್ತ ಬಹುಮಾನಗಳನ್ನು ವಿತರಿಸಲಾಗುತ್ತದೆ. ಹಾಗೂ ಜುಲೈ 04 ರಂದು ಪುಟ್ಟದಾಗ ಪವಿತ್ರ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಜೂನ್ 20 ರ ಒಳಗಾಗಿ ನಿಮ್ಮ ವೀಡಿಯೋಗಳನ್ನು ಮಾಡಿ ಭಿತ್ತಿಪತ್ರದಲ್ಲಿರುವ Whatsapp ನಂಬರಿಗೆ ತಪ್ಪದೇ ಕಳುಹಿಸುವಂತೆ
ಚೈತನ್ಯ ಭಾರತ ಸಮಿತಿ ಸಂತೋಷ್.ಜಿ‌
ತಿಳಿಸಿದ್ದಾರೆ.

ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಮರಗಳ ಮಾರಣಹೋಮ ನಿಲ್ಲಲಿ: ಜಗದೀಶ್ ಕೋಡಿಹಳ್ಳಿ

ಪಬ್ಲಿಕ್ ಸ್ಟೋರಿ.ಇನ್


Tumkuru: ವಿಶ್ವ ಪರಿಸರ ದಿನಚಾರಣೆಯ ಅಂಗವಾಗಿ ತುಮಕೂರು ನಗರದ ಡಿ ವೈ ಎಸ್ ಪಿ ಕಛೇರಿಯ ಅವರಣದಲ್ಲಿ ಗಿಡ ನೆಡಲಾಯಿತು.

ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಕೊಡಿಹಳ್ಳಿ ಜಗದೀಶ್ ಮಾತನಾಡಿ, ತುಮಕೂರು ನಗರ ಮಹಾನಗರ ಪಾಲಿಕೆಯಿಂದ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಕೆಲವು ಅಭಿವೃದ್ಧಿ ಹೆಸರಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ. ಇದು ನಿಲ್ಲಬೇಕು ಎಂದರು.

ನಗರದಲ್ಲಿ ಮಳೆ ಬಿದ್ದರೆ ನೀರು ಇಂಗಲು ಜಾಗವಿಲ್ಲದಂತಗಿದೆ. ಈಗ ಕಾಂಕ್ರೀಟ್ ನಿಂದ ರಸ್ತೆಗಳ ನೆಲವನ್ನ ಸಂಪೂರ್ಣವಾಗಿ ಮುಚ್ಚಲಾಗುತ್ತಿದೆ. ಮುಂದಿನ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುವ ಸಂಭವ ಹೆಚ್ಚಿರುತ್ತದೆ ಎಂದು ಎಚ್ಚರಿಸಿದರು.

ನಗರದ ರಸ್ತೆಗಳ ಆಸುಪಾಸುಗಳಲ್ಲಿ 5 ಮೀಟರಿನ ಅಂತರದಲ್ಲಿ 3’ೱ3’ ಜಾಗದಲ್ಲಿ ಗಿಡ ನೆಡಲು ಅವಕಾಶ ಮಾಡಿಕೊಡಬೇಕು. ಎಂದು ಮಹಾನಗರಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಸಮಾಜ ಸೇವಕರಾದ ಕೋಮಲ್ ಮಾತನಾಡಿ, ಪರಿಸರದ ಬಗ್ಗೆ ಅಪಾರವಾದ ಕಾಳಜಿ ಜಗದೀಶ್ ಅವರಿಗಿದೆ ಎಂದು ತಿಳಿಸಿದರು.

ಸಮಾಜ ಸೇವಕರಾದ ಕನ್ನಡ ಪ್ರಕಾಶ್ ರವರು ಮಾತನಾಡಿ, ತುಮಕೂರು ನಗರದ ಅಮಾನಿಕೆರೆಯ ಆವರಣದಲ್ಲಿ ಸಾಕಷ್ಟು ಗಿಡಗಳನ್ನು ಹಾಕುವುದರ ಮೂಲಕ ಅಲ್ಲಿನ ಸೌಂದರ್ಯವನ್ನು ಜಗದೀಶ್ ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.

R.T.O ಪ್ರಕಾಶ್ ಮಾತನಾಡಿದರು.‌ಜಗದೀಶ್ ಕೋಡಿಹಳ್ಳಿ ಅವರನ್ನು ಸನ್ಮಾನಿಸಲಾಯಿತು.

ಡಿ ವೈ ಎಸ್ ಪಿ ತಿಪ್ಪೇಸ್ವಾಮಿ, ಸಮಾಜ ಸೇವಕರಾದ ಮೋಹನ್ ಕುಮಾರ್, ಮುನಿಬಸವರಾಜು, ಹೊನ್ನಾಚಾರ್, ಶಶಿಧರ್, ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.

ತಲೆಭುಜವು ಮೇಲಲ್ಲ, ಪಾದ ಪಾವನವಲ್ಲ

0
ಕೆ.ಇ.ಸಿದ್ದಯ್ಯ ಅವರು ಜನಪರ ಪತ್ರಕರ್ತ, ಹೋರಾಟಗಾರ ಹಾಗೂ ಲೇಖಕರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು ಅವಕಾಶ ಬಳಸಿಕೊಂಡಿದ್ದರೆ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗುತ್ತಿದ್ದರು. ವಸೂಲಿಬಾಜಿಯ ಕೆಲಸ ಬೇಡವೆಂದು ಸುಮ್ಮನಾದವರು.
ತುಮಕೂರಿನ ಪ್ರಜಾಪ್ರಗತಿಯಿಂದ ಪತ್ರಿಕೋದ್ಯಮ ಆರಂಭಿಸಿದ ಅವರು ಈ ಟಿವಿಯಲ್ಲಿ ಹಲವು ವರ್ಷ ಹೈದರಾಬಾದ್, ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದವರು. ಸದ್ಯ, ತುಮಕೂರಿನಲ್ಲಿರುವ ಅವರು ಸಮುದಾಯದ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಕವಿದ ಮೋಡದ ಕೆಳಗೆ ನರಳುತಿವೆ ಜೀವ
ಹಗಲಿರುಳು ಹರಿದರೂ ಬೆವರಹೊಳೆ ಭಾರ
ತುಂಬದಿದು ತಂಬೂರಿ ಬರುಡುಯ ಚೀಲ
ಮೀಟುತಿದೆ ಹದವರಿತು ಹೊರಡಿಸುತ ನಾದ.

ಕಡುಕಪ್ಪು ಬಲುಚಂದ ಒಳಗೊಳಗೆ ವಿಷಪೂರ
ಅಲ್ಲಿ ವರ್ಣದ ಕೂಗು, ಇಲ್ಲಿ ಗೋವಿನ ಸೋಗು
ಮಾಯದ ಮಾತೊಳಗೆ ಹೊಳೆಯುತಿವೆ ದೇಶ
ಕುದಿಯುತಿದೆ ಬೇಯುತಿದೆ ತಿನ್ನಲಾಗದ ಅನ್ನ,

ಆಗ ಯಗ್ನದ ಕುಂಡ, ಈಗ ಭಕ್ತಿಯ ಕೆಂಡ
ದಹಿಸುತಿವೆ ಹಸಿದೇಹ ಒಡಲೊಳಗೆ ಕಂದ
ಕಣ್ಣಹೊಳೆ ಹರಿಸಿ ಚೀರಿತಿವೆ ಕರಿ ಇರುವೆ
ರಣಕೇಕೆ ಹಾಕುತಿವೆ ಋಣದ ಹುಳುಗಳ ದಂಡು.

ತಲೆಭುಜವು ಮೇಲಲ್ಲ, ಪಾದ ಪಾವನವಲ್ಲ
ಹಾರವನ ಆಟವಿದು ಕೊನೆ ಮೊದಲೇ ಇಲ್ಲ
ಅರಿಯುತಲಿ ಮರೆಯದಿರುವ ಉರುಹೊಡೆ ಎಲ್ಲ
ಕಲಿಯುತಲಿ ಕತ್ತಲೆಯ ಕೂಪದಿಂ ಹೊರ ಬಾ.

ಸಾಕೇತಪುರವಾಸಿ ದಕ್ಕದದು.ನಿನಗೆ
ಹಿತ್ತಾಳೆ ಕಿವಿಯೂತ ಕೋದಂಡ ಬಲಿತ
ಚೋರರೊಳ ಚೋರನಾಳ್ವಿಕೆಯ ಕಾಲ
ಬೆಳಗು ಕತ್ತಲೆಯತ್ತ ಚಲಿಸುತಿದೆ ‘ಮನು’ಕುಲ

ಬಾ ಬಾರೋ ಬೆಳಕೆ ಕರುಣೆಯ ತಿಳಿಕೊಳವೆ
ಒಳಸುಳಿಯ ಸೂಸಿ ಕೈಹಿಡಿದು ನಡೆಸು
ಬರಿಗಾಲ ನಡಿಗೆಗೆ ಚೈತನ್ಯ ನೀಡು
ಬರಿವೊಡಳ ಬಾಳ್ವೆಯಲಿ ನೆಮ್ಮದಿಯ ತುಂಬು.

ಅವರು ತಮ್ಮನ್ನೇ ಉತ್ತುಕೊಂಡರು..

ಜಿ ಎನ್ ಮೋಹನ್


ಹಂದಿ..

ನಾಯಿ..

ಕೋತಿ..

ಎಮ್ಮೆ..

ಕೋಣ..

ರಾಕ್ಷಸಿ..

ರಾಕ್ಷಸ…

ನಾನು ಕೇಳುತ್ತಲೇ ಇದ್ದೆ. ಒಂದಾದರೊಂದರ ಮೇಲೆ ಬೈಗುಳದ ಬಾಣಗಳು ಆ ಕಡೆಯಿಂದ ಈ ಕಡೆಗೆ, ಈಕಡೆಯಿಂದ ಆ ಕಡೆಗೆ ಚಿಮ್ಮುತ್ತಿದ್ದವು.

ಯಾರಿಗೆ ಯಾರೂ ಕಡಿಮೆ ಇಲ್ಲ ಎನ್ನುವಂತೆ ಒಂದು ಅಸ್ತ್ರಕ್ಕೆ ಇನ್ನೊಂದು ಪ್ರತ್ಯಾಸ್ತ್ರ.

ನಾನೂ ಕಿವಿಗೊಟ್ಟು ಅವರ ಬೈಗುಳಗಳ ಎರಚಾಟವನ್ನು ಕೇಳುತ್ತಾ ಕುಳಿತಿದ್ದೆ.

ಆಗ ಆತ ‘ನೀನೊಂದು ಕತ್ತೆ’ ಎಂದ . ಅಲ್ಲಿಯವರೆಗೆ ತನ್ನ ಅಣ್ಣನಿಗೆ ಏಟಿಗೆ ಎದುರೇಟು ಕೊಡುತ್ತಿದ್ದ ಆ ತಂಗಿಗೆ ತನ್ನ ಬಳಿ ಇದ್ದ ಅಸ್ತ್ರಗಳೆಲ್ಲಾ ಖಾಲಿಯಾಗಿ ಹೋಯಿತು ಎಂದು ಗೊತ್ತಾಗಿ ಹೋಯಿತು. ಅವಳು ಕಕ್ಕಾಬಿಕ್ಕಿಯಾದಳು. ಅರೆ! ನನ್ನ ಬಳಿ ಬೈಗುಳವೇ ಇಲ್ಲ ಎಂದರೆ ಹೇಗೆ, ತಾನು ಸೋಲೊಪ್ಪಿಕೊಂಡಂತೆ ಎಂದು ಒದ್ದಾಡಿಹೋದಳು.

ಸ್ವಲ್ಪ ಹೊತ್ತು ಅಷ್ಟೇ.. ಮರುನಿಮಿಷ ಸಾವರಿಸಿಕೊಂಡವಳೇ-
‘ನೀನೊಂದು ಅನಕ್ಷರಸ್ಥ ಕತ್ತೆ’ ಎಂದು ಬೈದಳು.

ಅಲ್ಲಿಗೆ ನೋಡಿ ಆ ಬೈಗುಳದಾಟ ಮುಗಿದೇ ಹೋಯಿತು. ‘ಅನಕ್ಷರಸ್ಥ ಕತ್ತೆ’ ಎಂದು ಬೈಸಿಕೊಂಡ ಅಣ್ಣ ಸುಮ್ಮನಾಗಿ ಹೋದ.

ಮತ್ತೆ ಒಂದು ಬಾಣವನ್ನೂ ಎತ್ತುವ ಸಾಹಸಕ್ಕೆ ಹೋಗಲಿಲ್ಲ. ಆತ ತಬ್ಬಿಬ್ಬಾಗಿ ಕುಳಿತಿದ್ದ. ಅನಕ್ಷರಸ್ಥ ಎನ್ನುವುದು ಕೇವಲ ಬೈಗುಳವಾಗಿರಲಿಲ್ಲ. ಅದು ಬೈಗುಳಗಳ ಬೈಗುಳವಾಗಿತ್ತು.

ಅದು ಆಗಿದ್ದು ಹೀಗೆ., ನಾನು ಆಗತಾನೆ ‘ಈಟಿವಿ’ ಹೊಕ್ಕಿದ್ದೆ. ರಾಮೋಜಿ ಫಿಲಂ ಸಿಟಿಯಲ್ಲಿ ಎರಡು ತಿಂಗಳು ಇರಬೇಕಾಗಿ ಬಂದಿತ್ತು. ಎದ್ದರೆ ಬಿದ್ದರೆ ಕಣ್ಣೆದುರು ಸಿನೆಮಾ.. ಸಿನೆಮಾ.. ಸಿನೆಮಾ.. ಮಲಗಿದರೆ ಎದ್ದರೆ ತಲೆಯಲ್ಲಿ ರೀಲ್ ಗಳೇ ಓಡುತ್ತಿತ್ತು.

ಆಗಲೇ ಗೆಳೆಯ ರಂಗನಾಥ ಮರಕಿಣಿ ‘ಒಂದಷ್ಟು ದಿನ ಬಾ ನನ್ನ ಮನೆಯಲ್ಲಿರು. ಹೈದ್ರಾಬಾದ್ ನಲ್ಲಿ ಚೈನಿ ಮಾಡೋಣ..’ ಎಂದಿದ್ದ. ನಾನು ಅದಕ್ಕೇ ಕಾಯುತ್ತಿದ್ದವಂತೆ ಹಾರಿ ಅವನ ಮನೆ ತಲುಪಿಕೊಂಡಿದ್ದೆ.

ಅವನ ಜೊತೆ ಮಾತನಾಡುತ್ತಾ ಅಡ್ಡಾಗಿದ್ದಾಗಲೇ ನನಗೆ ಅಲ್ಲಿದ್ದ ಗೋಡೆಯಾಚೆಯಿಂದ ಈ ಅಣ್ಣ ತಂಗಿ ಜಗಳ ಕೇಳಿಸಿದ್ದು.

ಆತ ‘ಗಧಾ’ ಎಂದ ಆಕೆ ‘ಅನ್ ಪಡ್ ಗಧಾ’ ಎಂದು ತಿರುಗೇಟು ಕೊಟ್ಟಳು. ಅಲ್ಲಿಗೆ ಜಗಳ ಉಸಿರಿಲ್ಲದೇ ಹೋಯಿತು.

ನಾನೂ ಸಹಾ ಒಂದು ಕ್ಷಣ ಬೆರಗಾಗಿ ಹೋದೆ. ಹೌದಲ್ಲಾ ನನ್ನ ಜೀವನದಲ್ಲೇ ಈ ರೀತಿಯ ಬೈಗುಳ ನನ್ನಕಿವಿಗೆ ಬಿದ್ದಿರಲಿಲ್ಲ. ಅನಕ್ಷರಸ್ಥ ಎನ್ನುವುದು ಎಷ್ಟು ಕೆಟ್ಟದ್ದು ಅಲ್ಲವಾ..

ನನ್ನ ಮನಸ್ಸು ಆ ಕ್ಷಣ ಅಲ್ಲಿರಲಿಲ್ಲ.. ದೂರದ, ಬಹುದೂರದ ಕ್ಯೂಬಾಗೆ ಹಾರಿ ಹೋಗಿತ್ತು. ಅಲ್ಲಿ ಸಹಾ ಅನ್ ಪಡ್ – ಅನಕ್ಷರಸ್ಥ ಎನ್ನುವುದನ್ನು ದೊಡ್ಡ ಬೈಗುಳ ಎಂದು ಭಾವಿಸಿಕೊಂಡವರು ಇದ್ದರು.

ಬರೀ ಒಬ್ಬಿಬ್ಬರಲ್ಲ, ಇಡೀ ದೇಶಕ್ಕೆ ದೇಶವೇ ಹಾಗೆ ಭಾವಿಸಿತ್ತು.

ಹಾಗಾಗಿಯೇ ಕ್ರಾಂತಿಯಾದ ತಕ್ಷಣವೇ ಫಿಡೆಲ್ ಕ್ಯಾಸ್ಟ್ರೊ ಸರ್ಕಾರ ಮೊದಲು ಕೈಗೆತ್ತಿಕೊಂಡಿದ್ದು ಈ ಕಳಂಕ ತೊಳೆಯುವ ಕೆಲಸವನ್ನು ‘ಅನ್ ಪಡ್’ ಎನ್ನುವ ಪದವನ್ನೇ ತಮ್ಮ ದೇಶದ ಕಪ್ಪು ಬೋರ್ಡ್ ನಿಂದ ಅಳಿಸಿಹಾಕಲು ಮುಂದಾಗಿಬಿಟ್ಟರು.

‘ನೆಲವನ್ನಲ್ಲ, ಮೊದಲು ನಿಮ್ಮನ್ನು ಉತ್ತುಕೊಳ್ಳಿ’ ಎಂದು ಕ್ಯಾಸ್ಟ್ರೊ ಕರೆ ನೀಡಿದರು.

ಅದುವರೆಗೂ ಕ್ಯೂಬಾ ಎನ್ನುವುದು ಅಂಧಕಾರದ ಲೋಕ. ಬರೀ ಜೀತಗಾರರು. ಇಲ್ಲಾ, ಹಸಿವಿನಿಂದ ನರಳುತ್ತಿರುವವರು. ಹವಾನಾ ಎನ್ನುವ ರಾಜಧಾನಿ ಅಮೆರಿಕಾದ ಸಕ್ಕರೆ ಹಾಗೂ ಸಿಗಾರ್ ಕಂಪನಿಗಳ ಒಬ್ಬಿಬ್ಬರು ಮಾಲೀಕರ ಕೈನಲ್ಲಿತ್ತು. ಹಾಗಾಗಿಯೇ ಮೊದಲು ನಮ್ಮನ್ನು ಉತ್ತುಕೊಳ್ಳಬೇಕು ಎಂದು ನಿರ್ಧರಿಸಿಬಿಟ್ಟರು.

ಅಕ್ಷರ ಕಲಿಸುವುದು ಹೇಗೆ?. ಆಗಲೇ ಶಾಲೆ ಕಲಿತ ಒಂದಿಷ್ಟು ಮಕ್ಕಳು ತಮ್ಮ ಅಪ್ಪ ಅಮ್ಮನಿಗೆ ‘ಆ ಆ ಈ ಈ’ ಕಲಿಸಲು ಆರಂಭಿಸಿದ್ದು. ಅಪ್ಪ ಅಮ್ಮನೇ ಮಕ್ಕಳಿಗೆ ಶರಣಾಗಿದ್ದರು. ಅಪ್ಪ ಅಮ್ಮ ಇಬ್ಬರೂ ಮಕ್ಕಳಿಗೆ ವಿದ್ಯಾರ್ಥಿಗಳಾಗಿದ್ದರು.

ಅಕ್ಷರ ಎನ್ನುವುದು ಮ್ಯಾಜಿಕ್ ಮಾಡಿತ್ತು. ಅಲ್ಲಿಂದ ಶುರುವಾಯಿತು ‘ಒಂದು ದೀಪ, ನೂರು ಪುಸ್ತಕ’ ಯೋಜನೆ. ಒಂದು ಚಿಮಣಿ ದೀಪ ಹಿಡಿದ ಒಬ್ಬ ಶಾಲಾ ವಿದ್ಯಾರ್ಥಿ ಹಳ್ಳಿಗಳತ್ತ ಹೋಗಿ ನೂರಾರು ಜನರಿಗೆ ಅಕ್ಷರ ಕಲಿಸುತ್ತಾ ಹೋದರು.

ನಾನು ದಕ್ಷಿಣ ಕನ್ನಡಕ್ಕೆ ಕಾಲಿಡಲು ಇನ್ನು ಕೆಲವೇ ದಿನಗಳಿತ್ತು. ದಕ್ಷಿಣ ಕನ್ನಡದ ಮೂಲೆ ಮೂಲೆಗೂ ಸಾಕ್ಷರತಾ ಸೈನಿಕರು ನುಗ್ಗುತ್ತಿದ್ದರು. ಆಗಲೇ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ನೇರ ೧೦ ನೇ ತರಗತಿ ಪರೀಕ್ಷೆ ಬರೆದು ಎಲ್ಲರೂ ನೋಡನೋಡುತ್ತಿದ್ದಂತೆಯೇ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದಳು.

ಆಗ ನಾನು ಹೌದಲ್ಲಾ ಅಕ್ಷರ ಎಂದರೆ ಕೂಲಿಕಾರರಿಗೂ ವಿಮೋಚನೆ ಎಂದುಕೊಳ್ಳುತ್ತಿರುವಾಗಲೇ ಪಕ್ಕದ ಕೇರಳದ ಕೊಟ್ಟಾಯಂ ನಿಂದ ಅಮೀನಾಬಿ ಮಾತನಾಡಿದ್ದು.

ಆಕೆಗೆ ವೇದಿಕೆ ಎಂದರೆ ಏನು ಎಂದೇ ಗೊತ್ತಿರಲಿಲ್ಲ. ನಾಕು ಜನ ಇದ್ದೆಡೆ ಇದ್ದೂ ಗೊತ್ತಿರಲಿಲ್ಲ. ಅಂತಹ ಅಮೀನಾಬಿ ಈಗ ಮೈಕ್ ಮುಂದೆ ನಿಂತಿದ್ದಳು. ೬೦ ದಾಟಿತ್ತು.

ಆಕೆ ಹೇಳುತ್ತಿದ್ದಳು – ನಾನು ಯಾವಾಗಲೂ ಇವರ ಹಿಂದೆ ಹೋಗುತ್ತಿದ್ದೆ. ಅವರು ೧೦ ಹೆಜ್ಜೆ ಮುಂದೆ ಹೋದರೆ ಹಿಂದೆ ನಾನು ಕುರಿಯಂತೆ ಹಿಂಬಾಲಿಸುತ್ತಿದ್ದೆ. ಆದರೆ ಈಗ ಹಾಗಲ್ಲ ನಾನು ಮುಂದೆ ಇರುತ್ತೇನೆ, ಇವರು ನನ್ನ ಹಿಂದೆ ಹಿಂದೆ ಬರುತ್ತಾರೆ ಎಂದಳು. ಕುರಿಯಂತೆ ಎಂದು ಮಾತ್ರ ಹೇಳಲಿಲ್ಲ.

ಎಲ್ಲರಿಗೂ ಅಚ್ಚರಿ- ಹೇಗಪ್ಪಾ? ಎಂದು.

‘ಅದು ಆಕೆಗೂ ಗೊತ್ತಾಯಿತೇನೋ ಬಿಡಿಸಿಡುತ್ತಾ ಹೋದಳು. ಗಂಡನ ಹಿಂದೆ ಹೆಂಡತಿ ಹೋಗಬೇಕು ಇದು ನೆಲದ ಕಾನೂನು. ಆದರೆ ಅದು ಬದಲಾಗಬಹುದು ಅಕ್ಷರದಿಂದ ಎನ್ನುವುದು ನನಗೆ ಗೊತ್ತೇ ಇರಲಿಲ್ಲ. ನಾನು ಬೀಡಿ ಕಟ್ಟುವಾಗ ಅಕ್ಷರ ಕಲಿಸುತ್ತಾ ಹೋದರು. ನಾನು ಅಕ್ಷರವನ್ನೂ ಕಲಿತೆ. ಅಂಕಿ ಗುರುತಿಸುವುದನ್ನೂ ಕಲಿತೆ’.

‘ಹಾಗಾಗಿ ನನಗೆ ಈಗ ದೂರದಿಂದ ಬರುವ ಬಸ್ ಯಾವುದು ಎಲ್ಲಿ ಹೋಗುತ್ತೆ ಗೊತ್ತಾಗುತ್ತೆ. ಹೊರಗಡೆ ಹೋದಾಗ ನಾವು ಇರುವುದು ಎಲ್ಲಿ, ಎಲ್ಲಿಗೆ ಹೋಗಬೇಕು ಎಂದು ತಿಳಿಯುತ್ತೆ’.

‘ಇಷ್ಟು ದಿನ ಇವರು ಮುಂದಿದ್ದರೂ ಅವರನ್ನು ನಿಲ್ಲಿಸಿ ಇವರನ್ನು ನಿಲ್ಲಿಸಿ ದಾರಿ ಎಲ್ಲಿಗೆ ಹೋಗುತ್ತೆ ಎಂದು ಕೇಳುತ್ತಾ ಹೋಗುತ್ತಿದ್ದರು. ಈಗ ನನಗೆ ಗೊತ್ತು ಕೇಳುವ ಪ್ರಶ್ನೆಯೇ ಇಲ್ಲ. ಹಾಗಾಗಿ ಇವರೇ ನನ್ನನ್ನು ಮುಂದೆ ಹೋಗಲು ಬಿಡುತ್ತಾರೆ’.

‘ನನಗೆ ಗೊತ್ತೇ ಇರಲಿಲ್ಲ ಅಕ್ಷರ ಕಲಿತರೆ ಹೆಣ್ಣು ಗಂಡಸಿಗಿಂತ ಮುಂದೆ ಇರಬಹುದು ಎಂದು ಅಕ್ಷರಕ್ಕೆ ನಮಸ್ಕಾರ’ ಎಂದಳು..

‘ದಿ ಟೆಲಿಗ್ರಾಫ್’ ನನಗೆ ತುಂಬಾ ಇಷ್ಟದ ಪೇಪರ್. ಯಾಕೆಂದರೆ ಅವರು ೮ ಕಾಲಮ್ ನಷ್ಟು ಅಗಲದ ಫೋಟೋ ಬೇಕಾದರೂ ಹಾಕುತ್ತಾರೆ. ಒಂದು ದಿನ ಅದರ ಪುಟ ಬಿಡಿಸಿದೆ. ಪೇಪರ್ ನ ಆಷ್ಟೂ ಅಗಲ ಒಂದು ಫೋಟೋ ಕಂಡಿತು

ಏನೆಂದು ನೋಡಿದರೆ ಸಮುದ್ರ ತೀರದಲ್ಲಿ ನೂರಾರು ದೋಣಿಗಳು ನಿಂತಿವೆ. ಅದರಲ್ಲಿ ಮೀನುಗಾರರು ಮಾತ್ರ ಪತ್ತೆ ಇಲ್ಲ. ಎಲ್ಲಿ ಎಂದು ನೋಡಿದರೆ ಆಗೋ ಆ ದೂರದಲ್ಲಿ ಅವರು ಮರಳ ಮೇಲೆ ಅಕ್ಷರ ತಿದ್ದುತ್ತಿದ್ದಾರೆ.

‘ದೇವರು ರುಜು ಮಾಡಿದನು..’ ಎನ್ನುವುದು ಆಕಾಶದಲ್ಲಿ ಹಾರುವ ಹಕ್ಕಿಗೆ ಮಾತ್ರ ಸೀಮಿತವೇನು?. ಇಲ್ಲಿ ಈ ಮರಳ ದಂಡೆಯಲ್ಲೂ ಮರಳನ್ನೇ ಸ್ಲೇಟ್ ಮಾಡಿಕೊಂಡ ಅಷ್ಟೂ ಮೀನುಗಾರರು ಅಕ್ಷರ ತಿದ್ದಿದ್ದರು. ಅಲ್ಲೂ.. ‘ದೇವರು ರುಜು ಮಾಡಿದನು’

ಹೀಗೆ ಒಂದು ದಿನ ಮಂಗಳೂರಿನ ಬಂದರ್ ನಲ್ಲಿ ನನ್ನಿಷ್ಟದ ಎಗ್ ಬುರ್ಜಿ ತಿಂದು ಕೈ ಒರೆಸಲು ಹೋದೆ. ಒಂದು ಕ್ಷಣ ಅಲ್ಲಿದ್ದ ಹುಡುಗಿಯ ಫೋಟೋ ನೋಡಿ ಕೈ ತಡೆಯಿತು ಕಣ್ಣಿಗೆ ಕೆಲಸ ಕೊಟ್ಟೆ. ಅರೆ! ಆ ಹುಡುಗಿ.. ಅದೇ ಹುಡುಗಿ..

ಸುಳ್ಯದ ರಬ್ಬರ್ ತೋಟದಲ್ಲಿ ಇದ್ದ ಕೂಲಿಗಾರರ ಮಗಳು. ತಾನೂ ರಬ್ಬರ್ ಹಾಲು ಇಳಿಸಲು ಮರದಿಂದ ಮರ ಸುತ್ತುತ್ತಿದ್ದವಳು. ಒಂದೇ ಏಟಿಗೆ ೧೦ ನೇ ತರಗತಿ ಪಾಸಾದವಳು. ಕರಿಕೋಟು ತೊಟ್ಟು ನಿಂತಿದ್ದಾಳೆ. ಏನೆಂದು ಮತ್ತೆ ಮತ್ತೆ ಓದಿದೆ. ಆ ಹುಡುಗಿ, ರಬ್ಬರ್ ತೋಟದ ಅದೇ ಹುಡುಗಿ ಉಡುಪಿಯ ಕಾನೂನು ಕಾಲೇಜಿನಲ್ಲಿ ಪದವಿ ಮುಗಿಸಿದ್ದಳು, ಚಿನ್ನದ ಪದಕಗಳೊಂದಿಗೆ..

ಕವಿ ಸಿದ್ದಲಿಂಗಯ್ಯ ಸಿಕ್ಕಿದ್ದರು. ಪಾಠ ಮಾಡುತ್ತಿದ್ದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಾ ಎಂದು ನೀವು ಕೇಳಿದರೆ ತಪ್ಪು. ಖಂಡಿತಾ ತಪ್ಪು.

ಅವರು ಸಿಕ್ಕಿದ್ದು ಸುಮಾರು ವರ್ಷಗಳ ಹಿಂದೆ. ಒಂದು ಕಾಲಕ್ಕೆ ಕೊಳಗೇರಿ ಎನಿಸಿಕೊಂಡಿದ್ದ ಶ್ರೀರಾಮಪುರದಲ್ಲಿ. ಅಲ್ಲಿ ಒಂದು ಪುಟ್ಟ ಕೊಠಡಿಯಲ್ಲಿ ನೂರಾರು ಜನರ ಮಧ್ಯೆ ಅವರು ಪಾಠ ಮಾಡುತ್ತಿದ್ದರು.

ಅವರಲ್ಲಿ, ಹಾಗೆಯೇ ಆ ಪ್ರದೇಶದ ಹಲವರಲ್ಲಿ ಒಂದು ಛಲವಿತ್ತು. ನನ್ನ ನೆರೆಹೊರೆಯವರಿಗೆ, ಬಂಧು ಬಾಂಧವರಿಗೆ, ಅಣ್ಣ ತಮ್ಮಂದಿರಿಗೆ, ಕೂಲಿ ಕಾರ್ಮಿಕರಿಗೆ ಅಕ್ಷರದ ಬೆಳಕು ನೀಡಬೇಕು ಎಂದು. ಮತ್ತೆ ಮತ್ತೆ ನಾನು ಅಲ್ಲಿಗೆ ಹೋಗುತ್ತಲೇ ಇದ್ದೆ. ಅದೇ ಆ ಹುಡುಗರ, ಅಪ್ಪಂದಿರ ಕಣ್ಣಲ್ಲಿ ಮಿಂಚು. ಅಕ್ಷರದ ಮಿಂಚು.

ಎಷ್ಟೋ ಜನಕ್ಕೆ ಈಗ ತಾವು ಪಡೆಯುತ್ತಿರುವ ಕೂಲಿ ಎಷ್ಟು ಎಂದು ಎಣಿಸಲು ಗೊತ್ತು. ಇನ್ನು ಕೆಲವರಿಗೆ ತಾವು ಎಷ್ಟು ಗಂಟೆ ಕೆಲಸ ಮಾಡಿದ್ದೇವೆ ಎಂದು ಲೆಕ್ಕ ಹಾಕಲು ಗೊತ್ತು. ಅಷ್ಟೇ ಅಲ್ಲ, ಅದೇ ರಾತ್ರಿ ಪಾಠಶಾಲೆಯಿಂದ ಹೊರಬಿದ್ದ ಎಷ್ಟೊಂದು ಮಕ್ಕಳು ಈಗ ಹಲವು ಚಳವಳಿಗಳ ಚುಕ್ಕಾಣಿ ಹಿಡಿದಿದ್ದಾರೆ. ಸಮಾಜದ ನೋವುಗಳಿಗೆ ಕೀಲೆಣ್ಣೆಯಾಗಿದ್ದಾರೆ. ಅಶ್ವರವೆಂದರೆ ಅಕ್ಷರವಲ್ಲ, ಅರಿವಿನ ಗೂಡು ಎಂದು ನನಗೆ ಅಲ್ಲಿಯೂ ಗೊತ್ತಾಗಿ ಹೋಯಿತು.

ಗಧಾ- ಅನ್ ಪಡ್ ಗಧಾ ಎನ್ನುವುದು ಮತ್ತೆ ನೆನಪಾಗಲು ಕಾರಣವಿದೆ. ಅಕ್ಷರ ಎನ್ನುವುದು ಅಕ್ಷರ ಮಾತ್ರವಲ್ಲ ಎಂದು ಕ್ಯಾಸ್ಟ್ರೊಗೆ ಗೊತ್ತಿತ್ತು.

ಇಡೀ ಅಮೆರಿಕಾ ಕ್ಯೂಬಾವನ್ನು ನಾಶ ಮಾಡಲು ಪದೇ ಪದೇ ಎರಗುವಾಗ ತನ್ನ ದೇಶದ ಜನರಿಗೆ ಏನಾಗುತ್ತಿದೆ ಎನ್ನುವದು ಅರ್ಥವಾಗುವುದಾದರೂ ಹೇಗೆ? ಹಾಗಾಗಿಯೇ ಅವರು ಮೊದಲು ನಿರ್ಧರಿಸಿದರು- ಕತ್ತಲ ಕೋಣೆಯಿಂದ ಮಾತ್ರವಲ್ಲ, ಅಕ್ಷರ ಇಲ್ಲದ ಅಂಧಕಾರದಿಂದಲೂ ನನ್ನ ಜನರನ್ನು ಹೊರತರಬೇಕು ಎಂದು.

ನಮ್ಮಿಂದ ಇನ್ನು ಒಂದು ಗುಲಗಂಜಿಯೂ ನಿಮ್ಮೆಡೆ ಬರುವುದಿಲ್ಲ ಎಂದು ಅಮೆರಿಕಾ ಘೋಷಿಸಿಬಿಟ್ಟಾಗ ಕ್ಯೂಬಾದಲ್ಲಿ ಪಯರು ಎದೆಮಟ್ಟಕ್ಕೆ ಬೆಳೆದು ನಿಂತಿತ್ತು. ಕಟಾವು ಮಾಡಲು ಕತ್ತಿಗಳಿಲ್ಲ, ಟ್ರಾಕ್ಟರ್ ಗಳಿಲ್ಲ, ಇದ್ದದ್ದನ್ನು ರಿಪೇರಿ ಮಾಡಿಕೊಳ್ಳಲು ಬಿಡಿ ಭಾಗಗಳೂ ಇಲ್ಲ ಎಂದು

ಆಗಲೇ ಕ್ಯೂಬಾ ಮಕ್ಕಳತ್ತ ನೋಡಿದ್ದು. ಮಕ್ಕಳು ‘ಶಾಲೆ ಈಗ ಹೊಲದ ಬಳಿಗೆ’ ಎಂದು ಹೊರಟೇಬಿಟ್ಟರು. ಕಬ್ಬು ಕಟಾವು ಮಾಡುತ್ತಲೇ ಅಂಧಕಾರವನ್ನೂ ಕತ್ತರಿಸಿ ಕತ್ತರಿಸಿ ಹಾಕಿದರು.

ಒಂದು ದಿನ ಹೀಗಾಯಿತು. ಅಮೆರಿಕಾದಿಂದ ಪೆಟ್ರೋಲ್, ಡೀಸಲ್ ನಿಂತು ಹೋಯಿತು. ಸೋವಿಯತ್ ದೇಶದಿಂದ ಬರಲಿ ಎಂದರೆ ಆ ದೇಶವೇ ಮುಗುಚಿಬಿದ್ದಿತು.

ಆಗ ರಾತ್ರೋರಾತ್ರಿ ಕ್ಯೂಬನ್ನರು ನಿರ್ಧರಿಸಿಬಿಟ್ಟರು. ನಾವು ಇನ್ನು ನಡೆದೇ ಸಿದ್ಧ. ತಮ್ಮ ಬಳಿ ಇದ್ದ ಕಾರು ಸ್ಕೂಟರ್ ಗಳೆಲ್ಲ ನಿಂತಲ್ಲೇ ನಿಲ್ಲಿಸಿದರು. ಅಮೆರಿಕಾದ ಪತ್ರಿಕೆಗಳು ಗೇಲಿ ಮಾಡಿದವು- ಆಗ ಕ್ಯೂಬನ್ನರು ಮಾತನಾಡಿದರು. ಮಕ್ಕಳಿಗೆ ಶಾಲೆಗೇ ಹೋಗಲು ವಾಹನ ಬೇಕು. ಅವರ ವಾಹನಕ್ಕೆ ಬೇಕಾದ ಪೆಟ್ರೋಲ್ ಉಳಿಸಲು ನಾವು ಕಾಲ್ನಡಿಗೆಗೆ ಶರಣಾಗಿದ್ದೇವೆ. ಅವರು ಕಲಿಯುತ್ತಿರುವುದು ಅಕ್ಷರವನ್ನು..

ಹೀಗೆ ಮಂಗಳೂರಿನಲ್ಲಿ ಇದ್ದವನಿಗೆ ಮಂಗಳೂರು ಕೇರಳ ಎಲ್ಲವೂ ಪಾಠ ಕಲಿಸುತ್ತ ಹೋದವು.

ನಾನೂ ಸಹಾ ಇದನ್ನೆಲ್ಲಾ ಕೌತುಕದ ಕಣ್ಣಿನಿಂದ ನೋಡುತ್ತಾ ಗುಲ್ಬರ್ಗಾ ತಲುಪಿಕೊಂಡೆ. ಹಾಗೆ ಒಂದು ಪುಟ್ಟ ಹಳ್ಳಿ ಹೊಕ್ಕೆ, ಅವರಾಧ ಎಂಬ ಹಳ್ಳಿ. ಒಂದು ನೋವಿನ ರಾಗ ಕೇಳಿಸಿತು. ಏನು ಎಂದು ಕಿವಿಗೊಟ್ಟೆ.

‘ಹಚ್ಚಬೇಡ ಹಚ್ಚಬೇಡವ್ವಾ / ಜೀತಕ್ಕ ನನ್ನನ್ನ / ಎಳೆಬಾಳೆ ಸುಳಿ ನಾನವ್ವಾ / ಹಚ್ಚಬೇಕು ಹಚ್ಚಬೇಕವ್ವಾ / ಸಾಲೀಗಿ ನನ್ನನ್ನ..’ ಎನ್ನುವ ಹಾಡು.

ಬೀದಿ ನಾಟಕದ ತಂಡ ಅಧೋ ರಾತ್ರಿಯಲ್ಲಿ ಶಾಲೆ ಮೆಟ್ಟಿಲು ಹತ್ತುವಂತೆ ಕರೆಯುತ್ತಿದ್ದರು. ಅಲ್ಲೇ ಅನತಿ ದೂರದಲ್ಲಿ ಮೂರು ರಾಟೆಯ ಭಾವಿ. ಅದರ ಮರೆಯಲ್ಲಿ ಒಂದು ಜೋಡಿ ಕಣ್ಣು ಆ ಹಾಡುವವರನ್ನೇ ಇಣುಕಿ ನೋಡುತ್ತಿತ್ತು.

ಇನ್ನು ಈ ಊರು ತನ್ನನ್ನು ಉತ್ತುಕೊಳ್ಳುವ ದಿನ ದೂರ ಇಲ್ಲ ಎನಿಸಿಹೋಯಿತು..

ಅಬಕಾರಿ ಇಲಾಖೆಯಿಂದ ಹಣಲೂಟಿ: ಸಚಿವ ಮಾಧುಸ್ವಾಮಿ

ತುಮಕೂರು: ಗ್ರಾಮೀಣ ಪ್ರದೇಶಗಳಲ್ಲಿ ಜನ-ಜಾನವಾರುಗಳ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಇಂಜಿನಿಯರ್‍ಗಳನ್ನು ಅಮಾನತ್ತು ಮಾಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕಡಕ್ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜರುಗಿದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಂಜಿನಿಯರುಗಳು ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಜನಸಂಖ್ಯೆ, ಕೊಳವೆ ಬಾವಿಗಳ ಸಂಖ್ಯೆ, ನೀರಿನ ಮೂಲ, ಸಮಸ್ಯೆಗಳ ಮಾಹಿತಿಯನ್ನು ಕೂಡಲೇ ಒದಗಿಸಬೇಕೆಂದರು.

ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳ ಬಗ್ಗೆ ಸಲ್ಲಿಸಿರುವ ಮಾಹಿತಿ ಸುಳ್ಳಿನಕಂತೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಡಿಪಿ ಸಭೆಗೆ ಒದಗಿಸುವ ಮಾಹಿತಿ ನಿಖರವಾಗಿರಬೇಕು. ಮಾಹಿತಿಯಲ್ಲಿ ಲೋಪವಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನು ಮನೆಗೆ ಕಳುಹಿಸುತ್ತೇನೆಂದು ಎಚ್ಚರಿಕೆ ನೀಡಿದ ಸಚಿವರು, ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಸುಮಾರು 40ಸಾವಿರ ಮನೆಗಳು ನಿರ್ಮಾಣವಾಗದೆ ಬಾಕಿ ಉಳಿದಿವೆ ಎಂದರು.

ಸರ್ಕಾರ ನೀಡುತ್ತಿರುವ ವಿವಿಧ ಪಿಂಚಣಿ ಸೌಲಭ್ಯಕ್ಕಾಗಿ ಸಲ್ಲಿಸಿರುವವರ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿರಲು ಕಾರಣವೇನೆಂದು ಮಾಹಿತಿ ಕೇಳಿದಾಗ ಉತ್ತರಿಸಿದ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಜಿಲ್ಲೆಯಲ್ಲಿ ವೃದ್ಧಾಪ್ಯ ವೇತನ, ವಿಧವಾ, ಅಂಗವಿಕಲ, ಮನಸ್ವಿನಿ, ಮತ್ತು ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ಒಟ್ಟು 35356 ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದಾರೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಂಚೆ ಕಛೇರಿ ಮೂಲಕ ಪಾವತಿಯಾಗುವ ಪಿಂಚಣಿದಾರರಿಗೆ ಮಾತ್ರ ಸಕಾಲದಲ್ಲಿ ಪಿಂಚಣಿ ಪಾವತಿಯಾಗಿಲ್ಲ. ಉಳಿದಂತೆ ನೇರವಾಗಿ ಖಾತೆಗೆ ಜಮೆಯಾಗುವವರಿಗೆ ಪಿಂಚಣಿ ಪಾವತಿಯಾಗಿದೆ ಎಂದು ಮಾಹಿತಿ ನೀಡಿದರು.

ಲಾಕ್‍ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೇರವಾಗಿ ವಿತರಣೆ ಮಾಡಬೇಕಿದ್ದ ಆಹಾರದ ಕಿಟ್‍ಗಳನ್ನು ರಾಜಕಾರಣಿಗಳಿಗೆ, ಖಾಸಗಿಯವರಿಗೆ ನೀಡಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ.

ರಾಜಕಾರಣಿಗಳು ಈ ಕಿಟ್ ಮೇಲೆ ತಮ್ಮ ಹೆಸರನ್ನು ಮುದ್ರಿಸಿ ವಿತರಿಸಿರುವುದು ಕಂಡು ಬಂದಿದೆ. ಇದರಿಂದ ಅಧಿಕಾರಿಗಳು ಸರ್ಕಾರಕ್ಕೆ ವಂಚನೆ ಮಾಡಿದ್ದಾರೆಂದು ದೂರುಗಳು ಕೇಳಿ ಬಂದಿವೆ ಎಂದು ಕಾರ್ಮಿಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೋವಿಡ್-19 ಲಾಕ್‍ಡೌನ್ ಅವಧಿಯಲ್ಲಿ ಅಬಕಾರಿ ಇಲಾಖೆ ನಡೆಸಿದಷ್ಟು ಭ್ರಷ್ಟತೆ ಯಾವ ಇಲಾಖೆಯೂ ತೋರಿಲ್ಲ. ಇಲಾಖೆ ಅಧಿಕಾರಿಗಳು ಲಿಕ್ಕರ್ ಅಂಗಡಿಗಳೊಂದಿಗೆ ಶಾಮೀಲಾಗಿ ಹಣವನ್ನು ಲೂಟಿ ಮಾಡಿದ್ದಾರೆ. ಮದ್ಯವನ್ನು ಹಣವಿಲ್ಲದವರಿಗೂ ಒಂದಲ್ಲ, ಎರಡಲ್ಲ, ನಾಲ್ಕು ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದಾರೆ. ಲಾಕ್‍ಡೌನ್ ಘೋಷಣೆಯಾಗುವ ಮುನ್ನ ಮಾರಾಟದ ಕಡೆ ದಿನ ಸ್ಟಾಕ್ ವಿವರವನ್ನು ನಿಖರವಾಗಿ ಅಧಿಕಾರಿಗಳು ನೀಡದೆ ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಕೂಡಲೇ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ನನ್ನ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜೀವರಾಜು ಸಭೆಗೆ ಮಾಹಿತಿ ನೀಡುತ್ತಾ, ಕಳೆದ ಆರ್ಥಿಕವರ್ಷದಲ್ಲಿ ಇಲಾಖೆಗೆ ಗುರಿ ನೀಡಲಾಗಿದ್ದ ರಾಜ್ಯ ಹೆದ್ದಾರಿ ರಸ್ತೆ ಹಾಗೂ ಜಿಲ್ಲಾ ಮತ್ತು ಇತರೆ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿದ್ದು, ಶೇ. 100ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.
ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಪ್ರಗತಿ ಪರಿಶೀಲಿಸಿದ ಸಚಿವರು, ಅಧಿಕಾರಿಗಳಿಂದ ಮಾಹಿತಿ ಪಡೆದರು. ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‍ಫಾರಂ ಅನ್ನು ಅವೈಜ್ಞಾನಿಕವಾಗಿ ನಿರ್ಮಿಸದೆ ಪ್ರಯಾಣಿಕರು ರೈಲು ಹತ್ತಿ-ಇಳಿಯಲು ಅನುಕೂಲವಾಗುವಂತೆ ನಿರ್ಮಿಸಬೇಕು ಎಂದು ಸಲಹೆ ನೀಡಿದರು.

ಯಾಕೋ, ಸಾವು ನನಗೆ ಚುರುಕು ಮುಟ್ಟಿಸಿದೆ…

0

✍️ಸಂತೋಷ್.ಜಿ., ಮುಖ್ಯ ಶಿಕ್ಷಕರು


ನಿಜಕ್ಕೂ ನಾ ಬದಲಾಗಿದ್ದೇನೆ… ನಾ ಎಂದೂ ಯಾರ ಸಾವಿಗೂ ಅಷ್ಟೊಂದು ಭಾವುಕನಾಗಿರಲಿಲ್ಲ. ಸಾವು ಸಹಜವೆನ್ನುವ ನಿರ್ಲಿಪ್ತತೆ ಇತ್ತೋ..?

ಸಾವು ಸಾಮಾನ್ಯವೆನ್ನುವ ಪ್ರಕೃತ ಮನಸ್ಥಿತಿಯಿತ್ತೋ..? ನಾ ಅರಿಯೇ. ನಾ ಇಂದು ತುಂಬಾ ಭಾವುಕನಾಗಿರುವೆ. ಕಂಗಳು ಹನಿಗಳಿಂದ ತುಂಬಿದ್ದರೂ ಕೆಳಗೆ ಉದುರುತ್ತಿಲ್ಲ.

ಹೃದಯವು ಲಬ್ ಡಬ್ ಎನ್ನುವ ಶಬ್ಧವನ್ನು ನಿಧಾನವಾಗಿ ಮಾಡುತ್ತಿವೆ.ಆದಕ್ಕೂ ಸಾವಿನ ಸೂತಕ ನಿಷ್ಕ್ರಿಯವಾಗಿಸಿದೆಯೋ ಏನೋ.. ! ಕೊರಳಲ್ಲಿ ಮಾತುಗಳು ಹೊರಬಾರದು ಒಳನೂಕುತ್ತಿವೆ.

ಮಾತುಗಳಿಗೂ ಹನಿಗಳಿಗೂ ಪದಗಳಿಗೂ ಆಗುತ್ತಿರುವ ಯಾತನೆಯು ದಕ್ಕುತ್ತಿಲ್ಲ. ಸಿಕ್ಕುವ ಮಾತಂತೂ ಇಲ್ಲವೇ ಇಲ್ಲ. ಸಾವು ಬ್ರಹ್ಮನ ಹಣೆಬರಹವೆಂದು ಅದು ಬದುಕಲ್ಲಿ ಬರವುದು ಸಹಜವೇ ಎಂದೂ ಮುಕ್ತ ಮನಸ್ಸಿನಲ್ಲಿದ್ದವನಿಗೆ ಯಾಕೋ ಚುರುಕು ಮುಟ್ಟಿಸಿದೆ.

ಜೀವನದ ಹಾದಿಯಲಿ ಬದಲಾಗಬೇಕಿರುವ ಮನವು ಎಂದೂ ಅಳುಕುವುದಿಲ್ಲ ಎಂದೂ ಜಗ್ಗುವುದೂ ಇಲ್ಲವಾದರೂ ಬವಣೆಯ ಛಾಯೆಯನ್ನು ಮಾತ್ರ ಕೊಟ್ಟು ಮಂಕಾಗಿಸಿದೆ.

ಹೊಟ್ಟೆಯೊಳಗೆ ಆಹಾರ ಭರ್ತಿಯಾಗಿದ್ದರೂ ಹಸಿವಿನ ಸಂಕಟ ಕಾಣುತ್ತಿದೆ. ಮೈಮುದುರಿ ಕೈಕಾಲುಗಳೆಲ್ಲಾ ಜಡಗಟ್ಟಿ ಸುಲಭಕೆ ಆಡದಂತೆ ಕಟ್ಟಿಹಾಕಿದಂತಿದೆ. ಇದೆಲ್ಲಾ ಆದದ್ದು ಚಿತ್ರನಟ ಚಿರಂಜೀವಿ ಸರ್ಜಾರ ಮರಣದ ವಿಚಾರ ಕೇಳಿ. ಚಿರೂ ಎಂದೂ ನನಗೆ ಇಷ್ಟವಾಗಿರಲಿಲ್ಲ.

ನಟನೆಯಿಂದ ನನ್ನ ಮನಸ್ಸನೆಂದೂ ಸೆಳೆದಿರಲಿಲ್ಲ. ನೋಡಲೇಬೇಕೆಂದೂ ಅವರ ಯಾವ ಚಿತ್ರವನ್ನೂ ನೋಡಿರಲಿಲ್ಲ. ಆದರೆ ಅವರ ಕೆಲವು ಚಿತ್ರಗಳನ್ನು ಸಾಮಾನ್ಯವಾಗಿ ನೋಡಿದ್ದೆ. ಎಂದೂ ಇಷ್ಟದ ನಟನಾಗಿ ಗೋಚರಿಸಿರಲಿಲ್ಲ.

ವಯಸ್ಸು 39 ಕ್ಕೆ ಸತ್ತದ್ದಕ್ಕೆ ಹೀಗಾಯಿತೆಂದರೆ ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ ಸತ್ತ ಹಲವು ಸ್ನೇಹಿತರ, ಬಂಧುಗಳ, ಸುತ್ತಮುತ್ತಲಿನವರ ಸಾವು ನನ್ನನ್ನು ಎಂದೂ ಇಷ್ಟೊಂದು ಕಾಡಿರಲಿಲ್ಲ.

ನಿಜಕ್ಕೂ ನಾ ಬದಲಾಗಿದ್ದೇನೆ.ಮತ್ತೊಬ್ಬರ ನೋವಿನಲ್ಲಿ ಪಾಲ್ಗೊಳ್ಳುವ ಪರಿಪಕ್ವದ ಮನಸ್ಸಿನ ಮೊದಲ ಮೆಟ್ಟಿಲನ್ನು ಏರಿದ್ದೇನೆ.

ಇದು ಅಹಂಕಾರವೆಂದು ನೀವು ಬಣ್ಣಿಸಬೇಡಿ. ಯಾಕೆಂದರೆ ನನ್ನ ಬದಲಾವಣೆಯನ್ನು ಮುಕ್ತವಾಗಿ ಹಂಚಿಕೊಳ್ಳುವ ಮನಸ್ಸಿನಲ್ಲಿ ನಾನೂ ಎಂಬ ಪದಬಳಸಿದ್ದೇನಷ್ಟೇ.

ಇಲ್ಲಿ ಅದು ವಿಕಾಸದ ಇರುವಿಕೆಯೇ ಹೊರತು ನನ್ನ ತೋರಿಕೆಯಂತೂ ಅಲ್ಲವೇ ಅಲ್ಲ. ನನ್ನ ಪದಗಳಲ್ಲಿ ಕಾಣದೆಯೇ ಆ ಅಹಂ ಅಡಗಿದ್ದರೆ ದಯಮಾಡಿ ಅದನ್ನು ಮನ್ನಿಸಿ ಮುನ್ನಡೆಯುತ್ತೀರೆಂದು ನಂಬುತ್ತಾ ಮುಂದುವರೆಯುತ್ತೇನೆ.
ವಾಯುಪುತ್ರ ನಿಂದ ಹಿಡಿದು ಜುಗಾರಿ ಕ್ರಾಸ್ ವರೆಗೂ ನಟಿಸಿದ್ದ ಚಿರೂನ ಕೆಲವು ಚಿತ್ರಗಳನ್ನು ನೋಡಿದ್ದೇನೆ ಅಷ್ಟೇ. ಅದರ ಪ್ರಭಾವ ನಿಜವಾಗಿಯೂ ನನಗೆ ಅಷ್ಟಾಗಿ ಆಗಿಲ್ಲ.

ಬರವಣಿಗೆಗೆ ಬರುವಷ್ಟು ಸಂಕಟವು ಯಾರ ಅಗಲುವಿಕೆಯಿಂದಲೂ ಆಗಿಲ್ಲ. ಇದು ಕರೋನಾದಿಂದ ಬಂದ ಮನಸ್ಥಿತಿಯೋ…? ಈ ಸಾಲಿನಲ್ಲಿ ಓದಿದ ಪುಸ್ತಕಗಳ ಪ್ರಭಾವದಿಂದ ಆದ ಚಿರಸ್ಥಿತಿಯೋ..? ಸುತ್ತಮುತ್ತಲ ಹಲವಾರು ಚರ್ಚೆ, ಜೀವನಗಳ ದರ್ಶನಗಳಿಂದಾದ ಪರಿಸ್ಥಿತಿಯೋ..?

ನಿಜವಾಗಿಯೂ ತಿಳಿಯುತ್ತಿಲ್ಲ. ನಾ ಮಾಡಿದ ಕೃತಿಗಳೆಂದರೆ ನನಗೆ ಹೆಮ್ಮೆ. ಅದರೆ ಇಂದು ಅದರ ಬಗೆಗಿನ ಹೊಗಳಿಕೆಗಳೂ ಬೇಡೆನಿಸುತ್ತಿವೆ. ಅವುಗಳ ತಂಟೆಗೆ ಹೋಗಲು ಮನಸ್ಸು ಬಿಡುತ್ತಿಲ್ಲ. ಇನ್ನು ಸಾಮಾನ್ಯವಾಗಿ ಓದುವ ಹವ್ಯಾಸವಿರುವ ಪುಸ್ತಕಗಳೂ ರುಚಿಸುತ್ತಿಲ್ಲ.

ನಿಜಕ್ಕೂ ಬದಲಾಗಿದೆ ಜೀವನ, ಹಾಗೆಯೇ ಬದಲಾಗಬೇಕಿದೆ ಜೀವನ. ಸ್ವಾಮಿ ವಿವೇಕಾನಂದರ ನೆನಪಾಗುತ್ತಿದೆ. ಸನ್ಯಾಸಿಗಳಾಗಿದ್ದೂ ಮತ್ತೊಬ್ಬರು ಸತ್ತಾಗ ದುಃಖ ಪಡುತ್ತಿದ್ದ ಅವರಿಗೆ ಕೆಲವರು ಹೇಳಿದ್ದುಂಟು. ಸನ್ಯಾಸಿಗಳಾಗಿ ಹೀಗೆ ಅಳಬಾರದೆಂದು,ಅಗ ಅವರೆ ಕೊಟ್ಟ ಉತ್ತರ ನನಗಿಂದು ಎಡಬಿಡದಂತೆ ಕಾಡುತ್ತಿದೆ.

ಮತ್ತೊಬ್ಬರ ದುಃಖದಲ್ಲಿ ಪಾಲ್ಗೊಳ್ಳದೆ ಚೌಕಟ್ಟಾಕಿದರೆ ಆ ಸನ್ಯಾಸತ್ವವೇ ನನಗೆ ಬೇಡ. ನಿಜವಾಗಿಯೂ ಅವರ ಅನುಯಾಯಿಗಳಾಗಿದ್ದಕ್ಕೂ ಇಂದು ಸಾರ್ಥಕವೆನಿಸುತ್ತಿದೆ.

ಹೀಗೆ ಮತ್ತೊಬ್ಬರ ದುಃಖದಲ್ಲಿ ಭಾಗಿಯಾಗುವಂತಹ ವರವನ್ನು ಕರುಣಿಸು ಎಂದು ಮನಸ್ಸು ಬೇಡುತ್ತಿದೆ. ಅವರ ನೋವಿಗೆ ಸ್ಪಂದಿಸದ ಮಾನವ ಜನ್ಮವಿದ್ದರೂ ವ್ಯರ್ಥವೆನ್ನಿಸುವಷ್ಟು ನೋವಿನ ಕಟ್ಟೆ ಒಡೆದಿದೆ. ಜನರ ಮನಸ್ಸನ್ನು ಪ್ರಶ್ನಿಸುವಂತೆ ಮಾಡುತ್ತಿದೆ.

ಜನ್ರು ಹೀಗೇಕೆ ಮತ್ತೊಬ್ಬರು ಕಷ್ಟದಲ್ಲಿದ್ದರೂ ತಾನು ಮಾತ್ರ ಸುಖವಾಗಿರಬೇಕೆಂಬ ಸ್ವಾರ್ಥದ ಕೂಪದಲ್ಲಿ ಬಿದ್ದು ತೊಳಲಾಡುತ್ತಿದ್ದಾರೆ ಎನಿಸುತ್ತಿದೆ.

ಮುಂದಾದರೂ ಮಾನವನ ಬುದ್ಧಿ ಬದಲಾಗಬಾರದೇ ಎನಿಸುತ್ತಿದೆ. ನಿಜ ಯಾವುದೇ ಆಗಲಿ ಅದು ಇರುವವರೆಗೂ ಅದರ ಮಹತ್ವ ನಮಗೆ ಅರಿವಾಗುವುದೇ ಇಲ್ಲ. ಅದನ್ನು ಕಳೆದುಕೊಂಡ ನಂತರ ಅದು ಬೇಕೆಂದರೂ ಅದು ಮತ್ತೆ ನಮಗೆ ದೊರಕುವುದೂ ಇಲ್ಲ.

ದೇವರು ಏಕೆ ಇರುವಾಗ ವ್ಯಕ್ತಿಗಳ ಪ್ರಾಮುಖ್ಯತೆಯನ್ನು ತಿಳಿಸುವುದಿಲ್ಲ. ತಿಳಿಸಿದರೆ ಅವನ ಗಂಟೇನು ಹೋಗುವುದೆಂದು ಹಿಡಿ ಹಿಡಿ ಶಾಪ ಹಾಕುತ್ತಿದೆ.

ಮನವಂತೂ ಇಂದು ಸ್ಥಿಮಿತಕ್ಕೆ ಬರುತ್ತಿಲ್ಲ. ಹಾಗೆಂದು ಭಾವಾತಿರೇಖಕ್ಕೂ ಅದು ದಾಸನಾಗಿಯೂ ಇಲ್ಲ. ನೋವಿನ ಮಡುವಿಗೆ, ಸಂಕಟದ ಪರಿಸರಕ್ಕೆ ಇಂದೇಕೊ ಮನವು ತನ್ನ ಗಡಿದಾಟಿ ಸ್ಪಂದಿಸುತಿದೆ.

ಈ ಪರಿಸ‌ರಕ್ಕೆ ಕಾರಣವಾದ ಚಿರೂ ನಿಮಗಿದೋ ನನ್ನಯ ಅಂತರಾಳದ ನಮನ. ನಿಮ್ಮ ನೋವು,ಆತ್ಮವಿಶ್ವಾಸ,ನಲಿವು, ಜೀವನ, ಹಲವರಿಗೆ ಸ್ಪೂರ್ತಿಯಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆದರೆ ನನಗೆ ನಿಮ್ಮ ಸಾವು ಬದುಕಿನ ಪಥವನ್ನೇ ಬದಲಿಸುತ್ತಿದೆಯೆಂದರೂ ಅದೂ ವಿಶಾಲದೆಡೆಗೆ ಸಾಗಿಸುತ್ತಿದೆ ಎಂದರೆ ಮರಣದಲ್ಲಿ ದೈವತ್ವವನ್ನು ತೋರಿಸಿಕೊಟ್ಟಿದ್ದೀರಿ. ಇ

ಷ್ಟು ಬೇಗ ಜೀವನಕ್ಕೆ ಇತಿಶ್ರೀ ಹಾಡಿಸಿದ ನಿಮ್ಮ ದೇಹಕ್ಕೂ ಆರೋಗ್ಯಕ್ಕೂ ನನ್ನದೊಂದು ಮುಗಿಯಲಾದ ಶಾಪವಿದೆ. ಆತ್ಮನಿಮ್ಮದಿರುವಾಗ ಹಲವರಿಗೆ ಸ್ಪೂರ್ತಿಯಾಗಿ ನೀವಿರುತ್ತೀರೆಂದು ನಂಬುತ್ತಾ…
ನಿಮಗಿದೆ ಮುಕ್ತ ಪರಿಸರದ ಶಕ್ತ ಕಾಣಿಕೆಗಳು ಬರಲಿ ಮುಂದಿನ ಜನ್ಮದಲ್ಲಿ ಸಿಗಲೀ ಎಂದು ಆಶಿಸುತ್ತಾ..
ನಿಮ್ಮ ಚಲನಚಿತ್ರಗಳ ನಟನೆಗೆ ಜೀವನದ ನಟನೆಯ ಚಲನಚಿತ್ರಗಳಿಗೆ ನಮನ…

ರಾಜ್ಯಸಭೆ ಟಿಕೆಟ್; BSY ಗೆ ಮಣೆಹಾಕದ ಹೈ ಕಮಾಂಡ್: ಕತ್ತಿಗೆ ನಿರಾಶೆ

Publicstory. in


ಬೆಂಗಳೂರು: ರಾಜ್ಯಸಭೆಗೆ ಅಚ್ಚರಿಯ ಹೆಸರುಗಳ ಘೋಷಣೆಯ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತು ನಡೆಯುವುದಿಲ್ಲ ಎಂಬ ಉತ್ತರ ರವಾನಿಸಿರುವ ಬಿಜೆಪಿ ಹೈ ಕಮಾಂಡ್, ಮತ್ತೇ ರಾಜ್ಯದಲ್ಲಿ ಪಕ್ಷದಲ್ಲಿ ಆಂತರಿಕ ಕಚ್ಚಾಟಕ್ಕೆ ಅವಕಾಶ ಮಾಡಿಕೊಟ್ಟಿದೆ.

ಕೊನೇ ಕ್ಷಣದಲ್ಲಿ ರಾಜ್ಯಸಭೆ ಚುನಾವಣೆಗೆ ಬಿಜೆಪ ಇಬ್ಬರು ಅಭ್ಯರ್ಥಿಗಳನ್ನು ಹೆಸರನ್ನು ಪ್ರಕಟಿಸಿದೆ.

ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಈರಣ್ಣ ಕಡಾಡಿ ಮತ್ತು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ವಹಿಸಿರುವ ಅಶೋಕ್ ಗಸ್ತಿ ಅವರಿಗೆ ರಾಜ್ಯ ಸಭಾ ಟಿಕೆಟ್ ಲಭ್ಯವಾಗಿದೆ.

ರಾಜ್ಯ ಬಿಜೆಪಿ ಕಳಿಸಿದ ಪಟ್ಟಿಯನ್ನು ತಿರಸ್ಕರಿಸಿರುವ ಬಿಜೆಪಿ ಹೈಕಮಾಂಡ್ ಹೊಸ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಮುರುಗೇಶ್ ನಿರಾಣಿ ಅವರ ಹೆಗಲಿಗೆ ವಹಿಸಿರುವುದರಿಂದ ಅವರು ಭಿನ್ನಮತಕ್ಕೆ ದನಿಗೂಡಿಸುವುದು ಅನುಮಾನ. ಆದರೆ ಕತ್ತಿ ಕುಟುಂಬಕ್ಕೆ ಯಾವುದೇ ಸ್ಥಾನಮಾನ ನೀಡದಿರುವುದು ಮುಂದಿನ ದಿನಗಳಲ್ಲಿ ಯಡಿಯೂರಪ್ಪಗೆ ಕಂಟಕವಾಗಲಿದೆ.


ರಾಜ್ಯ ಬಿಜೆಪಿ ಕಳಿಸಿದ ಪಟ್ಟಿಯನ್ನು ತಿರಸ್ಕರಿಸಿರುವ ಬಿಜೆಪಿ ಹೈಕಮಾಂಡ್ ಹೊಸ ಅಭ್ಯರ್ಥಿಗಳ ಹೆಸರನ್ನು ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದೆ.

ಈ ಇಬ್ಬರೂ ಕೂಡ ಎಬಿವಿಪಿಯಿಂದ ಪಕ್ಷದ ತೆಕ್ಕೆಗೆ ಬಂದವರೆಂದು ಹೇಳಲಾಗಿದೆ.

ರಾಜ್ಯಸಭೆಗೆ ಹೊಸ ಮುಖಗಳನ್ನು ಪ್ರಕಟಿಸುವ ಮೂಲಕ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬೆಂಬಲಿಗರಿಗೆ ಶಾಕ್ ಮೂಡಿಸಿದೆ.

ಹೈಕಮಾಂಡ್ ಪ್ರಕಟಿಸಿರುವ ಹೆಸರುಗಳಿಂದ ಬಿಜೆಪಿಯಲ್ಲಿ ಭಿನ್ನಮತ ಭುಗಿಲೇಳುವ ಸಾಧ್ಯತೆ ಹೆಚ್ಚಾಗಿದೆ.

ರಾಜ್ಯಸಭಾ ಅಭ್ಯರ್ಥಿ ಆಕಾಂಕ್ಷಿಗಳಾಗಿದ್ದ ಪ್ರಭಾಕರ ಕೋರೆ, ರಮೇಶ್ ಕತ್ತಿ ಅವರಿಗೆ ತೀವ್ರ ಹಿನ್ನಡೆಯಾಗಿದೆ.

ಶತಾಯಗತಾಯ ತಮ್ಮನಿಗೆ ಟಿಕೆಟ್ ಕೊಡಲೇಬೇಕು ಎಂದು ಪಟ್ಟುಹಿಡಿದು ಕೂತಿದ್ದ ಉಮೇಶ್ ಕತ್ತಿ ಮತ್ತು ಅವರ ಟೀಂ ಅಸಮಾಧಾನ ಹೊರಹಾಕುವ ಸಾಧ್ಯತೆ ಹೆಚ್ಚಾಗಿದೆ.

ಬಸನಗೌಡ ಯತ್ನಾಳ್ ಮತ್ತು ಉಮೇಶ್ ಕತ್ತಿ ಕಳೆದ ನಾಲ್ಕೈದು ದಿನಗಳ ಹಿಂದೆ ಭೋಜನ ಕೂಟದಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಿಡಿಮಿಡಿ ವ್ಯಕ್ತಪಡಿಸಿದ್ದರು. ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್ ನೀಡಬೇಕೆಂದು ಬಹಿರಂಗವಾಗಿ ಒತ್ತಾಯಿಸಿದ್ದರು.

ಆದರೆ ಈಗ ಅಚ್ಚರಿಯ ಅಭ್ಯರ್ಥಿಗಳ ಹೆಸರು ಪ್ರಕಟವಾಗಿರುವುದರಿಂದ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

‘ಚಿರಸ್ಮರಣೆ’ಯ ಪುಟಗಳಲ್ಲಿ ಅಡ್ದಾಡುತ್ತಾ..

ಜಿ ಎನ್ ಮೋಹನ್


ಪಶ್ಚಿಮ ಘಟ್ಟದ ನಿಗೂಢ ತಿರುವುಗಳಲ್ಲಿ ನನ್ನ ಕಾರು ಇಳಿಯುತ್ತಿರುವಾಗ ಇನ್ನಿಲ್ಲದ ಮಳೆ.

ಎದುರು ರಸ್ತೆ ಇದೆ ಎನ್ನುವುದೇ ಕಾಣಿಸದಂತೆ ‘ಧೋ’ ಎಂದು ಸುರಿದ ಮಳೆ. ವೈಪರ್ ಗಳು ಗಂಟೆಗಟ್ಟಲೆ ಅಲ್ಲಾಡಿ ರಸ್ತೆ ಕಾಣಿಸಲು ಯತ್ನಿಸಿದರೂ ಉಹೂಂ, ಪಶ್ಚಿಮ ಘಟದ ಆ ಮಳೆ ಒಂದಿಷ್ಟೂ ಮಿಸುಕಲಿಲ್ಲ.

ಇನ್ನೆಲ್ಲಿ ಮುಂದೆ ಹೋಗುವ ಮಾತು ಎಂದು ಕೈಚೆಲ್ಲಿ ಬಿಡಬೇಕು ಎನಿಸಿತು.

ಇಲ್ಲ, ಹಾಗೆ ನಾವು ಖಂಡಿತ ಮಾಡಲು ಸಿದ್ದವಿರಲಿಲ್ಲ. ಯಾಕೆಂದರೆ ನಮ್ಮ ಗುರಿ ಇದ್ದದ್ದು ಅಂತಿಂತ ಊರಿನತ್ತ ಅಲ್ಲ. ಕಯ್ಯೂರಿನತ್ತ..

‘ಛಲದ ಜೊತೆಗೆ ಬಲದ ಪಾಠ’ ಕಲಿಸಿದ ಊರು.

ಹಾಗಾಗಿ ನಾವೂ ಛಲ ಬಿಡಲು ಸಿದ್ದರಿರಲಿಲ್ಲ.

‘ಕಣ್ಣು ಕಾಣದ ಗಾವಿಲರು’ ಮಳೆ, ಮೋಡಗಳ ಆಟದ ಮಧ್ಯೆಯೇ ಘಟ್ಟವನ್ನು ಸೀಳುತ್ತ ಮಂಗಳೂರು ತಲುಪಿಕೊಂಡೆವು.

ಇನ್ನು ನಮ್ಮ ಆಟ ಅರಬ್ಬೀ ಸಮುದ್ರದೊಂದಿಗೆ. ಅರಬ್ಬೀ ಸಮುದ್ರದ ಎಲ್ಲಾ ಅವತಾರಗಳನ್ನು ಬಲ್ಲವನು ನಾನು. ವರ್ಷಗಟ್ಟಲೆ ಕಡಲ ನಗರಿಯಲ್ಲಿದ್ದು ಅದರ ಸಂಭ್ರಮ, ಅರ್ಭಟ, ತಾಂಡವ ನೃತ್ಯ, ಜೋಗುಳ ಎಲ್ಲವನ್ನೂ ಕಂಡಿದ್ದೇನೆ. ಟೇಪ್ ರೆಕಾರ್ಡೆರ್ ಹಿಡಿದು ಗಂಟೆಗಟ್ಟಲೆ ಸಮುದ್ರ ತೀರದಲ್ಲಿ ಅಲೆಯುತ್ತಾ ಈ ಎಲ್ಲ ಆಟಗಳನ್ನು ಬಂಧಿಸಿಟ್ಟಿದ್ದೇನೆ.

ಆದರೆ ಅಂದು ಮಾತ್ರ ಅರಬ್ಬೀ ಸಮುದ್ರಕ್ಕೆ ಆದೇನು ಆವೇಶ ಬಂದಿತ್ತೋ.. ಅಪ್ಪಳಿಸಿ ಅಪ್ಪಳಿಸಿ ಹೊಡೆಯುತ್ತಿತ್ತು. ಸಿಟ್ಟಿಗೆದ್ದ ಕಡಲನ್ನು ಕೆಣಕುವವರು ಯಾರು?

ಹಾಗಾಗಿ ಅರಬ್ಬೀ ಸಮುದ್ರವನ್ನು ಬಗಲಲ್ಲಿಟ್ಟುಕೊಂಡೇ ಕಾರು ಉದ್ದೋ ಉದ್ದ ಓಡಿತ್ತು. ‘ಗಿಳಿವಿಂಡಿ’ನ ಗೋವಿಂದ ಪೈ ಅವರ ಮಂಜೇಶ್ವರವನ್ನು ಹಾದು, ಸಾರಾ ಅಬೂಬಕರ್ ಅವರ ‘ಚಂದ್ರಗಿರಿಯ ತೀರದಲ್ಲಿ’ಯ ಚಂದ್ರಗಿರಿಯನ್ನು ಹಿಂದಿಕ್ಕಿ, ಟಿಪ್ಪು ಸುಲ್ತಾನನ ಬೇಕಲ ಕೋಟೆಯನ್ನು ಮೀರಿ ಒಂದೇ ಸಮ ಓಡುತ್ತಿದ್ದ ಕಾರು ಗಕ್ಕನೆ ನಿಂತಿದ್ದು ನೀಲೇಶ್ವರದಲ್ಲಿ.

ನೀಲೇಶ್ವರ- ನಾವು ನಿರಂಜನರ ಕಾದಂಬರಿಯ ಪುಟಗಳಿಗೆ ಮೊದಲ ಹೆಜ್ಜೆ ಇಡುತ್ತಿದ್ದೆವು.

‘ನೀವು ಚೆರ್ವತ್ತೂರಿಗೆ ಬನ್ನಿ, ನಾನು ಅಲ್ಲೇ ರಸ್ತೆ ಬದಿಯಲ್ಲಿ ಕಾಯುತ್ತಿರುತ್ತೇನೆ’ ಎಂದಿದ್ದ ಮೋಹನ್ ಕುಮಾರ್ ಅವರ ಕೈಕುಲುಕಿದಾಗ ಕತ್ತಲು, ಬೆಳಕಿಗೆ ದಾರಿ ಮಾಡಿಕೊಡಲೋ ಬೇಡವೋ ಎನ್ನುವ ಸಂದಿಗ್ಧದಲ್ಲಿ ಬಿದ್ದಿತ್ತು.

ಕಳಲೆ ಪಾರ್ಥಸಾರಥಿ ಹಾಗೂ ಡಾ ಶ್ರೀನಿವಾಸ ಕಕ್ಕಿಲ್ಲಾಯರಿಂದಾಗಿ ಪರಿಚಿತವಾದ ಮೋಹನ್ ಕುಮಾರ್ ‘ಇಗೋ ಇಲ್ಲಿ ಬಲಕ್ಕೆ ತಿರುಗಿ’ ಎಂದರು.

ನಾವು ಬಲಕ್ಕೆ ಹೊರಳಿಕೊಂಡದ್ದೇ ಒಂದು ಹಸಿರಿನ ಲೋಕ ಬಿಚ್ಚಿಕೊಳ್ಳುತ್ತಾ ಹೋಯಿತು. ಎತ್ತ ನೋಡಿದರೂ ಹಸಿರೇ. ಅಡಿಕೆ, ತೆಂಗು ಅದಲ್ಲವಾದಲ್ಲಿ ಮೆಣಸು.

ಆಳದಲ್ಲಿ ಇಳಿದು ಎತ್ತರದಲ್ಲಿ ಏದುಸಿರು ಬಿಡುತ್ತಾ ಹೋಗುತ್ತಾ ಇದ್ದಾಗ ಕಣ್ಣಿಗೆ ಕಂಡಿದ್ದು ‘ಕಯ್ಯೂರು- ೦’ ಎಂಬ ಮೈಲುಗಲ್ಲು. ನಾನು ದಶಕಗಳ ನೋಡಲು ಹಂಬಲಿಸಿದ ಒಂದು ಕನಸಿನ ಮೇಲೆ ಕಾಲಿಟ್ಟಿದ್ದೆ.

ಕುಳಕುಂದದ ಶಿವರಾಯರು ಕಯ್ಯೂರಿನ ಇದೇ ಹಸಿರು, ಇದೇ ಹೊಳೆ, ಇದೇ ತೇಜಸ್ವಿನಿ ನದಿಯಲ್ಲಿ ಅಡ್ಡಾಡುತ್ತಾ ಇದೇ ನೀಲೇಶ್ವರ ಇದೇ ಚೆರ್ವತ್ತೂರನ್ನು ಮಾತನಾಡಿಸುತ್ತಾ ಇದ್ದಾಗ ನಾವು ಇನ್ನೂ ಹುಟ್ಟಿಯೇ ಇರಲಿಲ್ಲ.

ಅದು ಬಿಡಿ ಕುಳಕುಂದ ಶಿವರಾಯ ಎನ್ನುವ ಹೆಸರೇ ಬದಲಾಗಿ ಅದು ನಿರಂಜನ ಎನ್ನುವ ಹೆಸರು ತಳೆದು ಕಯ್ಯೂರಿನ ವೀರಗಾಥೆಗೆ ಕೈ ಹಾಕಿದಾಗಲೂ ಅದು ಎಷ್ಟೋ ತಲೆಮಾರುಗಳ ಮನಸ್ಸನ್ನು ತಿದ್ದುತ್ತದೆ ಎಂದು ನಿರಂಜನರಿಗೂ ಗೊತ್ತಿರಲಿಲ್ಲ.

ಅಣ್ಣನ ಪುಸ್ತಕದ ಕಪಾಟಿನಿಂದ ಕೈಗೆ ಇಳಿಸಿಕೊಂಡ ‘ಚಿರಸ್ಮರಣೆ’ ನನ್ನೊಳಗೆ ಅದೇ ಕಡಲ ಅಬ್ಬರವನ್ನು ಸೃಷ್ಟಿಸಿ ಹಾಕಿತ್ತು.

ಎಲ್ಲಿಯೋ ಇದ್ದ ಕಯ್ಯೂರು ‘ಚಿರಸ್ಮರಣೆ’ಯ ಪುಟಗಳಿಂದ ಜಾರಿ ನನ್ನ ಎದೆಯಾಳಕ್ಕೆ ಇಳಿದಿತ್ತು.

ಆ ಅಪ್ಪು, ಆ ಚಿರಕುಂಡ, ಆ ಕುಂಯಿಂಬು, ಆ ಅಬೂಬಕರ್, ಆ ಮಾಸ್ತರ್, ಆ ಜಾನಕಿ, ಆ ಕಣ್ಣ, ಆ ಪಂಡಿತ.. ಎಲ್ಲರೂ ನನ್ನೊಳಗೆ ಸದ್ದಿಲ್ಲದಂತೆ ನಡೆದು ಬಂದಿದ್ದವು.

ಒಂದು ಪುಟ್ಟ ಊರು, ತೇಜಸ್ವಿನಿ ನದಿಯ ದಡದಲ್ಲಿ ಹಸಿರು ಮುಕ್ಕಳಿಸುತ್ತಾ ಇದ್ದ ಊರು ಒಂದೇ ಏಟಿಗೆ ‘ಬರುತಿಹೆವು ನಾವು ಬರುತಿಹೆವು, ಯುಗ ಯುಗಗಳಿಂದ ನೀವು ತುಳಿದ ಜನಗಳ ಕೊರಳ ದನಿಗಳು ನಾವು, ಅಸಮಾನತೆಯನು ಸುಟ್ಟು ಬಿಡಲು ಭುಗಿಲೆದ್ದ ಬೆಂಕಿಯ ಜ್ವಾಲೆಗಳು, ಗ್ರಾಮ ಗ್ರಾಮದಲಿ ನೀವು ಸುಟ್ಟ ಬಡಜನರ ಬೂದಿಯಿಂದೆದ್ದವರು..’ ಎನ್ನುವಂತೆ ಸಿಡಿದೆದ್ದಿತ್ತು.

ರೈತರ ಉಸಿರುಗಟ್ಟಿಸಿದ್ದ, ಬದುಕಲಾಗದಂತೆ ಮಾಡಿದ್ದ ಊರಲ್ಲಿ ಇಡೀ ಊರಿಗೆ ಊರೇ ಸಿಡಿದು ನಿಂತಿತ್ತು. ಅದು ಜಮೀನ್ದಾರರ ವಿರುದ್ಧದ ಹೋರಾಟವೂ ಹೌದು, ಆಳರಸರ ವಿರುದ್ಧದ ಹೋರಾಟವೂ ಹೌದು, ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟವೂ ಹೌದು.

ಅಕ್ಷರ ಗೊತ್ತಿಲ್ಲದ. ಮೈ ತುಂಬಾ ಮುಚ್ಚಿ ಗೊತ್ತ್ತಿಲ್ಲದ, ‘ತಂಪುರಾನೆ..’ ಎಂದು ಮಾತ್ರ ಒಡೆಯನನ್ನು ಕರೆದು ಗೊತಿದ್ದ, ತಮ್ಮನ್ನು ‘ಅಡಿಯನ್’ ಎಂದು ಕರೆದುಕೊಳ್ಳುತ್ತಿದ್ದ, ಒಂದು ಬುಡ್ಡಿ ದೀಪ ಹಚ್ಚಲು ಹನಿ ಸೀಮೆಎಣ್ಣೆಗೆ ಒದ್ದಾಡುತ್ತಿದ್ದ, ಮನೆಯ ಮುಂದಿನ ಭಾವಿಯಿಂದ ನೀರು ಸೇದಲೂ ಆಗದಂತೆ ಬಹಿಷ್ಕಾರಕ್ಕೆ ಒಳಗಾಗಿದ್ದ ಊರು ತನ್ನ ಆಕ್ರೋಶವನ್ನೆಲ್ಲಾ ಮುಷ್ಟಿಗಿಳಿಸಿಕೊಂಡು ಎದ್ದು ನಿಂತಿತ್ತು.

ಅಕ್ಷರ ಗೊತ್ತಿಲ್ಲದ ಕಯ್ಯೂರಿನ ಜನತೆ ಬ್ರಿಟನ್ನಿನ ವರೆಗೂ ಸುದ್ದಿಯಾಗಿದ್ದರು.

ಒಬ್ಬ ಪೋಲೀಸ್ ನೀರಿಗೆ ಹಾರಿ ಸತ್ತದ್ದೇ ನೆಪವಾಗಿ ಪೋಲೀಸರ ದಂಡು ‘ಜನ್ಮಿ’ ಎನಿಸಿಕೊಂಡ ಕ್ರೂರ ಜಮೀನ್ದಾರರ ಜೊತೆ ಕೈಜೋಡಿಸಿ ಬೆಳಕಿಗಾಗಿ ಹಂಬಲಿಸಿದವರನ್ನು ಕಂಡ ಕಂಡಲ್ಲಿ ಹೊಸಕಿ ಹಾಕಲು ಆರಂಭಿಸಿದರು. ನಾಲ್ವರು ರೈತ ಹೋರಾಟಗಾರರು ಗಲ್ಲಿಗೇರಲೇಬೇಕಾಯಿತು.

ಕಯ್ಯೂರು ಎಂಬ ಬೆಂಕಿಯುಂಡೆ ಕಾಸರಗೋಡಿನ ಹಳ್ಳಿಯಾಗಿ ಮಾತ್ರ ಉಳಿಯಲಿಲ್ಲ. ಇಡೀ ದೇಶದಲ್ಲಿ ಸುದ್ದಿಯಾಯಿತು. ಬ್ರಿಟನ್ ನಲ್ಲಿಯೂ ಸಂಘಟನೆಗಳು ಕಯ್ಯೂರು ವೀರರ ಪರವಾಗಿ ನಿಂತರು.

ಅಂತಹ ಕಯ್ಯೂರಿನ ನೆಲದಲ್ಲಿ ನಾನು ನಿಂತಿದ್ದೆ.

‘ಚಿರಸ್ಮರಣೆ’ಯ ಪುಟಗಳನ್ನು ತಿರುವಿ ಹಾಕಿದ ದಿನದಿಂದಲೂ ಕಯ್ಯೂರು ನನ್ನೊಳಗೆ ಜುಳು ಜುಳು ಹರಿವ ನದಿಯಾಗಿಯೇ ಇತ್ತು.

‘ಇದು ಪೋಲೀಸ್ ಸುಬ್ರಾಯ ಹೊಳೆಗೆ ಹಾರಿದ ಜಾಗ, ಇದು ತೇಜಸ್ವಿನಿ ನದಿ, ಇದು ಚೂರಿಕ್ಕಾಡನ್ ನಾಯರ್ ಅವರ ಮನೆ, ಗಲ್ಲು ಶಿಕ್ಷೆಯಿಂದ ಬಾಲಾಪರಾಧಿ ಎನ್ನುವ ಕಾರಣಕ್ಕೆ ಉಳಿದ ಜೀವ ಅದು, ಇಗೋ ಇದು ಆ ಮೆರವಣಿಗೆ ನಡೆದ ಜಾಗ ಎನ್ನುತ್ತಾ ಮೋಹನ್ ಕುಮಾರ್ ನಮ್ಮನ್ನು ಕೈ ಹಿಡಿದು ನಡೆಸುತ್ತಲೇ ಇದ್ದರು.

ನಾವು ಮತ್ತೆ ಚಿರಸ್ಮರಣೆಯ ಪುಟದೊಳಗೆ ನಡೆಯುತ್ತಿದ್ದೆವು.

ಕುಳಕುಂದದಲ್ಲಿ ಹುಟ್ಟಿ ಕಾಪು, ಸುಳ್ಯದಲ್ಲಿ ಓದು ಮುಗಿಸಿದ ನಿರಂಜನ ಹೈಸ್ಕೂಲ್ ಶಿಕ್ಷಣಕ್ಕಾಗಿ ಹೆಜ್ಜೆ ಹಾಕಿದ್ದು ನೀಲೇಶ್ವರದ ಕಡೆಗೆ.

ಮಗ್ಗುಲಲ್ಲೇ ಕಯ್ಯೂರು. ಒಂದು ನೋವು ಮಿಸುಕಾಡುತ್ತಲೇ ಇದ್ದ ರೀತಿ ನಿರಂಜನರಿಗೆ ಕಾಣಿಸುತ್ತಿತ್ತು.

ಕಯ್ಯೂರು ಸ್ಫೋಟಿಸಿಯೇ ಬಿಟ್ಟಿತು. ಪರೀಕ್ಷೆ ಬರೆದು ನಿರಂಜನರು ತಲುಪಿಕೊಂಡಿದ್ದು ಮಂಗಳೂರನ್ನು. ‘ರಾಷ್ಟ್ರಬಂಧು’ ಸೇರಿದ ನಿರಂಜನರಿಗೆ ಮತ್ತೆ ಕಯ್ಯೂರು ಎದುರಾಯಿತು.

ಕಯ್ಯೂರಿನ ೬೦ ಜನ ರೈತ ಹೋರಾಟಗಾರರನ್ನು ವಿಚಾರಣೆಗೆ ಕರೆ ತಂದಿದ್ದು ಮಂಗಳೂರಿನ ನ್ಯಾಯಾಲಯಕ್ಕೆ, ಇರಿಸಿದ್ದು ಮಂಗಳೂರಿನ ಜೈಲಿನಲ್ಲಿ. ಹಾಗಾಗಿ ಜೈಲಿನಲ್ಲಿಯೂ, ಕೋರ್ಟ್ ನ ಆವರಣದಲ್ಲಿ ನಡೆದ ಎಲ್ಲಕ್ಕೂ ನಿರಂಜನ ಸಾಕ್ಷಿಯಾದರು.

‘ನಾನು ಮಂಗಳೂರಿಗೆ ಹೊರಟಾಗ ಶಾಲೆಯ ಪ್ರಮಾಣ ಪತ್ರವನ್ನು ಖಂಡಿತಾ ಒಯ್ಯಲಿಲ್ಲ. ಆದರೆ ಕಯ್ಯೂರಿನ ಕಿಡಿಯೊಂದನ್ನು ಹೊತ್ತೊಯ್ಯಲು ಮರೆಯಲಿಲ್ಲ’ ಎನ್ನುತ್ತಾರೆ ನಿರಂಜನ.

ಕಯ್ಯೂರಿನ ಘಟನೆ ಸಂಭವಿಸಿದ ೧೩ ವರ್ಷಗಳ ನಂತರ ‘ಚಿರಸ್ಮರಣೆ’ ಕಾದಂಬರಿ ಎದ್ದು ಬಂತು.

‘ಚಿರಸ್ಮರಣೆ ಒಂದು ಕಾದಂಬರಿ, ಚರಿತ್ರೆಯಲ್ಲ. ಚಿರಸ್ಮರಣೆಯ ಅನೇಕ ಪಾತ್ರಗಳು ನಿಜ ಜೀವನದಿಂದಲೇ ಕಾದಂಬರಿಯ ಪುಟಗಳಿಗೆ ನಡೆದು ಬಂದಿವೆ. ಆದರೆ ಇಲ್ಲಿನ ಪಾತ್ರ ನಿರ್ವಹಣೆಗಾಗಿ ರಂಗಸಜ್ಜಿಕೆಯ ವೇಷ ಭೂಷಣಗಳನ್ನು ಅವು ನಿರಾಕರಿಸಿಲ್ಲ. ಇನ್ನು ಕೆಲ ಪಾತ್ರಗಳನ್ನೂ ನಾನು ಕಂಡದ್ದು ನನ್ನ ಕಲ್ಪನೆಯ ಮೂಸೆಯಲ್ಲಿ’ ಎನ್ನುತ್ತಾರೆ.

ಚಿರಸ್ಮರಣೆ ನಂತರ ಮಲೆಯಾಳಕ್ಕೆ ಪ್ರವೇಶಿಸಿತು. ತುಳು, ತಮಿಳು, ತೆಲುಗು, ಮರಾಟಿ, ಬಂಗಾಳಿ, ಇಂಗ್ಲಿಶ್ ಹೀಗೆ ನಡೆಯುತ್ತಾ ಹೊಯಿತು. ‘ಮೀನಮಾಸತ್ತಿಲೆ ಸೂರ್ಯನ್’ ಹೆಸರಲ್ಲಿ ಚಲನಚಿತ್ರವಾಯಿತು. ಕಾಸರಗೋಡು ಚಿನ್ನ ದೂರದರ್ಶನ ಧಾರಾವಾಹಿಯಾಗಿಸಿದರು. ಬಿ ಸುರೇಶ ಇದನ್ನು ನಾಟಕವಾಗಿ ರಂಗಕ್ಕೇರಿಸಿದರು.

ನನ್ನೆದೆಯೊಳಗೆ ಮಾತ್ರ ಎಂದುಕೊಂಡಿದ್ದ ಒಂದು ಮೊಳಕೆ ಅನೇಕರ ಎದೆಗಳಲ್ಲಿ ಸದ್ದು ಮಾಡಿತ್ತು.

ಅಷ್ಟರಲ್ಲೇ ನನ್ನ ಫೇಸ್ ಬುಕ್ ನಲ್ಲಿ ಒಂದು ಮೆಸೇಜ್ ಬಂದು ಬಿತ್ತು. ಹಿರಿಯರಾದ ನಾ ಡಿಸೋಜ ಅವರು ‘ಒಳ್ಳೆಯ ಕೆಲಸ ಮಾಡಿದಿರಿ. ಅದು ನನ್ನ ಮೆಚ್ಚಿನ ಕಾದಂಬರಿ’ ಎಂದು ಬರೆದಿದ್ದರು.

ಮತ್ತೆ ಸದ್ದು. ಮೇಲ್ ತೆರೆದರೆ ಈವೆರೆಗೂ ನಾನು ಭೇಟಿಯೇ ಮಾಡಿಲ್ಲದ ವೇಣುಗೋಪಾಲ ಶೆಟ್ಟಿ ಅವರ ಪತ್ರ.

‘ಚಿರಸ್ಮರಣೆ ನನ್ನ ಬದುಕನ್ನು ಬದಲಿಸಿದ ಕಾದಂಬರಿ. ಆ ಕಾದಂಬರಿ ಓದಿ ಮನೆಯಲ್ಲಿ ಹೇಳದೆ ಕಯ್ಯೂರಿಗೆ ಹೋಗಿ ಬಂದೆ. ಹೊಸ ಬೆಳಕು ಕಾಣಿಸಿತು’ ಎಂದು ಬರೆದಿದ್ದರು.

ನಾನೂ ಆ ಹೊಸ ಬೆಳಕನ್ನು ಕಟ್ಟಿಕೊಂಡು ಹಿಂದಿರುಗಲು ಸಜ್ಜಾದೆ.