Tuesday, May 5, 2026
Google search engine
Home Blog Page 210

ಬಾಡಿನ ಆಸೆಗೆ ಶವವನ್ನೇ ಮರೆತರು!

ಕುಣಿಗಲ್: ಇಲ್ಲಿ ರೈಲ್ವೆ ಹಳಿಗಳ ಮೇಲೆ ಹೋಗುತ್ತಿದ್ದ ಕುರಿಗಳನ್ನು ಪಾರು ಮಾಡಲು ಹೋದ ವ್ಯಕ್ತಿಯ ಮೇಲೆ
ಗೂಡ್ಸ್ ರೈಲು ಹರಿದು, ಆತನ ಸಮೇತ 13 ಕುರಿಗಳು ಸತ್ತಿವೆ.
ಪ್ರಕರಣ ದಾಖಲಾಗುವ ಭೀತಿಯಿಂದ ಬೆದರಿದವರು , ಕುರಿ ಕಾಯುತ್ತಿದ್ದವನ ಶವವನ್ನು
ಕ್ಷಣಾರ್ದದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಮೃತಪಟ್ಟವನು ನೇಪಾಳ ಮೂಲದ ಧನ್ ವೀರ್ (50) ಎಂದು ಹೇಳಲಾಗುತ್ತಿದೆ.ಕಳೆದ ಐದುವರ್ಷದಿಂದ ತನ್ನ
ಸಹೋದರನ ಮನೆಯಲ್ಲಿದುಕೊಂಡು ಕುರಿಗಳನ್ನು ಮೇಯಿಸುತ್ತಿದ್ದನು.
ಆಶ್ರಯ ಕಾಲೊನಿಯ ಬಳಿಯ ರೈಲ್ವೆ ಹಳಿಗಳ
ಮೇಲೆ ಕುರಿಗಳು ಹೋಗುತ್ತಿದ್ದ ಸಮಯದಲ್ಲಿ ಗೂಡ್ಸ್ ಗಾಡಿ ಬಂದಿದ್ದು, ಕುರಿಗಳನ್ನು
ಪಾರು ಮಾಡಲು ಹೋದ ಧನವೀರ್ ಮತ್ತು ಕುರಿಗಳು ಗಾಲಿಗಳಿಗೆ ಸಿಕ್ಕಿ ತುಂಡು ತುಂಡಾಗಿ
ಹಳಿಗಳ ಮೇಲೆ ಬಿದ್ದು ಮೃತಪಟ್ಟರು.

ವಿಷಯ ತಿಳಿಯುತ್ತಿದ್ದಂತೆ ಬಂದ ಕೆಲ ಗ್ರಾಮಸ್ಥರು ಬಾಡಿನ ಆಸೆಗೆ ಸತ್ತು ಬಿದ್ದಿದ್ದ
ಕುರಿಗಳ ಬಗ್ಗೆ ಗಮನ ಹರಿಸಿದರೇ ಹೊರತು ಮೃತಪಟ್ಟಿದ್ದ ಧನವೀರ್ ಬಗ್ಗೆ ಗಮನ
ಹರಿಸಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ನೋವು ತೋಂಡಿಕೊಂಡರು.

ರೈಲ್ವೆ ಹಳಿ ನಿಷೇದಿತ ಪ್ರದೇಶವಾಗಿದ್ದು, ಕುರಿ ಮೇಯಿಸಲು ಬಂದಿದ್ದು ಅಪರಾಧ.
,ಇಲಾಖೆಯವರು ನಿಷೇದಿತ ಪ್ರದೇಶಕ್ಕೆ ಪ್ರವೇಶ ಮಾಡಿದ ಕಾರಣ ಮೃತನ ಮೇಲೆ ಮತ್ತು ಸಂಬಂದಿಕರ ಮೇಲೆ ಪ್ರಕರಣ ದಾಖಲಿಸಿವುದಾಗಿ ತಿಳಿಸಿದ ಕಾರಣ ಬೆದರಿದ ಮೃತನ ಸಂಬಂಧಿಗಳು
ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಅಂತ್ಯಕ್ರಿಯೆ ನಡೆಸಿದರು ಎಂದು
ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ .

ಕಳ್ಳನಕೆರೆಗೆ ಬಂದೇ ಬಿಟ್ಟವು ಗಿಡಗಳು…

ತುರುವೇಕೆರೆ: ವಿಶ್ವ ಪರಿಸರದ ದಿನಾಚರಣೆಯ ಪ್ರಯುಕ್ತ ತಾಲ್ಲೂಕಿನ ಹಲವೆಡೆ ಗಿಡಗಳನ್ನು ಶುಕ್ರವಾರ ನೆಡಲಾಯಿತು.

ಅರಣ್ಯ ಇಲಾಖೆಗಳ ವತಿಯಿಂದ ಕಳ್ಳನಕೆರೆ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನೂರಾರು ವಿವಿಧ ಬಗೆಯ ಸಸಿಗಳನ್ನು ಶಾಸಕ ಮಸಾಲ ಜಯರಾಂ ನೆಟ್ಟು ನೀರುಣಿಸಿದರು. ಗ್ರಾಮಸ್ಥರಿಗೆ ಹಾಗು ಶಾಲಾ ಶಿಕ್ಷಕರುಗಳಿಗೆ ಸಸಿಗಳನ್ನು ಚನ್ನಾಗಿ ಬೆಳೆಸಬೇಕೆಂದು ಮನವಿ ಮಾಡಿದರು.

ತಹಶೀಲ್ದಾರ್ ಆರ್.ನಯಿಂಉನ್ನೀಸಾ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಆವರಣದಲ್ಲಿ ಗಿಡಗಳನ್ನು ನೆಟ್ಟು ಸಿಬ್ಬಂದಿಗಳಿಗೆ ಗಿಡಗಳನ್ನು ಬೆಳಸಿ ಪರಿಸರ ಉಳಿಸೋಣವೆಂದು ಕಿವಿ ಮಾತು ಹೇಳಿದರು.

ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಕೋರ್ಟ್ ಆವರಣದಲ್ಲಿ ನ್ಯಾಯಾದೀಶರ ಸಮ್ಮುಖದಲ್ಲಿ ವೈವಿಧ್ಯ ಬಗೆಯ ಗಿಡಗಳನ್ನು ನೆಡಲಾಯಿತು. ಹಾಗು ತಾಲ್ಲೂಕಿನ ಎಲ್ಲ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ಇನ್ನು ಕೆಲವೆಡೆ ವಿವಿಧ ಸಂಘ ಸಂಸ್ಥೆಗಳಿಂದ ಸಸಿ ನೆಟ್ಟಿ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶ ಬಾಲಸುಬ್ರಹ್ಮಣ್ಯಂ, ಸಿವಿಲ್ ನ್ಯಾಯಾಧೀಶ ರಮೇಶ್ಬಾಬು, ಅರಣ್ಯ ವಲಯಾಧಿಕಾರಿ ನಿಸ್ಸಾರ್ ಅಹ್ಮದ್ ಚುನಾವಣಾ ಇಲಾಖೆಯ ಕಾಂತರಾಜ್, ಕಂದಾಯಾಧಿಕಾರಿ ಶಿವಕುಮಾರ್, ಮತ್ತು ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಮಧುಗಿರಿಗೂ ಬಂತು ಕೊರೊನಾ

Publicstory.in


Madhugiri: ಏಕಶಿಲಾ ಬೆಟ್ಟದ ನಾಡು ಮಧುಗಿರಿಗೂ ಕೊರೊನಾ ವಕ್ಕರಿಸಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 33 ಕ್ಕೇರಿದೆ.

ಮುಂಬೈನಿಂದ ಬಂದಿದ್ದ ಈ ಯುವಕನ್ನು ಕ್ವಾರಂಟೈನ್ ಮಾಡಲಾಗಿತ್ತು.

ಇಲ್ಲಿನ ತಾಂಡವೊಂದರ ನಿವಾಸಿಯಾಗಿರುವ ಈತ ಮುಂಬೈನಲ್ಲಿ ಹೋಟೆಲ್ ಕೆಲಸದಲ್ಲಿದ್ದ ಎನ್ನಲಾಗಿದೆ.

ಏಳು ಜನ ಗುಣಮುಖ


ಇನ್ನೊಂದೆಡೆ, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು ಕೊರೊನಾ ರೋಗಿಗಳು ಗುಣಮುಖರಾಗಿ ಬಿಡುಗಡೆಗೊಂಡರು.

ಇಲಾಖೆಗಳ ವಿಲೀನಕ್ಕೆ ಚಿಂತನೆ:ಕಾರಜೋಳ

ಪಾವಗಡ: ಸಣ್ಣಪುಟ್ಟ ಇಲಾಖೆಗಳನ್ನು ವಿಲೀನಗೊಳಿಸಬೇಕೆಂದು ಚಿಂತಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಕಾರಜೋಳ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದರು.

ಕೆಲವು ಇಲಾಖೆಗಳಲ್ಲಿ ನೌಕರರು ಇದ್ದರೆ ಕೆಲಸವಿಲ್ಲ, ಕೆಲಸವಿರುವ ಕಡೆ ನೌಕರರಿಲ್ಲ ಆದರೂ ಸರ್ಕಾರ ಸುಮಾರು 85 ಸಾವಿರ ಕೋಟಿ ರೂ.ಗಳನ್ನು ವೇತನ/ವ್ಯವಸ್ಥೆ ನಿರ್ವಹಣೆಗೆ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಸೋಷಿಯಲ್ ಸೆಕ್ಯುರಿಟಿಯಲ್ಲಿ ಅಷ್ಟೆ ಹಣ ನಾವು ನೀಡುತ್ತಿದ್ದೇವೆ. ತಾಲೂಕು ಮಟ್ಟದಲ್ಲಿರುವ ಸಣ್ಣ-ಪುಟ್ಟ ಇಲಾಖೆಗಳನ್ನು ಜಿಲ್ಲಾ/ರಾಜ್ಯ ಮಟ್ಟದಲ್ಲಿ ಮಾತ್ರ ತರಬೇಕೆ ಸಣ್ಣಪುಟ್ಟ 2-3 ಇಲಾಖೆಗಳಿಗೆ ವಿಲೀನಗೊಳಿಸಿ ಒಬ್ಬ ಅಧಿಕಾರಿಯನ್ನು ನೇಮಕ ಮಾಡಲು ಚಿಂತಿಸಬೇಕೆ ಎಂಬುದರ ಬಗ್ಗೆ ಆಲೋಚಿಸಲಾಗುತ್ತಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಆಡಳಿತಾತ್ಮಕ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಕಾಲಕಾಲಕ್ಕೆ ಸಮಿತಿಗಳನ್ನು ನೇಮಕ ಮಾಡಿ, ಅವುಗಳ ಶಿಫಾರಸ್ಸಿನಂತೆ ಕೆಲವೊಂದು ಇದು 3ನೇ ಸಮಿತಿ, ನಾವು 3ನೇ ಸಮಿತಿ, ನಾವು ಯಾವ ಇಲಾಖೆಯಲ್ಲಿ ಕಡಿಮೆ ಮಾಡಬೇಕು. ಎಲ್ಲಿ ಹೆಚ್ಚಿಗೆ ಮಾಡಬೇಕು, ಬೇರೆಕಡೆಗೆ ಸ್ಥಳಾಂತರ ಮಾಡಬೇಕೇ ಎಂಬುದರ ಬಗ್ಗೆ ಸಮಿತಿ ಶಿಫಾರಸ್ಸು ಮಾಡಲಾಗಿದೆ. ಇಲಾಖೆಗಳ ವಿಲೀನವು ಸಚಿವ ಸಂಪುಟದ ಪಾತ್ರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಸಚಿವರು ತಿಳಿಸಿದರು.

ಸಂಸದರಾದ ನಾರಾಯಣಸ್ವಾಮಿ, ವಿಧಾನ ಪರಿಷತ್ ಶಾಸಕ ಡಾ. ವೈ.ಎ ನಾರಾಯಣಸ್ವಾಮಿ, ಮಾಜಿ ಸಚಿವ ಹಾಗೂ ಶಾಸಕ ವೆಂಕಟರಮಣಪ್ಪ, ಮಾಜಿ ಶಾಸಕ ಸೋಮ ನಾಯಕ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಹೆಚ್.ವಿ ವೆಂಕಟೇಶ್, ಚನ್ನಮಲ್ಲಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷ ಸೊಗಡು ವೆಂಕಟೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನವಂಶಿಕೃಷ್ಣ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಹೆಚ್.ಎಸ್ ಪ್ರೇಮನಾಥ್ ಸೇರಿದಂತೆ ಮತ್ತಿತರು ಹಾಜರಿದ್ದರು.

ಪರಿಸರ ಎಂದಾ‌ಗ ಏನ್ನೆಲ್ಲ ನೆನಪಿಗೆ ಬರುತ್ತದೆ…

0

ಅಕ್ಷತಾ ಕೆ. ಉಪನ್ಯಾಸಕಿ


ಆರೋಗ್ಯವಂತ ಸ್ವಾಸ್ಥ್ಯ ಸಮಾಜವು ಪರಿಸರದ ಒಂದು ಭಾಗವೇ.

ನಿರ್ಮಲ ಪರಿಸರದಿಂದ ನಮ್ಮ ಬದುಕು ಉಜ್ವಲ .
‘ಪರಿಸರ ‘ಎಂದಾಗ ನಮ್ಮ ಸುತ್ತಮುತ್ತಲಿನ ವಾತಾವರಣ ಚರಾಚರಗಳು, ನಿಸರ್ಗ ಒಳಗೊಳ್ಳುವ ಎಲ್ಲವು ಸೇರುತ್ತವೆ .
ಅದು ಸುಂದರವಾದಾಗ ಶುದ್ದವಾಗಿದ್ದಗ,ಸಂಮೃದ್ದ ಮರ ಗಿಡಗಳು ಮಳೆ ಬೆಳೆಗಳಿಂದ ನಮ್ಮ ಬದುಕೂ ಸೊಂಪಾಗಿರುತ್ತದೆ.

ಪರಿಸರದ ಜೊತೆ ಮಾನವನ ಬದುಕಿನ ಒಡನಾಟ ನಿರಂತರವಾದದು. ನಿಸರ್ಗವಿಲ್ಲದೆ ಮಾನವನ ಉಳಿವು ಅಸಾಧ್ಯ .

ಈ ಸತ್ಯವನ್ನು ಅರಿತಿದ್ದರು ನಾವುಪರಿಸರ ಸಂರಕ್ಷಣೆಯ ಬಗ್ಗೆ ಆಲೋಚಿಸದೆ ಈಗಾಗಲೆ ಮೇರೆ ಮೀರಿ ಮಲಿನವಾಗಿರುವ ಪ್ರಕೃತಿಯನ್ನು ಮತ್ತು ಮತ್ತು ಮಲಿನಗೊಳಿಸುತ್ತಾ ಸಾಗುತ್ತಿದ್ದೇವೇ ಹೊರತು ಈ ಬಗ್ಗೆ ಗಂಬೀರವಾಗಿ ಪ್ರತಿ ಪ್ರಜೆಯು ಜಾಗೃತವಾಗಿ ಬದುಕುವ ಸ್ಥಿತಿ ನಿರ್ಮಾಣವಾಗಿಲ್ಲ,

ನಿರ್ಮಲ ವಾತಾವರಣ ಸೃಷ್ಟಿಗೆ ಅವಶ್ಯಕವಾದ ಮರ ಗಿಡಗಳನ್ನು ಬೆಳೆಸುವ ಮತ್ತು ಆಹಾರ ಸರಪಳಿ ಸಂರಕ್ಷಿಸುವ ಜವಬ್ದಾರಿ ನಮ್ಮ ಮೇಲಿದೆ.

ಭೂತಾಯಿಯ ಮುಡಿಯ ಹಸಿರ ಸಿರಿಯಲ್ಲಿ ಬೀಜದ ಪಾತ್ರ ಮಹತ್ತರವಾದದ್ದು, ನಾವು ನಿತ್ಯ ಜೀವನದಲ್ಲಿ ಆಹಾರವಾಗಿ ಬಳಸುವ ಹಲವು ರೀತಿಯ ಹಣ್ಣು ಹಂಪಲುಗಳ, ತರಕಾರಿಗಳ ಬೀಜಗಳ ಕಡೆಗೆ ನಮ್ಮ ಗಮನ ಹರಿಸುವುದಿಲ್ಲ ಅವುಗಳನ್ನು ತಾತ್ಸಾರವಾಗಿ ಕಸದ ಬುಟ್ಟಿಗೆ ಎಸೆದು ಬಿಡುತ್ತೇವೆ .ಆದರೆ ಅದು ಸಣ್ಣ ಬೀಜ ನಮ್ಮ ಮನೆಯ ಮುಂದೆ ಒಂದು ವೃಕ್ಷವನ್ನೋ, ಒಂದು ಸಣ್ಣ ಬಳ್ಳಿಯನ್ನೋ ಹಬ್ಬಿಸಿ ಪರಿಸರ ರಕ್ಷಣೆಗೂ, ಆರೋಗ್ಯಕ್ಕೂ ತನ್ನ ಕೊಡುಗೆ ನೀಡುತ್ತದೆ ಎಂಬುದನ್ನು ನಾವು ಗಮನಿಸುವುದೆ ಇಲ್ಲ.

ಹಳ್ಳಿಗಳಲ್ಲಿ ಸಾಮಾನ್ಯವಾಗಿ ಮನೆಯಂಗಳದಲ್ಲಿ ಮರ ಗಿಡ ಕೈದೋಟಗಳಿರುತ್ತವೆ. ನಗರ ಪ್ರದೇಶಗಳಲ್ಲಿ ಮರ ಗಿಡಗಳ ಅವಶ್ಯ ಕತೆ ಇರುವ ಪ್ರದೇಶಗಳಲ್ಲಿ ಅಪಾರ್ಟಮೆಂಟ್ ಗಳಂತಹ ಸ್ಥಳಗಳಲ್ಲಿಯೂ ಸಹ ತಮ್ಮ ಮಿತಿಯಲ್ಲಿ ಸಣ್ಣ ಪುಟ್ಟ ಗಿಡ ಬಳ್ಳಿಗಳನ್ನು ಹಬ್ಬಿಸಬಹುದು.

ಎಲ್ಲವೂ ನಮ್ಮ ಮನಸ್ಸಿಗೆ ಬಿಟ್ಟಿದ್ದು ‘ಮನಸ್ಸಿದ್ದರೆ ಮಾರ್ಗ’ ಎಂಬಂತೆ ಪ್ರಕೃತಿ ಸೌಂದರ್ಯ ಸವಿಯುವ ಮನಸ್ಸಿರುವ, ಪರಿಸರ ಸಂರಕ್ಷಣೆಯ ಅರಿವಿರುವ ಸಹೃದಯರಿಗೆ ಇದು ಖಂಡಿತ ಸಾಧ್ಯ.

ನಾವು ಎಂದೋ ವರ್ಷಕ್ಕೊಮ್ಮೆ ಪರಿಸರ ದಿನಾಚರಣೆ ಆಚರಿಸುತ್ತಾ ಗಿಡಗಳನ್ನು ನೆಡುತ್ತಾ ಜಾಗೃತಿ ಶಿಬಿರಗಳನ್ನು ನೆಡೆಸಿ, ಆ ದಿನದ ನಂತರ ನಮ್ಮ ಜವಾಬ್ದಾರಿಯನ್ನು ಮರೆತು ಮತ್ತೆ ಮತ್ತೆ ಪರಿಸರವನ್ನು ಹಲವಾರು ರೀತಿಯಲ್ಲಿ ಮಲಿನಗೊಳಿಸುತ್ತಿರುತ್ತೇವೆ.

ಪರಿಸರ ಮಾಲಿನ್ಯ ಕಡಿಮೆಯಾಗಿ ಅದು ಸಮತೋಲನ ಸ್ಥಿತಿ ತಲುಪಬೇಕಾದರೆ ವಾತಾವರಣದಲ್ಲಿ ಹೇರಳವಾಗಿ ಮರ ಗಿಡಗಳನ್ನು ಬೆಳೆಸಬೇಕಾದ ಕರ್ತವ್ಯ ಜವಾಬ್ದಾರಿ ನಮ್ಮದು.

ಪ್ರತಿ ದಿನವು ಪರಿಸರ ದಿನವೆಂದು ಭಾವಿಸಿದಾಗ ಮಾತ್ರ ಈ ಕಾರ್ಯ ಸಾದ್ಯ. ನಾವು ಪ್ರತಿನಿತ್ಯ ಬಳಸಿ ಎಸೆವ ಬೀಜಗಳನ್ನ ಬಳಸಿ ನಮ್ಮ ಮನೆಯಂಗಳದಲ್ಲಿ ಕೈದೋಟ ಮಾಡುವುದು, ನಮ್ಮ ಆಪ್ತ ಸಮಾರಂಭಗಳಲ್ಲಿ ಉತ್ತಮ ಗಿಡಗಳು ಮತ್ತು ಬೀಜಗಳನ್ನು ಉಡುಗೊರೆಯಾಗಿ ನೀಡುವ ಹವ್ಯಾಸವನ್ನು ಬೆಳೆಸಿಕೊಂಡರೆ ಪರಿಸರ ಸಮತೋಲನ ಕಾಪಾಡುವಲ್ಲಿ ನಮ್ಮದು ಒಂದು ಅಳಿಲು ಸೇವೆಯಾಗುತ್ತದೆ.

ಆಧುನಿಕತೆಯ ಪರಿಣಾಮದಿಂದಾಗಿ ಅಂತರ್ಜಲ ಕುಗ್ಗಿ, ಕಾಡು ನಶಿಸಿ ಮಳೆ ಇಲ್ಲದೆ ಬೆಳೆ ಬಾರದೆ ರೈತ ಕಂಗಾಲಾಗಿರುವ ಜೊತೆಗೆ ಬರ ಹೆಚ್ಚಿ ಕುಡಿಯುವ ನೀರಿಗೂ ಆಹಾಕಾರವಿರುವ ಸ್ಥಿತಿ ನಮ್ಮದಾಗಿರುವಾಗ ಜಲ ಸಂರಕ್ಷಣೆಗೆ ಹಲವು ಮಾರ್ಗಗಳನ್ನು ಹುಡುಕಿ ಕೊಳ್ಳಬೇಕಾದದು ನಮ್ಮ ಆದ್ಯ ಕರ್ತವ್ಯ.

ಮಳೆ ನೀರಿನ ಶೇಖರಣೆ, ಸಂರಕ್ಷಣೆ ಶುದ್ದೀಕರಣದ ಜೊತೆಗೆ ಅಂತರ್ಜಲ ಹೆಚ್ಚಿಸಲು ಸರ್ಕಾರ ಹಲವು ಕ್ರಮ ಕೈಗೊಂಡಿರುವ ಬೆನ್ನಲೇ ನಾವೆಲ್ಲ ಆಲೋಚಿಸಬೇಕಾದ್ದು ನಾವು ನಿತ್ಯ ಬಳಸುವ ,ಮನೆಗಳಲ್ಲಿ ಪೋಲು ಮಾಡುತ್ತಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಿ ಮಿತವಾಗಿ ಸದ್ಬಳಕೆ ಮಾಡಿಕೊಳ್ಳುವುದು ಒಳಿತು.

ಶರ ವೇಗದಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಅತ್ಯವಶ್ಯಕವಾಗಿ ಕೈಗೊಳ್ಳಬೇಕಾದ ಕೆಲವು ಕ್ರಮಗಳೆಂದರೆ ಪ್ಲಾಸ್ಟಿಕ್ ನಿಷೇದ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ ಮನುಷ್ಯನ ನರನಾಡಿಗಳಲ್ಲಿ ರಕ್ತದ ಕಣ ಕಣಗಳಂತೆ ಇಂದು ಪ್ಲಾಸ್ಟಕ್ ಸೇರ್ಪಡೆಯಾಗುತ್ತಿದೆ.

ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡರು ಇದರ ಹಾವಳಿ ನಿಂತಿಲ್ಲ .ಇದಕ್ಕೆ ಪ್ರಭುತ್ವಗಳನ್ನು ದೂರದೆ ಪ್ರತಿಯೊಬ್ಬ ಪ್ರಜೆಯು ಸ್ವ ವಿವೇಚನೆಯಿಂದ ತನ್ನ ಆರೋಗ್ಯ ಮತ್ತು ಭವಿಷ್ಯತ್ತಿನ ಪೀಳಿಗೆಗೆ ಬಳುವಳಿಯಾಗಿ ನಾವು ನೀಡುವ ಪರಿಸರದ ಸ್ಥಿತಿಯನ್ನು ಅರಿತು ಸಂರಕ್ಷಣೆ ಮಾಡಬೇಕಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಅತೀ ಲೋಭಕ್ಕೆ ದುರಾಸೆಗೆ ಒಳಗಾಗಿ ಮಾನವೀಯತೆ, ಮಾನವ ಸಂಬಂಧಗಳನ್ನು ಮರೆತಿರುವ ಮಾನವ ಹಣಕ್ಕಾಗಿಯೇ ಎಲ್ಲವನ್ನೂ ವ್ಯಾಪರೀಕರಣಗೊಳಿಸ ಹೊರಟಿದ್ದಾನೆ.

ಆತನೇ ತಿನ್ನುವ ಆಹಾರದಲ್ಲೂ ಕಲಬೆರಕೆ ಮಾಡ ಹೊರಟು ಇತ್ತೀಚೆಗೆ ಮೇರೆ ಮೀರುತ್ತಿದೆ . ಹಣ್ಣುಗಳನ್ನು ರಾಸಾಯನಿಕ ಗೊಬ್ಬರಗಳಿಂದ ಬೆಳೆಸುವ ಜೊತೆಗೆ ಕೀಟ ನಾಶಕಗಳನ್ನು ಅತಿಯಾಗಿ ಸಿಂಪಡಿಸುವುದಲ್ಲದೇ ,ಅವು ಹಣ್ಣಾಗುವ ಮುನ್ನವೆ ಕಿತ್ತು ರಾಸಾಯನಿಕಗಳಿಂದ ಹಣ್ಣಾಗಿಸಿ, ಸಂರಕ್ಷಿಸಲು ಎಲ್ಲಾರೀತಿಯಿಂದಲು ಶರೀರಕ್ಕೆ ರಾಸಾಯನಿಕಗಳನ್ನು ಸೇರಿಸುತ್ತಿರುವ ಜೊತೆಗೆ ,ಅವನ ಅತಿಯಾದ ಹಣದಾಹ ಯಾವ ಮಟ್ಟ ತಲುಪಿದೆ ಎಂದರೆ ‘ಅನ್ನದಾನ ಶ್ರೇಷ್ಠದಾನ ‘ಎಂಬ ನಂಬಿಕೆಗೆ ಮಣ್ಣೆರಚಿ ತಿನ್ನುವ ಅಕ್ಕಿಗೂ ಪ್ಲಾಸ್ಟಿಕ್ ಅಕ್ಕಿಯನ್ನು ಬೆರೆಸುವುದು ಎಂಥ ನೀಚತನ.

ಹೀಗೆ ಹಣಕ್ಕಾಗಿ ಮನುಷ್ಯ ಮಾಡುತ್ತಿರುವ ಹೀನ ಕೃತ್ಯಗಳಿಂದ ಜನತೆ ಅನೇಕ ವ್ಯಾಧಿಗಳಿಗೆ ಸಂಘರ್ಷಕ್ಕೆ ಅಸಹಿಷ್ಣತೆಗೆ ಈಡಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಾನವ ತಾನೆ ತೋಡಿದ ಮೃತ್ಯು ಕೂಪದಲ್ಲಿ ತಾನೇ ಬಿದ್ದು ಸಾಯುವ ಸ್ಥಿತಿ ತದ್ದೊಡ್ಡಿಕೊಳ್ಳುತ್ತಿದ್ದಾನೆ .

ನಿಸರ್ಗ ದತ್ತವಾಗಿ ದೊರೆಯುವುದನ್ನು ಕೃತಕಗೊಳಿಸಲು ಹೋದರೆ ನಷ್ಟ ನಮಗೇ .ಆರೊಗ್ಯವಂತ ಸ್ವಾಸ್ತ್ಯ ಸಮಾಜವು ಸಹ ಪರಿಸರದ ಭಾಗವೇ ಆಗಿರುವುದರಿಂದ ಮೊದಲು ಸಮಾಜದಲ್ಲಿ ಮಾನವನಲ್ಲಿ ಸ್ವಾಸ್ಥ್ಯ ಉಂಟಾದರೆ ಪರಿಸರ ತನಗೆ ತಾನೇ ಶುದ್ಧಗೊಳ್ಳುತ್ತದೆ.

ತನ್ನೊಳಗೆ ಶಾಂತಿಯನ್ನು ಸ್ವಚ್ಛತೆಯನ್ನು ಆರೋಗ್ಯವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಮಾನವನಿಗೆ ಬಂದಾಗ ಪರಿಸರವನ್ನು ಆತ ಸಂರಕ್ಷಿಸ ಬಲ್ಲ. ಗಂಬೀರವಾಗಿ ಆಲೋಚಿಸಿ ಜಾಗೃತವಾಗಿ ನಮ್ಮ ಪರಿಸರವನ್ನು ಜೊತೆಗೆ ನಮ್ಮ ಜೀವನವನ್ನು ಸಂರಕ್ಷಿಸಬೇಕಾದ, ಸುಂದರಗೊಳಿಸಬೇಕಾದ ಅವಶ್ಯಕತೆ ಅನಿವಾರ್ಯತೆ ತುರ್ತಾಗಿದೆ.

ಇಲ್ಲವಾದಲ್ಲಿ ಪ್ರಕೃತಿ ವಿಕೋಪಕ್ಕೆ ಮಾನವ ಬಲಿಯಾಗಬೇಕಾಗುತ್ತದೆ. ಕೊರೋನದಂತಹ ರೋಗಗಳನ್ನು ,ಹವಾಮಾನದ ವೈಪರಿತ್ಯಗಳನ್ನು, ಭೂಕಂಪ, ಜ್ವಾಲಾಮುಖಿ, ಜಾಗತಿಕ ತಾಪಮಾನ ವನ್ಯಜೀವಿಗಳ ಬಿಕ್ಕಟ್ಟು ಜಲಕ್ಷಾಮದೊಂದಿಗೆ ಮಾನವ ಕ್ರೌರ್ಯದ ಸಾಮಾಜಿಕ ಸಂಘರ್ಷಗಳನ್ನು ಎದುರುಗೊಳ್ಳಬೇಕಾಗುತ್ತದೆ ಎಚ್ಚರ.

ಪರಿಸರ ದಿನಾಚರಣೆ

ಪಾವಗಡ: ತಾಲ್ಲೂಕಿನ ಹಲವೆಡೆ ಶುಕ್ರವಾರ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡಲಾಯಿತು.
ಪಟ್ಟಣದ ಶಿರಾ ರಸ್ತೆಯ ಆಜಾದ್ ನಗರದಲ್ಲಿರುವ ಮಿಫ್ತಾ ಉಲೂಂ ಅರಬ್ಬಿಕ್ ಕಾಲೇಜು ಆವರಣದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಶುಕ್ರವಾರ ಸಸಿ ನೆಡಲಾಯಿತು. 
ಕಾಲೇಜು ಅಧ್ಯಕ್ಷ ಇದಾಯತ್ ಉಲ್ಲಾ, ಕಾರ್ಯದರ್ಶಿ ಷಾಕೀರ್, ಹಜರತ್ ಅಶಿಕ್ ರಜಾ,  ನಿಸಾರ್, ಯೂನಸ್, ಅರೂನ್, ಶಕೀಲ್, ಜಬ್ಬಾರ್ ಇದ್ದರು.
https://youtu.be/yBEgPU_OMuE

ತಾಲ್ಲೂಕಿನ ಅರಸೀಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸರಳವಾಗಿ ಪರಿಸರ ದಿನಾಚರಣೆ ಆಚರಿಸಲಾಯಿತು.
ತಿರುಮಣಿ ಟಾಟಾ ಸೋಲಾರ್ ಪಾರ್ಕ್ ನಲ್ಲಿ ತಾಲ್ಲೂಕು ಹೆಲ್ಪ್ ಸೊಸೈಟಿ ವತಿಯಿಂದ ಸಸಿ ನೆಡಲಾಯಿತು. ಟಾಟಾ ಕಂಪನಿಯ ಹರಿಕೃಷ್, ರವಿಕುಮಾರ್, ಅನಿಲ್ ಕುಮಾರ್, ಶಶಿಕಿರಣ್ ಉಪಸ್ಥಿತರಿದ್ದರು.

ಎಡೆಯೂರು ವ್ಯಕ್ತಿಗೆ ಕೊರೊನಾ ಪಾಸಿಟಿವ್?

ಎಡೆಯೂರು: ಹೋಬಳಿಯ 46ವರ್ಷದ ವ್ಯಕ್ತಿಗೆ ಸೋಂಕು ಶಂಕೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ರಾತ್ರಿಯಿಂದಲೇ ಎಚ್ಚರಿಕೆಯ
ಕ್ರಮಗಳನ್ನು ಕೈಗೊಂಡಿದ್ದಾರೆ.

ಗುರುವಾರ ಸಂಜೆ ಮಾಹಿತಿ ತಿಳಿಯುತ್ತದ್ದಂತೆಯೇ ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡ
ಎಡೆಯೂರಿಗೆ ಆಗಮಿಸಿ, ಸೋಂಕಿತ ವ್ಯಕ್ತಿಯನ್ನು ತುಮಕೂರು ಕೋವೀಡ್ ಆಸ್ಪತ್ರೆಗೆ
ಸಾಗಿಸಿದ್ದಾರೆ. ಕುಟುಂಬ ವರ್ಗದವರನ್ನು ( ಪತ್ನಿ, ಇಬ್ಬರು ಮಕ್ಕಳು ಮತ್ತು ತಾಯಿ)
ಸ್ಥಳೀಯ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನಲ್ಲಿಡಲಾಗಿದೆ .
ಸೋಂಕಿತ ವ್ಯಕ್ತಿ , ಕ್ಷಯ ರೋಗಿಯಾಗಿದ್ದು, ಸ್ಥಳೀಯ
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ..

ಈತನ ಸಂಪರ್ಕ ಹೊಂದಿದ‌ ವ್ಯಕ್ತಿಗಳ ಬಗ್ಗೆ ಸ್ಪಷ್ಠ ಮಾಹಿತಿ ಇಲ್ಲದಿದ್ದರು ಕಳೆದ ತಿಂಗಳು
ಮಂಡ್ಯಜಿಲ್ಲೆ ನಾಗಮಂಗಲ ಮತ್ತು ತುರುವೇಕೆರೆಗಳಿಗೆ ಹೋಗಿದ್ದು, ಎಡೆಯೂರಿನಲ್ಲಿ ಮದುವೆ
ಕಾರ್ಯಕ್ರಮದಲ್ಲ ಭಾಗಿಯಾಗಿದ್ದನೆಂದು ಕುಟುಂಬದ ಮೂಲಗಳು ತಿಳಿಸಿವೆ.

ಅಧಿಕಾರಿ ವರ್ಗದವರು ಪ್ರಾಥಮಿಕ ಸಂಪರ್ಕದವರ ವಿವರಗಳನ್ನು ಕಲೆ ಹಾಕ್ಕುತ್ತಿದ್ದಾರೆ. ಸೋಂಕಿತ ಮನೆ
ವ್ಯಾಪ್ತಿಯನ್ನು ಸೀಲ್ ಡೌನ್ ಮಾಡಲಾಗಿದೆ.
ತಾಲ್ಲೂಕಿನಲ್ಲಿ ಮೊದಲ ಪ್ರಕರಣ ಮುಂಬೈ ನಿಂದ ಬಂದು ಕ್ವಾರಂಟೈನ್ ನಲ್ಲಿದ್ದ
ವ್ಯಕ್ತಿಗೆ ಪಾಸಿಟಿವ್ ಬಂದಿದ್ದು ಗಂಭೀರತೆ ಪಡೆದಿರಲ್ಲಿಲ್ಲ,ಈಗ ಎಡೆಯೂರಿನ
ವ್ಯಕ್ತಿಗೆ ಸೋಂಕು ತಗುಲಿರುವುದು ಜನರು ಭಯ ಭೀತರಾಗಿದ್ದಾರೆ.

ಆದರೆ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಸರ್ಕಾರ ನೀಡಿಲ್ಲ.

ರಾಜ್ಯಸಭೆಗೆ ದೇವೇಗೌಡ, ಖರ್ಗೆ

ಬೆಂಗಳೂರು: ರಾಜ್ಯ ಸಭೆ ಅಖಾಡಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸ್ಪರ್ಧೆ ಮಾಡುವುದು ಖಚಿತವಾಗುತ್ತಿದೆ.

ಕಾಂಗ್ರೆಸ್ ರಾಜ್ಯದಿಂದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯಾಗಿ‌ ಘೋಷಿಸಿದೆ.

ದೇವೇಗೌಡರು ಸಹ ಸ್ಪರ್ಧೆ ಮಾಡುತ್ತಾರೆ. ನಾಲ್ಕನೇ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ.

ಕಾಂಗ್ರೆಸ್ ಬೆಂಬಲಿಸಲಿದೆ ಎಂಬ ವಿಶ್ವಾಸವಿದೆ ಎಂದು ಆ ಪಕ್ಷದ ರಾಜ್ಯ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ತಿಳಿಸಿದ್ದಾರೆ.

ಕುರಿಯ ಹಿಂಡು…

0

ದೇವರಹಳ್ಳಿ ಧನಂಜಯ


ಕೋಲು ಹಿಡಿದು
ಮುಂದೆ ನಡೆದಿರುವ
ಕುರಿ ಒಡೆಯ

ಸಾಲು ಹಿಡಿದು
ಹಿಂದೆ ನಡೆದಿರುವ
ಕುರಿಯ ಹಿಂಡು

ಕುರಿಯ ಮಂದೆ
ತಲೆ ಕೆಳಗೆ ಎಂದೇ
ಲೋಕದ ನಿಂದೆ

ಬೆಲೆ ಇದೆಯೇ
ಹಿಂದೆ ಮಂದೆ ಇರದ
ಕುರಿಗಾಹಿಗೆ

ಮುಂದೆ ನಡೆವ
ನಾಯಕನಿಗೆ ಬಲ
ಹಿಂದಿನ ಹಿಂಡು.

ನಂಬಿದ ನಡೆ
ದೌರ್ಬಲ್ಯ ಹೇಗಾದೀತು
ಆಡಿಕೊಳ್ಳಲು

ಕುರಿಯ ಬೆಲೆ
ಅರಿಯದ ನಾಯಕ
ಹೇಗೆ ಕಾದಾನು

ಕುರಿಗಾಹಿಯ
ಮುನ್ನಡೆ ಹಿಂಡಿನಿಂದ
ಅರ್ಥಗರ್ಭಿತ

ಕಾಯುವವಗೆ
ಇರಬೇಕು ಸೌಜನ್ಯ
ಕುರಿಯ ಮೇಲೆ

ಬೆನ್ನಿಗೆ ನಿಂತು
ನಡೆವ ಕುರಿ ಹಿಂಡೆ
ನಿಜ ನಾಯಕ

ಇದ ತಿಳಿಯೆ
ನಡಿಗೆ ಪರಿಪೂರ್ಣ
ಕಾಯ್ವ ಕೆಲಸ

ಬೆಲೆ ಇಲ್ಲದ
ದೊಣ್ಣೆ ನಾಯಕ ನಿಂಗೆ
ಬೇಡ ದಿಮಾಕು

ಹಳ್ಳಿಯಲ್ಲೊಂದು ಪರಿಸರ ಸಂಘ ಕಟ್ಟಿ…

1

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಈ ಲೇಖನವನ್ನು ಚಿಗುರು ಯುವಜನ ಸಂಘದ ಅಧ್ಯಕ್ಷ ಮಂಜುನಾಥ್ಅಮಲಗೊಂದಿ ಬರೆದಿದ್ದಾರೆ.


ನಾನು ಸ್ನಾತಕೋತ್ತರ ಸಮಾಜ ಕಾರ್ಯಕರ್ತ ವನ್ನು ತುಮಕೂರು ವಿ.ವಿ ಯಲ್ಲಿ ಮುಗಿಸಿದ್ದು. ಪ್ರಸ್ತುತ ಒಂದು ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ.

ವಾರದಲ್ಲಿ ಎರಡು ದಿನ ಪರಿಸರ ಮತ್ತು ಸುಸ್ಥಿರ ಕೃಷಿಯ ಉತ್ತೇಜನಕ್ಕಾಗಿ ಸ್ವಯಂಸೇವೆಯಿಂದ ಚಿಗುರು ಯುವಜನ ಸಂಘವನ್ನು ಕಟ್ಟಿಕೊಂಡು ಮಾಡುತ್ತಿದ್ದೇನೆ. ಸಂಘಕ್ಕೆ ಮೂಲ ಪ್ರೇರಣೆ ಸಿಎಂಸಿಎ ಸಂಸ್ಥೆಯ ಸಮುದಾಯ ಯುವ ನಾಗರೀಕ ಕಾರ್ಯಕ್ರಮವಾಗಿದೆ.

ಸಂಘದಿಂದ ಶಾಲೆಗಳಲ್ಲಿ ಗಿಡ ನೆಡುವುದು ಮತ್ತು ಫಾಲೊಅಪ್ ಮಾಡುವುದು, ಶಾಲೆಗಳ ಇಕೋ ಕ್ಲಬ್ ಗಳಿಗೆ ಭೇಟಿ ನೀಡಿ ಮಕ್ಕಳಿಗೆ ಪರಿಸರ, ವನ್ಯಜೀವಿ, ನೀರಿಗೆ ಸಂಬಂಧಿಸಿದಂತೆ ಕಾರ್ಯಾಗಾರಗಳನ್ನು ಮತ್ತು ಚಟುವಟಿಕೆಗಳನ್ನು ಮಾಡುತ್ತಿದ್ದೇವೆ.

ಜೊತೆಯಲ್ಲಿ ಹಿಂದಿನ ವರ್ಷದಿಂದ ಯುವರೈತರಿಗೆ ಕೃಷಿ ಬಗ್ಗೆ ಉತ್ತೇಜನ ನೀಡಲು ಹಸಿರು ದಾಸೋಹ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ನಾನು ಹಿಂದಿನ ವರ್ಷದಲ್ಲಿ ಶಿರಾದಲ್ಲಿ ಭಾರತದ ಜಲ ಮನುಷ್ಯನೆಂದು ಹೆಸರಾದ ರಾಜಸ್ಥಾನದ ರಾಜೇಂದ್ರ ಸಿಂಗ್ ರವರ ನೇತೃತ್ವದಲ್ಲಿ ನಡೆದ ರಾಜ್ಯ ಜಲಾಸಕ್ತರ ಸಮಾವೇಶದಲ್ಲಿ ಪಾಲ್ಗೊಂಡು, ಅದರ ಪ್ರೇರಣೆಯಿಂದ ಮಳೆನೀರಿನ ಕೊಯ್ಲು ಮಾಡಿಸಿದ್ದು ನೀರಿನ ಬಗ್ಗೆ ಹೆಚ್ಚೆಚ್ಚು ಜನರಿಗೆ ಅರಿವನ್ನು ಮೂಡಿಸಬೇಕೆಂದು ಪ್ರಯತ್ನ ಮಾಡಲಾಗುತ್ತಿದೆ.

ಅರಣ್ಯ ಇಲಾಖೆಯ ಸಂಪರ್ಕವನ್ನು ಇಟ್ಟುಕೊಂಡು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು ರೈತರಿಗೆ ತಲುಪಿಸುತ್ತಿದ್ದೇನೆ. ಅರಣ್ಯ ಕೃಷಿಯನ್ನು ಮಾಡುವುದಕ್ಕೆ ಉತ್ತೇಜನ ನೀಡುತ್ತಿದ್ದೇನೆ.

ಮಕ್ಕಳನ್ನು ಕೆರೆಗಳಿಗೆ ಕರೆದುಕೊಂಡು ಹೋಗಿ ಜಲಪಾತ್ರೆಗಳ ಮಹತ್ವವನ್ನು ಅರ್ಥಮಾಡಿಸುವುದು, ಮಕ್ಕಳಿಗೆ ಪರಿಸರ ದ ಅರಿವು ಮೂಡಿಸಲು ಪ್ರಯತ ಮಾಡುತ್ತಿದ್ದೇನೆ. ಪರಿಸರಕ್ಕೆ ಕೆಲಸ ಮಾಡುವ ಅನೇಕ ಸಂಘಟನೆಗಳಲ್ಲಿ ಸೇರಿಕೊಂಡು ಕೆಲಸ ಮಾಡುತ್ತಿದ್ದೇನೆ. ಪರಿಸರ, ಪಕ್ಷಿ, ಮತ್ತು ಕೃಷಿಗೆ ಸಂಬಂಧಿಸಿದಂತೆ ಲೇಖನಗಳನ್ನು ಬರೆಯುತ್ತಿದ್ದೇನೆ.

*ಸಂಘದ ಧ್ಯೇಯ:-


ಶಿಕ್ಷಣ ಮತ್ತು ಅರಿವು ಮೂಲಕ ಸುಸ್ಥಿರ ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಗ್ರಾಮೀಣಾಭಿವೃದ್ಧಿ ಮಾಡಬೇಕೆಂದು ನಮ್ಮ ಮುಖ್ಯ ಧ್ಯೇಯವಾಗಿದೆ.

*ಸಂಘದ ದೂರದೃಷ್ಟಿ:


ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ, ಯುವಜನರಲ್ಲಿ, ಜನಸಮುದಾಯದಲ್ಲಿ ಸುಸ್ಥಿರ ಪರಿಸರದ ಆಲೋಚನೆಗಳನ್ನು ಹುಟ್ಟುಹಾಕಿ, ನೆಲೆ-ಜಲ ಪರಿಸರ ವೈವಿಧ್ಯತೆಯನ್ನು ಸಂರಕ್ಷಿಸುವ ಮೂಲಕ ಸುಸ್ಥಿರ ಪರಿಸರವನ್ನು ನಿರ್ಮಾಣ ಮಾಡುವುದಾಗಿದೆ.

*ಸಂಘ ಉದ್ದೇಶಗಳು:-*


೧. ಪರಿಸರದ ಬಗ್ಗೆ ಜನರಲ್ಲಿ ಸಂವೇದನಾಶೀಲರನ್ನಾಗಿಸುವುದು.
೨. ಸುಸ್ಥಿರ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸುವುದು.
೩. ಕೃಷಿ-ಪರಿಸರಕ್ಕೆ ಪೂರಕವಾದ ನೀತಿ ನಿಯಮಗಳ ರೂಪಿಸುವಲ್ಲಿ ಕಾರ್ಯನಿರ್ವಹಿಸುವುದು.
೪. ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದು.
೫. ಪರಿಸರ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದು ಮತ್ತು ಆಯೋಜಿಸುವುದು.
೬. ಯುವಜನರನ್ನು ಸಮಾಜಮುಖಿಗಳನ್ನಾಗಿಸುವುದು.
೭. ಪರಿಸರಾತ್ಮಕ ಕಾರ್ಯಚಟುವಟಿಕೆಗಳಲ್ಲಿ ಇಲಾಖೆಗಳೊಂದಿಗೆ ಸಹಕರಿಸುವುದು.
೮. ಸಮಾಜಮುಖಿ ವೇದಿಕೆಗಳೊಂದಿಗೆ ಚಳುವಳಿಗಳನ್ನು ಉತ್ತೇಜಿಸುವುದು.

*ಸಂಘದ ಪದಾಧಿಕಾರಿಗಳು:


ಅಧ್ಯಕ್ಷರು:- ಮಂಜುನಾಥ್‌ಅಮಲಗೊಂದಿ.
ಕಾರ್ಯದರ್ಶಿ:- ಮಂಜುನಾಥ್‌ಆಲದಮರ.
ಸದಸ್ಯರು:- ಮಧು, ನರಸಿಂಹಮೂರ್ತಿ.ಕೆ.ಎಸ್, ಪೂಜಾ, ಅಂಬಿಕಾ, ಚಾಂದಿನಿ, ಜಲಜ, ಪ್ರಜ್ವಲ್, ನಿಶ್ಚಿತ್, ಸುರೇಶ್.ಎಲ್, ದೀಪಕ್.ಎನ್, ಯಶೋಧಾ, ಶ್ರೀನಿವಾಸ.ಎಸ್, ಕಿರಣ್‌ಕುಮಾರ್.ಜೆ, ನರಸಿಂಹರಾಜು.ಎಲ್, ಮಂಜುಪ್ರಸಾದ್, ಸುನಿಲ್‌ಕುಮಾರ್.ಹೆಚ್, ಯೋಗೇಶ್, ಮಂಜುನಾಥ್.ಜೆ, ಪುಟ್ಟರಾಜು, ಜೇಬಿನ್‌ಅಭಿಷೇಕ್, ದರ್ಶನ್.ಆರ್, ನಿತೀಶ್‌ಕುಮಾರ್.ಎಸ್, ವಿಷ್ಣು, ದರ್ಶನ್.ಎಲ್.

*ಸಂಘದ ಕಾರ್ಯಚಟುವಟಿಕೆಗಳು


1. *ಹಸಿರು ದನಿ(ಮುರಾರ್ಜಿ ಶಾಲೆಯಲ್ಲಿ):-* ಇದು ಚಿಗುರು ಯುವಜನ ಸಂಘ, ಚಿಕ್ಕಬಳ್ಳಾಪುರದ ಉಸಿರಿಗಾಗಿ ಹಸಿರು ಸಂಘಟನೆ ಮತ್ತು ಆದರ್ಶ ಯುವತಿ ಮಂಡಳಿ ಅವರ ಸಹಯೋಗದಲ್ಲಿ ನಡೆಯುತ್ತಿರುವುದು.

2.*ಇಕೋ ಕ್ಲಬ್‌ಗಳ ಜೊತೆ ಕಾರ್ಯಕ್ರಮ:-* ಶಾಲೆಗಳಲ್ಲಿ ನೀರಿನ ಬಗ್ಗೆ, ಪರಿಸರದ ಬಗ್ಗೆ, ವನ್ಯಜೀವಿಗಳ ಬಗ್ಗೆ, ವಿಶ್ವ ಮಣ್ಣು ದಿನಾಚರಣೆ, ಕೆರೆ ವೀಕ್ಷಣೆ, ಹಾವುಗಳ ಪ್ರಪಂಚ ಕಾರ್ಯಾಗಾರ, ಓಝೋನ್ ನೀ ಇಲ್ಲದಿದ್ದರೆ ನಾವೆಲ್ಲಾ ಗಾನ್, ಮುಂತಾದ ಕಾರ್ಯಕ್ರಮಗಳು.

3. *ಸಂಘದ ಇತರೆ ಕಾರ್ಯಕ್ರಮಗಳು:-*
ಆಟ ಮುಟ್ಟಾಟ,
ಬದುಗಳಿಗೆ ಇನ್ಸುರೆನ್ಸ್ ಮಾಡಿಸಿ (ಕೃಷಿ ಅರಣ್ಯ ಪ್ರೋತ್ಸಹ ಯೋಜನೆಗೆ ಉತ್ತೇಜನ)
ಗೊಬ್ಬರದ ಪೂಜೆ
ಬೀಜದುಂಡೆ ಬಿತ್ತನೆ
ಮತ ಮಾರಾಟಕ್ಕಿಲ್ಲ ಅಭಿಯಾನ
ಅರಣ್ಯ ಇಲಾಖೆಗೆ ಸಹಕಾರ,
ಮಕ್ಕಳ ಗ್ರಾಮ ಸಭೆ ಮಾಡಲು ಗ್ರಾಮ ಪಂಚಾಯತಿಗೆ ಸಹಕಾರ,
ಇತರೆ ಸಂಘಟನೆಗಳೊಂದಿಗೆ ಸಹಕಾರ.

4.*ಹಸಿರು ದಾಸೋಹ ಕಾರ್ಯಕ್ರಮ:-*


ಯುವರೈತರಿಗೆ ಹಣ್ಣಿನ ಗಿಡಗಳನ್ನು ನೀಡುವ ಮೂಲಕ ಅವರ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವುದು ಹಾಗೂ ಇದರ ಮೂಲಕ ಪರಿಸರಕ್ಕೆ ಹಸಿರು ಕೊಡುಗೆಯನ್ನು ನೀಡುವುದಾಗಿದೆ.

ಹಸಿರು ದಾಸೋಹ ಕಾರ್ಯಕ್ರಮದ ಉದ್ದೇಶಗಳು:- ಆರ್ಥಿಕವಾಗಿ ಹಿಂದುಳಿದಿರುವ ಯುವರೈತರಿಗೆ ತೋಟಗಾರಿಕಾ ಮತ್ತು ಅರಣ್ಯ ಕೃಷಿಯನ್ನು ಪ್ರೋತ್ಸಾಹಿಸುವುದು. ಹಾಗೂ ಕೃಷಿಯಲ್ಲಿಬದುಕನ್ನು ಕಟ್ಟಿಕೊಳ್ಳಲು ಸಹಕಾರವನ್ನು ನೀಡುವುದು.

ವಾತಾವರಣದಲ್ಲಿ ಹಸೀರೀಕರಣವನ್ನು ಹೆಚ್ಚಿಸುವುದು. ಯುವರೈತರ ಮತ್ತು ದಾನಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವುದು. ಗ್ರಾಮೀಣ ಯುವರೈತರಿಗೆ ಸುಸ್ಥಿರ ಕೃಷಿಯ ಬಗ್ಗೆ ಅರ್ಥಮಾಡಿಸಲು ಇಂದು ಮಾದರಿಯನ್ನು ಸೃಷ್ಟಿಸುವುದು. ಯುವರೈತರು ಕೃಷಿಯಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳುವಂತೆ ಮಾಡುವುದು. ಇದರಿಂದ ಅವರ ಕುಟುಂಬದ ಆರ್ಥಿಕ ಅಭಿವೃದ್ಧಿಯನ್ನು ಮಾಡುವುದು. ಗ್ರಾಹಕರಿಗೆ ವಿಷಮುಕ್ತ ಆಹಾರವನ್ನು/ಹಣ್ಣುಗಳನ್ನು ನೀಡುವುದು. ಹಣ್ಣಿನ ಗಿಡಗಳನ್ನು ಹಾಕುವ ಮೂಲಕ ಪ್ರಾಣಿ-ಪಕ್ಷಿಗಳನ್ನು ಸಹ ಬದುಕಿಸಿಕೊಳ್ಳುವುದು.

೨.ಹಸಿರು ದಾನಿಗಳನ್ನು ಗುರುತಿಸುವುದು ಮತ್ತು ಅವರಿಂದ ಹಣ/ಗಿಡಗಳನ್ನು ಪಡೆದುಕೊಳ್ಳುವುದು.

*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-*


ಮಂಜುನಾಥ್ ಅಮಲಗೊಂದಿ
9632095654, 8970400713. ಮಂಜುನಾಥ್ ಆಲದಮರ – 9663018651