Friday, May 8, 2026
Google search engine
Home Blog Page 234

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ಜಾಹಿರಾತು

ಪಂಚಾಂಗ
ದಿನಾಂಕ : 10, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಭಾನುವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ತದಿಗೆ
(ನಿನ್ನೆ ಬೆಳಿಗ್ಗೆ 10 ಗಂ॥ 20 ನಿ।। ರಿಂದ
ಇಂದು ಬೆಳಿಗ್ಗೆ 8 ಗಂ॥ 6 ನಿ।। ತನಕ)
ನಕ್ಷತ್ರ : ಮೂಲ
(ಇಂದು ಪ್ರಾತಃಕಾಲ 5 ಗಂ॥ 4 ನಿ।। ರಿಂದ
ಮರುದಿನ ಪ್ರಾತಃಕಾಲ 4 ಗಂ॥ 14 ನಿ।। ತನಕ)
ಯೋಗ : ಶಿವ
ಕರಣ : ಭದ್ರೆ
ವರ್ಜ್ಯಂ : (ಇಂದು ಬೆಳಿಗ್ಗೆ 12 ಗಂ॥ 47 ನಿ।। ರಿಂದ ಇಂದು ಮಧ್ಯಾಹ್ನ 2 ಗಂ॥ 19 ನಿ।। ತನಕ)
ಅಮೃತಕಾಲ : (ಇಂದು ರಾತ್ರಿ 10 ಗಂ॥ 3 ನಿ।। ರಿಂದ ಇಂದು ರಾತ್ರಿ 11 ಗಂ॥ 35 ನಿ।। ತನಕ)
ದುರ್ಮುಹೂರ್ತ : (ಇಂದು ಸಂಜೆ 4 ಗಂ॥ 54 ನಿ।। ರಿಂದ ಇಂದು ಸಂಜೆ 5 ಗಂ॥ 45 ನಿ।। ತನಕ)
ರಾಹುಕಾಲ : (ಇಂದು ಸಂಜೆ 5 ಗಂ॥ 1 ನಿ।। ರಿಂದ ಇಂದು ರಾತ್ರಿ 6 ಗಂ॥ 37 ನಿ।। ತನಕ)
ಗುಳಿಕ : (ಇಂದು ಸಂಜೆ 3 ಗಂ॥ 24 ನಿ।। ರಿಂದ ಇಂದು ಸಂಜೆ 5 ಗಂ॥ 0 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 12 ಗಂ॥ 11 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 47 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 45 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 38 ನಿ।। ಗೆ
ರವಿರಾಶಿ : ಮೇಷ
ಚಂದ್ರರಾಶಿ : ಧನು
ವಿಶೇಷ. 10 ಸಂಕಷ್ಟ ಚತುರ್ಥಿ

ಮೇಷ ರಾಶಿ ಭವಿಷ್ಯ : 10 May 2020
ಮೋಜಿಗಾಗಿ ಹೊರಹೋಗುವವರಿಗೆ ಸಂತೋಷ ಮತ್ತು ಆನಂದವನ್ನು ಹಂಚಿಕೊಳ್ಳಿ. ಯಾವುದೇ ಅನುಭವದ ವ್ಯಕ್ತಿಯ ಸಲಹೆ ಇಲ್ಲದೆ, ನಿಮಗೆ ಆರ್ಥಿಕ ನಷ್ಟವಾಗುವ ಯಾವುದೇ ಕೆಲಸವನ್ನು ಮಾಡಬೇಡಿ. ಕುಟುಂಬದೊಂದಿಗಿನ ಬಂಧಗಳು ಮತ್ತು ಸಂಬಂಧಗಳ ನವೀಕರಣದ ಒಂದು ದಿನ. ನಿಮ್ಮ ಪ್ರೀತಿಪಾತ್ರರೊಡನೆ ಪ್ರಯಾಣಕ್ಕೆ ಹೋಗುವ ಮೂಲಕ ನಿಮ್ಮ ಅಮೂಲ್ಯ ಕ್ಷಣಗಳನ್ನು ಪುನಃ ಜೀವಿಸಿ. ವ್ಯಾಪಾರಿಗಳು ಇಂದು ವ್ಯಾಪಾರಕ್ಕಿಂತ ಹೆಚ್ಚಾಗಿ ತಮ್ಮ ಕುಟುಂಬದ ಸದಯರೊಂದಿಗೆ ಸಮಯವನ್ನು ಕಳೆಯಲು ಇಷ್ಟಪಡುವಿರಿ.ಇದರಿಂದ ನಿಮ್ಮ ಕುಟುಂಬದಲ್ಲಿ ಸಾಮರಸ್ಯ ಉಂಟಾಗುತ್ತದೆ. ನಿಮ್ಮ ಸಂಗಾತಿ ಇಂದು ಸ್ವರ್ಗ ಭೂಮಿಯ ಮೇಲಿದೆ ಇಂದು ನಿಮಗೆ ಅರ್ಥ ಮಾಡಿಸುತ್ತಾಳೆ. ಅದೃಷ್ಟ ಸಂಖ್ಯೆ: 6

ವೃಷಭ ರಾಶಿ ಭವಿಷ್ಯ : 10 May 2020
ಅನಂತ ಚೈತನ್ಯ ಮತ್ತು ಉತ್ಸಾಹ ನಿಮ್ಮನ್ನು ಆವರಿಸುತ್ತದೆ ಮತ್ತು ನೀವು ಯಾವುದೇ ಅವಕಾಶವನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತೀರಿ. ಆರ್ಥಿಕ ಜೇವನದಲ್ಲಿ ಇಂದು ಸಂತೋಷ ಉಳಿದಿರುತ್ತದೆ. ಇದರೊಂದಿಗೆ ನೀವು ಇಂದು ಸಾಲಗಳಿಂದ ಮುಕ್ತರಾಗಬಹುದು. ಈ ಅವಧಿ ನಿಮ್ಮ ಹೊಸ ಯೋಜನೆಗಳು ಹಾಗೂ ಆಲೋಚನೆಗಳ ಬಗ್ಗೆ ನಿಮ್ಮ ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಒಳ್ಳೆಯದಾಗಿದೆ. ಇಂದು, ನೀವು ಮತ್ತು ನಿಮ್ಮ ಪ್ರೀತಿ ಸಂಗಾತಿ ಪ್ರೀತಿಯ ಸಾಗರದಲ್ಲಿ ತೇಲುತ್ತೀರಿ ಮತ್ತು ಪ್ರೀತಿಯ ಔನ್ನತ್ಯವನ್ನು ಅನುಭವಿಸುತ್ತೀರಿ. ನಿಮ್ಮ ಮನೆಯ ಸದಸ್ಯರು ಇಂದು ನಿಮ್ಮೊಂದಿಗೆ ಅನೇಕ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಾರೆ. ಅದೃಷ್ಟ ಸಂಖ್ಯೆ: 5

ಮಿಥುನ ರಾಶಿ ಭವಿಷ್ಯ : 10 May 2020
ಒತ್ತಡ ಸಣ್ಣ ಅನಾರೋಗ್ಯಕ್ಕೆ ಕಾರಣವಾಗಬಹುದು. ಆರಾಮವಾಗಿರಲು ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಜೊತೆಗಿರಿ. ಗಡಿಬಿಡಯ ನಿರ್ಧಾರಗಳನ್ನು ಕೈಗೊಳ್ಳಬೇಡಿ – ವಿಶೇಷವಾಗಿ ಪ್ರಮುಖ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾತನಾಡುವಾಗ. ನೀವು ಪ್ರೀತಿಸುವವರ ಜೊತಗಿನ ತಪ್ಪು ಕಲ್ಪನೆಯನ್ನು ಪರಿಹರಿಸಲಾಗುತ್ತದೆ. ಪ್ರೀತಿಯ ಸಂಕಟವನ್ನು ಎದುರಿಸುವ ಸಾಧ್ಯತೆಗಳು ಇಂದು ಹೆಚ್ಚಿವೆ. ಅದೃಷ್ಟ ಸಂಖ್ಯೆ: 3

ಕರ್ಕ ರಾಶಿ ಭವಿಷ್ಯ : 10 May 2020
ಸ್ನೇಹಿತನ ಜೊತೆಗಿನ ನಿಮ್ಮ ಅಪಾರ್ಥ ಕೆಲವು ಅಹಿತಕರ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು – ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸಮತೋಲಿತ ನೋಟ ಹೊಂದಿ. ಹೂಡಿಕೆ ಮಾಡುವುದು ಅನೇಕ ಬಾರಿ ನಿಮಗೆ ಪ್ರಯೋಜನಕಾರಿಯೆಂದು ಸಾಬೀತುಪಡಿಸುತ್ತದೆ, ಇಂದು ನಿಮಗೆ ಈ ಮಾತು ಅರ್ಥವಾಗಬಹುದು ಏಕೆಂದರೆ ಯಾವುದೇ ಹಳೆಯ ಹೂಡಿಕೆಯಿಂದ ನೀವು ಪ್ರಯೋಜನವನ್ನು ಪಡೆಯಬಹುದು ಇತ್ತೀಚೆಗೆ ನಿಮ್ಮ ವೈಯಕ್ತಿಕ ಜೀವನ ನಿಮ್ಮ ಗಮನದ ಕೇಂದ್ರಬಿಂದುವಾಗಿದೆ – ಆದರೆ ಇಂದು ನೀವು ಸಾಮಾಜಿಕ ಕೆಲಸ, ದಾನದ ಮೇಲೆ ಗಮನ ಹರಿಸುತ್ತೀರಿ – ಮತ್ತು ಸಮಸ್ಯೆಯ ಜೊತೆ ನಿಮ್ಮ ಬಳಿ ಬರುವವರಿಗೆ ಸಹಾಯ ಮಾಡುತ್ತೀರಿ. ಅದೃಷ್ಟ ಸಂಖ್ಯೆ: 7

ಸಿಂಹ ರಾಶಿ ಭವಿಷ್ಯ :10 May 2020
ಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ಯಾವುದೇ ಹಳೆಯ ಸ್ನೇಹಿತ ಇಂದು ನಿಮ್ಮ ಬಳಿ ಹಣವನ್ನು ಕೇಳಬಹುದು. ನೀವು ಅವರಿಗೆ ಸಹಾಯ ಮಾಡಿದರೆ, ನಿಮ್ಮ ಆರ್ಥಿಕ ಪರಿಸ್ಥಿತಿ ಸ್ವಲ್ಪ ತೊಂದರೆಗೊಳಗಾಗಬಹುದು।. ಮನೆಯ ಕೆಲಸ ನಿಮ್ಮನ್ನು ಯಾವಾಗಲೂ ವ್ಯಸ್ತವಾಗಿರಿಸುತ್ತದೆ. ನಿಮ್ಮ ಪ್ರೇಮಿಯ ಭಾವನಾತ್ಮಕ ಬೆದರಿಕೆಯ ಬೇಡಿಕೆಗಳಿಗೆ ಸಮ್ಮತಿಸಬೇಡಿ. ನಿಮ್ಮ ಹತ್ತಿರ ಕುಟುಂಬದವರಿಗೆ ಅಥವಾ ನಿಮ್ಮ ಸ್ನೇಹಿತರಿಗಾಗಿ ಸಮಯವಿಲ್ಲ ಎಂದು ಬಯಸಿದಾಗ ನಿಮ್ಮ ಮನಸ್ಸು ಕೆಟ್ಟುಹೋಗಬಹುದು. ಅದೃಷ್ಟ ಸಂಖ್ಯೆ: 5

ಕನ್ಯಾ ರಾಶಿ ಭವಿಷ್ಯ : 10 May 2020
ನಿಮ್ಮ ನಿರಂತರ ಸಕಾರಾತ್ಮಕ ಚಿಂತನೆಯನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ಪ್ರಯತ್ನದಲ್ಲಿ ನೀವು ಯಶಸ್ವಿಯಾಗಬಹುದು. ಆಪ್ತ ಸ್ನೇಹಿತನ ಸಹಾಯದಿಂದ ಇಂದು ಕೆಲವು ವ್ಯಾಪಾರಿಗಳಿಗೆ ಹಣದ ಲಾಭವಾಗುವ ಸಾಧ್ಯತೆ ಇದೆ. ಈ ಹಣ ನಿಮ್ಮ ಅನೇಕ ಸಮಸೆಗಳನ್ನು ದೂರ ಮಾಡಬಹುದು. ಕುಟುಂಬದ ಸದಸ್ಯರು ಅಥವಾ ಸಂಗಾತಿ ಕೆಲವು ಆತಂಕಗಳನ್ನು ಉಂಟುಮಾಡುತ್ತಾರೆ. ಪ್ರೀತಿಪಾತ್ರರು ಇಂದು ನಿಮ್ಮಿಂದ ಏನು ಬೇಕಾದರೂ ಬೇಡಿಕೊಳ್ಳಬಹುದು ಆದರೆ ನೀವು ಅದನ್ನು ಪೂರೈಸಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ನಿಮ್ಮ ಪ್ರೀತಿಪಾತ್ರರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಅದೃಷ್ಟ ಸಂಖ್ಯೆ: 3

ತುಲಾ ರಾಶಿ ಭವಿಷ್ಯ :10 May 2020
ನಿಮ್ಮ ಮಗುವಿನಂಥ ಸ್ವಭಾವ ಕಾಣಿಸಿಕೊಳ್ಳುತ್ತದೆ ಮತ್ತು ನೀವು ಒಂದು ಆಹ್ಲಾದಕಾರಿ ಮನಸ್ಥಿತಿಯಲ್ಲಿರುತ್ತೀರಿ. ನಿಮ್ಮ ಜೇವನ ಸಂಗಾತಿಯೊಂದಿಗೆ ಸೇರಿ ಇಂದು ನೀವು ಭವಿಷ್ಯಕ್ಕೆ ಯಾವುದೇ ಆರ್ಥಿಕ ಯೋಜನೆಯನ್ನು ಮಾಡಬಹುದು ಮತ್ತು ಈ ಯೋಜನೆ ಯಶಸ್ವಿಯಾಗಲಿದೆ ಎಂದು ಭರವಸೆ ಇದೆ. ಎಲ್ಲರನ್ನೂ ನಿಮ್ಮ ದೊಡ್ಡ ಪಾರ್ಟಿಗೆ ಕರೆಯಿರಿ – ನೀವು ಇಂದು ಆ ಹೆಚ್ಚುವರಿ ಚೈತನ್ಯವನ್ನು ಹೊಂದಿರುತ್ತೀರಿ ಹಾಗೂ ಇದು ನಿಮ್ಮನ್ನು ನಿಮ್ಮ ಗುಂಪಿಗಾಗಿ ಸಮಾರಂಭವನ್ನು ಸಂಯೋಜಿಸುವಂತೆ ಮಾಡುತ್ತದೆ. ನಿಮ್ಮ ಧೈರ್ಯ ಪ್ರೀತಿಯನ್ನು ಗೆಲ್ಲಬಹುದು. ಅದೃಷ್ಟ ಸಂಖ್ಯೆ: 6

ವೃಶ್ಚಿಕ ರಾಶಿ ಭವಿಷ್ಯ :10 May 2020
ಕೆಲವು ಮಾನಸಿಕ ಒತ್ತಡಗಳ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಇಂದು ಸಾಲಗಾರನು ನಿಮಗೆ ಹೇಳದೆ ನಿಮ್ಮ ಖಾತೆಗೆ ಹಣವನ್ನು ಸೇರಿಸಬಹುದು. ಇದರ ಬಗ್ಗೆ ತಿಳಿದು ನೀವು ಆಶ್ಚರ್ಯಚಕಿತರಾಗಬಹು ಮತ್ತು ಸಂತೋಷವು ಪಡೆಯಬಹುದು. ನೀವು ಪ್ರೀತಿಪಾತ್ರರ ಜೊತೆ ವಾದಗಳಿಗೆ ಕಾರಣವಾಗಬಹುದಾದ ವಿವಾದಾತ್ಮಕ ವಿಷಯಗಳನ್ನು ತಪ್ಪಿಸಬೇಕು. ತಪ್ಪು ಸಂವಹನೆ ಅಥವಾ ಒಂದು ಸಂದೇಶ ನಿಮ್ಮ ದಿನವನ್ನು ಅವರಿಸಬಹುದು. ನೀವು ನಿಮ್ಮ ಮನೆಯಿಂದ ಹೊರಗಡೆ ವಾಸಿಸಿ ಅಧ್ಯಯನ ಅಥವಾ ಉದ್ಯೋಗ ಮಾಡುತ್ತಿದ್ದರೆ ಇಂದು ನೀವು ಉಚಿತ ಸಮಯದಲ್ಲಿ ನಿಮ್ಮ ಕುಟುಂಬದವರೊಂದಿಗೆ ಮಾತನಾಡಬಹುದು. ಅದೃಷ್ಟ ಸಂಖ್ಯೆ: 7

ಧನು ರಾಶಿ ಭವಿಷ್ಯ :10 May 2020
ನಿಮ್ಮ ಮನಸ್ಥಿತಿಯನ್ನು ಬದಲಾಯಿಸಲು ಯಾವುದಾದರೂ ಸಾಮಾಜಿಕ ಸಭೆಗೆ ಹಾಜರಾಗಿ. ರಿಯಲ್ ಎಸ್ಟೇಟ್ ಮತ್ತು ಆರ್ಥಿಕ ವ್ಯವಹಾರಗಳಿಗೆ ಒಳ್ಳೆಯ ದಿನ. ಮಕ್ಕಳು ನಿಮ್ಮ ದಿನವನ್ನು ಕಠಿಣಗೊಳಿಸುತ್ತಾರೆ. ಅವರ ಆಸಕ್ತಿ ಕಾಯ್ದುಕೊಳ್ಳಲು ಪ್ರೀತಿಯ ಅಸ್ತ್ರ ಬಳಸಿ ಮತ್ತು ಯಾವುದೇ ಅನಗತ್ಯ ಒತ್ತಡ ತಪ್ಪಿಸಿ. ಪ್ರೀತಿಯಿಂದ ಪ್ರೀತ ಜನಿಸುತ್ತದೆಂದು ನೆನಪಿಡಿ. ಏಕಪಕ್ಷೀಯ ವ್ಯಾಮೋಹ ನಿಮಗೆ ಕೇವಲ ಎದೆಗುದಿ ತರುತ್ತದೆ. ಉಚಿತ ಸಮಯವನ್ನು ಪೂರ್ತಿಯಾಗಿ ಆನಂದಿಸಲು ನೀವು ಜನರಿಂದ ದೂರ ಹೋಗಿ ನೀವು ಇಷ್ಟಪಡುವ ಕೆಲಸವನ್ನು ಮಾಡಬೇಕು. ಅದೃಷ್ಟ ಸಂಖ್ಯೆ: 4

ಮಕರ ರಾಶಿ ಭವಿಷ್ಯ : 10 May 2020
ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ಇಂದು ನಿಮಗೆ ಹಣದ ಲಾಭವಾಗುವ ಪೂರ್ತಿ ಸಾಧ್ಯತೆ ಇದೆ, ಆದರೆ ಇದರೊಂದಿಗೆ ನೀವು ದಾನವನ್ನು ಸಹ ಮಾಡಬೇಕು ಏಕೆಂದರೆ ಇದರಿಂದ ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ. ಒಟ್ಟಾರೆ ಒಂದು ಲಾಭದಾಯಕ ದಿನವಾದರೂ ನೀವು ನಿರಾಸೆ ಭರವಸೆಯಿಡಬಹುದಾದ ಯಾರಾದರೂ ನಿಮ್ಮನ್ನು ನಿರಾಸೆಗೊಳಿಸುತ್ತಾರೆ. ಅದೃಷ್ಟ ಸಂಖ್ಯೆ: 4

ಕುಂಭ ರಾಶಿ ಭವಿಷ್ಯ : 10 May 2020
ನೀವು ಕಳೆದುಹೋದದ್ದರ ಬಗ್ಗೆ ಯೋಚಿಸುತ್ತಿದ್ದರೆ ನಿಮ್ಮ ಹತಾಶೆ ನಿಮ್ಮ ಆರೋಗ್ಯವನ್ನು ನಾಶಮಾಡಬಹುದು – ಸಾಧ್ಯವಾದಷ್ಟೂ ವಿಶ್ರಾಂತಿ ತಗೆದುಕೊಳ್ಳಲು ಪ್ರಯತ್ನಿಸಿ. ಇಂದು ನೀವು ಒಳ್ಳೆಯ ಹಣ ಮಾಡುತ್ತೀರಿ – ಆದರೆ ಅದು ನಿಮ್ಮ ಕೈಯಿಂದ ಜಾರಿಹೋಗದಿರಲು ಪ್ರಯತ್ನಿಸಿ. ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ನಿಮ್ಮ ಚೈತನ್ಯವನ್ನು ಪುನಃಶ್ಚೇತನಗೊಳಿಸುತ್ತದೆ. ನಿಮ್ಮ ಕುಟುಂಬದ ಸದಸ್ಯರೊಡನೆ ಸುದ್ದಿಯನ್ನು ಹಂಚಿಕೊಳ್ಳುವುದು ಅವರನ್ನು ಕೂಡ ಪುನಃಶ್ಚೇತನಗೊಳಿಸುತ್ತದೆ. ನಿಮ್ಮ ಪ್ರೀತಿ ಸಂಗಾತಿಯ ಒಂದು ಹೊಸ ಅದ್ಭುತ ಭಾಗವನ್ನು ನೀವಿಂದು ನೋಡಬಹುದು. ಅದೃಷ್ಟ ಸಂಖ್ಯೆ: 2

ಮೀನ ರಾಶಿ ಭವಿಷ್ಯ : 10 May 2020
ನಿಮ್ಮ ಮಗುವಿನಂಥ ಸ್ವಭಾವ ಕಾಣಿಸಿಕೊಳ್ಳುತ್ತದೆ ಮತ್ತು ನೀವು ಒಂದು ಆಹ್ಲಾದಕಾರಿ ಮನಸ್ಥಿತಿಯಲ್ಲಿರುತ್ತೀರಿ. ವಿದೇಶಿ ಸಂಪರ್ಕಗಳನ್ನು ಹೊಂದಿರುವ ವ್ಯಾಪಾರಿಗಳಿಗೆ ಇಂದು ಹಣದ ನಷ್ಟವಾಗುವ ಸಾಧ್ಯತೆ ಇದೆ ಆದ್ದರಿಂದ ಇಂದು ಯೋಚಿಸಿ ಅರ್ಥಮಾಡಿಕೊಂಡು ನಡೆಯಿರಿ ನಿಮ್ಮ ಮನೆಯಲ್ಲಿ ಸ್ವಲ್ಪ ಸ್ವಚ್ಛತಾ ಕಾರ್ಯವನ್ನು ತಕ್ಷಣ ಕೈಗೊಳ್ಳಬೇಕು. ಪ್ರೀತಿಪಾತ್ರರಲ್ಲದೇ ನಿಮ್ಮ ಸಮಯ ಕೊಲ್ಲುವುದು ಕಷ್ಟ. ಸಮಸ್ಯೆಗಳಿಗೆ ಬಲುಬೇಗನೆ ಪರಿಹಾರ ಕಂಡುಹಿಡಿಯುವ ನಿಮ್ಮ ಸಾಮರ್ಥ್ಯ ನಿಮಗೆ ಗುರುತಿಸುವಿಕೆ ತರುತ್ತದೆ. ಇಂದು ನೀವು ನಿಮ್ಮ ಸಂಗಾತಿ ನಿಮ್ಮ ಹುಟ್ಟುಹಬ್ಬವನ್ನು ಮರೆತಂಥ ಹಳೆಯ ವಿಷಯದ ಬಗ್ಗೆ ಜಗಳವಾಡಬಹುದು. ಆದರೆ ಕೊನೆಗೆ ಎಲ್ಲವೂ ಸರಿಹೋಗುತ್ತದೆ. ಅದೃಷ್ಟ ಸಂಖ್ಯೆ: 9

ತುಮಕೂರಲ್ಲಿ ಒಂದೇ ದಿನ 4 ಮಂದಿಗೆ ಕೊರೊನಾ: 11ಕ್ಕೇರಿತು ಸಂಖ್ಯೆ

Publicstory. in


ತುಮಕೂರು:

ಜಿಲ್ಲೆಯಲ್ಲಿ ಶನಿವಾರ (ಮೇ 9) ರಂದು ಒಂದೇ ದಿನ 4 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಕೊರೊನಾ ಪೀಡಿತರ ಸಂಖ್ಯೆ ಜಿಲ್ಲೆಯಲ್ಲಿ 11 ಕ್ಕೇರಿತು.

ಶಿರಾದಲ್ಲಿ ಒಬ್ಬರಿಗೆ ಹಾಗೂ ಪಾವಗಡದಲ್ಲಿ ಮೂವರಿಗೆ ತಗುಲಿದೆ. ಪಾವಗಡದಲ್ಲಿ ಇದೇ ಮೊದಲ ಸಲ ಸೋಂಕಿತರು ಕಂಡಿದ್ದಾರೆ.

ಶಿರಾದಲ್ಲಿ ಮೂವರು ಸೋಂಕಿತರಿದ್ದು, ಒಬ್ಬರು ಈಗಾಗಲೇ ಸಾವಿಗೀಡಾಗಿದ್ದಾರೆ‌. ಒಬ್ಬರು ಗುಣಮುಖರಾಗಿದ್ದಾರೆ.

ತುಮಕೂರು ಜಿಲ್ಲೆ ಪಾವಗಡಕ್ಕೆ ಅಹಮದಾ ಬಾದ್ ನಿಂದ ಬಂದಿದ್ದ 13 ಮಂದಿಯಲ್ಲಿ 3 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಬೆಂಗಳುರಿನ ಬಿಬಿಎಂಪಿ ಕಂಟೈನ್ ಮೆಂಟ್ ಜೋನ್ ಸಂಪರ್ಕದಲ್ಲಿದ್ದು ತುಮಕೂರು ಜಿಲ್ಲೆ ಶಿರಾ ಗೆ ಬಂದಿದ್ದ ವ್ಯಕ್ತಿಗೂ ಸೊಂಕು ದೃಢಪಟ್ಟಿದೆ.

ರಾಜ್ಯದಲ್ಲಿ 41 ಮಂದಿಗೆ ಕೋವಿಡ್ 19 ಸೊಂಕು ತಗುಲಿದೆ. ಶನಿವಾರ ಸಂಜೆಯ ವೇಳೆಗೆ ಸೋಂಕಿತರ ಸಂಖ್ಯೆ 794 ಕ್ಕೆ ತಲುಪಿದೆ.

794 ಮಂದಿ ಪೈಕಿ 30 ಮಂದಿ ಮರಣ ಹೊಂದಿದ್ದಾರೆ. 386 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್ ಪೀಡಿತ 377 ಮಂದಿ ಸೋಂಕಿತರಲ್ಲಿ 371 ಮಂದಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. 6 ಮಂದಿಗೆ ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ ಎಂದು ಹೆಲ್ತ್ ಬುಲೆಟಿನ್ ನಲ್ಲಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಶುಕ್ರವಾರ ಸಂಜೆ 5 ರಿಂದ ಶನಿವಾರ ಸಂಜೆ 5 ರ ವೇಳೆಗೆ ದಾವಣಗೆರೆ ಜಿಲ್ಲೆಯಲ್ಲಿ 6, ಬೆಂಗಳೂರು ನಗರ ಜಿಲ್ಲೆಯಲ್ಲಿ 12, ವಿಜಯಪುರ 1, ಚಿಕ್ಕಬಳ್ಳಾಪುರ 1, ಚಿತ್ರದುರ್ಗ 3, ಬೀದರ್ 3, ಭಟ್ಕಳ, ಉತ್ತರಕನ್ನಡ 8, ಭಂಟ್ವಾಳ ದಕ್ಷಿಣ ಕನ್ನಡ 3, ತುಮಕೂರು ಜಿಲ್ಲೆ 4 ಮಂದಿಗೆ ಸೋಂಕು ಇರುವುದಾಗಿ ದೃಢಪಟ್ಟಿದೆ.

ಇಂದು ಆಸ್ಪತ್ರೆಯಿಂದ ಬಿಡುಗಡೆಯಾದವರು: ಮೈಸೂರು 2, ತುಮಕೂರು 1, ಮಂಡ್ಯ 3, ಕಲಬುರಗಿ 2, ಬೆಂಗಳೂರು ನಗರ 2 ಒಟ್ಟು 10 ಮಂದಿ ಬಿಡುಗಡೆಯಾಗಿದ್ದಾರೆ.

CPI ಪುಟ್ಟ ಓಬಳ ರೆಡ್ಡಿ ಅವರಿಗೆ ಸನ್ಮಾನ

Publicstory. in


Tumkuru: ಜನಾನುರಾಗಿ ಪೊಲೀಸ್ ಅಧಿಕಾರಿಯೆಂದೇ ಹೆಸರಾಗಿರುವ ವರ್ತೂರು ವೃತ್ತದ ಸಿಪಿಐ ಪುಟ್ಟ ಓಬಳ ರೆಡ್ಡಿ ಅವರನ್ನು ಅತ್ಮೀಯವಾಗಿ ಸನ್ಮಾನಿಸಲಾಯಿತು.

ಕೊರೊನಾ,‌ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಹಗಲಿರುಳು ಅವರು ಕೆಲಸ ಮಾಡುತ್ತಿದ್ದಾರೆ.

ಹೂ ಹಾರ, ಶಾಲು ಹೊದಿಸಿ‌ ಸನ್ಮಾನಿಸಲಾಯಿತು. ಜೀವದ ಹಂಗು ತೊರೆದು ಮಾಡುತ್ತಿರುವ ಜನ ಸೇವೆಯನ್ನು ಮುಕ್ತ ಕಂಠದಿಂದ ಹೊಗಳಲಾಯಿತು.

ಇವರಲ್ಲದೇ ಇನ್ನಿತರ ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ವೈದ್ಯ ಸಿಬ್ಬಂದಿಯನ್ನು ಸಹ ಗೌರವಿಸಲಾಯಿತು.

ಪುಟ್ಟ ಓಬಳ‌ರೆಡ್ಡಿ ಅವರ ಸೇವೆ ಹಾಗೂ ಕಟಿಬದ್ಧತೆಯನ್ನು ಬೆಂಗಳೂರು ವಿ.ವಿ.ಹಳೇ ವಿದ್ಯಾರ್ಥಿಗಳು ಮುಕ್ತಕಂಠದಿಂದ ಶಾಘ್ಲಿಸಿದ್ದಾರೆ.

ಮಧುಗಿರಿಯಲ್ಲಿ ಕೊರೊನಾ ವಾರಿಯರ್ಸ್ ಗೆ ಸನ್ಮಾನ: ರಾಜೇಂದ್ರ

ಮಧುಗಿರಿ: ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದ ಕೊರೊನಾ ವಾರಿಯರ್ಸ್ ಗೆ ಮೇ 10 ರಂದು ಸಂಜೆ 4 ಗಂಟೆಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ರಾಷ್ಟ್ರೀಯ ಕ್ರಿಬ್ಕೋ ಸಂಸ್ಥೆಯ ನಿರ್ದೇಶಕ ಆರ್.ರಾಜೇಂದ್ರ ತಿಳಿಸಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗವು ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಇದರ ವಿರುದ್ಧ ಕಳೆದ ಸುಮಾರು 45 ದಿನಗಳಿಂದ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ತಾಲ್ಲೂಕಿನ ವೈದ್ಯಕೀಯ, ಪೋಲಿಸ್, ಪೌರಕಾರ್ಮಿಕರು, ಕಂದಾಯ ಇಲಾಖೆ, ಆಶಾ ಕಾರ್ಯಕರ್ತೆಯರು, ಮಾಧ್ಯಮದವರು, ಅಗ್ನಿಶಾಮಕ ದಳ ಹಾಗೂ ಇನ್ನಿತರೆ ಸಿಬ್ಬಂದಿಗಳ ಸೇವೆ ಶ್ಲಾಘನೀಯ. ಇಂತಹ ಸಮಯದಲ್ಲಿ ಅಂತಹವರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುವುದರಿಂದ ಅವರಲ್ಲಿ ಇನ್ನಷ್ಟು ಚೈತನ್ಯ ತುಂಬಿ ಇನ್ನೂ ಹೆಚ್ಚಿನ ಕಾರ್ಯನಿರ್ವಹಿಸಲು ಶಕ್ತಿ ತುಂಬಿದಂತಾಗುತ್ತದೆ ಎಂದರು.

ಪಟ್ಟಣದ ದಂಡೂರ ಬಾಗಿಲ ಮುಂಭಾಗದಿಂದ ಟಿವಿವಿ ಪೆಟ್ರೋಲ್ ಬಂಕ್ ವರೆಗೂ ಮೆರೆವಣಿಗೆ ಹಮ್ಮಿಕೊಂಡಿದ್ದು, ಈ ಸಂಧರ್ಭದಲ್ಲಿ ಪುಷ್ಪವೃಷ್ಠಿ ಮಾಡಿ ಅಭಿನಂದಿಸಲಾಗುವುದು ಎಂದ ಅವರು, ಮುಂಜಾಗೃತ ಕ್ರಮವಾಗಿ ಮೆರವಣಿಗೆ ಬರುವ ರಸ್ತೆಗೆ ಔಷದಿ ಸಿಂಪಡಿಸಲಾಗುವುದು ಎಂದರು.

ಮಧುಗಿರಿ ತಾಲ್ಲೂಕಿನಲ್ಲಿ ಒಂದೂ ಕೇಸ್ ಪತ್ತೆಯಾಗದಂತೆ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಿದ್ದು, ಅವರೆಲ್ಲರ ಕಾರ್ಯ ಶ್ಲಾಘನೀಯ. ಈ ರೋಗ ನಿಯಂತ್ರಣಕ್ಕೆ ಬರುವವರೆಗೂ ಇವರ ಸೇವೆ ಹೀಗೆ ಮುಂದುವರೆಯಲಿ ಎಂದರು.

ಕಾರ್ಯಕ್ರಮಕ್ಕೆ ಸಂಸದರು, ಶಾಸಕರು ಹಾಗೂ ಪಕ್ಷಾತೀತವಾಗಿ ಎಲ್ಲಾ ಜನಪ್ರತಿನಿಧಿಗಳನ್ನು ಮಾಧ್ಯಮದ ಮುಖೇನ ಅಹ್ವಾನಿಸಲಾಗಿದ್ದು, ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದರು.

ಸಹಕಾರ ಮಹಾಮಂಡಳ ಅಧ್ಯಕ್ಷ ಎನ್.ಗಂಗಣ್ಣ, ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಪುರಸಭಾ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸದಸ್ಯರಾದ ಲಾಲಾ ಪೇಟೆ ಮಂಜುನಾಥ್, ಮಂಜುನಾಥ್ ಆಚಾರ್, ಬಸ್ ಮಾಲೀಕರ ಸಂಘದ ಅಧ್ಯಕ್ಷ ಎಂ.ಎಸ್.ಶಂಕರನಾರಾಯಣ, ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ಪ್ರಸಾದ್, ಮಾರ್ವಾಡಿ ಸಂಘದ ಅಧ್ಯಕ್ಷ ಮೋಹನ್ ಲಾಲ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ಎನ್.ಶ್ರೀನಿವಾಸ ಮೂರ್ತಿ, ವಾಸವಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎ.ರಮೇಶ್, ಮುಖಂಡರಾದ ಎಂ.ವಿ.ಮಂಜುನಾಥ, ಎಸ್‍ಬಿಟಿ ರಾಮು, ಉಮೇಶ್, ಆನಂದ್, ಗಂಗರಾಜು ಹಾಗೂ ಇನ್ನಿತರರು ಇದ್ದರು.

ರೈತನ್ನೊಬ್ಬನ ಕೈ ಹಿಡಿದ ನರೇಗಾ!

ರೂಪಕಲಾ


ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹಾಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ದಯ್ಯನಪಾಳ್ಯದ ರೈತರಾದ ಈರಣ್ಣರವರು ತಮ್ಮ ಜಮೀನಿನಲ್ಲಿ ತೆಂಗು ನಾಟಿ ಮಾಡಿ ಕೊಂಡಿದ್ದು, ಇವರ ಜಮೀನಿನಲ್ಲಿ ಬೋರ್‍ವೆಲ್‍ನಲ್ಲಿ ದೊರೆಯುವ ಅಲ್ಪ-ಸ್ವಲ್ಪ ನೀರನ್ನು ಬಳಸಿ ಹನಿ ನೀರಾವರಿ ಮುಖಾಂತರ ತೆಂಗಿನ ಗಿಡಗಳಿಗೆ ನೀರು ಒದಗಿಸುತ್ತಿದ್ದರು.

ಬೇಸಿಗೆಯಲ್ಲಿ ಬೋರ್‍ವೆಲ್‍ನಲ್ಲಿ ಬತ್ತಿ ಹೋಗಿ ಗಿಡಗಳಿಗೆ ನೀರಿಲ್ಲದಂತಾಗಿ ಒಣಗಿ ಹೋಗುವ ಸ್ಥಿತಿಗೆ ತಲುಪಿದ್ದವು.

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳನ್ನು ಭೇಟಿ ಮಾಡಿ ಸರ್ಕಾರದಿಂದ ಸೌಲಭ್ಯವಿದ್ದರೆ ತಿಳಿಸಿ ಎಂದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಮ್ಮ ಜಮೀನುಗಳಲ್ಲಿ ತಾವೇ ಕೆಲಸ ನಿರ್ವಹಿಸುವಂತಹ ವೈಯಕ್ತಿಕ ಕಾಮಗಾರಿಗಳಾದ ಕೃಷಿಹೊಂಡ ಮತ್ತು ಕ್ಷೇತ್ರ ಬದುಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಲಹೆ ನೀಡಿದರು.

ನನ್ನ ಬಳಿ ಈ ಕಾಮಗಾರಿಗಳನ್ನು ನಿರ್ಮಾಣ ಮಾಡಿಕೊಳ್ಳಲು ಹಣದ ಕೊರತೆ ಇತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯನ್ನು ಭೇಟಿ ಮಾಡಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳನ್ನು ವಿಚಾರಿಸಿದಾಗ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿಮ್ಮ ಜಮೀನುಗಳಲ್ಲಿ ನೀವೆ ಕೆಲಸ ಮಾಡಿಕೊಂಡರೆ ನಿಮ್ಮ ಬ್ಯಾಂಕ್ ಖಾತೆಗಳಿಗೆ ಸರ್ಕಾರದಿಂದ ನೇರವಾಗಿ ಹಣ ಸಂದಾಯವಾಗುತ್ತದೆ ಹಾಗೂ ನಿಮಗೆ ಇದರಿಂದ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕೂಲಿ ಬೇಡಿಕೆ ಅರ್ಜಿಯನ್ನು ಗ್ರಾಮ ಪಂಚಾಯಿತಿಗೆ ನಮೂನೆ-6 ರಲ್ಲಿ ಸಲ್ಲಿಸಿ ನಮ್ಮ ಕುಟುಂಬದವರೆಲ್ಲ ಸೇರಿ ಕಾಮಗಾರಿ ನಿರ್ಮಾಣ ಮಾಡಿಕೊಳ್ಳಲು ಮುಂದಾಗಿದ್ದೇವೆ. ಇದರಿಂದ ನಮ್ಮ ಕುಟುಂಬದ ನಿರ್ವಹಣೆಗೆ ಅನುಕೂಲವಾಯಿತು.

ಕೃಷಿ ಹೊಂಡದಲ್ಲಿ ಮಳೆಗಾಲದಲ್ಲಿ ನೀರು ಶೇಖರಣೆಗೊಂಡು ಬೇಸಿಗೆ ದಿನಗಳಲ್ಲಿ ತೆಂಗಿನ ಬೆಳೆಗೆ ಇದರಿಂದ ನೀರನ್ನು ಹರಿಸಲು ಮತ್ತು ಜಾನವಾರುಗಳಿಗೆ ಕುಡಿಯುವ ನೀರನ್ನು ಪಡೆಯಲು ಇದರಿಂದ ಅನುಕೂಲವಾಗುತ್ತದೆ ಎಂಬ ನಂಬಿಕೆ ಇದೆ. ಹೊಲದಲ್ಲಿ ಬದು ನಿರ್ಮಾಣ ಮಾಡುವುದರಿಂದ ಮಳೆ ನೀರು ವ್ಯರ್ಥವಾಗಿ ಹರಿದು ಪೋಲಾಗದೆ ನಮ್ಮ ಜಮೀನಿನಲ್ಲಿಯೇ ಇಂಗಿ ಕೊಳವೆ ಬಾವಿಗೆ ಅಂತರ್ಜಲ ಒದಗಿಸುತ್ತದೆ ಮತ್ತು ಮಣ್ಣಿನಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.

ನಮ್ಮ ಕುಟುಂಬದವರೆ ನಮ್ಮ ಹೊಲದಲ್ಲಿ ಕೆಲಸ ಮಾಡುವುದರಿಂದ 100 ದಿನಗಳ ಕಾಲ ಉದ್ಯೋಗ ದೊರೆತು 27500/- ರೂ.ಗಳು ಕೂಲಿ ಹಣ ದೊರೆಯುತ್ತದೆ. ಹಾಗೂ ಇತರೆ ಕುಟುಂಬಗಳಿಗೂ ಸಹ ಕೂಲಿ ದೊರೆಯುತ್ತದೆ. ಕೇಂದ್ರ ಸರ್ಕಾರ ಈ ವರ್ಷ ಕೂಲಿ ದರವನ್ನು 275/- ರೂ.ಗಳಿಗೆ ಹೆಚ್ಚಿಸಿರುವುದರಿಂದ ಇನ್ನು ಅನುಕೂಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೂಲಿ ಹಣವು ನಮ್ಮ ಖಾತೆಗಳಿಗೆ ಸಂದಾಯವಾಗುವುದರಿಂದ ನಮ್ಮ ಕುಟುಂಬವನ್ನು ನಿರ್ವಹಣೆ ಮಾಡಲು ಅನುಕೂಲವಾಗಿರುತ್ತದೆ. ಹಾಗೂ ನಮ್ಮ ಜಮೀನಿನಲ್ಲಿ ಆಸ್ತಿಯ ನಿರ್ಮಾಣ ಆಗಿ ಮುಂದಿನ ದಿನಗಳಲ್ಲಿ ನಮ್ಮ ಜೀವನ ಮಟ್ಟ ಸುಧಾರಿಸುತ್ತದೆ ಎಂಬ ಆಶಾಭಾವನೆ ಇದೆ ನಗು‌ ಸೂಸಿದರು.


ರೂಪಕಲಾ ಅವರು ತುಮಕೂರು ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿ.

ಅಕ್ಕಿ, ಬೇಳೆ ಪರೀಕ್ಷಿಸಿದ ಆಹಾರ ಸಚಿವರು

ಚಿತ್ರ: JP

Publicstory. in


ತುಮಕೂರು: ಆಹಾರ ಮತ್ತು ನಾಗರಿಕ ಸಚಿವ ಗೋಪಾಲಯ್ಯ ಅವರು ಇಂದು ತುಮಕೂರಿನಲ್ಲಿ ಅಕ್ಕಿ, ಬೇಳೆಯನ್ನು ಪರೀಕ್ಷೆ ಮಾಡಿದರು.

ಭೀಮಸಂದ್ರದ ಗೋದಾಮಿಗೆ ಭೇಟಿ ನೀಡಿದ ಅವರು ಚೀಲದಲ್ಲಿ ಅಕ್ಕಿ ಬೇಳೆ ಗೋಧಿ ಬಿಚ್ಚಿಸಿ ಕೈಯಲ್ಲಿ ಹಿಡಿದು ನೋಡಿದರು. ಮಾಜಿ ಶಾಸಕ ಬಿ ಸುರೇಶ್ ಗೌಡ ಇದ್ದರು.

ಆಹಾರ ನಾಗರಿಕ ಸರಬರಾಜು ಇಲಾಖೆಯಿಂದ ವಿತರಿಸುತ್ತಿರುವ ಗೋಧಿ,ಬೇಳೆ, ಅಕ್ಕಿ ಮುಗ್ಗಿವೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅವರು ಗೋದಾಮಿಗೆ ಭೇಟಿ ನೀಡಿ ಪರಿಶೀಲಿಸಿದರು.

ಯಾವುದೇ ಕಾರಣಕ್ಕೂ ಮುಗ್ಗು ಬಂದಿರುವ ಬೇಳೆ, ಅಕ್ಕಿಯನ್ನು ವಿತರಣೆ ಮಾಡಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ತಮ್ಮ ಕ್ಷೇತ್ರದ ಬಡ ಜನರಿಗೆ ವಿತರಿಸುತ್ತಿರುವ ಆಹಾರ ಕಿಟ್, ಮಾಸ್ಕ್ ಮತ್ತಿತರ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು
ಮಾಜಿ ಶಾಸಕರ ಕೆಲಸವನ್ನು ಶ್ಲಾಘಿಸಿದರು.

ಇದೇ ವೇಳೆ ಆಶಾ ಕಾರ್ಯಕರ್ತೆಯರು, ಪೊಲೀಸರು ಇತರರಿಗೆ ಹೂ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬುಗುಡನಹಳ್ಳಿ ಆಹಾರ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿದ ಅವರು ಯಾವುದೇ ಕಾರಣಕ್ಕೂ ರೈತರಿಂದ, ಜನರಿಂದ ಹೆಚ್ಚು ಹಣ ಕೇಳದಂತೆ ಸೂಚಿಸಿದರು.
ಮುಖ್ಯಮಂತ್ರಿ ಅವರ ಬಳಿ ಮಾತನಾಡಿ ಹೆಚ್ಚಿನ ಕಮೀಷನ್ ಕೊಡಿಸುವ ಭರವಸೆಯನ್ನು ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಇದೇ ವೇಳೆ ಸಚಿವರು ನೀಡಿದರು.

ತುಮಕೂರು ಕೋವಿಡ್ ಆಸ್ಪತ್ರೆಯಲ್ಲಿ ರೋಗಿ ಗುಣಮುಖ: ಹೂ ಚೆಲ್ಲಿದ ವೈದ್ಯರು

Publicstory. in


ತುಮಕೂರು: ಕೋವಿಡ್-19 ಪಿ-447 ಸೋಂಕಿತ ವ್ಯಕ್ತಿಯು ಸಂಪೂರ್ಣವಾಗಿ ಗುಣಮುಖರಾಗಿ ಶನಿವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಮಹಾಮಾರಿ ಕೋವಿಡ್-19ರ ಸೋಂಕಿಗೆ ಒಳಾಗಿದ್ದ ವ್ಯಕ್ತಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸೋಂಕಿನಿಂದ ಮುಕ್ತರಾಗಿರುವ ಸಂತಸ ಅವರ ಮುಖದಲ್ಲಿ ಕಾಣಿಸುತ್ತಿತ್ತು.

ಸೋಂಕಿತ ವ್ಯಕ್ತಿಯು ಮಾರ್ಚ್ 12ರಂದು ಗುಜರಾತ್ ನಿಂದ ತುಮಕೂರು ಜಿಲ್ಲೆಗೆ ಆಗಮಿಸಿದ್ದು, ದೇಶದಲ್ಲಿ ಲಾಕ್‍ಡೌನ್ ಆಗಿರುವುದರಿಂದ ಇಲ್ಲೇ ಉಳಿದುಕೊಂಡಿದ್ದರು, ಹೊರ ರಾಜ್ಯದಿಂದ ಬಂದಿರುವ ವ್ಯಕ್ತಿಗಳನ್ನು ಆಗಿ ತಪಾಸಣೆಗೊಳಪಡಿಸಲಾಗಿತ್ತು. ಇದರಲ್ಲಿ ಇವರಿಗೆ ಸೋಂಕು ದೃಢಪಟ್ಟಿತ್ತು.

ಕಳೆದ 14 ದಿನಗಳಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, 12ನೇ ದಿನ ಮತ್ತು 13 ದಿನದಂದು ಲ್ಯಾಬ್‍ಗೆ ಕಳುಹಿಸಿದ ಮಾದರಿ ನೆಗೆಟಿವ್ ಬಂದಿದ್ದು, ಸಾಂಸ್ಥಿಕ ಹೋಂ ಕ್ವಾರೆಂಟೈನ್‍ನಲ್ಲಿ ಇಡಲಾಗುವುದು. ಇವರು ಹೊರ ರಾಜ್ಯದವರಾಗಿರುವುದರಿಂದ ಮತ್ತೆ 28ನೇ ದಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ನೆಗೆಟಿವ್ ಬಂದ ನಂತರ ಸರ್ಕಾರದ ಸೂಚನೆಯಂತೆ ಅವರನ್ನು ಅವರ ರಾಜ್ಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು.

ಜಿಲ್ಲೆಯ ಸಾರ್ವಜನಿಕರು ಭಯಪಡದೇ ಎಚ್ಚರವಾಗಿರಬೇಕು. ಮುಂಜಾಗ್ರತ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು. ಜ್ವರ, ಕೆಮ್ಮು, ನೆಗಡಿ ಲಕ್ಷಣಗಳಿದ್ದರೆ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಡಿಹೆಚ್‍ಓ ಡಾ. ಚಂದ್ರಿಕಾ ತಿಳಿಸಿದ್ದಾರೆ.

ಗುಣಮುಖರಾದ ವ್ಯಕ್ತಿಗೆ ಜಿಲ್ಲಾ ಸರ್ಜನ್ ಡಾ.ವೀರಭದ್ರಯ್ಯ ಅವರು ಹೂವಿನ ಹಾರ ಹಾಕಿ ಬಿಳ್ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೊರೊನಾ: ಖರೀದಿಯಲ್ಲಿ ಅವ್ಯವಹಾರ ಆರೋಪ ಬೆನ್ನಲ್ಲೇ ತುಮಕೂರು DHO ಎತ್ತಂಗಡಿ

Publicstory. in


ತುಮಕೂರು: ಕೊರೊನಾ ಸೋಂಕಿತರನ್ನು ಪರೀಕ್ಷಿಸಬೇಕಾದರೆ ವೈದ್ಯರು ಬಳಸುವ ಪಿಪಿಇ ಸಾಮಾಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿದ ಆರೋಪ ಕೇಳಿ ಬಂದಿದ್ದ ತುಮಕೂರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಚಂದ್ರಿಕಾ ಅವರನ್ನು ಸರ್ಕಾರ ಏಕಾಏಕಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಖರೀದಿಯಲ್ಲಿ ಅವ್ಯವಹಾರ ಎಸಗಲಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ದಿಲೀಪ್ ಕುಮಾರ್ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.

ಆದರೆ, ವರ್ಗಾವಣೆಗೆ ಸರ್ಕಾರ ಯಾವುದೇ ಕಾರಣ ನೀಡಿಲ್ಲ. ಬೇರೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಈ ಸಾಮಗ್ರಿಗಳನ್ನು ಆಯಾ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಂಡುಕೊಳ್ಳಬೇಕಿತ್ತು. ಆದರೆ ಡಿಎಚ್ಒ ಅವರು ಅಧಿಕಾರಿಗಳನ್ನು ಕರೆಸಿ ಏಕಾಏಕಿ ಕಚೇರಿಗೆ ಕರೆಸಿಕೊಂಡು ಜಿಲ್ಲೆಯ ಎಲ್ಲ 145 ಪಿಎಸ್ ಸಿಗಳಿಗೆ ಖರೀದಿಸಲು ಒತ್ತಾಯಿಸಿದ್ದರು. ಅಲ್ಲದೇ ಪಾರ್ಮ್ ಗಳಿಗೆ ಸಹಿ ಹಾಕಿದ್ದರು. ಒಂದೇ ಏಜೆನ್ಸಿಗೆ ಆರ್ಡರ್ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು.

ಚಂದ್ರಿಕಾ ಅವರನ್ನು ಹೊಸದುರ್ಗ ತಾಲ್ಲೂಕು ಆಸ್ಪತ್ರೆಯ ನೇತ್ರ ತಜ್ಞರಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಚಂದ್ರಿಕಾ ಜಾಗಕ್ಕೆ ತುಮಕೂರು ಜಿಲ್ಲೆಯ ಜಿಲ್ಲಾಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ ನಾಗೇಂದ್ರಪ್ಪ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಏನಿದು ಹಗರಣ


ಶಿರಾದಲ್ಲಿ ಮತ್ತೊಬ್ಬರಿಗೆ ಕೊರೊನಾ: 8ಕ್ಕೇರಿತು ತುಮಕೂರಿನ ಸಂಖ್ಯೆ

Publicstory. in


Tumkuru: ಶಿರಾದ ವ್ಯಕ್ತಿಯೊಬ್ಬರಿಗೆ ಶನಿವಾರ ಕೊರೊನಾ ಸೋಂಕು ತಗುಲಿದ್ದು, ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ಬೆಂಗಳೂರಿನ ಪಾದರಾಯನಪುರದಲ್ಲಿ ಹೋಟೆಲ್‌ ಕೆಲಸ ಮಾಡಿಕೊಂಡಿದ್ದನು. ಈತ 45 ವರ್ಷದವ‌ನಾಗಿದ್ದು ಪಿ–764 ಎಂದು ಗುರುತಿನ ಸಂಖ್ಯೆ ನೀಡಲಾಗಿದೆ.

ಈತನನ್ನು ಈತನ ಮಗ ಬೆಂಗಳೂರಿಂದ ಮೇ 5 ರಂದು ಶಿರಾ ಪಟ್ಟಣಕ್ಕೆ ಕರೆ ತಂದಿದ್ದನು. ಈ ವ್ಯಕ್ತಿ ಬೆಂಗಳೂರಿನ ಪಾದಾರಾಯನಪುರದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದಗದನು. ಪಾದರಾಯನಪುರ ಕೋವಿಡ್ ಹಾಸ್ಪಾಟ್ ಎಂದು ಗುರುತಿಸಲಾಗಿತ್ತು.

ಈ ವ್ಯಕ್ತಿಯ ಗಂಟಲು ದ್ರವವನ್ನು ಮೇ 5ರಂದೇ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು(ಮೇ 9) ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ.

ವ್ಯಕ್ತಿ ತಂಗಿದ್ದ ಶಿರಾದ 100 ಮೀಟರ್‌ ಸ್ಥಳವನ್ನು ನಿರ್ಬಂಧಿತ ವಲಯವನ್ನಾಗಿ ಘೋಷಿಸಲಾಗಿದೆ, ಈ ಭಾಗವನ್ನು ಹೊರತುಪಡಿಸಿ ಉಳಿದೆಡೆ ವಿವಿಧ ಚಟುವಟಿಕೆಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದನ್ನು ಓದಿ: ಪಾವಗಡ
https://publicstory.in/ಇಬ್ಬರು-ತಬ್ಲಿಘಿಗಳ-ಸ್ಥಳಾಂತ


ರಾತ್ರಿ ಮಲಗಿದ್ದಲ್ಲೆ ಮಗು ಹೊತೂಯ್ದ ಚಿರತೆ

Ramanagraa: ಜಿಲ್ಲೆಯ ಕದರಯ್ಯನ ಪಾಳ್ಯದಲ್ಲಿ ಶುಕ್ರವಾರ ಮಧ್ಯರಾತ್ರಿ ಮನೆಗೆ ನುಗ್ಗಿದ ಚಿರತೆಯೊಂದು ಮಲಗಿದ್ದ ಮಗುವನ್ನು ಹೊತ್ತೊಯ್ದು ಕೊಂದು ಹಾಕಿದೆ.

ಮೂರೂವರೆ ವರ್ಷದ ಹೇಮಂತ್ ಬಲಿಯಾದವ.

ಶುಕ್ರವಾರ ರಾತ್ರಿ ಜೋರು ಮಳೆಗೆ ಕರೆಂಟ್ ಹೋದ ಕಾರಣ ಸೆಕೆ ಆಗುತ್ತಿದೆ ಎಂದು ಮನೆಯವರು ಬಾಗಿಲು ತೆಗೆದು ಮಲಗಿದ್ದರು. ಹೀಗಾಗಿ ಮನೆಯೊಳಗೆ ಬಂದಿರುವ ಚಿರತೆ ಮಗುವನ್ನು ಹೊತ್ತೊಯ್ದಿದೆ.

ಕತ್ತಲೆಯಲ್ಲಿ ಮಗುವನ್ನು ಹುಡುಕಾಡಿದಾಗ ಕಂಡಿಲ್ಲ. ಕೂಡಲೇ ಎದ್ದು ಹುಡುಕಿದಾಗ ಮನೆಯಿಂದ ಸುಮಾರು ದೂರದಲ್ಲಿ ಪೊದೆಯಲ್ಲಿ ಮಗುವಿನ ಶವ ಪತ್ತೆಯಾಯಿತು. ಮಗುವಿನ ತಂದೆ-ತಾಯಿ ಬಿಡದಿಯರಾಗಿದ್ದು, ರಜೆ ಇದ್ದ ಕಾರಣ ತಾಯಿ ಮನೆಗೆ ಬಂದಿದ್ದರು.